Homeಅಂಕಣಗಳುಎರಡು ದುಃಖದ ಸಂಗತಿ ಎದುರಾದವಲ್ಲಾ

ಎರಡು ದುಃಖದ ಸಂಗತಿ ಎದುರಾದವಲ್ಲಾ

- Advertisement -
- Advertisement -

ಈವಾರ ಎರಡು ದುಃಖಕರ ಸಂಗತಿಗಳು ಹೊರಬಿದ್ದಿವೆಯಲ್ಲಾ. ಮೊದಲನೆಯದಾಗಿ ನಮ್ಮ ಸಭ್ಯರಾಜಕಾರಣಿ ಎಸ್.ಎಂ ಕೃಷ್ಣ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರಕ್ಕೆ ಬಿಜೆಪಿಗಳು ಕಿವಿ ಕೇಳದಂತಿರುವುದು ಸಹಜ. ಕೃಷ್ಣ ತಮ್ಮ ರಾಜಕಾರಣದ ಇತಿಹಾಸದಲ್ಲಿ ಎಂದೂ ಅಸಭ್ಯವಾಗಿ ನಡೆದುಕೊಂಡವರಲ್ಲ. ಅಸಂಬದ್ಧ ಮಾತನಾಡಿದವರಲ್ಲಾ. ಯಾರನ್ನೂ ಕಟುವಾಗಿ ಟೀಕಿಸಿದವರಲ್ಲ. ತಮ್ಮ ಕಾರಿನ ಡ್ರೈವರನ್ನು ಕೂಡ ಬಹುವಚನದಲ್ಲಿ ಮಾತನಾಡಿಸಿದ ವ್ಯಕ್ತಿ. ಎಲ್ಲಕ್ಕಿಂತ ಮುಖ್ಯವಾಗಿ ನರಹಂತಕ ವೀರಪ್ಪನ್‌ನನ್ನು, ’ವೀರಪ್ಪನ್‌ರವರೆ’ ಎಂದು ಸಂಭೋಧಿಸಿ “ಕಿಸ್ನ ನಲ್ಲ ಪೆರಿಯವರು” ಎಂಬ ಬಿರುದು ಪಡೆದವರು. ಕೃಷ್ಣರಲ್ಲಿರುವ ಈ ಗುಣಗಳಿಗಾಗಿ ಅವರು ಸುಮ್ಮನಾಗಬಹುದಿತ್ತು. ಅದುಬಿಟ್ಟು, ತಮ್ಮ ನಡವಳಿಕೆ ಭಾಷೆ ಮತ್ತು ಬುದ್ಧಿಯ ಸಮೀಪಕ್ಕೂ ಬಾರದ ಬಿಜೆಪಿ ಸೇರಿದ್ದು ಈ ಶತಮಾನದ ರಾಜಕೀಯ ದ್ರೋಹವಾಗಿ ಕಂಡಿತಂತಲ್ಲಾ. ಯಾರೋ ರಾಹುಲ್‌ಗಾಂಧಿಯವರನ್ನು ಕೇಳಿದಾಗ, ಇದು ಕೃಷ್ಣರ ಸಮಸ್ಯೆ, ಕಾಂಗ್ರೆಸ್ ಮತ್ತು ಬಿಜೆಪಿ ಸಮಸ್ಯೆಯಲ್ಲ; ಅಲ್ಲಿ ಯಾರೂ ಇವರನ್ನು ಕರೆದಿಲ್ಲ ಎಂದುಬಿಟ್ಟಿದ್ದರಲ್ಲಾ. ಆದರೇನು ಕೃಷ್ಣ ಎಲ್ಲವನ್ನು ಬಿಟ್ಟು ಬಿಜೆಪಿಯ ಬಾಗಿಲಿಗೆ ಹೋದರು. ಖಾಲಿಯಿದ್ದ ಒಂದು ಆರಾಮ ಕುರ್ಚಿಯಲ್ಲಿ ಕುಳಿತರು. ಯಾರೂ ಕ್ಯಾರೆ ಅನ್ನಲಿಲ್ಲ. ನಿಧಾನವಾಗಿ ಎದ್ದು ಬರ್ತಿನಿ ಇವುರೆ, ಬಹಳ ಹೊತ್ತು ಕೂರಕ್ಕೆ ವಯಸ್ಸು ಪರ್ಮಿಟ್ ಮಾಡ್ತ ಇಲ್ಲ ಎಂದು ನಿಧಾನವಾಗಿ ಎದ್ದು ಹೊರಟಾಗಲೂ ಯಾವ ಬಿಜೆಪಿಗಳೂ ಕೂಡ ಆಯ್ತು ಸರ್ ಹೋಗಿ ಬನ್ನಿ ಅನ್ನಲಿಲ್ಲವಂತಲ್ಲಾ, ಥೂತ್ತೇರಿ.

*******

ಎರಡನೆ ದುಃಖಪೂರಿತ ಸಂಗತಿ ಯಾವುದೆಂದರೇ ಗೃಹಮಂತ್ರಿ ಆರಗ ಜ್ಞಾನೇಂದ್ರ ಆತ್ಮಹತ್ಯೆಯ ಮಾತನಾಡಿರುವುದು. ಕರ್ನಾಟಕದ ರಾಜಕೀಯದ ಆಗಸದಲ್ಲಿ ಎಂದೆಂದೂ ಮಿನುಗುವ ನಕ್ಷತ್ರವಾಗುಳಿದಿರುವ ಶಾಂತವೇರಿ ಗೋಪಾಲಗೌಡರು ಆರಿಸಿ ಬಂದಿದ್ದ ತೀರ್ಥಹಳ್ಳಿಯನ್ನು ಪ್ರತಿನಿಧಿಸುತ್ತಿರುವ ಜ್ಞಾನೇಂದ್ರ ಅವರು ರಾಷ್ಟ್ರಕವಿ ಕುವೆಂಪು ವಿಚಾರಧಾರೆಗಳ ವಾಹಕನಾಗಿ ಬದುಕಲಾಗದೆ ಬಲವಂತವಾಗಿ ಎಂಬಂತೆ ಗೋಳವಲಕರ, ಹೆಡಗೆವಾರ, ಸಾವರಕರ ಇತ್ಯಾದಿ ಭಯಂಕರ ಹಿಂದೂವಾದಿಗಳ ಹಿಂಬಾಲಕರಾಗಿ, ಅವರ ಸಿದ್ಧಾಂತಗಳ ಪ್ರತಿಪಾದಕರಾಗಿ ಬದುಕಿದವರು. ಸದಾ ಶ್ವೇತವಸ್ತ್ರಧಾರಿಯಾಗಿ ಶುಭ್ರವಾಗಿ ಬದುಕಿದ್ದ ಅರಗರ ಪಕ್ಕ ಸ್ಯಾಂಟ್ರೊ ರವಿ ಅದೇ ಡ್ರೆಸ್ಸಿನಲ್ಲಿ ಬಂದು ನಿಂತಿದ್ದೂ ಅಲ್ಲದೆ, ಅರಗರ ಅರಿವಿಗೂ ಬರದೆ ಜೇಬಿಗೆ ಏನೊ ಇಟ್ಟು ಹೋದದ್ದು ಗಮನಕ್ಕೇ ಬರಲಿಲ್ಲವಂತಲ್ಲಾ. ಈಗ ನೋಡಿದರೆ ಸ್ಯಾಂಟ್ರೊ ರವಿ ಪೊಲೀಸ್ ವರ್ಗಾವಣೆಯಲ್ಲಿ ಪಡೆದ ಕಾಸಿನ ಕವಡೆಯನ್ನು ಅರಗರ ಜೇಬಿಗೆ ಹಾ ಹೋಗಿದ್ದಾನೆಂಬ ಸುದ್ದಿ ಹಬ್ಬಿದೆಯಲ್ಲಾ. ಇಂತಹ ಸುದ್ದಿಗಳ ಶೋಧನೆ ಮತ್ತು ಅನಾವರಣದಲ್ಲಿ ಎತ್ತಿದ ಕೈಯಾದ ಕುಮಾರಣ್ಣನವರು, ಆತ್ಮಹತ್ಯೆ ಬೇಡ ಆತ್ಮಸಾಕ್ಷಿಯಿದ್ದರೆ ಸಾಕು; ಆತ್ಮಹತ್ಯೆಯ ಹೆಸರೆತ್ತುವುದೂ ಅಪರಾಧವೇ, ಹಾಗೆ ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡರೆ ಇಡೀ ದೇಶದಲ್ಲಿ ರಾಜಕಾರಣಿಗಳೇ ಇಲ್ಲದಂತಾಗಿ ದೇಶವೇ ಅರಾಜಕ ಸ್ಥಿತಿಗೆ ಹೋಗುತ್ತದೆ ಎಂದಿಲ್ಲವಲ್ಲಾ, ಥೂತ್ತೇರಿ.

******

ಹಾವೇರಿ ಸಾಹಿತ್ಯ ಸಮ್ಮೇಳನ ಮುಗಿದಿದೆ. ಜೋಶಿಯ ಲೆಕ್ಕಾಚಾರಗಳು ಸಾಂಗವಾಗಿ ನಡೆದಿವೆ. ಈ ನಡುವೆ ಹಾವೇರಿಯ ಸಣ್ಣವೇದಿಕೆಯಿಂದ ದೊಡ್ಡ ಗಂಟಲಲ್ಲಿ ಅಬ್ಬರಿಸಿದ ದೊಡ್ಡರಂಗೇಗೌಡರ ದನಿ ನಾಡಿನ ಮೂಲೆಮೂಲೆಗೆ ತಲುಪಿ ತುಸು ಗೊಂದಲ ಮೂಡಿಸಿದೆಯಂತಲ್ಲಾ. ಕಳೆದ ಶತಮಾನದಲ್ಲಿ ಕುವೆಂಪು ಹೊಸ ತರುಣ ಜನಾಂಗಕ್ಕೆ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂದರು. ಆ ಕೂಡಲೇ ಹಲವು ತರುಣರು ದೇವರು ದಿಂಡಿರನ್ನು ಮತ್ತು ಜ್ಯೋತಿಷಿಗಳನ್ನು ಬಿಟ್ಟು ಮಂತ್ರ ಮಾಂಗಲ್ಯದ ಮದುವೆಯಾದರು, ಉರಿಯುವ ಪಂಜುಗಳಾದರು. ಆದರೀಗ ದೊಡ್ಡರಂಗೇಗೌಡರ ದನಿಗೆ ಕಿವಿಯಾದ ಹುಡುಗರು ಯಾವ ರೂಪದ ಕ್ರಾಂತಿ ಮಾಡಬೇಕೆಂದು ಯೋಚಿಸುತ್ತಿದ್ದಾರಂತಲ್ಲಾ. ಏಕೆಂದರೆ ಗೌಡರು ಮಠೋಪಜೀವಿಯಂತಹ ಕವಿ. ಆದಿಚುಂಚನಗಿರಿ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡಿದ ಫಲವಾಗಿ “ತೇರಾಏರಿ ಅಂಬರದಾಗ ನೇಸರು ನಗತಾನೆ ಮರಗಿಡ ಕೂಗ್ಯಾವೇ ಹಕ್ಕಿ ಹಾಡ್ಯಾವೇ” ಎಂದು ಬೇಂದ್ರೆ ತೋರಿದ ಬೆಳಗಿನ ಪ್ರತಿಯಾಗಿ ನೇಸರ ತೋರಿದ ಕವಿ. ಆದರೇನು ಶೂದ್ರ ಸಮೂಹದ ಬೆಟ್ಟಸಾಲಲ್ಲಿ ನಿಂತು ಅದ್ಯಾವಾಗ ಬಿಜೆಪಿ ಗುಡಾರಕ್ಕೆ ನೆಗೆದರೊ ಸ್ಥಾನ ಮಾನಗಳು ಹಿಂಬಾಲಿಸಿ ಬಂದವು. ಕೂಡಲೇ ಮೋದಿ ಬಗ್ಗೆ ಎಡೂರಪ್ಪನ ಬಗ್ಗೆಯೂ ಕವನ ಬರೆದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದರು. ಮುಂದೆ ಜೋಶಿಗೆ ತೋರುವ ಕೃತಜ್ಞತೆಯ ಫಲವಾಗಿ ಯಾವ ಕವನ ಉದ್ಭವವಾಗುತ್ತದೊ ಎಂಬ ಆತಂಕದ ನಡುವೆ ಇತ್ತ ಚೆಡ್ಡಿಗಳು, ಅತ್ತ ಚುಂಚನಗಿರಿ ಪ್ರಾಂತ್ಯದ ಹುಡುಗರು ಗೌಡರ ಕ್ರಾಂತಿ ಮಾತಿನಿಂದ ಗೊಂದಲಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಈಚೆಗೆ ಕೆಲವು ಮಠಾಧೀಶರು ಸಂಘಟಿತರಾಗಿ ಸರಕಾರಕ್ಕೆ ಸಲಹೆ ಕೊಡುವುದು ಸಾಮಾನ್ಯವಾಗಿದೆಯಂತಲ್ಲಾ. ಈಗವರ ಕಣ್ಣುಬಿದ್ದಿರುವುದು ಶಾಲಾ ಮಕ್ಕಳ ಆಹಾರದ ಬಗ್ಗೆ. ಸಾಮಾನ್ಯವಾಗಿ ಮಠಾಧೀಶರು, ಧರ್ಮವಂತರು, ನೀತಿವಂತರು, ಸತ್ಯವಂತರು. ತಾವು ಪ್ರತಿನಿಧಿಸುವ ಜಾತಿಯ ತಲೆಯ ಮೇಲೂ ಕುಳಿತವರು. ಇಂತಹ ಸ್ಥಾನದಲ್ಲಿರುವವರಿಗೆ ಸಾಮಾನ್ಯವಾಗಿ ಯಾವ ಶ್ರಮವೂ ಇರುವುದಿಲ್ಲ. ವಿಕಲಚೇತನ ಮಗುವಿಗೆ ತಾಯಿ ತಾನೇ ಆಹಾರ ನೀಡಿ ಸಾಕಿ ಸಲಹುವಂತೆ ಜನಾಂಗ ಈ ಜಗದ್ಗುರುಗಳನ್ನ ಸಾಕುತ್ತಿದೆ. ಹೀಗೆ ಸಾಕಿಸಿಕೊಂಡವರೆಲ್ಲಾ ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಮಾತನಾಡುತ್ತಿದ್ದಾರೆ. ಗುರುಗಳ ಭೋಜನದ ಬಗ್ಗೆ ’ಗುರು ಶಿಷ್ಯರು’ ಎಂಬ ಚಿತ್ರದ ತುಣುಕು ಹೇಳಿದರೆ ಅಪ್ರಸ್ತುತವಾಗಲಾರದು. ಉಂಡಾಡಿ ಗುರುವೊಬ್ಬರು ಗುರುವರ್ಯರ ಮನೆಗೆ ಬರುತ್ತಾರೆ. ಆಗ ಆಚಾರ್ಯರು ಅವರ ಕಾರ್ಯಕ್ರಮ ಕೇಳುತ್ತಾರೆ. ಆಗ ಅತಿಥಿಗಳು ಮುಂಜಾನೆ ಸ್ನಾನ, ಸಂಧ್ಯಾವಂದನೆ ಮತ್ತೆ ಉಪಾಹಾರ ಮಧ್ಯಾಹ್ನ ಭೋಜನ, ಶಯನ ನಂತರ ವಾಯುವಿಹಾರ, ರಾತ್ರಿ ಭೋಜನ ಮತ್ತು ಒಂದು ತಂಬಿಗೆ ಕ್ಷೀರ ಇದೇ ನನ್ನ ದಿನಚರಿ ಎನ್ನುತ್ತಾನೆ. ಹೀಗೆ ಬದುಕಿರುವ ನಮ್ಮ ಕೆಲವು ಜಗತ್ ಗುರುಗಳು ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಎಗ್ಗಿಲ್ಲದೆ ಸಲಹೆ ಕೊಡತೊಡಗಿದ್ದಾರೆ. ಇಂತಹವರ ಅವಗಾಹನೆಗೆ ತರುವ ವಿಷಯ ಯಾವುದೆಂದರೆ ಶೃಂಗೇರಿ, ಚುಂಚನಗಿರಿ, ಸಿದ್ಧಗಂಗಾ ಮಠ ಮತ್ತು ಇನ್ನಿತರ ಪ್ರಗತಿಪರ ಚಿಂತಕರನ್ನ ಪಡೆದಿರುವ ಮಠಗಳು ಎಂದೂ ಮಕ್ಕಳ ಆಹಾರ ಪದ್ಧತಿ ಬಗ್ಗೆ ಮಾತನಾಡಿಲ್ಲ. ಆಹಾರ ಅವರವರ ಜನ್ಮಸಿದ್ಧ ಹಕ್ಕು. ಆದ್ದರಿಂದ ತಮಗೆ ಬಿಟ್ಟಿ ಸಿಗುವ ದ್ರಾಕ್ಷಿ, ಉತ್ತುತ್ತೆ, ಗೋಡಂಬಿ ತಿಂದುಕೊಂಡು ಟಿವಿ ನೋಡುತ್ತ ಕಾಲ ಹಾಕಲು ಸಮಸ್ಯೆ ಏನು ಎಂದು ಕೇಳುವಂತೆ ಮಾತನಾಡುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...