Homeರಾಜಕೀಯಸೋಲಲು ಸಿದ್ಧವಾಗಿರುವ ಅಪ್ಪ-ಮಗನನ್ನು ಸೋಲಿಸಲು ಎದುರಾಳಿಗಳೇ ಇಲ್ಲ!

ಸೋಲಲು ಸಿದ್ಧವಾಗಿರುವ ಅಪ್ಪ-ಮಗನನ್ನು ಸೋಲಿಸಲು ಎದುರಾಳಿಗಳೇ ಇಲ್ಲ!

- Advertisement -
- Advertisement -

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರ ಮೇಲೆ ವಿನಾಕಾರಣ ಚುನಾವಣೆ ಹೇರಿದ ಯಡಿಯೂರಪ್ಪ ಮತ್ತವರ ಪುತ್ರ ಬಸ್ಟಾಂಡ್ ರಾಘು, ಊರೂರು ಸುತ್ತಿ ಓಟು ಕೇಳುತ್ತಿದ್ದರೆ ಸ್ಪರ್ಧೆಗೆ ಅಭ್ಯರ್ಥಿಗಳೇ ಸಿಗದ ದುಸ್ಥಿತಿಯಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ಗಾಂಪರಗುಂಪು ತಡಬಡಾಯಿಸುತ್ತ ಜನರಿಗೆ ಮನರಂಜನೆ ನೀಡುತ್ತಿದೆ. ಅನಗತ್ಯವಾಗಿ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಮೇಲೆ ಚುನಾವಣಾ ಆಯೋಗ ಚುನಾವಣೆ ಹೇರಿದ್ದರ ಕುರಿತಾಗಿ ಆಗಬೇಕಿದ್ದ ಚರ್ಚೆ ನಡೆಯದೇ ಇರುವುದು ನಾಡಿನ ಪ್ರಜ್ಞಾವಂತ ಸಮೂಹದ ನಿಷ್ಕ್ರಿಯತೆಗೆ ಕನ್ನಡಿಯಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸುಪುತ್ರ ಬಿ.ವೈ.ರಾಘವೇಂದ್ರನನ್ನ ಕಣಕ್ಕಿಳಿಸಿ ಸಾರೆಕೊಪ್ಪ ಬಂಗಾರಪ್ಪ ಶಾಶ್ವತವಾಗಿ ಮೂಲೆಗುಂಪಾಗುವಂತೆ ಮಾಡಿದರು. ಬಂಗಾರಪ್ಪನವರಿಗೆ ಅದೇ ಕೊನೆಯ ಚುನಾವಣೆಯಾಯಿತು ಹಾಗೂ ಅವರ ರಾಜಕಾರಣವೂ ಕೊನೆಗೊಂಡಿತ್ತು. ಅವತ್ತು ಮಗನಿಗೆ ಬಿಜೆಪಿ ಟಿಕೆಟ್ ಕೊಡಲು ಯಡ್ಡಿ ಆಡಿದ ಆಟ ಒಂದೆರೆಡಲ್ಲ. ದೇವರಾಣೆಗೂ ಮಗನಿಗೆ ಟಿಕೆಟ್ ಕೊಡಲ್ಲ ಎಂದಿದ್ದ ಯಡ್ಡಿ ನಂತರ ರಾಘುವನ್ನು ಕಣಕ್ಕಿಳಿಸಿ ನೂರಾರು ಕೋಟಿ ಹಣ ಖರ್ಚು ಮಾಡಿ ಗೆಲ್ಲಿಸಿದ್ದರು. ಇದೀಗ ವಿರೋಧ ಪಕ್ಷದ ನಾಯಕನಾಗಿರುವ ಸಂದರ್ಭದಲ್ಲಿ ಮತ್ತೆ ಮಗನನ್ನು ಕಣಕ್ಕಿಳಿಸಿ ಮತ್ತೆ ಕೋಟಿ ಕೋಟಿ ಹಣ ಖರ್ಚು ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಗ್ಯಾಂಗಿಗೆ ಒಂದೊಂದು ಸೀಟೂ ಮುಖ್ಯವಾಗಿತ್ತು. ಯಡ್ಡಿಯನ್ನು ಕೇಂದ್ರ ಕೃಷಿ ಸಚಿವ ಮಾಡುತ್ತೇವೆ ಎಂಬುದಾಗಿ ರಾಜ್ಯದ ಲಿಂಗಾಯಿತರ ಮೂಗಿಗೆ ತುಪ್ಪ ಸವರಿ ಯಡ್ಡಿಯನ್ನು ಗೆಲ್ಲಿಸಲಾಗಿತ್ತು. 3 ಲಕ್ಷ ಮತಗಳ ಅಂತರದಿಂದ ಪರಮಭ್ರಷ್ಟ ಯಡ್ಡಿ ಮೋದಿ ಅಲೆಯನ್ನೂ ಬಳಸಿಕೊಂಡು ಗೆದ್ದು ಬಂದಿದ್ದಾಗಿತ್ತು. ನಂತರ ಕೇಸುಗಳ ನೆವ ಹೇಳಿ ಯಡ್ಡಿಗೆ ಕೇಂದ್ರ ಸಚಿವ ಸ್ಥಾನವನ್ನು ನೀಡದೆ ಸತಾಯಿಸಲಾಗಿತ್ತು. ಮತ್ತೆ ಮುಖ್ಯಮಂತ್ರಿಯ ಕನಸು ಹೊತ್ತು 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಯಡ್ಡಿಗೆ ಮತ್ತೆ ನಿರಾಶೆಯೇ ಗತಿಯಾಯಿತು. ಇದೆಲ್ಲ ಬೆಳವಣಿಗೆನಂತರ ಇದೀಗ ಅನವಶ್ಯಕ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನ ತಲೆಕೊಡುವಂತಾಗಿದೆ.
ತಮ್ಮ ಐಲುತನ, ಸ್ವಾರ್ಥದಿಂದಾಗಿ ಶಿವಮೊಗ್ಗ ಜನರ ಮೇಲೆ ಚುನಾವಣೆ ಹೇರುವಂತಾಯಿತು ಎಂಬ ಕನಿಷ್ಟ ಪಾಪಪ್ರಜ್ಞೆಯೂ ಇಲ್ಲದೆ ಯಡ್ಡಿ-ರಾಘು ಜೋಡಿ ಶಿವಮೊಗ್ಗದ ಬೀದಿಗಳಲ್ಲಿ ಓಟು ಕೇಳುತ್ತಾ ಹೊರಟಿದೆ. 2019 ಲೋಕಸಭಾ ಚುನಾವಣೆಯಲ್ಲಿ ರಾಘುವಿಗೆ ಟಿಕೇಟ್ ತಪ್ಪಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಈಶ್ವರಪ್ಪ ಮತ್ತೊಂದೆರೆಡು ಹೆಸರುಗಳನ್ನು ತೇಲಿಬಿಟ್ಟು ತಮಾಷೆ ನೋಡುತ್ತಿರುವಾಗಲೇ ಚುನಾವಣೆ ಘೋಷಣೆಯಾಗಿ ರಾಘು ಅಭ್ಯರ್ಥಿಯಾಗುವಂತಾಯಿತು. 6 ತಿಂಗಳ ಅಧಿಕಾರಾವಧಿಗೆ ಸಂಸದರಾಗಲು ಬಿಜೆಪಿಯಲ್ಲೂ ಯಾರೂ ಇಲ್ಲವಾಗಿರುವುದರಿಂದ ಸಂಘ ಪರಿವಾರವೂ ಬೇರೆ ಆಟಕಟ್ಟಲು ಹೋಗಲಿಲ್ಲ. ಇದೀಗ ಈಶ್ವರಪ್ಪ ರಾಘವೇಂದ್ರನನ್ನೂ ಯಾರಿಂದಲೂ ಸೋಲಿಸಲಾಗುವುದಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ.
ರಾಘವೇಂದ್ರನೇ ಗೆಲ್ಲುವ ಅಭ್ಯರ್ಥಿ ಅಂತ ಬಿಜೆಪಿ ಠೇಂಕಾರದಿಂದ ಚುನಾವಣೆಗೆ ಹೊರಟಿದ್ದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್‍ನಲ್ಲಿ ಸ್ಮಶಾನಮೌನ ಮನೆ ಮಾಡಿದೆ. ಎರಡೂ ಪಕ್ಷಗಳಲ್ಲಿ ಸ್ಪರ್ಧೆಗಿಳಿಯಲು ಯಾರೂ ತಯಾರಿಲ.್ಲ ಕೆಲವು ಡಮ್ಮಿ ಹೆಸರುಗಳು ಚಾಲ್ತಿಯಲ್ಲಿ ಇದ್ದಾವಾದರೂ ನಾಮಪತ್ರ ಸಲ್ಲಿಕೆ ಆರಂಭವಾದ ನಂತರವೂ ಮೈತ್ರಿಕೂಟದ ಅಭ್ಯರ್ಥಿಯಾರೆಂಬುದು ಖಚಿತವಾಗಿಲ್ಲ. ಸ್ವಯಂಕೃತಾಪರಾಧದಿಂದಲೇ ಸೋತು ಕುಳಿತಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ್ ಸ್ಪರ್ಧೆಗಿಳಿಯಲು ಆಸಕ್ತಿ ತೋರಿದ್ದರಾದರೂ ಅವರು ಹಿಂದೆ ಸರಿದಿದ್ದಾರೆ. ಕಿಮ್ಮನೆ ರತ್ನಾಕರ್ ಕಣಕ್ಕಿಳಿದಿದ್ದರೆ ಚುನಾವಣೆಗೊಂದು ನೈತಿಕ ಆಯಾಮವಾದರೂ ಸಿಗುತ್ತಿತ್ತು. ಪರಮಭ್ರಷ್ಟ ಅಪ್ಪ ಮಗನನ್ನು ಧಿಕ್ಕರಿಸಲು, ಪ್ರಶ್ನಿಸಲು ಮತದಾರರಿಗೆ ಪ್ರಾಮಾಣಿಕ ಅಭ್ಯರ್ಥಿಯೊಬ್ಬರ ಸಿಕ್ಕಿದಂತಾಗುತ್ತಿತ್ತು. ಅದೂ ಆಗಲಿಲ್ಲ. ಮೊದಲಿಂದಲೂ ಕೇಳಿಬರುತ್ತಿರುವ ಹೆಸರು ಜೆಡಿಎಸ್‍ನ ಮಧುಬಂಗಾರಪ್ಪರದ್ದು. ಚುನಾವಣೆ ಘೋಷಣೆಯಾದದ್ದೇ ತಡ ಅವರು ಕುಟುಂಬ ಸಮೇತ ಯೂರೋಪ ಪ್ರವಾಸ ಹೊರಟುಬಿಟ್ಟರು. ಬೇಳೂರು ಗೋಪಾಲಕೃಷ್ಟ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದಾರಾದರೂ ಅವರನ್ನೂ ಕಾಂಗ್ರೆಸ್‍ಗೆ ಕರೆತಂದಿದ್ದ ಕಾಗೋಡು ತಿಮ್ಮಪ್ಪರೇ ಅಡ್ಡಿಯಾಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ 2019ರ ಲೋಕಸಭಾ ಚುನಾವಣೆ ಎದುರಿಸಲು ತೀರ್ಮಾನ ಮಾಡಿದ್ದಾಗಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧಿಸಬೇಕೆಂಬ ಕುರಿತು ಚರ್ಚೆ ನಡೆದಿತ್ತು. ಇದೀಗ ಸ್ಪರ್ಧಿಸಲು ಪ್ರಬಲ ಅಭ್ಯರ್ಥಿಗಳೆಲ್ಲ ಹಿಂದೆ ಸರಿಯುತ್ತಿರುವುದರಿಂದಾಗಿ ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್ ಬಿಟ್ಟು ಕೊಡಲು ಮಾತುಕತೆ ನಡೆದಿದೆ.
ಸೊರಬದಲ್ಲಿ ಸೋತನಂತರ ಮಧುಬಂಗಾರಪ್ಪ ಜಿಲ್ಲೆಗೂ ಬರುತ್ತಿಲ್ಲ, ಸೊರಬ ಕ್ಷೇತ್ರದಲ್ಲೂ ಕಾಣಿಸಿಕೊಂಡಿಲ್ಲ. ಗೆದ್ದುಮೈತ್ರಿ ಸರ್ಕಾರದಲ್ಲಿ ಸಚಿವರಾಗುವ ಆತುರದಲ್ಲಿದ್ದ ಮಧುಬಂಗಾರಪ್ಪ ಸೋತನಂತರ ಎಂಎಲ್‍ಸಿಯಾಗಲು, ರಾಜಕೀಯ ಕಾರ್ಯದರ್ಶಿಯಂತಹ ಸ್ಥಾನಮಾನ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಗೂಟದ ಕಾರಿನಲ್ಲಿ ಸೊರಬ ಕ್ಷೇತ್ರಕ್ಕೆ ಕಾಲಿಡುತ್ತೇನೆ ಎಂದು ಸೋತ ನಂತರವೂ ಹೇಳಿಕೊಂಡಿದ್ದ ಮಧುಬಂಗಾರಪ್ಪ ಜೆಡಿಎಸ್‍ನ ಅಪ್ಪ-ಮಗನ ವಿರುದ್ದ ಮುನಿಸಿಕೊಂಡಿದ್ದಾರೆ. ಈಗ ಕಾಗೋಡು ತಿಮ್ಮಪ್ಪ ಸಿದ್ದರಾಮಯ್ಯ ಇಬ್ಬರೂ ಸೇರಿ ಮಧುವನ್ನೂ ಜೆಡಿಎಸ್‍ನಿಂದಲಾದರೂ ಸ್ವರ್ಧಿಸು, ಕಾಂಗ್ರೆಸ್‍ನಿಂದಲಾದರೂ ಸ್ಪರ್ಧೆಗೆ ಇಳಿಯುವಂತೆ ಮನವೊಲಿಸುತ್ತಿದ್ದಾರೆ. ಚುನಾವಣೆ ಖರ್ಚಿಗೆ 25ಕೋಟಿ ಕೊಡುವುದಾದರೆ ಸ್ಪರ್ಧಿಸುವುದಾಗಿ ಮಧುಬಂಗಾರಪ್ಪ ಷರತ್ತು ಹಾಕಿದ್ದಾರೆ. ವಿದೇಶಿ ಪ್ರವಾಸ ಮೊಟಕುಗೊಳಿಸಿ ಮಧು ವಾಪಸ್ಸಾದ ನಂತರವಷ್ಟೇ ಅವರ ಸ್ಪರ್ಧೆ ಕುರಿತು ಅಂತಿಮ ತೀರ್ಮಾನ ಪ್ರಕಟವಾಗಲಿದೆ. ಹೀಗಾಗಿ ಮಧು ಸ್ಪರ್ಧೆಗೆ ಒಪ್ಪದಿದ್ದರೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಲಗೋಡು ರತ್ನಾಕರ್‍ರನ್ನೂ ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಟರು ತಯಾರಿ ನಡೆಸಿದ್ದಾರೆ. ಒಟ್ಟಾರೆ ಈಡಿಗ ಸಮುದಾಯಕ್ಕೆ ಟಿಕೆಟ್ ನೀಡುವ ತೀರ್ಮಾನವಾಗಿದೆ.
ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ 6,06,216ಮತ ಪಡೆದು ಗೆದ್ದಿದ್ದರು. ಆಗ ಮೋದಿ ಹವಾ ಜೋರಾಗಿತ್ತು. ಕಾಂಗ್ರೆಸ್‍ನ ಮಂಜುನಾಥ ಭಂಡಾರಿ 2,42,911 ಮತ, ಗೀತಾ ಶಿವರಾಜ್ ಕುಮಾರ್ 2,40,636 ಮತ ಪಡೆದಿದ್ದರು. 2014ರ ಚುನಾವಣೆಯಲ್ಲಿ ಬಂಗಾರಪ್ಪ ಸ್ಪರ್ಧಿಸಿ ಸೋತಾಗ ರಾಘವೇಂದ್ರ ಗೆದ್ದದ್ದು 52 ಸಾವಿರ ಮತಗಳ ಅಂತರದಿಂದ. ಕಾಂಗ್ರೆಸ್‍ನ ಈಡಿಗ ಸಮುದಾಯದ ಓಟ್ ಬ್ಯಾಂಕ್ ಅನ್ನು ಯಡ್ಡಿ ವ್ಯವಸ್ಥಿತವಾಗಿ ಒಡೆದು ಹಾಕಿದ್ದೇ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಕಾರಣವಾಗಿತ್ತು.
ಎಷ್ಟು ಕೋಟಿ ಖರ್ಚಾದರೂ ಸರಿ ಗೆಲ್ಲುತ್ತೇವೆ ಎಂಬ ಠೇಂಕಾರದಲ್ಲಿ ಯಡ್ಡಿ-ರಾಘು ಜೋಡಿ ಹೊರಟಿದೆ. ಚುನಾವಣೆಗೆ ಮೊದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸೋಲೊಪ್ಪಿದೆ. ಆದರೆ ಜಿಲ್ಲೆಯ ಜನ ಮಾತ್ರ ಬಿಜೆಪಿಯನ್ನೇ ಗೆಲ್ಲಿಸುವ ಹಠದಲ್ಲಿ ಇಲ್ಲ. ಆದರೆ ಚುನಾವಣೆಗೆ ಮೊದಲೇ ಸೋಲೋಪ್ಪಿಕೊಳ್ಳುವವರನ್ನು ಯಾರು ತಾನೆ ಬಚಾವು ಮಾಡಲು ಸಾಧ್ಯ. ಇದು ಸದÀ್ಯದ ಶಿವಮೊಗ್ಗ ಲೋಕಸಭಾ ಚುನಾವಣಾ ಚಿತ್ರಣ.

– ಈಶ್ವರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...