Homeಅಂಕಣಗಳುಮಾತು ಮರೆತ ಭಾರತ-34; ಲಾಕ್‌ಡೌನ್ ಫೈಲ್: ಹಾಸನದಲ್ಲಿ ಮರ್‍ಯಾದೆಗೇಡು ಹತ್ಯೆ

ಮಾತು ಮರೆತ ಭಾರತ-34; ಲಾಕ್‌ಡೌನ್ ಫೈಲ್: ಹಾಸನದಲ್ಲಿ ಮರ್‍ಯಾದೆಗೇಡು ಹತ್ಯೆ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್’ ಸಮಯದಲ್ಲಿ ನಡೆದ ದಲಿತರ ಮೇಲಿನ 60 ದೌರ್ಜನ್ಯಗಳನ್ನು ಓದುಗರಿಗೆ ಕಟ್ಟಿಕೊಟ್ಟಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿ ಜನರು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತವೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿ ಜನರ ಮನ ಪರಿವರ್ತಿಸುವುದಲ್ಲ; ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ಅದು ಸೊಪ್ಪಿನಹಳ್ಳಿ ಎಂಬ ಗ್ರಾಮ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿದೆ. ಹಳೆ ಮೈಸೂರು ಜಿಲ್ಲೆಯಲ್ಲಿರುವ ಒಕ್ಕಲಿಗರ ಪ್ರಾಬಲ್ಯ ಇಲ್ಲಿಯೂ ಇದೆ. ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮುಂದುವರೆದಿರುವ ಒಕ್ಕಲಿಗ ಸಮಾಜ, ಸಾಮಾಜಿಕವಾಗಿಯೂ ಇಂದು ಮೇಲ್ಮುಖ ಚಲನೆಯನ್ನು ಹೊಂದಿದೆ. ಇದಕ್ಕೆ ತದ್ವಿರುದ್ಧವಾಗಿ ದಲಿತ ಸಮಾಜ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಒಂದಷ್ಟು ಸ್ಥಾನಮಾನ ಗಿಟ್ಟಿಸಿಕೊಂಡಿದ್ದರೂ ಸಾಮಾಜಿಕವಾಗಿ ಬಹಳ ಹಿಂದೆಯೇ ಉಳಿಯುವಂದತೆ ನೋಡಿಕೊಳ್ಳಲಾಗಿದೆ. ಈ ಚಿತ್ರಣವನ್ನೇ ಹೊದ್ದುಕೊಂಡಿರುವ ಸೊಪ್ಪಿನಹಳ್ಳಿಯಲ್ಲಿ ಶಿವಮ್ಮ ವಾಸಿಸುತ್ತಿದ್ದಳು. ಒಬ್ಬಂಟಿಯಾಗಿ ತನ್ನ ಎರಡು ಗಂಡು ಮಕ್ಕಳನ್ನು ಸಾಕಿ ಸಲುಹಿ ತಕ್ಕಮಟ್ಟಿಗೆ ವಿದ್ಯಾಭ್ಯಾಸವನ್ನೂ ಮಾಡಿಸಿದಳು. ಹಿರಿಯ ಮಗ ಮಧು ಪದವಿ ಓದುತ್ತಿದ್ದ. ಕಿರಿಯವನಾದ ಮನು ಕಾಲೇಜು ಶಿಕ್ಷಣಕ್ಕೆ ಕಾಲಿಟ್ಟಿದ್ದ.

ಶಿವಮ್ಮ ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುತ್ತಾ ತನ್ನ ಮಕ್ಕಳನ್ನು ಸಾಕಿದ್ದಳು. ತನ್ನ ಊರಿನಲ್ಲಿ ತಮಗಿರುವ ಸ್ಥಾನ ಯಾವುದೆಂಬುದನ್ನು ಬಹಳ ಚೆನ್ನಾಗಿ ಅರಿತಿದ್ದ ಆಕೆ ತಾನಾಯಿತು ತನ್ನ ಕೆಲಸವಾಯಿತು ಎಂದು ಜೀವಿಸುತ್ತಾ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದಳು.

ಇದನ್ನೂ ಓದಿ: ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಆಗ ತಾನೇ ಹದಿಹರೆಯವನ್ನು ದಾಟಿದ್ದ 20 ವರ್ಷದ ಮಧುವಿಗೆ ವಯೋಸಹಜ ಪ್ರೇಮ ಮೂಡಿತು. ಅದೇ ಊರಿನ ಒಕ್ಕಲಿಗ ಕುಟುಂಬದ ರೇಖಾ ಅವನ ಮನದರಸಿ. ಆಕೆಯು ಸಹ ಮಧುವಿಗೆ ನಿರಾಸೆಯನ್ನುಂಟು ಮಾಡಲಿಲ್ಲ. ಇಬ್ಬರೂ ಪ್ರಕೃತಿ ಸಹಜ ಪ್ರೇಮದಲ್ಲಿ ಮುಳುಗಿದರು. ಈ ಪ್ರೇಮಕ್ಕೆ ರೇಖಾಳ ವಯಸ್ಸು ಅಡ್ಡಗಾಲಾಕಿ ನಿಂತಿತ್ತು. ರೇಖಾಳಿಗೆ ಇನ್ನೂ 17 ವರ್ಷವೆಂದು ಈ ’ಪ್ರೇಮ’ಕ್ಕೆ ಹೇಳುವವರಾರು? ಹಾಗಿದ್ದರೂ ಎಲ್ಲಾ ಪ್ರೇಮಿಗಳೂ ಮಾಡುವಂತೆ ’ಮುಂದೇನಾಗತ್ತೋ ನೋಡಿಯೇ ಬಿಡೋಣ’ ಎಂದುಕೊಂಡು ಮುಂದುವರೆದಿದ್ದಾರೆ.

ಇವರಿಬ್ಬರ ಪ್ರೇಮದ ವಿಚಾರ ರೇಖಾಳ ಮನೆಯವರಿಗೆ ತಿಳಿದಂತಿದೆ. ಪ್ರೇಮಿಗಳಿಬ್ಬರಿಗೂ ಪರಸ್ಪರ ಪ್ರತ್ಯೇಕಗೊಳ್ಳುವ ಭೀತಿ ಶುರುವಾಗಿದೆ. ಮುಖ ನೋಡದೇ ಒಂದು ದಿನವೂ ಇರಲಾಗದವರಿಗೆ ಶಾಶ್ವತವಾಗಿ ಬೇರೆಯಾಗುವುದು ಭಯ ಮೂಡಿಸಿರಲೇಬೇಕಲ್ಲವೆ? ಇಬ್ಬರೂ ಮನೆ ಬಿಟ್ಟು ಹೊರನಡೆದಿದ್ದಾರೆ. ಭಾರತದ ಕಾನೂನಿನ ಪ್ರಕಾರ ಅಪ್ರಾಪ್ತೆಯನ್ನು ಜೊತೆ ಕರೆದೊಯ್ಯುವುದು ಗಂಭೀರ ಅಪರಾಧವಾಗಿದೆ. ಹಾಗಾಗಿ ಪೋಕ್ಸೋ ಕಾಯ್ದೆಯಲ್ಲಿ ರೇಖಾಳ ಮನೆಯವರು ಮಧುವಿನ ಮೇಲೆ ದೂರು ದಾಖಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿದ ಪೊಲೀಸರು ಮಧುವನ್ನು ಬಂಧಿಸಿದರು. ಮಧು ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿಯೇ ಉಳಿಯಬೇಕಾಯಿತು.

ತಾಯಿ ಮತ್ತು ಇತರ ಕುಟುಂಬ ಸದಸ್ಯರು (PC: The Hindu)

ಇಂತಹ ಪರಿಸ್ಥಿತಿಯಲ್ಲಿ ಮಧುವಿನ ಪರವಾಗಿ ಗಟ್ಟಿಯಾಗಿ ನಿಂತುಕೊಂಡ ಅವನ ತಾಯಿ ಮತ್ತು ತಮ್ಮ, ಇದ್ದಬದ್ದ ಹಣವನ್ನೆಲ್ಲ ನ್ಯಾಯಾಲಯದ ವಿಚಾರಣೆಗೆ ಸುರಿದು ಕೊನೆಗೂ ಮಗನನ್ನು ಜಾಮೀನಿನ ಮೇಲೆ ಹೊರತಂದರು. ಅಲ್ಲಿಗೆ ಶಿವಮ್ಮನ ಮನಸ್ಸು ಒಂದಷ್ಟು ನಿರಾಳವಾಯಿತು. ಊರಿನಲ್ಲಿಯೇ ಇದ್ದರೆ ಮಧುವಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರಿತ ಶಿವಮ್ಮ ಮತ್ತು ಮನು, ಮಧುವನ್ನು ಬೆಂಗಳೂರಿಗೆ ಕಳಿಸಿದರು. ಮನಸ್ಸಿಲ್ಲದಿದ್ದರೂ ಅಮ್ಮನ ಮಾತಿಗೆ ಇಲ್ಲವೆನ್ನದೆ ಬೆಂಗಳೂರಿಗೆ ತೆರಳಿದ ಮಧು, ತಿಂಗಳುಗಳ ಕಾಲ ಸುತ್ತಾಡಿ ಒಂದು ಕೆಲಸ ಗಿಟ್ಟಿಸಿಕೊಂಡನು. ಬರುವ ಸಂಬಳದಲ್ಲಿ ಒಂದಷ್ಟು ಮನೆಗೂ ಕಳಿಸುತ್ತಿದ್ದನು.

ಎಲ್ಲವೂ ಸರಿ ಹೋಯಿತು ಎಂದುಕೊಂಡು ಶಿವಮ್ಮ ನಿಟ್ಟುಸಿರುಬಿಡುವಷ್ಟರಲ್ಲಿ ಕೋವಿಡ್ 19 ಭಾರತಕ್ಕೆ ಲಗ್ಗೆ ಇಟ್ಟಿತು. ಮಾರ್ಚ್ 2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದಾದ್ಯಂತ ಲಾಕ್‌ಡೌನ್ ಹೇರಿದರು. ದೇಶದಾದ್ಯಂತ ಕೆಲಸ ಮಾಡುತ್ತಿದ್ದ ಕಾರ್ಮಿಕ ವರ್ಗದಂತೆ ಮಧುವೂ ಕೆಲಸವಿಲ್ಲದೆ ಬೆಂಗಳೂರು ಬಿಟ್ಟು ತವರೂರು ಸೊಪ್ಪಿನಹಳ್ಳಿಗೆ ಬಂದನು. ಅದೇ ಗ್ರಾಮದ ವರ್ಕ್‌ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡನು. ಅಂತೂ ಇಂತು ನನ್ನಿಬ್ಬರು ಮಕ್ಕಳೂ ಈಗ ನನ್ನೊಂದಿಗೆ ಇದ್ದಾರೆ ಎಂಬ ಖುಷಿಯಲ್ಲಿ ಶಿವಮ್ಮ ತೇಲುತ್ತಿದ್ದಳು. ಇತ್ತ ಸೊಪ್ಪಿನಹಳ್ಳಿಗೆ ಬಂದ ಮಧುವಿನ ಹೃದಯದಲ್ಲಿ ಮಲಗಿದ್ದ ರೇಖಾಳ ನೆನಪಿಗೆ ಜೀವ ಬಂದಿತು. ರೇಖಾಳನ್ನು ಬಂಧಿಸಿಟ್ಟುಕೊಳ್ಳುವಲ್ಲಿ ಸಫಲವಾಗಿದ್ದೇವೆಂದು ನಂಬಿಕೊಂಡಿದ್ದ ಆಕೆಯ ಸಂಬಂಧಿಕರಿಗೆ ಒಳಗೊಳಗೇ ಪ್ರತಿಷ್ಠೆಯ ಅಮಲು ನೆತ್ತಿಗೇರಿ ಸುಖ ನೀಡುತ್ತಿತ್ತು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಶಿವಮ್ಮ ಮತ್ತು ಮನು ಇಬ್ಬರೂ ಮಧುವಿಗೆ ಆಗಾಗ ಎಚ್ಚರಿಕೆ ನೀಡುತ್ತಲೇ ಇದ್ದರು. ಯಾವುದೇ ಕಾರಣಕ್ಕೂ ರೇಖಾಳ ಸಹವಾಸಕ್ಕೆ ಹೋಗಬೇಡ, ಆಕೆಯೊಂದಿಗೆ ಮತ್ತೆ ಸಂಪರ್ಕ ಬೆಸೆಯಬೇಡ ಎಂದು ತಾಕೀತು ಮಾಡುತ್ತಿದ್ದರು. ಆದರೇನು ಮಾಡುವುದು? ಅದು ಪ್ರೇಮವಲ್ಲವೇ? ಎಂಟು ದಿಕ್ಕುಗಳಲ್ಲೂ ಯೋಚಿಸಿ ಮುಂದುವರೆಯಲು ಅದೇನು ಯುದ್ಧತಂತ್ರವೇ?

ಅಂದು ಜುಲೈ 15. ಮಧು ತನ್ನ ಸ್ನೇಹಿತರೊಡನೆ ಊರಿನ ದೇಗುಲಕ್ಕೆ ಹೋಗಿ ವಾಪಸ್ಸು ಬರುತ್ತಿದ್ದನು. ಅಚಾನಕ್ಕಾಗಿ ಅವರೆಲ್ಲರ ಎದುರಿಗೆ ರೇಖಾಳ ಚಿಕ್ಕಪ್ಪ ರೂಪೇಶ್ ಬಂದು ನಿಂತನು. ಅವನ ಕೈಯಲ್ಲಿ ಡಬಲ್ ಬ್ಯಾರೆಲ್ ಕಂಟ್ರಿ ಮೇಡ್ ಬಂದೂಕು ಇತ್ತು. ಆಗ ಸಮಯ ಮಧ್ಯಾಹ್ನ 3 ಗಂಟೆ. ಕ್ಷಣಹೊತ್ತೂ ಕಾಯದೇ, ರೇಖಾಳ ನೆನಪನ್ನೇ ತುಂಬಿಕೊಂಡಿದ್ದ ಮಧುವಿನ ಎದೆಗೆ ಗುರಿಯಿಟ್ಟು ಗುಂಡು ಹಾರಿಸಿದನು. ಮಿಸುಕಾಡುತ್ತಲೇ ಮಧುವಿನ ದೇಹ ತಣ್ಣಗಾಯಿತು. ಅವನ ಕಣ್ಣ ತುಂಬ ತುಂಬಿಕೊಂಡಿದ್ದ ರೇಖಾಳನ್ನು ನೋಡಿಯೇ ರೂಪೇಶ್ ಕೆಲಸ ಮುಗಿಸಿ ಹೋಗಿರಬೇಕು. ರೂಪೇಶ್ ಎಂಬ ಜಾತಿ ಮೃಗಗಳು ಇಂದಿಗೂ ಜೀವಂತ ಇವೆ. ಮರ್‍ಯಾದೆ ಹೆಸರಿನಲ್ಲಿ ಕೊಲೆಯನ್ನೂ ಮಾಡಿಸಿಬಿಡುವ ಜಾತಿವ್ಯವಸ್ಥೆ ಜೀವಂತ ಇರುವವರೆಗೂ ಇಂತಹ ನಾಡುಮೃಗಗಳ ಸಂಖ್ಯೆ ಕಡಿಮೆ ಆಗುವುದಿಲ್ಲ. ಇಂತಹ ನಾಡುಮೃಗಗಳ ಹೆಡೆಮುರಿ ಕಟ್ಟಬೇಕಿದ್ದ ಕಾನೂನಿನ ಆಯಕಟ್ಟಿನ ಸ್ಥಾನದಲ್ಲಿಯೂ ಮೃಗಗಳೇ ತುಂಬಿಕೊಂಡಿರುವಾಗ ಕಟಕಟೆಯಲ್ಲಿಯಾದರೂ ಮಧು-ರೇಖಾಳ ಪ್ರೇಮಕ್ಕೆ ಗೆಲುವು ಸಿಗುವುದೇ ಕಾದು ನೋಡಬೇಕಿದೆ.

2019ರ ಎನ್‌ಸಿಆರ್‌ಬಿ ವರದಿ ಪ್ರಕಾರ ದಲಿತರ ಮೇಲೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೌರ್ಜನ್ಯಗಳು ನಡೆದಿವೆ. ಆದರೆ ಕರ್ನಾಟಕದಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ದರ ಉತ್ತರಪ್ರದೇಶಕ್ಕಿಂತಲೂ ಹೆಚ್ಚಿದೆ. ಉತ್ತರಪ್ರದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಶೇ.5.6ರಷ್ಟು ದೌರ್ಜನ್ಯಗಳು ದಲಿತರ ಮೇಲೆ ಘಟಿಸಿದರೆ, ಕರ್ನಾಟಕದಲ್ಲಿ ಅದರ ಪ್ರಮಾಣ ಶೇ.12.8. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ಪ್ರಮಾಣವೂ ಸಹ ಕರ್ನಾಟಕದಲ್ಲಿ ಅತ್ಯಂತ ಕಡಿಮೆ. ಅದು ಕೇವಲ ಶೇ.0.4.

ನಾಡುಮೃಗ ರೂಪೇಶ್ ಜೈಲಿನಲ್ಲಿದ್ದಾನೆ. ಶಿವಮ್ಮ ಮತ್ತೆ ನ್ಯಾಯಾಲಯದ ಸುತ್ತಾ ಸುತ್ತುತ್ತಿದ್ದಾರೆ. ಸೊಪ್ಪಿನಹಳ್ಳಿ ಮಧುವನ್ನು ಬಹುತೇಕ ಮರೆತಂತಿದೆ. ಆದರೆ ರೇಖಾಳ ಹೃದಯ ಮರೆತಿರುವುದಕ್ಕೆ ಸಾಕ್ಷಿ ಇನ್ನೂ ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...