Homeಮುಖಪುಟಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

- Advertisement -
- Advertisement -

ಮುಂದುವರಿದ ದೇಶಗಳ ಉತ್ಪಾದನೆ ಪ್ರಮಾಣ ಮತ್ತು ಸಬ್ಸಿಡಿ ಪ್ರಮಾಣ

1997ರ ವರದಿಯ ಪ್ರಕಾರ 2004ರೊಳಗಾಗಿ ಯುರೋಪು ಒಕ್ಕೂಟದ ರಾಷ್ಟ್ರಗಳ ಗೋಧಿ ಉತ್ಪಾದನೆ 27 ಮೆಟ್ರಿಕ್ ಟನ್‌ನಿಂದ 450 ಲಕ್ಷ ಮೆಟ್ರಿಕ್ ಟನ್‌ಗಳಿಗೇರಲಿದೆ. ಮತ್ತು ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ 580 ಲಕ್ಷ ಮೆಟ್ರಿಕ್ ಟನ್‌ಗಳಿಗೇರಲಿದೆ. ಹಾಗೆಯೇ, ಅಮೆರಿಕದ ಪ್ರತಿ ಮೂರು ಎಕರೆಗಳಲ್ಲಿ ಒಂದು ಎಕರೆಯಲ್ಲಾಗುವ ಬೆಳೆ ರಫ್ತಿಗಾಗಿಯೇ ಮೀಸಲಾಗಿದೆ. ಹೀಗಾಗಿ, ಹೆಚ್ಚುತ್ತಿರುವ ಈ ಬೆಳೆಗಳಿಗೆ ಅವರು ಹೊಸ ಮಾರುಕಟ್ಟೆಗಳನ್ನು ಹುಡುಕಲೇಬೇಕಾಗಿದೆ.

ಈ ಹೆಚ್ಚುತ್ತಿರುವ ಬೆಳೆಗಳನ್ನು ಕಡಿಮೆ ಬೆಲೆಗಳಲ್ಲಿ ಮಾರಿ ನಮ್ಮಂತಹ ದೇಶಗಳ ಕೃಷಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಈ ಮುಂದುವರಿದ ದೇಶಗಳು ಬಹಳ ದೊಡ್ಡ ಪ್ರಮಾಣದ ಹಣವನ್ನು ಕೃಷಿ ಸಹಾಯಧನವಾಗಿ ಖರ್ಚು ಮಾಡುತ್ತಿವೆ. “ಒಇಸಿಡಿ” (OECD) ಎಂದು ಕರೆಯಲ್ಪಡುವ ರಾಷ್ಟ್ರಗಳಾದ ಈ ದೇಶಗಳ ಒಟ್ಟು ಕೃಷಿ ಸಹಾಯಧನದ ಮೊತ್ತ 1995ರಲ್ಲಿ 1,82,000 ಕೋಟಿ ಡಾಲರ್ (ಅಥವಾ 80,00,000 ಕೋಟಿ ರೂಪಾಯಿ) ಗಳಿದ್ದದ್ದು, 1997ಕ್ಕೆ 2,80,000 ಕೋಟಿ ಡಾಲರ್ (ಅಥವಾ 2,23,20,000 ಕೋಟಿ ರೂಪಾಯಿ) ಗಳಿಗೇರಿತ್ತು. ಇದರಲ್ಲಿ ಯುರೋಪ್ ಒಕ್ಕೂಟ ಮತ್ತು ಆಮೆರಿಕ ದೇಶಗಳದೇ ದೊಡ್ಡ ಪಾಲು.

ಈ ಕಾರಣವೇ, ಈಗಾಗಲೇ ಈ ದೇಶಗಳ ಕೃಷಿ ಹೆಚ್ಚುವರಿಯೆಲ್ಲ ನಮ್ಮಂತಹ ದೇಶಗಳ ಮಾರುಕಟ್ಟೆಯೊಳಕ್ಕೆ ನುಗ್ಗಿ ನಾವು ಬೆಳೆದ ಬೆಳೆಗಳಿಗೆ ನ್ಯಾಯಬೆಲೆ ದೊರಕದ ಸ್ಥಿತಿ ನಿರ್ಮಾಣವಾಗುತ್ತಿರುವುದು.

ಜೊತೆಗೆ, ಆಗಿನ ಬಿಜೆಪಿ ಸರ್ಕಾರ, ಬೇರೆ ದೇಶಗಳ ಆಮದುಗಳಿಗೆ ಹಿಂದೆ ಇದ್ದ ಪ್ರಮಾಣದ ನಿಯಂತ್ರಣವನ್ನು ರದ್ದುಮಾಡಿದೆ. ಇದರಿಂದಾಗಿ ಹೊರದೇಶದಿಂದ ಕೃಷಿ ವಸ್ತುಗಳು ಯಾವುದೇ ಪ್ರಮಾಣದಲ್ಲಿ ಬೇಕಾದರೂ ನಮ್ಮ ಕೃಷಿ ಮಾರುಕಟ್ಟೆ ಪ್ರವೇಶ ಮಾಡಬಹುದು.

ನಮ್ಮ ದೇಶದ ರೈತರಿಗೆ ಹೊರದೇಶದ ಮಾರುಕಟ್ಟೆಗೆ ರಫ್ತು ಮಾಡಲು ಅವಕಾಶವಿದೆಯೇ?

ಮೇಲ್ಕಂಡ ಸಬ್ಸಿಡಿ ಮತ್ತು ಮಾರುಕಟ್ಟೆ ಕುತಂತ್ರದ ಜೊತೆಗೇ, ಈ ಮುಂದುವರಿದ ರಾಷ್ಟ್ರಗಳು ತಮ್ಮ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಕುತಂತ್ರದ ನಿಯಮಗಳನ್ನು ಈ ವಿಶ್ವವ್ಯಾಪಾರಿ ಸಂಸ್ಥೆಯ ಒಪ್ಪಂದದೊಳಗೆ ಸೇರಿಸಿವೆ. ಇದನ್ನು “ಆರೋಗ್ಯ ನಿಯಮಗಳು” ಎಂದು ಕರೆಯಲಾಗಿದೆ. ತಮಗಿಚ್ಛೆ ಬಂದಂತೆ, ತಮ್ಮ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು, ಯಾವುದೇ ದೇಶದ ಬೆಳೆಯನ್ನು ಮಾನವ ಅಥವಾ ಪ್ರಾಣಿಗಳ ಆರೋಗ್ಯಕ್ಕೆ ಯೋಗ್ಯವಲ್ಲವೆಂದು ತಿರಸ್ಕರಿಸಬಹುದಾದ ನಿಯಮ ಇದಾಗಿದೆ.

ಉದಾಹರಣೆಗೆ, ಈ ನಿಯಮಗಳು ಪೈಪೋಟಿಯಲ್ಲಿರುವ ಅಮೆರಿಕಾ ಮತ್ತು ಯುರೋಪ ದೇಶಗಳ ನಡುವೆಯೇ ಚಾಲ್ತಿಗೆ ಬಂದವು. ಹಾರ್ಮೋನುಗಳ ಮೂಲಕ ತಯಾರಾದ ಅಮೆರಿಕದ ದನದ ಮಾಂಸವನ್ನು ಮತ್ತು ಅಲ್ಲಿನ ವಂಶವಾಹಿ ವಿಕೃತ ಸೋಯಾ ಅವರೆಯನ್ನು ಯೂರೋಪು ಒಕ್ಕೂಟ ದೇಶಗಳು ಸಾರ್ವಜನಿಕ ಆರೋಗ್ಯ ಸುರಕ್ಷತೆಯ ಕಾರಣಕೊಟ್ಟು ನಿಷೇಧಿಸಿದ ಕಾರಣ, ಅಮೆರಿಕ ತನ್ನ ಸಬ್ಸಿಡಿಗಳನ್ನು ಹೆಚ್ಚಿಸುವ ಮೂಲಕ ಯೂರೋಪಿನ ಮಾರುಕಟ್ಟೆಯನ್ನೇ ನಾಶಮಾಡುವ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದೆ. ಹೀಗಿರುವಾಗ, ನಮ್ಮ ದೇಶಗಳ ರಫ್ತಿನ ಗತಿಯೇನಾಗಬಹುದು ಎನ್ನುವುದು ಸ್ಪಷ್ಟ.

ನಮ್ಮ ದೇಶದ ರೈತರಿಗೆ ಒಕ್ಕಲುತನದಲ್ಲಾದರೂ ಸ್ವಾತಂತ್ರ್ಯ ಉಳಿಯುತ್ತದೆಯೇ?

1965ರಿಂದೀಚೆಗೆ, “ಅಧಿಕ ಇಳುವರಿ ಮಿಶ್ರತಳಿ”ಗಳ ಮೂಲಕ ಉತ್ಪಾದನೆ ಹೆಚ್ಚಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಹುಚ್ಚಿನಿಂದಾಗಿ ಈಗಾಗಲೇ ನಾವು ಹಿಂದಿನಿಂದ ಕಾಪಾಡಿಕೊಂಡಿದ್ದ “ಬೀಜ ಸ್ವಾತಂತ್ರ್ಯ” ಮತ್ತು ಆ ಮೂಲಕ “ಒಕ್ಕಲುತನದ ಸ್ವಾತಂತ್ರ್ಯ”ವನ್ನು ಕಳೆದುಕೊಂಡಿದ್ದೇವೆ. ರೋಗಗಳೊಂದಿಗೆ ತಯಾರಿಸಿದ ಕಂಪೆನಿ ಬೀಜಗಳು ಮತ್ತು ಈ ರೋಗಗಳ ನಿವಾರಣೆಗೆ ಬೇಕಾದ ಕೀಟನಾಶಕ ರಸಾಯನಿಕಗಳಿಗೆ ಈಗಾಗಲೇ ಸಾಕಷ್ಟು ಗುಲಾಮರಾಗಿದ್ದೇವೆ. ಈ ನಡುವೆ, ನಮ್ಮ ದೇಶೀಯ ತಳಿಗಳನ್ನು ಬಿತ್ತದೆಯೇ ನೂರಾರು ತಳಿಗಳನ್ನು ಕಳೆದುಕೊಂಡಿದ್ದೇವೆ.

ಹೀಗಿದ್ದರೂ, ಈ ಮಿಶ್ರತಳಿಗಳನ್ನು ರೈತರು ಮತ್ತೆ ಬಿತ್ತುವ ಅವಕಾಶ ಇದ್ದದ್ದರ ಜೊತೆಗೆ ದೇಶೀಯ ತಳಿಗಳನ್ನು ಬಿತ್ತುವ ಸ್ವಾತಂತ್ರ್ಯವಾದರೂ ಇತ್ತು. ಈ ಅವಕಾಶಗಳಿಗೂ ಕೊಡಲಿ ಪೆಟ್ಟು ಹಾಕಿ ರೈತರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುವ ನಿಯಮಗಳೂ ಈ ವಿಶ್ವವಾಣಿಜ್ಯ ಸಂಸ್ಥೆ ನಿಯಮಗಳಲ್ಲಿ ಸೇರ್ಪಡೆಯಾಗಿವೆ. ಇವುಗಳನ್ನು “ಬೌದ್ಧಿಕ ಹಕ್ಕುಗಳ ನಿಯಮಗಳು” ಎಂದು ಕರೆಯಲಾಗಿದೆ.

ಇವುಗಳ ಪ್ರಕಾರ, ಇನ್ನು ಮುಂದೆ ಬೀಜದ ಕಂಪೆನಿಗಳು ತಾವು ತಯಾರಿಸಿದ ಬಿತ್ತನೆ ಬೀಜಗಳಿಗೆ ಬೌದ್ಧಿಕ ಹಕ್ಕು (ಪೇಟೆಂಟ್) ಪಡೆಯುತ್ತವೆ. ಇದರಿಂದಾಗಿ, ರೈತರು ಮತ್ತೆ ಈ ಬೀಜಗಳನ್ನು ಮುಂದಿನ ಬೆಳೆಗೆ ಬಳಸುವಂತಿಲ್ಲ. ಬಳಸಿದರೆ, ದಂಡ ತೆರಬೇಕಾಗುತ್ತದೆ. ಕಂಪೆನಿ ಬೀಜದ ಸೋಂಕು ರೈತರ ತಳಿಯ ಬೆಳೆಗಳಲ್ಲಿ ಕಂಡಾಗಲೂ ಕಂಪನಿಗಳು ದಂಡಹಾಕಿದ ನಿದರ್ಶನಗಳು ಈಗಾಗಲೇ ಬೇರೆ ದೇಶಗಳಲ್ಲಿ ನಡೆದಿವೆ. ಪ್ರತಿ ಬೆಳೆಗೂ ಕಂಪೆನಿ ಬೀಜಗಳಿಗೆ ಮೊರೆಹೋಗುವ ದುಃಸ್ಥಿತಿ ಬರುತ್ತದೆ.

ಜೊತೆಗೆ, ರೈತರ ತಳಿಗಳಿಂದ ಕಂಪೆನಿ ಬೀಜದ ಬೆಳೆಗಳಿಗೆ ಸೋಂಕು ತಗಲಬಾರದೆಂಬ ಕಾನೂನುಗಳು ಆಗಲಿವೆ. ರೈತರ ತಳಿಗಳನ್ನು ಈಗಾಗಲೇ ಜರ್ಮನಿಯಲ್ಲಿ ನಿಷೇಧಿಸಲಾಗಿದೆ. ರೈತರೇ ತಯಾರು ಮಾಡಿಕೊಂಡ ಬೀಜಗಳಿಗೆ ಫ್ರಾನ್ಸ್ ದೇಶದಲ್ಲಿ ತೆರಿಗೆ ಹಾಕಲಾಗಿದೆ.

ಇದಲ್ಲದೆ, ನಮ್ಮ ದೇಶೀಯ ತಳಿಗಳನ್ನೇ ಅಲ್ಪಸ್ವಲ್ಪ ಬದಲಾಯಿಸಿ ಪರಂಗಿ ಕಂಪೆನಿಗಳು ’ಪೇಟೆಂಟ್ ತೆಗೆದುಕೊಳ್ಳುತ್ತಿವೆ. ಈಗಾಗಲೇ, ಬಾಸುಮತಿ ಅಕ್ಕಿ, ಬೇವು, ಅರಿಸಿನ, ಬದನೆಕಾಯಿ, ಹಾಗಲಕಾಯಿ, ನೇರಳೆಹಣ್ಣು ಇತ್ಯಾದಿಗಳ ಮೇಲೆ ’ಪೇಟೆಂಟ್ ಪ್ರಯತ್ನ’ ನಡೆದಿದೆ. ಹೀಗೆಯೇ ಮುಂದುವರಿಯಲು ಬಿಟ್ಟರೆ ನಮ್ಮ ದೇಶೀಯ ತಳಿಗಳ ಮೇಲೆ ನಮಗೇ ಹಕ್ಕಿಲ್ಲದ ಪರಿಸ್ಥಿತಿ ಬರುತ್ತದೆ.

“ಜೈವಿಕ ತಂತ್ರಜ್ಞಾನ” (BIO-TECHNOLOGY) ಎಂಬ ದೊಡ್ಡ ಗಂಡಾಂತರ

ಮೇಲ್ಕಂಡ ಎಲ್ಲ ಕುತಂತ್ರಗಳಿಗಿಂತ ಘೋರ ಪರಿಣಾಮವುಳ್ಳ ಮತ್ತೊಂದು ಹೊಸ ತಂತ್ರಜ್ಞಾನವನ್ನು ನಮ್ಮಂತಹ ದೇಶದೊಳಕ್ಕೆ ತರುವ ದೊಡ್ಡ ಪ್ರಯತ್ನ ನಡೆದಿದೆ. ಇದನ್ನು “ಜೈವಿಕ ತಂತ್ರಜ್ಞಾನ” ಎನ್ನುತ್ತಾರೆ. ಎಂದರೆ, ಬೇರೆಬೇರೆ ಜಾತಿಯ ತಳಿಗಳ ವಂಶವಾಹಿಯನ್ನು ಬೆರೆಸಿ ಅಧಿಕ ಆಹಾರ ಉತ್ಪಾದನೆ ಮಾಡಬಹುದೆಂದು ಹೇಳಿಕೊಳ್ಳುವ ತಂತ್ರಜ್ಞಾನ. ಕೆಲವು ಬಾರಿ ಬೇರೆಬೇರೆ ಕುಲಗಳಿಗೆ ಸೇರಿದ ಸಸ್ಯಗಳ ವಂಶವಾಹಿಯ ಬೆರಕೆ ಮತ್ತು ಕೆಲವು ಬಾರಿ ಸಸ್ಯಗಳಿಗೆ ಪ್ರಾಣಿಗಳ ವಂಶವಾಹಿ ಬೆರೆಸುವ ತಂತ್ರಜ್ಞಾನ ಇದು. ಇವುಗಳನ್ನು “ಕುಲಾಂತರಿ” ಬೀಜಗಳೆಂದು ಕರೆಯುತ್ತಾರೆ.

ತಕ್ಷಣಕ್ಕೆ, ಬೀಜದ ಕಂಪೆನಿಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಎರಡು ಗುಣಗಳಿರುವ ಕುಲಾಂತರಿ ಬೀಜಗಳನ್ನು. ಅವುಗಳು 1) ಕೀಟ ನಿರೋಧಕ ತಳಿಗಳು ಮತ್ತು 2) ಕಳೆ ನಿರೋಧಕ ತಳಿಗಳು.

ಪ್ರೊ. ಎಂ ಡಿ ನಂಜುಂಡಸ್ವಾಮಿ

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಎರಡನೇ ಭಾಗ. ಭಾರತದ ಕೃಷಿ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಹೇಗೆ ಕಾರಣವಾದವು ಮತ್ತು ಆ ಸಮಸ್ಯೆ ಇಂದಿಗೂ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು. ಮುಂದಿನ ವಾರ: ಜೈವಿಕ ತಂತ್ರಜ್ಞಾನದ ತಳಿಗಳಿಂದ ಆಗುವ ಹಾನಿ)


ಇದನ್ನೂ ಓದಿ: ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಬಿಎಸ್‌ಪಿ ತೀವ್ರ ಆಕ್ರೋಶ, ಕುಟುಂಬಕ್ಕೆ ನೆರವು ನೀಡುವಂತೆ ಸರ್ಕಾರಕ್ಕೆ ಆಗ್ರಹ

ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ದಲಿತ ಮುಖಂಡ ಹಾಗೂ ಯುವಕ ಭೂಮಾನಂದ (32) ಅವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ದೇವದುರ್ಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’: ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ದ್ವೇಷ ಭಾಷಣಕ್ಕೆ ವ್ಯಾಪಕ ಆಕ್ರೋಶ

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’ ಎಂಬ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಯು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆಯು...

ತಪ್ಪಾಗಿ ಸುದ್ದಿ ಪ್ರಕಟ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ....

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...