Homeಮುಖಪುಟಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-3

ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-3

- Advertisement -
- Advertisement -

“ಜೈವಿಕ ತಂತ್ರಜ್ಞಾನ” (BIO-TECHNOLOGY) ಎಂಬ ದೊಡ್ಡ ಗಂಡಾಂತರ

ಘೋರ ಪರಿಣಾಮವುಳ್ಳ ಮತ್ತೊಂದು ಹೊಸ ತಂತ್ರಜ್ಞಾನವನ್ನು ನಮ್ಮಂತಹ ದೇಶದೊಳಕ್ಕೆ ತರುವ ದೊಡ್ಡ ಪ್ರಯತ್ನ ನಡೆದಿದೆ. ಇದನ್ನು “ಜೈವಿಕ ತಂತ್ರಜ್ಞಾನ” ಎನ್ನುತ್ತಾರೆ. ಎಂದರೆ, ಬೇರೆಬೇರೆ ಜಾತಿಯ ತಳಿಗಳ ವಂಶವಾಹಿಯನ್ನು ಬೆರೆಸಿ ಅಧಿಕ ಆಹಾರ ಉತ್ಪಾದನೆ ಮಾಡಬಹುದೆಂದು ಹೇಳಿಕೊಳ್ಳುವ ತಂತ್ರಜ್ಞಾನ, ಕೆಲವು ಬಾರಿ ಬೇರೆಬೇರೆ ಕುಲಗಳಿಗೆ ಸೇರಿದ ಸಸ್ಯಗಳ ವಂಶವಾಹಿಯ ಬೆರಕೆ ಮತ್ತು ಕೆಲವು ಬಾರಿ ಸಸ್ಯಗಳಿಗೆ ಪ್ರಾಣಿಗಳ ವಂಶವಾಹಿ ಬೆರೆಸುವ ತಂತ್ರಜ್ಞಾನ ಇದು. ಇವುಗಳನ್ನು “ಕುಲಾಂತರಿ” ಬೀಜಗಳೆಂದು ಕರೆಯುತ್ತಾರೆ.

ತಕ್ಷಣಕ್ಕೆ, ಬೀಜದ ಕಂಪೆನಿಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಎರಡು ಗುಣಗಳಿರುವ ಕುಲಾಂತರಿ ಬೀಜಗಳನ್ನು, ಅಂದರೆ 1) ಕೀಟ ನಿರೋಧಕ ತಳಿಗಳು ಮತ್ತು 2) ಕಳೆ ನಿರೋಧಕ ತಳಿಗಳು.

ಕೀಟ ನಿರೋಧಕ ತಳಿಗಳಿಂದಾಗುವ ಹಾನಿಗಳು

ಬೀಜದ ಕಂಪೆನಿಗಳು (ಉದಾ: ಮನ್ಸಾಂಟೋ ಕಂಪೆನಿ) ನಮ್ಮ ದೇಶದಲ್ಲಿ ಪ್ರಯೋಗ ಮಾಡುತ್ತಿರುವ ಕೀಟ ನಿರೋಧಕ ತಳಿ ಬಿಟಿ (BT) ತಂತ್ರಜ್ಞಾನದ್ದು. ಬಿಟಿ (BT) ಎಂದರೆ “ಬ್ಯಾಸಿಲಸ್ ತುರಿಂಗಿಯೆನ್ಸಿಸ್” ಎಂದು. ಇದು ಒಂದು ಸೂಕ್ಷ್ಮಜೀವಿ. ಇದು ಕೀಟಗಳನ್ನು ನಾಶಮಾಡುವ ವಿಷವನ್ನು ಹೊಂದಿರುವ ಸೂಕ್ಷ್ಮ ಪ್ರಾಣಿ. ಇದನ್ನು ಹತ್ತಿ ಬೀಜದೊಳಕ್ಕೆ ಜೈವಿಕ ತಂತ್ರಜ್ಞಾನದ ಮೂಲಕ ಅಳವಡಿಸುವುದರಿಂದ, ಹತ್ತಿಯ ಗಿಡ ಬೆಳೆಯುತ್ತಾ ತನ್ನ ಎಲ್ಲ ಭಾಗಗಳಲ್ಲಿ ಕೀಟನಾಶಕ ವಿಷವನ್ನು ಉತ್ಪಾದಿಸುತ್ತದೆಯಾದ್ದರಿಂದ, ಇಂತಹ ಗಿಡದ ಯಾವುದೇ ಭಾಗವನ್ನು ಹತ್ತಿಯ ಕಾಯಿ ಕೊರೆಯುವ ಹುಳು ತಿಂದ ಕೂಡಲೇ ಸಾಯುತ್ತದೆ. ರೈತರು ಈ ಕೀಟವನ್ನು ನಾಶಮಾಡಲು ಖರ್ಚು ಮಾಡಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವ ಹತ್ತಿ ತಳಿ ಇದೆಂದು ಕಂಪನಿಯವರ ಪ್ರಚಾರ.

ಆದರೆ, ಈ ತಳಿಯ ಬಳಕೆಯಿಂದಾಗುವ ಪರಿಣಾಮಗಳೇ ಬೇರೆ

ಮೊದಲನೆಯದಾಗಿ, ಈ ಹತ್ತಿಕಾಯಿ ಕೊರೆಯುವ ಹುಳುಗಳು ಈ ಗಿಡದಲ್ಲಿರುವ ವಿಷಕ್ಕೆ ನಿರೋಧಕ ಶಕ್ತಿ ಬೆಳೆಸಿಕೊಂಡುಬಿಡುತ್ತವೆ. (ಮಲೇರಿಯಾ ಸೊಳ್ಳೆಗಳು ಡಿಡಿಟಿಗೆ ನಿರೋಧಕ ಶಕ್ತಿ ಬೆಳೆಸಿಕೊಂಡಿರುವ ರೀತಿಯಲ್ಲಿ). ಅನಂತರ ಅವು ಸಾಯುವುದೇ ಇಲ್ಲ. ಜೊತೆಗೆ ಬೇರೆ ಕೀಟಗಳೊಂದಿಗಿನ ಲೈಂಗಿಕ ಸಂಪರ್ಕದಿಂದಾಗಿ ಕೀಟನಾಶಕ ನಿರೋಧಕ ಶಕ್ತಿಯಿರುವ ಮರಿಗಳನ್ನೇ ಹುಟ್ಟಿಸುತ್ತವೆ. ಈ ಕೀಟನಾಶಕ ನಿರೋಧಕ ಶಕ್ತಿಯಿರುವ ಸಂತಾನಾಭಿವೃದ್ಧಿಯಿಂದಾಗಿ, ನಂತರ ಎಷ್ಟೇ ಕೀಟನಾಶಕ ಬಳಸಿದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. (ಆಂಧ್ರಪ್ರದೇಶದಲ್ಲಿ ಆದದ್ದು ಹೀಗೆಯೇ ಹೀಗಾಗಿಯೇ. ಅಲ್ಲಿಯ 500-600 ಹತ್ತಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡದ್ದು).

ಎರಡನೆಯದಾಗಿ, ಈ ’ಬಿಟಿ’ ವಿಷ ಕೇವಲ ಹತ್ತಿಕಾಯಿ ಕೊರೆಯುವ ಹುಳುವನ್ನು ಸಾಯಿಸಲು ನಿರ್ದಿಷ್ಟವಾಗಿ ತಯಾರಾದದ್ದೇನಲ್ಲ. ಇದು ಎಲ್ಲ ಜೀವಿಗಳನ್ನು, ಇತರ ಕೀಟಗಳನ್ನು ಕೊಲ್ಲುವಂತಹ ವಿಷ. ಹಾಗೆಯೇ, ಈ ವಿಷವು ಗಿಡದ ಎಲ್ಲ ಭಾಗಗಳಲ್ಲಿ ಉತ್ಪಾದನೆಯಾಗುವುದರಿಂದ, ಬೇರುಗಳ ಮೂಲಕ ಹಾಗೂ ನೆಲಕ್ಕೆ ಉದುರುವ ಎಲೆಗಳಲ್ಲಿರುವ ವಿಷ ಮಣ್ಣಿನೊಂದಿಗೆ ಬೆರೆತು ಮಣ್ಣಿನಲ್ಲಿರುವ, ಭೂಮಿಯ ಫಲವತ್ತತೆಗೆ ಅತ್ಯವಶ್ಯಕವಾದ ಸೂಕ್ಷ್ಮಾಣುಜೀವಿಗಳನ್ನು ಮತ್ತು ಎಲ್ಲ ರೀತಿಯ “ಬೂಷ್ಟ”ಗಳನ್ನು (Fungi) ಸಾಯಿಸುತ್ತದೆ. ಇದರಿಂದಾಗಿ, ಭೂಮಿಯ ಫಲವತ್ತತೆ ಬಹುಬೇಗ ನಾಶವಾಗುತ್ತದೆ.

ಮೂರನೆಯದಾಗಿ, ಈ ಗಿಡದ ವಿಷ ಬೇರೆ ಎಲ್ಲ ಕೀಟಗಳನ್ನು ತಿನ್ನುವ ಮಿತ್ರ ಕೀಟಗಳನ್ನು ಸಾಯಿಸಿಬಿಡುವುದರಿಂದ ಬೆಳೆಗಳಿಗೆ ಬೇರೆಬೇರೆ ರೋಗಗಳು ತಗುಲಿಕೊಳ್ಳುತ್ತವೆ. ಹತ್ತಿಯಲ್ಲದೆ ಬೇರೆ ಬೆಳೆಗಳಿಗೂ ಇದರಿಂದಾಗಿ ರೋಗಗಳು ಹೆಚ್ಚಾಗುತ್ತವೆ. ಇದಲ್ಲದೆ, ಕೀಟಗಳನ್ನು ತಿನ್ನುವ ಪಕ್ಷಿಗಳೂ ಈ ವಿಷದಿಂದಾಗಿ ಸತ್ತಿರುವುದೂ ಗಮನಕ್ಕೆ ಬಂದಿದೆ. ಈ ಕಾರಣದಿಂದಲೂ ಬೆಳೆರೋಗಗಳು ಹೆಚ್ಚಾಗುತ್ತವೆ.

ಇವೆಲ್ಲಕ್ಕಿಂತ, ಈ ’ಬಿಟಿ’ ತಳಿಯಿಂದಾಗುವ ಹಾನಿಯೇನೆಂದರೆ, ಈ ತಳಿಯ ಪರಾಗ ಸುಮಾರು 2 ಕಿಲೋಮೀಟರ್‌ವರೆಗೂ ಗಾಳಿಯಲ್ಲಿ ಪ್ರಯಾಣ ಮಾಡುತ್ತವೆ. ನಮ್ಮ ಎಲ್ಲ ದೇಶೀಯ ತಳಿಗಳಿಗೂ, ಇದರ “ಪರಾಗ ಮಾಲಿನ್ಯ”ದಿಂದಾಗಿ, ಇದರ ಎಲ್ಲ ಗುಣಗಳೂ ವರ್ಗಾವಣೆಯಾಗಿ ಕ್ರಮೇಣ ನಮ್ಮ ಎಲ್ಲ ದೇಶೀಯ ತಳಿಗಳೂ ನಾಶವಾಗುತ್ತವೆ. ನಮ್ಮ ಜೈವಿಕ ವೈವಿಧ್ಯತೆಯಂತಹ ಅಮೂಲ್ಯ ಸಂಪತ್ತು ಶಾಶ್ವತವಾಗಿ ನಾಶವಾಗುತ್ತವೆ.

ಕಳೆ ನಿರೋಧಕ ತಳಿಗಳಿಂದಾಗುವ ಹಾನಿಗಳು

ಈಗಾಗಲೇ ನಮ್ಮ ದೇಶದಲ್ಲಿ ಬೀಜದ ಕಂಪನಿಗಳು (ಮಾನ್ಸಾಂಟೊ) ಮಾರಾಟ ಮಾಡುತ್ತಿರುವ ಕಳೆ ನಿರೋಧಕ ತಳಿಯೆಂದರೆ “ರೌಂಡ್ ಅಪ್ ರೆಡಿ” – ROUND UP READY ಎನ್ನುವ ತಳಿಗಳು. “ರೌಂಡ್ ಅಪ್ ರೆಡಿ” ಎನ್ನುವುದು ಈ ಕಂಪನಿ ತಯಾರು ಮಾಡಿರುವ ಕಳೆನಾಶಕ. ಈ ಕಳೆನಾಶಕ ಉಪಯೋಗಿಸುವುದರಿಂದ, ಈ ಕಂಪೆನಿ ಕೊಡುವ “ರೌಂಡ್ ಅಪ್ ರೆಡಿ” ತಳಿಯೊಂದನ್ನು ಬಿಟ್ಟು ಮಿಕ್ಕೆಲ್ಲ ಕಳೆಗಳೂ ನಾಶವಾಗುತ್ತವೆ. ಈ ಕಾರಣ ರೈತರ ಕಳೆ ತೆಗೆಯುವ ಖರ್ಚಿನ ಉಳಿತಾಯವಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ತೆಗೆಯಬಹುದೆಂಬುದು ಈ ಕಂಪನಿಯ ಪ್ರಚಾರ.

ಆದರೆ, ಈ ತಳಿಯ ಮತ್ತು ಈ ಕಳೆನಾಶಕದ ಬಳಕೆಯಿಂದಾಗುವ ಪರಣಾಮಗಳೇ ಬೇರೆ.

ಮೊದಲನೆಯದಾಗಿ, ಈ “ರೌಂಡ್ ಅಪ್” ಎನ್ನುವ ರಸಾಯನಿಕವು, ಅಮೆರಿಕ ದೇಶವು ವಿಯೆಟ್ನಾಂ ದೇಶದ ಮೇಲೆ ಯುದ್ಧಮಾಡುವಾಗ ವಿಯೆಟ್ನಾಂನ ಕಾಡುಗಳನ್ನು ನಾಶಮಾಡಲು ಉಪಯೋಗಿಸಿದ ರಸಾಯನಿಕ. ಇದು ಯಾವುದೇ ವಿಶಿಷ್ಟ ಕಳೆಗಳನ್ನು ನಾಶಮಾಡಲು ತಯಾರುಮಾಡಿದ ರಸಾಯನಿಕವಲ್ಲ. ಹೀಗಾಗಿ, ಇದೇ ಕಂಪನಿ ತಯಾರುಮಾಡಿದ, ಈ ರಸಾಯನಿಕಕ್ಕೆ ನಿರೋಧಕ ಶಕ್ತಿಯಿರುವ ತಳಿಗಳು ಮಾತ್ರ ಬದುಕುಳಿಯುತ್ತವೆಯೇ ಹೊರತು, ಮಿಕ್ಕೆಲ್ಲ ಸಸ್ಯ ಸಂಪತ್ತು ಶಾಶ್ವತವಾಗಿ ನಾಶವಾಗುತ್ತವೆ. ನಮ್ಮ ದೇಶೀಯ ತಳಿಗಳೆಲ್ಲ ನಾಶವಾಗುತ್ತವೆ.

ಎರಡನೆಯದಾಗಿ, ಈ “ರೌಂಡ್ ಅಪ್” ರಸಾಯನಿಕ ಬಳಕೆಯಿಂದ ಮಣ್ಣಿನಲ್ಲಿರುವ ಎಲ್ಲ ಸೂಕ್ಷ್ಮಾಣುಗಳೂ ಸಾಯುತ್ತವೆ. ಎಲ್ಲ “ಬೂಸ್ಟ್” (Fungi) ಸಾಯುತ್ತವೆ, ಹೀಗಾಗಿ ಮಣ್ಣು ಫಲವತ್ತತೆ ಕಳೆದುಕೊಂಡು ಬರಡಾಗುತ್ತದೆ.

ಇದೆಲ್ಲಕ್ಕಿಂತ ಘೋರ ಅಪಾಯವೇನೆಂದರೆ, ಈ ರಸಾಯನಿಕದಲ್ಲಿ “ಏಜೆಂಟ್ ಆರೆಂಜ್” (Agent orange)ಎಂಬ ವಿಷವಿದೆ. 25 ವರ್ಷಗಳ ಹಿಂದೆ ನಡೆದ ವಿಯಟ್ನಾಂ ಯುದ್ಧದಲ್ಲಿ ಈ ರಸಾಯನಿಕದ ಸೋಂಕು ತಗುಲಿದ ಜನರಿಗೆ ಈಗಲೂ ಅಂಗವಿಕಲ ಮಕ್ಕಳು ಹುಟ್ಟುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಲೂ ಅಮೆರಿಕದ ವಿರುದ್ಧ ಕಾನೂನು ಕಟ್ಟಳೆಗಳು ನಡೆಯುತ್ತಿವೆ. ಈ ರಸಾಯನಿಕ ಬಳಸುತ್ತಿರುವ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಈ ಆಪಾಯ ಕಾದಿದೆ. ನೇರ ಸಂಪರ್ಕ ಅಥವಾ ಕುಡಿಯುವ ನೀರು ಮತ್ತು ಆಹಾರದ ಜೊತೆಗೆ ಸೋಂಕು ತಗಲುವ ಕಾರಣದಿಂದ.

ವಂಶವಾಹಿ ಬೆರಕೆ (Genetically Modified food) ಆಹಾರದಿಂದಾಗುವ ಹಾನಿಗಳು

ಇತ್ತೀಚೆಗೆ, ಅಧಿಕ ಇಳುವರಿ ಕಾರಣ ಕೊಟ್ಟು ಜೈವಿಕತಂತ್ರಜ್ಞಾನದ ಮೂಲಕ ವಂಶವಾಹಿ ವಿಕೃತ ತಳಿಗಳನ್ನು ತಯಾರಿಸಲಾಗುತ್ತಿದೆ. ಈ ತಂತ್ರಜ್ಞಾನದಲ್ಲಿ ಪ್ರಾಣಿಗಳ ವಂಶವಾಹಿಯನ್ನು ಸಸ್ಯಗಳಿಗೆ ಕೊಡಿಸುವುದು ಬಹುದೊಡ್ಡ ಕಾರ್ಯಕ್ರಮವಾಗಿದೆ. ಅದರಲ್ಲಿಯೂ ಸಸ್ತನಿಗಳ (mammal) ವಂಶವಾಹಿಯನ್ನು ಅದರಲ್ಲಿಯೂ ಮಾನವನ ವಂಶವಾಹಿಯನ್ನು ಕೂಡಿಸಿ ತಯಾರುಮಾಡುವ ಸಸ್ಯದ ತಳಿಗಳು ಮಾರಾಟಕ್ಕೆ ಬರಲಿವೆ. ಇದಕ್ಕಿಂತ ದೊಡ್ಡ ಅಪಾಯ ಎಂದರೆ ಮಾನವನಿಗೆ ರೋಗ ತರುವ ರೋಗಾಣುಗಳನ್ನು ಕೂಡಿಸಿ ತಯಾರಿಸಿದ ಸಸ್ಯಗಳ ತಳಿಗಳೂ ಮಾರಾಟಕ್ಕೆ ಬರಲಿವೆ.

ಇಂತಹ ವಂಶವಾಹಿ ಬೆರಕೆ ಬೆಳೆಗಳಿಂದ ಬೆಳೆಯಲಾದ ವಂಶವಾಹಿ ವಿಕೃತ ಅಹಾರ ಸೇವನೆಯಿಂದ ಮಾನವನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ವಿಜ್ಞಾನಿಗಳು ಈಗಾಗಲೇ ಕಂಡುಕೊಂಡಿದ್ದಾರೆ.

ಮೊದಲನೆಯದಾಗಿ, ಮಾನವನ ಕರುಳಿನಲ್ಲಿರುವ ರಸಗಳಿಗೆ ಇಂತಹ ಆಹಾರದಲ್ಲಿ ಬರುವ ಜೈವಾಂಶಗಳನ್ನೆಲ್ಲ (DNA) ಅರಗಿಸಿಕೊಳ್ಳಬಲ್ಲ ಶಕ್ತಿಯಿಲ್ಲವೆಂಬುದು ಹಾಗೂ ಈ ಹೊರಗಿನ ಜೈವಾಂಶಗಳು ಬದುಕುಳಿದು ಮಾನವನ ರಕ್ತಸಂಚಾರದೊಳಗೆ ಸೇರುತ್ತವೆ ಎನ್ನುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಇವು ಮಾನವನ ಹಾಗೂ ಪ್ರಾಣಿಗಳ ಗುಲ್ಮ ಮತ್ತು ಪಿತ್ತಜನಕಾಂಗಗಳನ್ನೂ ಪ್ರವೇಶಿಸುವುದರ ಜೊತೆಗೆ ಬಿಳಿ ರಕ್ತಕಣಗಳೊಳಕ್ಕೂ ಪ್ರವೇಶ ಮಾಡುತ್ತವೆ. ಇದರಿಂದಾಗಿ, ವಿವಿಧ ರೀತಿಯ “ಅಲರ್ಜಿನಿಕ್” (Allergenic) ಅಂದರೆ, ತುರಿಕೆ ರೋಗಗಳು ಬರುತ್ತವೆ.

ರೋಗ ನಿರೋಧಕಗಳಿಗೆ ನಿರೋಧಕ ಶಕ್ತಿಯಿರುವ ವಂಶವಾಹಿಗಳು ಮಾನವನ ಕರುಳನ್ನು, ಆ ಮೂಲಕ ಮಾನವನ ರಕ್ತ ಸಂಚಾರವನ್ನು, ಆ ಮೂಲಕ ಮಾನವನ ವಂಶವಾಹಿ ರಚನೆಯನ್ನೇ ಪ್ರವೇಶ ಮಾಡುವುದರಿಂದ ಮಾನವನಿಗೆ ಕೂಡ ರೋಗ ನಿರೋಧಕಗಳಿಗೆ ನಿರೋಧಕ (STEROID RESISTANCE) ಗುಣಗಳು ಮೈಗೂಡಿ ಎಲ್ಲ ರೀತಿಯ ರೋಗಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ. ಇದು ಕ್ಯಾನ್ಸರ್ ರೋಗಕ್ಕೂ ಎಡೆಮಾಡಿಕೊಡುತ್ತದೆ.

ಜೈವಿಕ ತಂತ್ರಜ್ಞಾನಕ್ಕಾಗಿ ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು

ಅಧಿಕ ಇಳುವರಿ ಮಿಶ್ರತಳಿ ಬಳಕೆಯ ಮೊದಲನೆ ಹಸಿರು ಕ್ರಾಂತಿ (First Green Revolution Technology) ತಂತ್ರಜ್ಞಾನ ಪ್ರಪಂಚದ ಎಲ್ಲ ಜನರಿಗೆ ಆಹಾರ ಒದಗಿಸಲು ಸಾಧ್ಯವಾಗದ ಕಾರಣ ಹಾಗೂ ನಮ್ಮ ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಸಾಕಷ್ಟು ಆಹಾರ ಬೆಳೆಯಬೇಕಾಗಿರುವುದರಿಂದ ಈ ’ಜೈವಿಕ ತಂತ್ರಜ್ಞಾನ’ವನ್ನು ಎರಡನೇ ಹಸಿರು ಕ್ರಾಂತಿ (Second Green Revolution) ತಂತ್ರಜ್ಞಾನವೆಂದು ಪ್ರಚಾರ ಮಾಡಲಾಗುತ್ತಿದೆ. ಮೇಲ್ಕಂಡಂತೆ, ಇದರಿಂದ ಸಸ್ಯ ಮತ್ತು ಮಾನವ ಕುಲಕ್ಕೆ ಅಪಾಯಗಳಿವೆಯೆಂದು ಗೊತ್ತಿದ್ದರೂ ಸಹ, ಕೆಲವು ಶ್ರೀಮಂತ ಬೀಜದ ಕಂಪೆನಿಗಳು ಮತ್ತು ಕೃಷಿ ವ್ಯಾಪಾರಿಗಳ ಒತ್ತಡಕ್ಕೆ ಮತ್ತು ಆಮಿಷಗಳಿಗೆ ಬಲಿಯಾಗಿ ನಮ್ಮ ಸರ್ಕಾರ ಈಗಿರುವ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ, ಈ ಕಂಪೆನಿಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿವೆ.

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಮೂರನೇ ಭಾಗ. ಭಾರತದ ಕೃಷಿ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಹೇಗೆ ಕಾರಣವಾದವು ಮತ್ತು ಆ ಸಮಸ್ಯೆ ಇಂದಿಗೂ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು. ಮುಂದಿನ ವಾರ, ಕೊನೆಯ ಭಾಗ: ಸರ್ಕಾರದ ಕರಾಳ ಕಾನೂನುಗಳು)


ಇದನ್ನೂ ಓದಿ: ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...