Homeಮುಖಪುಟತೀಸ್ತಾ ಸೆತಲ್ವಾಡ್ ವಿರುದ್ಧ ಮೇಲ್ನೋಟದ ಪ್ರಕರಣವೇ ಇಲ್ಲ, ಅನ್ವಯಿಸಬಹುದಾದ ವಿಧಿಗಳೂ ಇಲ್ಲ: ಗುಜರಾತ್ ಹೈಕೋರ್ಟಿನಲ್ಲಿ ವಕೀಲರ...

ತೀಸ್ತಾ ಸೆತಲ್ವಾಡ್ ವಿರುದ್ಧ ಮೇಲ್ನೋಟದ ಪ್ರಕರಣವೇ ಇಲ್ಲ, ಅನ್ವಯಿಸಬಹುದಾದ ವಿಧಿಗಳೂ ಇಲ್ಲ: ಗುಜರಾತ್ ಹೈಕೋರ್ಟಿನಲ್ಲಿ ವಕೀಲರ ವಾದ

ತೀಸ್ತಾರವರ ವಿರುದ್ಧ ದ್ವೇಷ ಸಾಧಿಸುತ್ತಿರುವ ಸರ್ಕಾರ ಉದ್ದೇಶಪೂರ್ವಕವಾಗಿ ಸುಳ್ಳು ಪ್ರಕರಣಗಳನ್ನು ಹೇರಿದೆ. ಹಾಗಾಗಿ ಅವರಿಗೆ ಶಾಶ್ವತ ಜಾಮೀನು ನೀಡಬೇಕು.

- Advertisement -
- Advertisement -

ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಪತ್ರಕರ್ತರಾಗಿರುವ ತೀಸ್ತಾ ಸೆತಲ್ವಾಡ್ ಅವರನ್ನು ಜೂನ್ 25, 2022ರಂದು ಬಂಧಿಸಲಾಗಿತ್ತು. 2002ರ ಗುಜರಾತ್ ನರಮೇಧದ ಹಿಂದೆ ದೊಡ್ಡದಾದ ಸಂಚು ಇದೆ ಎಂದು ಸಂತ್ರಸ್ತೆ ಝಾಕಿಯಾ ಜಾಫ್ರಿ ಅವರ ದೂರನ್ನು ತಳ್ಳಿ ಹಾಕಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮರುದಿನವೇ ಅವಸರವಸರವಾಗಿ ಸೆತಲ್ವಾಡ್ ಅವರನ್ನು ಬಂಧಿಸಲಾಗಿತ್ತು. ಅವರ ಶಾಶ್ವತ ಜಾಮೀನು ಅರ್ಜಿಯ ಕುರಿತು ಗುಜರಾತ್ ಹೈಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಯ ಕುರಿತ ವರದಿಯ ಸಂಕ್ಷಿಪ್ತ ರೂಪ ಇಲ್ಲಿದೆ.

ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಪತ್ರಕರ್ತೆ ತೀಸ್ತಾ ಸೆತಲ್ವಾಡ್ ಅವರು ಸುಳ್ಳು ಸಾಕ್ಷ್ಯ ಸಲ್ಲಿಸಿದ್ದಾರೆ ಎಂಬ ಆರೋಪದಲ್ಲಿ ಶಾಶ್ವತ ಜಾಮೀನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಗುಜರಾತ್ ಹೈಕೋರ್ಟಿನಲ್ಲಿ ಮುಂದುವರಿಯುತ್ತಿದೆ. 70 ದಿನಗಳನ್ನು ಗುಜರಾತಿನ ಜೈಲಿನಲ್ಲಿ ಕಳೆದ ಅವರು, ಸದ್ಯಕ್ಕೆ ಸೆಪ್ಟೆಂಬರ್ 2022ರಂದು ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿನ ರಕ್ಷಣೆಯಲ್ಲಿದ್ದಾರೆ. ಅರ್ಜಿದಾರರು ಜೂನ್ 12 ಮತ್ತು 13ರಂದು ತನ್ನ ಹಿರಿಯ ವಕೀಲ ಮಿಹಿರ್ ಥಾಕೋರೆ ಅವರ ಮೂಲಕ ತಮ್ಮ ವಾದವನ್ನು ಮಂಡಿಸಿದರು.

ಹಿನ್ನೆಲೆ

ಒಂದು ವರ್ಷದ ಹಿಂದೆಯಷ್ಟೇ ಝಾಕಿಯಾ ಜಾಫ್ರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಮರುದಿನವೇ ಗುಜರಾತ್ ಭಯೋತ್ಪಾದನಾ ದಳ (ಎಟಿಎಸ್)ವು ಸೆತಲ್ವಾಡ್ ಅವರನ್ನು ಮುಂಬಯಿಯ ಅವರ ಮನೆಯಿಂದ ಅವಸರವಸರವಾಗಿ ಬಂಧಿಸಿತ್ತು. ಅವರ ವಿರುದ್ಧ ಐಪಿಸಿ ವಿಧಿ 468 (ಫೋರ್ಜರಿ), ವಿಧಿ 471 (ಒಂದು ದಾಖಲೆ ಅಥವಾ ಇಲೆಕ್ಟ್ರಾನಿಕ್ ದಾಖಲೆಯನ್ನು ಅಸಲಿ ಎಂದು ಬಳಸುವುದು), ವಿಧಿ194 (ಮರಣ ದಂಡನೆ ನೀಡಬಹುದಾದಂತ ಪ್ರಕರಣ ಒಂದರಲ್ಲಿ ತೀರ್ಪು ಪಡೆಯಲು ಸುಳ್ಳು ಸಾಕ್ಷ್ಯ ನೀಡುವುದು ಇಲ್ಲವೇ ಸೃಷ್ಟಿಸುವುದು), ವಿಧಿ 211 (ಹಾನಿ ಉಂಟುಮಾಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡುವುದು), ವಿಧಿ 2185 (ವ್ಯಕ್ತಿಯನ್ನು ಶಿಕ್ಷೆ ಅಥವಾ ಆಸ್ತಿ ಮುಟ್ಟುಗೋಲಿನಿಂದ ತಪ್ಪಿಸಲು ತಪ್ಪಾದ ದಾಖಲೆ ಅಥವಾ ಬರವಣಿಗೆ): ಮತ್ತು 120 ಬಿ (ಕ್ರಿಮಿನಲ್ ಒಳಸಂಚು) ಮೊದಲಾದ ವಿಧಿಗಳ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಜಾಫ್ರಿ ಅವರು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೃಢಪಡಿಸಿ ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಝಾಕಿಯಾ ಮತ್ತು ಸಹದೂರುದಾರರಾಗಿ ಸೆತಲ್ವಾಡ್ ಈ ಅರ್ಜಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದರು. ತನ್ನ ಪತಿ ಎಹಸಾನ್ ಜಾಫ್ರಿ ಅವರನ್ನು ನಿರ್ದಯವಾಗಿ ಹತ್ಯೆ ಮಾಡಿದ ಮತ್ತು ದೊಡ್ಡ ಪ್ರಮಾಣದಲ್ಲಿ ಮುಸ್ಲಿಮರ ಹತ್ಯೆಗಳಿಗೆ ಕಾರಣವಾದ ನರಮೇಧದಲ್ಲಿ ಇನ್ನಷ್ಟು ದೊಡ್ಡ ಸಂಚು ಇರುವುದಾಗಿ ಅವರು 2006ರಲ್ಲಿ ನೀಡಿದ್ದ ದೂರಿನ ವಿಚಾರಣೆಗಾಗಿ ಸ್ಥಾಪಿಸಲಾಗಿದ್ದ ವಿಶೇಷ ತನಿಖಾ ತಂಡದ ವರದಿಯನ್ನು ಮುಚ್ಚುವುದರ ವಿರುದ್ಧ ಈ ಪ್ರತಿಭಟನಾ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯನ್ನು ತಿರಸ್ಕರಿಸುವಾಗ, “ದುರುದ್ದೇಶದಿಂದ” ಕಳೆದ 16 ವರ್ಷಗಳಿಂದ “ಮಡಕೆಯನ್ನು ಕುದಿಯುತ್ತಾ ಇಟ್ಟವರು” (ವಿಷಯವನ್ನು ಜೀವಂತ ಇಟ್ಟವರು) ಜೈಲಿಗೆ ಹೋಗಬೇಕು ಮತ್ತು “ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ನಡೆಯಬೇಕು” ಎಂಬಂತ ಕೆಲವು ಪ್ರತಿಕೂಲ ಮೌಖಿಕ ಹೇಳಿಕೆಗಳನ್ನು ಸುಪ್ರೀಂಕೋರ್ಟ್ ನೀಡಿತ್ತು. ಆದರೆ, ಲಿಖಿತ ತೀರ್ಪಿನಲ್ಲಿ ಇದನ್ನು ಸೇರಿಸಿರಲಿಲ್ಲ.

ಸೆತಲ್ವಾಡ್ ಪರ ವಕೀಲರ ವಾದ

ಸೆತವ್ವಾಡ್ ವಿರುದ್ಧ ದಾಖಲಿಸಲಾದ ಆರೋಪಗಳನ್ನು ವಿವರಿಸಿದ ಅರ್ಜಿದಾರರ ವಕೀಲರು, ಪೀಠದ ಮುಂದೆ ಅವರ ಮೇಲಿನ ಆರೋಪ ಪಟ್ಟಿಯಲ್ಲಿ ಮಾಡಲಾದ ಪ್ರತಿಯೊಂದು ಆರೋಪದ ವ್ಯಾಖ್ಯಾನ ಮಾಡಿ, ಆರೋಪಗಳ ಹಿಂದಿರುವ ಧಾಟಿಯನ್ನು ಎತ್ತಿತೋರಿಸಿದರು.

ನಕಲಿ ಅಥವಾ ಫೋರ್ಜರಿ ಎಂದು ಪೋಲೀಸರು ಹೇಳಿಕೊಂಡಿರುವ ಅಫಿದಾವಿತ್- ಸುಪ್ರೀಂಕೋರ್ಟಿನ ಮುಂದೆ ಸಲ್ಲಿಸಲಾದ ದಾಖಲೆಯೇ ಹೊರತು ಪೊಲೀಸರ ಮುಂದೆ ಅಲ್ಲ ಎಂಬುದಕ್ಕೆ ಒತ್ತು ನೀಡಿದರು. ಈ ಅಫಿದಾವಿತ್ ಸಲ್ಲಿಸುವಾಗ ಮುಖ್ಯ ನ್ಯಾಯಮೂರ್ತಿಯವರು ಮಧ್ಯಪ್ರವೇಶ ಮಾಡಿದ್ದರು. ಈ ಪ್ರಕರಣವು 2006ರಲ್ಲಿ ಜಾಫ್ರಿಯವರು ನೀಡಿದ ದೂರಿಗಿಂತಲೂ ಮೊದಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸಲ್ಲಿಸಿದ್ದಾಗಿತ್ತು..

ಆದುದರಿಂದ ಸಿಆರ್‌ಪಿಸಿ ವಿಧಿ 195ರ ಪ್ರಕಾರ, “ನ್ಯಾಯಾಲಯದ, ಅಥವಾ ತನ್ನ ಪರಪಾಗಿ ನ್ಯಾಯಾಲಯವು ಲಿಖಿತವಾಗಿ ನೇಮಿಸಿದ ಅಧಿಕಾರಿಯ, ಅಥವಾ ಆ ನ್ಯಾಯಾಲಯದ ಆಧೀನವಾಗಿರುವ ಯಾವುದೇ ಇತರ ನ್ಯಾಯಾಲಯದ ಲಿಖಿತ ದೂರು ಇಲ್ಲದೇ” ಕೇವಲ ಮೌಖಿಕ ಅಭಿಪ್ರಾಯದ ಮೇಲೆ ತನ್ನ ಕಕ್ಷಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸೆತಲ್ವಾಡ್ ಪರ ವಕೀಲರು ವಾದಿಸಿದರು.

ಅದಕ್ಕಿಂತಲೂ ಹೆಚ್ಚಾಗಿ, ಎಸ್ಐಟಿ ದಾಖಲಿಸಿದ ಯಾವುದೇ ಹೇಳಿಕೆಯು ಅಥವಾ ಎಸ್‌ಐಟಿಯ ಮುಂದೆ ಸಲ್ಲಿಸಲಾದ ಯಾವುದೇ ಅಫಿಡವಿಟ್- ಜಾಫ್ರಿಯವರ (2006)ರ ದೂರನ್ನು ಅಥವಾ ನಂತರದ ಪ್ರತಿಭಟನಾ ಅರ್ಜಿಯನ್ನು ಉಲ್ಲೇಖಿಸಿಲ್ಲ. ಸುಪ್ರೀಂಕೋರ್ಟಿನ ಮುಂದೆ ಜಾಫ್ರಿಯವರ ವಿಶೇಷ ತೆರವು ಅರ್ಜಿಯಲ್ಲಿಯೂ ಈ ಅಫಿದಾವಿತ್‌ಗಳನ್ನು ಬಳಸಲಾಗಿಲ್ಲ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನ್ನ ಹಸ್ತಾಂತರ ಅರ್ಜಿಯಲ್ಲಿ ಮಾಡಿದ ದಾವೆಯನ್ನು ಬೆಂಬಲಿಸುವ ಸಲುವಾಗಿ ಮಾತ್ರವೇ, 2006ರ ಜಾಫ್ರಿಯವರ ದೂರಿಗೆ ಬಹಳ ಮುಂಚೆಯೇ ಈ ಅಫಿದಾವಿತ್‌ಗಳನ್ನು ಸಲ್ಲಿಸಲಾಗಿತ್ತು.

ಈ ಸಂದರ್ಭದಲ್ಲಿ ಇಕ್ಬಾಲ್ ಸಿಂಗ್ ಮಾರ್ವಾ ಮತ್ತು ಮೀನಾಕ್ಷಿ ಮಾರ್ವಾ (2005) ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ವಕೀಲರು ತನ್ನ ಕಕ್ಷಿದಾರರಿಗೆ ಸಿಆರ್‌ಪಿಸಿ 195-340ರಲ್ಲಿ ವಿವರಿಸಲಾದ ಪ್ರಕ್ರಿಯೆಯು- ತನ್ನ ಕಕ್ಷಿದಾರರ ಮೇಲೆ ಹೇರಲಾಗಿರುವ ವಿಧಿ 195(1)(b)(i)ಕ್ಕೆ ಯಾಕೆ ಅನ್ವಯವಾಗುವುದಿಲ್ಲ ಎಂಬುದಕ್ಕೆ ತಾಂತ್ರಿಕ ಕಾರಣಗಳನ್ನು ನೀಡಿದರು. ಇದರ ಅರ್ಥವೆಂದರೆ, ಅಫಿದಾವಿತ್‌ನ ಸ್ಥಾನಮಾನ ಏನೇ ಇರಲಿ, ಅದು ಸುಳ್ಳೇ ಆಗಿರಲಿ, ಸಿಆರ್‌ಪಿಸಿಯ 195 ಮತ್ತು 340ನೇ ವಿಧಿಗಳಲ್ಲಿ ವಿಧಿಸಿರುವಂತೆ ಕ್ರಮ ಅರಂಭಿಸಲು ಇರುವ ಏಕೈಕ ಮಾರ್ಗವೆಂದರೆ, ನ್ಯಾಯಾಲಯದ ಲಿಖಿತ ದೂರು ಎಂದವರು ವಾದಿಸಿದರು. ಈ ಪ್ರಕರಣದಲ್ಲಿ ಅಂತಾ ದೂರು ಇಲ್ಲ.

ಹೀಗಿದ್ದರೂ, ನಿಗದತ ಪ್ರಕ್ರಿಯೆಯನ್ನು ಅನುಸರಿಸುವುದಕ್ಕೆ ಬದಲಾಗಿ, ಗುಜರಾತ್ ಎಟಿಎಸ್ ಪೊಲೀಸರು ವಾರಂಟ್ ಇಲ್ಲದೆಯೇ ಸೆತಲ್ವಾಡ್ ಅವರ ಮುಂಬಯಿಯ ಮನೆಗೆ ಬಂದು ಅವರನ್ನು ಬಲವಂತವಾಗಿ ಅಹ್ಮದಾಬಾದಿಗೆ ಕರೆದೊಯ್ದಿದ್ದರು. ಅಲ್ಲಿ ಅವರಿಗೆ ಜೂನ್ 26, 2022ರಂದು ಪೊಲೀಸ್ ಕಸ್ಟಡಿಯನ್ನೂ, ಜುಲೈ 2ರಂದು ನ್ಯಾಯಾಂಗ ಕಸ್ಟಡಿಯನ್ನೂ ವಿಧಿಸಿ ಅಹ್ಮದಾಬಾದಿನ ಸಾಬರಮತಿ ಮಹಿಳಾ ಜೈಲಿನಲ್ಲಿ ಇರಿಸಲಾಗಿತ್ತು. ಬಂಧನದ ದಿನ ಎಟಿಎಸ್ ಪೊಲೀಸರು ತನ್ನ ಮನೆಯನ್ನು ಪ್ರವೇಶಿಸುವಾಗ ಮಾಡಿದ ಹಿಂಸಾಚಾರದ ಕುರಿತು ಕೂಡಾ ಸೆತಲ್ವಾಡ್ ಗಂಭೀರವಾದ ಆರೋಪಗಳನ್ನು ಮಾಡಿದ್ದರು.

ಮೇಲ್ನೋಟದ ಪ್ರಕರಣವೇ ಇಲ್ಲ

ಒಂದು ವೇಳೆ 2006ರಲ್ಲಿ ದೂರು ನೀಡುವಂತೆ ಝಾಕಿಯಾ ಜಾಫ್ರಿಯವರನ್ನು ಒತ್ತಾಯಿಸಿದ ಆರೋಪವಿದ್ದರೆ ಮಾತ್ರವೇ ಐಪಿಸಿ ವಿಧಿ 467,469 ಮತ್ತು 194ನ್ನು ಅವರ ಮೇಲೆ ಅನ್ವಯಿಸಬಹುದಿತ್ತು ಎಂದು ಹಿರಿಯ ವಕೀಲ ಮಿಹಿರ್ ಥಾಕೋರೆ ವಾದಿಸಿದರು. ಈ ದೂರನ್ನು ಜಾಫ್ರಿಯವರು ದಾಖಲಿಸಿದ್ದರೇ ಹೊರತು ಅರ್ಜಿದಾರರಲ್ಲ. ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ಒಂಟಿ ದಾಖಲೆಯೊಂದರ ಹೊರತಾಗಿ ಯಾವುದೇ ದಾಖಲೆಯಲ್ಲಿ ಸೆತಲ್ವಾಡ್ ಅವರ ಸಹಿ ಇಲ್ಲವಾದುದರಿಂದ ಈ ಪ್ರಕರಣವನ್ನು ಸಿಆರ್‌ಪಿಸಿ ವಿಧಿ 195ರಿಂದ ಹೊರತುಪಡಿಸುವ ಸಲುವಾಗಿ ಮಾತ್ರವೇವಿಧಿ 467,469 ಮತ್ತು 471ನ್ನು ಅವರ ಮೇಲೆ ಹೇರಲಾಗಿದೆ ಎಂದೂ ಅವರು ವಾದಿಸಿದರು. ಸುಪ್ರೀಂಕೋರ್ಟಿನ ಲಿಖಿತ ದೂರು ಇಲ್ಲವಾದುರಿಂದ ಮೇಲೆ ವಿವರಿಸಿದಂತೆ- ಸೆತಲ್ವಾಡ್ ವಿರುದ್ಧ ಮೇಲ್ನೋಟಕ್ಕೇ ಯಾವುದೇ ಪ್ರಕರಣವಿಲ್ಲ ಎಂಬುದು ಅವರ ವಾದದ ಸಾರಾಂಶವಾಗಿತ್ತು. ಜಾಮೀನು ನೀಡಲಾಗದ ಪ್ರಕರಣಗಳಲ್ಲಿ ಜಾಮೀನು ನೀಡುವ ಸಿಆರ್‌ಪಿಸಿ ವಿಧಿ 437 ಮತ್ತು ಜಾಮೀನು ನೀಡಲು ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯಗಳಿಗೆ ಇರುವ ವಿವೇಚನೆಗೆ ಸಂಬಂಧಿಸಿದ ವಿಧಿ ೪೩೯ರ ಕುರಿತು ಅವರು ವಿವರವಾಗಿ ಚರ್ಚಿಸಿದರು.

ಪೂರ್ವ ನಿದರ್ಶನಗಳು

ಈ ಸಂದರ್ಭದಲ್ಲಿ ಅವರು 2004ರ ಕಲ್ಯಾಣ್ ಚಂದ್ರ ಸರ್ಕಾರ್ ವಿರುದ್ಧ ರಾಜೇಶ್ ರಂಜನ್ ಯಾನೆ ಪಪ್ಪು ಯಾದವ್ (ಅಪೀಲು) ಪ್ರಕರಣದಲ್ಲಿ ಜಾಮೀನು ನೀಡುವಾಗ ನ್ಯಾಯಾಂಗದ ವಿವೇಚನೆಯಲ್ಲಿ ಪರಿಗಣಿಸಲು ಸುಪ್ರೀಂಕೋರ್ಟ್ ನಿಗದಿಪಡಿಸಿದ ಕೆಳಗಿನ ಮೂರು ಅಂಶಗಳನ್ನು ವಕೀಲ ಥಾಕೋರೆ ವಿವರಿಸಿದರು.

1. ಆರೋಪದ ಗಂಭೀರತೆ ಮತ್ತು ಆರೋಪ ಸಾಬೀತಾದರೆ ವಿಧಿಸಬಹುದಾದ ಶಿಕ್ಷೆಯ ಪ್ರಮಾಣ ಹಾಗೂ ಪೂರಕ ಸಾಕ್ಷ್ಯದ ಸ್ವರೂಪ.

2. ಸಾಕ್ಷ್ಯಾಧಾರಗಳನ್ನು ನಾಶಪಡಿಸಬಹುದಾದ ಮತ್ತು ಫಿರ್ಯಾದಿದಾರರಿಗೆ ಬೆದರಿಕೆ ಒಡ್ಡಬಹುದಾದ ಕಾರ್ಯಸಾಧ್ಯತೆಯ ಅಪಾಯ.

3. ಆರೋಪವು ನಿಜವಾಗಿರಬಹುದು ಎಂಬ ಕುರಿತು ನ್ಯಾಯಾಲಯದ ತೃಪ್ತಿಕರ ಗ್ರಹಿಕೆ.

ಸೆತಲ್ವಾಡ್ ಅವರ ಜಾಮೀನು ಅರ್ಜಿಯ ಕುರಿತು ಮಾನವೀಯ ಹಾದಿ ಅನುಸರಿಸಬೇಕು ಎಂದು ವಿನಂತಿಸಿದ ವಕೀಲರು- ಸತೇಂದ್ರ ಕುಮಾರ್ ಆಂಟಿಲ್ (2021) ಪ್ರಕರಣದಲ್ಲಿ ಸುಪ್ರೀಂಕೋರ್ಟ್- ” ಜಾಮೀನು ನೀಡುವಾಗ, ಆರೋಪಿಯು ಪರಾರಿಯಾಗದಂತೆ ತಡೆಯಲು ಹಣಕಾಸು ನಷ್ಟದ ಭಯವಷ್ಟೇ ಖಾತರಿಯಲ್ಲ; ಕುಟುಂಬ ಸಂಬಂಧಗಳು, ಸಮಾಜದಲ್ಲಿ ಬೇರುಗಳು, ಉದ್ಯೋಗದ ಭದ್ರತೆ, ಸ್ಥಿರವಾದ ಸಂಸ್ಥೆಯೊಂದರ ಸದಸ್ಯತ್ವ ಇತ್ಯಾದಿ ಇತರ ಖಾತರಿಗಳೂ ಇವೆ ಎಂಬುದನ್ನು ತಿಳಿದುಕೊಳ್ಳಲು ನಮ್ಮ ಸಂಸತ್ತಿಗಿದು ಸಕಾಲ. ಇವುಗಳನ್ನು ಜಾಮೀನು ನೀಡುವಾಗ ಪರಿಗಣಿತವಾಗಬೇಕು. ಈ ವಿಷಯಗಳ ಕುರಿತು ನ್ಯಾಯಾಲಯಕ್ಕೆ ತೃಪ್ತಿಯಾದರೆ, ಯಾವುದೇ ಹಣಕಾಸಿನ ಖಾತರಿ ಇಲ್ಲದೇ, ವೈಯಕ್ತಿಕ ಬಾಂಡಿನ ಮೇಲೆ ಆರೋಪಿಗೆ ಜಾಮೀನು ನೀಡಬಹುದು” ಎಂದು ಹೇಳಿದ್ದನ್ನು ಉಲ್ಲೇಖಿಸಿ ಥಾಕೋರೆಯವರು ವಿವರ ನೀಡಿದರು.

ಸೆತಲ್ವಾಡ್ ಅವರು ಈ ದಿನದ ತನಕ ಯಾವುದೇ ಸಂದರ್ಭದಲ್ಲಿ ನ್ಯಾಯಾಲಯವು ಜಾಮೀನಿನ ರೂಪದಲ್ಲಿ ತನಗೆ ನೀಡಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಲ್ಲ ಎಂಬುದನ್ನು ಒತ್ತಿಹೇಳಿದ ವಕೀಲರು, ಇವುಗಳಲ್ಲಿ ಹಲವು ಪ್ರಕರಣಗಳನ್ನು ನಂತರದಲ್ಲಿ ತಳ್ಳಿಹಾಕಲಾಗಿತ್ತು ಎಂದು ನೆನಪಿಸಿದರು.

ಸೆತಲ್ವಾಡ್ ಅವರನ್ನು ಹಲವಾರು ಪ್ರಕರಣಗಳಲ್ಲಿ ಹಿಂದೆಯೂ ಸಿಲುಕಿಸಲಾಗಿದೆ ಮತ್ತು ಸರಕಾರವು ಅವರಿಗೆ ನಿರಂತರ ಕಿರುಕುಳ ನೀಡುತ್ತಿದೆ ಎಂದು ವಿವರ ನೀಡಿದ ವಕೀಲರು, ದ್ವೇಷ ಸಾಧಿಸುತ್ತಿರುವ ಸರಕಾರವು ಅವರನ್ನು ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಬೆನ್ನು ಹತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್, ಬಿಬಿಸಿ ಮುಂತಾದ ಗೌರವಾರ್ಹ ಮಾಧ್ಯಮಗಳು ಮತ್ತು ಫ್ರಂಟ್‌ಲೈನ್ ಡಿಫೆಂಡರ್ಸ್‌ನಂತಾ ಸಂಘಟನೆಗಳು ಕೂಡಾ ವರದಿ ಮಾಡಿವೆ ಎಂಬುದನ್ನು ಉಲ್ಲೇಖಿಸಿದರು. ಸರಕಾರವು ಅವರಿಗೆ ಕಿರುಕುಳ ನೀಡಲು ಅವರ ವಿರುದ್ಧ ದಾಖಲಿಸಲಾದ ಎಲ್ಲಾ ಪ್ರಕರಣಗಳಲ್ಲಿ ಮುಂಬಯಿ ಹೈಕೋರ್ಟ್ ನಿರೀಕ್ಷಣಾ ಜಾಮಿನು ಮತ್ತು ನಂತರದಲ್ಲಿ ಗುಜರಾತ್ ನ್ಯಾಯಾಲಯಗಳು ಶಾಶ್ವತ ಜಾಮೀನು ನೀಡಿವೆ ಮತ್ತು ಹಲವು ಪ್ರಕರಣಗಳು ವಜಾಗೊಂಡಿವೆ ಎಂಬುದನ್ನೂ ನೆನಪಿಸಿದರು.

ಸೆತಲ್ವಾಡ್ ಅವರ ಸಿಟಿಜನ್ಸ್ ಫಾರ್ ಪೀಸ್ ಸಂಘಟನೆಯು 2002ರ ನರಮೇಧದ ನೂರಾರು ಸಂತ್ರಸ್ತರಿಗೆ ನೆರವು ನೀಡಿದ್ದು, ಅವರು, ಅವರ ಪತಿ ಜಾವೇದ್ ಆನಂದ್ ಸೇರಿದಂತೆ ಸಂಘಟನೆಯ ಸದಸ್ಯರು 68 ಪ್ರಕರಣಗಳಲ್ಲಿ ಹೋರಾಡಿ, 174 ತಪ್ಪಿತಸ್ಥರಿಗೆ ಶಿಕ್ವೆಯಾಗುವಂತೆ ಮಾಡಿದ್ದು, ಇವುಗಳಲ್ಲಿ 124 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ತಿಳಿಸಿದರು. ಈ ಎಲ್ಲಾ ಹಿನ್ನೆಲೆಗಳನ್ನು ಪರಿಗಣಿಸಿ ತೀಸ್ತಾ ಸೆತಲ್ವಾಡ್ ಅವರಿಗೆ ಶಾಶ್ವತ ಜಾಮೀನು ನೀಡಬೇಕೆಂದು ವಕೀಲ ಮಿಹಿರ್ ಥಾಕೋರೆ ವಿನಂತಿಸಿದರು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಇದನ್ನೂ ಓದಿ; ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...