Homeಚಳವಳಿರೈತ ಹೋರಾಟಕ್ಕೆ 150 ದಿನ: ಬಿರು ಬೇಸಿಗೆಯಲ್ಲೂ ಬತ್ತದ ಉತ್ಸಾಹ, ಮೇ 10 ರಿಂದ ಮತ್ತಷ್ಟು...

ರೈತ ಹೋರಾಟಕ್ಕೆ 150 ದಿನ: ಬಿರು ಬೇಸಿಗೆಯಲ್ಲೂ ಬತ್ತದ ಉತ್ಸಾಹ, ಮೇ 10 ರಿಂದ ಮತ್ತಷ್ಟು ಬಿರುಸು!

- Advertisement -
- Advertisement -

ಜಗತ್ತಿಗೆ ಮಾದರಿಯಾದ ಐತಿಹಾಸಿಕ ರೈತ ಹೋರಾಟ ಸೋಮವಾರ (ಏಪ್ರಿಲ್ 26) 150 ದಿನಗಳನ್ನು ಪೂರೈಸುತ್ತಿದೆ. ದೆಹಲಿಯ ನಾಲ್ಕು ಗಡಿಗಳಲ್ಲಿ ಕುಳಿತಿರುವ ಪ್ರತಿಭಟನಾ ನಿರತ ರೈತರು ಇನ್ನು ಮೊದಲ ದಿನದ ಉತ್ಸಾಹವನ್ನೇ ಹೊಂದಿದ್ದು, ಭವಿಷ್ಯದ ಹೋರಾಟಗಳಿಗೆ ಮಾದರಿಯಾಗಿದ್ದಾರೆ.

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಈ ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕೆ 150 ದಿನಗಳು ಸಂದಿವೆ. 2020ರ ನವೆಂಬರ್‌ 26 ರಂದು ದೆಹಲಿಯ ಗಡಿಗಳಿಗೆ ಬಂದಿಳಿದ ದೇಶದ ಅನ್ನದಾತರ ಹೋರಾಟ ಈಗ ದೇಶಾದ್ಯಂತ ಪಸರಿಸಿದೆ. ಎಲ್ಲಾ ರಾಜ್ಯಗಳಲ್ಲೂ ರೈತ ಹೋರಾಟದ ಕಾವಿದೆ. ಇದರ ನಡುವೆಯೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಹೋರಾಟಗಾರರರಲ್ಲಿ ಯಾವುದೇ ಆತಂಕ ಕಾಣಿಸುತ್ತಿಲ್ಲ. ಕೊರೊನಾ ಬಗ್ಗೆ ಜಾಗೃತಿ ವಹಿಸುತ್ತ ಮತ್ತಷ್ಟು ತೀವ್ರವಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

ದೆಹಲಿಯ ಸಿಂಘು, ಟಿಕ್ರಿ, ಗಾಜಿಪುರ್‌ ಮತ್ತು ರಾಜಸ್ಥಾನದ ಶಹಜಾನ್‌ಪುರ್‌ ಗಡಿಗಳಲ್ಲಿ ಕಳೆದ ಐದು ತಿಂಗಳಿನಿಂದ ಕುಳಿತಿದ್ದಾರೆ. ಪಂಜಾಬಿನಲ್ಲಿ 8 ತಿಂಗಳುಗಳೇ ಕಳೆದಿವೆ. ಆದರೆ ಈ ಹೋರಾಟಗಾರರಲ್ಲಿ ಪ್ರತಿಭಟನಾ ಉತ್ಸಾಹ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ ಎಂಬುದನ್ನು ಅವರ ಮಾತುಗಳೇ ಹೇಳುತ್ತವೆ. ವಾತಾವರಣಕ್ಕೆ, ಹವಾಮಾನಕ್ಕೆ ತಕ್ಕಂತೆ ತಾವು ಬದಲಾಗುತ್ತಿದ್ದಾರೆಯೇ ಹೊರತು ತಮ್ಮ ಬೇಡಿಕೆಯಿಂದ ಹಿಂದೆ ಸರಿದಿಲ್ಲ ಎಂಬುದು ಈ ಐತಿಹಾಸಿಕ ಹೋರಾಟದ ಮತ್ತೊಂದು ವಿಶೇಷ.

ಇದನ್ನೂ ಓದಿ: ಸಿಂಘು ಬಾರ್ಡರ್‌ನಲ್ಲಿ ಒಂದು ಬದಿಯ ಬ್ಯಾರಿಕೇಡ್ ತೆಗೆಯಲು ರೈತರ ನಿರ್ಧಾರ

150 ದಿನಗಳ ರೈತ ಹೋರಾಟ ದೇಶದ ಜನರಿಗೆ ಹಲವು ಹುರುಪುಗಳನ್ನು ನೀಡಿದೆ. ಇದರಿಂದಾಗಿ ಹಲವು ಧ್ವನಿಗಳು ಒಗ್ಗೂಡಿವೆ. ಕಾರ್ಮಿಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು, ವಕೀಲರು, ವೈದ್ಯರು, ನಾಗರಿಕರು ತಮ್ಮ ಹಕ್ಕುಗಳನ್ನು ಕೇಳಲು ಶುರು ಮಾಡಿದ್ದಾರೆ.

ಕೇವಲ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರ ಹೋರಾಟ ಎಂದು ಒಕ್ಕೂಟ ಸರ್ಕಾರ ನೀಡಿದ್ದ ಹಣೆಪಟ್ಟಿಯನ್ನು ದೇಶದ ಹಲವು ರಾಜ್ಯಗಳು ಅಳಿಸಿಹಾಕಿವೆ. ಮಹಾ ಪಂಚಾಯತ್ ಎಂಬ ಹೊಸ ಕಿಸಾನ್ ಪಂಚಾಯತ್‌ಗಳ ಮೂಲಕ ದಕ್ಷಿಣ ಭಾರತತದ ರಾಜ್ಯಗಳಿಗೆ ರೈತ ಹೋರಾಟ ಪಸರಿಸಿದ ಪರಿ ನಿಜಕ್ಕೂ ಗಮನಾರ್ಹವಾದದ್ದು.

ಕಳೆದ ಐದು ತಿಂಗಳಿನಿಂದ ದೆಹಲಿಯ ಸಿಂಘು ಬಾರ್ಡರ್‌ನಲ್ಲಿ ರೈತರ ಜೊತೆಗೆ ತಾವು ಒಂದು ಟೆಂಟ್ ಹಾಕಿಕೊಂಡು ಪ್ರತಿಭಟನೆಯಲ್ಲಿರುವ, ಪ್ರತಿಭಟನೆಯನ್ನು ಗಮನಿಸುತ್ತಿರುವ ವರ್ಕಿಂಗ್‌ ಪೀಪಲ್ ಚಾಟರ್‌ನ ನಿರ್ಮಲ್ ತಾವು ಕಂಡ ರೈತ ಹೋರಾಟವನ್ನು ನಾನುಗೌರಿ.ಕಾಂ ಜೊತೆ ಹಂಚಿಕೊಂಡಿದ್ದು ಹೀಗೆ.

PC: newsbust

” ರೈತರಲ್ಲಿ ನಾನು ಮೊದಲು ಬಂದಾಗ ನೋಡಿದ ಉತ್ಸಾಹವೇ ಈಗಲೂ ಕಾಣುತ್ತಿದ್ದೇನೆ. ಪಂಜಾಬ್, ಹಿಯಾಣದಲ್ಲಿ ಈಗ ಗೋದಿ ಕೊಯ್ಲು ನಡೆಯುತ್ತಿರುವ ಕಾರಣ ಕೊಂಚ ಮಟ್ಟಿಗೆ ಜನಸಂಖ್ಯೆ ಕಡಿಮೆಯಾಗಿದೆ. ಆದರೆ ಗುಡಿಸಲುಗಳ ಸಂಖ್ಯೆ ಹಾಗೆಯೇ ಇದೆ. ಇನ್ನೋಂದು ವಾರದಲ್ಲಿ ಜನ ಮತ್ತೆ ವಾಪಸ್ ಬರುತ್ತಾರೆ. ಅಷ್ಟರಲ್ಲಿ ಕೊಯ್ಲು ಮುಗಿಯುತ್ತದೆ. ಈಗ ಸಿಂಘು ಬಾರ್ಡರ್‌ನಲ್ಲಿ ಎಷ್ಟೋಂದು ಚಂದ ಚಂದದ ಗುಡಿಸಲು, ಮನೆಗಳು ನಿರ್ಮಾಣವಾಗಿವೆ. ಇವುಗಳನ್ನು ನಾನು ಬರಿ ಪುಸ್ತಕದಲ್ಲಿ ಮಾತ್ರ ನೋಡಿದ್ದೆ. ಈಗ ಕಣ್ಣಾರೆ ನೋಡುತ್ತಿದ್ದೇನೆ. ಈಗ ಸುಂದರವಾದ ಬಿದಿರಿನ ಗುಡಿಸಲುಗಳು ಹೆಚ್ಚಾಗಿದ್ದು, ’ಬಾಂಬೂ ಹಟ್ ನಗರ್” ಎಂಬ ಹೊಸ ಹೆಸರು ಇಡಬೇಕಾಗಬಹುದು. ಅಷ್ಟು ಚಂದದ ಮನೆಗಳನ್ನು ಇವರು ನಿರ್ಮಿಸಿದ್ದಾರೆ. ಇವರು ಇಲ್ಲಿಂದ ಕೃಷಿ ಕಾನೂನುಗಳು ವಾಪಸ್ ಆದ ಮೇಲೆಯೇ ಹೊರಡುವುದು” ಎನ್ನುತ್ತಾರೆ ನಿರ್ಮಲ್.

ಈ ಐತಿಹಾಸಿಕ ಹೋರಾಟದಲ್ಲಿ 405 ರೈತರು ಹುತಾತ್ಮರಾಗಿದ್ದಾರೆ. ಅವರ ನೆನಪಿನಲ್ಲಿ ಎಲ್ಲಾ ಗಡಿಗಳಲ್ಲಿಯೂ ಹುತಾತ್ಮ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಈ ಸ್ಮಾರಕಗಳಿಗೆ ಮಿಟ್ಟಿ ಸತ್ಯಾಗ್ರಹ ಯಾತ್ರೆಯಲ್ಲಿ 23 ರಾಜ್ಯಗಳ 1500 ಹಳ್ಳಿಗಳಿಂದ ಮಣ್ಣು ಸಂಗ್ರಹಿಸಲಾಗಿತ್ತು.

PC: PARI

ಪಂಜಾಬ್‌ನಲ್ಲಿ ಕಳೆದ ಸೆಪ್ಟಂಬರ್‌ನಲ್ಲಿಯೇ ಈ ಆಂದೋಲನ ಆರಂಭವಾಗಿತ್ತು. ದೆಹಲಿಯ ರೈತ ಹೋರಾಟಕ್ಕೆ 5 ತಿಂಗಳಾದರೇ, ಪಂಜಾಬಿನ ಹೋರಾಟಕ್ಕೆ ಸರಿ ಸುಮಾರು 8 ತಿಂಗಳುಗಳು ಕಳೆಯುತ್ತಿವೆ. ಇವರ ಹುರುಪು ಮಾತ್ರ ಇನ್ನು ಹೆಚ್ಚಾಗಿದೆ. ದೆಹಲಿಗೆ ಹೋಗಿರುವ ರೈತರ ಮನೆ, ಹೊಲದ ಕೆಲಸಗಳನ್ನೂ ನೋಡಿಕೊಂಡು, ಪಂಜಾಬಿನ ಪ್ರತಿ ಜಿಲ್ಲೆಯ ಮುಖ್ಯ ಘಟಕಗಳಲ್ಲಿ ಪ್ರತಿಭಟನೆ ನಡಸುತ್ತಿರುವ ಈ ರೈತರ ಆತ್ಮಸ್ಥೈರ್ಯ ನಿಜಕ್ಕೂ ಮಾದರಿ.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ, ಪಂಜಾಬಿನ ಬರ್ನಾಲಾ ಜಿಲ್ಲೆಯ ರಾಮ್‌ಪುರ್‌ ಪುಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹರ್ಮೇಶ್ ಕುಮಾರ್‌, ಇದು ನಮ್ಮ ಬದುಕಿನ ಪ್ರಶ್ನೆ. ಎಷ್ಟು ವರ್ಷಗಳಾದರೂ ಸರಿ ನಾವು ಪ್ರತಿಭಟನೆ ನಡೆಸುತ್ತೇವೆ ಎನ್ನುತ್ತಾರೆ.

“ಇಷ್ಟು ದಿನಗಳಾದರೂ ರಾಮ್‌ಪುರ್‌ ಪುಲ್‌ನ ರೈಲು ನಿಲ್ದಾಣ, ಮೆಹಲ್ಕಲಾ ಟೋಲ್, ಬರ್ನಾಲಾ ರೈಲು ನಿಲ್ದಾಣ, ರಿಲಯನ್ಸ್ ಮಾಲ್, ಪೆಟ್ರೋಲ್‌ ಬಂಕ್‌ಗಳ ಬಳಿ ಪ್ರತಿಭಟನೆ ನಿಂತಿಲ್ಲ. ದೆಹಲಿಯ ಹೋರಾಟದಂತೆಯೇ ಇಲ್ಲಿನ ಹೋರಾಟದಲ್ಲೂ ಯಾವುದೇ ಉತ್ಸಾಹ ಕಡಿಮೆಯಾಗಿಲ್ಲ” ಎನ್ನುತ್ತಾರೆ ಹರ್ಮೇಶ್ ಕುಮಾರ್‌.

The protesters had been building shelters using bamboo, tin, plywood and even bricks at the Tikri and Singhu borders over the last two weeks to beat the summer heat and rain.
PC: Hindustantimes

ತೀವ್ರ ಚಳಿ ಎದುರಿಸಿ, ಈಗ ತೀವ್ರ ಬಿಸಿಲಿನ ತಾಪಕ್ಕೆ ಇಲ್ಲಿನ ರೈತರು ಒಳಗಾಗಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಇಲ್ಲಿ ಯಾವುದೇ ಆತಂಕಕಾರಿ ಅಂಶಗಳು ವರದಿಯಾಗದಿರುವುದು ಸಮಾಧಾನದ ಸಂಗತಿಯಾಗಿದೆ.

ಕೊರೊನಾ ಮಾರ್ಗಸೂಚಿಯನ್ನು ಅನುಸರಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಈಗಾಗಲೇ ಹೇಳಿದ್ದಾರೆ. ಕೊರೊನಾಕ್ಕಿಂತ ದೊಡ್ಡ ರೋಗ ಬಂದರೂ ನಾವು ಇಲ್ಲಿಂದ ಕದಲುವುದಿಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಮಾತುಗಳನ್ನು ಆಡಿದ್ದಾರೆ.

Image
ಗಾಜಿಪುರ್‌ ಗಡಿಯಲ್ಲಿ ಸ್ಯಾನಿಟೈಝರ್‌ ಸಿಂಪಡಿಸುತ್ತಿರುವ ರೈತ ಮುಖಂಡ ರಾಕೇಶ್ ಟಿಕಾಯತ್

150 ದಿನಗಳಾಯಿತು ಪ್ರತಿಭಟನೆಗೆ ಹೇಗನ್ನಿಸುತ್ತಿದೆ ಎಂದು ಶಹಜಾನ್‌ಪುರ್‌ ಗಡಿಯಲ್ಲಿ ಪ್ರತಿಭಟನಾ ನಿರತರಾಗಿರುವ ರಾಜಸ್ಥಾನದ ರೈತ ರೇಖಾರಾಮ್‌ಗೆ ಪ್ರಶ್ನೆ ಮಾಡಿದ ನಾನುಗೌರಿ.ಕಾಂಗೆ ಅವರು ಕೊಟ್ಟ ಉತ್ತರ ಇದು.

“ನಾವು 150 ದಿನ ಅಲ್ಲ ಎಷ್ಟು ದಿನಗಳಾದರೂ ಇಲ್ಲಿಯೇ ಇರುತ್ತೇವೆ. ಜೀವನವೇ ನಾಶವಾಗುವಾಗ ಊರಿಗೆ ವಾಪಸ್ ಹೋಗಿ ಮಾಡುವುದಾದರೂ ಏನು…? ಗೋಧಿ ಕೊಯ್ಲಿಗಾಗಿ ಕೆಲವು ಮಂದಿ ಊರುಗಳಿಗೆ ಹೋಗಿದ್ದಾರೆ. ಪಾಳಿಯ ಮಾದರಿಯಲ್ಲಿ ಹೋರಾಟ ನಡೆಯುತ್ತಿದೆ. ಎಷ್ಟು ದಿನಗಳಾದರೂ ಇದು ಹೀಗೆಯೇ ಮುಂದುವರೆಯುತ್ತದೆ. ಈ ರಸ್ತೆಗಳೇ ನಮಗೆ ಮನೆಗಳಾಗಿವೆ. ಒಗ್ಗಟ್ಟಾಗಿ ನಿಂತಿದ್ದೇವೆ. ಗೆಲುವು ಪಡೆದೆ ಪಡೆಯುತ್ತೇವೆ” ಎನ್ನುತ್ತಾರೆ ರೈತ ರೇಖಾರಾಮ್.

ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಾದ ಡಾ. ದರ್ಶನ್ ಪಾಲ್, ‘ಐದು ತಿಂಗಳ ಕಾಲ ಶಾಂತಿಯುತವಾಗಿ ಪ್ರತಿಭಟಿಸುವ ಮೂಲಕ ರೈತರು ನೈತಿಕವಾಗಿ ಯುದ್ಧವನ್ನು ಗೆದ್ದಿದ್ದಾರೆ. ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ಕನಿಷ್ಠ ಬೆಂಬಲ ಬೆಲೆಯನ್ನು ಕಾಯ್ದೆ ಮಾಡಿದ ಮಾಡಿದ ನಂತರ ನಮ್ಮ ಗೆಲುವು ಪೂರ್ಣಗೊಳ್ಳುತ್ತದೆ’ ಎನ್ನುತ್ತಾರೆ.

ಪ್ರತಿಭಟನೆಯೊಂದು ಇಷ್ಟು ದೀರ್ಘಕಾಲದವರೆಗೆ ಇಷ್ಟು ಒಗ್ಗಟ್ಟಿನಿಂದ ನಡೆಯುತ್ತಿರುವುದು ಇದೇ ಮೊದಲು. ಚಳಿಗಾಲದಲ್ಲಿ ಟ್ಯ್ರಾಲಿಗಳನ್ನು ಆಶ್ರಯಿಸಿದ್ದ ರೈತರು, ಈಗ ಬಿದಿರಿನ, ಹುಲ್ಲಿನ ಗುಡಿಸಲುಗಳನ್ನು ಆಶ್ರಯಿಸಿದ್ದಾರೆ. ಮೇ  10 ರ ಒಳಗೆ ಎಲ್ಲಾ ಗೋಧಿ ಕೊಯ್ಲಿನ ಕೆಲಸ ಮುಗಿಯುತ್ತದೆ. ಪ್ರತಿಭಟನೆಗೆ ಮತ್ತಷ್ಟು ಬಿರುಸು ಬರುತ್ತದೆ ಎನ್ನುತ್ತಾರೆ ಪ್ರತಿಭಟನಾ ನಿರತ ರೈತರು.


ಇದನ್ನೂ ಓದಿ: ಆಮ್ಲಜನಕದ ವಾಹನಗಳ ಸಂಚಾರಕ್ಕೆ ಬ್ಯಾರಿಕೇಡ್ ಹಾಕಿ ಅಡ್ಡಿ ಪಡಿಸಿರುವುದು ಸರ್ಕಾರ, ರೈತರಲ್ಲ- ರೈತ ಸಂಘಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...