Homeಅಂಕಣಗಳುನನ್ನ ಪ್ರೀತಿಯ ಬಡ ಬಂಧುವೇ. ಹೌದು.. ನಿನಗೂ ಉದ್ಯೋಗ ಸಿಗಬೇಕು

ನನ್ನ ಪ್ರೀತಿಯ ಬಡ ಬಂಧುವೇ. ಹೌದು.. ನಿನಗೂ ಉದ್ಯೋಗ ಸಿಗಬೇಕು

- Advertisement -
- Advertisement -

ಯೋಗೇಂದ್ರ ಯಾದವ್

ಅನುವಾದ: ರಾಜಶೇಖರ ಅಕ್ಕಿ|

‘ತಡವಾದರೆ ಏನಾಯ್ತು, ಅಂತೂ ಹೋಗ್ತಾ ಹೋಗ್ತಾ ಮೋದಿಯವರು ಒಂದು ಸರ್ಜಿಕಲ್ ಸ್ಟ್ರೈಕ್ ಮಾಡೇಬಿಟ್ರು’. ಒಬ್ಬ ನಿರುದ್ಯೋಗ ಯುವಕ ದಿನಪತ್ರಿಕೆಯ ಸುದ್ದಿ ಓದಿ ಪ್ರತಿಕ್ರಿಯೆ ನೀಡಿದ್ದು ಹೀಗೆ. ಮುಖಪುಟದಲ್ಲಿ ಬಡವರಿಗೆ 10% ಮೀಸಲಾತಿಯ ಘೋಷಣೆಯ ಸುದ್ದಿಯಿತ್ತು ಹಾಗೂ ಅದನ್ನು ಒಂದು ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯಲಾಗಿತ್ತು. ನನಗೆ ತಡೆಯಲಾಗಲಿಲ್ಲ, “ಅಣ್ಣಾ, ಇದು ಸರ್ಜಿಕಲ್ ಸ್ಟ್ರೈಕ್ ಅಲ್ಲ, ಒಂದು ಖಾಲಿ ಗುಂಡನ್ನು ಹಾರಿಸಿದ್ದಾರಷ್ಟೆ, ಕೇವಲ ತಡವಾಗಿ ಹಾರಿಸಿದ್ದಷ್ಟೇ ಅಲ್ಲ, ಗುರಿಯೂ ತಪ್ಪಿದೆ. ಇದನ್ನು ಅನುಷ್ಠಾನ ಮಾಡಲಾಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು ಹಾಗೂ ಅನುಷ್ಠಾನ ಗೊಳಿಸಿದರೂ ಒಬ್ಬನೇ ಒಬ್ಬ ಸವರ್ಣೀಯ ಬಡವನಿಗೆ ಇದರಿಂದ ನೌಕರಿ ಸಿಗೂದಿಲ್ಲ”.
ನನ್ನ ಮಾತು ಕೇಳಿ ಅವನು ಚಕಿತನಾದ, ‘ಅಂಕಲ್ ಅವೆಲ್ಲಾ ಮಾತುಗಳು ಆಮೇಲೆ, ಸವರ್ಣೀಯರಲ್ಲೂ ಬಡವರು ಇದಾರೋ ಇಲ್ಲೋ ಅದನ್ನು ಮೊದಲು ಹೇಳಿ, ಅಥವಾ, ಶಿಕ್ಷಣದಲ್ಲಿ ಮತ್ತು ಉದ್ಯೋಗಗಳಲ್ಲಿ ಎಲ್ಲಾ ಅವಕಾಶಗಳು ಬರೀ ಎಸ್.ಸಿ., ಎಸ್.ಟಿ. ಮತ್ತು ಒ.ಬಿ.ಸಿ. ಗಳಿಗೆ ಮಾತ್ರ ಇರಬೇಕೆ?’
ಆಗ ನನ್ನ ಸರದಿ: ‘ಕೂಸೆ, ದೇಶದ ಅಧಿಕಾಂಶ ಸವರ್ಣೀಯ ಜಾತಿಯ ಅಧಿಕಾಂಶ ಕುಟುಂಬಗಳು ಬಡತನದಲ್ಲಿ ಇವೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ದಿಲ್ಲಿಯಲ್ಲಿ ರಿಕ್ಷಾ ಓಡಿಸಲು ಇತರೆ ದೈಹಿಕ ಕೆಲಸ ಮಾಡಲು ಬಿಹಾರದಿಂದ ಬರುವ ಜನರಲ್ಲಿ ಹೆಚ್ಚಿನವರು ಸವರ್ಣೀಯರೇ ಆಗಿರುತ್ತಾರೆ, ಅವರಿಗೆ ತಮ್ಮ ಊರುಗಳಲ್ಲಿ ಸಣ್ಣ ಕೆಲಸಗಳನ್ನು ಮಾಡಲು ಆಗುವುದಿಲ್ಲ. ದೇಶದೆಲ್ಲೆಡೆ ನಿರುದ್ಯೋಗದ ಸಮಸ್ಯೆಯಿದೆ, ಸವರ್ಣೀಯರಿಗೂ ನಿರುದ್ಯೋಗದ ಸಮಸ್ಯೆಯಿದೆ. ಇದಕ್ಕೆ ಮೀಸಲಾತಿ ಬೇಕೋ ಬೇಡವೋ ಎನ್ನುವ ಚರ್ಚೆ ಆಮೇಲೆ ಮಾಡುವ. ಆದರೆ, ಅವರಿಗೆ ಕೆಲಸ ಬೇಕು, ಉದ್ಯೋಗ ಬೇಕು, ನೌಕರಿ ಬೇಕು ಹಾಗೂ ಅವೆಲ್ಲಾ ಈಗಲೇ ಬೇಕಿದೆ. ಹಾಗಾಗಿ ಸರಕಾರ ಅವರಿಗಾಗಿ ಏನು ಮಾಡಿದರೂ ಅದನ್ನು ಸ್ವಾಗತಿಸಬೇಕು”.
ಅವನಿಗೆ ಧೈರ್ಯ ಬಂತು, “ಹಂಗಾದರೆ ನೀವು ಸರಕಾರದ ಘೋಷಣೆಯನ್ನು ಸ್ವಾಗತಿಸಬೇಕು. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮೇಲ್ಜಾತಿಯ ಬಡವರ ನೆನಪಾದರೂ ಆಗಿದೆ”. ಆಗ ನಾನು ಅವನಿಗೆ ನೆನಪಿಸಿದ್ದು, ಈ ಘೋಷಣೆ ಕೇವಲ ಸವರ್ಣೀಯರಿಗೆ ಮಾತ್ರ ಇಲ್ಲ, ಮೀಸಲಾತಿಯ ಅಡಿಯಲ್ಲಿ ಬರದ ಮುಸಲ್ಮಾನರ, ಕ್ರೈಸ್ತರು ಹಾಗೂ ಸಿಕ್ಖರ ಮತ್ತು ಇತರ ಸಾಮಾನ್ಯ ವರ್ಗದ ಎಲ್ಲಾ ಬಡವರು ಇದರ ಅಡಿಯಲ್ಲಿ ಬರುತ್ತಾರೆ. ಹಾಗೂ ಇದೇನು ಮೊದಲನೇ ಸಲ ಆಗಿಲ್ಲ. ಇಂದಿಗೆ 27 ವರ್ಷಗಳ ಹಿಂದೆ 1991 ಸೆಪ್ಟೆಂಬರ್‍ನಲ್ಲಿ ನರಸಿಂಹರಾವ್ ಅವರ ಕಾಂಗ್ರೆಸ್ ಸರಕಾರವೂ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ 10% ಮೀಸಲಾತಿ ನೀಡಬೇಕೆಂದು ಆದೇಶ ಜಾರಿ ಮಾಡಿತ್ತು. ಆ ಆದೇಶವೂ ಈ ಆದೇಶಕ್ಕಾಗುವ ಗತಿಯನ್ನೇ ಕಂಡಿತ್ತು.
ಆ ಸರಕಾರಿ ಆದೇಶದ ವಿರುದ್ಧ ಸುಪ್ರೀಮ್ ಕೋರ್ಟಿನಲ್ಲಿ ಸವಾಲೊಡ್ಡಲಾಗಿತ್ತು. 1992ರಲ್ಲಿ ತನ್ನ ಐತಿಹಾಸಿಕ ತೀರ್ಪೊಂದರಲ್ಲಿ ಸುಪ್ರೀಮ್ ಕೋರ್ಟಿನ 9 ಜಡ್ಜುಗಳ ಸಂವಿಧಾನಿಕ ಬೆಂಚು, ಸಾಮಾನ್ಯ್ಯ ವರ್ಗಗಳಲ್ಲಿರುವ ಬಡವರಿಗಾಗಿ ಮಾಡಿರುವ ಈ ಮೀಸಲಾತಿಯನ್ನು ಎರಡು ಅಂಶಗಳ ಆಧಾರದ ಮೇಲೆ ಅಸಂವಿಧಾನಾತ್ಮಕ ಮತ್ತು ಕಾನೂನುವಿರೋಧಿ ಎಂದು ಘೋಷಿಸಿತ್ತು. ಮೊದಲ ಕಾರಣ, ನಮ್ಮ ಸಂವಿಧಾನದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಮೀಸಲಾತಿಯ ವ್ಯವಸ್ಥೆ ಇದೆ. ಕೇವಲ ಆರ್ಥಿಕ ಆಧಾರದ ಮೇಲೆ ಮೀಸಲಾತಿಯನ್ನು ಕಲ್ಪಿಸುವುದು ನಮ್ಮ ಸಂವಿಧಾನದ ಆಶಯ ಹಾಗೂ ಮೀಸಲಾತಿಯ ಭಾವನೆಗಳ ವಿರುದ್ಧವಾಗಿದೆ. ಎರಡನೆಯದಾಗಿ, ಆರ್ಥಿಕ ಆಧಾರದಲ್ಲಿ 10% ಮೀಸಲಾತಿ ನೀಡುವುದರಿಂದ ಒಟ್ಟು ಮೀಸಲಾತಿ 59% ಆಗುವುದು, ಹಾಗೂ ಇದು ಸುಪ್ರೀಮ್ ಕೋರ್ಟು ನಿರ್ಧರಿಸಿರುವ 50%ನ ಗಡಿಗಿಂತ ಹೆಚ್ಚಾಗಿದೆ. ಆಗ ಯಾವ ಆಕ್ಷೇಪಣೆಗಳಿದ್ದವೋ, ಅವೆಲ್ಲವು ಈಗಲೂ ಇವೆ.
“ಆದರೆ ಈ ಬಾರಿ ಸರಕಾರವು ಸಂವಿಧಾನದಲ್ಲಿ ತಿದ್ದುಪಡಿ ಮಾಡಲಿದೆ. ಆಗ ಸುಪ್ರೀಮ್ ಕೋರ್ಟು ಒಪ್ಪಲೇಬೇಕು” ಅವನು ಆಸೆ ವ್ಯಕ್ತಪಡಿಸಿದ. ಸಂವಿಧಾನದ ತಿದ್ದುಪಡಿ ತುಂಬಾ ಕ್ಲಿಷ್ಟ ಮತ್ತು ಉದ್ದದ ಪ್ರಕ್ರಿಯೆ ಎಂದು ನಾನು ತಿಳಿಸಿ ಹೇಳಿದೆ. ಮೊದಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವಿರಬೇಕು, ನಂತರ ರಾಜ್ಯಗಳ ವಿಧಾನಸಭೆಯಲ್ಲಿ ಪಾಸ್ ಆಗಬೇಕು. ಹಾಗೂ ತಿದ್ದುಪಡಿ ಆದ ನಂತರವೂ ಸುಪ್ರೀಮ್ ಕೋರ್ಟು ಅದನ್ನು ತಿರಸ್ಕರಿಸುವ ಅಧಿಕಾರ ಹೊಂದಿದೆ. ಬಹುಶಃ ತಿರಸ್ಕರಿಸುತ್ತೆ.
ಆದರೆ ಅಸಲಿ ಸಮಸ್ಯೆ ಇದಲ್ಲ. ತಿದ್ದುಪಡಿ ಆಯ್ತು ಅಂದುಕೊಳ್ಳುವ, ಸುಪ್ರೀಮ್ ಕೋರ್ಟು ಕೂಡ ಅದನ್ನು ಸ್ವೀಕರಿಸಿತು ಅಂದುಕೊಳ್ಳುವ, ಹಾಗಾದರೂ ಸಾಮಾನ್ಯ್ಯ ವರ್ಗಗಳ ನಿಜವಾಗಿಯೂ ಬಡವರಾಗಿರುವವರಿಗೆ ಈ ಮೀಸಲಾತಿಯ ಲಾಭ ಸಿಗುವುದಿಲ್ಲ. ಈ ಮೀಸಲಾತಿಗಾಗಿ ಸರಕಾರವು ನೀಡಿದ ಬಡವನ ಪರಿಭಾಷೆ ವಿಚಿತ್ರವಾಗಿದೆ. ಯಾರು ಆದಾಯ ತೆರಿಗೆಯಲ್ಲಿ 8 ಲಕ್ಷದವರೆಗೆ ತಮ್ಮ ಆದಾಯವನ್ನು ತೋರಿಸುತ್ತಾರೋ ಅಥವಾ ಯಾರ ಹೆಸರಿಗೆ 5 ಎಕರೆವರೆಗೆ ಜಮೀನಿದೆಯೋ ಅಥವಾ ದೊಡ್ಡ ಮನೆಯಿಲ್ಲದ ಎಲ್ಲರನ್ನು ಬಡವರೆಂದು ಪರಿಗಣಿಸಲಾಗುವುದು. ಅಂದರೆ, ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುವವರನ್ನು ಅಥವಾ ಅತಿದೊಡ್ಡ ರೈತರು ಹಾಗೂ ವ್ಯಾಪಾರಿಗಳನ್ನು ಹೊರತುಪಡಿಸಿ ಸಾಮಾನ್ಯ್ಯ ವರ್ಗದ ಬಹುತೇಕ ಎಲ್ಲರೂ ಈ ಮೀಸಲಾತಿಯ ಹಕ್ಕುದಾರರಾಗಿರುತ್ತಾರೆ. ಒಬ್ಬ ಕಾರ್ಮಿಕ ಅಥವಾ ರಿಕ್ಷಾ ಓಡಿಸುವವನ ಮಕ್ಕಳಿಗೆ ಒಬ್ಬ ವಕೀಲ ಮತ್ತು ಅಧ್ಯಾಪಕನ ಮಕ್ಕಳೊಂದಿಗೆ ಈ 10% ಮೀಸಲಾತಿಗಾಗಿ ಸ್ಪರ್ಧೆ ಮಾಡಬೇಕಾಗುತ್ತದೆ. ಒಂದು ವೇಳೆ ಇವರು ಬಡವರಾಗಿದ್ದರೂ ಸಾಮಾನ್ಯ ವರ್ಗದವರಿಗೆ 51% ಸೀಟುಗಳು ಇವರಿಗೆ ತೆರೆದಿವೆ. ಇದರಲ್ಲಿ ಒಂದು ದೊಡ್ಡ ಭಾಗ ಈ ‘ಬಡ ಸಾಮಾನ್ಯ ವರ್ಗ’ದವರಿಗೇ ಸಿಗುತ್ತಿದೆ. ಯಾರಿಗೆ ಮೀಸಲಾತಿಯಿಲ್ಲದೇ ಇಂದೂ ಕೂಡ 20 ಅಥವಾ 30% ಉದ್ಯೋಗಗಳು ಸಿಗುತ್ತಿರುವಾಗ ಅವರಿಗೆ 10% ಮೀಸಲಾತಿ ನೀಡುವುದರಿಂದ ಏನು ಸಿಗುವುದು? ಪೇಪರ್ ಮೇಲಷ್ಟೇ ಈ ಮೀಸಲಾತಿ ಇರುತ್ತದೆ ಹಾಗೂ ಒಬ್ಬ ವ್ಯಕ್ತಿಗೂ ನೌಕರಿ ನೀಡುವ ಅವಶ್ಯಕತೆ ಇರುವುದಿಲ್ಲ.
ಆಗ ಅವನ ಮುಖದ ಮೇಲೆ ನಿರಾಸೆ ಮೂಡಿತು. “ಇವೆಲ್ಲಾ ಸರಕಾರಕ್ಕೂ ಗೊತ್ತೇ ಇರಬೇಕಲ್ವಾ? ಹಾಗಾದರೆ ಸರಕಾರ ಈ ಘೋಷಣೆ ಏಕೆ ಮಾಡುತ್ತಿದೆ?” ಉತ್ತರ ಅವನಿಗೂ ಚೆನ್ನಾಗಿ ಗೊತ್ತಿತ್ತು, ನನಗೂ ಗೊತ್ತಿತ್ತು. 5 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಸರಕಾರವು ಜಾಟರ ಮೀಸಲಾತಿಯ ವಿಷಯದಲ್ಲಿ ಯಾವ ಆಟ ಆಡಿತ್ತೋ ಅದೇ ಕಸರತ್ತನ್ನು ಇಂದು ಮೋದಿ ಸರಕಾರ ಮಾಡುತ್ತಿದೆ. ಆಗ ಅವರಿಗೆ ಗೊತ್ತಿತ್ತು, ಕಾನೂನುರೀತ್ಯ ಜಾಟರಿಗೆ ಮೀಸಲಾತಿ ನೀಡುವುದು ಅಸಾಧ್ಯ ಎಂದು. ಆದರೂ ಚುನಾವಣೆಗೆ ಕೆಲ ತಿಂಗಳು ಇರುವಾಗ ಮೀಸಲಾತಿಯ ಘೋಷಣೆ ಮಾಡಿತ್ತು. ಬಿಜೆಪಿ ಆಗ ಅದನ್ನು ಸಮರ್ಥಿಸಿತ್ತು. ಸುಪ್ರೀಮ್ ಕೋರ್ಟು ಇದನ್ನು ತಿರಸ್ಕರಿಸುತ್ತೆ ಎಂದು ಇಬ್ಬರಿಗೂ ಚೆನ್ನಾಗಿ ಗೊತ್ತಿತ್ತು ಆದರೆ ಅದನ್ನು ಚುನಾವಣೆಗಳ ನಂತರ ನೋಡುವ ಎನ್ನುವ ಲೆಕ್ಕಾಚಾರ ಅವರದಾಗಿತ್ತು. ಆದೇ ಆಯಿತು ಕೂಡ. ಚುನಾವಣೆಗಳ ನಂತರ ಸುಪ್ರೀಮ್ ಕೋರ್ಟು ಜಾಟ್ ಮೀಸಲಾತಿಯನ್ನು ತಿರಸ್ಕರಿಸಿತು ಹಾಗೂ ಜನತೆ ಕಾಂಗ್ರೆಸ್ ಅನ್ನು ತಿರಸ್ಕರಿಸಿತು. ಈ ಸಲ ಕೂಡ ಅದೇ ಆಟ ಆಡಲಾಗುತ್ತಿದೆ. ಬಿಜೆಪಿಗೆ ಚುನಾವಣೆಗಳಲ್ಲಿ ಸೋಲು ನಿಚ್ಚಳವಾಗಿ ಕಾಣುತ್ತಿದೆ. ಈಗ ಗೊತ್ತೂಗೊತ್ತಿದ್ದೂ ಇಂತಹ ಪ್ರಸ್ತಾವನೆಗಳನ್ನು ತರುತ್ತಿದೆ, ಇದರಿಂದ ಯಾರಿಗೂ ಏನೂ ಸಿಗುವುದಿಲ್ಲ. ಆದರೆ ಚುನಾವಣೆಯ ಸಮಯದಲ್ಲಿ ಜನತೆಯ ಲಕ್ಷ ಬೇರೆಡೆಗೆ ಹೊಗುತ್ತೆ. ಇದನ್ನು ವಿರೋಧಿಸಿ ಕೆಟ್ಟವರ್ಯಾಕೆ ಆಗಬೇಕೆಂದು ಕಾಂಗ್ರೆಸ್ ಕೂಡ ಆಟವಾಡುತ್ತಿದೆ, ಹಾಗಾಗಿ ಇದರ ಸಮರ್ಥನೆ ಮಾಡುತ್ತಿದೆ.
“ಹಂಗಾದ್ರೆ ಸರಕಾರ ನಮಗೆ ಕೇವಲ ಲಾಲಿಪಾಪ್ ಕೊಡ್ತಾ ಇದೆಯಾ?” ‘ಇಲ್ಲ’ ಎಂದು ನಾನು ಹೇಳಿದೆ. ಸರಕಾರ ಲಾಲಿಪಾಪ್ ಕೂಡ ಕೊಡ್ತಿಲ್ಲ, ಅದು ನಮ್ಮದೇ ಜೇಬಿನಲ್ಲಿಯ ಎರಡು ಲಾಲಿಪಾಪ್‍ಗಳಲ್ಲಿಯ ಒಂದನ್ನು ತೆಗೆದು ನಮ್ಮ ಕೈಯಲ್ಲಿ ಇಡ್ತಾ ಇದೆ ಹಾಗೂ ಈಗ ಎಲ್ರೂ ಚಪ್ಪಾಳೆ ತಟ್ಟಿ ಎನ್ನುತ್ತಿದೆ.
“ಹಂಗಾದ್ರೆ ಏನ್ ಮಾಡಬೇಕು ಅಂಕಲ್?” ಈಗ ಅವನ ನಿರಾಸೆ ದುಃಖದಲ್ಲಿ ಪರಿವರ್ತನೆಯಾಗಿತ್ತು. ನಾನು ಮಾತನ್ನು ಮುಕ್ತಾಯಗೊಳಿಸುತ್ತ, “ಸಮಸ್ಯೆ ಮೀಸಲಾತಿಯದ್ದಲ್ಲ, ನಿರುದ್ಯೋಗದ್ದು. ಉದ್ಯೋಗಗಳೇ ಇಲ್ಲದಿದ್ದಾಗ ಮೀಸಲಾತಿ ನೀಡಿದರೆಷ್ಟು, ಬಿಟ್ಟರೆಷ್ಟು, ಯಾವ ವ್ಯತ್ಯಾಸ ಆಗೋದಿದೆ? ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದೇ ನಿಜವಾದ ಪರಿಹಾರ. ಇಂದು ಕೇಂದ್ರ ಸರಕಾರದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ರಾಜ್ಯ ಸರಕಾರಗಳಲ್ಲಿ 20 ಲಕ್ಷ ಖಾಲಿ ಇವೆ. ದುಡ್ಡು ಉಳಿಸುವ ಭರದಲ್ಲಿ ಸರಕಾರವು ಈ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಖಾಸಗೀ ಕ್ಷೇತ್ರದಲ್ಲಿ ಉದ್ಯೋಗಗಳು ಕಡಿಮೆಯಾಗಿವೆ, ಕಳೆದ ವರ್ಷದಲ್ಲಿ ಒಂದು ಕೋಟಿಗೂ ಹೆಚ್ಚು ಉದ್ಯೋಗಗಳು ಕಡಿಮೆಯಾಗಿವೆ. ಬಿಜೆಪಿ ಒಂದು ವೇಳೆ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಗಂಭೀರವಾಗಿದ್ದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಆದೇಶ ಏಕೆ ಹೊರಡಿಸುತ್ತಿಲ್ಲ? ಕಾಂಗ್ರೆಸ್ ಗಂಭೀರವಾಗಿದ್ದಲ್ಲಿ ತನ್ನ ರಾಜ್ಯಗಳಲ್ಲಿ ಉದ್ಯೋಗ ಏಕೆ ನೀಡುತ್ತಿಲ್ಲ?”
ಇಬ್ಬರ ಬಾಯಿಂದ ಏಕಕಾಲಕ್ಕೆ ಹೊರಬಿದ್ದದ್ದು “ಅಂದರೆ, ಜುಮ್ಲಾ ಬೇಡ, ಜಾಬ್ ಬೇಕು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...