Homeಅಂಕಣಗಳುಸ್ವಾತಂತ್ರ್ಯ ಚಳವಳಿ ಜಲಪಾತದ ಹಳ್ಳಿ ತೊರೆಗಳು

ಸ್ವಾತಂತ್ರ್ಯ ಚಳವಳಿ ಜಲಪಾತದ ಹಳ್ಳಿ ತೊರೆಗಳು

- Advertisement -
- Advertisement -

ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡದೊಡ್ಡ ನಾಯಕರು ಪಾಲ್ಗೊಂಡಂತೆಯೇ ಜನಸಾಮಾನ್ಯರೂ ಭಾಗವಹಿಸುತ್ತಿದ್ದರು. ಆ ಪೈಕಿ ಕೆಲ ಸಾಮಾನ್ಯರ ಪಾತ್ರ ಬಹಳ ರೋಚಕವಾಗಿದೆ.
1932ರಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಪ್ರಮುಖ ಹೋರಾಟಗಳು ನಡೆದವು. ಅವುಗಳೆಂದರೆ ಕಾರವಾರದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಜಿಲ್ಲೆಯ ಪೂರ್ತಿ ನಡೆದ ಕರ ನಿರಾಕರಣ ಚಳವಳಿ. ಈ ಎರಡೂ ಹೋರಾಟಗಳು ಗುಜರಾತಿನ ದಂಡಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಮತ್ತು ಕರನಿರಾಕರÀಣ ಚಳವಳಿಯಷ್ಟೇ ಪ್ರಖರವಾಗಿತ್ತು.
ಕರನಿರಾಕರಣ ಚಳುವಳಿಯಲ್ಲಿ ದೊಡ್ಮನೆಯ ನಾಗೇಶರಾಯರ ಪಾತ್ರ ಮಹತ್ವದ್ದು. ನಾಗೇಶರಾಯರು ರಾಮಕೃಷ್ಣ ಹೆಗ್ಡೆಯವರ ದೊಡ್ಡಪ್ಪ. ಅವರ ಅಣ್ಣ ತಮ್ಮಂದಿರು, ಅವರ ಹೆಂಡತಿಯರು, ಮಕ್ಕಳು ಎಲ್ಲರೂ ಸೆರೆಮನೆ ಕಂಡರು. ಅವರ ಮನೆಗೆÉಲಸಕ್ಕೆ ಖಾಯಂ ಆಗಿ ಇದ್ದ ದೇವಿ ಮತ್ತು ಅವಳ ಗಂಡ ಬಹಳ ಪ್ರಾಮಾಣಿಕ ವ್ಯಕ್ತಿಗಳು. ಎಲ್ಲರೂ ಸೆರೆಮನೆಗೆ ಹೋಗುವುದೆಂದು ತೀರ್ಮಾನ ಮಾಡಿದ ಮೇಲೆ ನಾಗೇಶ ಹೆಗ್ಡೆಯವರು ತಮ್ಮ ಮನೆಯಲ್ಲಿದ್ದ ಎಲ್ಲ ಬೆಳ್ಳಿ ಪಾತ್ರೆಗಳನ್ನು, ಚಿನ್ನದ ಒಡವೆಗಳನ್ನು ದೇವಿಯ ಕೈಗೆ ಒಪ್ಪಿಸಿ ಭದ್ರವಾಗಿ ಇರಿಸಿಕೊಂಡು ತಾವೆಲ್ಲ ಸೆರೆಮನೆಯಿಂದ ಬಂದ ಮೇಲೆ ಹಿಂತಿರುಗಿಸಲು ಹೇಳಿ ಅಂದು ಗಂಟುಕಟ್ಟಿ ದೇವಿ ಕೈಗೆ ಕೊಟ್ಟರು. ನಾಗೇಶ ಹೆಗ್ಡೆಯವರ ಮನೆಮುಂದೆ ಇದ್ದ ಒಂದು ಗುಡಿಸಲಲ್ಲಿ ದೇವಿ ದಂಪತಿಗಳು ವಾಸಿಸುತ್ತಿದ್ದರು. ದೇವಿ, ಅವಳ ಗಂಡ ಹೊರಗೆ ಹೋಗಿದ್ದಾಗ ಗುಡಿಸಲಿನಲ್ಲಿ ಒಂದು ಗುಂಡಿತೋಡಿ ಆ ಒಡವೆ ವಸ್ತುಗಳನ್ನೆಲ್ಲ ಅದರಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಚಾಪೆ ಹಾಕಿಕೊಂಡು ಆಕೆ ಮಲಗುತ್ತಿದ್ದಳು. ದೊಡ್ಮನೆಯವರೆಲ್ಲರ ಬಂಧನವಾಯಿತು. ಅವಳು ಒಡವೆಗಳ ಸುರಕ್ಷತೆಗಾಗಿ ಸರ್ಪಗಾವಲು ಕಾದಳು. ಅದರೂ ಅವಳಿಗೆ ಒಂದು ಅಳುಕು ಇತ್ತು. ಗಂಡ ಕುಡುಕ ಅವನ ಕಣ್ಣೇನಾದರೂ ಈ ಒಡವೆಗಳ ಮೇಲೆ ಬಿದ್ದರೆ ಎಲ್ಲಿ ತೆಗೆದುಕೊಂಡು ಹೋಗಿ ಮಾರಿಬಿಡುವನೋ ಎಂಬ ಭಯ. ಅದರಿಂದ ದೇವಿ ಅವನಿಲ್ಲದ ವೇಳೆಯಲ್ಲಿ ಗುಡಿಸಲಿನ ಹೊರಗಿದ್ದ ಅರಣ್ಯದಲ್ಲಿ ಒಂದು ಮರದ ಕೆಳಗೆ ಹಳ್ಳತೋಡಿ ಈ ಒಡವೆಗಳನ್ನು ಅದರಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಹಾಸುಗಲ್ಲು ಇಟ್ಟು ಎಚ್ಚರದಿಂದ ನೋಡಿಕೊಳ್ಳುತ್ತಿದ್ದಳು.
ನಾಗೇಶ ಹೆಗ್ಡೆಯವರ ಮನೆಯವರು ಸೆರೆಮನೆಯಲ್ಲಿ ಒಂದು ವರ್ಷ ಇದ್ದು ಹೋರಬಂದ ಮೇಲೆ ಅವರಿಗೆ ಜೋಪಾನವಾಗಿ ಇರಿಸಿದ್ದ ಒಡವೆ ವಸ್ತುಗಳನ್ನು ಹಿಂದಿರುಗಿಸಿ ದೊಡ್ಮನೆಯವರ ಪ್ರೀತಿ ಆದರಗಳಿಗೆ ಪಾತ್ರಳಾದಳು.
ಅದೇ ಸಮಯದಲ್ಲಿ ಚಳುವಳಿಗೆ ಸಂಬಂಧಪಟ್ಟಂತೆ ಕರಪತ್ರಗಳನ್ನು ಹೊರಡಿಸಲಾಗುತ್ತಿತ್ತು. ಸೈಕ್ಲೋಸ್ಟೈಲ್ ಮಾಡಿ ಕರಪತ್ರಗಳನ್ನು ಸ್ವಯಂಸೇವಕರು ಹಳ್ಳಿಗರ ಮನೆಗಳಿಗೆ ಕಿಟಕಿ ಮೂಲಕ ನಸುಕಿನಲ್ಲಿ ಹಾಕುತ್ತಿದ್ದರು. ಈ ಸೈಕ್ಲೋಸ್ಟೈಲ್ ಮಾಡಿದ ಕರಪತ್ರಗಳನ್ನು ದೊಡ್ಮನೆಯ ನಾಲ್ಕೂ ಕಡೆ ಇರುವ ಸೇತುವೆಗಳ ಕಣ್ಣಲ್ಲಿ ಇಡಲಾಗುತ್ತಿತ್ತು. ಸ್ವಯಂ ಸೇವಕರು ಅದನ್ನು ತೆಗೆದುಕೊಂಡು ಹೋಗಿ ವಿವಿಧ ಗ್ರಾಮಗಳ ಮನೆಗೆ ಹಾಕುತ್ತಿದ್ದರು.
ಕಾಳಿ ಎಂಬುವವಳು ದಿನವೂ ಅರಣ್ಯಕ್ಕೆ ಹೋಗಿ ಸೌದೆ ತಂದು ಮಾರಾಟ ಮಾಡಿ ಹೊಟ್ಟೆ ಹೊರೆಯುತ್ತಿದ್ದಳು. ಕಾಳಿ ಕಾಡಿಗೆ ಹೋಗುವಾಗ ಈ ಸುದ್ದಿ ಪತ್ರಗಳ ಬಂಡಲ್ ತೆಗೆದುಕೊಂಡು ಹೋಗಿ ಸೇತುವೆಯ ಕಣ್ಣಿನಲ್ಲಿ ದಿನಾ ಇಟ್ಟು ಹೋಗುತ್ತಿದ್ದಳು. ಇದು ಅವಳ ದೇಶಸೇವೆ. ಒಂದು ದಿನ ಕಾಳಿ ಈ ಕರಪತ್ರದ ಕಟ್ಟನ್ನು ಸೇತುವೆಯ ಕಣ್ಣಿನಲ್ಲಿ ಇಡುವಾಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಳು. ಈ ಕರಪತ್ರ ಯಾರು ಕೊಟ್ಟರು ಎಲ್ಲಿ ತಯಾರಿಸುತ್ತಾರೆ ಎಂದು ಆಕೆಯನ್ನು ಪೊಲೀಸರು ವಿಚಾರಿಸಿದರು. ಆಕೆ ಬಾಯಿ ಬಿಡಲಿಲ್ಲ. ಆಕೆಯನ್ನು ಹೊಡೆದು ಚಿತ್ರಹಿಂಸೆ ಕೊಟ್ಟರು. ಕಾಳಿ ಮಾತ್ರ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲೇ ಇಲ್ಲ. ಈ ರೀತಿ ಗಾಂಧೀಜಿಯ ಸ್ವಾತಂತ್ರ್ಯ ಹೋರಾಟಕ್ಕೆ ಮುಗ್ಧ ಹೆಣ್ಣುಮಕ್ಕಳು ಸಹಾಯ ಮಾಡಿದ್ದೂ ಉಂಟು.
ಧಾರವಾಡದಲ್ಲಿ 1942ರಲ್ಲಿ ಬಸಮ್ಮ ಎಂಬ ಹೆಣ್ಣುಮಗಳಿದ್ದಳು. ಅವಳ ಗಂಡ ನಿಧನರಾಗಿದ್ದರು. ಆಕೆ ಕಾಂಗ್ರೆಸ್ ನಾಯಕರೊಬ್ಬರ ಮನೆಯ ಹೊರ ಕೋಣೆಯಲ್ಲಿದ್ದುಕೊಂಡು ಅವರಿವರ ಮನೆಯಲ್ಲಿ ಕಸಮುಸುರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಕಾಂಗ್ರೆಸ್‍ನವರು ಪ್ರಭಾತ್‍ಫೇರಿ ನಡೆಸುತ್ತಿದ್ದ ಕಾಲ ಅದು. ಬಸಮ್ಮ ಧ್ವಜ ಹಿಡಿದುಕೊಂಡು ಘೋಷಣೆ ಕೂಗುತ್ತ ಪ್ರಭಾತ್‍ಪೇರಿಯಲ್ಲಿ ಭಾಗವಹಿಸುತ್ತಿದ್ದಳು. ಲಿಂಗಾಯತ ಸಮುದಾಯದ ಸಾಹುಕಾರರೊಬ್ಬರು ಬಸಮ್ಮನಿಗೆ ಹೇಳಿದರು ‘ಬಸಮ್ಮ ನೀನು ಚಳವಳಿಗೆ ಹೋಗ್ತಾ ಇದ್ದೀಯ ನೀನು ಸತ್ತರೆ ನಿನಗೆ ಮಣ್ಣು ಮಾಡುವುದಕ್ಕೆ ಯಾರು ಬರುವುದಿಲ್ಲ. ನಾಯಿ ನರಿ ತಿಂದು ಹೋಗ್ತದೆ ನಿನ್ನ ಹೆಣವನ್ನು’.
`ಸಾವುಕಾರ್ರೇ ನಾನು ಸತ್ತರೆ ನೀವೇನೂ ಚಿಂತೆ ಮಾಡಬ್ಯಾಡ್ರಿ, ನಾಯಿ ನರಿ ತಿಂದು ಹೋಗಲಿ’ ಎಂದು ಮರುತ್ತರ ನೀಡಿದಳು.
ಆಕೆ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ಅವಳ ದಸ್ತಗಿರಿ ಆಯಿತು. ನ್ಯಾಯಾಲಯಕ್ಕೆ ಪೊಲೀಸರು ಕರೆದೊಯ್ದರು, ವಿಚಾರಣೆಯಾಯಿತು. ತಪ್ಪೊಪ್ಪಿಕೊಂಡಳು. ನ್ಯಾಯಾಧೀಶ ಈ ಖಟ್ಲೆಯಲ್ಲಿ ಅಪರಾಧಿಗಳಾಗಿದ್ದ ಗಂಡಸರಿಗೆಲ್ಲ ಆರಾರು ತಿಂಗಳು ಶಿಕ್ಷೆ ವಿಧಿಸಿದರು ಬಸಮ್ಮನಿಗೆ ಹೇಳಿದರು:- ‘ನೀನು ಹೆಂಗಸು ಎಂದು 3 ತಿಂಗಳ ಶಿಕ್ಷೆ ವಿಧಿಸಿದ್ದೇನೆ’. ಬಸಮ್ಮ ‘ಸಾಹೇಬ್ರೆ ನಿಮ್ಮ ದಯೆ ದಾಕ್ಷಿಣ್ಯ ಏನೂ ಬೇಡ ಗಂಡಸರಿಗೆ ಕೊಟ್ಟ ಹಾಗೇ ನನಗೂ 6 ತಿಂಗಳು ಶಿಕ್ಷೆ ಕೊಡಿ’ ಎಂದಳು!
ಶ್ರೀನಿವಾಸಯ್ಯ ಎಂಬ ಒಬ್ಬ ಪದವೀಧರರಿದ್ದರು. ನಂಜನಗೂಡಿನಲ್ಲಿ ಅವರು 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಒಂದು ದಿನ ಬೆಂಗಳೂರಿಗೆ ಬಂದು ಜಿಲ್ಲಾ ನ್ಯಾಯಾಧೀಶರ ಕೋರ್ಟ್ ಪ್ರವೇಶ ಮಾಡಿದರು. ಕಕ್ಷಿದಾರರೂ ವಕೀಲರು ಕಿಕ್ಕಿರಿದು ನೆರೆದಿದ್ದರು. ನ್ಯಾಯಾಧೀಶರು ಇನ್ನೂ ತಮ್ಮ ಪೀಠಕ್ಕೆ ಬಂದಿರಲಿಲ್ಲ.
ಶ್ರೀನಿವಾಸಯ್ಯ ನೇರವಾಗಿ ಹೋಗಿ ಜಿಲ್ಲಾಧಿಕಾರಿಗಳ ಕುರ್ಚಿಯಲ್ಲಿ ಕುಳಿತುಬಿಟ್ಟರು. ನ್ಯಾಯಾಧೀಶರು ಬಂದವರು ಶ್ರೀನಿವಾಸಯ್ಯನವರು ತಮ್ಮ ಆಸನದಲ್ಲಿ ಕುಳಿತಿರುವುದನ್ನು ನೋಡಿ ಹಿಂದಕ್ಕೆ ಹೊರಟುಹೋದರು.
ಶ್ರೀನಿವಾಸಯ್ಯ ‘ನಾನು ಸ್ವತಂತ್ರ ಭಾರತದ ಪ್ರಜೆ. ಈ ಕೋರ್ಟನ್ನು ರದ್ದು ಮಾಡಿದ್ದೇನೆ. ಈ ನ್ಯಾಯಾಧೀಶರನ್ನೂ ಡಿಸ್‍ಮಿಸ್ ಮಾಡಿದ್ದೇನೆ’ ಎಂದು ಕೂಗಿದರು.
ಪೊಲೀಸಿನವರು ಬಂದು ಶ್ರೀನಿವಾಸಯ್ಯನವರನ್ನೂ ಬಂಧಿಸಿ ಸೆಂಟ್ರಲ್ ಜೈಲಿಗೆ ಕರೆದುಕೊಂಡು ಹೋದರು.
ಆಗ ಶ್ರೀನಿವಾಸಯ್ಯ ನಾವಿದ್ದ ಬ್ಯಾರಕ್ಕಿನಲ್ಲೇ ಇದ್ದರು. ಕೋರ್ಟಿಗೆ ಹೋಗುವ ದಿನ ಅವರು ಮಲಗಿಬಿಡುತ್ತಿದ್ದರು. ಜಪ್ಪಯ್ಯ ಎಂದರೂ ಮೇಲಕ್ಕೆ ಏಳುತ್ತಿರಲಿಲ್ಲ. ಅದು ಅವರ ಪ್ರತಿಭಟನೆಯ ಶೈಲಿ. ಕೊನೆಗೆ ನಾಲ್ಕೈದು ಮಂದಿ ಪೊಲೀಸರೆ ಅವರನ್ನು ಹೆಗಲಮೇಲೆ ಹೊತ್ತುಕೊಂಡು ಕರೆದೊಯ್ಯುತ್ತಿದ್ದರು. ಕೋರ್ಟ್ ಹಾಲನಲ್ಲೂ ಹಾಗೇ ಕೆಳಗೆ ಮಲಗಿಬಿಡುತ್ತಿದ್ದರು. ವಿಚಾರಣೆಗೆಂದು ಅವರನ್ನು ಕಟಕಟೆಗೆ ಎತ್ತಿ ತಂದು ನಿಲ್ಲಿಸಿದರೆ, ಕಟಕಟೆಯಲ್ಲೇ ಮಲಗಿಬಿಡುತ್ತಿದ್ದರು. ನ್ಯಾಯಾಧೀಶ ಕೂಗಿಕೊಂಡರು ಮಿಸುಗಾಡುತ್ತಿರಲಿಲ್ಲ. ನ್ಯಾಯಾಧೀಶರಾಗಲಿ, ವಕೀಲರಾಗಲಿ ಪ್ರಶ್ನೆ ಕೇಳಿದರೆ `I ಜoಟಿ’ಣ ಚಿಟಿsತಿeಡಿ ಥಿou. ನಾನು ಸ್ವತಂತ್ರ ಭಾರತದ ಪ್ರಜೆ. ನೀವು ನನ್ನ ಸ್ವತಂತ್ರ ದೇಶದ ಜಡ್ಜ್ ಅಲ್ಲ’ ಎಂದುಬಿಡುತ್ತಿದ್ದರು. ಶ್ರೀನಿವಾಸಯ್ಯರಿಗೆ ಪಾಠ ಕಲಿಸಬೇಕೆಂದು ಪೊಲೀಸರು ಕೆಂಪಿರುವೆಯ ಹುತ್ತದ ಗೂಡಿನ ಮೇಲೆ ಅವರನ್ನು ಮಲಗಿಸಿಬಿಡುತ್ತಿದ್ದರು. ಆಶ್ಚರ್ಯವೆಂದರೆ, ಆ ವ್ಯಕ್ತಿ ಅಲ್ಲಿಯೂ ಮಿಸುಗಾಡದೆ ಮಲಗಿ ತನ್ನ ಪ್ರತಿಭಟನೆ ಮುಂದುವರೆಸುತ್ತಿದ್ದರು. ಪೊಲೀಸರಿಗೇ ಸಾಕುಸಾಕೆನಿಸಿದ್ದರು. ಕೊನೆಗೆ ಒಂದು ವರ್ಷದ ನಂತರ ಎಲ್ಲಾ ರಾಜಕೀಯ ಕೈದಿಗಳ ಜೊತೆಗೆ ಅವರನ್ನೂ ಬಿಡುಗಡೆ ಮಾಡಲಾಯ್ತು. ನನ್ನನ್ನೂ ಸಹಾ.
ಹೀಗೆ ಸ್ವಾತಂತ್ರ್ಯ ಚಳವಳಿ ಎನ್ನುವುದು ಲಕ್ಷಾಂತರ ತೊರೆಗಳಿಂದ ಧುಮ್ಮಿಕ್ಕಿದ ಜೋರು ಜಲಪಾತ. ಯಾವುದೋ ಕುಗ್ರಾಮದಲ್ಲಿ, ಮತ್ತೆಲ್ಲೋ ಕಗ್ಗಾಡಿನಲ್ಲಿ ಇಂತಹ ಸಾಕಷ್ಟು ತೊರೆಗಳು ತಮ್ಮದೇ ರೀತಿಯಲ್ಲಿ ಆ ಭೋರ್ಗರೆತಕ್ಕೆ ಕಾಣ್ಕೆ ನೀಡಿವೆ. ಅವರೆಲ್ಲರ ತ್ಯಾಗದ ಒಟ್ಟು ಮೊತ್ತವೇ ಇವತ್ತು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...