Homeಮುಖಪುಟಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

- Advertisement -
- Advertisement -

ಮುಂದುವರಿದ ದೇಶಗಳ ಉತ್ಪಾದನೆ ಪ್ರಮಾಣ ಮತ್ತು ಸಬ್ಸಿಡಿ ಪ್ರಮಾಣ

1997ರ ವರದಿಯ ಪ್ರಕಾರ 2004ರೊಳಗಾಗಿ ಯುರೋಪು ಒಕ್ಕೂಟದ ರಾಷ್ಟ್ರಗಳ ಗೋಧಿ ಉತ್ಪಾದನೆ 27 ಮೆಟ್ರಿಕ್ ಟನ್‌ನಿಂದ 450 ಲಕ್ಷ ಮೆಟ್ರಿಕ್ ಟನ್‌ಗಳಿಗೇರಲಿದೆ. ಮತ್ತು ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ 580 ಲಕ್ಷ ಮೆಟ್ರಿಕ್ ಟನ್‌ಗಳಿಗೇರಲಿದೆ. ಹಾಗೆಯೇ, ಅಮೆರಿಕದ ಪ್ರತಿ ಮೂರು ಎಕರೆಗಳಲ್ಲಿ ಒಂದು ಎಕರೆಯಲ್ಲಾಗುವ ಬೆಳೆ ರಫ್ತಿಗಾಗಿಯೇ ಮೀಸಲಾಗಿದೆ. ಹೀಗಾಗಿ, ಹೆಚ್ಚುತ್ತಿರುವ ಈ ಬೆಳೆಗಳಿಗೆ ಅವರು ಹೊಸ ಮಾರುಕಟ್ಟೆಗಳನ್ನು ಹುಡುಕಲೇಬೇಕಾಗಿದೆ.

ಈ ಹೆಚ್ಚುತ್ತಿರುವ ಬೆಳೆಗಳನ್ನು ಕಡಿಮೆ ಬೆಲೆಗಳಲ್ಲಿ ಮಾರಿ ನಮ್ಮಂತಹ ದೇಶಗಳ ಕೃಷಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಈ ಮುಂದುವರಿದ ದೇಶಗಳು ಬಹಳ ದೊಡ್ಡ ಪ್ರಮಾಣದ ಹಣವನ್ನು ಕೃಷಿ ಸಹಾಯಧನವಾಗಿ ಖರ್ಚು ಮಾಡುತ್ತಿವೆ. “ಒಇಸಿಡಿ” (OECD) ಎಂದು ಕರೆಯಲ್ಪಡುವ ರಾಷ್ಟ್ರಗಳಾದ ಈ ದೇಶಗಳ ಒಟ್ಟು ಕೃಷಿ ಸಹಾಯಧನದ ಮೊತ್ತ 1995ರಲ್ಲಿ 1,82,000 ಕೋಟಿ ಡಾಲರ್ (ಅಥವಾ 80,00,000 ಕೋಟಿ ರೂಪಾಯಿ) ಗಳಿದ್ದದ್ದು, 1997ಕ್ಕೆ 2,80,000 ಕೋಟಿ ಡಾಲರ್ (ಅಥವಾ 2,23,20,000 ಕೋಟಿ ರೂಪಾಯಿ) ಗಳಿಗೇರಿತ್ತು. ಇದರಲ್ಲಿ ಯುರೋಪ್ ಒಕ್ಕೂಟ ಮತ್ತು ಆಮೆರಿಕ ದೇಶಗಳದೇ ದೊಡ್ಡ ಪಾಲು.

ಈ ಕಾರಣವೇ, ಈಗಾಗಲೇ ಈ ದೇಶಗಳ ಕೃಷಿ ಹೆಚ್ಚುವರಿಯೆಲ್ಲ ನಮ್ಮಂತಹ ದೇಶಗಳ ಮಾರುಕಟ್ಟೆಯೊಳಕ್ಕೆ ನುಗ್ಗಿ ನಾವು ಬೆಳೆದ ಬೆಳೆಗಳಿಗೆ ನ್ಯಾಯಬೆಲೆ ದೊರಕದ ಸ್ಥಿತಿ ನಿರ್ಮಾಣವಾಗುತ್ತಿರುವುದು.

ಜೊತೆಗೆ, ಆಗಿನ ಬಿಜೆಪಿ ಸರ್ಕಾರ, ಬೇರೆ ದೇಶಗಳ ಆಮದುಗಳಿಗೆ ಹಿಂದೆ ಇದ್ದ ಪ್ರಮಾಣದ ನಿಯಂತ್ರಣವನ್ನು ರದ್ದುಮಾಡಿದೆ. ಇದರಿಂದಾಗಿ ಹೊರದೇಶದಿಂದ ಕೃಷಿ ವಸ್ತುಗಳು ಯಾವುದೇ ಪ್ರಮಾಣದಲ್ಲಿ ಬೇಕಾದರೂ ನಮ್ಮ ಕೃಷಿ ಮಾರುಕಟ್ಟೆ ಪ್ರವೇಶ ಮಾಡಬಹುದು.

ನಮ್ಮ ದೇಶದ ರೈತರಿಗೆ ಹೊರದೇಶದ ಮಾರುಕಟ್ಟೆಗೆ ರಫ್ತು ಮಾಡಲು ಅವಕಾಶವಿದೆಯೇ?

ಮೇಲ್ಕಂಡ ಸಬ್ಸಿಡಿ ಮತ್ತು ಮಾರುಕಟ್ಟೆ ಕುತಂತ್ರದ ಜೊತೆಗೇ, ಈ ಮುಂದುವರಿದ ರಾಷ್ಟ್ರಗಳು ತಮ್ಮ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಕುತಂತ್ರದ ನಿಯಮಗಳನ್ನು ಈ ವಿಶ್ವವ್ಯಾಪಾರಿ ಸಂಸ್ಥೆಯ ಒಪ್ಪಂದದೊಳಗೆ ಸೇರಿಸಿವೆ. ಇದನ್ನು “ಆರೋಗ್ಯ ನಿಯಮಗಳು” ಎಂದು ಕರೆಯಲಾಗಿದೆ. ತಮಗಿಚ್ಛೆ ಬಂದಂತೆ, ತಮ್ಮ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು, ಯಾವುದೇ ದೇಶದ ಬೆಳೆಯನ್ನು ಮಾನವ ಅಥವಾ ಪ್ರಾಣಿಗಳ ಆರೋಗ್ಯಕ್ಕೆ ಯೋಗ್ಯವಲ್ಲವೆಂದು ತಿರಸ್ಕರಿಸಬಹುದಾದ ನಿಯಮ ಇದಾಗಿದೆ.

ಉದಾಹರಣೆಗೆ, ಈ ನಿಯಮಗಳು ಪೈಪೋಟಿಯಲ್ಲಿರುವ ಅಮೆರಿಕಾ ಮತ್ತು ಯುರೋಪ ದೇಶಗಳ ನಡುವೆಯೇ ಚಾಲ್ತಿಗೆ ಬಂದವು. ಹಾರ್ಮೋನುಗಳ ಮೂಲಕ ತಯಾರಾದ ಅಮೆರಿಕದ ದನದ ಮಾಂಸವನ್ನು ಮತ್ತು ಅಲ್ಲಿನ ವಂಶವಾಹಿ ವಿಕೃತ ಸೋಯಾ ಅವರೆಯನ್ನು ಯೂರೋಪು ಒಕ್ಕೂಟ ದೇಶಗಳು ಸಾರ್ವಜನಿಕ ಆರೋಗ್ಯ ಸುರಕ್ಷತೆಯ ಕಾರಣಕೊಟ್ಟು ನಿಷೇಧಿಸಿದ ಕಾರಣ, ಅಮೆರಿಕ ತನ್ನ ಸಬ್ಸಿಡಿಗಳನ್ನು ಹೆಚ್ಚಿಸುವ ಮೂಲಕ ಯೂರೋಪಿನ ಮಾರುಕಟ್ಟೆಯನ್ನೇ ನಾಶಮಾಡುವ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದೆ. ಹೀಗಿರುವಾಗ, ನಮ್ಮ ದೇಶಗಳ ರಫ್ತಿನ ಗತಿಯೇನಾಗಬಹುದು ಎನ್ನುವುದು ಸ್ಪಷ್ಟ.

ನಮ್ಮ ದೇಶದ ರೈತರಿಗೆ ಒಕ್ಕಲುತನದಲ್ಲಾದರೂ ಸ್ವಾತಂತ್ರ್ಯ ಉಳಿಯುತ್ತದೆಯೇ?

1965ರಿಂದೀಚೆಗೆ, “ಅಧಿಕ ಇಳುವರಿ ಮಿಶ್ರತಳಿ”ಗಳ ಮೂಲಕ ಉತ್ಪಾದನೆ ಹೆಚ್ಚಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಹುಚ್ಚಿನಿಂದಾಗಿ ಈಗಾಗಲೇ ನಾವು ಹಿಂದಿನಿಂದ ಕಾಪಾಡಿಕೊಂಡಿದ್ದ “ಬೀಜ ಸ್ವಾತಂತ್ರ್ಯ” ಮತ್ತು ಆ ಮೂಲಕ “ಒಕ್ಕಲುತನದ ಸ್ವಾತಂತ್ರ್ಯ”ವನ್ನು ಕಳೆದುಕೊಂಡಿದ್ದೇವೆ. ರೋಗಗಳೊಂದಿಗೆ ತಯಾರಿಸಿದ ಕಂಪೆನಿ ಬೀಜಗಳು ಮತ್ತು ಈ ರೋಗಗಳ ನಿವಾರಣೆಗೆ ಬೇಕಾದ ಕೀಟನಾಶಕ ರಸಾಯನಿಕಗಳಿಗೆ ಈಗಾಗಲೇ ಸಾಕಷ್ಟು ಗುಲಾಮರಾಗಿದ್ದೇವೆ. ಈ ನಡುವೆ, ನಮ್ಮ ದೇಶೀಯ ತಳಿಗಳನ್ನು ಬಿತ್ತದೆಯೇ ನೂರಾರು ತಳಿಗಳನ್ನು ಕಳೆದುಕೊಂಡಿದ್ದೇವೆ.

ಹೀಗಿದ್ದರೂ, ಈ ಮಿಶ್ರತಳಿಗಳನ್ನು ರೈತರು ಮತ್ತೆ ಬಿತ್ತುವ ಅವಕಾಶ ಇದ್ದದ್ದರ ಜೊತೆಗೆ ದೇಶೀಯ ತಳಿಗಳನ್ನು ಬಿತ್ತುವ ಸ್ವಾತಂತ್ರ್ಯವಾದರೂ ಇತ್ತು. ಈ ಅವಕಾಶಗಳಿಗೂ ಕೊಡಲಿ ಪೆಟ್ಟು ಹಾಕಿ ರೈತರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುವ ನಿಯಮಗಳೂ ಈ ವಿಶ್ವವಾಣಿಜ್ಯ ಸಂಸ್ಥೆ ನಿಯಮಗಳಲ್ಲಿ ಸೇರ್ಪಡೆಯಾಗಿವೆ. ಇವುಗಳನ್ನು “ಬೌದ್ಧಿಕ ಹಕ್ಕುಗಳ ನಿಯಮಗಳು” ಎಂದು ಕರೆಯಲಾಗಿದೆ.

ಇವುಗಳ ಪ್ರಕಾರ, ಇನ್ನು ಮುಂದೆ ಬೀಜದ ಕಂಪೆನಿಗಳು ತಾವು ತಯಾರಿಸಿದ ಬಿತ್ತನೆ ಬೀಜಗಳಿಗೆ ಬೌದ್ಧಿಕ ಹಕ್ಕು (ಪೇಟೆಂಟ್) ಪಡೆಯುತ್ತವೆ. ಇದರಿಂದಾಗಿ, ರೈತರು ಮತ್ತೆ ಈ ಬೀಜಗಳನ್ನು ಮುಂದಿನ ಬೆಳೆಗೆ ಬಳಸುವಂತಿಲ್ಲ. ಬಳಸಿದರೆ, ದಂಡ ತೆರಬೇಕಾಗುತ್ತದೆ. ಕಂಪೆನಿ ಬೀಜದ ಸೋಂಕು ರೈತರ ತಳಿಯ ಬೆಳೆಗಳಲ್ಲಿ ಕಂಡಾಗಲೂ ಕಂಪನಿಗಳು ದಂಡಹಾಕಿದ ನಿದರ್ಶನಗಳು ಈಗಾಗಲೇ ಬೇರೆ ದೇಶಗಳಲ್ಲಿ ನಡೆದಿವೆ. ಪ್ರತಿ ಬೆಳೆಗೂ ಕಂಪೆನಿ ಬೀಜಗಳಿಗೆ ಮೊರೆಹೋಗುವ ದುಃಸ್ಥಿತಿ ಬರುತ್ತದೆ.

ಜೊತೆಗೆ, ರೈತರ ತಳಿಗಳಿಂದ ಕಂಪೆನಿ ಬೀಜದ ಬೆಳೆಗಳಿಗೆ ಸೋಂಕು ತಗಲಬಾರದೆಂಬ ಕಾನೂನುಗಳು ಆಗಲಿವೆ. ರೈತರ ತಳಿಗಳನ್ನು ಈಗಾಗಲೇ ಜರ್ಮನಿಯಲ್ಲಿ ನಿಷೇಧಿಸಲಾಗಿದೆ. ರೈತರೇ ತಯಾರು ಮಾಡಿಕೊಂಡ ಬೀಜಗಳಿಗೆ ಫ್ರಾನ್ಸ್ ದೇಶದಲ್ಲಿ ತೆರಿಗೆ ಹಾಕಲಾಗಿದೆ.

ಇದಲ್ಲದೆ, ನಮ್ಮ ದೇಶೀಯ ತಳಿಗಳನ್ನೇ ಅಲ್ಪಸ್ವಲ್ಪ ಬದಲಾಯಿಸಿ ಪರಂಗಿ ಕಂಪೆನಿಗಳು ’ಪೇಟೆಂಟ್ ತೆಗೆದುಕೊಳ್ಳುತ್ತಿವೆ. ಈಗಾಗಲೇ, ಬಾಸುಮತಿ ಅಕ್ಕಿ, ಬೇವು, ಅರಿಸಿನ, ಬದನೆಕಾಯಿ, ಹಾಗಲಕಾಯಿ, ನೇರಳೆಹಣ್ಣು ಇತ್ಯಾದಿಗಳ ಮೇಲೆ ’ಪೇಟೆಂಟ್ ಪ್ರಯತ್ನ’ ನಡೆದಿದೆ. ಹೀಗೆಯೇ ಮುಂದುವರಿಯಲು ಬಿಟ್ಟರೆ ನಮ್ಮ ದೇಶೀಯ ತಳಿಗಳ ಮೇಲೆ ನಮಗೇ ಹಕ್ಕಿಲ್ಲದ ಪರಿಸ್ಥಿತಿ ಬರುತ್ತದೆ.

“ಜೈವಿಕ ತಂತ್ರಜ್ಞಾನ” (BIO-TECHNOLOGY) ಎಂಬ ದೊಡ್ಡ ಗಂಡಾಂತರ

ಮೇಲ್ಕಂಡ ಎಲ್ಲ ಕುತಂತ್ರಗಳಿಗಿಂತ ಘೋರ ಪರಿಣಾಮವುಳ್ಳ ಮತ್ತೊಂದು ಹೊಸ ತಂತ್ರಜ್ಞಾನವನ್ನು ನಮ್ಮಂತಹ ದೇಶದೊಳಕ್ಕೆ ತರುವ ದೊಡ್ಡ ಪ್ರಯತ್ನ ನಡೆದಿದೆ. ಇದನ್ನು “ಜೈವಿಕ ತಂತ್ರಜ್ಞಾನ” ಎನ್ನುತ್ತಾರೆ. ಎಂದರೆ, ಬೇರೆಬೇರೆ ಜಾತಿಯ ತಳಿಗಳ ವಂಶವಾಹಿಯನ್ನು ಬೆರೆಸಿ ಅಧಿಕ ಆಹಾರ ಉತ್ಪಾದನೆ ಮಾಡಬಹುದೆಂದು ಹೇಳಿಕೊಳ್ಳುವ ತಂತ್ರಜ್ಞಾನ. ಕೆಲವು ಬಾರಿ ಬೇರೆಬೇರೆ ಕುಲಗಳಿಗೆ ಸೇರಿದ ಸಸ್ಯಗಳ ವಂಶವಾಹಿಯ ಬೆರಕೆ ಮತ್ತು ಕೆಲವು ಬಾರಿ ಸಸ್ಯಗಳಿಗೆ ಪ್ರಾಣಿಗಳ ವಂಶವಾಹಿ ಬೆರೆಸುವ ತಂತ್ರಜ್ಞಾನ ಇದು. ಇವುಗಳನ್ನು “ಕುಲಾಂತರಿ” ಬೀಜಗಳೆಂದು ಕರೆಯುತ್ತಾರೆ.

ತಕ್ಷಣಕ್ಕೆ, ಬೀಜದ ಕಂಪೆನಿಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಎರಡು ಗುಣಗಳಿರುವ ಕುಲಾಂತರಿ ಬೀಜಗಳನ್ನು. ಅವುಗಳು 1) ಕೀಟ ನಿರೋಧಕ ತಳಿಗಳು ಮತ್ತು 2) ಕಳೆ ನಿರೋಧಕ ತಳಿಗಳು.

ಪ್ರೊ. ಎಂ ಡಿ ನಂಜುಂಡಸ್ವಾಮಿ

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಎರಡನೇ ಭಾಗ. ಭಾರತದ ಕೃಷಿ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಹೇಗೆ ಕಾರಣವಾದವು ಮತ್ತು ಆ ಸಮಸ್ಯೆ ಇಂದಿಗೂ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು. ಮುಂದಿನ ವಾರ: ಜೈವಿಕ ತಂತ್ರಜ್ಞಾನದ ತಳಿಗಳಿಂದ ಆಗುವ ಹಾನಿ)


ಇದನ್ನೂ ಓದಿ: ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...