Homeಕರ್ನಾಟಕ7 ಕೋಟಿ ಮತ್ತು ಪ್ರತೀಕಾರ: ಆರೋಪಗಳ ಹಿಂದಿನ ಹುನ್ನಾರವೇನು?

7 ಕೋಟಿ ಮತ್ತು ಪ್ರತೀಕಾರ: ಆರೋಪಗಳ ಹಿಂದಿನ ಹುನ್ನಾರವೇನು?

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ಪತ್ರಿಕೆಯೊಂದು ಕಳೆದ ಶನಿವಾರ ಗೌರಿ ಲಂಕೇಶರ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲು ಟ್ರಸ್ಟ್ ಹೆಸರಿನಲ್ಲಿ ಕೋಟ್ಯಾಂತರ ರೂ ಸಂಗ್ರಹ ಮಾಡಲಾಗಿದೆ ಎಂಬ ವರದಿಯೊಂದನ್ನು ಪ್ರಕಟಿಸಿತು. ಇಂತಹ ಪತ್ರಿಕೆಗಳಲ್ಲಿ ಗೌರಿ ಲಂಕೇಶರ ಕುರಿತಂತೆ ಅಥವಾ ಅವರ ಬಳಗದ ಕುರಿತಂತೆ ನಕಾರಾತ್ಮಕ ಸುದ್ದಿ ಬರುವುದೇ ಆಶ್ಚರ್ಯವಲ್ಲ. ಆದರೆ, ಗೌರಿ ಹತ್ಯೆಗೆ ಪ್ರತೀಕಾರ ಎಂಬ ತಲೆಬರಹ ಬಳಸಿ ಅದರಲ್ಲಿ ಹೊಸದೊಂದು ಕಥೆ ತೇಲಿಬಿಡಲಾಗಿತ್ತು.

ಅಚ್ಚರಿ ಮಾತ್ರವಲ್ಲದೇ ಅಪಾಯಕಾರಿಯಾದ ಅಂಶ ಅದರಲ್ಲಿತ್ತು. ‘ಪತ್ರಿಕೆ’ಯು ಇದರ ಮೂಲವನ್ನು ಕೆದಕಲು ಹಲವರನ್ನು ಮಾತಾಡಿಸಿಲು ಆರಂಭಿಸಿತು. ಗೌರಿಯವರ ಹತ್ಯೆ ಆದ ಮರುದಿನದಿಂದಲೇ ಅದೊಂದು ಸೈದ್ಧಾಂತಿಕ ಹತ್ಯೆಯಾಗಿರುವ ಸಾಧ್ಯತೆಯನ್ನು ಇಡೀ ದೇಶ ಗುರುತಿಸಿತು. ದೇಶ ವಿದೇಶಗಳಲ್ಲಿ ಪ್ರತಿಭಟನೆ ನಡೆಯಿತು. ಎಸ್‍ಐಟಿ ನಡೆಸಿದ ವಿಚಾರಣೆಯಲ್ಲೂ ಅದು ಸಾಬೀತಾಗಿದೆ. ಆದರೆ, ಹತ್ಯೆಯಾದ ಕೆಲವೇ ಗಂಟೆಗಳಿಂದ ಒಂದು ಗುಂಪು ಇದನ್ನ ‘ನಕ್ಸಲೀಯರು’ ಮಾಡಿರಬಹುದು ಎಂಬ ಸುದ್ದಿ ತೇಲಿಬಿಟ್ಟಿತು. ವಿಪರ್ಯಾಸವೆಂದರೆ ಅದಕ್ಕೆ ದನಿಗೂಡಿಸಿದ್ದ ವ್ಯಕ್ತಿಯು ಇಂದು ಗೌರಿಯವರ ಫೋಟೋವನ್ನು ಜೊತೆಯಲ್ಲಿಟ್ಟುಕೊಂಡು ತನ್ನ ಅಕ್ಕನ ಹೆಸರು ದುರ್ಬಳಕೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಇವೆಲ್ಲವೂ ಬೇರಾವುದೋ ಹುನ್ನಾರದ ಸುಳಿವನ್ನು ನೀಡುತ್ತಿದೆ.

 

ಗೌರಿಯವರ ಹಂತಕರು ಯಾರು ಎಂಬ ಕುರಿತ ಸಂದೇಹ ಯಾರಿಗೂ ಉಳಿದಿಲ್ಲ. ಇನ್ನು ಉಳಿದಿರುವುದು ಕಾನೂನು ಪ್ರಕ್ರಿಯೆ ಮಾತ್ರ. ಕಾನೂನಿನ ಕೆಲವು ಅನಿವಾರ್ಯ ಸಮಸ್ಯೆಗಳಿಂದ ಮುಂದಿನ ದಿನಗಳಲ್ಲಿ ಈಗ ಜೈಲಿನಲ್ಲಿರುವ ಆರೋಪಿಗಳು ಬಿಡುಗಡೆಯಾದರೂ ಸತ್ಯವನ್ನಂತೂ ಮರೆಮಾಚಲಾಗದು. ಆದರೆ, ಹತ್ಯೆ ನಡೆದ ಕೆಲವೇ ಗಂಟೆಗಳಿಂದ ಕಾರ್ಯಪ್ರವೃತ್ತವಾದ ಒಂದು ಗುಂಪು ಹಂತಕರಿಂದ ಇದನ್ನು ಮರೆಮಾಚುವ ಪ್ರಯತ್ನಕ್ಕೆ ಕೈ ಹಾಕಿತ್ತು. ಎಸ್‍ಐಟಿ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಾ, ಅಸಲೀ ಹಂತಕರನ್ನು ಪತ್ತೆ ಹಚ್ಚಿದ ಮೇಲೆ ಈ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು.

ಆದರೆ, ಹಂತಕರ ಸಿದ್ಧಾಂತಕ್ಕೆ ಪೂರಕವಾದ ಸರ್ಕಾರವು ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಮತ್ತೆ ಅಂತಹ ಗುಂಪುಗಳು ಕಾರ್ಯಪ್ರವೃತ್ತವಾಗಿರುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಸದರಿ ವರದಿ ಹಾಗೂ ನಂತರದ ಬೆಳವಣಿಗೆಗಗಳೂ ಆ ಅನುಮಾನವನ್ನು ಪುಷ್ಟೀಕರಿಸುತ್ತವೆ.

ಹಾಗಾಗಿಯೇ ಗೌರಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ಎಂತಲೂ, ಎರಡು ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದೂ ಬಿಂಬಿಸುವ ಪ್ರಯತ್ನ ನಡೆದಿರುವ ಸಾಧ್ಯತೆಗಳಿವೆ. ಗೌರಿ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡ ಬಲಪಂಥೀಯ ಗುಂಪೂ ಸಹಾ ಏಕರೂಪಿಯಾಗಿಲ್ಲ. ಒಂದು ಕಡೆ ಸಂಪೂರ್ಣ ವಿಷವೇರಿಸಿಕೊಂಡ ತಣ್ಣನೆಯ ಕ್ರೌರ್ಯಕ್ಕೆ ಹೇಸದ ಮನಸ್ಥಿತಿಯ ಹಾರ್ಡ್‍ಕೋರ್ ಗುಂಪಿದ್ದರೆ, ಇನ್ನೊಂದು ಕಡೆ ಇದನ್ನೇ ದೇಶಪ್ರೇಮ ಎಂದುಕೊಂಡು ಅವರ ಜಾಲಕ್ಕೆ ಬಿದ್ದ ‘ಹೊಸಬರೂ’ ಇದ್ದಾರೆ. ಅಂತಹವರು ಈಗ ಪಶ್ಚಾತ್ತಾಪವನ್ನು ಪಡುತ್ತಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗುವುದಿಲ್ಲ. ‘ಪತ್ರಿಕೆ’ಗೆ ಸಿಕ್ಕ ವಿಶ್ವಾಸನೀಯ ಮಾಹಿತಿಯು ಅದನ್ನು ಸ್ಪಷ್ಟಪಡಿಸುತ್ತದೆ. ಇದು ಇನ್ನೂ ವಿಚಾರಣೆಯ ಹಂತದಲ್ಲಿರುವುದರಿಂದ ಮತ್ತು ಕೇವಲ ಪತ್ರಿಕಾ ಸುದ್ದಿಯನ್ನಾಗಿ ಮಾತ್ರ ನೋಡದೇ, ಕರ್ನಾಟಕದ ಧೀಮಂತ ಪತ್ರಕರ್ತೆಯೊಬ್ಬರ ಹತ್ಯೆಯ ವಿಚಾರ ಆಗಿರುವುದರಿಂದ ಅದನ್ನು ಸುದ್ದಿ ಮಾಡದೇ ಪೊಲೀಸರಿಗೆ ಮುಟ್ಟಿಸುವ ಕೆಲಸವನ್ನು ಮಾಡಲಾಗಿದೆ.

ಹಂತಕ ಪಡೆಯ ದುರ್ಬಲ ಸದಸ್ಯರ ಮೇಲೆ ತಾವೇ ದಾಳಿ ಮಾಡಿ ಅದನ್ನು ಗೌರಿಯವರ ಬಳಗದ ಮೇಲೆ ಹೊತ್ತುಹಾಕುವ ಆಲೋಚನೆ ದುಷ್ಟಗುಂಪಿನಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ಹಾಗಾಗಿ ಅಂತಹ ನಿರ್ದಿಷ್ಟ ಸಂಗತಿಯ ಮೇಲೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಇಡುವ ಸಾಧ್ಯತೆಯಿದೆ.

ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಧ್ಯಮಗಳ ಮೂಲಕ ಮಾಡುವುದಾದರೆ ಬಲಪಂಥೀಯ ಸಿದ್ಧಾಂತವನ್ನೇ ಹಾಸುಹೊದ್ದುಕೊಂಡಿರುವ ಪತ್ರಿಕೆಗಿಂತ ಉತ್ತಮವಾದ ಸಾಧನ ಇನ್ನಾವುದಿದೆ? ಅದನ್ನೇ ಈಗ ಮಾಡಲಾಗಿದೆ ಎಂಬುದು ವಿವಿಧ ಮೂಲಗಳು (ಇದರಲ್ಲಿ ಪೊಲೀಸ್ ಮೂಲಗಳೂ ಇವೆ) ಅನುಮಾನ ಪಡುತ್ತಿವೆ. ಅಂದರೆ ಗೌರಿ ಹಂತಕರನ್ನು ರಕ್ಷಿಸುವ ಯೋಜನೆಯೊಂದು ಸಿದ್ಧವಾದಂತೆ ಕಾಣುತ್ತಿದೆ. ಏಕೆಂದರೆ, ಸ್ವಂತ ಕೈಯ್ಯಿಂದ ಹಣ ಹಾಕಿ ಹಿತೈಷಿಗಳಿಂದ ಹಣ ಸಂಗ್ರಹಿಸಿ ಕಷ್ಟದ ಮಧ್ಯೆಯೇ ಬದ್ಧತೆಯಿಂದ ಕೆಲಸ ಮಾಡುವ ಜನರೇ ಇರುವ ಟ್ರಸ್ಟ್ ಮೇಲೆ ಆರೋಪ ಮಾಡಿದ್ದಕ್ಕೆ ಬೇರೆ ಕಾರಣಗಳು ಕಾಣುತ್ತಿಲ್ಲ.

‘ಬ್ಲ್ಯಾಕ್‍ಮೇಲ್ ಪತ್ರಕರ್ತರು ಮತ್ತು ಸುಳ್ಳು ಸುದ್ದಿ ಪತ್ರಿಕೆಗಳು’
ನಮ್ಮ ಅಕ್ಕ ಮತ್ತು ತಂದೆಯ ಹೆಸರಿನಲ್ಲಿ ಚಂದಾ ಎತ್ತುವುದಕ್ಕೆ ನನ್ನ ವಿರೋಧ ಎಂದು ಒಬ್ಬ ‘ಪತ್ರಕರ್ತ’ರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ಪಡೆಯಲು ಅವರನ್ನು ಚೆನ್ನಾಗಿ ಬಲ್ಲವರೊಬ್ಬರಿಗೆ ಟಿವಿ ವಾಹಿನಿಯವರು ಸಂಪರ್ಕಿಸಿದ್ದಾರೆ. ಅವರು ಸ್ಪಷ್ಟವಾಗಿ ಗೌರಿಯವರ ಪತ್ರಿಕೆಯ ಕುರಿತು ತನಿಖೆ ನಡೆಯುವುದಾದರೆ ಸ್ವಾಗತ ಮತ್ತು ಅವರ ತಂದೆಯ ಹೆಸರಿನ ಪತ್ರಿಕೆಯ ಹೆಸರಿನಲ್ಲಿ ಹಣ ಸಂಗ್ರಹಿಸಿರುವ ಕುರಿತೂ ತನಿಖೆ ನಡೆದರೆ ನಿಜವಾದ ಸಂಗತಿಗಳು ಹೊರಬೀಳುತ್ತವೆ ಎಂದಿದ್ದಾರೆ.

ಪತ್ರಿಕೆಯು ಚಂದಾದಾರರಿಂದ ನಡೆಯದೇ ಬ್ಲ್ಯಾಕ್‍ಮೇಲ್‍ನಿಂದ ನಡೆಯುವುದೇ ‘ನಾರ್ಮಲ್’ ಎಂದು ಭಾವಿಸಿರುವವರ ಗೋಳು ಇದು. ಅಂತಹುದೇ ಬ್ಲ್ಯಾಕ್‍ಮೇಲ್ ಪ್ರಕರಣದಲ್ಲಿ ಸದರಿ ಬಲಪಂಥೀಯ ಪತ್ರಿಕೆಯ ವರದಿಗಾರನ ಮೇಲೂ ಎರಡು ದೂರುಗಳು ದಾಖಲಾಗಿವೆ. ಒಂದು ವರ್ಷದ ಹಿಂದೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ ಮತ್ತು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರುಗಳಾಗಿವೆ. ಅದರ ಪ್ರತಿಗಳು ‘ಪತ್ರಿಕೆ’ಗೆ ಲಭ್ಯವಾಗಿವೆ. ಆದರೆ, ಅದರ ಕುರಿತು ಸಂಬಂಧಪಟ್ಟವರನ್ನು ಮಾತನಾಡಿಸಿದಾಗ ಗೊತ್ತಾದದ್ದೆಂದರೆ ಸದರಿ ಧ್ಯಾನಸ್ಥ ಆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಬಹಳ ಕಡಿಮೆ. ಅವರ ಸ್ನೇಹಿತನ ಜೊತೆ ಪ್ರಕರಣದಲ್ಲಿ ಸಿಲುಕಿಸಿರಬಹುದೆಂದು ಕಾಣುತ್ತದೆ. ಹೀಗಿದ್ದಾಗಲೂ ತಾನೇ ಬ್ಲ್ಯಾಕ್‍ಮೇಲ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿ ಎಂದು ಬರೆಯುವುದು ಪತ್ರಿಕೋದ್ಯಮದ ನೀತಿ ಸಂಹಿತೆಗೆ ವಿರುದ್ಧವಾದುದು.

ಇದೇ ಮಾತನ್ನು ಆ ದಿನಪತ್ರಿಕೆಯ ಕುರಿತು ಹೇಳಲಾಗದು. ಏಕೆಂದರೆ ಆ ಪತ್ರಿಕೆಯು ಸುಳ್ಳು ಸೃಷ್ಟಿಸುವುದರಲ್ಲಿ ಸಿದ್ಧಹಸ್ತ. ಅದಕ್ಕಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಗಣಪತಿಯಪ್ಪನವರಿಂದ ಒಮ್ಮೆ ಛೀಮಾರಿ ಹಾಕಿಸಿಕೊಂಡಿತ್ತು. ಅಷ್ಟೇ ಅಲ್ಲದೇ ಸುಳ್ಳು ಬರೆದದ್ದಕ್ಕೆ ದಂಡ ಕಟ್ಟುವ ಶಿಕ್ಷೆಯನ್ನು ಶೃಂಗೇರಿ ನ್ಯಾಯಾಲಯ ಆದೇಶಿಸಿದ ವರದಿಗಳಿವೆ.

ಲಂಕೇಶರ ಪರಂಪರೆ ಮತ್ತು ಗೌರಿಯವರ ಹೋರಾಟದ ಕುರಿತು ಮಾತನಾಡಲು ಅಳುಕು ಬೇಡವೇ?

ಜಾತಿ ವ್ಯವಸ್ಥೆ ಮತ್ತು ಕೋಮುವಾದಕ್ಕೆ ವಿರೋಧ ಇವು ಪಿ.ಲಂಕೇಶರು ಎಂದೂ ರಾಜಿ ಮಾಡಿಕೊಳ್ಳದ ಎರಡು ಸಂಗತಿಗಳು. ಹಾಗೆಯೇ ಸ್ವಂತ ಅನುಕೂಲಕ್ಕಾಗಿ ಅಧಿಕಾರಸ್ಥರನ್ನು ಓಲೈಸುವುದು ಅವರ ಮೈಮೇಲೆ ಮುಳ್ಳು ತರಿಸುತ್ತಿತ್ತು. ಆ ಮುಳ್ಳುಗಳು ಅಧಿಕಾರಸ್ಥರಿಗೆ ಚುಚ್ಚುತ್ತಿತ್ತು. ಅದನ್ನು ಅಷ್ಟೇ ಕಠೋರವಾಗಿ ಮುಂದುವರೆಸಿಕೊಂಡು ಬಂದಿದ್ದು ಗೌರಿ ಲಂಕೇಶ್. ಆದರೆ ಲಂಕೇಶರ ಪತ್ರಿಕೆಯ ಮಾಲೀಕತ್ವ ಹೊಂದಿದ್ದ ಇಂದ್ರಜಿತ್ ತುಳಿದ ದಾರಿಯೇ ಬೇರೆ. ಅಧಿಕಾರಸ್ಥರನ್ನು ಓಲೈಸುವುದಕ್ಕೆ ಹಲವು ದಾರಿಗಳನ್ನು ಆಗಿಂದಾಗ್ಗೆ ಹಿಡಿಯುತ್ತಲೇ ಇದ್ದರು.

ಒಮ್ಮೆ ಯಡಿಯೂರಪ್ಪನವರನ್ನು ಸನ್ಮಾನಿಸಿ ಬಾಯಿಗೆ ಬಂದದ್ದು ಮಾತನಾಡಲು ಹೊರಟಾಗ ಯಡಿಯೂರಪ್ಪನವರೇ ‘ಇಂಥದ್ದೆಲ್ಲಾ ನಿಮ್ಮ ತಂದೆಯವರಿಗೆ ಇಷ್ಟವಾಗುತ್ತಿರಲಿಲ್ಲ, ಸುಮ್ಮನಿರಿ’ ಎಂದು ಹೇಳಿದರೆಂದರೆ, ಇಂದ್ರಜಿತ್ ಎಂಬ ವ್ಯಕ್ತಿಯ ಮಟ್ಟವನ್ನು ಊಹಿಸಬಹುದು.

ಪಿ.ಲಂಕೇಶರ ಆತ್ಮಕಥೆಯ ಹೆಸರು ಹುಳಿಮಾವಿನ ಮರ. ಅದೊಂದು ರೂಪಕಾತ್ಮಕವಾದ ಹೆಸರಾಗಿದ್ದರೂ, ಅವರ ಪ್ರೀತಿಯ ತೋಟದಲ್ಲೂ ಒಂದು ಹುಳಿಮಾವಿನ ಮರವಿತ್ತು. ಆ ತೋಟವು ಪ್ರತೀವರ್ಷ ಅವರ ಗೆಳೆಯರೆಲ್ಲರೂ ಸೇರುತ್ತಿದ್ದ ತಾಣವೂ ಆಗಿತ್ತು. ಇಂದು ಆ ತೋಟ ಮಾತ್ರವಲ್ಲದೇ, ಲಂಕೇಶರ ಸಮಾಧಿಯ ಜಾಗವನ್ನೂ ಸೇರಿಸಿ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಕುಟುಂಬದ ಮೂಲಗಳು ತಮಗೆ ಗೊತ್ತೇ ಆಗದಂತೆ ಮಾರಾಟವಾಗಿದ್ದನ್ನು ನೋವಿನಿಂದ ನೆನಪಿಸಿಕೊಳ್ಳುತ್ತವೆ. ಅಂದಹಾಗೆ ಸಮಾಧಿಯನ್ನೂ ಸೇರಿಸಿ ತೋಟ ಮಾರಾಟ ಮಾಡಿದ ವ್ಯಕ್ತಿಯೇ ಇಂದು ಪತ್ರಿಕಾಗೋಷ್ಠಿ ಮಾಡುತ್ತಿರುವುದು.

ಫೆಬ್ರವರಿ 22, 2005. ಬಸವನಗುಡಿ ಪೊಲೀಸ್ ಠಾಣೆ

ಬಸವನಗುಡಿ ಪೊಲೀಸ್ ಠಾಣೆಗೂ, ನಂ.9 ಇಎಟಿ ಸ್ಟ್ರೀಟ್, ಬಸವನಗುಡಿಗೂ ಸಾಕಷ್ಟು ಸಂಬಂಧವಿದೆ. ದುಷ್ಟರನ್ನೂ, ಭ್ರಷ್ಟರನ್ನೂ ಬಯಲುಗೊಳಿಸುವ ಬರಹಗಳನ್ನು ನಿರ್ಭೀತಿಯಿಂದ ಬರೆದ ಪತ್ರಿಕೆಯ ಕಚೇರಿ ಅದಾಗಿತ್ತು. ಅಂತಹ ದುಷ್ಟರು ಕಚೇರಿಯ ಮುಂದೆ ಗಲಾಟೆ ಮಾಡಲು ಬರುವುದು ಯಾವಾಗಲೋ ಒಮ್ಮೆ ನಡೆಯುತ್ತಲೇ ಇತ್ತು. ಆದರೆ, ಫೆಬ್ರವರಿ 22, 2005ರಂದು ಒಂದು ವಿಷಾದಕರ ದೂರು ಆ ಠಾಣೆಗೆ ಹೋಯಿತು.

ಆ ದೂರಿನಲ್ಲಿರುವ ಸಂಗತಿಗಳ ಕುರಿತು ಇಂದು ಇಂದ್ರಜಿತ್ ಮಾತಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಅವರ ಒಡನಾಡಿಗಳು ಕೇಳುತ್ತಾರೆ. ಇಂದು ಗೌರಿಯವರಿಲ್ಲ. ಆದರೆ ಅವರು ಕೊಟ್ಟ ದೂರಿದೆ. ಅದು ಏಳಿಸುವ ಪ್ರಶ್ನೆಗಳು ಹೀಗಿವೆ. ಗೌರಿಯವರಿಗೆ ಬಂದೂಕು ತೋರಿಸಿ ಹೆದರಿಸಿದ್ದು ಯಾರು? ಸ್ವತಃ ಗೌರಿ ಲಂಕೇಶರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕೊಟ್ಟ ದೂರು ಏನಾಗಿತ್ತು? ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಕುಟುಂಬ ಸಮೇತ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಏನು ಹೇಳಿದರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳು ಅಧಿಕಾರಕ್ಕೆ ಏರಿರುವುದರಿಂದ, ಜಾತ್ಯತೀತ ಶಕ್ತಿಗಳ ವಿರುದ್ಧ ಅವರು ನಿರಂತರ ದಾಳಿಗಳನ್ನು ಮಾಡುತ್ತಲೇ ಇರುತ್ತಾರೆ.
    ಇದಕ್ಕೆ ಜಾತ್ಯತೀತರು ಹೆದರುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...