Homeಅಂಕಣಗಳುಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

ಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

- Advertisement -
- Advertisement -

ಕಾನೂನುಗಳಿಗಿಂತ ನನ್ನ ಧರ್ಮವೇ ದೊಡ್ಡದು, ಆದ್ದರಿಂದ ನಾನು ಕಾನೂನುಗಳಿಗೆ ಹೆದರುವುದಿಲ್ಲ ಎಂಬಂತಹ ಮಾತೊಂದು ಪತ್ರಿಕೆಗಳಲ್ಲಿ ಹರಿದಾಡಿದಾಗ ಗ್ಯಾರಂಟಿ ಈ ಮಾತನ್ನು ತಾಲೀಬಾನಿಗಳು ಆಡಿರಬಹುದು ಅಥವ ಯಾವುದಾದರೂ ಮೂಲಭೂತಾವಾದಿ ಸಂಘಟನೆಯ ಲೀಡರು ಆಡಿರಬಹುದೆಂದು ಅಷ್ಟೇನು ಗಾಬರಿಯಿಲ್ಲದೆ ಹುಡುಕಿದಾಗ ಈ ಮಾತನ್ನಾಡಿದವರು ನಮ್ಮ ಶರಣ ಪರಂಪರೆಯ ಪ್ರಖರ ವಿಚಾರವಾದಿ ಸ್ವಾಮಿಜಿಯೊಬ್ಬರು ಎಂಬುದು ಗೊತ್ತಾದಾಗ ಏರಿ ನೀರುಂಬೊಡೆ, ಬೇಲಿ ಹೊಲ ಮೇಯ್ದೊಡೆ, ನಾರಿ ತನ್ನ ಮನೆಯಲ್ಲಿ ಕದ್ದೊಡೆ ಬದುಕುವುದೇನಯ್ಯ ಎಂಬಂತಾಯ್ತಲ್ಲಾ.

ಮಧ್ಯ ಕರ್ನಾಟಕದ ಒಂದೆರಡು ಜಿಲ್ಲಾ ಪ್ರದೇಶದಲ್ಲಿ ಗೊತ್ತಿರುವ ಜಗದ್ಗುರುವೊಬ್ಬರು ಹೀಗೆ ಮಾತಾಡುತ್ತಿರಬೇಕಾದರೆ, ಅವರು ಕಾನೂನು ಮೀರಿ ಬಹಳ ವರ್ಷಗಳೇ ಆಗಿರಬೇಕು. ಮಠದ ಸಂವಿಧಾನದ ಪ್ರಕಾರ ಅರವತ್ತು ವರ್ಷಕ್ಕೆ ನಿವೃತ್ತಿ ಪಡೆದು, ಮರಿ ಸ್ವಾಮಿಗೆ ಪಟ್ಟಕಟ್ಟಿ ತಾವು ಪಕ್ಕದಲ್ಲಿ ನಿಲ್ಲಬೇಕಿತ್ತು. ಆದರೆ ಮಠದ ಪರಂಪರೆ ಬದಿಗೊತ್ತಿ, ಅರವತ್ತು ವರ್ಷವನ್ನ ಹಿಂದಿಕ್ಕಿ ಮುಂದುವರಿದ ಜಗದ್ಗುರುವಿನ ನಡೆಗೆ ಬೇಸತ್ತ ಭಕ್ತಾದಿಗಳು ಕಾನೂನು ಮೊರೆಹೋಗಿದ್ದಾರಂತಲ್ಲಾ! ಅದಕ್ಕೆ ಹೆದರಿದ ಜಗದ್ಗುರು ನಾನು ಕಾನೂನಿಗೆ ಹೆದರುವುದಿಲ್ಲ ಎಂದರಂತಲ್ಲಾ ಥೂತ್ತೇರಿ.

ಈ ನೆಲದ ಕಾನೂನಿಗಾಗಲಿ ಮಠದ ಕಾನೂನಿಗಾಗಲಿ ಹೆದರುವುದಿಲ್ಲ ಎಂದಮೇಲೆ ಭಂಡತನ ಆವರಿಸುತ್ತೆ. ಆನಂತರ ಮಾಡುವ ಎಲ್ಲ ಕೆಲಸಗಳು ಭಂಡತನದಿಂದಲೇ ಕೂಡಿರುತ್ತವೆ. ಬಹು ಹಿಂದೆ ಜಗದ್ಗುರುಗಳೇ ಬಿಗಿದ ಭಾಷಣವಿದು. ಆ ಮಾತಿನ ಪ್ರಯೋಗಕ್ಕಿಳಿದಂತಿರುವ ಜಗದ್ಗುರುಗಳು ಮಠದ ಆಸ್ತಿಯನ್ನೇ ಸ್ವಂತದ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತ ಅದನ್ನ ದಕ್ಕಿಸಿಕೊಳ್ಳಲು ಟ್ರಸ್ಟು ಮಾಡಿಕೊಂಡು, ಪ್ರತಿಭಟಿಸುವಂತಹ ಭಕ್ತಾದಿಗಳನ್ನು ಬೆದರಿಸಲು ಶಿವಸೈನ್ಯವನ್ನೇ ಕಟ್ಟಿದ್ದಾರಂತಲ್ಲಾ! ಇಂತಹ ಸಾಹಸಗಳನ್ನು ಮಾಡಿದ ಮೇಲೆ ಪ್ರಭುತ್ವದ ರಕ್ಷಣೆ ಬೇಕಿರುತ್ತದೆ. ಅದಕ್ಕಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಕರೆದು ಹಿಗ್ಗಾಮುಗ್ಗ ಹೊಗಳಿದರಂತಲ್ಲಾ! ಹಿಂದೆ ರಾಜಕಾರಣಿಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾ, ಅವರ ಕರ್ತವ್ಯಗಳನ್ನು ಅರಿವು ಮಾಡಿಕೊಡುತ್ತಿದ್ದ ಜಗದ್ಗುರುಗಳಿಂದ ಹೊಗಳಿಸಿಕೊಂಡ ಹಾಲಿ ಮತ್ತು ಮಾಜಿಗಳು ಗಲಿಬಿಲಿಗೊಂಡು, ಮತ್ತೊಮ್ಮೆ ಪಾದಗಳಿಗೆ ಪೊಡಮರುವಷ್ಟರಲಿ, ಪೊಲೀಸ್ ಅಧಿಕಾರಿಯೊಬ್ಬರು ಅನಾಮತ್ತು ಜಗದ್ಗುರುವಿನ ಪದತಳಕ್ಕೆ ಡೈ ಹೊಡೆದು ಇಲ್ಲದ ಬಾಲವಾಡಿಸಿದರಂತಲ್ಲಾ.. ಥೂತ್ತೇರಿ.

ಇದೇ ಮಠದ ಭವ್ಯಪರಂಪರೆಯಲ್ಲಿ ಹಿಂದಿನ ಜಗದ್ಗುರುಗಳು ನಡೆಸುತ್ತಿದ್ದ ಸಮಾರಂಭಕ್ಕೆ ಸಮವಸ್ತ್ರದಲ್ಲಿ ಬಂದ ಪೊಲೀಸ್ ಅಧಿಕಾರಿ ಸ್ವಾಮೀಜಿ ಕಾಲಿಗೆ ಬೀಳಲು ಹೋದಾಗ ಸ್ವಾಮಿಗಳು ಅದನ್ನ ತಡೆದು “ನೀವು ಸಮವಸ್ತ್ರದಲ್ಲಿರುವ ಸರಕಾರಿ ಅಧಿಕಾರಿ, ಕಾನೂನು ರಕ್ಷಿಸಬೇಕಾದವರು, ಆದ್ದರಿಂದ ಒಂದು ಮಠದ ಸ್ವಾಮಿ ಕಾಲಿಗೆ ಬೀಳಬಾರದು. ಹಾಗೆ ಗೌರವ ಕೊಡುವುದಿದ್ದರೆ ಸಮವಸ್ತ್ರ ತೆಗೆದು ಖಾಸಗಿ ಕಾರಿನಲ್ಲಿ ಬಂದು ಆಶೀರ್ವಾದ ಪಡೆಯಿರಿ” ಎಂದದ್ದು ಮಠದ ಪರಂಪರೆಯಲ್ಲಿ ಐತಿಹಾಸಿಕ ಘಟನೆಯಾಗಿ ಉಳಿದಿದೆಯಲ್ಲಾ. ಆದರೇನು ಈಚೆಗೆ ಇಲ್ಲಿಗೆ ಬಂದ ಐಪಿಎಸ್ ಅಧಿಕಾರಿಯೊಬ್ಬ ಜಗದ್ಗುರುವಿನ ಕಾಲಿಗೆ ದೀರ್ಘ ದಂಡ ಹೊಡೆದುದ್ದಲ್ಲದೆ ಧರ್ಮವೇ ದೊಡ್ಡದು ಎಂದುಬಿಟ್ಟರಲ್ಲಾ. ಈ ಅಧಿಕಾರಿಯ ಮಾತನ್ನ ಅನುಮೋದಿಸುವುದಾದರೆ, ಆಯ್ತು ಕಾನೂನಿಗಿಂತ ಧರ್ಮ ದೊಡ್ಡದು ಅಂದುಕೊಂಡರೆ, ಸದ್ಯ ತಮ್ಮ ಧರ್ಮ ಹಿಡಿದುಕೊಂಡು ಭಂಡತನ ಪ್ರದರ್ಶನ ಮಾಡುತ್ತಿರುವ ಜಗದ್ಗುರುವಿನ ಎದುರು ಭಕ್ತಾದಿಗಳು ಸಿಡಿದೆದ್ದರೆ ಧರ್ಮವಿರೋಧಿ ಕಾನೂನನ್ನ ಮುಲಾಜಿಲ್ಲದೆ ಜಾರಿ ಮಾಡಲು ರೆಡಿಯಿರುವ ಈ ಪೊಲೀಸ್ ಅಧಿಕಾರಿ ಮತ್ತು ಜಗದ್ಗುರುಗಳ ಪಾದವನ್ನೆ ನೋಡುವ ಜಿಲ್ಲಾಧಿಕಾರಿಗಳ ದೆಸೆಯಿಂದ ನೆಲದ ಕಾನೂನು ನೆಲಸಮವಾಗುತ್ತಿದೆಯಂತಲ್ಲಾ, ಥೂತ್ತೆರಿ.

ದೆಹಲಿಯ ಕೆಂಪುಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಆದರೆ ನೂರು ವರ್ಷದ ನಂತರ ಅಥವ ಐನೂರು ವರ್ಷಗಳೂ ಆಗಬಹುದೆಂದು ಘಂಟಾಘೋಷವಾಗಿ ಹೇಳುತ್ತ ಅದನ್ನ ಸಮರ್ಥಿಸುತ್ತಿರುವ ಬಿಜೆಪಿಯ ಮೇಧಾವಿ ಮಂತ್ರಿಗಳಾದ ಈಶ್ವರಪ್ಪನ ಕೇಸರಿ ಮಾತುಗಳ ಬಗ್ಗೆ ಪತ್ರಕರ್ತರು ಜೆಡಿಎಸ್ ನಾಯಕ ಕುಮಾರಣ್ಣನಿಗೆ ಕೇಳಲಾಗಿ, ಕುಮಾರಣ್ಣ ಥೇಟ್ ಈಶ್ವರಪ್ಪನಂತೆಯೇ ಮಾತನಾಡಿದರಲ್ಲಾ.

“ಕೇಸರಿ ಅನತಕ್ಕಂತದ್ದೇನಿದೆ, ಅದು ಒಂದು ಬಟ್ಟೆ ಅಂತ ನಾವು ಪರಿಗಣಿಸಿ ಮಾತನಾಡತಕ್ಕಂತದ್ದೇನಿದೆ, ಆ ಒಂದು ವಿಷಯ ಇವತ್ತು ಪಡಕಂತಿರತಕ್ಕಂತ ಪ್ರಚಾರಯೇನಿದೆ, ಅದನ್ನ ನಾವು ಪರಿಶೀಲನೆ ಮಾಡಿದ್ರೆ ಈ ಕೇಸರಿ ಸಾಮಾನ್ಯದಾದಂತಹ ಜನ ಧರಸತಕ್ಕಂತ ಬಟ್ಟೆ ಅಲ್ಲ. ಅದೊಂದು ಶ್ರೇಷ್ಠವಾದ ಬಟ್ಟೆ ಅನತಕ್ಕಂತ ವಿಷಯವನ್ನ ನಮ್ಮ ಪರಂಪರೆಲಿ ನಮ್ಮ ಹಿರಿಯರು ತೋರಿಸಿಕೊಟ್ಟಿರತಕ್ಕಂತ ವಿಷಯ ಏನಿದೆ ಆ ಬಗ್ಗೆ ನಾವು ಹಗುರವಾಗಿ ಮಾತನಾಡಕ್ಕಂತದ್ದು ಸರಿಕಾಣದಿಲ್ಲ, ಅನತಕ್ಕಂತದ್ದು ನನ್ನ ಅಭಿಪ್ರಾಯ” ಎಂದರಂತಲ್ಲಾ. ಈ ಮಾತನ್ನ ಕೇಳಿಸಿಕೊಂಡ ಶಿವಮೊಗ್ಗದ ಕಡೆ ಜೆಡಿಎಸ್‌ನವರು ಕುಮಾರಣ್ಣ ಈಶ್ವರಪ್ಪನಂತೆ ಮಾತನಾಡುವುದಾದರೆ ನಾವ್ಯಾಕೆ ಜೆಡಿಎಸ್‌ನಲ್ಲಿರಬೇಕು ಎಂದು ಅನ್ಯ ಪಾರ್ಟಿಯ ಕಡೆ ಗುಳೆ ಹೊರಟಿದ್ದಾರಂತಲ್ಲಾ..

ಥೂತ್ತೇರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...