Homeಅಂಕಣಗಳುಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

ಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

- Advertisement -
- Advertisement -

ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಬರೀ ಹಗರಣಗಳಲ್ಲೇ ಮುಳುಗಿದ್ದ ಬಿಜೆಪಿ ಪಾರ್ಟಿಗೆ ಮಾಡಾಳು ವಿರೂಪಾಕ್ಷಪ್ಪನ ಹಗರಣ ಆರೋಪ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆಯಲ್ಲಾ. ಆದರೇನು ಈ ಬಿಜೆಪಿಗಳನ್ನು ಯಾರೂ ಅವಮಾನ ಮಾಡಲಾಗುವುದಿಲ್ಲ. ಮರ್ಯಾದೆ ಕಳೆಯಲಾಗುವುದಿಲ್ಲ. ಮನಸ್ಸಿಗೆ ನೋವು ಮಾಡಲಾಗುವುದಿಲ್ಲ. ಸದರಿ ಹಗರಣದ ಆರೋಪಕ್ಕೆ ಮಾಧುಸ್ವಾಮಿ ಮತ್ತು ಮುಖ್ಯಮಂತ್ರಿ ಉತ್ತರ ಕೊಟ್ಟಾಗಿದೆ. ಏನೆಂದರೆ, ಲೋಕಾಯುಕ್ತದಲ್ಲಿ ನಿಮ್ಮ ಹಗರಣಗಳೂ ಹೊರಬರಲಿವೆ. ಮಗ ಮಾಡಿದ ಹಗರಣಕ್ಕೆ ಅಪ್ಪ ವಿರೂಪಾಕ್ಷನದೇನು ತಪ್ಪು. ನಿಮ್ಮ ಕಾಲದಲ್ಲಿ ಹಗರಣಗಳೇ ಆಗಿರಲಿಲ್ಲವೆ? ಹೀಗೆ. ಇಂತಹ ಉತ್ತರಗಳಿಂದ ಬಿಜೆಪಿಗಳ ಮನಸ್ಸೇನೆಂಬುದು ನಾಡಿನ ಜನಕ್ಕೆ ಅರಿವಾಗುತ್ತಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಶಾ ಎಂಬಾತ ತನ್ನ ಭಾಷಣದಲ್ಲಿ ಮುಂದೆ ಲಂಚಮುಕ್ತ ಸರಕಾರ ಕೊಡುತ್ತೇವೆ ಎಂದಿದ್ದರು! ಅಲ್ಲಿಗೆ ಈವರೆಗೆ ಲಂಚ ತಿಂದ ಸರಕಾರ ನಡೆಸಿದ್ದೇವೆ ಎಂಬುದನ್ನು ಒಪ್ಪಿಕೊಡಂತಾಯ್ತು. ಈ ಬಿಜೆಪಿಗಳಿಗೆ ತಾವು ಆಡುವ ಮಾತಿನ ಅರ್ಥ ಭಾವ ಒಂದು ತಿಳಿಯುವುದಿಲ್ಲವೆಂಬುದಕ್ಕೆ ಇದು ಸಾಕ್ಷಿ. ಇನ್ನು ನಮ್ಮ ಮಾಡಾಳು ಇರಪಾಕ್ಷಿ ಕೋಟ್ಯಾಧಿಪತಿ ವಡ್ನಾಳು ರಾಜಣ್ಣನನ್ನು ಸೋಲಿಸಿ ಬಂದವರು. ಬರಲಿರುವ ಚುನಾವಣೆಯಲ್ಲಿ ಕೋಟಿಕೋಟಿ ಚೆಲ್ಲಬೇಕಿರುವುದರಿಂದ ಧನ ಸಂಗ್ರಹಕ್ಕೆ ಮಗನನ್ನು ನೇಮಿಸಿದ್ದರು ಅನಿಸುತ್ತೆ. ಮಾಡಾಳನ ಮಗನಂಥವರು ಇನ್ನು ಅದೆಷ್ಟು ಮಂದಿ ಬಿಜೆಪಿಯ ಮಂತ್ರಿ ಶಾಸಕರ ಬೆನ್ನಿಗಿದ್ದಾರೊ ಎಂಬುದು ಆ ಮಾಧುಸ್ವಾಮಿಗೇ ಗೊತ್ತಂತಿಲ್ಲಾ, ಥೂತ್ತೇರಿ.

****

ಉಡುಪಿ ಭಟ್ಟನ ಪ್ರಕರಣದಿಂದ ಹಿಡಿದು, ಮೈಸೂರು ರಾಮದಾಸ, ಅತ್ತ ಬೆಳಗಾವಿಯ ಜಾರಕಿಹೊಳಿ, ಹೊನ್ನಾಳಿಯ ರೇಣುಕಾಚಾರಿ, ಹರತಾಳು ಹಾಲಪ್ಪ ಇಂತಹವರ ಹಲವಾರು ಸಾಮಾಜಿಕ ಸಮಸ್ಯಗೆಳಿಂದ ಬಿಜೆಪಿ ನರಳಿದರೂ, ಅದು ಹೇಗೋ ಚೇತರಿಸಿಕೊಳ್ಳುತ್ತದೆಲ್ಲಾ. ಮತ್ತೆ ಹಗರಣಕ್ಕೆ ಸಂಬಂಧಪಟ್ಟವರೆಲ್ಲಾ ಚುನಾವಣೆಯಲ್ಲಿ ಗೆದ್ದು ಬರುವುದು ಸಾಮಾನ್ಯವಾಗಿದೆಯಲ್ಲಾ. ಅಧಿಕಾರ ದುರುಪಯೋಗದಿಂದ ಲೈಂಗಿಕ ಶೋಷಣೆ ಮಾಡಿದ ರೇಣುಕಾಚಾರಿ ವಿರುದ್ಧದ ಆರೋಪದ ಸುದ್ದಿಗೆ ಈ ನಾಡೇನು ಬೆಚ್ಚಲಿಲ್ಲ. ಬದಲಿಗೆ ಶಾಸಕನಾದಾಗ ಸಿಗುವ ಸವಲತ್ತು ನೋಡಿ ದಂಗುಬಡಿದರು. ಜನ ಸಂತ್ರಸ್ತರನ್ನೇ ಕುರಿತು ಆಡಿಕೊಳ್ಳುವುದು ಜಾಸ್ತಿ. ಆಗ ಈಶ್ವರಪ್ಪನೆಂಬ ಮಹಿಳಾವಾದಿ, ’ನೀವು ಆರೋಪ ಮಾಡಿದ ಮಹಿಳೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೀರಿ, ಆದರೆ ರೇಣುಕಾಚಾರಿ ಪತ್ನಿಯ ಬಗ್ಗೆ ಯೋಚಿಸಿದ್ದೀರಾ?’ ಎಂದು ಪ್ರಶ್ನೆ ಕೇಳಿದ್ದರು! ಬಿಜೆಪಿ ಮತದಾರರು ಕನಿಕರದಿಂದ, ’ಪಾಪ ರೇಣುಕಾಚಾರಿಯದೇನೂ ತಪ್ಪಿಲ್ಲ’ ಎಂದುದಲ್ಲದೆ ಆತನನ್ನು ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು. ತಮ್ಮ ನಾಯಕನ ವಿರುದ್ಧ ಬಂದ ಸುಳ್ಳು ಜಾತಿ ಸರ್ಟಿಫಿಕೇಟ್ ಆರೋಪ ಪ್ರಕರಣ, ವಂಚನೆ, ಭ್ರಷ್ಟತೆ, ವ್ಯಭಿಚಾರ ಇವೆಲ್ಲಾ ಸಮಸ್ಯೆಯೇ ಅಲ್ಲವೆಂದು ರೇಣುಕಾಚಾರಿಯನ್ನು ಗೆಲ್ಲಿಸಿ ಅರಾಮವಾಗಿರುವ ಒಂದು ವರ್ಗದ ಪ್ರಜೆಗಳ ಮನೋಗತವೇ, ಮಾಡಾಳು ಮೈಮರೆತು ಮೇದದ್ದು ಕೂಡ ಒಂದು ಅಪರಾಧವಾಗಿ ಕಾಣದಂತೆ ಕಾಯುತ್ತದಂತಲ್ಲಾ. ಮುಂದಿನ ಚುನಾವಣೆಯಲ್ಲಿ ಮಾಡಾಳರನ್ನೇ ಗೆಲ್ಲಿಸುವ ಶಪಥವನ್ನು ಅವರ ಮನೆ ಮುಂದೆ ಸೇರಿದ್ದ ಜನ ಮಾಡಿದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

ಇದ್ದಕ್ಕಿದ್ದಂತೆ ಬೆಲ್ಜಿಯಂನಿಂದ ಹಾರಿಬಂದ ಬಾಲು ಹೆಸರಿನ ಮನುಷ್ಯ ಕುವೆಂಪು ಯೂನಿವರ್ಸಿಟಿ ಆವರಣದಲ್ಲಿ ಹಾರಾಡಿ ಆರೆಸ್ಸೆಸ್ ಭೈಠಕ್‌ನಲ್ಲೂ ಭಾಗವಹಿಸಿ ನಿಮ್ಮಲ್ಲಿ ಸಾಹಿತಿಗಳು, ಕಲಾವಿದರು, ಬುದ್ಧಿವಂತರ ಕೊರತೆಯಿದೆ; ಆದ್ದರಿಂದ ಆ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದ್ದಲ್ಲದೆ ಭಾರತದಲ್ಲಿ ಭೀಕರ ಜಾತೀಯತೆ ಅಸ್ಪೃಶ್ಯತೆ ಭುಗಿಲೇಳಲು ಬ್ರಿಟಿಷರು ಕಾರಣ ಎಂದು ಹೇಳು ಇಲ್ಲೊಂದೆರಡು ’ಬಾಲು’ಗಳನ್ನು ತಯಾರು ಮಾಡಿ ದೇವನೂರ, ಡಿ. ಎಸ್. ನಾಗಭೂಷಣ್ ಇಂತಹವರೆಲ್ಲಾ ಗದರಿದ ಮೇಲೆ ಮತ್ತೆ ಬೆಲ್ಜಿಯಂಗೆ ಹಾರಿಹೋದುದು ಈಗ ಇತಿಹಾಸ. ಆದರೇನು ಬೆಲ್ಜಿಯಂನಲ್ಲಿ ಕುಳಿತೇ ತನ್ನ ನಿರೂಪಣೆಯ ಜಾಲವನ್ನು ಹರಡುತ್ತಿರುವ ಬಾಲುವಿನ ಬಾಲಬಡುಕರು ಸೆಕ್ಯುಲರ್ ಪದ ಹಿಡಿದುಕೊಂಡು ಬಡಿಯತೊಡಗಿವೆ. ಇನ್ನ ಕೆಲವರು ವಿಜ್ಞಾನವು ಶಂಕರಾಚಾರ್ಯರ ವೇದಾಂತದತ್ತ ವಾಲುತ್ತಿದೆ ಎಂದು ವಾದಿಸತೊಡಗಿದರೆ ಮತ್ತೆ ಕೆಲವು ಸದ್ಯಕ್ಕೆ ತಾವು ಕೈಗೆತ್ತಿಕೊಂಡಿರುವ ಟಿಪ್ಪು ವಿಷಯದಲ್ಲಿ ಬ್ರಿಟಿಷ್ ಲೇಖಕರು ಏನು ಹೇಳಿದ್ದಾರೆಂದು ಹುಡುಕಿ ಅನಾವರಣ ಮಾಡತೊಡಗಿವೆಯಲ್ಲಾ, ಥೂತ್ತೇರಿ.

****

ಇನ್ನೂರು ವರ್ಷದ ಹಿಂದೆ ಆಳಿಹೋದ ಟಿಪ್ಪು ಸಮಾಧಿ ಅಗೆಯುತ್ತ ಬಿಜೆಪಿಗಳು ಕುಳಿತಿರುವಾಗಲೇ ಚಿಕ್ಕಮಗಳೂರಿನ ಉರಿಗೌಡ ಮತ್ತು ಬೆಂಗಳೂರಿನ ನಂಜೇಗೌಡ ಸೇರಿಕೊಂಡು ಮಂಡ್ಯಕ್ಕೆ ಉರಿತಾಗಿಸುವ ಸುದ್ದಿ ಕೇಳಿದ ಮೋದಿ ಮಂಡ್ಯದಿಂದಲೇ ರೋಡ್ ಶೋ ಮಾಡುವ ತೀರ್ಮಾನ ತೆಗೆದುಕೊಂಡರಂತಲ್ಲಾ. ಅಷ್ಟಕ್ಕೂ ಟಿಪ್ಪು ವಿಷಯಕ್ಕೆ ಮರುಜೀವ ಕೊಡುತ್ತಿರುವ ಮಡಕೇರಿ ಕಡೆಯ ಅಡ್ನಾಡಿ ಸಂಶೋಧನೆಯ ವಾದದ ಪ್ರಕಾರ ಟಿಪ್ಪು ಸಾವಿರಾರು ಜನರನ್ನು ಇಸ್ಲಾಂ ಮತಾಂತರ ಮಾಡಿದ ಎಂದು ಬಡಿದುಕೊಳ್ಳುತ್ತಿರುವುದು. ಇದೇನು ಅಲ್ಲಗಳೆವ ಸಂಗತಿಯಲ್ಲ. ಇದಕ್ಕೆ ದಾಖಲೆಗಳಿವೆ. ಟಿಪ್ಪು ರಾಜನಾದ ಮೇಲೆ ದಂಗೆ ಎದ್ದ ಕೊಡಗಿನ ಕೆಲವರನ್ನ ಮತಾಂತರ ಮಾಡಿದ ಎನ್ನಲಾಗುತ್ತದೆ. ಆ ನಂತರ, ಟಿಪ್ಪು ಸತ್ತ ಕೂಡಲೇ ಆತ ಮತಾಂತರ ಮಾಡಿದವರನ್ನು ಮರಳಿ ಅವರ ಧರ್ಮ (ಜಾತಿ ಯಾವುದಕ್ಕೆ ಎಂಬ ಪ್ರಶ್ನೆ ಬೇರೆಯದ್ದು) ಕರೆತರಬಹುದಿತ್ತಲ್ಲವಾ? ಆ ಕೆಲಸವನ್ನು ಮಾಡದೆ ಅಂದು ಮತಾಂತರಗೊಂಡ ಕೊಡವರು ಮತ್ತು ಲಿಂಗಾಯತರನ್ನು ಇಂದು ದ್ವೇಷ ಮಾಡುತ್ತಿರುವ ಮಂದಮತಿಗಳಿಗೆ ತಾವು ತಮ್ಮವರನ್ನೇ ದ್ವೇಷ ಮಾಡುತ್ತಿದ್ದೇವೆ ಎಂಬುದು ಅರಿವಿಗೇ ಬಂದಿಲ್ಲವಲ್ಲಾ, ಥೂತ್ತೇರಿ.

****

ಇತ್ತ ಬೆಲ್ಜಿಯಂ ಬಾಲು ಕಡೆಯವರು ಟಿಪ್ಪು ಮತಾಂಧ ಮತ್ತು ಕ್ರೂರಿ ಎಂಬುದನ್ನು ಸಾಬೀತುಪಡಿಸಲೋಸ್ಕರ ಇತಿಹಾಸ ಪುಸ್ತಕಗಳನ್ನು ಕೆದಕುತ್ತಾ ಕುಳಿತಿವೆಯಂತೆ. ಅದೂ ಬ್ರಿಟಿಷ್ ಲೇಖಕರು ಬರೆದ ಕೃತಿಗಳನ್ನು. ಈ ಪೈಕಿ ಫ್ರಾನ್ಸಿಸ್ ಬುಖನನ್ ಕುರಿತು ಅಧ್ಯಯನ ಮಾಡುತ್ತಿರುವ ಸಂಘಿ ವಿದ್ವಾಂಸರು, ಅದರಲ್ಲಿ ಟಿಪ್ಪು ಬಗ್ಗೆ ಒಂದು ಸಣ್ಣ ಟೀಕೆ ಕಂಡರೂ ಅದನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಪದಪುಂಜ ಬಳಸಿ ಮರುಕಟ್ಟುತ್ತಿವೆ. ಟಿಪ್ಪು ಬ್ರಿಟಿಷರ ಪಾಲಿಗೆ ಹುಲಿಯಾಗಿದ್ದ. ಅವರನ್ನ ಭಾರತದಿಂದಲೇ ಓಡಿಸುವ ಶಪಥ ಮಾಡಿದ್ದ. ಆದರೆ ಬ್ರಿಟಿಷರ ಆಡಳಿತದಲ್ಲಿ ಕಲೆಕ್ಟರಾಗಿದ್ದವರು, ಅವರ ಆಸ್ಥಾನದಲ್ಲಿದ್ದವರು, ಮಂತ್ರಿಗಳಾಗಿದ್ದವರು, ದಿವಾನರಾಗಿದ್ದವರು ಏಕೆ ಟಿಪ್ಪು ಬಗ್ಗೆ ಏನೂ ಬರೆಯದೆ ಹೊರಟುಹೋಗಿದ್ದಾರೆ ಎಂಬುದನ್ನು ಸಂಘಿ ವಿದ್ವಾಂಸರು ಅಧ್ಯಯನ ಮಾಡಿದರೆ ತಮ್ಮ ಪೂರ್ವಿಕರ ಭೋಜನದ ಇತಿಹಾಸ ತಿಳಿಯಬಹುದುದಲ್ಲವೆ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...