Homeಕರ್ನಾಟಕಅಪರೂಪದ ಇರುವೆಗಳನ್ನು ಪತ್ತೆ ಮಾಡಿದ ’ಏಟ್ರಿ’: ಇರುವೆಗೆ ಬರಹಗಾರ ಗಣೇಶಯ್ಯ ಹೆಸರು

ಅಪರೂಪದ ಇರುವೆಗಳನ್ನು ಪತ್ತೆ ಮಾಡಿದ ’ಏಟ್ರಿ’: ಇರುವೆಗೆ ಬರಹಗಾರ ಗಣೇಶಯ್ಯ ಹೆಸರು

- Advertisement -
- Advertisement -

“ಅಶೋಕ ಟ್ರಸ್ಟ್ ಫಾರ್‌ ರೀಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌ ಎನ್ವಿರಾನ್‌ಮೆಂಟ್‌” (ATREE ) ಎಂಬ ಬೆಂಗಳೂರಿನ ಸಂಶೋಧನ ಕೇಂದ್ರದ ಕೀಟಶಾಸ್ತ್ರಜ್ಞರು ಎರಡು ಹೊಸ ಅಪರೂಪದ ಇರುವೆಗಳನ್ನು Eaglenest wild life santuary (EWS) ಎಂಬ ವನ್ಯಜೀವಿ ಅಭಯಾರಣ್ಯದಿಂದ ಕಂಡುಹಿಡಿದ್ದಾರೆ.

ಏಟ್ರಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು ಹಾಗೂ ATREE ಸಂಶೋಧನ ಕೇಂದ್ರದಲ್ಲಿ ಕೀಟವರ್ಗಿಕರಣ ಮತ್ತು ಸಂರಕ್ಷಣ (Insect taxonomy and conservation) ಪ್ರಯೋಗಲಾಯ ತೆರೆಯುವುದರಲ್ಲಿ ಮುಖ್ಯ ಕಾರಣಕರ್ತರಾದ ಪ್ರೊ. ಕೆ. ಎನ್.ಗಣೇಶಯ್ಯರವರ ಹೆಸರನ್ನು ಒಂದು ಇರುವೆಗೆ ಇಡಲಾಗಿದೆ.

ಎರಡು ಹೊಸ ಇರುವೆಯಲ್ಲಿ ಒಂದು ಇರುವೆಗೆ “ಪ್ಯಾರಸಿಸ್ಸಿಯ ಗಣೇಶಯ್ಯಯಿ” ಎಂದು ಇಡಲಾಗಿದೆ. ಮತ್ತೊಂದು ಇರುವೆಯು ಭಾರತ ದೇಶದಲ್ಲಿ ಮೊದಲು ದಾಖಲಾಗಿರುವ ಕಾರಣ ಭಾರತದೇಶವನ್ನು ಉಲ್ಲೇಖಿಸಿ “ಸಿಸ್ಸಿಯ ಇಂಡಿಕ’ ಎಂದು ಹೆಸರಿಸಲಾಗಿದೆ.

ಈಗಾಗಲೇ ಅಂಡಮಾನ್‌ಲ್ಲಿನ ಒಂದು ಸಸ್ಯಕ್ಕೆ centotheca ganeshaiahiana ಎಂದು ಆಂಧ್ರ ಪ್ರದೇಶದ ಒಂದು ಸಸ್ಯಕ್ಕೆ Tripogan umaganeshii ಎಂದು ಹೆಸರಾದ ಕೃಷಿ ವಿಜ್ಞಾನಿ ಹಾಗೂ ಸಸ್ಯ ಪ್ರಪಂಚದಲ್ಲಿ ಅಪಾರ ಸಂಶೋಧನೆ ನಡೆಸಿರುವ ಅಂತರರಾಷ್ಟ್ರೀಯ ಮಟ್ಟದ ಪರಿಸರ ವಿಜ್ಞಾನಿ, ಚಿಂತಕ ಮತ್ತು ಬರಹಗಾರರು ಗಣೇಶಯ್ಯ.

ಇದನ್ನೂ ಓದಿ: ದಲಿತರಿಗೆ ವಸತಿ ಮಂಜೂರು ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಗಣಪಯ್ಯನವರ ಕುಟುಂಬ

ಅರುಣಾಚಲಪ್ರದೇಶದ ವೆಸ್ಟ್ ಕಾಮೆಂಗ್ ಜಿಲ್ಲೆಯ ಹಿಮಾಚಲದ ತಪ್ಪಲಿನಲ್ಲಿ ಪಕ್ಕೆ ಟೈಗರ್ ರಿಸರ್ವ್ ಮತ್ತು ಟೆಂಗ್ ಆರ್ಮಿ ಕಂಟೋನ್ಮೆಂಟ್ ಪ್ರದೇಶಗಳ ಮರೆಯಲ್ಲಿರುವ ಈಗಲ್‍ನೆಸ್ಟ್ ವನ್ಯಜೀವಿ ಅಭಯಾರಣ್ಯವು ಪರಿಸರ ವಿಜ್ಞಾನಿಗಳಿಗೆ ಮತ್ತು ಪ್ರಕೃತಿ ಉತ್ಸಾಹಿಗಳಿಗೆ ಸ್ವರ್ಗವಾಸಿಯಾಗಿದೆ. 218 ಚದರ ಕಿಲೋಮೀಟರ್‍ಗಳಷ್ಟು ವ್ಯಾಪಿಸಿರುವ ಅರಣ್ಯಪ್ರದೇಶವು ಸಮುದ್ರಮಟ್ಟದಿಂದ 500 ಮೀ ನಿಂದ 3250 ಮೀ ಎತ್ತರದ ನಡುವೆ ಅನೇಕ ಅಚ್ಚರಿಗಳನ್ನು ಒಳಗೊಂಡಿದೆ.

ಅಶೋಕ ಸಂಶೋಧನ ಕೇಂದ್ರದ ಕೀಟಶಾಸ್ರಜ್ಞರು ಈಗಲ್‍ನೆಸ್ಟ್ ಅಭಯಾರಣ್ಯದಿಂದ 200 ಕ್ಕೂ ಹೆಚ್ಚು ಜಾತಿಯ (Species) ಇರುವೆಗಳು ಒಟ್ಟಾರೆ ಭಾರತದ ಇರುವೆಗಳ ಸರಾಸರಿ 25% ರಷ್ಟು ಇರುವೆಗಳನ್ನು ಸಂಗ್ರಹಿಸಿದ್ದಾರೆ.  ಸಂಶೋಧಕರ ತಂಡ ಡಾ. ಪ್ರಿಯದರ್ಶನನ್ ಧರ್ಮರಾಜನ್ (Senior fellow ) ಅಸ್ವಜ್ ಪುನ್ನಥ್ ಸಹನಶ್ರೀ (ATREE Bangalore ) ಹಾಗೂ ಡಾ. ಅನಿರುದ್ದ ಮರಾತೆ (IISC Bangalore) ಅವರುಗಳು ಆಸಕ್ತಿದಾಯಕ ಇರುವೆಗಳನ್ನು ಸಂಗ್ರಹಿಸಿದ್ದಾರೆ.

“ಪ್ಯಾರಸಿಸ್ಸಿಯ ಗಣೇಶಯ್ಯಯಿ” ಇರುವೆಯು ಹಳದಿ ಮಿಶ್ರಿತ ಕಂದು ಬಣ್ಣದ ಸಣ್ಣ ಗಾತ್ರದ ಇರುವೆ ಮತ್ತು ಮೇಲ್ಮೈ ಭಾಗವು ಮೈಕ್ರೂಪಂಕ್ಚರ್ಸ್‍ಗಳಿಂದ ಕೂಡಿರುವ ಈ ಇರುವೆಯು ತನ್ನ ಗೂಡನ್ನು ಕೊಳೆತ ದಿಂಬಿಗಳಲ್ಲಿ ಅಥವಾ ಕಲ್ಲುಗಳ ಅಡಿಯಲ್ಲಿ ನಿರ್ಮಿಸುತ್ತದೆ. ಇದನ್ನು ದಟ್ಟ ಅರಣ್ಯದ ಜನನಿಬಿಡ ಪ್ರದೇಶದಲ್ಲಿ ಸಮುದ್ರಮಟ್ಟದಿಂದ 1400ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ. ಭಾರತದಲ್ಲಿ ಒಟ್ಟು ಏಳು ಪ್ಯಾರಸಿಸ್ಸಿಯ ಇರುವೆಗಳಿದ್ದು ಅದರಲ್ಲಿ ಆರು ಇರುವೆಗಳು ಸ್ಥಳೀಯ (Endemic ) ಎಂದು ಗುರುತಿಸಲಾಗಿದೆ.

ಸಿಸ್ಸಿಯ ಜೀನಸ್ ಇರುವೆಗಳು ಕೂಡ ಅಪರೂಪದ ಇರುವೆಗಳು ಎಲೆಯ ತರಗು (leaf litter ) ಕೊಳೆತಮರ ಹಾಗೂ ಮಣ್ಣಿನಲ್ಲಿ ವಾಸಿಸುವ ಇರುವೆಗಳಾಗಿವೆ ಈ ಮೊದಲು ಚೀನಾ, ಜಪಾನ್ ಶ್ರೀಲಂಕ ಹಾಗೂ ಥೈಲಾಂಡ್ ದೇಶಗಳಲ್ಲಿ ದಾಖಲೆಗೊಂಡಿದ್ದು ಭಾರತದಲ್ಲಿ ಸೂಕ್ತವಾದ ದಾಖಲೆಯ ಕೊರತೆಯಿಂದ ಪ್ರಸ್ತುತ ದಾಖಲೆಯನ್ನು ಭಾರತಕ್ಕೆ ಮೊದಲ ದಾಖಲೆಯಾಗಿ ಪರಿಗಣಿಸಲಾಗಿದೆ.

“ಸಿಸ್ಸಿಯ ಇಂಡಿಕ” ಇರುವೆಯು ಕೆಂಪುಮಿಶ್ರಿತ ಕಂದು ಬಣ್ಣಹೊಂದಿದ್ದು ಮೇಲ್ಮೈ ಭಾಗವು ಚಿಕ್ಕ ಚಿಕ್ಕ ಪಂಕ್ಚರ್ಸ್ ಇದ್ದು ಕುರುಡು ಇರುವೆಯಾಗಿದೆ ಈ ಇರುವೆಯನ್ನು ಅರಣ್ಯದ ಒಳಭಾಗದಲ್ಲಿ ಸಮುದ್ರ ಮಟ್ಟದಿಂದ 1600 ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ.

ಬಹಸಂಖ್ಯಾ ಇರುವೆಗಳು ಕ್ರಿಪ್ಟೋ ಬಯೋಟಿಕ್ ಜೀವನ ಶೈಲಿಯನ್ನು ಒಳಗೂಡಿಸಿಕೊಂಡು ದಟ್ಟಅರಣ್ಯದಲ್ಲಿ ಉದುರಿರುವ ಎಲೆಗಳಲ್ಲಿ ಮಣ್ಣಿನ ಅಡಿಯಲ್ಲಿ ಮರೆಯಾಗಿ ಜೀವಿಸುತ್ತಿರುತ್ತವೆ. ಇದರಲ್ಲಿ ಬಹಳಷ್ಟು ವಿಜ್ಞಾನಕ್ಕೆ ಅಪರಿಚತವಾಗಿರುವ ಇರುವೆಗಳಿದ್ದಾವೆ ಹೊಸ ದಾಖಲೆಯಾದ ಪ್ಯಾರಸಿಸ್ಸಿಯ ಹಾಗೂ ಸಿಸ್ಸಿಯ ಇರುವೆಗಳು ಕೂಡ ಬಹುಅಪರೂಪದ ಸುಲಭವಾಗಿ ದೊರಕದ ಇರುವೆಗಳಾಗಿದೆ ಆದ್ದರಿಂದ ಈ ರೀತಿಯ ಇರುವೆಗಳನ್ನು ಸಂಗ್ರಹಿಸಲು Non-conventional ವಿಧಾನವಾದ Winkler extraction ಅನ್ನು ಬಳಸಲಾಗುತ್ತದೆ. ಮುಂಬರುವ ಸಂಶೋಧನೆಯಲ್ಲಿ ಈಸ್ಟ್ರನ್ ಹಿಮಾಲಯದ ಪ್ರದೇಶಗಳನ್ನು ವ್ಯಾಪಕವಾಗಿ ಅನ್ವೇಷಿಸಿದರೆ ಅದರಲ್ಲೂ Non-conventional ವಿಧಾನಗಳ ಕೀಟ ಸಂಗ್ರಹಣ ಬಳಕೆಯಿಂದ ಇನ್ನು ಅಪರೂಪವಾದ ವಿಭಿನ್ನವಾದ ಹೊಸ ಹೊಸ ಇರುವೆಗಳು ದೊರೆಯಬಹುದು ಎಂದು ತಿಳಿಸಿದೆ.

ಈ ಸಂಶೋಧನೆಯನ್ನು Department of biotechnology (DBT Government of India) and National Mission on Himalayan Studies (MOEF & CC, Government of India) and the John D and Catherine T.Mac Arthur ಫೌಂಡೆಶನ್ ಬೆಂಬಲಿಸಿದ್ದಾರೆ.

* ಚಿದಾನಂದ್, ಯುವ ಸಂಚಲನ


ಇದನ್ನೂ ಓದಿ: ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...