Homeಕರ್ನಾಟಕವಾರ್ತಾಭಾರತಿಗೆ ಎರಡು ದಶಕ

ವಾರ್ತಾಭಾರತಿಗೆ ಎರಡು ದಶಕ

- Advertisement -
- Advertisement -

ಕನ್ನಡ ದಿನಪತ್ರಿಕೆ ‘ವಾರ್ತಾಭಾರತಿ’ ಎರಡು ದಶಕಗಳನ್ನು ಪೂರೈಸಿದೆ. ವಾಣಿಜ್ಯಸುದ್ದಿ ಮತ್ತು ಮತೀಯ ನಾಯಕರ ಹೇಳಿಕೆಗಳಿಗೆ ಹೆಚ್ಚಿನ ಪತ್ರಿಕೆಗಳು ಕೊಡುವ ಆದ್ಯತೆಗೆ ಹೋಲಿಸಿದರೆ, ಇದು ಜನಸಾಮಾನ್ಯರ ಸಾಮಾಜಿಕ ರಾಜಕೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾ ಬಂದಿದೆ. ಕರ್ನಾಟಕದ ಮುಖ್ಯ ಪತ್ರಿಕೆಗಳ ಮುಖಪುಟದ ತಲೆಬರೆಹಗಳನ್ನು ‘ವಾರ್ತಾಭಾರತಿ’ಯವುಗಳ ಜತೆಗಿಟ್ಟು ಗಮನಿಸಿದರೆ, ಇದರ ತಾತ್ವಿಕ ನಿಲುವು ಮತ್ತು ರಾಜಕಾರಣದ ದಿಸೆ ಸ್ಪಷ್ಟವಾಗುತ್ತದೆ. ಕಳೆದ ವರ್ಷ ಅಂಬೇಡ್ಕರ್ ಚಿತ್ರಪಟವನ್ನು ತೆಗೆಸಿದ ನ್ಯಾಯಾಧೀಶರ ವಿರುದ್ಧ ನಡೆದ ಚಳವಳಿಯನ್ನು ಇದು ವರದಿ ಮಾಡಿದ ಬಗೆಯನ್ನು ನೆನೆಯಬಹುದು. ‘ವಾರ್ತಾಭಾರತಿ’ ಇಲ್ಲದಿದ್ದರೆ, ಕರ್ನಾಟಕದಲ್ಲಿ ಮುಖ್ಯವಾಗಿ ಕರಾವಳಿಯಲ್ಲಿ ಜರುಗಿದ ಎಷ್ಟೊ ವಿದ್ಯಮಾನಗಳ ಇನ್ನೊಂದು ಮಗ್ಗುಲು ಓದುಗರಿಗೆ ಸಿಗುತ್ತಿರಲಿಲ್ಲ. ಅಡಗಿಸಲಾದ ಸುದ್ದಿಯನ್ನು ಅಥವಾ ಘಟನೆಯ ಇನ್ನೊಂದು ಮಗ್ಗುಲನ್ನು ಬಿಡಿಸಿ ತೋರಿಸುವುದು, ಭಿನ್ನಮತ ಹುಟ್ಟಿಸುವುದು, ಚಿಂತನಶೀಲತೆ ಬೆಳೆಸುವುದು ಸಾರ್ವಜನಿಕ ಚಿಂತಕರು ಮತ್ತು ಪತ್ರಿಕೆಗಳು ಮಾಡಬೇಕಾದ ಕೆಲಸ. ‘ವಾರ್ತಾಭಾರತಿ’ ಭಿನ್ನಮತವನ್ನು ಮತ್ತು ಸುದ್ದಿಯ ಭಿನ್ನಮಗ್ಗುಲನ್ನು ದಾಖಲಿಸುತ್ತ ಬಂದಿದೆ.

ಮತೀಯವಾದದ ಪ್ರಯೋಗಭೂಮಿಯಾಗಿರುವ ಕರಾವಳಿಯಲ್ಲಿದ್ದು ಇದು ರೂಪುಗೊಂಡಿತು ಮತ್ತು ಎರಡು ದಶಕ ದಾಟಿದೆ. ಈ ಸಂಗತಿಗೆ ಚಾರಿತ್ರಿಕ ಮಹತ್ವವಿದೆ. ಕರಾವಳಿಯಲ್ಲಿ ಹುಟ್ಟುವ ಜನಪರ ಪತ್ರಿಕೆಗಳು ಬೇರುಬಿಡದಂತೆ ಕೊರಳುಗೊಯ್ಕ ಸ್ಪರ್ಧೆಯನ್ನೊಡ್ಡುವ ಸನ್ನಿವೇಶವಿದೆ. ಜನಪರ ಪತ್ರಿಕೆಗಳಿಗೆ ಇದು ಔದ್ಯಮಿಕ ಸ್ಪರ್ಧೆ ಮಾತ್ರವಾಗಿರದೆ, ಸೈದ್ಧಾಂತಿಕ ಹೋರಾಟವೂ ಆಗಿದೆ. ‘ಮುಂಗಾರು’ ಹಾಗೆ ಜನ್ಮ ತಳೆದಿದ್ದು. ಅದನ್ನು ಓದುವುದು, ಅದಕ್ಕೆ ಬರೆಯುವುದು ಮತ್ತು ಚಂದಾ ಮಾಡಿಸುವುದು ನಮಗೆಲ್ಲ ಚಳವಳಿಯ ಕೆಲಸವಾಗಿತ್ತು. ಆದರೆ ನಾನಾ ಕಾರಣಗಳಿಂದ ‘ಮುಂಗಾರು’, ಬಳಿಕ ಬಂದ ‘ಜನವಾಹಿನಿ’ ಪತ್ರಿಕೆಗಳು ಸೋತು ನಿರ್ಗಮಿಸಿದವು. ಆದರೆ ಇವು ನಡೆದ ನಿಲ್ಲಿಸಿದ ಹಾದಿಯಲ್ಲಿ ಪ್ರಯಣ ಆರಂಭಿಸಿದ ‘ವಾರ್ತಾಭಾರತಿ’ ಕರಾವಳಿಯಲ್ಲಿರುವ ಪೈಪೋಟಿಯ ಕದನದಲ್ಲಿ ಬದುಕಿದೆ. ಇದು ಮತೀಯವಾದದ ವಿರುದ್ಧ ಕೆಲಸ ಮಾಡುವ ಚಳವಳಿ ಮತ್ತು ಸಂಗಾತಿಗಳಿಗೆ ವೇದಿಕೆಯಾಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಅಂಕಣ ಬರೆಹಗಳು, ಬಲಪಂಥೀಯ ರಾಜಕೀಯಕ್ಕೆ ಸಾಂಸ್ಕೃತಿಕ ಪ್ರತಿರೋಧವನ್ನು ಕಟ್ಟುವ ಕೆಲಸ ಮಾಡಿವೆ.

ಸಂಪಾದಕೀಯವು ಯಾವುದೇ ಪತ್ರಿಕೆಯ ದೃಷ್ಟಿಕೋನವನ್ನು ಪ್ರಕಟಪಡಿಸುವ ಹೃದಯ ಭಾಗ. ಆದರೆ ಕರ್ನಾಕಟದ ಕೆಲವು ಪತ್ರಿಕೆಗಳಿಗೆ ಸಂಪಾದಕೀಯಗಳೇ ಇಲ್ಲ. ಸಂಪಾದಕೀಯ ಇರುವ ಕೆಲವು ಪತ್ರಿಕೆಗಳಲ್ಲಿ ಅದು ಮಹತ್ವದ ಭಾಗವಾಗಿಲ್ಲ. ಸಂಪಾದಕೀಯ ಹೊಣೆಗಾರಿಕೆಯನ್ನು ಕಿರುಪತ್ರಿಕೆಗಳು ಅರ್ಥಪೂರ್ಣವಾಗಿ ನಿಭಾಯಿಸಿಕೊಂಡು ಬಂದ ಚರಿತ್ರೆಯಿದೆ. ‘ಜೀವನ’ ಪತ್ರಿಕೆಗೆ ಮಾಸ್ತಿ, ‘ರುಜುವಾತು’ಗೆ ಅನಂತಮೂರ್ತಿ, ‘ಸಂಕ್ರಮಣ’ಕ್ಕೆ ಚಂಪಾ, ‘ಪ್ರಪಂಚ’ಕ್ಕೆ ಪಾಪು, ‘ಲಂಕೇಶ್ ಪತ್ರಿಕೆ’ಗೆ ಲಂಕೇಶ್, ‘ಗೌರಿ ಲಂಕೇಶ್’ ಪತ್ರಿಕೆಗೆ ಗೌರಿಲಂಕೇಶ್ ಬರೆದ ಸಂಪಾದಕೀಯಗಳು ಪುಸ್ತಕಗಳಾಗಿ ಪ್ರಕಟವಾಗಿವೆ; ಕನ್ನಡ ಚಿಂತನ ಸಾಹಿತ್ಯದ ಭಾಗವಾಗಿವೆ. ತಿಂಗಳ ಅಥವಾ ವಾರದ ಪತ್ರಿಕೆಗಳಲ್ಲಿ ಚಿಂತನಶೀಲವಾದ ಧ್ಯಾನಸ್ಥ ಸಂಪಾದಕೀಯಗಳು ಸಾಧ್ಯ. ಆದರೆ ದಿನವೂ ಪ್ರಕಟವಾಗುವ ಧಾವಂತದ ದಿನಪತ್ರಿಕೆಗಳಲ್ಲಿ ಇವು ಕಷ್ಟ. ಆದರೂ ‘ಹಿಂದೂ’ ‘ಡೆಕ್ಕನ್‌ಹೆರಾಲ್ಡ್’ ಪತ್ರಿಕೆಗಳ, ಈಚೆಗೆ ‘ಪ್ರಜಾವಾಣಿ’ಯ ಸಂಪಾದಕೀಯಗಳು ತಮ್ಮ ಖಚಿತ ಮತ್ತು ಪ್ರಗತಿಪರ ನಾಡನ್ನು ಕಟ್ಟುವ ಕಾಳಜಿಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿವೆ. ರಘುರಾಮಶೆಟ್ಟರು ‘ಮುಂಗಾರು’ ಪತ್ರಿಕೆಗಳಿಗೆ ಬರೆಯುತ್ತಿದ್ದ ಸಂಪಾದಕೀಯಗಳು ಚಿಂತನೆಯಿಂದ ಕೂಡಿರುತ್ತಿದ್ದವು. ಅವು ಈಗ ಪುಸ್ತಕವಾಗಿ ಹೊರಬಂದಿವೆ.

ಈ ಹಿನ್ನೆಲೆಯಲ್ಲಿ ವಾರ್ತಾಭಾರತಿಯ ಸಂಪಾದಕೀಯಗಳಲ್ಲಿರುವ ಚಿಂತನಶೀಲತೆ, ರಾಜಕೀಯ ಪ್ರಜ್ಞೆ, ಅಂತಾರಾಷ್ಟ್ರೀಯ ರಾಜಕಾರಣದ ಅರಿವು, ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯ ಬಗೆಗಿನ ಸೈದ್ಧಾಂತಿಕ ಪ್ರತಿರೋಧ, ಜನಪರ ಕಾಳಜಿ ಮತ್ತು ಬದ್ಧತೆ, ತಾತ್ವಿಕ ಖಚಿತತೆ ಮುಖ್ಯವಾಗಿವೆ. ಸಂಪಾದಕೀಯದ ಭಾಷೆಯಲ್ಲಿ ತಾರ್ಕಿಕ ಬಿಗಿಯಿರುತ್ತದೆ. ಹೊಣೆಗಾರಿಕೆ, ಬಿಕ್ಕಟ್ಟಿನ ಸನ್ನಿವೇಶದಲ್ಲಿ ವಿದ್ಯಮಾನವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ರೀತಿ, ಪರ್ಯಾಯಗಳನ್ನು ಹೊಳೆಸುವ ಬಗೆ, ನಾಡನ್ನು ಕಟ್ಟುವ ಕಾಣ್ಕೆ ಇರುತ್ತದೆ. ರಾಜಕೀಯವಾಗಿ ಸರಿತನಕ್ಕಾಗಿ ಅತಿ ಎಚ್ಚರವಹಿಸದೆ, ಚರ್ಚಿಸಲು ಹಿಂಜರಿಕೆ ಹುಟ್ಟಿಸುವ ಸಂಕೀರ್ಣ ವಿಷಯಗಳ ಬಗ್ಗೆ, ದಿಟ್ಟವಾದ ಸಂಪಾದಕೀಯಗಳು ಇಲ್ಲಿವೆ. ತಪ್ಪಾದ ಧೋರಣೆಯ ಸಂಪಾದಕೀಯ ಬಂದಾಗ ಓದುಗರು ಹೀಗಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿರುವುದೂ ಉಂಟು. ಉದಾಹರಣೆಗೆ ಆಫಘಾನಿಸ್ಥಾನದಲ್ಲಿ ಸಾಮ್ರಾಜ್ಯಶಾಹಿ ಅಮೆರಿಕದ ನಿರ್ಗಮನದ ಹೊತ್ತಲ್ಲಿ ಸಂಭವಿಸಿದ ಅಧಿಕಾರ ಬದಲಾವಣೆಯ ಕುರಿತು ಬರೆಯಲಾದ ಸಂಪಾದಕೀಯ. ವಾರ್ತಾಭಾರತಿಯ ಆಯ್ದ ಸಂಪಾದಕೀಯಗಳು ಪುಸ್ತಕ ರೂಪದಲ್ಲಿ ಪ್ರಕಟವಾದರೆ ಕನ್ನಡ ಚಿಂತನ ಸಾಹಿತ್ಯಕ್ಕೆ ಕೊಡುಗೆಯಾಗಬಲ್ಲವು; ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕೈಪಿಡಿಯಾಗಬಲ್ಲವು.

ಕನ್ನಡದಲ್ಲಿ ಬಂಡವಾಳ ಹೂಡಿಕೆ, ಪ್ರಸರಣ ಸಂಖ್ಯೆ, ಗುಣಮಟ್ಟಗಳ ದೃಷ್ಟಿಯಿಂದ ಯಶಸ್ಸನ್ನು ಸಾಧಿಸಿದ ಪತ್ರಿಕೆಗಳು ಬಹಳಷ್ಟಿವೆ. ಆದರೆ ಸುದ್ದಿ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಆ ಮೂಲಕ ಒಂದು ತಾತ್ವಿಕ ಚಿಂತನೆ ಮಂಡಿಸುವ ವಿಷಯ ಬಂದಾಗ, ಹೆಚ್ಚಿನವು ನಿರಾಶೆ ಹುಟ್ಟಿಸುತ್ತವೆ. ಕೆಲವಕ್ಕೆ ನಮ್ಮ ಕಣ್ಣೆದುರಿನ ಸಮಾಜ ಕುರಿತಂತೆ ಒಂದು ಆಳವಾದ ದಾರ್ಶನಿಕ ದೃಷ್ಟಿಕೋನವೇ ಇರುವುದಿಲ್ಲ. ಇದಕ್ಕೆ ಕಾರಣ, ಅಲ್ಲಿ ಬರೆಯುವ ಚಿಂತಕರ ಗುಣಮಟ್ಟವೂ ಕಾರಣ. ಆದರೆ ಕೆಲವು ಪತ್ರಿಕೆಗಳಲ್ಲಿ ಸುದ್ದಿಗಿಂತ ಸುದ್ದಿ ವಿಶ್ಲೇಷಣೆಗಳೇ ಅವುಗಳ ಹಿರಿಮೆಗೆ ಕಾರಣ. ಅಲ್ಲಿನ ಚಿಂತಕರು ಮಾಡುವ ವಿದ್ಯಮಾನಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಓದುಗರ ಅರಿವನ್ನು ವಿಸ್ತರಿಸಿವೆ ಮತ್ತು ಚಿಂತಿಸುವ ದೃಷ್ಟಿಕೋನವನ್ನೆ ಬದಲಿಸಿವೆ. ‘ವಾರ್ತಾಭಾರತಿ’ಯಲ್ಲಿ ನಾಡಿನ ಅತ್ಯುತ್ತಮ ಚಿಂತಕರು ಬರೆಯುತ್ತಾ ಬಂದಿದ್ದಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಸೆ. 5ಕ್ಕೆ ಗೌರಿ ನೆನಪು ಕಾರ್ಯಕ್ರಮ: ಅರುಂಧತಿರಾಯ್, ಪ್ರಕಾಶ್ ರಾಜ್, ಮೊಹಮ್ಮದ್ ಝುಬೇರ್ ಭಾಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...