Homeಅಂಕಣಗಳುಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

- Advertisement -
- Advertisement -

ಸಂತೆಯ ಗದ್ದಲದಲ್ಲಿ ಗಂಟು ಕಳ್ಳರು ತಾವು ಮಾಡುವ ಕೆಲಸವನ್ನ ನಿರಾತಂಕವಾಗಿ ಮಾಡಿ ಮುಗಿಸಿದಂತೆ ವಿಧಾನಸಭೆಯಲ್ಲಿ ಧರಣಿ, ಗೌಜು ಗದ್ದಲ ನಡೆಯುತ್ತಿದ್ದಾಗಲೇ, ಇತ್ತ ಶಾಸಕರು ಮಂತ್ರಿಗಳು ಮತ್ತು ಮುಖ್ಯಮಂತ್ರಿಯ ಸಂಬಳ ಹೆಚ್ಚಿಸುವ ಬಿಲ್ಲನ್ನು ಸದ್ದಿಲ್ಲದೆ ಜಾರಿಮಾಡಿಕೊಂಡರಂತಲ್ಲಾ. ಸಾಮಾನ್ಯವಾಗಿ ಜೇಬುಗಳ್ಳರು ಮಾತ್ರ ಇಂತಹ ಕೆಲಸ ಮಾಡುತ್ತಾರೆಂದು ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಗಲುಗಳ್ಳರು ತಮ್ಮ ತುಟ್ಟಿಭತ್ಯೆಗಳನ್ನು ಏರಿಸಿಕೊಳ್ಳುವುದನ್ನು ಅನಾದಿಕಾಲದಿಂದ ನೋಡುತ್ತ ಬಂದಿದ್ದಾರೆ ಸಾಮಾನ್ಯ ಜನ. ಈಗಲೂ ಕೂಡ ಕನಿಕರದ ಒಪ್ಪಿಗೆ ಕೊಡುತ್ತಿದ್ದರು. ಆದರದು ಚರ್ಚೆಯಾಗಬೇಕಿತ್ತು. ಶಾಸಕರು ಹಾಲಿ ಪಡೆಯುತ್ತಿರುವ ಸಂಬಳ ಸಾಲುತ್ತಿಲ್ಲ, ಅಜ್ಜಿ ಹೊಸೆದ ದಾರವೆಲ್ಲಾ ಅಜ್ಜನ ಉಡದಾರಕ್ಕೆ ಸಾಲುತ್ತಿಲ್ಲ ಎಂಬಂತೆ, ಸರಕಾರ ಈಗ ಕೊಡುತ್ತಿರುವುದೆಲ್ಲಾ ಹಿಂದಿನ ಚುನಾವಣೆಗಾಗಿ ಮಾಡಿಕೊಂಡ ಸಾಲದ ಬಡ್ಡಿಗೇ ಸಾಲುತ್ತಿಲ್ಲ ಎಂಬುದು ಹಲವು ಶಾಸಕರ ಸುಳ್ಳು ಆಳಲಾಗಿತ್ತು. ವಾಸ್ತವವಾಗಿ ಈಗ ಸರಕಾರದ ಅಭಿವೃದ್ಧಿ ಕೆಲಸಗಳಲ್ಲಿ ನಲವತ್ತು ಪರಸೆಂಟು ಶಾಸಕರ ಪಟಾಲಂಗೆ ಸೇರುತ್ತಿದೆಯಂತೆ, ಇನ್ನ ರೆವಿನ್ಯೂ ಇಲಾಖೆ, ಅಬಕಾರಿ ಇಲಾಖೆ, ಕಾಡಿನ ಇಲಾಖೆ, ಗಣಿಗಾರಿಕೆ ಬಾಬ್ತು ಮತ್ತು ಪೊಲೀಸ್ ಠಾಣೆಗಳು ಒಪ್ಪಿಸುವ ಕಪ್ಪ ಕಾಣಿಕೆಯನ್ನ ಬರೆದುಕೊಂಡು ಟೋಟ್ಲು ಮಾಡಿದರೆ, ಈಗ ಸರಕಾರ ಗುಪ್ತವಾಗಿ ಮಂಜೂರು ಮಾಡಿಕೊಂಡ ಸಂಬಳದ ಮೊತ್ತ ಜುಜುಬಿ ಚಿಲ್ಲರೆ ಕಾಸಂತಲ್ಲಾ ಥೂತ್ತೇರಿ.

*******

ಈ ಶಾಸಕ ಮಂತ್ರಿ ಮಹೋದಯರ ಸವಲತ್ತಿನ ಹಣವನ್ನು ಈ ಸಮಯದಲ್ಲಿ ಹೆಚ್ಚು ಮಾಡಿಕೊಂಡದ್ದು ಜೀವಂತ ಮಿಕಗಳನ್ನ ಹರಿದು ತಿನ್ನುವಂತಹ ಹೈನಾಗಳ ಕೃತ್ಯವಾಗಿದೆಯಂತಲ್ಲಾ. ಸದರಿ ಸರಕಾರ ಪ್ರವಾಹದಿಂದ ಬೀದಿಗೆ ಬಿದ್ದ ಕುಟುಂಬಗಳ ಯೋಗಕ್ಷೇಮ ನೋಡಲಿಲ್ಲ. ಕೊರೊನಾದಿಂದ ನಿರ್ಗತಿಕರಾದವರಿಗೆ ಏನು ಮಾಡಿದರೆಂಬುದು ತಿಳಿಯಲಿಲ್ಲ. ಕೊರೊನಾ ಸಾವಿಗೆ ತುತ್ತಾಗಿ ಸತ್ತವರ ಮಕ್ಕಳು ಅನಾಥರಾಗಿ, ಆ ಮಕ್ಕಳು ಯಾವ ಸವಲತ್ತಿಗೆ ತುತ್ತಾದರೆಂಬ ಮಾಹಿತಿ ಯಾರಿಗೂ ಇಲ್ಲ. ಈ ನಡುವೆ ಸರಕಾರದ ಮಾಸಾಶನ ಕಾಯುತ್ತ ಕುಳಿತವರ ಕಣ್ಣು ಒದ್ದೆಯಾಗಿವೆ. ಅತಿಥಿ ಉಪನ್ಯಾಸಕರು, ಪ್ರವಾಹಕ್ಕೆ ಸಿಕ್ಕವರು ನಡುಗೋಡೆಯ ಮೇಲೆ ನಿಂತಂತೆ ದಿಕ್ಕುಕಾಣದಂತಹ ಕಣ್ಣುಗಳಿಂದ ಸರಕಾರದ ಕಡೆ ನೋಡುತ್ತಿದ್ದಾರೆ. ಇನ್ನ ಮೂರುದಶಕದ ಹಿಂದೆ ಗ್ರಾಮಪಂಚಾಯ್ತಿ ಗ್ರಂಥಾಲಯಗಳಿಗೆ ಗೌರವಧನದಿಂದ ನೇಮಕವಾದ ಗ್ರಂಥಾಲಯ ಮೇಲ್ವಿಚಾರಕರು ಈಗ ಪಿಂಚಣಿಯಿಲ್ಲದೆ ನಿವೃತ್ತರಾಗುತ್ತಿದ್ದಾರೆ. ಕಡೆ ತಿಂಗಳ ಗೌರವಧನವಾದ ಹನ್ನೆರಡು ಸಾವಿರ ತೆಗೆದುಕೊಂಡು ಮುಂದೆ ಅವರ ಹೆಂಡತಿ ಮಕ್ಕಳ ಕತೆಯೇನು ಎಂದು ನೆನಸಿಕೊಂಡರೆ ಭಯವಾಗುತ್ತದೆ. ಪ್ರತಿ ಕೆಲಸಕ್ಕೂ ಫೈನಾನ್ಸ್ ಡಿಪಾರ್ಟ್‌ಮೆಂಟಿನ ಒಪ್ಪಿಗೆ ಬೇಕಾಗುತ್ತದೆಂಬ ತಕರಾರು ತೆಗೆವ ಈ ಜನಪ್ರತಿನಿಧಿಗಳು ಇಂತಹ ಭೀಕರ ಸ್ಥಿತಿಯಲ್ಲಿಯೂ ತಮ್ಮ ಸವಲತ್ತುಗಳನ್ನು ಏರಿಸಿಕೊಂಡು ನಿಜಕ್ಕೂ ಸರಕಾರದ ಖಜಾನೆ ಕಳ್ಳರಾದರಂತಲ್ಲಾ ಥೂತ್ತೇರಿ.

Hijab Live | ‘ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ’: ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರದ ವಾದ | NaanuGauri

********

 

ಹಿಜಾಬ್ ಬಟ್ಟೆಯ ವಿಷಯ ಕರ್ನಾಟಕದ ತುಂಬ ಹರಡಿದ ಸನ್ನಿವೇಶವನ್ನ ಬಳಸಿಕೊಂಡು ಕೇಸರಿ ವಸ್ತ್ರವನ್ನ ಕರ್ನಾಟಕದ ತುಂಬ ಹಾಸಲು ಕೊರಟ ಕೇಸರಿ ಕಂದಗಳು ಧರ್ಮಸ್ಥಳಕ್ಕೆ ಹೊರಟ ಶಿವಭಕ್ತಾದಿಗಳನ್ನು ಹಿಡಿದು ಕೇಸರಿ ವಸ್ತ್ರಕೊಟ್ಟು, ಜೊತೆಗೆ ಮಜ್ಜಿಗೆ ಪಾನಕ ಕೊಟ್ಟು ಕಳಿಸುತ್ತಿದ್ದಾರಂತಲ್ಲಾ. ಈ ಕಂದಗಳ ಈ ಶ್ರಮ ನೋಡಿದ ಕಾಂಗೈಗಳು ಕಂಗಾಲಾಗಿ ತಾವೇನು ಹಂಚಬೇಕೆಂಬುದು ಹೊಳೆಯದೆ, ಮೇಕೆದಾಟಿನ ಕಡೆ ಹೊರಟರಂತಲ್ಲಾ. ಅತ್ತ ಕೇಸರಿ ವಸ್ತ್ರ ವಿತರಣೆ ಇತ್ತ ಮೇಕೆದಾಟಿನ ಪಾದಯಾತ್ರೆ ನೋಡಿದ ಕುಮಾರಣ್ಣನವರು ಇವರಿಬ್ಬರದೂ ಅಧಿಕಾರ ದಾಹದ ನಡವಳಿಕೆ ಎಂದು ನಿರ್ಲಿಪ್ತವಾಗಿ ಹೇಳಿ, ಈಗೇನು ಮಾಡಬೇಕೆಂಬ ಗೊಂದಲಕ್ಕೆ ಬಿದ್ದರಂತಲ್ಲಾ. ಈ ನಡುವೆ ಕರ್ನಾಟಕದ ಕೆಲ ಬುದ್ಧಿಜೀವಿಗಳು, ನೋಡಿ ಎಡೂರಪ್ಪನವರು ಸಂಘಪರಿವಾರದಿಂದ ಬಂದವರು, ಆದರೂ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡುವಾಗ ಹಸಿರು ಶಾಲು ಹಾಕಿದ್ದರು, ಅದೇ ಬಸವರಾಜ ಬೊಮ್ಮಾಯಿ ಎಂಬ ವ್ಯಕ್ತಿ, ರಾಯಿಸ್ಟ್ ಬೊಮ್ಮಾಯಿ ಎಂದು ಹೆಸರಾಗಿದ್ದ ಎಸ್ಸಾರ್ ಬೊಮ್ಮಾಯಿ ಮಗ, ಈತನಿಗೂ ಕೇಸರಿ ಶಾಲಿಗೂ ಯಾವ ಸಂಬಂಧವೂ ಇಲ್ಲ, ಆದರೂ ಕೇಸರಿ ಶಾಲನ್ನ ಹೊದ್ದು ಕುಂಟುತ್ತ ನಡೆದದ್ದು ನಿಜವೊ ನಟನೆಯೋ ಎಂಬುದೇ ಗೊತ್ತಾಗುತ್ತಿಲ್ಲ, ಒಟ್ಟಿನಲ್ಲಿ ಇವರೊಬ್ಬ ಸೂತ್ರದ ಗೊಂಬೆ ಎಂದರಂತಲ್ಲಾ ಥೂತ್ತೇರಿ.

*******

ಶ್ರೀಕೃಷ್ಣರಾಜೇಂದ್ರ ಒಡೆಯರು ಗಾಂಧೀಜಿಯಿಂದ ರಾಜರ್ಷಿ ಎಂಬ ಹೆಸರು ಪಡೆದವರು. ಕಲೆ, ಸಾಹಿತ್ಯ, ಸಂಗೀತ ಮತ್ತು ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ಇಂತಹ ಮಹನೀಯರ ಮಹತ್ವದ ತೀರ್ಮಾನದಿಂದ ರಚನೆಗೊಂಡು ಮುನ್ನಡೆದ ಕನ್ನಡ ಸಾಹಿತ್ಯ ಪರಿಷತ್ತಿಗೆ ಗಂಡಾಂತರ ಬಂದಿದೆಯಂತಲ್ಲಾ. ಕನ್ನಡ ಸಾಹಿತ್ಯ ಪರಿಷತ್‌ಗೆ ಆಯ್ಕೆಯಾಗಿ ಬಂದ ಜೋಷಿ ಕನ್ನಡ ಸಾಹಿತ್ಯ ಪರಿಷತ್‌ಅನ್ನು ಬ್ರಾಹ್ಮಣೀಕರಿಸಲು ಮನಸ್ಸು ಮಾಡಿದ ದಿನದಿಂದಲೇ ಎಲ್ಲ ಕಾಯಿಲೆಗಳು ಪ್ರಾರಂಭವಾಗಿದೆಯಂತಲ್ಲಾ. ಕಳೆದ ಶತಮಾನದಿಂದ ನಿರಾತಂಕವಾಗಿ ತನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತ ಬಂದ ಸಾಹಿತ್ಯ ಪರಿಷತ್‌ಅನ್ನು ತನ್ನ ಪುರೋಹಿತಶಾಹಿ ಚಿಂತನೆಗಳಿಂದ ಬದಲಾಯಿಸಲು ಹೊರಟ ಜೋಷಿ ತಾನು ಗುರುಗೋವಿಂದರ ಸಂಬಂಧಿ ಎಂದು ಹೇಳಿಕೊಂಡಿದ್ದಾರೆ, ಗುರುಗೋವಿಂದರನ್ನ ಅವರ ಶಿಷ್ಯ ಶಿಶುನಾಳ ಶರೀಫರು “ವಜ್ರದ ಹರಳು” ಎಂದು ಕರೆದರು. ಅಂತಹ ವಜ್ರದ ಹರಳಿನ ವಂಶದ ಈತ ಮರಳಿನ ಕಣವಾಗುವ ಕಡೆ ನಡೆಯುವ ಮೊದಲು, ಕನ್ನಡ ಸಾಹಿತ್ಯ ಪರಂಪರೆಯ ನಡೆಯನ್ನ ಅವಲೋಕಿಸಬೇಕಿದೆಯಂತಲ್ಲಾ. ಅದಕ್ಕಿಂತ ಮೊದಲು ತಲೆಯಲ್ಲಿ ತುಂಬಿಕೊಂಡಿರುವ ಅಸಂಬದ್ಧ ಸಂಗತಿಗಳನ್ನು ಆಚೆಹಾಕಿ, ಮೈಸೂರು ಸ್ಯಾಂಡಲ್ ಸೋಪಿನಿಂದ ತೊಳೆದುಕೊಂಡು ಹೊಸದಾಗಿ ಯೋಚಿಸಬೇಕಿದೆಯಂತಲ್ಲಾ ಥೂತ್ತೇರಿ


ಇದನ್ನೂ ಓದಿ: ಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...