Homeಅಂಕಣಗಳುಆಘಾತವಾಣಿ | ವೃದ್ಧಕೋಣದ ಮೂಗಿಗೆ ಹಗ್ಗ ಹಾಕುವ ಆಟ

ಆಘಾತವಾಣಿ | ವೃದ್ಧಕೋಣದ ಮೂಗಿಗೆ ಹಗ್ಗ ಹಾಕುವ ಆಟ

- Advertisement -
- Advertisement -

ಅಟ್ಯಾಕ್ ಹನ್ಮಂತ |

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ. ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ.

ಮಿಷಿನ್ 150, ಮಿಷಿನ್ 150 ಎಂದು ಹೋದಲ್ಲಿ ಬಂದಲ್ಲಿ ಊಳಿಡುತ್ತಿದ್ದ ಬಿಜೇಪೀಪಿ ಪಕ್ಷದ ಧಡಿಯೂರಪ್ಪನ ಮುಸುಡಿಗೆ ಕರ್ನಾಟಕದ ಮತದಾರರು ಎಗರಿಸಿ ಎಡಗಾಲಲ್ಲಿ ಒದ್ದಿರುವ ಸುದ್ದಿ ಇದೀಗಷ್ಟೇ ಲಭ್ಯವಾಗಿದೆ. 150 ಮಿಷೀನು ಅಡ್ಡಡ್ಡ ಮಲಗಿಕೊಂಡು 104 ಸೀಟುಗಳನ್ನ ಮಾತ್ರ ಗೆಲ್ಲಲು ಶಕ್ತವಾದ ಧಡಿಯೂರಪ್ಪನ ಗೋಳಾಟ ಚಾಮರಾಜಪೇಟೆ ಸ್ಮಶಾಣದವರೆಗೂ ತಲುಪಿದೆ. ಅಲ್ಲೇ ಸ್ಮಶಾಣದ ಪಕ್ಕದಲ್ಲಿ `ಹೇ ಶವ ಕೃಪ’ ಎಂಬ ಲಡಾಸು ಮುದುಕರ ಅನಾಥಾಶ್ರಮದಲ್ಲಿ ಚೌಕಾಬಾರ ಆಡುತ್ತಿದ್ದ ಕಂತ್ರಿ-ಕುತಂತ್ರಿಗಳಿಗೂ ಹಾರ್ಟ್ ಅಟ್ಯಾಕ್ ಆಗಿ, ಜೈ ಶ್ರೀಮಾಮ್ ಎಂಬ ಉದ್ಘೋಷದೊಂದಿಗೆ ತಲೆತಿರುಗಿ ಬಿದ್ದಿದ್ದಾರೆಂದು ಬ್ರೇಕಿಂಗ್ ನ್ಯೂಸ್ ಲಭ್ಯವಾಗಿದೆ.

* * * * *

ಬಡವರ ಪರವಾದ ಹತ್ತಾರು ಯೋಜನೆಗಳನ್ನು ಕೊಟ್ಟು, ಸಮಾಜವಾದದ ಆಲದಮರದಂತೆ ಗಟ್ಟಿಯಾಗಿ ನಿಂತಿದ್ದ ಶಿದ್ರಾಮಯ್ಯನ ಪಾರ್ಟಿಗೂ ಈ ಚುನಾವಣೆಯಲ್ಲಿ ಜನರ ಆಶೀರ್ವಾದ ಅರ್ಧಕ್ಕರ್ಧ ಸಿಕ್ಕಿರುವುದು ಆಶ್ಚರ್ಯ ಹುಟ್ಟಿಸಿದೆ. ಎತ್ತಲೂ ಇಲ್ಲದಂತೆ ಇರೋ ಮೂರು ಪಾರ್ಟಿಗಳಿಗೂ ಇಷ್ಟಿಷ್ಟು ಎಂದು ಓಟು ಹಂಚಿರುವ ಮತದಾರರ ಪ್ಲಾನು ಅಸಲಿಗೆ ಏನಾಗಿತ್ತೆಂಬುದು ಯಾರಿಗೂ ತಿಳಿಯದೆ ಎಲ್ಲರೂ ಅವರವರ ಸ್ವಂತ ತಲೆಯ ಮೇಲೆ ಅವರದ್ದೇ ಕೈ ಹೊತ್ತುಕೊಂಡು ಕುಂತಿರುವ ಸನ್ನಿವೇಶ ನಿರ್ಮಾಣವಾಗಿದೆ. ಆಗಿದ್ದಾಗಲೆಂದು ಕೈ ಪಾರ್ಟಿ ಮತ್ತು ದೊಡ್ಡಗೌಡರ ಪಾರ್ಟಿಯು ಫ್ರೆಂಡ್ಶಿಪ್ ಮಾಡಿಕೊಂಡು ಬಿಜೆಪೀಪಿ ಪಕ್ಷಕ್ಕೆ ಈ ಸಲ ಉಣ್ಣಬಾರದ್ದನ್ನು ಉಣ್ಣಿಸೋಣವೆಂದು ತೊಡೆ ತಟ್ಟಿ ನಿಂತ ಸಂದರ್ಭವೂ ಜನರಲ್ಲಿ ಆತಂಕಭರಿತ ಸಂತೋಷವನ್ನು ಹುಟ್ಟಿಸಿದೆ.

* * * * *

ನಾನು ಗೆದ್ದರೆ ಮೋದಿ ಗೆದ್ದಂತೆ, ನಾನು ಗೆದ್ದರೆ ಹಿಂದೂ ಗೆದ್ದಂತೆ, ನಾನು ಗೆದ್ದರೆ ಗುಡೇಮಾರನಳ್ಳಿ ಬಾರ್ ಸಪ್ಲೈಯರ್ ಯಂಕಟಣ್ಣ ಗೆದ್ದಂತೆ ಅಂತ ಕೂಗಾಡಿಕೊಂಡು ತಿರುಗುತ್ತಿದ್ದ ಚಿತ್ರನಟ ಗುಗ್ಗೇಶ್ ಚುನಾವಣೆಯಲ್ಲಿ ಮಕಾಡೆ ಮಲಗಿಕೊಂಡಿದ್ದಾರೆ. ಮೊದಲಿಗೆ ಕೈ ಪಕ್ಷದಲ್ಲಿದ್ದು ನಂತರ ವ್ಯಾಸೆಕ್ಟಮಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡು ಬಿಜೆಪೀಪಿಗೆ ಪಲ್ಟಿ ಹೊಡೆದಿದ್ದ ನಟ ಗುಗ್ಗೇಶ್ ಪೃಷ್ಠಕ್ಕೆ ಬೆಂಗಳೂರಿನ ಯಶವಂತಪುರದ ಮತದಾರರು ಹಾರೆಕೋಲು ಹೆಟ್ಟಿದ್ದಲ್ಲದೇ ಗಾಯಕ್ಕೆ ಬ್ಯಾಂಡೇಜನ್ನೂ ಹಾಕಿಸದೆ ಮನೆಗೆ ಕಳಿಸಿದ್ದಾರೆ. ಎಲ್ಲ ರಾಯರ ಆಶೀರ್ವಾದ ಅಂತ ತಮ್ಮ ಹೀನಾಯ ಸೋಲನ್ನು ಮಂತ್ರಾಲಯಕ್ಕೆ ಅರ್ಪಿಸಿರುವ ಗುಗ್ಗೇಶ್ ಸದ್ಯಕ್ಕೆ ಯಾರಿಗೂ ಮುಖ ತೋರಿಸುವುದು ಬೇಡವೆಂದು ಆಫಘನಿಸ್ಥಾನಕ್ಕೆ ಬೊಬ್ಬೆಯೆದ್ದ ಕಾಲುಗಳಲ್ಲಿ ಪಾದಯಾತ್ರೆ ಹೊರಟಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

* * * * *

ಗೋವಾ, ನಾಗಾಲ್ಯಾಂಡ್, ಮೇಘಾಲಯ, ಬಿಹಾರ ಇವೆಲ್ಲ ಕಡೆಗಳಲ್ಲಿ ಜುಜುಬಿ ಸೀಟು ಗೆದ್ದ ಬಿಜೆಪೀಪಿ ಪಕ್ಷವು ಒಬ್ಬನಿಗೇ ಹುಟ್ಟಿದ ಹಲ್ಕಾ ಆಟವಾಡಿ ಆ ರಾಜ್ಯಗಳಲ್ಲಿ ಸರ್ಕಾರ ರಚಿಸಿರುವುದನ್ನು ಮರೆತಂತೆ ಕಾಣುತ್ತಿದೆಯೆಂದು ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆಂಬ ಸುದ್ದಿ ಬಂದಿದೆ. ಅದೆಲ್ಲವನ್ನೂ ಮರೆತು, ಇದೀಗ ಕೈ ಮತ್ತು ತೆನೆಮಹಿಳೆ ಪಕ್ಷಗಳು ಒಟ್ಟಿಗೇ ಹೋಗುವುದನ್ನು ಸಹಿಸದ ಬಿಜೆಪೀಪಿ ಪಕ್ಷವು ಇದು ಹೊಲಸು ರಾಜಕೀಯ ಎಂದು ಅರಚಾಡುತ್ತಿದೆ. ಇದೇ ಹೊಲಸು ಸೆಗಣಿಯನ್ನು 4 ರಾಜ್ಯಗಳಲ್ಲಿ ಬಾಚಿಬಾಚಿ ತಿನ್ನುವಾಗ ಏನೂ ಅನ್ನಿಸದಿದ್ದ ಈ ಪಕ್ಷಕ್ಕೆ ಇದೀಗ ನಾಚಿಕೆ-ಮಾನ-ಮರ್ಯಾದೆಗಳು ಸಟಾರೆಂದು ನೆನಪಾಗಿರುವುದು ಜಗತ್ತಿನ 9ನೇ ಅದ್ಭುತ ಎಂದು ಭಾವೀ ಪ್ರಧಾನಿ `ಹುಚ್ಚ ಸಂಕಟ್’ ಅಳುತ್ತ ನುಡಿದಿದ್ದಾರೆ. ಈಗಿರುವ ಪಕೋಡೇಂದ್ರನನ್ನು ಕಿಡ್ನಾಪ್ ಮಾಡಿ ಅರಬ್ಬೀಸಮುದ್ರದಲ್ಲಿ ಬಚ್ಚಿಟ್ಟು ತಾನೇ ಪ್ರಧಾನಿಯಾಗುತ್ತೇನೆಂದು ಹೊರಟಿರುವ ಹುಚ್ಚ ಸಂಕಟ್ ಅವರ ಗೋಳಾಟಕ್ಕೆ ನಾಡಿನ ಎಲ್ಲ ಮಾನಸಿಕ ಅಸ್ವಸ್ಥರೂ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.

* * * * *

ತಾನು ಈ ಬಾರಿ ಮುಖ್ಯಮಂತ್ರಿಯಾಗದೆ ಇದ್ದರೆ ನಿನ್ನ ಬುರುಡೆಗೆ ನನ್ನ ಬುರುಡೆಯನ್ನು ಜಜ್ಜಿ ಜಜ್ಜಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿದ ಧಡಿಯೂರಪ್ಪನನ್ನು ಸಂಭಾಳಿಸುವುದು ಹೇಗೆಂದು ತಿಳಿಯದೆ ಬಿಜೆಪೀಪಿ ಪಕ್ಷದ ಏಕೈಕ ಕುಮಾರಿ ಕೋಭಾ ಶರಂದ್ಲಾಜೆಯವರು ಚಿಂತೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೇ ದುಃಖದಲ್ಲಿ ತನ್ನ ಸಂಕಟವನ್ನು ಚೀಟಿ ರವಿ ಜೊತೆಗೆ ವಾಟ್ಸಾಪ್ ಚಾಟ್ ಮಾಡುವಾಗ ಚೀಟಿ ರವಿಯು `ಚಿಂತೆ ಮಾಡಬೇಡ, ನಾನಿದ್ದೇನೆ… … …’ ಎಂದು ಕೋಭಕ್ಕನಿಗೆ ಪ್ರಾಮಿಸ್ ಮಾಡಿರುವುದು ಬಯಲಾಗಿದೆ. ಈ ವಾಟ್ಸಾಪ್ ಚಾಟ್‍ನ ಸ್ಕ್ರೀನ್ ಶಾಟನ್ನು ಯಾರೋ ದುರುಳರು ಧಡಿಯೂರಪ್ಪನಿಗೆ ಕಳಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

* * * * *

ಬಿಜೆಪೀಪಿಯ ವಯೋವೃದ್ಧ ಕೋಣದಂತಿರುವ ಗುಜರಾತಿ ಗುಜ್ಜೂವಾಲಾನನ್ನು ವ್ಯಾಜ್ಯಪಾಲನೆಂದು ಕರ್ನಾಟಕಕ್ಕೆ ಕುಕ್ಕರಿಸಿದ್ದ ಭಂಡಾಟ ಜನರ ಪಕ್ಷದವರು ಇದೀಗ ಅದೇ ವೃದ್ಧಕೋಣದ ಮೂಗಿಗೆ ಹಗ್ಗ ಹಾಕಿ ಕರ್ನಾಟಕದ ಗದ್ದುಗೆ ಹಿಡಿಯಲು ಮುಂದಾಗಿದ್ದಾರೆ. ಈ ಅವಕಾಶ ಕೈಜಾರಿ ಹೋಗಲು ಬಿಟ್ಟರೆ, ವೃದ್ದಾಪ್ಯದಲ್ಲಿ ಪುನರ್ವಸತಿ ಕಲ್ಪಿಸಿದ ತನ್ನವರ ಋಣ ತೀರಿಸಲು ಇದಕ್ಕಿಂತ ಸದಾವಕಾಶ ಈ ಜನ್ಮದಲ್ಲೇ ಮತ್ತೆ ಸಿಗುವುದಿಲ್ಲ ಎಂದು ಮನದಲ್ಲೇ ಲೆಕ್ಕ ಹಾಕಿದ ಈ ಗುಜ್ಜು ಋಣ ತೀರಿಸಲು ಮುಂದಾಗಿದ್ದಾರೆಂದು ವರದಿಯಾಗಿದೆ. ಇವರ ಒಳಮರ್ಮ ಏನೆಂದು ಹಿನ್ನೆಲೆ ಕೆದಕಿ ನೋಡಲಾಗಿ ಈ ಆಸಾಮಿಯ ಜಾತಕವೂ, ಜೈಲುಹಕ್ಕಿಗಳ ಬ್ಲೂಜೇಪಿಗಳ ಜಾತಕವೂ ಒಂದೇ ಆಗಿದೆಯೆಂಬ ಮಾಹಿತಿ ಲಭ್ಯವಾಗಿದೆ.

* * * * *

ತಾನು ನಡೆಸಿದ ಕೊಲೆಗಳ ವಿರುದ್ಧ ತೀರ್ಪು ಕೊಡಲು ಹೊರಟ ನ್ಯಾಯಾಧೀಶರನ್ನೇ ಕೊಂದು ಬಿಸಾಕಿದ ಆರೋಪ ಹೊತ್ತಿರುವ ಗುಜರಾತ್ ಮಾರ್ವಾಡಿ, ಹಳೇ ರೌಡಿ ಶೀಟರ್ `ಸುಮಿತ್ ಶಾ’ ಕುದುರೆಲದ್ದಿ ವ್ಯಾಪಾರ ಮಾಡಲು ಕರ್ನಾಟಕಕ್ಕೆ ಬರುತ್ತಿರುವ ಸುದ್ದಿ ತಿಳಿದುಬಂದಿದೆ. ಈ ಸುದ್ದಿ ತಿಳಿದ ಕುಮಾರಣ್ಣನಿಗೆ ಪಿತ್ಥ ಕೆದರಿ ತಲೆಯೊಳಗಿನ ಹುಳುಗಳೆಲ್ಲ ಥಕಥಕಥಕನೆಂದು ಕುಣಿದು, ನನ್ನ ಪಕ್ಷದ ಒಬ್ಬನನ್ನು ಕದ್ದೊಯ್ದರೆ ಬಿಜೆಪೀಪಿಯ ಒಬ್ಬ ನರಪಿಳ್ಳೆಯನ್ನೂ ಬಿಡದೆ ಕಸತುಂಬಿಕೊಂಡು ಬಂದಂತೆ ಲಾರಿಯಲ್ಲಿ ಅಪಹರಿಸಿಬಿಡುತ್ತೇನೆಂದು ಗುಟುರು ಹಾಕಿದ್ದಾರೆ. ಈ ಗುಟುರಿಗೆ ಉಟ್ಟ ಲಂಗೋಟಿ ಒದ್ದೆ ಮಾಡಿಕೊಂಡ ಸುಮಿತ್‍ಶಾಗೆ ವಾಂತಿ-ಬೇಧಿ ಎರಡೂ ಒಟ್ಟಿಗೇ ಆದ ಸುದ್ದಿ ಇನ್ನೂ ಲಭ್ಯವಾಗಿಲ್ಲ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಇನ್ನೊಂದಷ್ಟು ಎದೆಯೊಡುವ ಸುದ್ದಿಗಳೊಂದಿಗೆ ಮತ್ತೆ ಮುಂದಿನ ವಾರ ಭೇಟಿಯಾಗೋಣ. ಜೈ ಶ್ರೀಮಾಮ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...