Homeಪ್ರಪಂಚಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

ಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

- Advertisement -
- Advertisement -

ಭರತ್ ಹೆಬ್ಬಾಳ್ |

2012ರ ಸೆಪ್ಟೆಂಬರ್ ತಿಂಗಳಲ್ಲಿ ‘ಭ್ರಷ್ಟಾಚಾರದ ವಿರುದ್ದ ಭಾರತ’ ಹೋರಾಟದ ಮುಂಚೂಣಿಯಲ್ಲಿದ್ದ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಅವರುಗಳು ಕಾಂಗ್ರೆಸ್ ಮತ್ತು ರಾಬರ್ಟ್ ವಾದ್ರಾ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದು ನಿಮಗೆ ನೆನಪಿರಬಹುದು. ಆಗ ವಾದ್ರಾ ಇವರೆಲ್ಲ ‘ಬಾಳೆಹಣ್ಣು ಗಣತಂತ್ರದ ಮಾವಿನ ಪ್ರಜೆಗಳು’ ಎಂದು ಪ್ರತಿಕ್ರಿಯಿಸಿದ್ದರು. ರಾಜಕೀಯ ಶಬ್ದಕೋಶದಲ್ಲಿ ಬನಾನಾ ರಿಪಬ್ಲಿಕ್ (ಬಾಳೆಹಣ್ಣಿನ ಗಣತಂತ್ರ) ಎಂದರೆ ಒಂದು ಸೀಮಿತ ಸಂಪನ್ಮೂಲದ, ಉತ್ಪನ್ನದ ರಫ್ತಿನ (ಬಾಳೆ ಹಣ್ಣು ಅಥವಾ ಅದಿರು) ಮೇಲೆ ಅವಲಂಬಿತವಾಗಿರುವ, ರಾಜಕೀಯವಾಗಿ ಅಸ್ಥಿರವಾದ ದೇಶ ಎಂಬ ಅರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ, ಬಾಳೆಹಣ್ಣಿನ ಗಣರಾಜ್ಯವು ಅತ್ಯಂತ ಶ್ರೇಣೀಕೃತ ಸಾಮಾಜಿಕ ವರ್ಗಗಳ ಸಮಾಜವನ್ನು ಹೊಂದಿರುತ್ತದೆ (ಒಂದು ಕಡೆ ದೊಡ್ಡ ಬಡ ಕಾರ್ಮಿಕ ವರ್ಗ, ಮತ್ತೊಂದು ಕಡೆ ಉದ್ದಿಮೆಪತಿಗಳು, ರಾಜಕಾರಣ ಮತ್ತು ಸೈನ್ಯದ ಗಣ್ಯರನ್ನು ಹೊಂದಿರುವ ಆಳುವ-ವರ್ಗದ ಪ್ರಭುತ್ವ).

ಈ ಪದವನ್ನು ಮೊದಲ ಬಾರಿಗೆ 1901 ರಲ್ಲಿ ಓ ಹೆನ್ರಿ ಎಂಬ ಅಮೆರಿಕಾದ ಬರಹಗಾರ ದಕ್ಷಿಣ ಅಮೆರಿಕಾದ ದೇಶಗಳನ್ನು ತನ್ನ ವಸಾಹುತುಶಾಹಿ ವಿಸ್ತರಣೆಯಿಂದ ಕೊಳ್ಳೆ ಹೊಡೆಯುತ್ತಿದ್ದ ಮತ್ತು ಲಾಭಕ್ಕಾಗಿ ದೇಶಗಳನ್ನೇ ಆಸ್ಥಿರಗೊಳಿಸುತ್ತಿದ್ದ ಅಮೆರಿಕಾದ ಯುನೈಟೆಡ್ ಫ್ರೂಟ್ ಕಂಪನಿ ಬಗ್ಗೆ ಬರೆಯುತ್ತಾ ಬಳಸುತ್ತಾರೆ. ಅಮೆರಿಕಾದ ಸಾಮ್ರಾಜ್ಯಶಾಹಿ ವಿಸ್ತರಣೆಗಾಗಿ ಈ ಇಂತಹ ಕಂಪನಿಗಳು ಮಾಡಿದ ಹತ್ಯಾಕಾಂಡಗಳು ಬಹಳಷ್ಟಿವೆ. ದಕ್ಷಿಣ ಅಮೆರಿಕ ಖಂಡದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಇತಿಹಾಸ ಇದನ್ನೇ ಸೂಚಿಸುತ್ತದೆ.

1964ರಿಂದ 1985ರವರೆಗೂ ಮಿಲಿಟರೀ ಸರ್ವಾಧಿಕಾರದಲ್ಲಿದ್ದ ಬ್ರೆಜಿಲ್ ಕಾನೂನಾತ್ಮಕವಾಗಿ ಗುಲಾಮಗಿರಿ ನಿರ್ಮೂಲನೆ ಮಾಡಿದ ಕೊನೆಯ ದೇಶ (1988ರಲ್ಲಿ). ತನ್ನ ದೇಶದಲ್ಲಿ ಅರ್ಧಕ್ಕಿಂತ ಜನಸಂಖ್ಯೆ ಕಪ್ಪು ಜನರಿದ್ದರೂ, ದೃಶ್ಯಮಾಧ್ಯಮದಲ್ಲಿ ಬಹುತೇಕ ಬಿಳಿಯರನ್ನೇ ತೋರಿಸುವ ದೇಶ. ಮೊದಲಿಂದಲೂ ವಸಾಹುತುಶಾಹಿ ಆಳ್ವಿಕೆಯಲ್ಲಿ ಬ್ರೆಜಿಲ್ಲನ್ನು ಬಿಳಿಯಾಗಿಸುವ ನೀತಿಗಳನ್ನು (ಯುರೋಪಿಯನ್ ಜನರನ್ನು ಬ್ರೆಜಿಲ್ ಮತ್ತಿತರ ದೇಶಗಳಿಗೆ ಕರೆತರುವುದು) ಉತ್ತೇಜಿಸಲಾಗಿತ್ತು. ಇಂತಹ ಇತಿಹಾಸದಿಂದಾಗಿ ಈಗಲೂ ಅದು ಅತ್ಯಂತ ವರ್ಣಭೇದ ಅನುಸರಿಸುವ ವ್ಯವಸ್ಥೆಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿರುವ ಪ್ರದೇಶಗಳು ಬಹುತೇಕ ಬಿಳಿಯರಿಂದ ಕೂಡಿದೆ.

70ರ ದಶಕದಿಂದ ಪ್ರಪಂಚದಾದ್ಯಂತ ಆವರಿಸಿಕೊಂಡಿರುವ ನವಉದಾರೀಕರಣದ ಮೂಲ ಹುಡುಕುತ್ತಾ ಹೋದರೆ ಎಪ್ಪತ್ತರ ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲಾದ ರಾಜಕೀಯ ಬೆಳವಣಿಗೆಗಳ ಆದಿಯು ಸಿಗುತ್ತದೆ. ಮಿಲಿಟರಿ ಸರ್ವಾಧಿಕಾರ ಹೋಗಿ ಪ್ರಜಾಪ್ರಭುತ್ವ ಬಂದರೂ ಕೂಡ, ಸರ್ವಾಧಿಕಾರದ ಪರಂಪರೆಯು ಹಳೆಯ ದೊಡ್ಡ ದೊಡ್ಡ ಭೂಮಾಲೀಕರು, ಸಾರ್ವಜನಿಕ ಸಂಸ್ಥೆಗಳಲ್ಲಿನ ದೊಡ್ಡ ದೊಡ್ಡ ಕುಳಗಳು, ಮಿಲಿಟರಿಯ ಪ್ರಭಾವಗಳು ರಾಜಕೀಯ ಸಂಸ್ಕೃತಿಯಲ್ಲಿ ಆವರಿಸಿಕೊಂಡಿತ್ತು. ಇದರ ಜೊತೆಗೆ ಬ್ರೆಜಿಲ್‍ನ ಮಾಧ್ಯಮ ಕೂಡ ಯಾವಾಗಲೂ ಸಿರಿವಂತರ ಪರವಾಗಿತ್ತು. ಇಂದಿಗೂ ಬಹುತೇಕ ಬ್ರೆಜಿಲ್ ಮಾಧ್ಯಮ ಖಾಸಗಿ ಹಿಡಿತದಲ್ಲಿದೆ.

1965ರ ಮಿಲಿಟರಿ ಆಡಳಿತದಲ್ಲಿ ಹುಟ್ಟಿಕೊಂಡ ಗ್ಲೋಬೋ ಎನ್ನುವ ಒಂದು ಮಾಧ್ಯಮ ಸಂಸ್ಥೆಯು ಅಲ್ಲಿನ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆ. ಇದು ಆ ದೇಶದ ಅತ್ಯಂತ ದೊಡ್ಡ ಶ್ರೀಮಂತ ಮನೆತನದ ಮಾಲೀಕತ್ವದಲ್ಲಿದೆ. ದೇಶದ ಅರ್ಧದಷ್ಟು ಜನ ಗ್ಲೋಬೋ ವೀಕ್ಷಿಸುತ್ತಾರೆ (9 ಕೋಟಿಗೂ ಮೇಲೂ). ಭಾರತದ ಮಾಧ್ಯಮಗಳ ಅರ್ನಾಬ್ ಗೋಸ್ವಾಮಿ, ಸುಧಿರ್ ಚೌದರೀ, ರಜತ್ ಶರ್ಮ, ರೋಹಿತ್ ಸರ್ದಾನರಂಥ ಪತ್ರಕರ್ತರು ಸರ್ವಾಧಿಕಾರದ ತುತ್ತೂರಿಯನ್ನು ಇನ್ನೂ ಚೆನ್ನಾಗಿ ಹೇಗೆ ಊದಬೇಕು ಎಂಬ ಪಾಠವನ್ನು ಇವರಿಂದ ಕಲಿಯಬಹುದು ಎಂದರೆ, ಅದು ಇನ್ನೂ ಹೇಗಿರಬೇಕು ಊಹಿಸಿಕೊಳ್ಳಿ. ಬ್ರೆಜಿಲ್‍ನ ಎರಡನೇ ಅತಿದೊಡ್ಡ ಮಾಧ್ಯಮ ಸಂಸ್ಥೆ ‘ಬಾಂಡೆರಸ್ಟೆಸ್’ ಧಾರ್ಮಿಕ ಸಂಸ್ಥೆಯ ಒಡೆತನದಲ್ಲಿದೆ. ಬ್ರೆಜಿಲ್ ದೇಶ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಕ್ರೈಸ್ತ ಧರ್ಮೀಯರಿರುವ ಕ್ಯಾಥೊಲಿಕ್ ದೇಶ. ಮಿಲಿಟರಿ ಜೊತೆ ಇವೂ ಕೂಡ ಬ್ರೆಜಿಲ್‍ನ ಸ್ಥಾಪಿತ ಹಿತಾಸಕ್ತಿ ಕಾಯುವ ಸಾಂಪ್ರದಾಯಿಕ ಪ್ರತಿಗಾಮಿ ಶಕ್ತಿಗಳು.

ಇವೆಲ್ಲವನ್ನೂ ಃಃಃ ಲಾಬಿ ಎಂದು ಕರೆಯುತ್ತಾರೆ. ಈ ಲಾಬಿಗೆ ಬ್ರೆಜಿಲ್ ಕಾಂಗ್ರೆಸ್ ಮತ್ತು ಸೆನೆಟ್ನಲ್ಲಿ 40% ಸಂಖ್ಯಾಬಲವಿದೆ. ಮೊದಲನೆಯದು ಬೀಫ್ ಲಾಬಿ, ಇದರಲ್ಲಿ ಸಾವಿರಾರು ಅಥವಾ ಲಕ್ಷ ಲಕ್ಷ ಎಕರೆಗಟ್ಟಲೆ ಹೊಂದಿರುವ ಭೂಮಾಲೀಕರು ಬರುತ್ತಾರೆ. ಇವರು ದನದ ಮಾಂಸ ರಫ್ತು ಮಾಡುವ ವ್ಯವಹಾರದ ಜೊತೆಗೆ ಸೋಯಾ ಬೀನ್, ಕಬ್ಬು(ಸಕ್ಕರೆ), ಆರೆಂಜ್, ಬಾಳೆಹಣ್ಣು, ಕಾಫೀ ರಫ್ತು ಮಾಡುವ ಗುಂಪಾಗಿದ್ದಾರೆ. ಚುನಾವಣೆಗೂ ಮುಂಚೆ ಬೊಲ್ಸಾನರೋ ಅಮೆಜಾನ್ ಕಾಡುಗಳನ್ನು ಕಡಿದು ಈ ವ್ಯವಹಾರದ ವಿಸ್ತರಣೆ ಮಾಡುವುದಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ಹೇಳಿದ್ದ. ಇನ್ನು ಎರಡನೆಯ ಬಿ, ಬುಲೆಟ್ ಲಾಬಿಯಲ್ಲಿ ಸ್ವತಹಃ ಬೊಲ್ಸಾನರೋ ದೊಡ್ಡ ನಾಯಕ. ಇವನ ಪ್ರಕಾರ ಇವನು ಕೂಡ ಪಾಲ್ಗೊಂಡಿದ್ದ ಮಿಲಿಟರಿ ಸರ್ವಾಧಿಕಾರದಲ್ಲಿ ಚಿತ್ರಹಿಂಸೆಯ ಜೊತೆಗೆ ಕಡಿಮೆ ಜನರನ್ನು ಸಾಯಿಸಿದ್ದು ದೊಡ್ಡ ತಪ್ಪು. ಇನ್ನೂ 30 ಸಾವಿರ ಜನರನ್ನು ಸಾಯಿಸಬೇಕಿತ್ತೆಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದ. ಇವನ ಜೊತೆ ಇನ್ನೂ ಹಲವು ಮಿಲಿಟರಿ ಅಧಿಕಾರಿಗಳು ಕಾರ್ಮಿಕ ಪಕ್ಷದ ಅಧಿಕಾರದಲ್ಲಿ ಸ್ಥಾಪಿಸಿದ್ದ ‘ಸರ್ವಾಧಿಕಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾದ ಸತ್ಯ ಆಯೋಗ’ದ ಮುಂದೆ ವಿಚಾರಣೆಗಳನ್ನು ಎದುರುಸುತ್ತಿದ್ದಾರೆ. ಮೂರನೆಯದು ಬೈಬಲ್ ಲಾಬಿ, ಇದು ಕೂಡ ಧಾರ್ಮಿಕ ಮೂಲಭೂತವಾದ ಪ್ರತಿಪಾದಿಸುವ ಒಂದು ಗುಂಪು.

ಇವರೆಲ್ಲರ ಜೊತೆಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆಗಳ ಸಹಭಾಗಿತ್ವ ಮತ್ತು ಬ್ರೆಜಿಲ್ ನ್ಯಾಯಾಂಗ ವ್ಯವಸ್ಥೆ ಸೇರಿ ಎರಡನೇ ಬಾರಿಗೆ ನ್ಯಾಯಯುತವಾಗಿ ಚುನಾಯಿರಾತಾಗಿದ್ದ ದಿಲ್ಮ ರೌಸೆಫ್‍ರನ್ನು ಒಂದು ಹುಸಿ ಆರೋಪದಡಿ ಅಧಿಕಾರದಿಂದ ಹೊರ ಹಾಕುತ್ತಾರೆ. ಇವರ ವಿರುದ್ದ ದೋಷಾರೋಪ ಮಾಡಿದ್ದ 4 ಜನರಲ್ಲಿ ನಾಲ್ಕು ಜನವೂ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ದಿಲ್ಮ ಆಡಳಿತದಲ್ಲಿ ಉಪರಾಷ್ಟ್ರಪತಿಯಾಗಿದ್ದ ಮಿಚಿಯಾಲ್ ತೆಮೆರ್ ತಾವು ಕೂಡ ದಿಲ್ಮರನ್ನು ಕೆಳಗಿಳಿಸುವ ಷಡ್ಯಂತ್ರದ ಪಾತ್ರಧಾರಿಯೂ ಆಗಿದ್ದರು ಮತ್ತು ಸ್ವತಃ ಅವರೇ ಭ್ರಷ್ಟಾಚಾರದ ಆರೋಪವನ್ನು ಎದುರಿಸಿ ಅಧಿಕಾರದಿಂದ ಕೆಳೆಗಿಳಿಯಬೇಕಾಗುತ್ತದೆ.

ನಂತರದ ಅಭಿಪ್ರಾಯ ಸಮೀಕ್ಷೆಯಲ್ಲಿ ಎಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದ ಲೂಲಾರನ್ನು ಕ್ಷುಲ್ಲಕ ಕಾರಣಗಳನ್ನು ಮುಂದೆ ಮಾಡಿ, ನ್ಯಾಯಾಂಗ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಂಡು ಜೈಲಿಗಟ್ಟುತ್ತಾರೆ. (ಬ್ರೆಜಿಲ್ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಸತತ ಎರಡು ಬಾರಿಗೂ ಹೆಚ್ಚು ಚುನಾವಣೆಗೆ ನಿಲ್ಲುವ ಹಾಗಿಲ್ಲ, ಹಾಗಾಗಿ 2010ರ ನಂತರ ಮತ್ತೆ 2018ರಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು). ಈ ತೀರ್ಪಿಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿ ತನ್ನ ಮಾನವ ಹಕ್ಕುಗಳ ಸಮಿತಿಯ ವತಿಯಿಂದ ಲೂಲಾರನ್ನು ಚುನಾವಣೆಯಿಂದ ಅನರ್ಹಗೊಳಿಸಬಾರದು ಮತ್ತು ವಿಚಾರಣೆ ನಡೆಯುವವರೆಗೂ ಅವರು ಚುನಾವಣೆಯಲ್ಲಿ ನಿಲ್ಲಬಹುದೆಂದು ಹೇಳಿಕೆ ನೀಡಿತ್ತು. ಈ ಚುನಾವಣೆ ಎಷ್ಟು ಆಳುವ ವರ್ಗದ ಪರವಾಗಿತ್ತೆಂದರೆ ತಮ್ಮ ಅಭ್ಯರ್ಥಿ ಗೆಲ್ಲಲು, ಇವರ ವಿರುದ್ಧ ಇದ್ದ ಗೆಲ್ಲುವ ಅಭ್ಯರ್ಥಿಯನ್ನು ಹೇಗಾದರೂ ಮುಗಿಸಬೇಕಿತ್ತು. ಬ್ರೆಜಿಲ್ ಚುನಾವಣೆಯಲ್ಲಿ ಆದದ್ದು ಅದೇ. ಇಲ್ಲಿ ಭಾರತದಲ್ಲಿ ಸರ್ವಾಧಿಕಾರದ ಹೆಜ್ಜೆಗಳು ದೊಡ್ಡ ದೊಡ್ಡದಾಗುತ್ತಿದ್ದಂತೆ ಇಲ್ಲೂ ಕೂಡ ಪ್ರತಿಪಕ್ಷದ ನಾಯಕರುಗಳನ್ನು ಜೈಲಿಗಟ್ಟಿದರೂ ಅದು ಆಶ್ಚರ್ಯವಲ್ಲ. ಈಗಾಗಲೇ ಇದನ್ನು ಕೆಲವು ನಾಯಕರುಗಳ ಮೇಲೆ ಅದನ್ನು ಉಪಯೋಗಿಸುತ್ತಿದ್ದಾರೆ.

(ಬೊಲ್ಸಾನರೋ ಪ್ರಚಾರ, ಅದರ ಹಿಂದಿನ ಶಕ್ತಿಗಳು, ಮುಂಬರುವ ಚುನಾವಣೆಗಳ ಬಗ್ಗೆ ಕಡೆಯ ಕಂತು ಮುಂದಿನ ಸಂಚಿಕೆಯಲ್ಲಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...