Homeಅಂಕಣಗಳುಸ್ವಾತಂತ್ರ್ಯ ಚಳವಳಿ ಜಲಪಾತದ ಹಳ್ಳಿ ತೊರೆಗಳು

ಸ್ವಾತಂತ್ರ್ಯ ಚಳವಳಿ ಜಲಪಾತದ ಹಳ್ಳಿ ತೊರೆಗಳು

- Advertisement -
- Advertisement -

ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡದೊಡ್ಡ ನಾಯಕರು ಪಾಲ್ಗೊಂಡಂತೆಯೇ ಜನಸಾಮಾನ್ಯರೂ ಭಾಗವಹಿಸುತ್ತಿದ್ದರು. ಆ ಪೈಕಿ ಕೆಲ ಸಾಮಾನ್ಯರ ಪಾತ್ರ ಬಹಳ ರೋಚಕವಾಗಿದೆ.
1932ರಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಪ್ರಮುಖ ಹೋರಾಟಗಳು ನಡೆದವು. ಅವುಗಳೆಂದರೆ ಕಾರವಾರದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಜಿಲ್ಲೆಯ ಪೂರ್ತಿ ನಡೆದ ಕರ ನಿರಾಕರಣ ಚಳವಳಿ. ಈ ಎರಡೂ ಹೋರಾಟಗಳು ಗುಜರಾತಿನ ದಂಡಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಮತ್ತು ಕರನಿರಾಕರÀಣ ಚಳವಳಿಯಷ್ಟೇ ಪ್ರಖರವಾಗಿತ್ತು.
ಕರನಿರಾಕರಣ ಚಳುವಳಿಯಲ್ಲಿ ದೊಡ್ಮನೆಯ ನಾಗೇಶರಾಯರ ಪಾತ್ರ ಮಹತ್ವದ್ದು. ನಾಗೇಶರಾಯರು ರಾಮಕೃಷ್ಣ ಹೆಗ್ಡೆಯವರ ದೊಡ್ಡಪ್ಪ. ಅವರ ಅಣ್ಣ ತಮ್ಮಂದಿರು, ಅವರ ಹೆಂಡತಿಯರು, ಮಕ್ಕಳು ಎಲ್ಲರೂ ಸೆರೆಮನೆ ಕಂಡರು. ಅವರ ಮನೆಗೆÉಲಸಕ್ಕೆ ಖಾಯಂ ಆಗಿ ಇದ್ದ ದೇವಿ ಮತ್ತು ಅವಳ ಗಂಡ ಬಹಳ ಪ್ರಾಮಾಣಿಕ ವ್ಯಕ್ತಿಗಳು. ಎಲ್ಲರೂ ಸೆರೆಮನೆಗೆ ಹೋಗುವುದೆಂದು ತೀರ್ಮಾನ ಮಾಡಿದ ಮೇಲೆ ನಾಗೇಶ ಹೆಗ್ಡೆಯವರು ತಮ್ಮ ಮನೆಯಲ್ಲಿದ್ದ ಎಲ್ಲ ಬೆಳ್ಳಿ ಪಾತ್ರೆಗಳನ್ನು, ಚಿನ್ನದ ಒಡವೆಗಳನ್ನು ದೇವಿಯ ಕೈಗೆ ಒಪ್ಪಿಸಿ ಭದ್ರವಾಗಿ ಇರಿಸಿಕೊಂಡು ತಾವೆಲ್ಲ ಸೆರೆಮನೆಯಿಂದ ಬಂದ ಮೇಲೆ ಹಿಂತಿರುಗಿಸಲು ಹೇಳಿ ಅಂದು ಗಂಟುಕಟ್ಟಿ ದೇವಿ ಕೈಗೆ ಕೊಟ್ಟರು. ನಾಗೇಶ ಹೆಗ್ಡೆಯವರ ಮನೆಮುಂದೆ ಇದ್ದ ಒಂದು ಗುಡಿಸಲಲ್ಲಿ ದೇವಿ ದಂಪತಿಗಳು ವಾಸಿಸುತ್ತಿದ್ದರು. ದೇವಿ, ಅವಳ ಗಂಡ ಹೊರಗೆ ಹೋಗಿದ್ದಾಗ ಗುಡಿಸಲಿನಲ್ಲಿ ಒಂದು ಗುಂಡಿತೋಡಿ ಆ ಒಡವೆ ವಸ್ತುಗಳನ್ನೆಲ್ಲ ಅದರಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಚಾಪೆ ಹಾಕಿಕೊಂಡು ಆಕೆ ಮಲಗುತ್ತಿದ್ದಳು. ದೊಡ್ಮನೆಯವರೆಲ್ಲರ ಬಂಧನವಾಯಿತು. ಅವಳು ಒಡವೆಗಳ ಸುರಕ್ಷತೆಗಾಗಿ ಸರ್ಪಗಾವಲು ಕಾದಳು. ಅದರೂ ಅವಳಿಗೆ ಒಂದು ಅಳುಕು ಇತ್ತು. ಗಂಡ ಕುಡುಕ ಅವನ ಕಣ್ಣೇನಾದರೂ ಈ ಒಡವೆಗಳ ಮೇಲೆ ಬಿದ್ದರೆ ಎಲ್ಲಿ ತೆಗೆದುಕೊಂಡು ಹೋಗಿ ಮಾರಿಬಿಡುವನೋ ಎಂಬ ಭಯ. ಅದರಿಂದ ದೇವಿ ಅವನಿಲ್ಲದ ವೇಳೆಯಲ್ಲಿ ಗುಡಿಸಲಿನ ಹೊರಗಿದ್ದ ಅರಣ್ಯದಲ್ಲಿ ಒಂದು ಮರದ ಕೆಳಗೆ ಹಳ್ಳತೋಡಿ ಈ ಒಡವೆಗಳನ್ನು ಅದರಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಹಾಸುಗಲ್ಲು ಇಟ್ಟು ಎಚ್ಚರದಿಂದ ನೋಡಿಕೊಳ್ಳುತ್ತಿದ್ದಳು.
ನಾಗೇಶ ಹೆಗ್ಡೆಯವರ ಮನೆಯವರು ಸೆರೆಮನೆಯಲ್ಲಿ ಒಂದು ವರ್ಷ ಇದ್ದು ಹೋರಬಂದ ಮೇಲೆ ಅವರಿಗೆ ಜೋಪಾನವಾಗಿ ಇರಿಸಿದ್ದ ಒಡವೆ ವಸ್ತುಗಳನ್ನು ಹಿಂದಿರುಗಿಸಿ ದೊಡ್ಮನೆಯವರ ಪ್ರೀತಿ ಆದರಗಳಿಗೆ ಪಾತ್ರಳಾದಳು.
ಅದೇ ಸಮಯದಲ್ಲಿ ಚಳುವಳಿಗೆ ಸಂಬಂಧಪಟ್ಟಂತೆ ಕರಪತ್ರಗಳನ್ನು ಹೊರಡಿಸಲಾಗುತ್ತಿತ್ತು. ಸೈಕ್ಲೋಸ್ಟೈಲ್ ಮಾಡಿ ಕರಪತ್ರಗಳನ್ನು ಸ್ವಯಂಸೇವಕರು ಹಳ್ಳಿಗರ ಮನೆಗಳಿಗೆ ಕಿಟಕಿ ಮೂಲಕ ನಸುಕಿನಲ್ಲಿ ಹಾಕುತ್ತಿದ್ದರು. ಈ ಸೈಕ್ಲೋಸ್ಟೈಲ್ ಮಾಡಿದ ಕರಪತ್ರಗಳನ್ನು ದೊಡ್ಮನೆಯ ನಾಲ್ಕೂ ಕಡೆ ಇರುವ ಸೇತುವೆಗಳ ಕಣ್ಣಲ್ಲಿ ಇಡಲಾಗುತ್ತಿತ್ತು. ಸ್ವಯಂ ಸೇವಕರು ಅದನ್ನು ತೆಗೆದುಕೊಂಡು ಹೋಗಿ ವಿವಿಧ ಗ್ರಾಮಗಳ ಮನೆಗೆ ಹಾಕುತ್ತಿದ್ದರು.
ಕಾಳಿ ಎಂಬುವವಳು ದಿನವೂ ಅರಣ್ಯಕ್ಕೆ ಹೋಗಿ ಸೌದೆ ತಂದು ಮಾರಾಟ ಮಾಡಿ ಹೊಟ್ಟೆ ಹೊರೆಯುತ್ತಿದ್ದಳು. ಕಾಳಿ ಕಾಡಿಗೆ ಹೋಗುವಾಗ ಈ ಸುದ್ದಿ ಪತ್ರಗಳ ಬಂಡಲ್ ತೆಗೆದುಕೊಂಡು ಹೋಗಿ ಸೇತುವೆಯ ಕಣ್ಣಿನಲ್ಲಿ ದಿನಾ ಇಟ್ಟು ಹೋಗುತ್ತಿದ್ದಳು. ಇದು ಅವಳ ದೇಶಸೇವೆ. ಒಂದು ದಿನ ಕಾಳಿ ಈ ಕರಪತ್ರದ ಕಟ್ಟನ್ನು ಸೇತುವೆಯ ಕಣ್ಣಿನಲ್ಲಿ ಇಡುವಾಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಳು. ಈ ಕರಪತ್ರ ಯಾರು ಕೊಟ್ಟರು ಎಲ್ಲಿ ತಯಾರಿಸುತ್ತಾರೆ ಎಂದು ಆಕೆಯನ್ನು ಪೊಲೀಸರು ವಿಚಾರಿಸಿದರು. ಆಕೆ ಬಾಯಿ ಬಿಡಲಿಲ್ಲ. ಆಕೆಯನ್ನು ಹೊಡೆದು ಚಿತ್ರಹಿಂಸೆ ಕೊಟ್ಟರು. ಕಾಳಿ ಮಾತ್ರ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲೇ ಇಲ್ಲ. ಈ ರೀತಿ ಗಾಂಧೀಜಿಯ ಸ್ವಾತಂತ್ರ್ಯ ಹೋರಾಟಕ್ಕೆ ಮುಗ್ಧ ಹೆಣ್ಣುಮಕ್ಕಳು ಸಹಾಯ ಮಾಡಿದ್ದೂ ಉಂಟು.
ಧಾರವಾಡದಲ್ಲಿ 1942ರಲ್ಲಿ ಬಸಮ್ಮ ಎಂಬ ಹೆಣ್ಣುಮಗಳಿದ್ದಳು. ಅವಳ ಗಂಡ ನಿಧನರಾಗಿದ್ದರು. ಆಕೆ ಕಾಂಗ್ರೆಸ್ ನಾಯಕರೊಬ್ಬರ ಮನೆಯ ಹೊರ ಕೋಣೆಯಲ್ಲಿದ್ದುಕೊಂಡು ಅವರಿವರ ಮನೆಯಲ್ಲಿ ಕಸಮುಸುರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಕಾಂಗ್ರೆಸ್‍ನವರು ಪ್ರಭಾತ್‍ಫೇರಿ ನಡೆಸುತ್ತಿದ್ದ ಕಾಲ ಅದು. ಬಸಮ್ಮ ಧ್ವಜ ಹಿಡಿದುಕೊಂಡು ಘೋಷಣೆ ಕೂಗುತ್ತ ಪ್ರಭಾತ್‍ಪೇರಿಯಲ್ಲಿ ಭಾಗವಹಿಸುತ್ತಿದ್ದಳು. ಲಿಂಗಾಯತ ಸಮುದಾಯದ ಸಾಹುಕಾರರೊಬ್ಬರು ಬಸಮ್ಮನಿಗೆ ಹೇಳಿದರು ‘ಬಸಮ್ಮ ನೀನು ಚಳವಳಿಗೆ ಹೋಗ್ತಾ ಇದ್ದೀಯ ನೀನು ಸತ್ತರೆ ನಿನಗೆ ಮಣ್ಣು ಮಾಡುವುದಕ್ಕೆ ಯಾರು ಬರುವುದಿಲ್ಲ. ನಾಯಿ ನರಿ ತಿಂದು ಹೋಗ್ತದೆ ನಿನ್ನ ಹೆಣವನ್ನು’.
`ಸಾವುಕಾರ್ರೇ ನಾನು ಸತ್ತರೆ ನೀವೇನೂ ಚಿಂತೆ ಮಾಡಬ್ಯಾಡ್ರಿ, ನಾಯಿ ನರಿ ತಿಂದು ಹೋಗಲಿ’ ಎಂದು ಮರುತ್ತರ ನೀಡಿದಳು.
ಆಕೆ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ಅವಳ ದಸ್ತಗಿರಿ ಆಯಿತು. ನ್ಯಾಯಾಲಯಕ್ಕೆ ಪೊಲೀಸರು ಕರೆದೊಯ್ದರು, ವಿಚಾರಣೆಯಾಯಿತು. ತಪ್ಪೊಪ್ಪಿಕೊಂಡಳು. ನ್ಯಾಯಾಧೀಶ ಈ ಖಟ್ಲೆಯಲ್ಲಿ ಅಪರಾಧಿಗಳಾಗಿದ್ದ ಗಂಡಸರಿಗೆಲ್ಲ ಆರಾರು ತಿಂಗಳು ಶಿಕ್ಷೆ ವಿಧಿಸಿದರು ಬಸಮ್ಮನಿಗೆ ಹೇಳಿದರು:- ‘ನೀನು ಹೆಂಗಸು ಎಂದು 3 ತಿಂಗಳ ಶಿಕ್ಷೆ ವಿಧಿಸಿದ್ದೇನೆ’. ಬಸಮ್ಮ ‘ಸಾಹೇಬ್ರೆ ನಿಮ್ಮ ದಯೆ ದಾಕ್ಷಿಣ್ಯ ಏನೂ ಬೇಡ ಗಂಡಸರಿಗೆ ಕೊಟ್ಟ ಹಾಗೇ ನನಗೂ 6 ತಿಂಗಳು ಶಿಕ್ಷೆ ಕೊಡಿ’ ಎಂದಳು!
ಶ್ರೀನಿವಾಸಯ್ಯ ಎಂಬ ಒಬ್ಬ ಪದವೀಧರರಿದ್ದರು. ನಂಜನಗೂಡಿನಲ್ಲಿ ಅವರು 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಒಂದು ದಿನ ಬೆಂಗಳೂರಿಗೆ ಬಂದು ಜಿಲ್ಲಾ ನ್ಯಾಯಾಧೀಶರ ಕೋರ್ಟ್ ಪ್ರವೇಶ ಮಾಡಿದರು. ಕಕ್ಷಿದಾರರೂ ವಕೀಲರು ಕಿಕ್ಕಿರಿದು ನೆರೆದಿದ್ದರು. ನ್ಯಾಯಾಧೀಶರು ಇನ್ನೂ ತಮ್ಮ ಪೀಠಕ್ಕೆ ಬಂದಿರಲಿಲ್ಲ.
ಶ್ರೀನಿವಾಸಯ್ಯ ನೇರವಾಗಿ ಹೋಗಿ ಜಿಲ್ಲಾಧಿಕಾರಿಗಳ ಕುರ್ಚಿಯಲ್ಲಿ ಕುಳಿತುಬಿಟ್ಟರು. ನ್ಯಾಯಾಧೀಶರು ಬಂದವರು ಶ್ರೀನಿವಾಸಯ್ಯನವರು ತಮ್ಮ ಆಸನದಲ್ಲಿ ಕುಳಿತಿರುವುದನ್ನು ನೋಡಿ ಹಿಂದಕ್ಕೆ ಹೊರಟುಹೋದರು.
ಶ್ರೀನಿವಾಸಯ್ಯ ‘ನಾನು ಸ್ವತಂತ್ರ ಭಾರತದ ಪ್ರಜೆ. ಈ ಕೋರ್ಟನ್ನು ರದ್ದು ಮಾಡಿದ್ದೇನೆ. ಈ ನ್ಯಾಯಾಧೀಶರನ್ನೂ ಡಿಸ್‍ಮಿಸ್ ಮಾಡಿದ್ದೇನೆ’ ಎಂದು ಕೂಗಿದರು.
ಪೊಲೀಸಿನವರು ಬಂದು ಶ್ರೀನಿವಾಸಯ್ಯನವರನ್ನೂ ಬಂಧಿಸಿ ಸೆಂಟ್ರಲ್ ಜೈಲಿಗೆ ಕರೆದುಕೊಂಡು ಹೋದರು.
ಆಗ ಶ್ರೀನಿವಾಸಯ್ಯ ನಾವಿದ್ದ ಬ್ಯಾರಕ್ಕಿನಲ್ಲೇ ಇದ್ದರು. ಕೋರ್ಟಿಗೆ ಹೋಗುವ ದಿನ ಅವರು ಮಲಗಿಬಿಡುತ್ತಿದ್ದರು. ಜಪ್ಪಯ್ಯ ಎಂದರೂ ಮೇಲಕ್ಕೆ ಏಳುತ್ತಿರಲಿಲ್ಲ. ಅದು ಅವರ ಪ್ರತಿಭಟನೆಯ ಶೈಲಿ. ಕೊನೆಗೆ ನಾಲ್ಕೈದು ಮಂದಿ ಪೊಲೀಸರೆ ಅವರನ್ನು ಹೆಗಲಮೇಲೆ ಹೊತ್ತುಕೊಂಡು ಕರೆದೊಯ್ಯುತ್ತಿದ್ದರು. ಕೋರ್ಟ್ ಹಾಲನಲ್ಲೂ ಹಾಗೇ ಕೆಳಗೆ ಮಲಗಿಬಿಡುತ್ತಿದ್ದರು. ವಿಚಾರಣೆಗೆಂದು ಅವರನ್ನು ಕಟಕಟೆಗೆ ಎತ್ತಿ ತಂದು ನಿಲ್ಲಿಸಿದರೆ, ಕಟಕಟೆಯಲ್ಲೇ ಮಲಗಿಬಿಡುತ್ತಿದ್ದರು. ನ್ಯಾಯಾಧೀಶ ಕೂಗಿಕೊಂಡರು ಮಿಸುಗಾಡುತ್ತಿರಲಿಲ್ಲ. ನ್ಯಾಯಾಧೀಶರಾಗಲಿ, ವಕೀಲರಾಗಲಿ ಪ್ರಶ್ನೆ ಕೇಳಿದರೆ `I ಜoಟಿ’ಣ ಚಿಟಿsತಿeಡಿ ಥಿou. ನಾನು ಸ್ವತಂತ್ರ ಭಾರತದ ಪ್ರಜೆ. ನೀವು ನನ್ನ ಸ್ವತಂತ್ರ ದೇಶದ ಜಡ್ಜ್ ಅಲ್ಲ’ ಎಂದುಬಿಡುತ್ತಿದ್ದರು. ಶ್ರೀನಿವಾಸಯ್ಯರಿಗೆ ಪಾಠ ಕಲಿಸಬೇಕೆಂದು ಪೊಲೀಸರು ಕೆಂಪಿರುವೆಯ ಹುತ್ತದ ಗೂಡಿನ ಮೇಲೆ ಅವರನ್ನು ಮಲಗಿಸಿಬಿಡುತ್ತಿದ್ದರು. ಆಶ್ಚರ್ಯವೆಂದರೆ, ಆ ವ್ಯಕ್ತಿ ಅಲ್ಲಿಯೂ ಮಿಸುಗಾಡದೆ ಮಲಗಿ ತನ್ನ ಪ್ರತಿಭಟನೆ ಮುಂದುವರೆಸುತ್ತಿದ್ದರು. ಪೊಲೀಸರಿಗೇ ಸಾಕುಸಾಕೆನಿಸಿದ್ದರು. ಕೊನೆಗೆ ಒಂದು ವರ್ಷದ ನಂತರ ಎಲ್ಲಾ ರಾಜಕೀಯ ಕೈದಿಗಳ ಜೊತೆಗೆ ಅವರನ್ನೂ ಬಿಡುಗಡೆ ಮಾಡಲಾಯ್ತು. ನನ್ನನ್ನೂ ಸಹಾ.
ಹೀಗೆ ಸ್ವಾತಂತ್ರ್ಯ ಚಳವಳಿ ಎನ್ನುವುದು ಲಕ್ಷಾಂತರ ತೊರೆಗಳಿಂದ ಧುಮ್ಮಿಕ್ಕಿದ ಜೋರು ಜಲಪಾತ. ಯಾವುದೋ ಕುಗ್ರಾಮದಲ್ಲಿ, ಮತ್ತೆಲ್ಲೋ ಕಗ್ಗಾಡಿನಲ್ಲಿ ಇಂತಹ ಸಾಕಷ್ಟು ತೊರೆಗಳು ತಮ್ಮದೇ ರೀತಿಯಲ್ಲಿ ಆ ಭೋರ್ಗರೆತಕ್ಕೆ ಕಾಣ್ಕೆ ನೀಡಿವೆ. ಅವರೆಲ್ಲರ ತ್ಯಾಗದ ಒಟ್ಟು ಮೊತ್ತವೇ ಇವತ್ತು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...