Homeಮುಖಪುಟಮೈಕೆಲ್ ಹನೆಕೆಯ ’ದ ಹಿಡನ್': ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

ಮೈಕೆಲ್ ಹನೆಕೆಯ ’ದ ಹಿಡನ್’: ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

- Advertisement -
- Advertisement -

ಸಾಮಾನ್ಯ ಹೊರಜಗತ್ತಿಗೆ ಯುರೋಪ್ ಎಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಉದಾತ್ತ ಆಶಯಗಳನ್ನು ಮೈಗೂಡಿಸಿಕೊಂಡಂತ ದೇಶಗಳ ಖಂಡ. ಸಮಕಾಲಿನ ಯುರೋಪ್ ಸಿನಿಮಾಗಳಲ್ಲಿ ಕಾಣುವುದು ಇವೇ ಸಂಗತಿಗಳನ್ನು. (ನಾನು ನೋಡಿರುವ ಬಹುತೇಕ ಸಿನಿಮಾಗಳಲ್ಲಿ). ಇನ್ನು ಇವರ ಸಿನಿಮಾಗಳಿಗೆ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಕುರಿತಾದ ವಿಷಯಗಳಿಗೆ ವಸ್ತುವಾಗುವುದು ಎರಡನೇ ಮಹಾಯುದ್ಧದಲ್ಲಿ ಜರ್ಮನಿ ನಡೆಸಿದ ಕ್ರೌರ್ಯ ಮತ್ತು ಅವು ಮನುಷ್ಯನಲ್ಲಿ ಉಂಟು ಮಾಡಿದ ಅಸ್ತಿತ್ವದ ಪ್ರಶ್ನೆಗಳಲ್ಲಿ ಮಾತ್ರ. ಒಂದು ಕಾಲಕ್ಕೆ ಸಾಮ್ರಾಜ್ಯಶಾಹಿಗಳಾಗಿದ್ದ ಯುರೋಪ್‌ನ ಹಲವು ದೇಶಗಳು ಇತರೆ ಖಂಡಗಳಲ್ಲಿ ನಡೆಸಿದ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಇವರ ಸಿನಿಮಾಗಳಿಗೆ ವಸ್ತುಗಳಾಗುವುದು ವಿರಳ. ಈ ಗತದ ಕೃತ್ಯಗಳಿಗೆ ಇವರ ಸಿನಿಮಾಗಳಲ್ಲಿ ಪಶ್ಚಾತ್ತಾಪಕ್ಕೂ ಜಾಗ ಸಿಕ್ಕುವುದಿಲ್ಲ.

’ದ ಹಿಡನ್’ (2005)

ಯಾರನ್ನ ನಾವು ಬೌದ್ಧಿಕ ಮೇಲ್ಪಂಕ್ತಿಯಲ್ಲಿ ಇಟ್ಟು ಕಾಣುತ್ತೇವೆಯೋ, ಅದೇ ಯುರೋಪ್ ದೇಶಗಳ ಸಮುದಾಯಗಳು ತಾವು ನಡೆಸಿದ ರಾಜಕೀಯ ಕ್ರೌರ್ಯಗಳಿಗೆ ಜಾಣ ಕುರುಡಾಗಿರುವುದನ್ನು ಮತ್ತು ಅವರ ಬೂರ್ಜ್ವಾ ಗುಣ, ಹೇಡಿತನ ಹಾಗೂ ಅವರು ಹೊರಜಗತ್ತಿನ ಸಮುದಾಯವನ್ನ ಗ್ರಹಿಸುವ ರೀತಿಯನ್ನು ಹನೆಕೆ ತನ್ನ ’ದ ಹಿಡನ್’ ಸಿನಿಮಾದಲ್ಲಿ ಚರ್ಚಿಸುತ್ತಾರೆ. ಹನೆಕೆ ಆಸ್ಟ್ರಿಯಾ ದೇಶದವರಾದರು ’ದ ಹಿಡನ್’ ಸಿನಿಮಾದ ಕಾಲ ದೇಶಗಳು ಮಾತ್ರ ಫ್ರಾನ್ಸಿನದು. ಅಲ್ಜೀರಿಯಾ ಯುದ್ಧದ (1954-62) ಸಂದರ್ಭದಲ್ಲಿ, ಅಲ್ಜೀರಿಯನ್ ನ್ಯಾಷನಲ್ ಲಿಬರಲ್ ಫ್ರಂಟ್ ಸಂಘಟನೆಯ ಸುಮಾರು 30 ಸಾವಿರ ಜನ ನಡೆಸುತ್ತಿದ್ದ ಶಾಂತಿಯುತ ಮೆರವಣಿಗೆಯ ಮೇಲೆ ಫ್ರಾನ್ಸ್ ಪೊಲೀಸ್ ನಡೆಸಿದ ಹತ್ಯಾಕಾಂಡದಲ್ಲಿ ಸುಮಾರು 300 ಜನ ಸಾಯುತ್ತಾರೆ ಮತ್ತು ಹಲವರು ಕಣ್ಮರೆಯಾಗುತ್ತಾರೆ. ಈ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಫ್ರಾನ್ಸ್‌ನ ಮಧ್ಯಮ ವರ್ಗದ ಬೌದ್ಧಿಕ ಪರಿಸರದಲ್ಲಿ ಬದುಕುತ್ತಿರುವ ಕುಟುಂಬವೊಂದರ ಖಾಸಗಿ ಬದುಕಿನ ಘಟನೆಗಳನ್ನು ಹನೆಕೆ ಚಿತ್ರಿಸುತ್ತಾರೆ. ಖಾಸಗಿ ಸಂಗತಿಯಲ್ಲಿ ಮಾಡುವ ಪಶ್ಚಾತ್ತಾಪ ನಿರಾಕರಣೆ ಹೇಗೆ ಇಡೀ ದೇಶದ ಪಶ್ಚಾತ್ತಾಪದ ನಿರಾಕರಣೆ ಆಗಿರುತ್ತದೆ ಎಂಬುದನ್ನು ಹನಕೆ ಹೊಸ ಮಾದರಿಯ ದೃಶ್ಯಕಟ್ಟುವಿಕೆಯ ಮೂಲಕ ಹೆಣೆಯುತ್ತಾರೆ. ಇದಕ್ಕೆ ಸಿನಿಮಾದ ಪ್ರಾರಂಭದ ದೃಶ್ಯವೇ ಸಾಕ್ಷಿಯಾಗಿದೆ.

ಬೌದ್ಧಿಕ ಪ್ರತಿನಿಧಿಗಳಂತಿರುವ ಜಾರ್ಜ್ ಮತ್ತು ಅನ್ನೆ ದಂಪತಿಗಳು ಫ್ರಾನ್ಸ್ ನಗರದ ಸುಸಜ್ಜಿತ ಮನೆಯೊಂದರಲ್ಲಿ ಸಂತೃಪ್ತಿಯಿಂದ ಬದುಕುತ್ತಿದ್ದಾರೆ. ಜಾರ್ಜ್ ಟಿವಿ ಒಂದರಲ್ಲಿ ಸಾಹಿತ್ಯ ಕುರಿತಾದ ಕಾರ್ಯಕ್ರಮ ನಡೆಸಿಕೊಡುವ ನಿರೂಪಕನ ವೃತ್ತಿಯಲ್ಲಿದ್ದರೆ, ಅನ್ನೆ ಪುಸ್ತಕ ಪ್ರಕಾಶನ ಸ್ವರೂಪದ ವೃತ್ತಿಯಲ್ಲಿ ಇದ್ದಾಳೆ. ಜಾರ್ಜ್ ಮತ್ತು ಅನ್ನೆಯರ ನೆಮ್ಮದಿ ಬದುಕು ಒಂದು ದಿನ ದಿಢೀರ್ ಎಂದು ಬರುವ ವಿಡಿಯೋಟೇಪ್‌ನಿಂದ ಡಿಸ್ಟರ್ಬ್ ಆಗುತ್ತದೆ. ಇವರದ್ದೇ ಮನೆ ಮತ್ತು ದಿನಚರಿಯ ದೃಶ್ಯಗಳನ್ನು ಗೌಪ್ಯ ಕ್ಯಾಮೆರಾ ಮೂಲಕ ಆ ವಿಡಿಯೋದಲ್ಲಿ ಸೆರೆಹಿಡಿಯಲಾಗಿರುತ್ತದೆ. ಜಾರ್ಜ್ ದಂಪತಿಗಳಿಗೆ ನಾವು ಯಾರದೋ ಕಣ್ಗಾವಲಿನಲ್ಲಿ ಇದ್ದೇವೆ ಮತ್ತು ಈ ಮೂಲಕ ನಮ್ಮನ್ನು ಯಾರೋ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಮುಂದೆ ಬರುವ ವಿಡಿಯೊ ಟೇಪ್ ಮತ್ತು ಅದರೊಂದಿಗೆ ಬರುವ ಡ್ರಾಯಿಂಗ್‌ನಿಂದ, ಜಾರ್ಜ್‌ಗೆ ತನ್ನ ಬಾಲ್ಯದ ದಿನಗಳು ನೆನಪಾಗುತ್ತವೆ ಮತ್ತು ಈ ವಿಡಿಯೋ ಕಳುಹಿಸುತ್ತಿರುವವರು ಯಾರೆಂಬ ಬಗ್ಗೆ ಒಂದು ಅಂದಾಜಿಗೆ ಬರುತ್ತಾನೆ.

ಜಾರ್ಜ್ 5 ವರ್ಷದವನಿದ್ದಾಗ ಅವನ ತಂದೆ, 1961ರ ಫ್ರಾನ್ಸ್ ಹತ್ಯಾಕಾಂಡದಲ್ಲಿ ಮೃತನಾಗಿರಬಹುದಾದ ಅಥವಾ ಕಣ್ಮರೆಯಾಗಿದ್ದ ಅಲ್ಜೀರಿಯನ್ ದಂಪತಿಗಳ ಮಗುವೊಂದನ್ನು ದತ್ತು ಪಡೆದು ತನ್ನ ಹಳ್ಳಿ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ವಯಸ್ಸಿನಲ್ಲಿ ಜಾರ್ಜ್‌ಗಿಂತ ಹಿರಿಯನಾದ ಆ ನಿರಾಶ್ರಿತ ಮಗುವಿನ ಹೆಸರು ಮಜೀದ್. ಮಜೀದ್ ಮನೆಗೆ ಬಂದ ನಂತರ ಜಾರ್ಜ್‌ಗೆ ಮನೆಯಲ್ಲಿ ತಾನು ಒಬ್ಬನೇ ಇದ್ದಾಗಿನ ಕಂಫರ್ಟ್ ಈಗಿಲ್ಲ ಎಂಬ ಭಾವನೆ ಪ್ರಾರಂಭವಾಗಿ, ತನಗಿಂತ ಬಲಶಾಲಿಯಾದ ಮಜೀದ್‌ನನ್ನು ನೋಡಿದಾಗಲೆಲ್ಲ ಅಭದ್ರತೆಗೆ ಒಳಗಾಗುತ್ತಾನೆ. ತನ್ನ ತಂದೆ ತಾಯಿಗೆ ಮಜೀದ್ ಮೇಲೆ ಸುಳ್ಳು ಅರೋಪಗಳನ್ನು ಮಾಡಿ ಅವನನ್ನು ಮನೆಯಿಂದ ಅನಾಥಾಶ್ರಮಕ್ಕೆ ಸಾಗಿಹಾಕಲು ಕಾರಣವಾಗುತ್ತಾನೆ.

ಜಾರ್ಜ್‌ನ ಬಾಲ್ಯದ ನೆನಪು ಅನಾಮಧೇಯವಾಗಿ ಬಂದ ವಿಡಿಯೋ ಟೇಪ್ ಕಾರಣವಾಗಿ ನೆನಪಿಗೆ ಬರುತ್ತದೆಯೇ ಹೊರತು ಆ ಘಟನೆಯ ಬಗ್ಗೆ ಪಶ್ಚಾತ್ತಾಪ ಇರುವುದಿಲ್ಲ. ಅನ್ನೆಯಳಿಗೆ ಈ ಘಟನೆಯನ್ನು ವಿವರಿಸುವಾಗ ಕೂಡ ಜಾರ್ಜ್ ತನ್ನ ಪೋಷಕರಿಗೆ ಮಜೀದ್ ವಿರುದ್ಧ ಹೇಳಿದ ಸುಳ್ಳುಗಳು ಬಾಲ್ಯದ ಸಹಜ ವರ್ತನೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಈ ವಿಡಿಯೋಗಳನ್ನು ಮಜೀದ್ ತನ್ನ ಮೇಲಿನ ಪ್ರತೀಕಾರಕ್ಕೆ ಕಳುಹಿಸುತ್ತಿದ್ದಾನೆ ಎಂಬ ಖಚಿತ ನಿಲುವಿಗೆ ಜಾರ್ಜ್ ಬರುತ್ತಾನೆ. ಎಲ್ಲೋ ಒಂದು ಇಕ್ಕಟ್ಟಾದ ವಸತಿ ಸಂಕೀರ್ಣದಲ್ಲಿ ಬದುಕುತ್ತಿರುವ ಮಜೀದ್‌ನನ್ನು ಹುಡುಕುವ ಜಾರ್ಜ್, ಅವನಿಗೆ ಈ ರೀತಿಯ ವಿಡಿಯೋಗಳನ್ನು ಯಾಕೆ ಕಳುಹಿಸುತ್ತಿದ್ದೀಯಾ ಎಂದು ಕೇಳುತ್ತಾನೆ. ಮಜೀದ್ ಈ ಅರೋಪವನ್ನು ನಿರಾಕರಿಸುತ್ತಾನೆ. ಆದರೂ ಜಾರ್ಜ್ ಅವನಿಗೆ ಎಚ್ಚರಿಕೆ ನೀಡುತ್ತಾನೆ. ಈ ಎಚ್ಚರಿಕೆ ನೀಡಿದ ದೃಶ್ಯಗಳಿರುವ ವಿಡಿಯೋ ಟೇಪ್ ಜಾರ್ಜ್ ಕಚೆರಿಯ ವಿಳಾಸಕ್ಕೆ ಮರುದಿನ ತಲುಪುತ್ತದೆ. ಆ ರಾತ್ರಿ ಜಾರ್ಜ್ ಮಗ ಪಿರ್ರೋಟ್ ಮನೆ ತಲುಪುವುದಿಲ್ಲ. ಇದು ಮಜೀದ್‌ನದೆ ಕೃತ್ಯ ಎಂದು ನಿರ್ಧರಿಸುವ ಜಾರ್ಜ್ ಪೊಲೀಸ್ ಕಂಪ್ಲೇಟ್ ನೀಡುತ್ತಾನೆ. ಮಜೀದ್‌ನನ್ನು ಬಂಧಿಸಲಾಗುತ್ತದೆ. ಪಿರ್ರೋಟ್ ಕಾಣಿಯಾಗಿರುವ ಬಗ್ಗೆ ಮಜೀದ್ ಕೈವಾಡ ಇಲ್ಲವಾಗಿ ಮಾರನೆ ದಿನ ಅವನು ಬಿಡುಗಡೆಯಾಗುತ್ತಾನೆ. ಪಿರ್ರೋಟ್ ತನ್ನ ತಾಯಿಯ ಮೇಲಿನ ಕೋಪಕ್ಕೆ ರಾತ್ರಿ ಮನೆಗೆ ಬಂದಿರುವುದಿಲ್ಲ ಎಂದು ತಿಳಿಯುತ್ತದೆ. ಮಾರನೆಯ ದಿನ ಮಜೀದ್ ಜಾರ್ಜ್‌ನನ್ನು ತನ್ನ ಮನೆಗೆ ಅಹ್ವಾನಿಸುತ್ತಾನೆ. ಜಾರ್ಜ್ ಮಜೀದ್ ಮನೆಗೆ ಬಂದು ಮಾತು ಪ್ರಾರಂಭಿಸುತ್ತಿದ್ದಂತೆಯೇ ’ನಾನು ಕರೆದದ್ದು ಇದರ ಸಲುವಾಗಿ’ ಎಂದು ಹೇಳುತ್ತಾ ಮಜೀದ್ ತನ್ನ ಜೇಬಿನಲ್ಲಿದ್ದ ರೇಜರ್ ತೆಗೆದು ತನ್ನ ಕತ್ತನ್ನು ಕೊಯ್ದುಕೊಂಡು ಸಾಯುತ್ತಾನೆ.

ಇದಿಷ್ಟು ಕಥಾಹಂದರ. ಈ ವಿಡಿಯೋ ಚಿತ್ರೀಕರಣ ಮಾಡಿದ್ದು ಯಾರು ಎಂಬ ಸಸ್ಪೆನ್ಸ್ ಬಿಡಿಸುವ ಮತ್ತು ಆ ಮೂಲಕ ಪ್ರೇಕ್ಷಕನನ್ನು ಥ್ರಿಲ್ ಮೂಡ್‌ಗೆ ಒಳಪಡಿಸುವ ಯಾವ ಇರಾದೆಯೂ ಹನೆಕೆಗೆ ಇಲ್ಲ ಎಂಬುದು ಬಹಳ ನಿಧಾನಕ್ಕೆ ತಿಳಿಯುತ್ತದೆ. ಜಾರ್ಜ್ ಹುಡುಕಹೊರಡುವುದು ವಿಡಿಯೋ ಮುಖಾಂತರ ತನ್ನ ಕುಟುಂಬವನ್ನು ಭಯಪಡಿಸುತ್ತಿರುವವರು ಯಾರೆಂದು. ಹನೆಕೆ ಹುಡುಕುತ್ತಿರುವುದು ಭಯಭೀತನಾದ ಜಾರ್ಜ್‌ನ ಗತದ ಕೃತ್ಯ ಯಾವುದು ಮತ್ತು ಆ ಕೃತ್ಯದ ಬಗ್ಗೆ ಅವನಿಗಿರುವ ಅಭಿಪ್ರಾಯವಾದರೂ ಏನೆಂಬುದನ್ನು. ಅಮೆರಿಕಾದ 9/11ರ ಘಟನೆ ಮತ್ತು ಆನಂತರದ ಅಮೆರಿಕದ ವರ್ತನೆಗಳೆ ಹನೆಕೆಗೆ ಈ ಸಿನಿಮಾಗೆ ಮೂಲ ಪ್ರೇರಣೆ ಎಂದು ಒಂದು ಕಡೆ ಓದಿದ ನೆನಪು.

ಜಾರ್ಜ್ ತನ್ನ ಬಾಲ್ಯದಲ್ಲಿ ಮಜೀದ್ ವಿಚಾರವಾಗಿ ತಾಳಿದ ಅಸಹನೆ ಮತ್ತು ಅವನ ಮೇಲೆ ಮಾಡಿದ ಸುಳ್ಳು ಆರೋಪದಿಂದ ಮಜೀದ್ ತನಗೆ ದೊರಕಬಹುದಾಗಿದ್ದ ಉತ್ತಮ ಶಿಕ್ಷಣ, ಆರೈಕೆ ಮತ್ತು ಭವಿಷ್ಯದಿಂದ ವಂಚಿತನಾಗಿದ್ದಾನೆ. ಜಾರ್ಜ್‌ನ ಈ ಕೃತ್ಯದ ಬಗ್ಗೆ ನೆನಪು ಮಾಡಲು ಪ್ರಯತ್ನಿಸುವ ಮತ್ತು ಅದಕ್ಕಾಗಿ ಕಿಂಚಿತ್ ಪಶ್ಚಾತ್ತಾಪ ಏನಾದರೂ ಇದೆಯಾ ಎಂದು ಹುಡುಕುವ ಮಜೀದ್ ಮಾತುಗಳು; ಇದಕ್ಕೆ ಜಾರ್ಜ್ ತೋರಿಸುವ ನಿರ್ಲಕ್ಷ್ಯ ಮತ್ತು ತನ್ನ ತಪ್ಪುಗಳಿಗೆ ಅವನು ಕೊಡುವ ಸಮರ್ಥನೆ; ಇವು ದಬ್ಬಾಳಿಕೆ ನಡೆಸುವ ಪ್ರತಿಯೊಂದು ದೇಶ, ಸಮುದಾಯ ಕೊಡುವ ಸಮರ್ಥನೆಗಳೂ ಹೌದು. ಜಾರ್ಜ್‌ನ ವೈಯಕ್ತಿಕ ಪಶ್ಚಾತ್ತಾಪದ ನಿರಾಕರಣೆ, ದೇಶ ಮತ್ತು ಸಮುದಾಯಗಳ ಸಾಮೂಹಿಕ ಪಶ್ಚಾತ್ತಾಪದ ನಿರಾಕರಣೆಯೂ ಹೌದು. ಹನೆಕೆ ಈ ಸಿನಿಮಾದಲ್ಲಿ ಹೇಳಹೊರಟಿರುವುದು ಅದನ್ನೇ ಅನಿಸುತ್ತದೆ.


ಇದನ್ನೂ ಓದಿ: ‘ಗರಂ ಹವಾ’: ಒಂದು ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...