Homeಅಂಕಣಗಳುಮಾತು ಮರೆತ ಭಾರತ-34; ಲಾಕ್‌ಡೌನ್ ಫೈಲ್: ಹಾಸನದಲ್ಲಿ ಮರ್‍ಯಾದೆಗೇಡು ಹತ್ಯೆ

ಮಾತು ಮರೆತ ಭಾರತ-34; ಲಾಕ್‌ಡೌನ್ ಫೈಲ್: ಹಾಸನದಲ್ಲಿ ಮರ್‍ಯಾದೆಗೇಡು ಹತ್ಯೆ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್’ ಸಮಯದಲ್ಲಿ ನಡೆದ ದಲಿತರ ಮೇಲಿನ 60 ದೌರ್ಜನ್ಯಗಳನ್ನು ಓದುಗರಿಗೆ ಕಟ್ಟಿಕೊಟ್ಟಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿ ಜನರು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತವೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿ ಜನರ ಮನ ಪರಿವರ್ತಿಸುವುದಲ್ಲ; ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ಅದು ಸೊಪ್ಪಿನಹಳ್ಳಿ ಎಂಬ ಗ್ರಾಮ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿದೆ. ಹಳೆ ಮೈಸೂರು ಜಿಲ್ಲೆಯಲ್ಲಿರುವ ಒಕ್ಕಲಿಗರ ಪ್ರಾಬಲ್ಯ ಇಲ್ಲಿಯೂ ಇದೆ. ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮುಂದುವರೆದಿರುವ ಒಕ್ಕಲಿಗ ಸಮಾಜ, ಸಾಮಾಜಿಕವಾಗಿಯೂ ಇಂದು ಮೇಲ್ಮುಖ ಚಲನೆಯನ್ನು ಹೊಂದಿದೆ. ಇದಕ್ಕೆ ತದ್ವಿರುದ್ಧವಾಗಿ ದಲಿತ ಸಮಾಜ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಒಂದಷ್ಟು ಸ್ಥಾನಮಾನ ಗಿಟ್ಟಿಸಿಕೊಂಡಿದ್ದರೂ ಸಾಮಾಜಿಕವಾಗಿ ಬಹಳ ಹಿಂದೆಯೇ ಉಳಿಯುವಂದತೆ ನೋಡಿಕೊಳ್ಳಲಾಗಿದೆ. ಈ ಚಿತ್ರಣವನ್ನೇ ಹೊದ್ದುಕೊಂಡಿರುವ ಸೊಪ್ಪಿನಹಳ್ಳಿಯಲ್ಲಿ ಶಿವಮ್ಮ ವಾಸಿಸುತ್ತಿದ್ದಳು. ಒಬ್ಬಂಟಿಯಾಗಿ ತನ್ನ ಎರಡು ಗಂಡು ಮಕ್ಕಳನ್ನು ಸಾಕಿ ಸಲುಹಿ ತಕ್ಕಮಟ್ಟಿಗೆ ವಿದ್ಯಾಭ್ಯಾಸವನ್ನೂ ಮಾಡಿಸಿದಳು. ಹಿರಿಯ ಮಗ ಮಧು ಪದವಿ ಓದುತ್ತಿದ್ದ. ಕಿರಿಯವನಾದ ಮನು ಕಾಲೇಜು ಶಿಕ್ಷಣಕ್ಕೆ ಕಾಲಿಟ್ಟಿದ್ದ.

ಶಿವಮ್ಮ ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುತ್ತಾ ತನ್ನ ಮಕ್ಕಳನ್ನು ಸಾಕಿದ್ದಳು. ತನ್ನ ಊರಿನಲ್ಲಿ ತಮಗಿರುವ ಸ್ಥಾನ ಯಾವುದೆಂಬುದನ್ನು ಬಹಳ ಚೆನ್ನಾಗಿ ಅರಿತಿದ್ದ ಆಕೆ ತಾನಾಯಿತು ತನ್ನ ಕೆಲಸವಾಯಿತು ಎಂದು ಜೀವಿಸುತ್ತಾ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದಳು.

ಇದನ್ನೂ ಓದಿ: ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಆಗ ತಾನೇ ಹದಿಹರೆಯವನ್ನು ದಾಟಿದ್ದ 20 ವರ್ಷದ ಮಧುವಿಗೆ ವಯೋಸಹಜ ಪ್ರೇಮ ಮೂಡಿತು. ಅದೇ ಊರಿನ ಒಕ್ಕಲಿಗ ಕುಟುಂಬದ ರೇಖಾ ಅವನ ಮನದರಸಿ. ಆಕೆಯು ಸಹ ಮಧುವಿಗೆ ನಿರಾಸೆಯನ್ನುಂಟು ಮಾಡಲಿಲ್ಲ. ಇಬ್ಬರೂ ಪ್ರಕೃತಿ ಸಹಜ ಪ್ರೇಮದಲ್ಲಿ ಮುಳುಗಿದರು. ಈ ಪ್ರೇಮಕ್ಕೆ ರೇಖಾಳ ವಯಸ್ಸು ಅಡ್ಡಗಾಲಾಕಿ ನಿಂತಿತ್ತು. ರೇಖಾಳಿಗೆ ಇನ್ನೂ 17 ವರ್ಷವೆಂದು ಈ ’ಪ್ರೇಮ’ಕ್ಕೆ ಹೇಳುವವರಾರು? ಹಾಗಿದ್ದರೂ ಎಲ್ಲಾ ಪ್ರೇಮಿಗಳೂ ಮಾಡುವಂತೆ ’ಮುಂದೇನಾಗತ್ತೋ ನೋಡಿಯೇ ಬಿಡೋಣ’ ಎಂದುಕೊಂಡು ಮುಂದುವರೆದಿದ್ದಾರೆ.

ಇವರಿಬ್ಬರ ಪ್ರೇಮದ ವಿಚಾರ ರೇಖಾಳ ಮನೆಯವರಿಗೆ ತಿಳಿದಂತಿದೆ. ಪ್ರೇಮಿಗಳಿಬ್ಬರಿಗೂ ಪರಸ್ಪರ ಪ್ರತ್ಯೇಕಗೊಳ್ಳುವ ಭೀತಿ ಶುರುವಾಗಿದೆ. ಮುಖ ನೋಡದೇ ಒಂದು ದಿನವೂ ಇರಲಾಗದವರಿಗೆ ಶಾಶ್ವತವಾಗಿ ಬೇರೆಯಾಗುವುದು ಭಯ ಮೂಡಿಸಿರಲೇಬೇಕಲ್ಲವೆ? ಇಬ್ಬರೂ ಮನೆ ಬಿಟ್ಟು ಹೊರನಡೆದಿದ್ದಾರೆ. ಭಾರತದ ಕಾನೂನಿನ ಪ್ರಕಾರ ಅಪ್ರಾಪ್ತೆಯನ್ನು ಜೊತೆ ಕರೆದೊಯ್ಯುವುದು ಗಂಭೀರ ಅಪರಾಧವಾಗಿದೆ. ಹಾಗಾಗಿ ಪೋಕ್ಸೋ ಕಾಯ್ದೆಯಲ್ಲಿ ರೇಖಾಳ ಮನೆಯವರು ಮಧುವಿನ ಮೇಲೆ ದೂರು ದಾಖಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿದ ಪೊಲೀಸರು ಮಧುವನ್ನು ಬಂಧಿಸಿದರು. ಮಧು ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿಯೇ ಉಳಿಯಬೇಕಾಯಿತು.

ತಾಯಿ ಮತ್ತು ಇತರ ಕುಟುಂಬ ಸದಸ್ಯರು (PC: The Hindu)

ಇಂತಹ ಪರಿಸ್ಥಿತಿಯಲ್ಲಿ ಮಧುವಿನ ಪರವಾಗಿ ಗಟ್ಟಿಯಾಗಿ ನಿಂತುಕೊಂಡ ಅವನ ತಾಯಿ ಮತ್ತು ತಮ್ಮ, ಇದ್ದಬದ್ದ ಹಣವನ್ನೆಲ್ಲ ನ್ಯಾಯಾಲಯದ ವಿಚಾರಣೆಗೆ ಸುರಿದು ಕೊನೆಗೂ ಮಗನನ್ನು ಜಾಮೀನಿನ ಮೇಲೆ ಹೊರತಂದರು. ಅಲ್ಲಿಗೆ ಶಿವಮ್ಮನ ಮನಸ್ಸು ಒಂದಷ್ಟು ನಿರಾಳವಾಯಿತು. ಊರಿನಲ್ಲಿಯೇ ಇದ್ದರೆ ಮಧುವಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರಿತ ಶಿವಮ್ಮ ಮತ್ತು ಮನು, ಮಧುವನ್ನು ಬೆಂಗಳೂರಿಗೆ ಕಳಿಸಿದರು. ಮನಸ್ಸಿಲ್ಲದಿದ್ದರೂ ಅಮ್ಮನ ಮಾತಿಗೆ ಇಲ್ಲವೆನ್ನದೆ ಬೆಂಗಳೂರಿಗೆ ತೆರಳಿದ ಮಧು, ತಿಂಗಳುಗಳ ಕಾಲ ಸುತ್ತಾಡಿ ಒಂದು ಕೆಲಸ ಗಿಟ್ಟಿಸಿಕೊಂಡನು. ಬರುವ ಸಂಬಳದಲ್ಲಿ ಒಂದಷ್ಟು ಮನೆಗೂ ಕಳಿಸುತ್ತಿದ್ದನು.

ಎಲ್ಲವೂ ಸರಿ ಹೋಯಿತು ಎಂದುಕೊಂಡು ಶಿವಮ್ಮ ನಿಟ್ಟುಸಿರುಬಿಡುವಷ್ಟರಲ್ಲಿ ಕೋವಿಡ್ 19 ಭಾರತಕ್ಕೆ ಲಗ್ಗೆ ಇಟ್ಟಿತು. ಮಾರ್ಚ್ 2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದಾದ್ಯಂತ ಲಾಕ್‌ಡೌನ್ ಹೇರಿದರು. ದೇಶದಾದ್ಯಂತ ಕೆಲಸ ಮಾಡುತ್ತಿದ್ದ ಕಾರ್ಮಿಕ ವರ್ಗದಂತೆ ಮಧುವೂ ಕೆಲಸವಿಲ್ಲದೆ ಬೆಂಗಳೂರು ಬಿಟ್ಟು ತವರೂರು ಸೊಪ್ಪಿನಹಳ್ಳಿಗೆ ಬಂದನು. ಅದೇ ಗ್ರಾಮದ ವರ್ಕ್‌ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡನು. ಅಂತೂ ಇಂತು ನನ್ನಿಬ್ಬರು ಮಕ್ಕಳೂ ಈಗ ನನ್ನೊಂದಿಗೆ ಇದ್ದಾರೆ ಎಂಬ ಖುಷಿಯಲ್ಲಿ ಶಿವಮ್ಮ ತೇಲುತ್ತಿದ್ದಳು. ಇತ್ತ ಸೊಪ್ಪಿನಹಳ್ಳಿಗೆ ಬಂದ ಮಧುವಿನ ಹೃದಯದಲ್ಲಿ ಮಲಗಿದ್ದ ರೇಖಾಳ ನೆನಪಿಗೆ ಜೀವ ಬಂದಿತು. ರೇಖಾಳನ್ನು ಬಂಧಿಸಿಟ್ಟುಕೊಳ್ಳುವಲ್ಲಿ ಸಫಲವಾಗಿದ್ದೇವೆಂದು ನಂಬಿಕೊಂಡಿದ್ದ ಆಕೆಯ ಸಂಬಂಧಿಕರಿಗೆ ಒಳಗೊಳಗೇ ಪ್ರತಿಷ್ಠೆಯ ಅಮಲು ನೆತ್ತಿಗೇರಿ ಸುಖ ನೀಡುತ್ತಿತ್ತು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಶಿವಮ್ಮ ಮತ್ತು ಮನು ಇಬ್ಬರೂ ಮಧುವಿಗೆ ಆಗಾಗ ಎಚ್ಚರಿಕೆ ನೀಡುತ್ತಲೇ ಇದ್ದರು. ಯಾವುದೇ ಕಾರಣಕ್ಕೂ ರೇಖಾಳ ಸಹವಾಸಕ್ಕೆ ಹೋಗಬೇಡ, ಆಕೆಯೊಂದಿಗೆ ಮತ್ತೆ ಸಂಪರ್ಕ ಬೆಸೆಯಬೇಡ ಎಂದು ತಾಕೀತು ಮಾಡುತ್ತಿದ್ದರು. ಆದರೇನು ಮಾಡುವುದು? ಅದು ಪ್ರೇಮವಲ್ಲವೇ? ಎಂಟು ದಿಕ್ಕುಗಳಲ್ಲೂ ಯೋಚಿಸಿ ಮುಂದುವರೆಯಲು ಅದೇನು ಯುದ್ಧತಂತ್ರವೇ?

ಅಂದು ಜುಲೈ 15. ಮಧು ತನ್ನ ಸ್ನೇಹಿತರೊಡನೆ ಊರಿನ ದೇಗುಲಕ್ಕೆ ಹೋಗಿ ವಾಪಸ್ಸು ಬರುತ್ತಿದ್ದನು. ಅಚಾನಕ್ಕಾಗಿ ಅವರೆಲ್ಲರ ಎದುರಿಗೆ ರೇಖಾಳ ಚಿಕ್ಕಪ್ಪ ರೂಪೇಶ್ ಬಂದು ನಿಂತನು. ಅವನ ಕೈಯಲ್ಲಿ ಡಬಲ್ ಬ್ಯಾರೆಲ್ ಕಂಟ್ರಿ ಮೇಡ್ ಬಂದೂಕು ಇತ್ತು. ಆಗ ಸಮಯ ಮಧ್ಯಾಹ್ನ 3 ಗಂಟೆ. ಕ್ಷಣಹೊತ್ತೂ ಕಾಯದೇ, ರೇಖಾಳ ನೆನಪನ್ನೇ ತುಂಬಿಕೊಂಡಿದ್ದ ಮಧುವಿನ ಎದೆಗೆ ಗುರಿಯಿಟ್ಟು ಗುಂಡು ಹಾರಿಸಿದನು. ಮಿಸುಕಾಡುತ್ತಲೇ ಮಧುವಿನ ದೇಹ ತಣ್ಣಗಾಯಿತು. ಅವನ ಕಣ್ಣ ತುಂಬ ತುಂಬಿಕೊಂಡಿದ್ದ ರೇಖಾಳನ್ನು ನೋಡಿಯೇ ರೂಪೇಶ್ ಕೆಲಸ ಮುಗಿಸಿ ಹೋಗಿರಬೇಕು. ರೂಪೇಶ್ ಎಂಬ ಜಾತಿ ಮೃಗಗಳು ಇಂದಿಗೂ ಜೀವಂತ ಇವೆ. ಮರ್‍ಯಾದೆ ಹೆಸರಿನಲ್ಲಿ ಕೊಲೆಯನ್ನೂ ಮಾಡಿಸಿಬಿಡುವ ಜಾತಿವ್ಯವಸ್ಥೆ ಜೀವಂತ ಇರುವವರೆಗೂ ಇಂತಹ ನಾಡುಮೃಗಗಳ ಸಂಖ್ಯೆ ಕಡಿಮೆ ಆಗುವುದಿಲ್ಲ. ಇಂತಹ ನಾಡುಮೃಗಗಳ ಹೆಡೆಮುರಿ ಕಟ್ಟಬೇಕಿದ್ದ ಕಾನೂನಿನ ಆಯಕಟ್ಟಿನ ಸ್ಥಾನದಲ್ಲಿಯೂ ಮೃಗಗಳೇ ತುಂಬಿಕೊಂಡಿರುವಾಗ ಕಟಕಟೆಯಲ್ಲಿಯಾದರೂ ಮಧು-ರೇಖಾಳ ಪ್ರೇಮಕ್ಕೆ ಗೆಲುವು ಸಿಗುವುದೇ ಕಾದು ನೋಡಬೇಕಿದೆ.

2019ರ ಎನ್‌ಸಿಆರ್‌ಬಿ ವರದಿ ಪ್ರಕಾರ ದಲಿತರ ಮೇಲೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೌರ್ಜನ್ಯಗಳು ನಡೆದಿವೆ. ಆದರೆ ಕರ್ನಾಟಕದಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ದರ ಉತ್ತರಪ್ರದೇಶಕ್ಕಿಂತಲೂ ಹೆಚ್ಚಿದೆ. ಉತ್ತರಪ್ರದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಶೇ.5.6ರಷ್ಟು ದೌರ್ಜನ್ಯಗಳು ದಲಿತರ ಮೇಲೆ ಘಟಿಸಿದರೆ, ಕರ್ನಾಟಕದಲ್ಲಿ ಅದರ ಪ್ರಮಾಣ ಶೇ.12.8. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ಪ್ರಮಾಣವೂ ಸಹ ಕರ್ನಾಟಕದಲ್ಲಿ ಅತ್ಯಂತ ಕಡಿಮೆ. ಅದು ಕೇವಲ ಶೇ.0.4.

ನಾಡುಮೃಗ ರೂಪೇಶ್ ಜೈಲಿನಲ್ಲಿದ್ದಾನೆ. ಶಿವಮ್ಮ ಮತ್ತೆ ನ್ಯಾಯಾಲಯದ ಸುತ್ತಾ ಸುತ್ತುತ್ತಿದ್ದಾರೆ. ಸೊಪ್ಪಿನಹಳ್ಳಿ ಮಧುವನ್ನು ಬಹುತೇಕ ಮರೆತಂತಿದೆ. ಆದರೆ ರೇಖಾಳ ಹೃದಯ ಮರೆತಿರುವುದಕ್ಕೆ ಸಾಕ್ಷಿ ಇನ್ನೂ ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...