Homeಅಂಕಣಗಳುನನ್ನ ಪ್ರೀತಿಯ ಬಡ ಬಂಧುವೇ. ಹೌದು.. ನಿನಗೂ ಉದ್ಯೋಗ ಸಿಗಬೇಕು

ನನ್ನ ಪ್ರೀತಿಯ ಬಡ ಬಂಧುವೇ. ಹೌದು.. ನಿನಗೂ ಉದ್ಯೋಗ ಸಿಗಬೇಕು

- Advertisement -
- Advertisement -

ಯೋಗೇಂದ್ರ ಯಾದವ್

ಅನುವಾದ: ರಾಜಶೇಖರ ಅಕ್ಕಿ|

‘ತಡವಾದರೆ ಏನಾಯ್ತು, ಅಂತೂ ಹೋಗ್ತಾ ಹೋಗ್ತಾ ಮೋದಿಯವರು ಒಂದು ಸರ್ಜಿಕಲ್ ಸ್ಟ್ರೈಕ್ ಮಾಡೇಬಿಟ್ರು’. ಒಬ್ಬ ನಿರುದ್ಯೋಗ ಯುವಕ ದಿನಪತ್ರಿಕೆಯ ಸುದ್ದಿ ಓದಿ ಪ್ರತಿಕ್ರಿಯೆ ನೀಡಿದ್ದು ಹೀಗೆ. ಮುಖಪುಟದಲ್ಲಿ ಬಡವರಿಗೆ 10% ಮೀಸಲಾತಿಯ ಘೋಷಣೆಯ ಸುದ್ದಿಯಿತ್ತು ಹಾಗೂ ಅದನ್ನು ಒಂದು ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯಲಾಗಿತ್ತು. ನನಗೆ ತಡೆಯಲಾಗಲಿಲ್ಲ, “ಅಣ್ಣಾ, ಇದು ಸರ್ಜಿಕಲ್ ಸ್ಟ್ರೈಕ್ ಅಲ್ಲ, ಒಂದು ಖಾಲಿ ಗುಂಡನ್ನು ಹಾರಿಸಿದ್ದಾರಷ್ಟೆ, ಕೇವಲ ತಡವಾಗಿ ಹಾರಿಸಿದ್ದಷ್ಟೇ ಅಲ್ಲ, ಗುರಿಯೂ ತಪ್ಪಿದೆ. ಇದನ್ನು ಅನುಷ್ಠಾನ ಮಾಡಲಾಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು ಹಾಗೂ ಅನುಷ್ಠಾನ ಗೊಳಿಸಿದರೂ ಒಬ್ಬನೇ ಒಬ್ಬ ಸವರ್ಣೀಯ ಬಡವನಿಗೆ ಇದರಿಂದ ನೌಕರಿ ಸಿಗೂದಿಲ್ಲ”.
ನನ್ನ ಮಾತು ಕೇಳಿ ಅವನು ಚಕಿತನಾದ, ‘ಅಂಕಲ್ ಅವೆಲ್ಲಾ ಮಾತುಗಳು ಆಮೇಲೆ, ಸವರ್ಣೀಯರಲ್ಲೂ ಬಡವರು ಇದಾರೋ ಇಲ್ಲೋ ಅದನ್ನು ಮೊದಲು ಹೇಳಿ, ಅಥವಾ, ಶಿಕ್ಷಣದಲ್ಲಿ ಮತ್ತು ಉದ್ಯೋಗಗಳಲ್ಲಿ ಎಲ್ಲಾ ಅವಕಾಶಗಳು ಬರೀ ಎಸ್.ಸಿ., ಎಸ್.ಟಿ. ಮತ್ತು ಒ.ಬಿ.ಸಿ. ಗಳಿಗೆ ಮಾತ್ರ ಇರಬೇಕೆ?’
ಆಗ ನನ್ನ ಸರದಿ: ‘ಕೂಸೆ, ದೇಶದ ಅಧಿಕಾಂಶ ಸವರ್ಣೀಯ ಜಾತಿಯ ಅಧಿಕಾಂಶ ಕುಟುಂಬಗಳು ಬಡತನದಲ್ಲಿ ಇವೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ದಿಲ್ಲಿಯಲ್ಲಿ ರಿಕ್ಷಾ ಓಡಿಸಲು ಇತರೆ ದೈಹಿಕ ಕೆಲಸ ಮಾಡಲು ಬಿಹಾರದಿಂದ ಬರುವ ಜನರಲ್ಲಿ ಹೆಚ್ಚಿನವರು ಸವರ್ಣೀಯರೇ ಆಗಿರುತ್ತಾರೆ, ಅವರಿಗೆ ತಮ್ಮ ಊರುಗಳಲ್ಲಿ ಸಣ್ಣ ಕೆಲಸಗಳನ್ನು ಮಾಡಲು ಆಗುವುದಿಲ್ಲ. ದೇಶದೆಲ್ಲೆಡೆ ನಿರುದ್ಯೋಗದ ಸಮಸ್ಯೆಯಿದೆ, ಸವರ್ಣೀಯರಿಗೂ ನಿರುದ್ಯೋಗದ ಸಮಸ್ಯೆಯಿದೆ. ಇದಕ್ಕೆ ಮೀಸಲಾತಿ ಬೇಕೋ ಬೇಡವೋ ಎನ್ನುವ ಚರ್ಚೆ ಆಮೇಲೆ ಮಾಡುವ. ಆದರೆ, ಅವರಿಗೆ ಕೆಲಸ ಬೇಕು, ಉದ್ಯೋಗ ಬೇಕು, ನೌಕರಿ ಬೇಕು ಹಾಗೂ ಅವೆಲ್ಲಾ ಈಗಲೇ ಬೇಕಿದೆ. ಹಾಗಾಗಿ ಸರಕಾರ ಅವರಿಗಾಗಿ ಏನು ಮಾಡಿದರೂ ಅದನ್ನು ಸ್ವಾಗತಿಸಬೇಕು”.
ಅವನಿಗೆ ಧೈರ್ಯ ಬಂತು, “ಹಂಗಾದರೆ ನೀವು ಸರಕಾರದ ಘೋಷಣೆಯನ್ನು ಸ್ವಾಗತಿಸಬೇಕು. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮೇಲ್ಜಾತಿಯ ಬಡವರ ನೆನಪಾದರೂ ಆಗಿದೆ”. ಆಗ ನಾನು ಅವನಿಗೆ ನೆನಪಿಸಿದ್ದು, ಈ ಘೋಷಣೆ ಕೇವಲ ಸವರ್ಣೀಯರಿಗೆ ಮಾತ್ರ ಇಲ್ಲ, ಮೀಸಲಾತಿಯ ಅಡಿಯಲ್ಲಿ ಬರದ ಮುಸಲ್ಮಾನರ, ಕ್ರೈಸ್ತರು ಹಾಗೂ ಸಿಕ್ಖರ ಮತ್ತು ಇತರ ಸಾಮಾನ್ಯ ವರ್ಗದ ಎಲ್ಲಾ ಬಡವರು ಇದರ ಅಡಿಯಲ್ಲಿ ಬರುತ್ತಾರೆ. ಹಾಗೂ ಇದೇನು ಮೊದಲನೇ ಸಲ ಆಗಿಲ್ಲ. ಇಂದಿಗೆ 27 ವರ್ಷಗಳ ಹಿಂದೆ 1991 ಸೆಪ್ಟೆಂಬರ್‍ನಲ್ಲಿ ನರಸಿಂಹರಾವ್ ಅವರ ಕಾಂಗ್ರೆಸ್ ಸರಕಾರವೂ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ 10% ಮೀಸಲಾತಿ ನೀಡಬೇಕೆಂದು ಆದೇಶ ಜಾರಿ ಮಾಡಿತ್ತು. ಆ ಆದೇಶವೂ ಈ ಆದೇಶಕ್ಕಾಗುವ ಗತಿಯನ್ನೇ ಕಂಡಿತ್ತು.
ಆ ಸರಕಾರಿ ಆದೇಶದ ವಿರುದ್ಧ ಸುಪ್ರೀಮ್ ಕೋರ್ಟಿನಲ್ಲಿ ಸವಾಲೊಡ್ಡಲಾಗಿತ್ತು. 1992ರಲ್ಲಿ ತನ್ನ ಐತಿಹಾಸಿಕ ತೀರ್ಪೊಂದರಲ್ಲಿ ಸುಪ್ರೀಮ್ ಕೋರ್ಟಿನ 9 ಜಡ್ಜುಗಳ ಸಂವಿಧಾನಿಕ ಬೆಂಚು, ಸಾಮಾನ್ಯ್ಯ ವರ್ಗಗಳಲ್ಲಿರುವ ಬಡವರಿಗಾಗಿ ಮಾಡಿರುವ ಈ ಮೀಸಲಾತಿಯನ್ನು ಎರಡು ಅಂಶಗಳ ಆಧಾರದ ಮೇಲೆ ಅಸಂವಿಧಾನಾತ್ಮಕ ಮತ್ತು ಕಾನೂನುವಿರೋಧಿ ಎಂದು ಘೋಷಿಸಿತ್ತು. ಮೊದಲ ಕಾರಣ, ನಮ್ಮ ಸಂವಿಧಾನದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಮೀಸಲಾತಿಯ ವ್ಯವಸ್ಥೆ ಇದೆ. ಕೇವಲ ಆರ್ಥಿಕ ಆಧಾರದ ಮೇಲೆ ಮೀಸಲಾತಿಯನ್ನು ಕಲ್ಪಿಸುವುದು ನಮ್ಮ ಸಂವಿಧಾನದ ಆಶಯ ಹಾಗೂ ಮೀಸಲಾತಿಯ ಭಾವನೆಗಳ ವಿರುದ್ಧವಾಗಿದೆ. ಎರಡನೆಯದಾಗಿ, ಆರ್ಥಿಕ ಆಧಾರದಲ್ಲಿ 10% ಮೀಸಲಾತಿ ನೀಡುವುದರಿಂದ ಒಟ್ಟು ಮೀಸಲಾತಿ 59% ಆಗುವುದು, ಹಾಗೂ ಇದು ಸುಪ್ರೀಮ್ ಕೋರ್ಟು ನಿರ್ಧರಿಸಿರುವ 50%ನ ಗಡಿಗಿಂತ ಹೆಚ್ಚಾಗಿದೆ. ಆಗ ಯಾವ ಆಕ್ಷೇಪಣೆಗಳಿದ್ದವೋ, ಅವೆಲ್ಲವು ಈಗಲೂ ಇವೆ.
“ಆದರೆ ಈ ಬಾರಿ ಸರಕಾರವು ಸಂವಿಧಾನದಲ್ಲಿ ತಿದ್ದುಪಡಿ ಮಾಡಲಿದೆ. ಆಗ ಸುಪ್ರೀಮ್ ಕೋರ್ಟು ಒಪ್ಪಲೇಬೇಕು” ಅವನು ಆಸೆ ವ್ಯಕ್ತಪಡಿಸಿದ. ಸಂವಿಧಾನದ ತಿದ್ದುಪಡಿ ತುಂಬಾ ಕ್ಲಿಷ್ಟ ಮತ್ತು ಉದ್ದದ ಪ್ರಕ್ರಿಯೆ ಎಂದು ನಾನು ತಿಳಿಸಿ ಹೇಳಿದೆ. ಮೊದಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವಿರಬೇಕು, ನಂತರ ರಾಜ್ಯಗಳ ವಿಧಾನಸಭೆಯಲ್ಲಿ ಪಾಸ್ ಆಗಬೇಕು. ಹಾಗೂ ತಿದ್ದುಪಡಿ ಆದ ನಂತರವೂ ಸುಪ್ರೀಮ್ ಕೋರ್ಟು ಅದನ್ನು ತಿರಸ್ಕರಿಸುವ ಅಧಿಕಾರ ಹೊಂದಿದೆ. ಬಹುಶಃ ತಿರಸ್ಕರಿಸುತ್ತೆ.
ಆದರೆ ಅಸಲಿ ಸಮಸ್ಯೆ ಇದಲ್ಲ. ತಿದ್ದುಪಡಿ ಆಯ್ತು ಅಂದುಕೊಳ್ಳುವ, ಸುಪ್ರೀಮ್ ಕೋರ್ಟು ಕೂಡ ಅದನ್ನು ಸ್ವೀಕರಿಸಿತು ಅಂದುಕೊಳ್ಳುವ, ಹಾಗಾದರೂ ಸಾಮಾನ್ಯ್ಯ ವರ್ಗಗಳ ನಿಜವಾಗಿಯೂ ಬಡವರಾಗಿರುವವರಿಗೆ ಈ ಮೀಸಲಾತಿಯ ಲಾಭ ಸಿಗುವುದಿಲ್ಲ. ಈ ಮೀಸಲಾತಿಗಾಗಿ ಸರಕಾರವು ನೀಡಿದ ಬಡವನ ಪರಿಭಾಷೆ ವಿಚಿತ್ರವಾಗಿದೆ. ಯಾರು ಆದಾಯ ತೆರಿಗೆಯಲ್ಲಿ 8 ಲಕ್ಷದವರೆಗೆ ತಮ್ಮ ಆದಾಯವನ್ನು ತೋರಿಸುತ್ತಾರೋ ಅಥವಾ ಯಾರ ಹೆಸರಿಗೆ 5 ಎಕರೆವರೆಗೆ ಜಮೀನಿದೆಯೋ ಅಥವಾ ದೊಡ್ಡ ಮನೆಯಿಲ್ಲದ ಎಲ್ಲರನ್ನು ಬಡವರೆಂದು ಪರಿಗಣಿಸಲಾಗುವುದು. ಅಂದರೆ, ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುವವರನ್ನು ಅಥವಾ ಅತಿದೊಡ್ಡ ರೈತರು ಹಾಗೂ ವ್ಯಾಪಾರಿಗಳನ್ನು ಹೊರತುಪಡಿಸಿ ಸಾಮಾನ್ಯ್ಯ ವರ್ಗದ ಬಹುತೇಕ ಎಲ್ಲರೂ ಈ ಮೀಸಲಾತಿಯ ಹಕ್ಕುದಾರರಾಗಿರುತ್ತಾರೆ. ಒಬ್ಬ ಕಾರ್ಮಿಕ ಅಥವಾ ರಿಕ್ಷಾ ಓಡಿಸುವವನ ಮಕ್ಕಳಿಗೆ ಒಬ್ಬ ವಕೀಲ ಮತ್ತು ಅಧ್ಯಾಪಕನ ಮಕ್ಕಳೊಂದಿಗೆ ಈ 10% ಮೀಸಲಾತಿಗಾಗಿ ಸ್ಪರ್ಧೆ ಮಾಡಬೇಕಾಗುತ್ತದೆ. ಒಂದು ವೇಳೆ ಇವರು ಬಡವರಾಗಿದ್ದರೂ ಸಾಮಾನ್ಯ ವರ್ಗದವರಿಗೆ 51% ಸೀಟುಗಳು ಇವರಿಗೆ ತೆರೆದಿವೆ. ಇದರಲ್ಲಿ ಒಂದು ದೊಡ್ಡ ಭಾಗ ಈ ‘ಬಡ ಸಾಮಾನ್ಯ ವರ್ಗ’ದವರಿಗೇ ಸಿಗುತ್ತಿದೆ. ಯಾರಿಗೆ ಮೀಸಲಾತಿಯಿಲ್ಲದೇ ಇಂದೂ ಕೂಡ 20 ಅಥವಾ 30% ಉದ್ಯೋಗಗಳು ಸಿಗುತ್ತಿರುವಾಗ ಅವರಿಗೆ 10% ಮೀಸಲಾತಿ ನೀಡುವುದರಿಂದ ಏನು ಸಿಗುವುದು? ಪೇಪರ್ ಮೇಲಷ್ಟೇ ಈ ಮೀಸಲಾತಿ ಇರುತ್ತದೆ ಹಾಗೂ ಒಬ್ಬ ವ್ಯಕ್ತಿಗೂ ನೌಕರಿ ನೀಡುವ ಅವಶ್ಯಕತೆ ಇರುವುದಿಲ್ಲ.
ಆಗ ಅವನ ಮುಖದ ಮೇಲೆ ನಿರಾಸೆ ಮೂಡಿತು. “ಇವೆಲ್ಲಾ ಸರಕಾರಕ್ಕೂ ಗೊತ್ತೇ ಇರಬೇಕಲ್ವಾ? ಹಾಗಾದರೆ ಸರಕಾರ ಈ ಘೋಷಣೆ ಏಕೆ ಮಾಡುತ್ತಿದೆ?” ಉತ್ತರ ಅವನಿಗೂ ಚೆನ್ನಾಗಿ ಗೊತ್ತಿತ್ತು, ನನಗೂ ಗೊತ್ತಿತ್ತು. 5 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಸರಕಾರವು ಜಾಟರ ಮೀಸಲಾತಿಯ ವಿಷಯದಲ್ಲಿ ಯಾವ ಆಟ ಆಡಿತ್ತೋ ಅದೇ ಕಸರತ್ತನ್ನು ಇಂದು ಮೋದಿ ಸರಕಾರ ಮಾಡುತ್ತಿದೆ. ಆಗ ಅವರಿಗೆ ಗೊತ್ತಿತ್ತು, ಕಾನೂನುರೀತ್ಯ ಜಾಟರಿಗೆ ಮೀಸಲಾತಿ ನೀಡುವುದು ಅಸಾಧ್ಯ ಎಂದು. ಆದರೂ ಚುನಾವಣೆಗೆ ಕೆಲ ತಿಂಗಳು ಇರುವಾಗ ಮೀಸಲಾತಿಯ ಘೋಷಣೆ ಮಾಡಿತ್ತು. ಬಿಜೆಪಿ ಆಗ ಅದನ್ನು ಸಮರ್ಥಿಸಿತ್ತು. ಸುಪ್ರೀಮ್ ಕೋರ್ಟು ಇದನ್ನು ತಿರಸ್ಕರಿಸುತ್ತೆ ಎಂದು ಇಬ್ಬರಿಗೂ ಚೆನ್ನಾಗಿ ಗೊತ್ತಿತ್ತು ಆದರೆ ಅದನ್ನು ಚುನಾವಣೆಗಳ ನಂತರ ನೋಡುವ ಎನ್ನುವ ಲೆಕ್ಕಾಚಾರ ಅವರದಾಗಿತ್ತು. ಆದೇ ಆಯಿತು ಕೂಡ. ಚುನಾವಣೆಗಳ ನಂತರ ಸುಪ್ರೀಮ್ ಕೋರ್ಟು ಜಾಟ್ ಮೀಸಲಾತಿಯನ್ನು ತಿರಸ್ಕರಿಸಿತು ಹಾಗೂ ಜನತೆ ಕಾಂಗ್ರೆಸ್ ಅನ್ನು ತಿರಸ್ಕರಿಸಿತು. ಈ ಸಲ ಕೂಡ ಅದೇ ಆಟ ಆಡಲಾಗುತ್ತಿದೆ. ಬಿಜೆಪಿಗೆ ಚುನಾವಣೆಗಳಲ್ಲಿ ಸೋಲು ನಿಚ್ಚಳವಾಗಿ ಕಾಣುತ್ತಿದೆ. ಈಗ ಗೊತ್ತೂಗೊತ್ತಿದ್ದೂ ಇಂತಹ ಪ್ರಸ್ತಾವನೆಗಳನ್ನು ತರುತ್ತಿದೆ, ಇದರಿಂದ ಯಾರಿಗೂ ಏನೂ ಸಿಗುವುದಿಲ್ಲ. ಆದರೆ ಚುನಾವಣೆಯ ಸಮಯದಲ್ಲಿ ಜನತೆಯ ಲಕ್ಷ ಬೇರೆಡೆಗೆ ಹೊಗುತ್ತೆ. ಇದನ್ನು ವಿರೋಧಿಸಿ ಕೆಟ್ಟವರ್ಯಾಕೆ ಆಗಬೇಕೆಂದು ಕಾಂಗ್ರೆಸ್ ಕೂಡ ಆಟವಾಡುತ್ತಿದೆ, ಹಾಗಾಗಿ ಇದರ ಸಮರ್ಥನೆ ಮಾಡುತ್ತಿದೆ.
“ಹಂಗಾದ್ರೆ ಸರಕಾರ ನಮಗೆ ಕೇವಲ ಲಾಲಿಪಾಪ್ ಕೊಡ್ತಾ ಇದೆಯಾ?” ‘ಇಲ್ಲ’ ಎಂದು ನಾನು ಹೇಳಿದೆ. ಸರಕಾರ ಲಾಲಿಪಾಪ್ ಕೂಡ ಕೊಡ್ತಿಲ್ಲ, ಅದು ನಮ್ಮದೇ ಜೇಬಿನಲ್ಲಿಯ ಎರಡು ಲಾಲಿಪಾಪ್‍ಗಳಲ್ಲಿಯ ಒಂದನ್ನು ತೆಗೆದು ನಮ್ಮ ಕೈಯಲ್ಲಿ ಇಡ್ತಾ ಇದೆ ಹಾಗೂ ಈಗ ಎಲ್ರೂ ಚಪ್ಪಾಳೆ ತಟ್ಟಿ ಎನ್ನುತ್ತಿದೆ.
“ಹಂಗಾದ್ರೆ ಏನ್ ಮಾಡಬೇಕು ಅಂಕಲ್?” ಈಗ ಅವನ ನಿರಾಸೆ ದುಃಖದಲ್ಲಿ ಪರಿವರ್ತನೆಯಾಗಿತ್ತು. ನಾನು ಮಾತನ್ನು ಮುಕ್ತಾಯಗೊಳಿಸುತ್ತ, “ಸಮಸ್ಯೆ ಮೀಸಲಾತಿಯದ್ದಲ್ಲ, ನಿರುದ್ಯೋಗದ್ದು. ಉದ್ಯೋಗಗಳೇ ಇಲ್ಲದಿದ್ದಾಗ ಮೀಸಲಾತಿ ನೀಡಿದರೆಷ್ಟು, ಬಿಟ್ಟರೆಷ್ಟು, ಯಾವ ವ್ಯತ್ಯಾಸ ಆಗೋದಿದೆ? ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದೇ ನಿಜವಾದ ಪರಿಹಾರ. ಇಂದು ಕೇಂದ್ರ ಸರಕಾರದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ರಾಜ್ಯ ಸರಕಾರಗಳಲ್ಲಿ 20 ಲಕ್ಷ ಖಾಲಿ ಇವೆ. ದುಡ್ಡು ಉಳಿಸುವ ಭರದಲ್ಲಿ ಸರಕಾರವು ಈ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಖಾಸಗೀ ಕ್ಷೇತ್ರದಲ್ಲಿ ಉದ್ಯೋಗಗಳು ಕಡಿಮೆಯಾಗಿವೆ, ಕಳೆದ ವರ್ಷದಲ್ಲಿ ಒಂದು ಕೋಟಿಗೂ ಹೆಚ್ಚು ಉದ್ಯೋಗಗಳು ಕಡಿಮೆಯಾಗಿವೆ. ಬಿಜೆಪಿ ಒಂದು ವೇಳೆ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಗಂಭೀರವಾಗಿದ್ದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಆದೇಶ ಏಕೆ ಹೊರಡಿಸುತ್ತಿಲ್ಲ? ಕಾಂಗ್ರೆಸ್ ಗಂಭೀರವಾಗಿದ್ದಲ್ಲಿ ತನ್ನ ರಾಜ್ಯಗಳಲ್ಲಿ ಉದ್ಯೋಗ ಏಕೆ ನೀಡುತ್ತಿಲ್ಲ?”
ಇಬ್ಬರ ಬಾಯಿಂದ ಏಕಕಾಲಕ್ಕೆ ಹೊರಬಿದ್ದದ್ದು “ಅಂದರೆ, ಜುಮ್ಲಾ ಬೇಡ, ಜಾಬ್ ಬೇಕು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...