HomeUncategorizedಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

ಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

- Advertisement -
- Advertisement -

ಯಾಹೂ |

ಸಿನಿಮಾ ರಂಗದಲ್ಲಿ ಮತ್ತು ರಾಜಕಾರಣದಲ್ಲಿ ಹಾಗೂ ಖಾಸಗೀ ಬದುಕಿನಲ್ಲಿ ವೈರಿಗಳೇ ಇಲ್ಲದಂತೆ ಬದುಕಿದ ಅಂಬರೀಶ್‍ಗೆ ಗ್ರಹಗತಿಗಳು ಮುನಿಸಿಕೊಂಡಿದ್ದವು ಎಂದು ಟಿ.ವಿ.ಯೊಳಗೆ ಸೇರಿಕೊಂಡಿರುವ ಪುರೋಹಿತ ಪಿಂಡಗಳು ವಾದಿಸತೊಡಗಿವೆಯಂತಲ್ಲಾ. ಈ ಪಿಂಡಗಳ ವಿಶೇಷವೆಂದರೆ, ತ್ರಿಕಾಲಜ್ಞಾನಿಗಳಂತಾಡುವ ಇವು ಯಾವುದೇ ಘಟನೆ ನಡೆಯುವ ಮುನ್ನ ಬಾಯಿ ಬಿಡುವುದಿಲ್ಲ. ವಿಷ್ಣು ತೀರಿಕೊಂಡ ನಂತರವೇ ಅವರಿಗೆ ನಾಗವಲ್ಲಿ ಕಾಟ ಅಮರಿಕೊಂಡಿತ್ತು ಎಂದು ವದರಿದವು. ಸಕ್ಕರೆ ಕಾಯಿಲೆ ದೆಸೆಯಿಂದ ಹೃದಯಾಘಾತಕ್ಕೆ ತುತ್ತಾದ ವಿಷ್ಣುಗೆ ನಾಗವಲ್ಲಿ ಕಾಟವಿತ್ತು, ಯಾಗ ಮಾಡಿಸಿದ್ದರೆ ಸರಿಹೋಗುತ್ತಿತ್ತು ಎನ್ನುವ ಈ ಪಿಂಡಗಳು ಈಗ ಅಂಬರೀಶ್ ಸಾವಿಗೂ ಪುರೋಹಿತಶಾಹಿ ತಂತ್ರವನ್ನೇ ಬಳಸತೊಡಗಿರುವುದು ಕಂಡು ದಿಗಿಲಾಗಿ ಜ್ಯೋತಿಷ್ಯ ಬ್ರಹ್ಮ ಪ್ರಕಾಶ ಮಣ್ಣುರಾಯರಿಗೆ ಫೋನ್ ಮಾಡಲಾಗಿ ರಿಂಗಾಯ್ತು,
ರಿಂಗ್‍ಟೋನ್: “ಹೋನ್ಹೀ ತೋ ಹೋನ್ಹೀ ಹೀ ಹೈ, ಅನ್ಹೋಹ್ಹೀ ನಹೀಂ ಭವತ್ಯೇವ ಭವತವ್ಯಂ….. ಹಲೋ ಯಾರು.”
“ಗುರುಗಳೇ ನಾನು ಪತ್ರಕರ್ತ”
“ಯಾವ ಪತ್ರಿಕೆ.”
“ನ್ಯಾಯಪಥ.”
“ನ್ಯಾಯಪಥ ಅಂದರೆ ಸತ್ಯದ ದಾರಿ.”
“ಹೌದು ಸ್ವಾಮಿ, ನಿಮ್ಮ ಫೋನಿನ ರಿಂಗ್‍ಟೋನ್ ಅರ್ಥ ಆಗಲಿಲ್ಲ.”
“ನಡೆಯಬೇಕಾದದ್ದು ನಡೆದೇ ನಡೆಯುತ್ತದೆ, ನಡೆಯಬೇಕಾದ ರೀತಿಯಲ್ಲೇ ನಡೆಯುತ್ತದೆ ಅಂತ ಅರ್ಥ.”
“ಹಾಗಿದ್ದರೆ ಜ್ಯೋತಿಷ್ಯದ ಅಗತ್ಯವೇನು.”
“ನೀವು ಆಸ್ತಿಕರೋ ನಾಸ್ತಿಕರೋ.”
“ಸದ್ಯಕ್ಕೆ ನಾಸ್ತಿಕ.”
“ಹಾಗಾದರೆ ನಿಮ್ಮೊಟ್ಟಿಗೆ ಮಾತನಾಡಿ ಪ್ರಯೋಜನ ಇಲ್ಲ.”
“ಹಾಗನ್ನಬೇಡಿ ಗುರುವೆ, ನಮ್ಮ ಅಂಬರೀಶಣ್ಣನ ಸಾವಿನ ಬಗ್ಗೆ ತಿಳಕೊಬೇಕು.”
“ನೋಡಿ, ಅಂಬರೀಶ್ ನಮ್ಮನ್ನು ಭೇಟಿಮಾಡಿ ನಾವು ಹೇಳಿದಂತೆ ಕೇಳಿದ್ದರೆ ಬದುಕುತ್ತಿದ್ದರು.”
“ಅದು ಹ್ಯೆಂಗೆ ಗುರುಗಳೇ.”
“ಒಂದು ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಮೃತ್ಯುಂಜಯ ಹೋಮ ಅಂದರೆ ಸಾವನ್ನ ಜಯಿಸುವ ಹೋಮ ಅಲ್ಲವೆ ಗುರು.”
“ಹೌದು.”
“ಈ ಮೃತ್ಯುಂಜಯ ಹೋಮ ಮಾಡಿಸಿದ್ರೆ ಎಷ್ಟು ದಿನ ಬದುಕಬಹುದು.”
“ನೋಡಿ, ನಮಗಿರುವ ಆಯಸ್ಸು ಬ್ರಹ್ಮನದಲ್ಲ ನಾವು ನಮ್ಮ ಆಯಸ್ಸನ್ನ ವೃದ್ಧಿಸಿಕೊಳ್ಳಬೇಕು. ಮರಣದಲ್ಲಿ ನೂರ ಒಂದು ಪ್ರಕಾರಗಳುಂಟು. ನೂರನ್ನ ಜಯಿಸಬಹುದು. ಒಂದನ್ನ ಮಾತ್ರ ಜಯಿಸಲಾಗುವುದಿಲ್ಲ.”
“ಅದ್ಯಾವುದು ಗುರುಗಳೇ.”
“ನಿಜವಾದ ಮರಣ!”
“ಈಗ ಅಂಬರೀಶ್‍ಗೆ ಸಂಭವಿಸಿದ್ದು ನಿಜವಾದ ಮರಣ ಅಲ್ಲವ.”
“ಇಲ್ಲ ಅವರದ್ದು ಭಾವೋದ್ವೇಗದ ಮರಣ. ಅದಕ್ಕಾಗಿ ನಾಗಾರಾಧನೆಯ ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಅದನ್ನ ಅವರಿಗೆ ಹೇಳಬೇಕಾಗಿತ್ತು.”
“ಅವರು ಬಂದು ಕೇಳಬಹುದಿತ್ತು, ನಾವು ಅವರ ಬಳಿಗೆ ಹೋಗುವುದಿಲ್ಲ.”
“ಅವರ ಜೀವ ಮುಖ್ಯ ಅಲ್ಲವೆ?”
“ಅದೌದು. ನಾವು ಸಂಸ್ಕಾರವಂತ ಜ್ಯೋತಿಷಿಗಳು. ಅವರಾಗಿ ಬಂದರೆ ಹೇಳ್ತೇವೆ.”
“ಅವುರಾಗಿ ಬಂದ್ರೆ ಹೇಳೋ ಅಂತವರು, ಈಗ ಟಿವಿಯೊಳಗಡೆ ಬಂದು ಯಾಕೇಳ್ತಿದೀರಿ”
“ನಾವು ಬಂದದ್ದಲ್ಲ ಟಿವಿಯವರು ಕರೆದದ್ದು.”
“ಬಂದು-ಬಳಗದೋರು ಕರೆದ್ರೆ ಹೊಗಬೇಕಾಗತ್ತೆ ಬಿಡಿ. ತಮ್ಮ ಪ್ರಕಾರ ಅಂಬರೀಶ್ ಜಾತಕ ಹೇಗಿತ್ತು ಗುರುಗಳೇ.”
“ಅಂಬರೀಶ್ ಜಾತಕದಲ್ಲಿ ಗುರುವಿನ ಬಲವಿತ್ತು. ಶನಿ ದೂರವಿದ್ದ. ಈಗ ಅವರ ಬಳಿ ಶನಿ ಸಂಚಾರ ಆರಂಭವಾಗಿತ್ತು. ಮೃತ್ಯುಂಜಯ ಹೋಮದಿಂದ ಶನಿಯನ್ನ ದೂರ ಮಾಡಬಹುದಿತ್ತು.”
“ಬ್ರಹ್ಮರ್ಷಿಗಳೇ ನಾಗನ ಆರಾಧನೆ ಯಾಕೆ ಮಾಡ್ತರೆ ಗೊತ್ತೆ.”
“ನಾಗದೋಷ ಪರಿಹಾರಕ್ಕೆ.”
“ಅದಲ್ಲ, ಹಾವುಗಳ ಪೈಕಿ ನಾಗರಹಾವಿಗೆ ವಿಷ ಇದೆ. ಅದು ಕಡುದ್ರೆ ಮನುಷ್ಯ ಸತ್ತೋಗ್ತನೆ. ಪೂಜೆ ಮಾಡಿದ್ರೆ ಅದು ಕಡಿಯಲ್ಲ ಅನ್ನೋ ಕಾರಣಕ್ಕೆ. ಅಂದ್ರೆ ಭಯ ಭಕ್ತಿ ಮೂಡಿಸುತ್ತೆ ಅಲ್ಲವಾ.”
“ಅದೌದು. ಭಯ ನಿವಾರಣೆ ನಮ್ಮ ಕೆಲಸ.”
“ನಿಮ್ಮ ಮೃತ್ಯುಂಜಯ ಹೋಮದಿಂದ ಅರ್ಭುದ ರೋಗ ನಿವಾರಿಸಬಹುದಾ?”
“ಹೌದು.”
“ಹಾಗಾದ್ರೆ ಅನಂತಕುಮಾರ್ ಅದರಲ್ಲೇ ಹೋದರಲ್ಲ. ಅವರ ಸಂಬಂಧಿಯಾದ ನೀನು ಆಗ ಕತ್ತೆ ಕಾಯ್ತಾಯಿದ್ದ?”
“ಯಾಕೆ ಹಾಗೆ ಕೆಟ್ಟ ಮಾತನ್ನಾಡುವುದು ನೀವು.”
“ಸಾರಿ, ಗೋವು ಕಾಯ್ತಾಯಿದ್ರ.”
“ನೋಡಿ ಇವರೆ, ನಿಮ್ಮಂತ ಅಸಂಸ್ಕೃತ ಅಹಂಕಾರಿಗಳನ್ನ ನಾವು ಸಹಿಸಿಕೊಂಡು ಉತ್ತರ ಕೊಡಬೇಕಾಗ್ತದೆ, ಅಂಬರೀಶರು ಭಾವೋದ್ವೇಗದ ವ್ಯಕ್ತಿ. ಆನೆ ನಡೆದದ್ದೇ ದಾರಿ ಅಂತ ಹೇಳುವ ಹಾಗೆ ಅವರು ಯಾರ ಮಾತನ್ನ ಕೇಳಲಿಲ್ಲ. ಕೇಳಿದ್ದರೆ ನಮ್ಮಲ್ಲಿ ಪರಿಹಾರವಿತ್ತು.”
“ಏನು ಪರಿಹಾರ ಹೇಳಿ.”
“ನೋಡಿ ಮನುಷ್ಯನ ಬಾಹ್ಯ ವರ್ತನೆಗೆ ಆಂತರ್ಯದ ಸಮಸ್ಯೆಗಳು ಕಾರಣ. ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳಿವೆ. ಅವುಗಳ ಸಮತೋಲನ ಮುಖ್ಯ. ಅವುಗಳ ಏರುಪೇರಿನಿಂದ ಮನುಷ್ಯ ಕೀಳರಿಮೆಗೆ ತುತ್ತಾಗುವುದುಂಟು. ಆಗ ನಾವು ಆತ್ಮವಿಶ್ವಾಸ ಮೂಡಿಸುತ್ತೇವೆ.”
“ಯಾವ ತರ.”
“ನಮ್ಮ ಹೆಂಡತಿಗೆ ಒಂದಿಷ್ಟು ಉಬ್ಬು ಹಲ್ಲುಗಳಿದ್ದವು.”
“ಹಲ್ಲಿಗೇ ಮುತ್ತು ಕೊಡೋತರ.”
“ಹಾಗಂದುಕೊಳ್ಳಬಹುದು. ಆಗ ನಾನು ಆಕೆಗೆ ಆತ್ಮವಿಶ್ವಾಸ ತುಂಬಿದೆ. ನಿನ್ನ ಹಲ್ಲುಗಳ ಬಗ್ಗೆ ಕೀಳರಿಮೆ ಬೇಡ. ಮನೆಯ ಮೆಟ್ಟಿಲು ಕಲ್ಲುಗಳು, ಮನೆಯ ಹೊರಗಿರುತ್ತವೆ, ಒಳಗಲ್ಲ ಅಂತ ಹಾಸ್ಯ ಮಾಡಿ ಹೇಳಿದೆ. ಆಕೆಗೆ ಕೀಳರಿಮೆ ಹೋಯ್ತು. ನಮ್ಮ ಬದುಕು ಸರಾಗವಾಯ್ತು. ಹೀಗೆ ನಾವು ಮನುಷ್ಯನ ಆಂತರ್ಯದಲ್ಲಿನ ಕೀಳರಿಮೆ ಹೋಗಲಾಡಿಸಿಬಿಡ್ತೇವೆ.”
“ಇದಕ್ಕೂ ಅಂಬರೀಶ್ ವಿಷಯಕ್ಕೂ ಏನು ಸಂಬಂಧ.”
“ಸಂಬಂಧವುಂಟು, ಅಂಬರೀಶ್ರಲ್ಲಿದ್ದ ಭಾವೋದ್ವೇಗ ಕಡಿಮೆ ಮಾಡಿ, ಇನ್ನೂ ಬದುಕುವಂತೆ ಮಾಡ್ತಾಯಿದ್ದೆ.”
“ಮಿಸ್ಟರ್ ಬ್ರಹ್ಮ, ನಿಮ್ಮ ಜೋತಿಷ್ಯ ಪ್ರಧಾನವಾಗಿ ಹೊಟ್ಟೆ ಪಾಡಿಂದು, ಈ ದೇಶದ ಮುಗ್ಧ ಮನಸ್ಸುಗಳ ತಲೆಗೆ ಪುರಾಣ ತುಂಬಿ ದೇಶನೆ ಬಾಳೆಎಲೆ ಮಾಡಿಕೊಂಡು ಉಂಡ್ರಿ ಅಂತ ನಮ್ಮ ತೇಜಸ್ವಿ ಹೇಳತಿದ್ರು. ಏನಾದ್ರು ಮಾಡಿಕೊಂಡು ಹಾಳಾಗೋಗಿ. ಆದ್ರೆ ಅಂಬರೀಶ್ ವಿಷಯದಲ್ಲಿ ಪುರಾಣ ಶುರುಮಾಡಿದ್ರೆ ಸರಿಯಾಗಿ ಮಾಡಬೇಕಾಯ್ತದೆ.”
“ಯಂತ ಮಾಡ್ತಿರಿ.”
“ನಿನ್ನ ರಿಂಗ್‍ಟೋನಿದೆಯಲ್ಲ ಆ ತರ ನಡೆಯಬೇಕಾದ್ದು ನಡದೇ ನಡೆಯುತ್ತೆ. ನಡೆಯಬೇಕಾದ ರೀತಿಯಲ್ಲೇ ನಡೆಯುತ್ತೆ.”
“ನನ್ನನ್ನ ಬೆದರಿಸುತ್ತೀಯ, ಶಾಪ ಕೊಡ್ತೇನೆ.”
“ನಿನ್ನ ಶಾಪ ನನ್ನ ಕೂದಲಿಗೆ ಸಮ.”
“ಛೇ ಕೆಟ್ಟವನೆ.”
ಥೂತ್ತೇರಿ….!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...