Homeಅಂಕಣಗಳುಆಘಾತವಾಣಿ | ವೃದ್ಧಕೋಣದ ಮೂಗಿಗೆ ಹಗ್ಗ ಹಾಕುವ ಆಟ

ಆಘಾತವಾಣಿ | ವೃದ್ಧಕೋಣದ ಮೂಗಿಗೆ ಹಗ್ಗ ಹಾಕುವ ಆಟ

- Advertisement -
- Advertisement -

ಅಟ್ಯಾಕ್ ಹನ್ಮಂತ |

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ. ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ.

ಮಿಷಿನ್ 150, ಮಿಷಿನ್ 150 ಎಂದು ಹೋದಲ್ಲಿ ಬಂದಲ್ಲಿ ಊಳಿಡುತ್ತಿದ್ದ ಬಿಜೇಪೀಪಿ ಪಕ್ಷದ ಧಡಿಯೂರಪ್ಪನ ಮುಸುಡಿಗೆ ಕರ್ನಾಟಕದ ಮತದಾರರು ಎಗರಿಸಿ ಎಡಗಾಲಲ್ಲಿ ಒದ್ದಿರುವ ಸುದ್ದಿ ಇದೀಗಷ್ಟೇ ಲಭ್ಯವಾಗಿದೆ. 150 ಮಿಷೀನು ಅಡ್ಡಡ್ಡ ಮಲಗಿಕೊಂಡು 104 ಸೀಟುಗಳನ್ನ ಮಾತ್ರ ಗೆಲ್ಲಲು ಶಕ್ತವಾದ ಧಡಿಯೂರಪ್ಪನ ಗೋಳಾಟ ಚಾಮರಾಜಪೇಟೆ ಸ್ಮಶಾಣದವರೆಗೂ ತಲುಪಿದೆ. ಅಲ್ಲೇ ಸ್ಮಶಾಣದ ಪಕ್ಕದಲ್ಲಿ `ಹೇ ಶವ ಕೃಪ’ ಎಂಬ ಲಡಾಸು ಮುದುಕರ ಅನಾಥಾಶ್ರಮದಲ್ಲಿ ಚೌಕಾಬಾರ ಆಡುತ್ತಿದ್ದ ಕಂತ್ರಿ-ಕುತಂತ್ರಿಗಳಿಗೂ ಹಾರ್ಟ್ ಅಟ್ಯಾಕ್ ಆಗಿ, ಜೈ ಶ್ರೀಮಾಮ್ ಎಂಬ ಉದ್ಘೋಷದೊಂದಿಗೆ ತಲೆತಿರುಗಿ ಬಿದ್ದಿದ್ದಾರೆಂದು ಬ್ರೇಕಿಂಗ್ ನ್ಯೂಸ್ ಲಭ್ಯವಾಗಿದೆ.

* * * * *

ಬಡವರ ಪರವಾದ ಹತ್ತಾರು ಯೋಜನೆಗಳನ್ನು ಕೊಟ್ಟು, ಸಮಾಜವಾದದ ಆಲದಮರದಂತೆ ಗಟ್ಟಿಯಾಗಿ ನಿಂತಿದ್ದ ಶಿದ್ರಾಮಯ್ಯನ ಪಾರ್ಟಿಗೂ ಈ ಚುನಾವಣೆಯಲ್ಲಿ ಜನರ ಆಶೀರ್ವಾದ ಅರ್ಧಕ್ಕರ್ಧ ಸಿಕ್ಕಿರುವುದು ಆಶ್ಚರ್ಯ ಹುಟ್ಟಿಸಿದೆ. ಎತ್ತಲೂ ಇಲ್ಲದಂತೆ ಇರೋ ಮೂರು ಪಾರ್ಟಿಗಳಿಗೂ ಇಷ್ಟಿಷ್ಟು ಎಂದು ಓಟು ಹಂಚಿರುವ ಮತದಾರರ ಪ್ಲಾನು ಅಸಲಿಗೆ ಏನಾಗಿತ್ತೆಂಬುದು ಯಾರಿಗೂ ತಿಳಿಯದೆ ಎಲ್ಲರೂ ಅವರವರ ಸ್ವಂತ ತಲೆಯ ಮೇಲೆ ಅವರದ್ದೇ ಕೈ ಹೊತ್ತುಕೊಂಡು ಕುಂತಿರುವ ಸನ್ನಿವೇಶ ನಿರ್ಮಾಣವಾಗಿದೆ. ಆಗಿದ್ದಾಗಲೆಂದು ಕೈ ಪಾರ್ಟಿ ಮತ್ತು ದೊಡ್ಡಗೌಡರ ಪಾರ್ಟಿಯು ಫ್ರೆಂಡ್ಶಿಪ್ ಮಾಡಿಕೊಂಡು ಬಿಜೆಪೀಪಿ ಪಕ್ಷಕ್ಕೆ ಈ ಸಲ ಉಣ್ಣಬಾರದ್ದನ್ನು ಉಣ್ಣಿಸೋಣವೆಂದು ತೊಡೆ ತಟ್ಟಿ ನಿಂತ ಸಂದರ್ಭವೂ ಜನರಲ್ಲಿ ಆತಂಕಭರಿತ ಸಂತೋಷವನ್ನು ಹುಟ್ಟಿಸಿದೆ.

* * * * *

ನಾನು ಗೆದ್ದರೆ ಮೋದಿ ಗೆದ್ದಂತೆ, ನಾನು ಗೆದ್ದರೆ ಹಿಂದೂ ಗೆದ್ದಂತೆ, ನಾನು ಗೆದ್ದರೆ ಗುಡೇಮಾರನಳ್ಳಿ ಬಾರ್ ಸಪ್ಲೈಯರ್ ಯಂಕಟಣ್ಣ ಗೆದ್ದಂತೆ ಅಂತ ಕೂಗಾಡಿಕೊಂಡು ತಿರುಗುತ್ತಿದ್ದ ಚಿತ್ರನಟ ಗುಗ್ಗೇಶ್ ಚುನಾವಣೆಯಲ್ಲಿ ಮಕಾಡೆ ಮಲಗಿಕೊಂಡಿದ್ದಾರೆ. ಮೊದಲಿಗೆ ಕೈ ಪಕ್ಷದಲ್ಲಿದ್ದು ನಂತರ ವ್ಯಾಸೆಕ್ಟಮಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡು ಬಿಜೆಪೀಪಿಗೆ ಪಲ್ಟಿ ಹೊಡೆದಿದ್ದ ನಟ ಗುಗ್ಗೇಶ್ ಪೃಷ್ಠಕ್ಕೆ ಬೆಂಗಳೂರಿನ ಯಶವಂತಪುರದ ಮತದಾರರು ಹಾರೆಕೋಲು ಹೆಟ್ಟಿದ್ದಲ್ಲದೇ ಗಾಯಕ್ಕೆ ಬ್ಯಾಂಡೇಜನ್ನೂ ಹಾಕಿಸದೆ ಮನೆಗೆ ಕಳಿಸಿದ್ದಾರೆ. ಎಲ್ಲ ರಾಯರ ಆಶೀರ್ವಾದ ಅಂತ ತಮ್ಮ ಹೀನಾಯ ಸೋಲನ್ನು ಮಂತ್ರಾಲಯಕ್ಕೆ ಅರ್ಪಿಸಿರುವ ಗುಗ್ಗೇಶ್ ಸದ್ಯಕ್ಕೆ ಯಾರಿಗೂ ಮುಖ ತೋರಿಸುವುದು ಬೇಡವೆಂದು ಆಫಘನಿಸ್ಥಾನಕ್ಕೆ ಬೊಬ್ಬೆಯೆದ್ದ ಕಾಲುಗಳಲ್ಲಿ ಪಾದಯಾತ್ರೆ ಹೊರಟಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

* * * * *

ಗೋವಾ, ನಾಗಾಲ್ಯಾಂಡ್, ಮೇಘಾಲಯ, ಬಿಹಾರ ಇವೆಲ್ಲ ಕಡೆಗಳಲ್ಲಿ ಜುಜುಬಿ ಸೀಟು ಗೆದ್ದ ಬಿಜೆಪೀಪಿ ಪಕ್ಷವು ಒಬ್ಬನಿಗೇ ಹುಟ್ಟಿದ ಹಲ್ಕಾ ಆಟವಾಡಿ ಆ ರಾಜ್ಯಗಳಲ್ಲಿ ಸರ್ಕಾರ ರಚಿಸಿರುವುದನ್ನು ಮರೆತಂತೆ ಕಾಣುತ್ತಿದೆಯೆಂದು ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆಂಬ ಸುದ್ದಿ ಬಂದಿದೆ. ಅದೆಲ್ಲವನ್ನೂ ಮರೆತು, ಇದೀಗ ಕೈ ಮತ್ತು ತೆನೆಮಹಿಳೆ ಪಕ್ಷಗಳು ಒಟ್ಟಿಗೇ ಹೋಗುವುದನ್ನು ಸಹಿಸದ ಬಿಜೆಪೀಪಿ ಪಕ್ಷವು ಇದು ಹೊಲಸು ರಾಜಕೀಯ ಎಂದು ಅರಚಾಡುತ್ತಿದೆ. ಇದೇ ಹೊಲಸು ಸೆಗಣಿಯನ್ನು 4 ರಾಜ್ಯಗಳಲ್ಲಿ ಬಾಚಿಬಾಚಿ ತಿನ್ನುವಾಗ ಏನೂ ಅನ್ನಿಸದಿದ್ದ ಈ ಪಕ್ಷಕ್ಕೆ ಇದೀಗ ನಾಚಿಕೆ-ಮಾನ-ಮರ್ಯಾದೆಗಳು ಸಟಾರೆಂದು ನೆನಪಾಗಿರುವುದು ಜಗತ್ತಿನ 9ನೇ ಅದ್ಭುತ ಎಂದು ಭಾವೀ ಪ್ರಧಾನಿ `ಹುಚ್ಚ ಸಂಕಟ್’ ಅಳುತ್ತ ನುಡಿದಿದ್ದಾರೆ. ಈಗಿರುವ ಪಕೋಡೇಂದ್ರನನ್ನು ಕಿಡ್ನಾಪ್ ಮಾಡಿ ಅರಬ್ಬೀಸಮುದ್ರದಲ್ಲಿ ಬಚ್ಚಿಟ್ಟು ತಾನೇ ಪ್ರಧಾನಿಯಾಗುತ್ತೇನೆಂದು ಹೊರಟಿರುವ ಹುಚ್ಚ ಸಂಕಟ್ ಅವರ ಗೋಳಾಟಕ್ಕೆ ನಾಡಿನ ಎಲ್ಲ ಮಾನಸಿಕ ಅಸ್ವಸ್ಥರೂ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.

* * * * *

ತಾನು ಈ ಬಾರಿ ಮುಖ್ಯಮಂತ್ರಿಯಾಗದೆ ಇದ್ದರೆ ನಿನ್ನ ಬುರುಡೆಗೆ ನನ್ನ ಬುರುಡೆಯನ್ನು ಜಜ್ಜಿ ಜಜ್ಜಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿದ ಧಡಿಯೂರಪ್ಪನನ್ನು ಸಂಭಾಳಿಸುವುದು ಹೇಗೆಂದು ತಿಳಿಯದೆ ಬಿಜೆಪೀಪಿ ಪಕ್ಷದ ಏಕೈಕ ಕುಮಾರಿ ಕೋಭಾ ಶರಂದ್ಲಾಜೆಯವರು ಚಿಂತೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೇ ದುಃಖದಲ್ಲಿ ತನ್ನ ಸಂಕಟವನ್ನು ಚೀಟಿ ರವಿ ಜೊತೆಗೆ ವಾಟ್ಸಾಪ್ ಚಾಟ್ ಮಾಡುವಾಗ ಚೀಟಿ ರವಿಯು `ಚಿಂತೆ ಮಾಡಬೇಡ, ನಾನಿದ್ದೇನೆ… … …’ ಎಂದು ಕೋಭಕ್ಕನಿಗೆ ಪ್ರಾಮಿಸ್ ಮಾಡಿರುವುದು ಬಯಲಾಗಿದೆ. ಈ ವಾಟ್ಸಾಪ್ ಚಾಟ್‍ನ ಸ್ಕ್ರೀನ್ ಶಾಟನ್ನು ಯಾರೋ ದುರುಳರು ಧಡಿಯೂರಪ್ಪನಿಗೆ ಕಳಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

* * * * *

ಬಿಜೆಪೀಪಿಯ ವಯೋವೃದ್ಧ ಕೋಣದಂತಿರುವ ಗುಜರಾತಿ ಗುಜ್ಜೂವಾಲಾನನ್ನು ವ್ಯಾಜ್ಯಪಾಲನೆಂದು ಕರ್ನಾಟಕಕ್ಕೆ ಕುಕ್ಕರಿಸಿದ್ದ ಭಂಡಾಟ ಜನರ ಪಕ್ಷದವರು ಇದೀಗ ಅದೇ ವೃದ್ಧಕೋಣದ ಮೂಗಿಗೆ ಹಗ್ಗ ಹಾಕಿ ಕರ್ನಾಟಕದ ಗದ್ದುಗೆ ಹಿಡಿಯಲು ಮುಂದಾಗಿದ್ದಾರೆ. ಈ ಅವಕಾಶ ಕೈಜಾರಿ ಹೋಗಲು ಬಿಟ್ಟರೆ, ವೃದ್ದಾಪ್ಯದಲ್ಲಿ ಪುನರ್ವಸತಿ ಕಲ್ಪಿಸಿದ ತನ್ನವರ ಋಣ ತೀರಿಸಲು ಇದಕ್ಕಿಂತ ಸದಾವಕಾಶ ಈ ಜನ್ಮದಲ್ಲೇ ಮತ್ತೆ ಸಿಗುವುದಿಲ್ಲ ಎಂದು ಮನದಲ್ಲೇ ಲೆಕ್ಕ ಹಾಕಿದ ಈ ಗುಜ್ಜು ಋಣ ತೀರಿಸಲು ಮುಂದಾಗಿದ್ದಾರೆಂದು ವರದಿಯಾಗಿದೆ. ಇವರ ಒಳಮರ್ಮ ಏನೆಂದು ಹಿನ್ನೆಲೆ ಕೆದಕಿ ನೋಡಲಾಗಿ ಈ ಆಸಾಮಿಯ ಜಾತಕವೂ, ಜೈಲುಹಕ್ಕಿಗಳ ಬ್ಲೂಜೇಪಿಗಳ ಜಾತಕವೂ ಒಂದೇ ಆಗಿದೆಯೆಂಬ ಮಾಹಿತಿ ಲಭ್ಯವಾಗಿದೆ.

* * * * *

ತಾನು ನಡೆಸಿದ ಕೊಲೆಗಳ ವಿರುದ್ಧ ತೀರ್ಪು ಕೊಡಲು ಹೊರಟ ನ್ಯಾಯಾಧೀಶರನ್ನೇ ಕೊಂದು ಬಿಸಾಕಿದ ಆರೋಪ ಹೊತ್ತಿರುವ ಗುಜರಾತ್ ಮಾರ್ವಾಡಿ, ಹಳೇ ರೌಡಿ ಶೀಟರ್ `ಸುಮಿತ್ ಶಾ’ ಕುದುರೆಲದ್ದಿ ವ್ಯಾಪಾರ ಮಾಡಲು ಕರ್ನಾಟಕಕ್ಕೆ ಬರುತ್ತಿರುವ ಸುದ್ದಿ ತಿಳಿದುಬಂದಿದೆ. ಈ ಸುದ್ದಿ ತಿಳಿದ ಕುಮಾರಣ್ಣನಿಗೆ ಪಿತ್ಥ ಕೆದರಿ ತಲೆಯೊಳಗಿನ ಹುಳುಗಳೆಲ್ಲ ಥಕಥಕಥಕನೆಂದು ಕುಣಿದು, ನನ್ನ ಪಕ್ಷದ ಒಬ್ಬನನ್ನು ಕದ್ದೊಯ್ದರೆ ಬಿಜೆಪೀಪಿಯ ಒಬ್ಬ ನರಪಿಳ್ಳೆಯನ್ನೂ ಬಿಡದೆ ಕಸತುಂಬಿಕೊಂಡು ಬಂದಂತೆ ಲಾರಿಯಲ್ಲಿ ಅಪಹರಿಸಿಬಿಡುತ್ತೇನೆಂದು ಗುಟುರು ಹಾಕಿದ್ದಾರೆ. ಈ ಗುಟುರಿಗೆ ಉಟ್ಟ ಲಂಗೋಟಿ ಒದ್ದೆ ಮಾಡಿಕೊಂಡ ಸುಮಿತ್‍ಶಾಗೆ ವಾಂತಿ-ಬೇಧಿ ಎರಡೂ ಒಟ್ಟಿಗೇ ಆದ ಸುದ್ದಿ ಇನ್ನೂ ಲಭ್ಯವಾಗಿಲ್ಲ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಇನ್ನೊಂದಷ್ಟು ಎದೆಯೊಡುವ ಸುದ್ದಿಗಳೊಂದಿಗೆ ಮತ್ತೆ ಮುಂದಿನ ವಾರ ಭೇಟಿಯಾಗೋಣ. ಜೈ ಶ್ರೀಮಾಮ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...