Homeಕರ್ನಾಟಕವಾರ್ತಾಭಾರತಿಗೆ ಎರಡು ದಶಕ

ವಾರ್ತಾಭಾರತಿಗೆ ಎರಡು ದಶಕ

- Advertisement -
- Advertisement -

ಕನ್ನಡ ದಿನಪತ್ರಿಕೆ ‘ವಾರ್ತಾಭಾರತಿ’ ಎರಡು ದಶಕಗಳನ್ನು ಪೂರೈಸಿದೆ. ವಾಣಿಜ್ಯಸುದ್ದಿ ಮತ್ತು ಮತೀಯ ನಾಯಕರ ಹೇಳಿಕೆಗಳಿಗೆ ಹೆಚ್ಚಿನ ಪತ್ರಿಕೆಗಳು ಕೊಡುವ ಆದ್ಯತೆಗೆ ಹೋಲಿಸಿದರೆ, ಇದು ಜನಸಾಮಾನ್ಯರ ಸಾಮಾಜಿಕ ರಾಜಕೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾ ಬಂದಿದೆ. ಕರ್ನಾಟಕದ ಮುಖ್ಯ ಪತ್ರಿಕೆಗಳ ಮುಖಪುಟದ ತಲೆಬರೆಹಗಳನ್ನು ‘ವಾರ್ತಾಭಾರತಿ’ಯವುಗಳ ಜತೆಗಿಟ್ಟು ಗಮನಿಸಿದರೆ, ಇದರ ತಾತ್ವಿಕ ನಿಲುವು ಮತ್ತು ರಾಜಕಾರಣದ ದಿಸೆ ಸ್ಪಷ್ಟವಾಗುತ್ತದೆ. ಕಳೆದ ವರ್ಷ ಅಂಬೇಡ್ಕರ್ ಚಿತ್ರಪಟವನ್ನು ತೆಗೆಸಿದ ನ್ಯಾಯಾಧೀಶರ ವಿರುದ್ಧ ನಡೆದ ಚಳವಳಿಯನ್ನು ಇದು ವರದಿ ಮಾಡಿದ ಬಗೆಯನ್ನು ನೆನೆಯಬಹುದು. ‘ವಾರ್ತಾಭಾರತಿ’ ಇಲ್ಲದಿದ್ದರೆ, ಕರ್ನಾಟಕದಲ್ಲಿ ಮುಖ್ಯವಾಗಿ ಕರಾವಳಿಯಲ್ಲಿ ಜರುಗಿದ ಎಷ್ಟೊ ವಿದ್ಯಮಾನಗಳ ಇನ್ನೊಂದು ಮಗ್ಗುಲು ಓದುಗರಿಗೆ ಸಿಗುತ್ತಿರಲಿಲ್ಲ. ಅಡಗಿಸಲಾದ ಸುದ್ದಿಯನ್ನು ಅಥವಾ ಘಟನೆಯ ಇನ್ನೊಂದು ಮಗ್ಗುಲನ್ನು ಬಿಡಿಸಿ ತೋರಿಸುವುದು, ಭಿನ್ನಮತ ಹುಟ್ಟಿಸುವುದು, ಚಿಂತನಶೀಲತೆ ಬೆಳೆಸುವುದು ಸಾರ್ವಜನಿಕ ಚಿಂತಕರು ಮತ್ತು ಪತ್ರಿಕೆಗಳು ಮಾಡಬೇಕಾದ ಕೆಲಸ. ‘ವಾರ್ತಾಭಾರತಿ’ ಭಿನ್ನಮತವನ್ನು ಮತ್ತು ಸುದ್ದಿಯ ಭಿನ್ನಮಗ್ಗುಲನ್ನು ದಾಖಲಿಸುತ್ತ ಬಂದಿದೆ.

ಮತೀಯವಾದದ ಪ್ರಯೋಗಭೂಮಿಯಾಗಿರುವ ಕರಾವಳಿಯಲ್ಲಿದ್ದು ಇದು ರೂಪುಗೊಂಡಿತು ಮತ್ತು ಎರಡು ದಶಕ ದಾಟಿದೆ. ಈ ಸಂಗತಿಗೆ ಚಾರಿತ್ರಿಕ ಮಹತ್ವವಿದೆ. ಕರಾವಳಿಯಲ್ಲಿ ಹುಟ್ಟುವ ಜನಪರ ಪತ್ರಿಕೆಗಳು ಬೇರುಬಿಡದಂತೆ ಕೊರಳುಗೊಯ್ಕ ಸ್ಪರ್ಧೆಯನ್ನೊಡ್ಡುವ ಸನ್ನಿವೇಶವಿದೆ. ಜನಪರ ಪತ್ರಿಕೆಗಳಿಗೆ ಇದು ಔದ್ಯಮಿಕ ಸ್ಪರ್ಧೆ ಮಾತ್ರವಾಗಿರದೆ, ಸೈದ್ಧಾಂತಿಕ ಹೋರಾಟವೂ ಆಗಿದೆ. ‘ಮುಂಗಾರು’ ಹಾಗೆ ಜನ್ಮ ತಳೆದಿದ್ದು. ಅದನ್ನು ಓದುವುದು, ಅದಕ್ಕೆ ಬರೆಯುವುದು ಮತ್ತು ಚಂದಾ ಮಾಡಿಸುವುದು ನಮಗೆಲ್ಲ ಚಳವಳಿಯ ಕೆಲಸವಾಗಿತ್ತು. ಆದರೆ ನಾನಾ ಕಾರಣಗಳಿಂದ ‘ಮುಂಗಾರು’, ಬಳಿಕ ಬಂದ ‘ಜನವಾಹಿನಿ’ ಪತ್ರಿಕೆಗಳು ಸೋತು ನಿರ್ಗಮಿಸಿದವು. ಆದರೆ ಇವು ನಡೆದ ನಿಲ್ಲಿಸಿದ ಹಾದಿಯಲ್ಲಿ ಪ್ರಯಣ ಆರಂಭಿಸಿದ ‘ವಾರ್ತಾಭಾರತಿ’ ಕರಾವಳಿಯಲ್ಲಿರುವ ಪೈಪೋಟಿಯ ಕದನದಲ್ಲಿ ಬದುಕಿದೆ. ಇದು ಮತೀಯವಾದದ ವಿರುದ್ಧ ಕೆಲಸ ಮಾಡುವ ಚಳವಳಿ ಮತ್ತು ಸಂಗಾತಿಗಳಿಗೆ ವೇದಿಕೆಯಾಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಅಂಕಣ ಬರೆಹಗಳು, ಬಲಪಂಥೀಯ ರಾಜಕೀಯಕ್ಕೆ ಸಾಂಸ್ಕೃತಿಕ ಪ್ರತಿರೋಧವನ್ನು ಕಟ್ಟುವ ಕೆಲಸ ಮಾಡಿವೆ.

ಸಂಪಾದಕೀಯವು ಯಾವುದೇ ಪತ್ರಿಕೆಯ ದೃಷ್ಟಿಕೋನವನ್ನು ಪ್ರಕಟಪಡಿಸುವ ಹೃದಯ ಭಾಗ. ಆದರೆ ಕರ್ನಾಕಟದ ಕೆಲವು ಪತ್ರಿಕೆಗಳಿಗೆ ಸಂಪಾದಕೀಯಗಳೇ ಇಲ್ಲ. ಸಂಪಾದಕೀಯ ಇರುವ ಕೆಲವು ಪತ್ರಿಕೆಗಳಲ್ಲಿ ಅದು ಮಹತ್ವದ ಭಾಗವಾಗಿಲ್ಲ. ಸಂಪಾದಕೀಯ ಹೊಣೆಗಾರಿಕೆಯನ್ನು ಕಿರುಪತ್ರಿಕೆಗಳು ಅರ್ಥಪೂರ್ಣವಾಗಿ ನಿಭಾಯಿಸಿಕೊಂಡು ಬಂದ ಚರಿತ್ರೆಯಿದೆ. ‘ಜೀವನ’ ಪತ್ರಿಕೆಗೆ ಮಾಸ್ತಿ, ‘ರುಜುವಾತು’ಗೆ ಅನಂತಮೂರ್ತಿ, ‘ಸಂಕ್ರಮಣ’ಕ್ಕೆ ಚಂಪಾ, ‘ಪ್ರಪಂಚ’ಕ್ಕೆ ಪಾಪು, ‘ಲಂಕೇಶ್ ಪತ್ರಿಕೆ’ಗೆ ಲಂಕೇಶ್, ‘ಗೌರಿ ಲಂಕೇಶ್’ ಪತ್ರಿಕೆಗೆ ಗೌರಿಲಂಕೇಶ್ ಬರೆದ ಸಂಪಾದಕೀಯಗಳು ಪುಸ್ತಕಗಳಾಗಿ ಪ್ರಕಟವಾಗಿವೆ; ಕನ್ನಡ ಚಿಂತನ ಸಾಹಿತ್ಯದ ಭಾಗವಾಗಿವೆ. ತಿಂಗಳ ಅಥವಾ ವಾರದ ಪತ್ರಿಕೆಗಳಲ್ಲಿ ಚಿಂತನಶೀಲವಾದ ಧ್ಯಾನಸ್ಥ ಸಂಪಾದಕೀಯಗಳು ಸಾಧ್ಯ. ಆದರೆ ದಿನವೂ ಪ್ರಕಟವಾಗುವ ಧಾವಂತದ ದಿನಪತ್ರಿಕೆಗಳಲ್ಲಿ ಇವು ಕಷ್ಟ. ಆದರೂ ‘ಹಿಂದೂ’ ‘ಡೆಕ್ಕನ್‌ಹೆರಾಲ್ಡ್’ ಪತ್ರಿಕೆಗಳ, ಈಚೆಗೆ ‘ಪ್ರಜಾವಾಣಿ’ಯ ಸಂಪಾದಕೀಯಗಳು ತಮ್ಮ ಖಚಿತ ಮತ್ತು ಪ್ರಗತಿಪರ ನಾಡನ್ನು ಕಟ್ಟುವ ಕಾಳಜಿಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿವೆ. ರಘುರಾಮಶೆಟ್ಟರು ‘ಮುಂಗಾರು’ ಪತ್ರಿಕೆಗಳಿಗೆ ಬರೆಯುತ್ತಿದ್ದ ಸಂಪಾದಕೀಯಗಳು ಚಿಂತನೆಯಿಂದ ಕೂಡಿರುತ್ತಿದ್ದವು. ಅವು ಈಗ ಪುಸ್ತಕವಾಗಿ ಹೊರಬಂದಿವೆ.

ಈ ಹಿನ್ನೆಲೆಯಲ್ಲಿ ವಾರ್ತಾಭಾರತಿಯ ಸಂಪಾದಕೀಯಗಳಲ್ಲಿರುವ ಚಿಂತನಶೀಲತೆ, ರಾಜಕೀಯ ಪ್ರಜ್ಞೆ, ಅಂತಾರಾಷ್ಟ್ರೀಯ ರಾಜಕಾರಣದ ಅರಿವು, ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯ ಬಗೆಗಿನ ಸೈದ್ಧಾಂತಿಕ ಪ್ರತಿರೋಧ, ಜನಪರ ಕಾಳಜಿ ಮತ್ತು ಬದ್ಧತೆ, ತಾತ್ವಿಕ ಖಚಿತತೆ ಮುಖ್ಯವಾಗಿವೆ. ಸಂಪಾದಕೀಯದ ಭಾಷೆಯಲ್ಲಿ ತಾರ್ಕಿಕ ಬಿಗಿಯಿರುತ್ತದೆ. ಹೊಣೆಗಾರಿಕೆ, ಬಿಕ್ಕಟ್ಟಿನ ಸನ್ನಿವೇಶದಲ್ಲಿ ವಿದ್ಯಮಾನವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ರೀತಿ, ಪರ್ಯಾಯಗಳನ್ನು ಹೊಳೆಸುವ ಬಗೆ, ನಾಡನ್ನು ಕಟ್ಟುವ ಕಾಣ್ಕೆ ಇರುತ್ತದೆ. ರಾಜಕೀಯವಾಗಿ ಸರಿತನಕ್ಕಾಗಿ ಅತಿ ಎಚ್ಚರವಹಿಸದೆ, ಚರ್ಚಿಸಲು ಹಿಂಜರಿಕೆ ಹುಟ್ಟಿಸುವ ಸಂಕೀರ್ಣ ವಿಷಯಗಳ ಬಗ್ಗೆ, ದಿಟ್ಟವಾದ ಸಂಪಾದಕೀಯಗಳು ಇಲ್ಲಿವೆ. ತಪ್ಪಾದ ಧೋರಣೆಯ ಸಂಪಾದಕೀಯ ಬಂದಾಗ ಓದುಗರು ಹೀಗಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿರುವುದೂ ಉಂಟು. ಉದಾಹರಣೆಗೆ ಆಫಘಾನಿಸ್ಥಾನದಲ್ಲಿ ಸಾಮ್ರಾಜ್ಯಶಾಹಿ ಅಮೆರಿಕದ ನಿರ್ಗಮನದ ಹೊತ್ತಲ್ಲಿ ಸಂಭವಿಸಿದ ಅಧಿಕಾರ ಬದಲಾವಣೆಯ ಕುರಿತು ಬರೆಯಲಾದ ಸಂಪಾದಕೀಯ. ವಾರ್ತಾಭಾರತಿಯ ಆಯ್ದ ಸಂಪಾದಕೀಯಗಳು ಪುಸ್ತಕ ರೂಪದಲ್ಲಿ ಪ್ರಕಟವಾದರೆ ಕನ್ನಡ ಚಿಂತನ ಸಾಹಿತ್ಯಕ್ಕೆ ಕೊಡುಗೆಯಾಗಬಲ್ಲವು; ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕೈಪಿಡಿಯಾಗಬಲ್ಲವು.

ಕನ್ನಡದಲ್ಲಿ ಬಂಡವಾಳ ಹೂಡಿಕೆ, ಪ್ರಸರಣ ಸಂಖ್ಯೆ, ಗುಣಮಟ್ಟಗಳ ದೃಷ್ಟಿಯಿಂದ ಯಶಸ್ಸನ್ನು ಸಾಧಿಸಿದ ಪತ್ರಿಕೆಗಳು ಬಹಳಷ್ಟಿವೆ. ಆದರೆ ಸುದ್ದಿ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಆ ಮೂಲಕ ಒಂದು ತಾತ್ವಿಕ ಚಿಂತನೆ ಮಂಡಿಸುವ ವಿಷಯ ಬಂದಾಗ, ಹೆಚ್ಚಿನವು ನಿರಾಶೆ ಹುಟ್ಟಿಸುತ್ತವೆ. ಕೆಲವಕ್ಕೆ ನಮ್ಮ ಕಣ್ಣೆದುರಿನ ಸಮಾಜ ಕುರಿತಂತೆ ಒಂದು ಆಳವಾದ ದಾರ್ಶನಿಕ ದೃಷ್ಟಿಕೋನವೇ ಇರುವುದಿಲ್ಲ. ಇದಕ್ಕೆ ಕಾರಣ, ಅಲ್ಲಿ ಬರೆಯುವ ಚಿಂತಕರ ಗುಣಮಟ್ಟವೂ ಕಾರಣ. ಆದರೆ ಕೆಲವು ಪತ್ರಿಕೆಗಳಲ್ಲಿ ಸುದ್ದಿಗಿಂತ ಸುದ್ದಿ ವಿಶ್ಲೇಷಣೆಗಳೇ ಅವುಗಳ ಹಿರಿಮೆಗೆ ಕಾರಣ. ಅಲ್ಲಿನ ಚಿಂತಕರು ಮಾಡುವ ವಿದ್ಯಮಾನಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಓದುಗರ ಅರಿವನ್ನು ವಿಸ್ತರಿಸಿವೆ ಮತ್ತು ಚಿಂತಿಸುವ ದೃಷ್ಟಿಕೋನವನ್ನೆ ಬದಲಿಸಿವೆ. ‘ವಾರ್ತಾಭಾರತಿ’ಯಲ್ಲಿ ನಾಡಿನ ಅತ್ಯುತ್ತಮ ಚಿಂತಕರು ಬರೆಯುತ್ತಾ ಬಂದಿದ್ದಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಸೆ. 5ಕ್ಕೆ ಗೌರಿ ನೆನಪು ಕಾರ್ಯಕ್ರಮ: ಅರುಂಧತಿರಾಯ್, ಪ್ರಕಾಶ್ ರಾಜ್, ಮೊಹಮ್ಮದ್ ಝುಬೇರ್ ಭಾಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...