Homeಅಂಕಣಗಳುಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

ಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

- Advertisement -
- Advertisement -

ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಬರೀ ಹಗರಣಗಳಲ್ಲೇ ಮುಳುಗಿದ್ದ ಬಿಜೆಪಿ ಪಾರ್ಟಿಗೆ ಮಾಡಾಳು ವಿರೂಪಾಕ್ಷಪ್ಪನ ಹಗರಣ ಆರೋಪ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆಯಲ್ಲಾ. ಆದರೇನು ಈ ಬಿಜೆಪಿಗಳನ್ನು ಯಾರೂ ಅವಮಾನ ಮಾಡಲಾಗುವುದಿಲ್ಲ. ಮರ್ಯಾದೆ ಕಳೆಯಲಾಗುವುದಿಲ್ಲ. ಮನಸ್ಸಿಗೆ ನೋವು ಮಾಡಲಾಗುವುದಿಲ್ಲ. ಸದರಿ ಹಗರಣದ ಆರೋಪಕ್ಕೆ ಮಾಧುಸ್ವಾಮಿ ಮತ್ತು ಮುಖ್ಯಮಂತ್ರಿ ಉತ್ತರ ಕೊಟ್ಟಾಗಿದೆ. ಏನೆಂದರೆ, ಲೋಕಾಯುಕ್ತದಲ್ಲಿ ನಿಮ್ಮ ಹಗರಣಗಳೂ ಹೊರಬರಲಿವೆ. ಮಗ ಮಾಡಿದ ಹಗರಣಕ್ಕೆ ಅಪ್ಪ ವಿರೂಪಾಕ್ಷನದೇನು ತಪ್ಪು. ನಿಮ್ಮ ಕಾಲದಲ್ಲಿ ಹಗರಣಗಳೇ ಆಗಿರಲಿಲ್ಲವೆ? ಹೀಗೆ. ಇಂತಹ ಉತ್ತರಗಳಿಂದ ಬಿಜೆಪಿಗಳ ಮನಸ್ಸೇನೆಂಬುದು ನಾಡಿನ ಜನಕ್ಕೆ ಅರಿವಾಗುತ್ತಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಶಾ ಎಂಬಾತ ತನ್ನ ಭಾಷಣದಲ್ಲಿ ಮುಂದೆ ಲಂಚಮುಕ್ತ ಸರಕಾರ ಕೊಡುತ್ತೇವೆ ಎಂದಿದ್ದರು! ಅಲ್ಲಿಗೆ ಈವರೆಗೆ ಲಂಚ ತಿಂದ ಸರಕಾರ ನಡೆಸಿದ್ದೇವೆ ಎಂಬುದನ್ನು ಒಪ್ಪಿಕೊಡಂತಾಯ್ತು. ಈ ಬಿಜೆಪಿಗಳಿಗೆ ತಾವು ಆಡುವ ಮಾತಿನ ಅರ್ಥ ಭಾವ ಒಂದು ತಿಳಿಯುವುದಿಲ್ಲವೆಂಬುದಕ್ಕೆ ಇದು ಸಾಕ್ಷಿ. ಇನ್ನು ನಮ್ಮ ಮಾಡಾಳು ಇರಪಾಕ್ಷಿ ಕೋಟ್ಯಾಧಿಪತಿ ವಡ್ನಾಳು ರಾಜಣ್ಣನನ್ನು ಸೋಲಿಸಿ ಬಂದವರು. ಬರಲಿರುವ ಚುನಾವಣೆಯಲ್ಲಿ ಕೋಟಿಕೋಟಿ ಚೆಲ್ಲಬೇಕಿರುವುದರಿಂದ ಧನ ಸಂಗ್ರಹಕ್ಕೆ ಮಗನನ್ನು ನೇಮಿಸಿದ್ದರು ಅನಿಸುತ್ತೆ. ಮಾಡಾಳನ ಮಗನಂಥವರು ಇನ್ನು ಅದೆಷ್ಟು ಮಂದಿ ಬಿಜೆಪಿಯ ಮಂತ್ರಿ ಶಾಸಕರ ಬೆನ್ನಿಗಿದ್ದಾರೊ ಎಂಬುದು ಆ ಮಾಧುಸ್ವಾಮಿಗೇ ಗೊತ್ತಂತಿಲ್ಲಾ, ಥೂತ್ತೇರಿ.

****

ಉಡುಪಿ ಭಟ್ಟನ ಪ್ರಕರಣದಿಂದ ಹಿಡಿದು, ಮೈಸೂರು ರಾಮದಾಸ, ಅತ್ತ ಬೆಳಗಾವಿಯ ಜಾರಕಿಹೊಳಿ, ಹೊನ್ನಾಳಿಯ ರೇಣುಕಾಚಾರಿ, ಹರತಾಳು ಹಾಲಪ್ಪ ಇಂತಹವರ ಹಲವಾರು ಸಾಮಾಜಿಕ ಸಮಸ್ಯಗೆಳಿಂದ ಬಿಜೆಪಿ ನರಳಿದರೂ, ಅದು ಹೇಗೋ ಚೇತರಿಸಿಕೊಳ್ಳುತ್ತದೆಲ್ಲಾ. ಮತ್ತೆ ಹಗರಣಕ್ಕೆ ಸಂಬಂಧಪಟ್ಟವರೆಲ್ಲಾ ಚುನಾವಣೆಯಲ್ಲಿ ಗೆದ್ದು ಬರುವುದು ಸಾಮಾನ್ಯವಾಗಿದೆಯಲ್ಲಾ. ಅಧಿಕಾರ ದುರುಪಯೋಗದಿಂದ ಲೈಂಗಿಕ ಶೋಷಣೆ ಮಾಡಿದ ರೇಣುಕಾಚಾರಿ ವಿರುದ್ಧದ ಆರೋಪದ ಸುದ್ದಿಗೆ ಈ ನಾಡೇನು ಬೆಚ್ಚಲಿಲ್ಲ. ಬದಲಿಗೆ ಶಾಸಕನಾದಾಗ ಸಿಗುವ ಸವಲತ್ತು ನೋಡಿ ದಂಗುಬಡಿದರು. ಜನ ಸಂತ್ರಸ್ತರನ್ನೇ ಕುರಿತು ಆಡಿಕೊಳ್ಳುವುದು ಜಾಸ್ತಿ. ಆಗ ಈಶ್ವರಪ್ಪನೆಂಬ ಮಹಿಳಾವಾದಿ, ’ನೀವು ಆರೋಪ ಮಾಡಿದ ಮಹಿಳೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೀರಿ, ಆದರೆ ರೇಣುಕಾಚಾರಿ ಪತ್ನಿಯ ಬಗ್ಗೆ ಯೋಚಿಸಿದ್ದೀರಾ?’ ಎಂದು ಪ್ರಶ್ನೆ ಕೇಳಿದ್ದರು! ಬಿಜೆಪಿ ಮತದಾರರು ಕನಿಕರದಿಂದ, ’ಪಾಪ ರೇಣುಕಾಚಾರಿಯದೇನೂ ತಪ್ಪಿಲ್ಲ’ ಎಂದುದಲ್ಲದೆ ಆತನನ್ನು ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು. ತಮ್ಮ ನಾಯಕನ ವಿರುದ್ಧ ಬಂದ ಸುಳ್ಳು ಜಾತಿ ಸರ್ಟಿಫಿಕೇಟ್ ಆರೋಪ ಪ್ರಕರಣ, ವಂಚನೆ, ಭ್ರಷ್ಟತೆ, ವ್ಯಭಿಚಾರ ಇವೆಲ್ಲಾ ಸಮಸ್ಯೆಯೇ ಅಲ್ಲವೆಂದು ರೇಣುಕಾಚಾರಿಯನ್ನು ಗೆಲ್ಲಿಸಿ ಅರಾಮವಾಗಿರುವ ಒಂದು ವರ್ಗದ ಪ್ರಜೆಗಳ ಮನೋಗತವೇ, ಮಾಡಾಳು ಮೈಮರೆತು ಮೇದದ್ದು ಕೂಡ ಒಂದು ಅಪರಾಧವಾಗಿ ಕಾಣದಂತೆ ಕಾಯುತ್ತದಂತಲ್ಲಾ. ಮುಂದಿನ ಚುನಾವಣೆಯಲ್ಲಿ ಮಾಡಾಳರನ್ನೇ ಗೆಲ್ಲಿಸುವ ಶಪಥವನ್ನು ಅವರ ಮನೆ ಮುಂದೆ ಸೇರಿದ್ದ ಜನ ಮಾಡಿದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

ಇದ್ದಕ್ಕಿದ್ದಂತೆ ಬೆಲ್ಜಿಯಂನಿಂದ ಹಾರಿಬಂದ ಬಾಲು ಹೆಸರಿನ ಮನುಷ್ಯ ಕುವೆಂಪು ಯೂನಿವರ್ಸಿಟಿ ಆವರಣದಲ್ಲಿ ಹಾರಾಡಿ ಆರೆಸ್ಸೆಸ್ ಭೈಠಕ್‌ನಲ್ಲೂ ಭಾಗವಹಿಸಿ ನಿಮ್ಮಲ್ಲಿ ಸಾಹಿತಿಗಳು, ಕಲಾವಿದರು, ಬುದ್ಧಿವಂತರ ಕೊರತೆಯಿದೆ; ಆದ್ದರಿಂದ ಆ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದ್ದಲ್ಲದೆ ಭಾರತದಲ್ಲಿ ಭೀಕರ ಜಾತೀಯತೆ ಅಸ್ಪೃಶ್ಯತೆ ಭುಗಿಲೇಳಲು ಬ್ರಿಟಿಷರು ಕಾರಣ ಎಂದು ಹೇಳು ಇಲ್ಲೊಂದೆರಡು ’ಬಾಲು’ಗಳನ್ನು ತಯಾರು ಮಾಡಿ ದೇವನೂರ, ಡಿ. ಎಸ್. ನಾಗಭೂಷಣ್ ಇಂತಹವರೆಲ್ಲಾ ಗದರಿದ ಮೇಲೆ ಮತ್ತೆ ಬೆಲ್ಜಿಯಂಗೆ ಹಾರಿಹೋದುದು ಈಗ ಇತಿಹಾಸ. ಆದರೇನು ಬೆಲ್ಜಿಯಂನಲ್ಲಿ ಕುಳಿತೇ ತನ್ನ ನಿರೂಪಣೆಯ ಜಾಲವನ್ನು ಹರಡುತ್ತಿರುವ ಬಾಲುವಿನ ಬಾಲಬಡುಕರು ಸೆಕ್ಯುಲರ್ ಪದ ಹಿಡಿದುಕೊಂಡು ಬಡಿಯತೊಡಗಿವೆ. ಇನ್ನ ಕೆಲವರು ವಿಜ್ಞಾನವು ಶಂಕರಾಚಾರ್ಯರ ವೇದಾಂತದತ್ತ ವಾಲುತ್ತಿದೆ ಎಂದು ವಾದಿಸತೊಡಗಿದರೆ ಮತ್ತೆ ಕೆಲವು ಸದ್ಯಕ್ಕೆ ತಾವು ಕೈಗೆತ್ತಿಕೊಂಡಿರುವ ಟಿಪ್ಪು ವಿಷಯದಲ್ಲಿ ಬ್ರಿಟಿಷ್ ಲೇಖಕರು ಏನು ಹೇಳಿದ್ದಾರೆಂದು ಹುಡುಕಿ ಅನಾವರಣ ಮಾಡತೊಡಗಿವೆಯಲ್ಲಾ, ಥೂತ್ತೇರಿ.

****

ಇನ್ನೂರು ವರ್ಷದ ಹಿಂದೆ ಆಳಿಹೋದ ಟಿಪ್ಪು ಸಮಾಧಿ ಅಗೆಯುತ್ತ ಬಿಜೆಪಿಗಳು ಕುಳಿತಿರುವಾಗಲೇ ಚಿಕ್ಕಮಗಳೂರಿನ ಉರಿಗೌಡ ಮತ್ತು ಬೆಂಗಳೂರಿನ ನಂಜೇಗೌಡ ಸೇರಿಕೊಂಡು ಮಂಡ್ಯಕ್ಕೆ ಉರಿತಾಗಿಸುವ ಸುದ್ದಿ ಕೇಳಿದ ಮೋದಿ ಮಂಡ್ಯದಿಂದಲೇ ರೋಡ್ ಶೋ ಮಾಡುವ ತೀರ್ಮಾನ ತೆಗೆದುಕೊಂಡರಂತಲ್ಲಾ. ಅಷ್ಟಕ್ಕೂ ಟಿಪ್ಪು ವಿಷಯಕ್ಕೆ ಮರುಜೀವ ಕೊಡುತ್ತಿರುವ ಮಡಕೇರಿ ಕಡೆಯ ಅಡ್ನಾಡಿ ಸಂಶೋಧನೆಯ ವಾದದ ಪ್ರಕಾರ ಟಿಪ್ಪು ಸಾವಿರಾರು ಜನರನ್ನು ಇಸ್ಲಾಂ ಮತಾಂತರ ಮಾಡಿದ ಎಂದು ಬಡಿದುಕೊಳ್ಳುತ್ತಿರುವುದು. ಇದೇನು ಅಲ್ಲಗಳೆವ ಸಂಗತಿಯಲ್ಲ. ಇದಕ್ಕೆ ದಾಖಲೆಗಳಿವೆ. ಟಿಪ್ಪು ರಾಜನಾದ ಮೇಲೆ ದಂಗೆ ಎದ್ದ ಕೊಡಗಿನ ಕೆಲವರನ್ನ ಮತಾಂತರ ಮಾಡಿದ ಎನ್ನಲಾಗುತ್ತದೆ. ಆ ನಂತರ, ಟಿಪ್ಪು ಸತ್ತ ಕೂಡಲೇ ಆತ ಮತಾಂತರ ಮಾಡಿದವರನ್ನು ಮರಳಿ ಅವರ ಧರ್ಮ (ಜಾತಿ ಯಾವುದಕ್ಕೆ ಎಂಬ ಪ್ರಶ್ನೆ ಬೇರೆಯದ್ದು) ಕರೆತರಬಹುದಿತ್ತಲ್ಲವಾ? ಆ ಕೆಲಸವನ್ನು ಮಾಡದೆ ಅಂದು ಮತಾಂತರಗೊಂಡ ಕೊಡವರು ಮತ್ತು ಲಿಂಗಾಯತರನ್ನು ಇಂದು ದ್ವೇಷ ಮಾಡುತ್ತಿರುವ ಮಂದಮತಿಗಳಿಗೆ ತಾವು ತಮ್ಮವರನ್ನೇ ದ್ವೇಷ ಮಾಡುತ್ತಿದ್ದೇವೆ ಎಂಬುದು ಅರಿವಿಗೇ ಬಂದಿಲ್ಲವಲ್ಲಾ, ಥೂತ್ತೇರಿ.

****

ಇತ್ತ ಬೆಲ್ಜಿಯಂ ಬಾಲು ಕಡೆಯವರು ಟಿಪ್ಪು ಮತಾಂಧ ಮತ್ತು ಕ್ರೂರಿ ಎಂಬುದನ್ನು ಸಾಬೀತುಪಡಿಸಲೋಸ್ಕರ ಇತಿಹಾಸ ಪುಸ್ತಕಗಳನ್ನು ಕೆದಕುತ್ತಾ ಕುಳಿತಿವೆಯಂತೆ. ಅದೂ ಬ್ರಿಟಿಷ್ ಲೇಖಕರು ಬರೆದ ಕೃತಿಗಳನ್ನು. ಈ ಪೈಕಿ ಫ್ರಾನ್ಸಿಸ್ ಬುಖನನ್ ಕುರಿತು ಅಧ್ಯಯನ ಮಾಡುತ್ತಿರುವ ಸಂಘಿ ವಿದ್ವಾಂಸರು, ಅದರಲ್ಲಿ ಟಿಪ್ಪು ಬಗ್ಗೆ ಒಂದು ಸಣ್ಣ ಟೀಕೆ ಕಂಡರೂ ಅದನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಪದಪುಂಜ ಬಳಸಿ ಮರುಕಟ್ಟುತ್ತಿವೆ. ಟಿಪ್ಪು ಬ್ರಿಟಿಷರ ಪಾಲಿಗೆ ಹುಲಿಯಾಗಿದ್ದ. ಅವರನ್ನ ಭಾರತದಿಂದಲೇ ಓಡಿಸುವ ಶಪಥ ಮಾಡಿದ್ದ. ಆದರೆ ಬ್ರಿಟಿಷರ ಆಡಳಿತದಲ್ಲಿ ಕಲೆಕ್ಟರಾಗಿದ್ದವರು, ಅವರ ಆಸ್ಥಾನದಲ್ಲಿದ್ದವರು, ಮಂತ್ರಿಗಳಾಗಿದ್ದವರು, ದಿವಾನರಾಗಿದ್ದವರು ಏಕೆ ಟಿಪ್ಪು ಬಗ್ಗೆ ಏನೂ ಬರೆಯದೆ ಹೊರಟುಹೋಗಿದ್ದಾರೆ ಎಂಬುದನ್ನು ಸಂಘಿ ವಿದ್ವಾಂಸರು ಅಧ್ಯಯನ ಮಾಡಿದರೆ ತಮ್ಮ ಪೂರ್ವಿಕರ ಭೋಜನದ ಇತಿಹಾಸ ತಿಳಿಯಬಹುದುದಲ್ಲವೆ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉದ್ಯಮಿಗಳಾದ ನಂದನ್ ನಿಲೇಕಣಿ- ನಿಖಿಲ್ ಕಾಮತ್, ನಟ ಶಿವರಾಜ್‌ಕುಮಾರ್ ಅವರಿಗೂ ಎಸ್‌ಐಆರ್ ನೋಟಿಸ್‌

ಇನ್ಫೋಸಿಸ್ ಸಹ-ಸಂಸ್ಥಾಪಕ, ಕೇಂದ್ರ ಸರ್ಕಾರದ 'ಪರೀಕ್ಷಾ ಸುಧಾರಣಾ ಉನ್ನತ ಮಟ್ಟದ ಕಾರ್ಯಪಡೆ' ಮುಕ್ಯಸ್ಥ ನಂದನ್ ನಿಲೇಕಣಿ ಹಾಗೂ ಅವರ ಇಡೀ ಕುಟುಂಬವು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಚುನಾವಣಾ...

ರಾಷ್ಟ್ರೀಯ ಮಹಿಳಾ ಆಯೋಗದ ಕಾರ್ಯಾಗಾರದಲ್ಲಿ ಬರೀ ಹಿಂದಿ ಮಾತು : ಆಕ್ಷೇಪ ವ್ಯಕ್ತಪಡಿಸಿ ಹೊರನಡೆದ ಕೇರಳದ ಶಾಸಕರು

ರಾಷ್ಟ್ರೀಯ ಮಹಿಳಾ ಆಯೋಗ (NCW) ಮಂಗಳವಾರ (ಸೆ.8) ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ, ಬಹುಪಾಲು ಸೆಷನ್‌ಗಳನ್ನು ಹಿಂದಿ ಭಾಷೆಯಲ್ಲೇ ನಡೆಸಲಾಗುತ್ತಿದೆ ಮತ್ತು ಹಿಂದಿ ಮಾತನಾಡದ ರಾಜ್ಯಗಳ ಭಾಗವಹಿಸುವಿಕೆಗೆ ಕರಾರುವಕ್ಕಾಗಿ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಆರೋಪಿಸಿ,...

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...