Homeಮುಖಪುಟನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ: ಬಿಜೆಪಿಗರ ಟೀಕೆಗೆ ಸಂಸದೆ ಮೊಯಿತ್ರಾ ತಿರುಗೇಟು

ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ: ಬಿಜೆಪಿಗರ ಟೀಕೆಗೆ ಸಂಸದೆ ಮೊಯಿತ್ರಾ ತಿರುಗೇಟು

- Advertisement -
- Advertisement -

‘ಅಸಂಸದೀಯ’ ಭಾಷೆಯನ್ನು ಬಳಸಿದ್ದಕ್ಕಾಗಿ ಬಿಜೆಪಿ ಪಕ್ಷದ ಹಲವು ನಾಯಕರಿಂದ ಟೀಕೆಗಳನ್ನು ಎದುರಿಸುತ್ತಿರುವ ಫೈರ್‌ಬ್ರಾಂಡ್ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಬುಧವಾರ ಬಜೆಟ್ ಅಧಿವೇಶನದ ಸದನದಲ್ಲಿ ”ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ” ಎಂದು ಹೇಳುವ ಮೂಲಕ ಟೀಕೆಗೆ ತಿರುಗೇಟು ನೀಡಿದ್ದಾರೆ.

“ದೆಹಲಿಯ ಆ ಪ್ರತಿನಿಧಿ ನನ್ನನ್ನು ಕೆಣಕಿದ್ದಾರೆ. ಹಾಗಾಗಿ ನಾನು ಅವರಿಗೆ ಹೇಳುವುದು ಇಷ್ಟೇ, ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ ಎಂದು. ಬಿಜೆಪಿಯವರು ನನಗೆ ಸಂಸದೀಯ ಶಿಷ್ಟಾಚಾರ ಕಲಿಸುತ್ತಾರೆ ಎಂದರೆ ನನಗೆ ಆಶ್ಚರ್ಯವಾಗುತ್ತದೆ ಎಂದು ಮೊಯಿತ್ರಾ ಹೇಳಿದರು.

ಮಂಗಳವಾರ ಲೋಕಸಭೆಯಲ್ಲಿ ಅದಾನಿ ವಿಷಯದ ಕುರಿತು ಮಾತನಾಡಿದ ನಂತರ ಮೊಯಿತ್ರಾ ಅವರು ಸದನದಲ್ಲಿ ನಿಂದನೀಯ ಪದವನ್ನು ಬಳಸಿದ್ದಾರೆ ಎಂದು ಹೇಳಲಾಗಿತ್ತು.

“ಬಿಜೆಪಿಯವರು ನನಗೆ ಹೆಣ್ಣಾಗಿ ಇಂತಹ  ಬಳಸುತ್ತಾರೆ ಎಂದು ಹೇಳುತ್ತಾರೆ, ನಾನು ಅವರಿಗೆ ಪ್ರತಿಕ್ರಿಯೆ ನೀಡಲು ಗಂಡಾಗಬೇಕೆ? ಇವರಲ್ಲಿ ಪಿತೃಪ್ರಭುತ್ವವಿದೆ ಎಂದು ಹೇಳಿದರು.

ಮೊದಲ ಬಾರಿಗೆ, ಈ ಅದಾನಿ ಕಂಪನಿ ಎಂತಹದ್ದು ಎಂದು ಭಾರತದ ಜನರಿಗೆ ತೋರಿಸಲು ಸಾಧ್ಯವಾಗಿದೆ. ಬಿಜೆಪಿ ಸರ್ಕಾರ, ಕಳೆದ 3 ವರ್ಷಗಳಿಂದ ಅದಾನಿ ಕಂಪನಿಯ ಹಗರಣವನ್ನು ಕಾರ್ಪೆಟ್ ಅಡಿಯಲ್ಲಿ ತಳ್ಳಲು ಪ್ರಯತ್ನಿಸುತ್ತಿದೆ ಆದರೆ ಇದೀಗ ಅದೆಲ್ಲವೂ ಬಯಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮೋದಿ ಸರ್ಕಾರ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ: ಮಹುವಾ ಮೊಯಿತ್ರಾ ಆಕ್ರೋಶ

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಹೇಮಾ ಮಾಲಿನಿ, ”ಎಲ್ಲರೂ ತಮ್ಮ ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾತನಾಡಬೇಕು. ಅತಿಯಾದ ಉತ್ಸಾಹ ಮತ್ತು ಭಾವನಾತ್ಮಕತೆಗೆ ಒಳಗಾಗಬಾರದು ಎಂದು ಹೇಳಿದರು.

ಮತ್ತೊಬ್ಬ ಸಂಸದರು ಮಾತನಾಡುವಾಗ ಮೊಯಿತ್ರಾ ಅವರು ನಿಂದನೆ ಮಾಡಿರುವುದು ಕೇಳಿಬಂದಿದೆ. ಆ ಪದಬಳಕೆ ದುರದೃಷ್ಟಕರ ಮತ್ತು ಕ್ಷಮೆಯಾಚಿಸುವುದು ನಿರೀಕ್ಷಿತ ಸೌಜನ್ಯ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಸಂಸತ್ತಿನ ಹೊರಗೆ ಮಾಧ್ಯಮದವರ ಜೊತೆ ಮಾತನಾಡಿದ ಮೊಯಿತ್ರಾ, ”ನಾನು ಯಾವ ರೀತಿಯ ಭಾಷೆಯನ್ನು ಬಳಸಬೇಕು ಎನ್ನುವುದು ಗೊತ್ತಿದೆ. ಈ ಬಿಜೆಪಿ ನಮಗೆ ಸಂಸದೀಯ ಶಿಷ್ಟಾಚಾರವನ್ನು ಕಲಿಸುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ..” ಎಂದು ಮತ್ತೊಮ್ಮೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನಿನ್ನೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಶುಭದಿನವಾಗಿದೆ ಏಕೆಂದರೆ ದೇಶವು ಅದಾನಿ ಕಂಪನಿ ಯಾವ ಪ್ರಮಾಣದಲ್ಲಿ ಹಗರಣ ಮಾಡಿದೆ ಎಂದು ದೇಶದ ಜನರು ನೋಡುವಂತಾಯಿತು ಎಂದು ಹೇಳಿದರು.

“ಈ ವಿಷಯವನ್ನು ಬಿಜೆಪಿಯವರು 2019 ರಿಂದ ನಮ್ಮಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದರು. ಆದರೆ ನಿನ್ನೆ ನಾವೆಲ್ಲರೂ ಮೊದಲ ಬಾರಿಗೆ ಅದಾನಿ ಕಂಪನಿ ಏನೆಂದು ಭಾರತಕ್ಕೆ ತೋರಿಸಿದ್ದೇವೆ. ಈಗ ಬಿಜೆಪಿ ಈ ಹಗರಣವನ್ನು ಕೆಳಗೆ ತಳ್ಳಲು ಪ್ರಯತ್ನಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ರತ್ನಗಂಬಳಿಯ ಕೆಳಗೆ ಅದಾನಿ  ಹಗರಣವನ್ನು ಬಚ್ಚಿಟ್ಟಿದ್ದರು. ಆದರೆ ನಿನ್ನೆ ಭಾರತೀಯ ಪ್ರಜಾಪ್ರಭುತ್ವಕ್ಕೆ ‘ಶುಭ್ ದಿನ್’ (ಶುಭ ದಿನ) ಏಕೆಂದರೆ ಬಿಜೆಪಿ ಮರೆಮಾಡಲು ಪ್ರಯತ್ನಿಸುತ್ತಿರುವುದನ್ನು ದೇಶದ ಜನರು ನಿಖರವಾಗಿ ನೋಡುತ್ತಿದ್ದಾರೆ. ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಹೊರಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ಅದಾನಿ ಕಂಪನಿಯ ಹಗರಣದ ವ್ಯಾಪ್ತಿಯನ್ನು ಭಾರತದ ಜನರು ನೋಡಬಹುದು.

”ನೀವು ಸದನದಲ್ಲಿ ನನ್ನ ಭಾಷಣ ಮತ್ತು ಆ ಮಹಾನುಭಾವರ ವರ್ತನೆ ನೋಡಿದ್ದರೆ ನಿಮಗೆ ಅರ್ಥವಾಗುತ್ತದೆ. ಅವರನ್ನು ನಾನು ಸಂಭಾವಿತರು ಎಂದು ಕರೆಯುವುದಿಲ್ಲ.. ದೆಹಲಿಯ ಗೌರವಾನ್ವಿತ ಪ್ರತಿನಿಧಿ ಇಡೀ ಸಮಯದಲ್ಲಿ ನನಗೆ ಮಾತನಾಡಲು ಸಹ ಅವಕಾಶ ನೀಡಲಿಲ್ಲ. ಅವರು ನನ್ನನ್ನು ನಿರಂತರವಾಗಿ ಕೆಣಕಿದರು. ಆಗ ನಾನು ಅಧ್ಯಕ್ಷರ ಬಳಿ ಐದು ಬಾರಿ ರಕ್ಷಣೆ ಕೇಳಿದೆ. ನನಗೆ ರಕ್ಷಣೆ ನೀಡಲು ಅಧ್ಯಕ್ಷರಿಗೆ ಸಾಧ್ಯವಾಗಲಿಲ್ಲ. ನಾನು ಏನು ಹೇಳಿದರೂ ದಾಖಲೆಯಲ್ಲಿ ಇಲ್ಲ” ಎಂದು ಮೊಯಿತ್ರಾ ಹೇಳಿದರು.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಸಂದರ್ಭದಲ್ಲಿ ಟಿಡಿಪಿ ಸಂಸದ ಕೆ ರಾಮ್ ಮೋಹನ್ ನಾಯ್ಡು ಅವರು ಮಾತನಾಡುತ್ತಿದ್ದಾಗ, ಮೊಯಿತ್ರಾ ಅವರು ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕೆಲವು ಅಸಂಸದೀಯ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರು ಕೆಳಮನೆಯಲ್ಲಿ ಗದ್ದಲ ಆರಂಭಿಸಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಸಂದರ್ಭದಲ್ಲಿ ಮೊಯಿತ್ರಾ ಅವರು ಚೀನಾ, ಪೆಗಾಸಸ್, ಬಿಬಿಸಿ ಸಾಕ್ಷ್ಯಚಿತ್ರ, ಮೊರ್ಬಿ ಸೇತುವೆ ಕುಸಿತ, ರಫೇಲ್ ಮತ್ತು ಅದಾನಿ ಸಮೂಹದ ಕಂಪನಿಗಳ ಇತ್ತೀಚಿನ ಹಗರಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಸದನದಲ್ಲಿ ಅದಾನಿಯನ್ನು ಮಿಸ್ಟರ್ ‘ಎ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ, ಅವರು ಸರ್ಕಾರವನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಮೊಯಿತ್ರಾ ಹೇಳಿದ್ದಾರೆ.

“ಪ್ರಧಾನ ಮಂತ್ರಿಯವರೇ, ಮಿಸ್ಟರ್ ‘ಎ’ ಎನ್ನುವ ವ್ಯಕ್ತಿ ನಿಮಗೆ ಮೋಸ ಮಾಡಿದ್ದಾರೆ. ಅವರು ನಿಮ್ಮ ನಿಯೋಗಗಳಲ್ಲಿ ನಿಮ್ಮೊಂದಿಗೆ ಪ್ರಯಾಣಿಸುತ್ತಾರೆ. ಅವರು ಭಾರತಕ್ಕೆ ಭೇಟಿ ನೀಡಿದಾಗ ರಾಷ್ಟ್ರದ ಮುಖ್ಯಸ್ಥರನ್ನು ಭೇಟಿಯಾಗುತ್ತಾರೆ. ಅವರು ತಾನೇ ಪ್ರಧಾನಿ ಎನ್ನುವಂತೆ ಬಿಂಬಿಸುತ್ತಾರೆ. ಅವರು ಪ್ರಧಾನಿಯ ಹಿಂದೆ ರಿಮೋಟ್ ಕಂಟ್ರೋಲ್ ಎಂದು ಜಗತ್ತಿಗೆ ತೋರುವಂತೆ ಮಾಡುತ್ತಾರೆ” ಎಂದು ಮೊಯಿತ್ರಾ ಹೇಳಿದರು.

”ಮಹುವಾ ಹಿಂದೆ ಯಾರಿದ್ದಾರೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ನಕಲಿ ಸುದ್ದಿ ಬ್ರಿಗೇಡ್, ಪ್ರತಿದಿನ ಹೊಸ ಕಥೆ ಹರಿಬಿಡುತ್ತದೆ. ಆದರೆ ನನ್ನ ಹಿಂದೆ ಯಾರೂ ಇಲ್ಲ, ಮಹುವಾ ಹಿಂದೆ ಸತ್ಯ ಇದೆ” ಎಂದು ಅವರು ಪ್ರತಿಪಾದಿಸಿದರು.

ಅವರ ಹೇಳಿಕೆಗೆ ಬಿಜೆಪಿ ನಾಯಕರು ಸದನದಲ್ಲಿ ಕೋಲಾಹಲ ಸೃಷ್ಟಿಸಿದರು. ಅವರ ಭಾಷಣದ ವೇಳೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಟಿಎಂಸಿ ಸಂಸದೆ ಮೋಯಿತ್ರಾ, ”ನನ್ನನ್ನು ಕೆಣಕಲು ಮತ್ತು ಭಾಷಣದ ಹರಿವನ್ನು ಹಾಳುಮಾಡಲು ಅವರು ಈ ರೀತಿ ಮಾಡುತ್ತಿರುವುದರಿಂದ ನಾನು ಅದನ್ನು ಪುನರಾವರ್ತಿಸಬೇಕಾಗಿದೆ ಎಂದು ಹೇಳುತ್ತಾ ನಾನು ಮಾತ್ರ ಸತ್ಯದ ಹಿಂದೆ ಇದ್ದೇನೆ” ಎಂದು ಮೊಯಿತ್ರಾ ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...