Homeಕರ್ನಾಟಕರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1

ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1

- Advertisement -
- Advertisement -

1980ರಿಂದ 2000ನೇ ವರ್ಷದ 20 ವರ್ಷಗಳ ರೈತ ಹೋರಾಟ, ನಮ್ಮ ಸರ್ಕಾರಗಳು ನೀತಿಗಳ ವಿರುದ್ಧ ಸಂಘಟಿತವಾಗಿತ್ತಷ್ಟೆ, ಬ್ರಿಟಿಷರು ದೇಶಬಿಟ್ಟು ಹೋದನಂತರವೂ ಅವರೇ ರೂಪಿಸಿದ್ದ ಕೈಗಾರಿಕೆಗಳಿಗೆ, ವ್ಯಾಪಾರಿಗಳಿಗೆ, ನಗರದ ಐಷಾರಾಮಿಗಳಿಗೆ ಅನುಕೂಲವಾಗುವಂತಹ, ರೈತರನ್ನು ಮೋಸಮಾಡಿ, ಶೋಷಣೆ ಮಾಡುವಂತಹ ನೀತಿಗಳು ಮುಂದುವರಿದಿರುವುದರ ವಿರುದ್ಧ ರೈತ ಚಳವಳಿ ಹೋರಾಟ ಮಾಡುತ್ತಾ ಬಂದಿದೆ.

ಆದರೆ, ಈಗ 2000ನೇ ವರ್ಷದಿಂದ ನಮ್ಮಂತಹ ದೇಶದ ಕೃಷಿ ಕ್ಷೇತ್ರ ಮತ್ತು ರೈತರು ಹೋರಾಟ ಮಾಡಬೇಕಾದ ಸಮಸ್ಯೆಗಳೇ ಬೇರೆ ಸ್ವರೂಪದ್ದಾಗಿದೆ. ಇದಕ್ಕೆ ಕಾರಣ, ನಮ್ಮ ಕೇಂದ್ರ ಸರ್ಕಾರ, ಕೃಷಿ ಕ್ಷೇತ್ರವನ್ನಷ್ಟೇ ಅಲ್ಲ, ನಮ್ಮ ದೇಶದ ಇಡೀ ಆರ್ಥಿಕ ಕ್ಷೇತ್ರವನ್ನೇ ಪ್ರಪಂಚದ ಆರ್ಥಿಕ ವ್ಯವಸ್ಥೆಯ ಜೊತೆಗೆ ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು. ಇದನ್ನೇ ನಾವು ಗ್ಯಾಟ್ ಒಪ್ಪಂದ ಎನ್ನುವುದು. ಇದನ್ನೇ ಈಗ ವಿಶ್ವ ವಾಣಿಜ್ಯ ಸಂಸ್ಥೆ ಅಥವಾ ವಿಶ್ವ ವ್ಯಾಪಾರಿ ಸಂಸ್ಥೆ ಎನ್ನುತ್ತಾರೆ.

ವಿಶ್ವ ವ್ಯಾಪಾರಿ ಸಂಸ್ಥೆಯ (W.T.O) ಹಿಂದಿರುವ ಹುನ್ನಾರಗಳು

‘ಗ್ಯಾಟ್’ (GATT) ಎಂದರೆ “ಜನರಲ್ ಅಗ್ರಿಮೆಂಟ್ ಆನ್ ಟ್ಯಾರಿಫ್ ಅಂಡ್ ಟ್ರೇಡ್” ಎಂದು. ಅಂದರೆ, “ವಾಣಿಜ್ಯ ಮತ್ತು ತೆರಿಗೆಗಳ ಸಾರ್ವತ್ರಿಕ ಒಪ್ಪಂದ” ಎಂದು. ಎರಡನೇ ಮಹಾಯುದ್ಧದ ನಂತರ, ಯುದ್ಧದಲ್ಲಿ ಭಾಗವಹಿಸಿದ್ದ ಬಿಳಿಯ ದೇಶಗಳ ಆರ್ಥಿಕ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದ್ದರಿಂದ, ಅದನ್ನೆಲ್ಲ ಸರಿಪಡಿಸಿಕೊಳ್ಳಲು ರೂಪಿಸಿದ ಒಪ್ಪಂದ ಇದು. ಇದು ರೂಪಿತವಾದದ್ದು 1948ರಲ್ಲಿ. 1946ರಿಂದ ಎಲ್ಲ ದೇಶಗಳಿಗೂ ಸ್ವಾತಂತ್ರ್ಯ ಕೊಡಬೇಕೆಂಬ ಅಂತಾರಾಷ್ಟ್ರೀಯ ಒತ್ತಡದ ನಡುವೆಯೇ ಈ ದೇಶಗಳ ಲೂಟಿಯನ್ನು ಮುಂದುವರಿಸಲು ಬೇಕಾದ ಸಂಸ್ಥೆಗಳನ್ನು ಬಿಳಿಯ ದೇಶಗಳು ರೂಪಿಸುತ್ತಿದ್ದ ಕಾಲ ಇದು. ಕೃಷಿಯನ್ನು ಈ ಸಂಸ್ಥೆಯಲ್ಲಿ ಸೇರಿಸಬೇಕೆಂಬ ಅಂಶವೂ ಆಗ ಸೇರಿತ್ತು.

ವಿಶ್ವ ವ್ಯಾಪಾರ ಸಂಸ್ಥೆ

ಆದರೆ, ಇದಕ್ಕೆ ಅಮೆರಿಕ ತಕರಾರು ತೆಗೆಯಿತು. ಕಾರಣ, ಮೂಲ ಗ್ಯಾಟ್ ಒಪ್ಪಂದದಲ್ಲಿ ಕೃಷಿ ಆಮದುಗಳಲ್ಲಿ ಪ್ರಮಾಣದ ಮಿತಿಗೆ ನಿಷೇಧವಿತ್ತು. ಸಕ್ಕರೆ, ಹೈನು ಸಾಮಗ್ರಿಗಳು, ಮತ್ತಿತರ ಕೃಷಿ ಉತ್ಪಾದನೆಗಳಿಗೆ ಸಂಬಂಧಿಸಿದಂತೆ ತನ್ನದೇ ಆದ ರಕ್ಷಣಾ ನೀತಿಯನ್ನು ಹೊಂದಲು ಅವಕಾಶವಿಲ್ಲದಿದ್ದರೆ ಗ್ಯಾಟ್ ಒಪ್ಪಂದದಿಂದ ಹೊರಹೋಗುತ್ತೇನೆಂದು ಬೆದರಿಸಿತು. ಆಗ ಅಮೆರಿಕಕ್ಕೆ ಕಾಲಮಿತಿಯಿಲ್ಲದೆ ಅವಕಾಶ ಕೊಡಲಾಯಿತು. ಈ ಕಾರಣ, ಇತರ ಎಲ್ಲ ದೇಶಗಳಿಗೂ ಈ ವಿನಾಯಿತಿಯನ್ನು ತಾರತಮ್ಯದ ಆಪಾದನೆಯಿಂದ ಮುಕ್ತವಾಗಲು ಕೊಡಬೇಕಾಯಿತು.

ಇದರಿಂದಾಗಿ ಅಮೆರಿಕ ಮತ್ತು ಅಧಿಕ ಉತ್ಪಾದನೆ ಮಾಡುತ್ತಿದ್ದ ದೇಶಗಳು, ತಮ್ಮ ಕೃಷಿಯನ್ನು ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ “ಗ್ಯಾಟ್‌”ನಲ್ಲಿದ್ದ ಕೃಷಿ ಸಬ್ಸಿಡಿ, ನಿಷೇಧದೊಳಗಿದ್ದ ವಿನಾಯಿತಿ ನಿಯಮಗಳನ್ನು ದುರುಪಯೋಗ ಮಾಡಿಕೊಂಡವು. ಬೆಲೆ ಮತ್ತು ಮಾರಾಟ ರಕ್ಷಣೆ ನೀತಿಗಳಿಂದ ಹಾಗೂ ಸಹಾಯಧನಗಳಿಂದ ಮತ್ತು ಇತರ ಬೆಂಬಲ ನೀತಿಗಳಿಂದ ತಮ್ಮ ರೈತರ ಆದಾಯವನ್ನು ಮಾರುಕಟ್ಟೆ ವ್ಯತ್ಯಾಸಗಳಿಂದ ಪ್ರತ್ಯೇಕಿಸಿದವು. ಈ ಕಾರಣಗಳಿಂದಾಗಿ, ವಿಶ್ವ ಮಾರುಕಟ್ಟೆ ಬೆಲೆಗಳಿಗಿಂತ ಸ್ಥಳೀಯ ಬೆಲೆಗಳನ್ನು ಹೆಚ್ಚಿಗೆ ಇಡುವ ಮಾಲಿಕ ಮತ್ತು ಉತ್ಪಾದನೆಯ ಮೇಲೆ ಯಾವುದೇ ನಿಯಂತ್ರಣ ಹೇರದೆ, ಆಹಾರ ಆಮದು ಮಾಡಿಕೊಳ್ಳುತ್ತಿದ್ದ ಯುರೋಪು 1970ರ ಹೊತ್ತಿಗೆ ಆಹಾರ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಿತು. ಅಧಿಕವಾಗಿದ್ದ ಹೆಚ್ಚುವರಿ ಬೆಳೆಯನ್ನು ಯುರೋಪು ಒಕ್ಕೂಟ ರಫ್ತು ಮಾಡಲೇಬೇಕಾಯಿತು. ಜೊತೆಗೆ, ಅಧಿಕ ಸಹಾಯಧನ ಪಡೆದು ಮೂರನೇ ಪ್ರಪಂಚದ ಮಾರುಕಟ್ಟೆ ಆಕ್ರಮಿಸಿಕೊಂಡಿದ್ದ ಅಮೆರಿಕದೊಂದಿಗೆ ಪೈಪೋಟಿ ಮಾಡಬೇಕಾಯಿತು.

ಈ ಪೈಪೋಟಿ ತೀವ್ರವಾಯಿತು. ಇದರಿಂದ ಅಮೆರಿಕ ಮತ್ತು ಯುರೋಪು ದೇಶಗಳ ರೈತರಿಗೇನೂ ಹಾನಿಯಾಗಲಿಲ್ಲ, ಹಾನಿಯಾದದ್ದು ಮೂರನೇ ಪ್ರಪಂಚದ ರೈತರಿಗೆ. ಉದಾ: ಪಶ್ಚಿಮ ಮತ್ತು ದಕ್ಷಿಣ ಆಫ್ರಿಕ ದೇಶಗಳಿಗೆ, ಸಹಾಯಧನ ಪಡೆದ, ಕಡಿಮೆ ಬೆಲೆ ದನದ ಮಾಂಸದ ರಫ್ತಿನಿಂದ, ಸಣ್ಣಸಣ್ಣ ದನ ಸಾಕಣೆ ಮಾಡುತ್ತಿದ್ದ ರೈತರಿಗೆ.

ಈ ಪರಸ್ಪರ ಪೈಪೋಟಿಯಿಂದ ಇಬ್ಬರಿಗೂ ಲಾಭವಿಲ್ಲವೆಂದು ಕ್ರಮೇಣ ಅಮೆರಿಕ ಮತ್ತು ಯುರೋಪು ಒಕ್ಕೂಟ ಮನಗಂಡವು. ಈ ಮನವರಿಕೆಯಿಂದಾಗಿಯೇ, ಕೃಷಿಯನ್ನು ಗ್ಯಾಟ್ ಒಪ್ಪಂದದೊಳಗೆ ಸೇರಿಸಬೇಕೆಂದು ಒತ್ತಾಯ ತಂದವರೂ ಇವರೇ, ತಮಗಿಬ್ಬರಿಗೂ ಲಾಭವಾಗುವಂತಹ ನಿಯಮಗಳನ್ನು ಈ ಒಪ್ಪಂದದೊಳಗೆ ಸೇರಿಸುವ ಹುನ್ನಾರ ನಡೆಸಿದವರು ಇವರೇ.

ಅಮೆರಿಕ ಮತ್ತು ಯುರೋಪಿನ ಒಕ್ಕೂಟ 1992-93ರಲ್ಲಿ, ತಮ್ಮತಮ್ಮೊಳಗೇ ಮಾಡಿಕೊಂಡಿದ್ದ “ಬ್ಲೇರ್ ಹೌಸ್ ಒಪ್ಪಂದ” ಎಂಬ ಒಡಂಬಡಿಕೆಯನ್ನು “ಗ್ಯಾಟ್‌ನ ಕೃಷಿ ಒಪ್ಪಂದ” ಎಂಬ ಹೊಸ ಹೆಸರಿನಲ್ಲಿ 1994ರಲ್ಲಿ ಎಲ್ಲ ದೇಶಗಳ ಮೇಲೆ ಹೇರಲಾಯಿತು.

ಈ ಕೃಷಿ ಒಪ್ಪಂದದಲ್ಲಿರುವ ಹುನ್ನಾರ-ಕುತಂತ್ರಗಳು

1995ರಿಂದ ಪ್ರಾರಂಭಗೊಂಡು, 1986-88ನ್ನು ಆಧಾರವಾಗಿಟ್ಟುಕೊಂಡು, ಆಗಿದ್ದ ಸಹಾಯಧನದ ಒಟ್ಟು ಮೊತ್ತದಲ್ಲಿ, ಮುಂಬರುವ ಆರು ವರ್ಷಗಳಲ್ಲಿ, ಅಂದರೆ 2001ನೇ ಇಸವಿಯೊಳಗಾಗಿ ಶೇಕಡ 20ರಷ್ಟು ರದ್ದು ಮಾಡಬೇಕು. (ಆದರೆ, ಇದರಲ್ಲಿ ಅಮೆರಿಕ ಮತ್ತು ಯೂರೋಪು ದೇಶಗಳು ತಮ್ಮ ರೈತರಿಗೆ ಕೊಡುತ್ತಿರುವ “ನೇರ ಆದಾಯ ಸಂದಾಯ”ಗಳು ವಿನಾಯಿತಿಗೊಂಡಿವೆ).

ರಫ್ತು ಸಹಾಯಧನವನ್ನು 1995ರಿಂದ 2001ರವರೆಗೆ ರಫ್ತಿನ ಒಟ್ಟು ಪ್ರಮಾಣದ ಶೇಕಡಾ 21ರಷ್ಟು ಹಾಗೂ ಒಟ್ಟು ಮೌಲ್ಯದ ಶೇಕಡಾ 35ರಷ್ಟು 6 ವರ್ಷಗಳೊಳಗಾಗಿ ಇಳಿಸಬೇಕು ಹಾಗೂ 2001ರ ನಂತರ ಯಾವುದೇ ಕಾರಣಕ್ಕೂ ರಫ್ತು ಸಹಾಯಧನವನ್ನು ಹೆಚ್ಚಿಸಬಾರದು.

1986-88ನ್ನು ಆಧಾರವಾಗಿಟ್ಟುಕೊಂಡು, ಆಮದು ಪ್ರಮಾಣವನ್ನು ರದ್ದುಮಾಡಿ, ಆಮದುಗಳನ್ನು ಆಮದು ತೆರಿಗೆ ಪದ್ಧತಿಗೆ ಒಳಪಡಿಸಬೇಕು, ಮತ್ತು ಈ ಅಮದು ತೆರಿಗೆಗಳನ್ನು 1995ರಿಂದ 2001ರ ಒಳಗಾಗಿ ಕನಿಷ್ಠ ಶೇ. 15ರಷ್ಟು ಮತ್ತು ಸರಾಸರಿ 36%ಗೆ ಇಳಿಸಬೇಕು.

1986-88ರ ಆಯಾ ದೇಶದ ಒಟ್ಟು ಕೃಷಿ ಉತ್ಪಾದನೆ ಬಳಕೆಯಲ್ಲಿ ಕನಿಷ್ಠ ಶೇಕಡಾ 3ರ ಪ್ರಮಾಣಕ್ಕೆ ದೇಶೀಯ ಮಾರುಕಟ್ಟೆಯನ್ನು “ಕನಿಷ್ಠ ತೆರವು” ಮಾಡಿಕೊಡಬೇಕು; 1999ರ ಹೊತ್ತಿಗೆ ಪ್ರಮಾಣವು ಶೇಕಡಾ 5ಕ್ಕೆ ತಲುಪಬೇಕು.

ಇದರೊಳಗೆ, ಏನೋ ವಿನಾಯಿತಿ ಕೊಟ್ಟ ಸೋಗಿನಲ್ಲಿ, ನಮ್ಮಂತಹ ಅಭಿವೃದ್ಧಿಶೀಲ ದೇಶಗಳಿಗೆ, “ವಿಶೇಷ ತಾರತಮ್ಯ ಸ್ಥಾನಮಾನ” ಗ್ಯಾಟ್ ಒಪ್ಪಂದದಲ್ಲಿ ಕೊಡಲಾಯಿತು. ಇದೇನೆಂದರೆ, ನಮ್ಮಂತಹ ದೇಶಗಳು ಆಮದು ತೆರಿಗೆ ಕಡಿತ, ಸಹಾಯಧನ ಮತ್ತು ರಫ್ತು ಸಹಾಯಧನಗಳಲ್ಲಿ, ಮುಂದುವರಿದ ದೇಶಗಳಿಗೆ ಹೋಲಿಸಿದಂತೆ ಮೂರನೆ ಎರಡು ಭಾಗ ಮಾತ್ರ ಕಡಿತಗೊಳಿಸಬಹುದೆಂದೂ 6 ವರ್ಷಗಳ ಬದಲಾಗಿ ಇದನ್ನು 10 ವರ್ಷಗಳವರೆಗೆ ಮಾಡಬಹುದೆಂದೂ ನಿಗದಿ ಮಾಡಲಾಯಿತು.

ಅದರೂ, ಇಂತಹ ವಿನಾಯಿತಿಯಿಂದಲೂ, ಈ ಐದು ವರ್ಷಗಳಲ್ಲಿ ಮುಂದುವರಿದ ದೇಶಗಳು ರೈತರಿಗೆ ಕೊಡುತ್ತಿರುವ ರಕ್ಷಣೆ ಮತ್ತು ಸಹಾಯಧನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇದಕ್ಕೆ ಕಾರಣ ಮೊದಲನೆಯದಾಗಿ, ಯುರೋಪ್ ಮತ್ತು ಅಮೆರಿಕಗಳಲ್ಲಿ 1986-88ರಲ್ಲಿದ್ದ ಸಹಾಯಧನ, ರಫ್ತು ಸಹಾಯಧನ ಮತ್ತು ಆಮದು ತೆರಿಗೆ ಮಟ್ಟಗಳು 1995ಕ್ಕಿಂತ ಬಹಳ ಹೆಚ್ಚಿದ್ದವಾದ್ದರಿಂದ, ಮೇಲ್ಕಂಡಂತೆ ಇವುಗಳನ್ನು ಕಡಿತಗೊಳಿಸಿದ ಮೇಲೂ 1995ರಲ್ಲಿ ಎಷ್ಟಿದ್ದವೋ ಅಷ್ಟಕ್ಕೆ ಹೆಚ್ಚುಕಡಿಮೆ ಉಳಿದವು.

ಉದಾಹರಣೆಗೆ, 1992ರಿಂದ 1996ರ ವರೆಗೆ, ಅಮೆರಿಕದ ಕೃಷಿ ಮತ್ತು ಜಾನುವಾರು ಉತ್ಪಾದನೆಯಲ್ಲಿ ಸರಾಸರಿ ತೆರಿಗೆ ಶೇಕಡಾ 5.7ರಿಂದ 8.5ಕ್ಕೆ ಏರಿಸಲಾಯಿತು; ಆಹಾರ ಬೆಳೆ ಮತ್ತು ಪದಾರ್ಥಗಳಿಗೆ ಶೇಕಡಾ 6.6ರಿಂದ ಶೇಕಡ 10ಕ್ಕೆ ಏರಿಸಲಾಯಿತು; ತಂಬಾಕು ಸರಕುಗಳಿಗೆ ಶೇಕಡಾ 14.6ರಿಂದ 104.4ಕ್ಕೆ ಏರಿಸಲಾಯಿತು.

ಆಮದು ಪ್ರಮಾಣವನ್ನು ಆಮದು ತೆರಿಗೆ ಪದ್ಧತಿಗೆ ಒಳಪಡಿಸುವುದರಲ್ಲಿಯೂ ಅಮೆರಿಕ ಮತ್ತು ಯುರೋಪ್ ದೇಶಗಳ ಒಕ್ಕೂಟ ಗ್ಯಾಟ್ ನಿಯಮಾವಳಿಯನ್ನು ಉಲ್ಲಂಘಿಸಿವೆ. ಉದಾಹರಣೆಗೆ “ಕನಿಷ್ಠ ಮಾರುಕಟ್ಟೆ ತೆರವಿ”ನ ಪ್ರಮಾಣಕ್ಕಿಂತ ಹೆಚ್ಚಿನ ತಂಬಾಕು ಆಮದಿನ ಮೇಲೆ ಶೇಕಡಾ 350% ಸುಂಕ ಹಾಕಿದೆ.

ಎರಡನೆಯದಾಗಿ, ಆಮದು ಸರಾಸರಿ ತೆರಿಗೆಯನ್ನು ಶೇ. 36ಕ್ಕೆ ಇಳಿಸಬೇಕೆಂಬ ಗ್ಯಾಟ್ ನಿಯಮ ಅಸ್ಪಷ್ಟವಾಗಿದ್ದ ಕಾರಣ, ಅಮೆರಿಕ ಮತ್ತು ಯುರೋಪ್, ತಮ್ಮ ಅನುಕೂಲಕ್ಕೆ ತಕ್ಕಂತೆ ಅತ್ಯವಶ್ಯಕ ವಸ್ತುಗಳ ಮೇಲೆ ಕನಿಷ್ಠ ಕಡಿತ ಮಾಡುವ ಹಾಗೂ ಹೋಲಿಕೆಯಲ್ಲಿ ಅತ್ಯವಶ್ಯಕವಲ್ಲದ ವಸ್ತುಗಳ ಮೇಲೆ ಅಧಿಕ ಕಡಿತಗೊಳಿಸಿ ಈ ‘ಸರಾಸರಿ’ಯನ್ನು ಪೂರೈಸಿವೆ.

ಮೂರನೆಯದಾಗಿ, ಮಾರುಕಟ್ಟೆ ವೈರುಧ್ಯಗಳನ್ನು ತೂಗಿಸಲು, ಅಮೆರಿಕ ಮತ್ತು ಯುರೋಪ್ ದೇಶಗಳು ತಮ್ಮ ರೈತರಿಗೆ ಕೊಡುತ್ತಿರುವ ನೇರ ಆದಾಯ ಪಾವತಿಗಳಂತಹ ಸಹಾಯಧನಗಳು ಮೇಲ್ಕಂಡ ಕಡಿತದ ನಿಯಮಗಳಿಂದ ವಿನಾಯಿತಿಗೊಂಡಿವೆ. ಮಾರುಕಟ್ಟೆ ಬೆಲೆಗಳ ವ್ಯತ್ಯಾಸದಿಂದಾಗುವ ರೈತರಿಗಾಗುವ ನಷ್ಟವನ್ನು ತುಂಬಲು ಮಾಡಿರುವ ಈ ವ್ಯವಸ್ಥೆಯನ್ನು “ಉತ್ಪಾದನೆಗೆ ಸಂಬಂಧಿಸಿಲ್ಲ” ಹಾಗೂ “ವ್ಯಾಪಾರವನ್ನು ವಿರೂಪಗೊಳಿಸುವ ಅಂಶ” ಅಲ್ಲ ಎನ್ನುವ ಸಮರ್ಥನೆಯೊಂದಿಗೆ ಮೇಲ್ಕಂಡ ಕಡಿತದಿಂದ ವಿನಾಯಿತಿಗೊಳಿಸಲಾಗಿದೆ.

ನಂಜುಂಡಸ್ವಾಮಿ

ಈ “ನೇರ ಆದಾಯ ಪಾವತಿ”ಯು ಯುರೋಪಿನಲ್ಲಿ ರೈತನ ಉತ್ಪಾದನೆಗೆ ಸಂಬಂಧಿಸಿದೆ, ವಿಶೇಷವಾಗಿ ಅಲ್ಲಿನ ರೈತ ತನ್ನ ಭೂಮಿಯಲ್ಲಿ ಶೇ. 15ರಷ್ಟು ಭಾಗ ಭೂಮಿಯನ್ನು ಬೀಳುಬಿಟ್ಟು ಉತ್ಪಾದನೆಯನ್ನು ಕಡಿಮೆ ಮಾಡಿದರೆ ಈ ರೀತಿಯ ಪಾವತಿ ಮಾಡಲಾಗುತ್ತಿದೆ. ಬೆಳೆಗಳ ಬೆಲೆಗಳನ್ನು ಏರಿಸಲು ಮಾಡಿರುವ ವ್ಯವಸ್ಥೆ ಇದು.

ಅಮೆರಿಕದಲ್ಲಿ, ಈ ಪಾವತಿಯು “ಕೊರತೆ ಭರಿಸುವ ಪಾವತಿ”ಗಳಾಗಿ ರೂಪುಗೊಂಡಿವೆ. ಇರಬೇಕಾದ ವೈಜ್ಞಾನಿಕ ಕೃಷಿ ಆದಾಯಕ್ಕೂ ಮಾರುಕಟ್ಟೆ ಬೆಲೆಗಳಿಗೂ ನಡುವೆ ರೈತರಿಗೆ ಬರುವ ಕೊರತೆಯನ್ನು ತುಂಬುವ ವ್ಯವಸ್ಥೆ ಇದು. ಅಮೆರಿಕದ “ಕೃಷಿ ಮಸೂದೆ 1996″ರ ಪ್ರಕಾರ ಒಳ್ಳೆ ಮತ್ತು ಕೆಟ್ಟ ಸುಗ್ಗಿ ವರ್ಷಗಳಲ್ಲೇ ಅಲ್ಲಿನ ರೈತರು ಒಂದು ರೀತಿಯ ಸಹಾಯಧನ ಪಡೆಯುತ್ತಿದ್ದಾರೆ. 1996ರಿಂದ 2000ದ ವರೆಗೂ ಅಮೆರಿಕ ಸರ್ಕಾರ ಅಲ್ಲಿನ ರೈತರಿಗೆ ಪ್ರತಿವರ್ಷ 5100 ಕೋಟಿ ಡಾಲರುಗಳ (2,24,400 ಕೋಟಿ ರೂಪಾಯಿಗಳ) “ಕೊರತೆ ಪಾವತಿ” ಮಾಡಿದೆ.

ಮೇಲ್ಕಂಡಂತೆ, ಅಮೆರಿಕ ಮತ್ತು ಯುರೋಪ್ ದೇಶಗಳು ಮಾಡಿರುವ ಈ ಹುನ್ನಾರದ ಪ್ರಕಾರ, ತಾವು ಪೂರ್ವಭಾವಿಯಾಗಿ ಏರಿಸಿದ್ದ ಆಮದು ತೆರಿಗೆ, ರಫ್ತು ಸಹಾಯಧನ ಕನಿಷ್ಠವಾಗಿ ಕಡಿತ ಮಾಡುವುದರ ಜೊತೆಗೇ ತಮ್ಮ ರೈತರಿಗೆ ಕೊಡುವ ಸಹಾಯಧನದ ವ್ಯವಸ್ಥೆಯನ್ನು ಹಾಗೆಯೇ ಇಟ್ಟುಕೊಂಡದ್ದು ಒಂದುಕಡೆಯಾದರೆ, ನಮ್ಮಂತಹ ಹಿಂದುಳಿದ ದೇಶಗಳಲ್ಲಿ ರೈತರು ಎಲ್ಲ ಸಹಾಯಧನವನ್ನೂ ಕಳೆದುಕೊಂಡು, ನಷ್ಟಕ್ಕೊಳಗಾಗುತ್ತಿರುವ ಜೊತೆಗೆ, ಯುರೋಪ್ ಮತ್ತು ಅಮೆರಿಕದ ಕೃಷಿ ವಸ್ತುಗಳಿಗೆ ನಮ್ಮ ಮಾರುಕಟ್ಟೆಯನ್ನು ತೆರವು ಮಾಡಿಕೊಡಬೇಕಾಗಿ ಬಂದಿದೆ.

– ಪ್ರೊ. ಎಂ ಡಿ ನಂಜುಂಡಸ್ವಾಮಿ

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಮೊದಲ ಭಾಗ. ಇಂದಿಗೂ ಕೃಷಿ ಸಮಸ್ಯೆಗಳಿಗೆ ಹೇಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಕಾರಣವಾದವು ಮತ್ತು ಸಮಸ್ಯೆ ಈ ದಿನದಲ್ಲಿ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು)


ಇದನ್ನೂ ಓದಿ: ದೇಶವ್ಯಾಪಿ ಹಬ್ಬಿದ ರೈತ ಚಳವಳಿ: ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...