Homeಕರ್ನಾಟಕಅಪರೂಪದ ಇರುವೆಗಳನ್ನು ಪತ್ತೆ ಮಾಡಿದ ’ಏಟ್ರಿ’: ಇರುವೆಗೆ ಬರಹಗಾರ ಗಣೇಶಯ್ಯ ಹೆಸರು

ಅಪರೂಪದ ಇರುವೆಗಳನ್ನು ಪತ್ತೆ ಮಾಡಿದ ’ಏಟ್ರಿ’: ಇರುವೆಗೆ ಬರಹಗಾರ ಗಣೇಶಯ್ಯ ಹೆಸರು

- Advertisement -
- Advertisement -

“ಅಶೋಕ ಟ್ರಸ್ಟ್ ಫಾರ್‌ ರೀಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌ ಎನ್ವಿರಾನ್‌ಮೆಂಟ್‌” (ATREE ) ಎಂಬ ಬೆಂಗಳೂರಿನ ಸಂಶೋಧನ ಕೇಂದ್ರದ ಕೀಟಶಾಸ್ತ್ರಜ್ಞರು ಎರಡು ಹೊಸ ಅಪರೂಪದ ಇರುವೆಗಳನ್ನು Eaglenest wild life santuary (EWS) ಎಂಬ ವನ್ಯಜೀವಿ ಅಭಯಾರಣ್ಯದಿಂದ ಕಂಡುಹಿಡಿದ್ದಾರೆ.

ಏಟ್ರಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು ಹಾಗೂ ATREE ಸಂಶೋಧನ ಕೇಂದ್ರದಲ್ಲಿ ಕೀಟವರ್ಗಿಕರಣ ಮತ್ತು ಸಂರಕ್ಷಣ (Insect taxonomy and conservation) ಪ್ರಯೋಗಲಾಯ ತೆರೆಯುವುದರಲ್ಲಿ ಮುಖ್ಯ ಕಾರಣಕರ್ತರಾದ ಪ್ರೊ. ಕೆ. ಎನ್.ಗಣೇಶಯ್ಯರವರ ಹೆಸರನ್ನು ಒಂದು ಇರುವೆಗೆ ಇಡಲಾಗಿದೆ.

ಎರಡು ಹೊಸ ಇರುವೆಯಲ್ಲಿ ಒಂದು ಇರುವೆಗೆ “ಪ್ಯಾರಸಿಸ್ಸಿಯ ಗಣೇಶಯ್ಯಯಿ” ಎಂದು ಇಡಲಾಗಿದೆ. ಮತ್ತೊಂದು ಇರುವೆಯು ಭಾರತ ದೇಶದಲ್ಲಿ ಮೊದಲು ದಾಖಲಾಗಿರುವ ಕಾರಣ ಭಾರತದೇಶವನ್ನು ಉಲ್ಲೇಖಿಸಿ “ಸಿಸ್ಸಿಯ ಇಂಡಿಕ’ ಎಂದು ಹೆಸರಿಸಲಾಗಿದೆ.

ಈಗಾಗಲೇ ಅಂಡಮಾನ್‌ಲ್ಲಿನ ಒಂದು ಸಸ್ಯಕ್ಕೆ centotheca ganeshaiahiana ಎಂದು ಆಂಧ್ರ ಪ್ರದೇಶದ ಒಂದು ಸಸ್ಯಕ್ಕೆ Tripogan umaganeshii ಎಂದು ಹೆಸರಾದ ಕೃಷಿ ವಿಜ್ಞಾನಿ ಹಾಗೂ ಸಸ್ಯ ಪ್ರಪಂಚದಲ್ಲಿ ಅಪಾರ ಸಂಶೋಧನೆ ನಡೆಸಿರುವ ಅಂತರರಾಷ್ಟ್ರೀಯ ಮಟ್ಟದ ಪರಿಸರ ವಿಜ್ಞಾನಿ, ಚಿಂತಕ ಮತ್ತು ಬರಹಗಾರರು ಗಣೇಶಯ್ಯ.

ಇದನ್ನೂ ಓದಿ: ದಲಿತರಿಗೆ ವಸತಿ ಮಂಜೂರು ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಗಣಪಯ್ಯನವರ ಕುಟುಂಬ

ಅರುಣಾಚಲಪ್ರದೇಶದ ವೆಸ್ಟ್ ಕಾಮೆಂಗ್ ಜಿಲ್ಲೆಯ ಹಿಮಾಚಲದ ತಪ್ಪಲಿನಲ್ಲಿ ಪಕ್ಕೆ ಟೈಗರ್ ರಿಸರ್ವ್ ಮತ್ತು ಟೆಂಗ್ ಆರ್ಮಿ ಕಂಟೋನ್ಮೆಂಟ್ ಪ್ರದೇಶಗಳ ಮರೆಯಲ್ಲಿರುವ ಈಗಲ್‍ನೆಸ್ಟ್ ವನ್ಯಜೀವಿ ಅಭಯಾರಣ್ಯವು ಪರಿಸರ ವಿಜ್ಞಾನಿಗಳಿಗೆ ಮತ್ತು ಪ್ರಕೃತಿ ಉತ್ಸಾಹಿಗಳಿಗೆ ಸ್ವರ್ಗವಾಸಿಯಾಗಿದೆ. 218 ಚದರ ಕಿಲೋಮೀಟರ್‍ಗಳಷ್ಟು ವ್ಯಾಪಿಸಿರುವ ಅರಣ್ಯಪ್ರದೇಶವು ಸಮುದ್ರಮಟ್ಟದಿಂದ 500 ಮೀ ನಿಂದ 3250 ಮೀ ಎತ್ತರದ ನಡುವೆ ಅನೇಕ ಅಚ್ಚರಿಗಳನ್ನು ಒಳಗೊಂಡಿದೆ.

ಅಶೋಕ ಸಂಶೋಧನ ಕೇಂದ್ರದ ಕೀಟಶಾಸ್ರಜ್ಞರು ಈಗಲ್‍ನೆಸ್ಟ್ ಅಭಯಾರಣ್ಯದಿಂದ 200 ಕ್ಕೂ ಹೆಚ್ಚು ಜಾತಿಯ (Species) ಇರುವೆಗಳು ಒಟ್ಟಾರೆ ಭಾರತದ ಇರುವೆಗಳ ಸರಾಸರಿ 25% ರಷ್ಟು ಇರುವೆಗಳನ್ನು ಸಂಗ್ರಹಿಸಿದ್ದಾರೆ.  ಸಂಶೋಧಕರ ತಂಡ ಡಾ. ಪ್ರಿಯದರ್ಶನನ್ ಧರ್ಮರಾಜನ್ (Senior fellow ) ಅಸ್ವಜ್ ಪುನ್ನಥ್ ಸಹನಶ್ರೀ (ATREE Bangalore ) ಹಾಗೂ ಡಾ. ಅನಿರುದ್ದ ಮರಾತೆ (IISC Bangalore) ಅವರುಗಳು ಆಸಕ್ತಿದಾಯಕ ಇರುವೆಗಳನ್ನು ಸಂಗ್ರಹಿಸಿದ್ದಾರೆ.

“ಪ್ಯಾರಸಿಸ್ಸಿಯ ಗಣೇಶಯ್ಯಯಿ” ಇರುವೆಯು ಹಳದಿ ಮಿಶ್ರಿತ ಕಂದು ಬಣ್ಣದ ಸಣ್ಣ ಗಾತ್ರದ ಇರುವೆ ಮತ್ತು ಮೇಲ್ಮೈ ಭಾಗವು ಮೈಕ್ರೂಪಂಕ್ಚರ್ಸ್‍ಗಳಿಂದ ಕೂಡಿರುವ ಈ ಇರುವೆಯು ತನ್ನ ಗೂಡನ್ನು ಕೊಳೆತ ದಿಂಬಿಗಳಲ್ಲಿ ಅಥವಾ ಕಲ್ಲುಗಳ ಅಡಿಯಲ್ಲಿ ನಿರ್ಮಿಸುತ್ತದೆ. ಇದನ್ನು ದಟ್ಟ ಅರಣ್ಯದ ಜನನಿಬಿಡ ಪ್ರದೇಶದಲ್ಲಿ ಸಮುದ್ರಮಟ್ಟದಿಂದ 1400ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ. ಭಾರತದಲ್ಲಿ ಒಟ್ಟು ಏಳು ಪ್ಯಾರಸಿಸ್ಸಿಯ ಇರುವೆಗಳಿದ್ದು ಅದರಲ್ಲಿ ಆರು ಇರುವೆಗಳು ಸ್ಥಳೀಯ (Endemic ) ಎಂದು ಗುರುತಿಸಲಾಗಿದೆ.

ಸಿಸ್ಸಿಯ ಜೀನಸ್ ಇರುವೆಗಳು ಕೂಡ ಅಪರೂಪದ ಇರುವೆಗಳು ಎಲೆಯ ತರಗು (leaf litter ) ಕೊಳೆತಮರ ಹಾಗೂ ಮಣ್ಣಿನಲ್ಲಿ ವಾಸಿಸುವ ಇರುವೆಗಳಾಗಿವೆ ಈ ಮೊದಲು ಚೀನಾ, ಜಪಾನ್ ಶ್ರೀಲಂಕ ಹಾಗೂ ಥೈಲಾಂಡ್ ದೇಶಗಳಲ್ಲಿ ದಾಖಲೆಗೊಂಡಿದ್ದು ಭಾರತದಲ್ಲಿ ಸೂಕ್ತವಾದ ದಾಖಲೆಯ ಕೊರತೆಯಿಂದ ಪ್ರಸ್ತುತ ದಾಖಲೆಯನ್ನು ಭಾರತಕ್ಕೆ ಮೊದಲ ದಾಖಲೆಯಾಗಿ ಪರಿಗಣಿಸಲಾಗಿದೆ.

“ಸಿಸ್ಸಿಯ ಇಂಡಿಕ” ಇರುವೆಯು ಕೆಂಪುಮಿಶ್ರಿತ ಕಂದು ಬಣ್ಣಹೊಂದಿದ್ದು ಮೇಲ್ಮೈ ಭಾಗವು ಚಿಕ್ಕ ಚಿಕ್ಕ ಪಂಕ್ಚರ್ಸ್ ಇದ್ದು ಕುರುಡು ಇರುವೆಯಾಗಿದೆ ಈ ಇರುವೆಯನ್ನು ಅರಣ್ಯದ ಒಳಭಾಗದಲ್ಲಿ ಸಮುದ್ರ ಮಟ್ಟದಿಂದ 1600 ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ.

ಬಹಸಂಖ್ಯಾ ಇರುವೆಗಳು ಕ್ರಿಪ್ಟೋ ಬಯೋಟಿಕ್ ಜೀವನ ಶೈಲಿಯನ್ನು ಒಳಗೂಡಿಸಿಕೊಂಡು ದಟ್ಟಅರಣ್ಯದಲ್ಲಿ ಉದುರಿರುವ ಎಲೆಗಳಲ್ಲಿ ಮಣ್ಣಿನ ಅಡಿಯಲ್ಲಿ ಮರೆಯಾಗಿ ಜೀವಿಸುತ್ತಿರುತ್ತವೆ. ಇದರಲ್ಲಿ ಬಹಳಷ್ಟು ವಿಜ್ಞಾನಕ್ಕೆ ಅಪರಿಚತವಾಗಿರುವ ಇರುವೆಗಳಿದ್ದಾವೆ ಹೊಸ ದಾಖಲೆಯಾದ ಪ್ಯಾರಸಿಸ್ಸಿಯ ಹಾಗೂ ಸಿಸ್ಸಿಯ ಇರುವೆಗಳು ಕೂಡ ಬಹುಅಪರೂಪದ ಸುಲಭವಾಗಿ ದೊರಕದ ಇರುವೆಗಳಾಗಿದೆ ಆದ್ದರಿಂದ ಈ ರೀತಿಯ ಇರುವೆಗಳನ್ನು ಸಂಗ್ರಹಿಸಲು Non-conventional ವಿಧಾನವಾದ Winkler extraction ಅನ್ನು ಬಳಸಲಾಗುತ್ತದೆ. ಮುಂಬರುವ ಸಂಶೋಧನೆಯಲ್ಲಿ ಈಸ್ಟ್ರನ್ ಹಿಮಾಲಯದ ಪ್ರದೇಶಗಳನ್ನು ವ್ಯಾಪಕವಾಗಿ ಅನ್ವೇಷಿಸಿದರೆ ಅದರಲ್ಲೂ Non-conventional ವಿಧಾನಗಳ ಕೀಟ ಸಂಗ್ರಹಣ ಬಳಕೆಯಿಂದ ಇನ್ನು ಅಪರೂಪವಾದ ವಿಭಿನ್ನವಾದ ಹೊಸ ಹೊಸ ಇರುವೆಗಳು ದೊರೆಯಬಹುದು ಎಂದು ತಿಳಿಸಿದೆ.

ಈ ಸಂಶೋಧನೆಯನ್ನು Department of biotechnology (DBT Government of India) and National Mission on Himalayan Studies (MOEF & CC, Government of India) and the John D and Catherine T.Mac Arthur ಫೌಂಡೆಶನ್ ಬೆಂಬಲಿಸಿದ್ದಾರೆ.

* ಚಿದಾನಂದ್, ಯುವ ಸಂಚಲನ


ಇದನ್ನೂ ಓದಿ: ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....