Homeಮುಖಪುಟಬೆಳ್ಳಿಚುಕ್ಕಿ: ಆಂಡ್ರೋಮಿಡಾ ಗ್ಯಾಲಾಕ್ಸಿ ನೋಡೋಣ ಬನ್ನಿ..

ಬೆಳ್ಳಿಚುಕ್ಕಿ: ಆಂಡ್ರೋಮಿಡಾ ಗ್ಯಾಲಾಕ್ಸಿ ನೋಡೋಣ ಬನ್ನಿ..

- Advertisement -
- Advertisement -

2021ರ ಡಿಸೆಂಬರ್ 22ರಿಂದ ಸೂರ್ಯನ ಪಥ ದಕ್ಷಿಣ ದಿಕ್ಕಿನ ತುದಿಮುಟ್ಟಿ ಉತ್ತರ ದಿಕ್ಕಿನ ಕಡೆಗೆ ಚಲಿಸಲಾರಂಭಿಸಿದೆ. ಸೂರ್ಯನ ಪಥ ಉತ್ತರ ದಿಕ್ಕಿಗೆ ಚಲಿಸಿದಂತೆ, ಉತ್ತರಾರ್ಧ ಗೋಳದಲ್ಲಿರುವ ನಮಗೆ ಚಳಿಗಾಲ ಕಳೆದು ಬೇಸಿಗೆ ಬರುತ್ತದೆ. ಈಗಾಗಲೇ, ಚಳಿ ಸ್ವಲ್ಪ ಕಡಿಮೆಯಾಗುತ್ತಿರುವ ಬಗ್ಗೆ ನಿಮಗೂ ಅನುಭವ ಆಗಿರಬಹುದು. ಇದೆಲ್ಲದರ ಜೊತೆಗೆ ಚಳಿಗಾಲದ ಆಕಾಶ ಬಹಳ ವಿಶೇಷತೆಗಳಿಂದ ಕೂಡಿರುತ್ತದೆ. ಸುಲಭವಾಗಿ ಬರಿಗಣ್ಣಿನಲ್ಲಿ ನೋಡಬಹುದಾದ ಹಲವು ನಕ್ಷತ್ರ ಪುಂಜಗಳು, ನಿಹಾರಿಕೆಗಳು, ನಕ್ಷತ್ರ ಸಮೂಹಗಳು ಮತ್ತು ಮುಸ್ಸಂಜೆ ಹಾಗೂ ಇಳಿಸಂಜೆ ಆಗಸದಲ್ಲಿ ಬೆಳಗುವ ಗ್ರಹಗಳ ಕಾರಣದಿಂದ!

ಗುರು ಗ್ರಹ

ಸೂರ್ಯಾಸ್ತದ ನಂತರ ಪಶ್ಚಿಮ ದಿಕ್ಕಿನಲ್ಲಿ ನೋಡಿದರೆ, ಪ್ರಕಾಶಮಾನವಾಗಿ ಹೊಳೆಯುವ ಒಂದು ಚುಕ್ಕಿಯನ್ನು ಕಾಣಬಹುದು. ಇದು ಗುರು ಗ್ರಹ. ನಿಮ್ಮ ಬಳಿ ಬೈನಾಕ್ಯುಲರ್ ಇದ್ದರೆ, ಇದರ ಸಹಾಯದಿಂದ ಗುರು ಗ್ರಹವನ್ನು ಕಂಡಾಗ (ಬೈನಾಕ್ಯುಲರ್ ಅಲುಗಾಡದೆ ಹಿಡಿದುಕೊಳ್ಳಿ) ಅದರೆ ಉಪಗ್ರಹಗಳಾದ ಗೆಲಿಲಿಯನ್ ಸ್ಯಾಟಲೈಟ್‌ಗಳನ್ನು ಕಾಣಬಹುದು. ಈ ಉಪಗ್ರಹಗಳ ಹೆಸರು ಐಯೋ, ಗ್ಯಾನಿಮಿಡ, ಕ್ಯಾಲಿಸ್ಟೋ ಮತ್ತು ಯುರೋಪಾ. ಗುರು ಗ್ರಹಗಳನ್ನು ಮೊದಲ ಬಾರಿಗೆ ಗೆಲಿಲಿಯೋ ಕಂಡಾಗ ಈ ನಾಲ್ಕು ಉಪಗ್ರಹಗಳು ಇವೆ ಎಂದು ಗುರುತಿಸಿದ. ಆ ಕಾರಣದಿಂದ ಇವನ್ನು ಗೆಲಿಲಿಯೋ ಉಪಗ್ರಹಗಳು ಎಂದು ಕರೆಯಲಾಗುತ್ತಿದೆ.

ಶುಕ್ರ ಮತ್ತು ಮಂಗಳ ಗ್ರಹಗಳು

ಈ ವಾರದಲ್ಲಿ ನೀವೇನಾದರೂ ನಿದ್ದೆಯಿಂದ ಬೆಳಗ್ಗೆ ಬೇಗನೇ ಎದ್ದು, 5ರಿಂದ 5.30 ಗಂಟೆ ಒಳಗೆ ಪೂರ್ವದಿಕ್ಕಿಗೆ ನೋಡಿದರೆ ಅಲ್ಲಿ ಅತ್ಯಂತ ಪ್ರಕಾಶಮಾನವಾಗಿ ಬೆಳಗುವ ಒಂದು ಚುಕ್ಕಿಯನ್ನು ಕಾಣುತ್ತೀರಿ. ಇದು ಬೆಳ್ಳಿ ಚುಕ್ಕಿ ಅಂದರೆ ಶುಕ್ರ ಗ್ರಹ. ಸರಿಸುಮಾರು ಭೂಮಿಯ ಗಾತ್ರದಲ್ಲಿಯೇ ಇರುವ ಗ್ರಹ ಇದು. ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಚುಕ್ಕಿಯು ಶುಕ್ರ ಗ್ರಹವೇ. ಆ ಕಾರಣದಿಂದಲೇ ಇದನ್ನು ಬೆಳ್ಳಿ ಚುಕ್ಕಿ ಎಂದು ಕರೆಯುವುದು. ಈ ಶುಕ್ರ ಗ್ರಹದ ಬಲಗಡೆ ಕೆಂಪಾಗಿ ಹೊಳೆಯುವ ಚುಕ್ಕಿಯನ್ನು ನೀವು ಗಮನಿಸಿರಬಹುದು. ಅದು ಮಂಗಳ ಗ್ರಹ.

ನಕ್ಷತ್ರ ಪುಂಜಗಳು, ನೆಬುಲ್ಲಾ ಮತ್ತು ಗ್ಯಾಲಾಕ್ಸಿ

ರಾತ್ರಿ ಸುಮಾರು ಏಳುವರೆಯಿಂದ ಎಂಟು ಗಂಟೆಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನೆತ್ತಿಯ ಮೇಲೆ ನೋಡಿದರೆ, ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವ ಒಂದು ನಕ್ಷತ್ರ ಪುಂಜವು ಕಾಣುತ್ತದೆ. ಈ ಹಿಂದೆ ಇದೇ ಅಂಕಣದಲ್ಲಿ ಈ ನಕ್ಷತ್ರ ಪುಂಜದ ವೀಕ್ಷಣೆಯ ಬಗ್ಗೆ ವಿವರವಾಗಿ ಬರೆಯಲಾಗಿತ್ತು. ಇದು ಒರೆಯಾನ್ ನಕ್ಷತ್ರ ಪುಂಜ. ಚಳಿಗಾಲದಲ್ಲಿ ರಾತ್ರಿ ಆಕಾಶವನ್ನು ವೀಕ್ಷಣೆ ಮಾಡಲು ಈ ಒರೆಯಾನ್ ಒಂದು ದಿಕ್ಸೂಚಿಯಾಗಿದೆ. ಏಕೆಂದರೆ, ಒರೆಯಾನ್ ನಕ್ಷತ್ರ ಪುಂಜವನ್ನು ಎಲ್ಲರೂ ಸುಲಭವಾಗಿ ಗುರುತಿಸಬಹುದು. ಈ ನಕ್ಷತ್ರ ಪುಂಜದಿಂದ ಇತರೆ ಆಕಾಶಕಾಯಗಳನ್ನು ಹಾಗೂ ದಿಕ್ಕುಗಳನ್ನು ಗುರುತಿಸುವುದು ಸುಲಭ. ಒರೆಯಾನ್‌ನ ಎರಡು ನಕ್ಷತ್ರಗಳು ಅತ್ಯಂತ ಪ್ರಕಾಶಮಾನವಾದವು. ಚಿತ್ರದಲ್ಲಿ ತೋರಿಸಿರುವಂತೆ, ರಾತ್ರಿ ಆಕಾಶದಲ್ಲಿ, ಬೀಟಲ್‌ಗೀಸ್ ನಕ್ಷತ್ರ ಆರೆಂಜ್ ಬಣ್ಣದಲ್ಲಿ ಕಂಡರೆ, ರೀಗಲ್ ತಿಳಿ ನೀಲಿ ಬಣ್ಣದಲ್ಲಿ ಹೊಳೆಯುತ್ತದೆ. ಬೀಟಲ್‌ಗೀಸ್ ಸೂರ್ಯನಿಗಿಂತಲೂ ಸುಮಾರು 950 ಪಟ್ಟು ಹೆಚ್ಚು ದೊಡ್ಡದಿದ್ದು, 548 ಬೆಳಕಿನ ವರ್ಷದಷ್ಟು ದೂರವಿದೆ. ರೀಗಲ್ ಯೌವ್ವನದ ಸ್ಥಿತಿಯಲ್ಲಿರುವ ನಕ್ಷತ್ರ, ಇದು ಸೂರ್ಯನಿಗಿಂತಲೂ 79 ಪಟ್ಟು ದೊಡ್ಡದಿದ್ದು, 863 ಬೆಳಕಿನ ವರ್ಷದಷ್ಟು ದೂರವಿದೆ. ಅಂದಹಾಗೆ, ಒರೆಯಾನ್ ನಕ್ಷತ್ರ ಪುಂಜದಲ್ಲಿರುವ ಒರೆಯಾನ್ ನೆಬುಲ್ಲಾವನ್ನು ನೋಡಲು ಮರೆಯದಿರಿ. ಈ ನಿಹಾರಿಕೆಯು
ನಕ್ಷತ್ರಗಳು ಹುಟ್ಟುವ ಪ್ರದೇಶವಾಗಿದೆ. ಬೈನಾಕ್ಯುಲರ್ ಸಹಾಯದಿಂದ ನೋಡಿದರೆ ಇನ್ನಷ್ಟು ವಿವರವಾಗಿ ಒರೆಯಾನ್ ನೆಬುಲ್ಲಾವನ್ನು ನೀವು ಗಮನಿಸಬಹುದು.

ಒರೆಯಾನ್ ನಕ್ಷತ್ರ ಪುಂಜದ ಬೀಟಲ್‌ಗೀಸ್ ನಕ್ಷತ್ರದಿಂದ ನೆತ್ತಿಯ ಕಡೆಗೆ ನೋಡಿದರೆ ಮತ್ತೊಂದು ಕೆಂಪು ಮತ್ತು ಹಳದಿ ಬಣ್ಣದ ನಕ್ಷತ್ರ ಕಾಣುತ್ತದೆ. ಈ ನಕ್ಷತ್ರದ ಹೆಸರು ರೋಹಿಣಿ ನಕ್ಷತ್ರ (ಅಲ್ಡಿಬರಾನ್ ಎಂದು ಕರೆಯುತ್ತಾರೆ). ರೋಹಿಣಿ ಇರುವ ನಕ್ಷತ್ರ ಪುಂಜ ವೃಷಭ. ಈ ರೋಹಿಣಿ ನಕ್ಷತ್ರದ ನೆತ್ತಿಯ ಮೇಲೆ ಕಣ್ಣು ಚಾಚಿ ನೋಡಿದರೆ, ಒಂದು ನಕ್ಷತ್ರದ ಗೊಂಚಲುಗಳು ಕಾಣುತ್ತದೆ. ಇದೇ ಕೃತ್ತಿಕಾ ನಕ್ಷತ್ರ ಸಮೂಹ/ಗೊಂಚಲು/ಕ್ಲಸ್ಟರ್. ಬೈನಾಕ್ಯುಲಾರ್‌ನಲ್ಲಿ ಕಂಡಾಗ ಹಲವು ನಕ್ಷತ್ರಗಳು ಕಾಣುತ್ತದೆ.

ಹಾಗೆಯೇ ಸ್ವಲ್ಪ ಉತ್ತರದ ದಿಕ್ಕಿಗೆ ತಿರುಗಿ. ಉತ್ತರ ದಿಕ್ಕು ಯಾವುದು ಅಂತ ಯೋಚಿಸುತ್ತಿದ್ದೀರಾ? ಒರೆಯಾನ್ ನಕ್ಷತ್ರ ಪುಂಜಕ್ಕೆ ಮುಖ ಮಾಡಿ ನಿಂತಾಗ ಬೀಟಲ್‌ಗೀಸ್ ನಕ್ಷತ್ರ ನಿಮ್ಮ ಎಡಭಾಗಕ್ಕೆ ಇದ್ದರೆ, ರೀಗಲ್ ನಿಮ್ಮ ಬಲಭಾಗಕ್ಕೆ ಇರುತ್ತದೆ. ಈಗ ನಿಮ್ಮ ಎಡಕ್ಕಿರುವ ದಿಕ್ಕೇ ಉತ್ತರ ದಿಕ್ಕು. ಉತ್ತರದಲ್ಲಿ ಕಾಣುವ ನಕ್ಷತ್ರಗಳನ್ನು ಸ್ವಲ್ಪ ಹೊತ್ತು ಗಮನಿಸುತ್ತಾ ಹೋದರೆ, ಈ ಕೆಳಗಿನ ಚಿತ್ರದಲ್ಲಿರುವಂತೆ ಒಂದು M(ಎಂ) ಆಕಾರದ ರಚನೆಯನ್ನು ನೀವು ಆಕಾಶದಲ್ಲಿ ಗುರುತಿಸಬಹುದು. ಈ ನಕ್ಷತ್ರ ಪುಂಜದ ಹೆಸರು ಕ್ಯಾಸಿಯೋಪಿಯ. ಇದು ಉತ್ತರ ದಿಕ್ಕನ್ನು ಸುಲಭವಾಗಿ ಗುರುತಿಸಲು ಉಪಯೋಗಿಸುವ ನಕ್ಷತ್ರ ಪುಂಜ. ಹೇಗೆ ನಾವು ಒರೆಯಾನ್‌ಅನ್ನು ಸುಲಭವಾಗಿ ಗುರುತಿಸಬಹುದೋ, ಹಾಗೆಯೇ ಈ M ಆಕಾರದ ನಕ್ಷತ್ರ ಪುಂಜವನ್ನು ಆಕಾಶದಲ್ಲಿ ನೋಡಿದರೆ, ಅದು ಉತ್ತರ ದಿಕ್ಕು ಎಂದು ಯಾವುದೇ ದಿಕ್ಸೂಚಿಯಂತಹ ಸಲಕರಣೆಗಳಲ್ಲಿದೆ ತಿಳಿಯಬಹುದು. ಇದಲ್ಲದೆ ಈ ಕೆಳಗಿನ ಚಿತ್ರದಲ್ಲಿರುವ ಇತರೆ ನಕ್ಷತ್ರ, ನಕ್ಷತ್ರ ಪುಂಜಗಳನ್ನು ಗುರುತಿಸಲು ಪ್ರಯತ್ನ ಮಾಡಿ.

ಈ M ಆಕಾರದ ಕ್ಯಾಸಿಯೋಪಿಯ ನಕ್ಷತ್ರ ಪುಂಜದಿಂದ ಸ್ವಲ್ಪ ಎತ್ತರಕ್ಕೆ ಹಾಗೂ ದಕ್ಷಿಣ ದಿಕ್ಕಿಗೆ ನೋಡುತ್ತಿದ್ದರೆ, ಅಲ್ಲಿ ಅಂಡ್ರೋಮಿಡಾ ಎಂಬ ನಕ್ಷತ್ರ ಪುಂಜವನ್ನು ಗುರುತಿಸಬಹುದು. ಮೊದಲನೇ ಬಾರಿಗೆ ಗುರುತಿಸುವುದು ಕಷ್ಟ ಅನ್ನಿಸಬಹುದು, ಆದರೆ ಆಕಾಶ ವೀಕ್ಷಣೆಯನ್ನು ಅಭ್ಯಾಸ ಮಾಡುತ್ತಿದ್ದರೆ ಅಷ್ಟೇನು ಕಷ್ಟವಾಗುವುದಿಲ್ಲ. ಪ್ರಥಮ ಬಾರಿಗೆ ಈ ಕೆಳಗೆ ನೀಡಿರುವ ಚಿತ್ರದ ಸಹಾಯದಿಂದ ಗುರುತಿಸಲು ಪ್ರಯತ್ನಿಸಿ. ಈ ಆಂಡ್ರೋಮಿಡಾ ನಕ್ಷತ್ರ ಪುಂಜದ ನಕ್ಷತ್ರಗಳನ್ನು ಗುರುತಿಸಲು M ಆಕಾರದ ಕ್ಯಾಸಿಯೋಪಿಯ ನಕ್ಷತ್ರ ಪುಂಜವನ್ನು ಬಳಸಿಕೊಳ್ಳಿ. ಆಂಡ್ರೋಮಿಡಾ ನಕ್ಷತ್ರ ಪುಂಜದ Mirach ನಕ್ಷತ್ರವನ್ನು ಗುರುತಿಸಿ, ನಂತರ ಅದರ ಕೆಳಗಿನ ಎರಡು ನಕ್ಷತ್ರಗಳನ್ನು, ಚಿತ್ರದಲ್ಲಿರುವ ಕಾಲ್ಪನಿಕ ಗೆರೆಯಂತೆ ನೀವೇ ಊಹಿಸಿಕೊಂಡು ಆಕಾಶದಲ್ಲಿ ಗುರುತಿಸಿ. ಈ ಗೆರೆಯ ಮೂರನೇ ನಕ್ಷತ್ರದ ಬಳಿ ಒಂದು ಮಸುಕಾದ ಆಕಾರ ಕಾಣುತ್ತದೆ. ಅದೇ ಆಂಡ್ರೋಮಿಡಾ ಗ್ಯಾಲಾಕ್ಸಿ. ನಾವು ಇರುವ ಹಾಲು ಹಾದಿ ಗ್ಯಾಲಾಕ್ಸಿಗೆ ಹತ್ತಿರದಲ್ಲಿರುವ ಮತ್ತೊಂದು ಗ್ಯಾಲಾಕ್ಸಿ ಅದು. ಬೈನಾಕ್ಯುಲರ್ ಸಹಾಯದಿಂದ ಆಂಡ್ರೋಮಿಡಾ ಗ್ಯಾಲಾಕ್ಸಿಯನ್ನು ನೋಡಿ, ಇನ್ನೂ ಸುಂದರವಾಗಿ ಅದನ್ನು ಗುರುತಿಸಬಹುದು. ಬರಿಗಣ್ಣಿಗೆ ಅಥವಾ ಬೈನಾಕ್ಯುಲರ್‌ನಿಂದ ನೋಡಿದಾಗ ಗ್ಯಾಲಾಕ್ಸಿಯ ಬಣ್ಣಗಳು ಕಾಣುವುದಿಲ್ಲ. ಗ್ಯಾಲಾಕ್ಸಿಗಳಿಂದ ಬರುವ ಮಸುಕಾದ ಬೆಳಕಿನ ಕಿರಣಗಳಿಂದ ನಮ್ಮ ಕಣ್ಣುಗಳು ಬಣ್ಣಗಳನ್ನು ಊಹಿಸುವಷ್ಟು ಸಾಮರ್ಥ್ಯ ಹೊಂದಿಲ್ಲ. ಕ್ಯಾಮರಾದ ಸಹಾಯದಿಂದ ಹೆಚ್ಚು ಎಕ್ಸಪೋಶರ್ ಹೊಂದಿದ ಪೋಟೋ ತೆಗೆದರೆ, ಈ ಆಂಡ್ರೋಮಿಡಾ ಗ್ಯಾಲಾಕ್ಸಿಯ ಅದ್ಭುತವು ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಆಗಸದಲ್ಲಿನ ನಕ್ಷತ್ರ ಪುಂಜಗಳನ್ನು ಗುರುತಿಸಿದ ನಂತರ, ಅಲ್ಲಿ ಕಾಣುವ ಗ್ಯಾಲಾಕ್ಸಿ, ನೆಬುಲ್ಲಾ ಮತ್ತು ಕ್ಲಸ್ಟರ್‌ಗಳನ್ನು ಕಾಣಲು ನಕ್ಷತ್ರ ಪುಂಜಗಳನ್ನು ದಿಕ್ಸೂಚಿಯಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಖಗೋಳ ವಿಜ್ಞಾನಿಗಳು, ಹವ್ಯಾಸಿ ಖಗೋಳ ವಿಜ್ಞಾನಿಗಳು ಇಂತಹ ವೀಕ್ಷಣೆಯನ್ನು Deep Sky Object Seeing/Observing ಎಂದು ಕರೆಯುತ್ತಾರೆ. ಇಂತಹ Deep Sky Objectಗಳನ್ನು ನಗರ ಪ್ರದೇಶಗಳಲ್ಲಿ ನೋಡಲು, ಬೆಳಕಿನ ಮಾಲಿನ್ಯ, ವಾಯುಮಾಲಿನ್ಯಗಳು ಅಡ್ಡಿಪಡಿಸುತ್ತವೆ. ಹವ್ಯಾಸಿ ಖಗೋಳ ವಿಜ್ಞಾನಿಗಳು ನಗರ ಪ್ರದೇಶದಿಂದ ಸುಮಾರು ನೂರು ಕಿಲೋಮಿಟರ್ ದೂರ ಹೋಗಿ ಅಥವಾ ದೂರದ ಹಳ್ಳಿಯಲ್ಲಿ ರಾತ್ರಿಯೆಲ್ಲಾ ವಾಸ್ತವ್ಯ ಹೂಡಿ ಆಕಾಶ ವೀಕ್ಷಣೆ ಮತ್ತು ಫೋಟೋಗ್ರಫಿಯನ್ನು ಮಾಡುತ್ತಾರೆ. ಆದರೂ ಕೆಲವೊಂದು Deep Sky Objectಗಳನ್ನು ನಗರ ಪ್ರದೇಶಗಳಿಂದಲೂ ಗುರುತಿಸಬಹುದಾಗಿದೆ.

ಈ ಸಂಚಿಕೆಯಲ್ಲಿ ಒರಿಯಾನ್ ನೆಬುಲ್ಲಾ, ಕೃತ್ತಿಕಾ ನಕ್ಷತ್ರ ಪುಂಜ ಮತ್ತು ಆಂಡ್ರೋಮಿಡಾ ಗ್ಯಾಲಾಕ್ಸಿಯನ್ನು ಗುರುತಿಸುವುದು ಹೇಗೆ ಎಂದು ತಿಳಿದುಕೊಂಡೆವು. ನಿಮ್ಮ ಬಳಿ ಕಂಪ್ಯೂಟರ್ ಇದ್ದರೆ, Stellarium (www.stellarium.org) ಎಂಬ ಉಚಿತ ತಂತ್ರಾಂಶವನ್ನು install ಮಾಡಿಕೊಳ್ಳಿ. ಇದರಲ್ಲಿ ನೀವಿರುವ ಜಾಗವನ್ನು ಆಯ್ಕೆ ಮಾಡಿದರೆ, ನಿಮ್ಮ ಪ್ರದೇಶದಿಂದ ಆಕಾಶ ಹೇಗೆ ಕಾಣುತ್ತದೆ ಎಂಬ ನೈಜ ಗ್ರಾಫಿಕ್ಸ್ ಲಭ್ಯವಾಗುತ್ತದೆ. ಇಲ್ಲಿ ನೀಡಿರುವ ಚಿತ್ರಗಳೆಲ್ಲವೂ ಅಲ್ಲಿಂದಲೇ ಪಡೆದದ್ದು. ಈ ತಂತ್ರಾಂಶವನ್ನು ಉಪಯೋಗಿಸಲು ಇಂಟರ್ನೆಟ್ ಅವಶ್ಯಕತೆ ಇರುವುದಿಲ್ಲ. ಅಲ್ಲದೆ, ಮೊಬೈಲ್‌ನಲ್ಲಿ Sky Map ಎನ್ನುವ ತಂತ್ರಾಂಶವನ್ನು install ಮಾಡಿಕೊಳ್ಳಿ. ಇದೂ ಸಹ ಲೈವ್ Sky Mapಅನ್ನು ಮೊಬೈಲ್ ಪರದೆ ಮೇಲೆ ಬಿತ್ತರಿಸುತ್ತದೆ.

ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ನಕ್ಷತ್ರ ಪುಂಜಗಳು ಹಾಗೂ Deep Sky Objectಗಳನ್ನು ಗುರುತಿಸುವುದು ಮತ್ತು ಅದರ ವಿಶೇಷತೆಗಳನ್ನು ತಿಳಿದುಕೊಳ್ಳೋಣ. ಈ ವಾರ ಆಂಡ್ರೋಮಿಡಾ ಗ್ಯಾಲಾಕ್ಸಿಯನ್ನು ಆಕಾಶದಲ್ಲಿ ಗುರುತಿಸಲು ಪ್ರಯತ್ನಿಸಿ.


ಇದನ್ನೂ ಓದಿ: ನಭೋಮಂಡಲದ ಅನಂತತೆಯ ನಿಗೂಢಗಳನ್ನು ತಿಳಿಯುವ ತವಕಕ್ಕೆ ಕ್ಷಣಗಣನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...