Homeಅಂಕಣಗಳುಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

ಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

- Advertisement -
- Advertisement -

ಕಾನೂನುಗಳಿಗಿಂತ ನನ್ನ ಧರ್ಮವೇ ದೊಡ್ಡದು, ಆದ್ದರಿಂದ ನಾನು ಕಾನೂನುಗಳಿಗೆ ಹೆದರುವುದಿಲ್ಲ ಎಂಬಂತಹ ಮಾತೊಂದು ಪತ್ರಿಕೆಗಳಲ್ಲಿ ಹರಿದಾಡಿದಾಗ ಗ್ಯಾರಂಟಿ ಈ ಮಾತನ್ನು ತಾಲೀಬಾನಿಗಳು ಆಡಿರಬಹುದು ಅಥವ ಯಾವುದಾದರೂ ಮೂಲಭೂತಾವಾದಿ ಸಂಘಟನೆಯ ಲೀಡರು ಆಡಿರಬಹುದೆಂದು ಅಷ್ಟೇನು ಗಾಬರಿಯಿಲ್ಲದೆ ಹುಡುಕಿದಾಗ ಈ ಮಾತನ್ನಾಡಿದವರು ನಮ್ಮ ಶರಣ ಪರಂಪರೆಯ ಪ್ರಖರ ವಿಚಾರವಾದಿ ಸ್ವಾಮಿಜಿಯೊಬ್ಬರು ಎಂಬುದು ಗೊತ್ತಾದಾಗ ಏರಿ ನೀರುಂಬೊಡೆ, ಬೇಲಿ ಹೊಲ ಮೇಯ್ದೊಡೆ, ನಾರಿ ತನ್ನ ಮನೆಯಲ್ಲಿ ಕದ್ದೊಡೆ ಬದುಕುವುದೇನಯ್ಯ ಎಂಬಂತಾಯ್ತಲ್ಲಾ.

ಮಧ್ಯ ಕರ್ನಾಟಕದ ಒಂದೆರಡು ಜಿಲ್ಲಾ ಪ್ರದೇಶದಲ್ಲಿ ಗೊತ್ತಿರುವ ಜಗದ್ಗುರುವೊಬ್ಬರು ಹೀಗೆ ಮಾತಾಡುತ್ತಿರಬೇಕಾದರೆ, ಅವರು ಕಾನೂನು ಮೀರಿ ಬಹಳ ವರ್ಷಗಳೇ ಆಗಿರಬೇಕು. ಮಠದ ಸಂವಿಧಾನದ ಪ್ರಕಾರ ಅರವತ್ತು ವರ್ಷಕ್ಕೆ ನಿವೃತ್ತಿ ಪಡೆದು, ಮರಿ ಸ್ವಾಮಿಗೆ ಪಟ್ಟಕಟ್ಟಿ ತಾವು ಪಕ್ಕದಲ್ಲಿ ನಿಲ್ಲಬೇಕಿತ್ತು. ಆದರೆ ಮಠದ ಪರಂಪರೆ ಬದಿಗೊತ್ತಿ, ಅರವತ್ತು ವರ್ಷವನ್ನ ಹಿಂದಿಕ್ಕಿ ಮುಂದುವರಿದ ಜಗದ್ಗುರುವಿನ ನಡೆಗೆ ಬೇಸತ್ತ ಭಕ್ತಾದಿಗಳು ಕಾನೂನು ಮೊರೆಹೋಗಿದ್ದಾರಂತಲ್ಲಾ! ಅದಕ್ಕೆ ಹೆದರಿದ ಜಗದ್ಗುರು ನಾನು ಕಾನೂನಿಗೆ ಹೆದರುವುದಿಲ್ಲ ಎಂದರಂತಲ್ಲಾ ಥೂತ್ತೇರಿ.

ಈ ನೆಲದ ಕಾನೂನಿಗಾಗಲಿ ಮಠದ ಕಾನೂನಿಗಾಗಲಿ ಹೆದರುವುದಿಲ್ಲ ಎಂದಮೇಲೆ ಭಂಡತನ ಆವರಿಸುತ್ತೆ. ಆನಂತರ ಮಾಡುವ ಎಲ್ಲ ಕೆಲಸಗಳು ಭಂಡತನದಿಂದಲೇ ಕೂಡಿರುತ್ತವೆ. ಬಹು ಹಿಂದೆ ಜಗದ್ಗುರುಗಳೇ ಬಿಗಿದ ಭಾಷಣವಿದು. ಆ ಮಾತಿನ ಪ್ರಯೋಗಕ್ಕಿಳಿದಂತಿರುವ ಜಗದ್ಗುರುಗಳು ಮಠದ ಆಸ್ತಿಯನ್ನೇ ಸ್ವಂತದ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತ ಅದನ್ನ ದಕ್ಕಿಸಿಕೊಳ್ಳಲು ಟ್ರಸ್ಟು ಮಾಡಿಕೊಂಡು, ಪ್ರತಿಭಟಿಸುವಂತಹ ಭಕ್ತಾದಿಗಳನ್ನು ಬೆದರಿಸಲು ಶಿವಸೈನ್ಯವನ್ನೇ ಕಟ್ಟಿದ್ದಾರಂತಲ್ಲಾ! ಇಂತಹ ಸಾಹಸಗಳನ್ನು ಮಾಡಿದ ಮೇಲೆ ಪ್ರಭುತ್ವದ ರಕ್ಷಣೆ ಬೇಕಿರುತ್ತದೆ. ಅದಕ್ಕಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಕರೆದು ಹಿಗ್ಗಾಮುಗ್ಗ ಹೊಗಳಿದರಂತಲ್ಲಾ! ಹಿಂದೆ ರಾಜಕಾರಣಿಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾ, ಅವರ ಕರ್ತವ್ಯಗಳನ್ನು ಅರಿವು ಮಾಡಿಕೊಡುತ್ತಿದ್ದ ಜಗದ್ಗುರುಗಳಿಂದ ಹೊಗಳಿಸಿಕೊಂಡ ಹಾಲಿ ಮತ್ತು ಮಾಜಿಗಳು ಗಲಿಬಿಲಿಗೊಂಡು, ಮತ್ತೊಮ್ಮೆ ಪಾದಗಳಿಗೆ ಪೊಡಮರುವಷ್ಟರಲಿ, ಪೊಲೀಸ್ ಅಧಿಕಾರಿಯೊಬ್ಬರು ಅನಾಮತ್ತು ಜಗದ್ಗುರುವಿನ ಪದತಳಕ್ಕೆ ಡೈ ಹೊಡೆದು ಇಲ್ಲದ ಬಾಲವಾಡಿಸಿದರಂತಲ್ಲಾ.. ಥೂತ್ತೇರಿ.

ಇದೇ ಮಠದ ಭವ್ಯಪರಂಪರೆಯಲ್ಲಿ ಹಿಂದಿನ ಜಗದ್ಗುರುಗಳು ನಡೆಸುತ್ತಿದ್ದ ಸಮಾರಂಭಕ್ಕೆ ಸಮವಸ್ತ್ರದಲ್ಲಿ ಬಂದ ಪೊಲೀಸ್ ಅಧಿಕಾರಿ ಸ್ವಾಮೀಜಿ ಕಾಲಿಗೆ ಬೀಳಲು ಹೋದಾಗ ಸ್ವಾಮಿಗಳು ಅದನ್ನ ತಡೆದು “ನೀವು ಸಮವಸ್ತ್ರದಲ್ಲಿರುವ ಸರಕಾರಿ ಅಧಿಕಾರಿ, ಕಾನೂನು ರಕ್ಷಿಸಬೇಕಾದವರು, ಆದ್ದರಿಂದ ಒಂದು ಮಠದ ಸ್ವಾಮಿ ಕಾಲಿಗೆ ಬೀಳಬಾರದು. ಹಾಗೆ ಗೌರವ ಕೊಡುವುದಿದ್ದರೆ ಸಮವಸ್ತ್ರ ತೆಗೆದು ಖಾಸಗಿ ಕಾರಿನಲ್ಲಿ ಬಂದು ಆಶೀರ್ವಾದ ಪಡೆಯಿರಿ” ಎಂದದ್ದು ಮಠದ ಪರಂಪರೆಯಲ್ಲಿ ಐತಿಹಾಸಿಕ ಘಟನೆಯಾಗಿ ಉಳಿದಿದೆಯಲ್ಲಾ. ಆದರೇನು ಈಚೆಗೆ ಇಲ್ಲಿಗೆ ಬಂದ ಐಪಿಎಸ್ ಅಧಿಕಾರಿಯೊಬ್ಬ ಜಗದ್ಗುರುವಿನ ಕಾಲಿಗೆ ದೀರ್ಘ ದಂಡ ಹೊಡೆದುದ್ದಲ್ಲದೆ ಧರ್ಮವೇ ದೊಡ್ಡದು ಎಂದುಬಿಟ್ಟರಲ್ಲಾ. ಈ ಅಧಿಕಾರಿಯ ಮಾತನ್ನ ಅನುಮೋದಿಸುವುದಾದರೆ, ಆಯ್ತು ಕಾನೂನಿಗಿಂತ ಧರ್ಮ ದೊಡ್ಡದು ಅಂದುಕೊಂಡರೆ, ಸದ್ಯ ತಮ್ಮ ಧರ್ಮ ಹಿಡಿದುಕೊಂಡು ಭಂಡತನ ಪ್ರದರ್ಶನ ಮಾಡುತ್ತಿರುವ ಜಗದ್ಗುರುವಿನ ಎದುರು ಭಕ್ತಾದಿಗಳು ಸಿಡಿದೆದ್ದರೆ ಧರ್ಮವಿರೋಧಿ ಕಾನೂನನ್ನ ಮುಲಾಜಿಲ್ಲದೆ ಜಾರಿ ಮಾಡಲು ರೆಡಿಯಿರುವ ಈ ಪೊಲೀಸ್ ಅಧಿಕಾರಿ ಮತ್ತು ಜಗದ್ಗುರುಗಳ ಪಾದವನ್ನೆ ನೋಡುವ ಜಿಲ್ಲಾಧಿಕಾರಿಗಳ ದೆಸೆಯಿಂದ ನೆಲದ ಕಾನೂನು ನೆಲಸಮವಾಗುತ್ತಿದೆಯಂತಲ್ಲಾ, ಥೂತ್ತೆರಿ.

ದೆಹಲಿಯ ಕೆಂಪುಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಆದರೆ ನೂರು ವರ್ಷದ ನಂತರ ಅಥವ ಐನೂರು ವರ್ಷಗಳೂ ಆಗಬಹುದೆಂದು ಘಂಟಾಘೋಷವಾಗಿ ಹೇಳುತ್ತ ಅದನ್ನ ಸಮರ್ಥಿಸುತ್ತಿರುವ ಬಿಜೆಪಿಯ ಮೇಧಾವಿ ಮಂತ್ರಿಗಳಾದ ಈಶ್ವರಪ್ಪನ ಕೇಸರಿ ಮಾತುಗಳ ಬಗ್ಗೆ ಪತ್ರಕರ್ತರು ಜೆಡಿಎಸ್ ನಾಯಕ ಕುಮಾರಣ್ಣನಿಗೆ ಕೇಳಲಾಗಿ, ಕುಮಾರಣ್ಣ ಥೇಟ್ ಈಶ್ವರಪ್ಪನಂತೆಯೇ ಮಾತನಾಡಿದರಲ್ಲಾ.

“ಕೇಸರಿ ಅನತಕ್ಕಂತದ್ದೇನಿದೆ, ಅದು ಒಂದು ಬಟ್ಟೆ ಅಂತ ನಾವು ಪರಿಗಣಿಸಿ ಮಾತನಾಡತಕ್ಕಂತದ್ದೇನಿದೆ, ಆ ಒಂದು ವಿಷಯ ಇವತ್ತು ಪಡಕಂತಿರತಕ್ಕಂತ ಪ್ರಚಾರಯೇನಿದೆ, ಅದನ್ನ ನಾವು ಪರಿಶೀಲನೆ ಮಾಡಿದ್ರೆ ಈ ಕೇಸರಿ ಸಾಮಾನ್ಯದಾದಂತಹ ಜನ ಧರಸತಕ್ಕಂತ ಬಟ್ಟೆ ಅಲ್ಲ. ಅದೊಂದು ಶ್ರೇಷ್ಠವಾದ ಬಟ್ಟೆ ಅನತಕ್ಕಂತ ವಿಷಯವನ್ನ ನಮ್ಮ ಪರಂಪರೆಲಿ ನಮ್ಮ ಹಿರಿಯರು ತೋರಿಸಿಕೊಟ್ಟಿರತಕ್ಕಂತ ವಿಷಯ ಏನಿದೆ ಆ ಬಗ್ಗೆ ನಾವು ಹಗುರವಾಗಿ ಮಾತನಾಡಕ್ಕಂತದ್ದು ಸರಿಕಾಣದಿಲ್ಲ, ಅನತಕ್ಕಂತದ್ದು ನನ್ನ ಅಭಿಪ್ರಾಯ” ಎಂದರಂತಲ್ಲಾ. ಈ ಮಾತನ್ನ ಕೇಳಿಸಿಕೊಂಡ ಶಿವಮೊಗ್ಗದ ಕಡೆ ಜೆಡಿಎಸ್‌ನವರು ಕುಮಾರಣ್ಣ ಈಶ್ವರಪ್ಪನಂತೆ ಮಾತನಾಡುವುದಾದರೆ ನಾವ್ಯಾಕೆ ಜೆಡಿಎಸ್‌ನಲ್ಲಿರಬೇಕು ಎಂದು ಅನ್ಯ ಪಾರ್ಟಿಯ ಕಡೆ ಗುಳೆ ಹೊರಟಿದ್ದಾರಂತಲ್ಲಾ..

ಥೂತ್ತೇರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...