Homeಮುಖಪುಟಮೈಕೆಲ್ ಹನೆಕೆಯ ’ದ ಹಿಡನ್': ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

ಮೈಕೆಲ್ ಹನೆಕೆಯ ’ದ ಹಿಡನ್’: ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

- Advertisement -
- Advertisement -

ಸಾಮಾನ್ಯ ಹೊರಜಗತ್ತಿಗೆ ಯುರೋಪ್ ಎಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಉದಾತ್ತ ಆಶಯಗಳನ್ನು ಮೈಗೂಡಿಸಿಕೊಂಡಂತ ದೇಶಗಳ ಖಂಡ. ಸಮಕಾಲಿನ ಯುರೋಪ್ ಸಿನಿಮಾಗಳಲ್ಲಿ ಕಾಣುವುದು ಇವೇ ಸಂಗತಿಗಳನ್ನು. (ನಾನು ನೋಡಿರುವ ಬಹುತೇಕ ಸಿನಿಮಾಗಳಲ್ಲಿ). ಇನ್ನು ಇವರ ಸಿನಿಮಾಗಳಿಗೆ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಕುರಿತಾದ ವಿಷಯಗಳಿಗೆ ವಸ್ತುವಾಗುವುದು ಎರಡನೇ ಮಹಾಯುದ್ಧದಲ್ಲಿ ಜರ್ಮನಿ ನಡೆಸಿದ ಕ್ರೌರ್ಯ ಮತ್ತು ಅವು ಮನುಷ್ಯನಲ್ಲಿ ಉಂಟು ಮಾಡಿದ ಅಸ್ತಿತ್ವದ ಪ್ರಶ್ನೆಗಳಲ್ಲಿ ಮಾತ್ರ. ಒಂದು ಕಾಲಕ್ಕೆ ಸಾಮ್ರಾಜ್ಯಶಾಹಿಗಳಾಗಿದ್ದ ಯುರೋಪ್‌ನ ಹಲವು ದೇಶಗಳು ಇತರೆ ಖಂಡಗಳಲ್ಲಿ ನಡೆಸಿದ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಇವರ ಸಿನಿಮಾಗಳಿಗೆ ವಸ್ತುಗಳಾಗುವುದು ವಿರಳ. ಈ ಗತದ ಕೃತ್ಯಗಳಿಗೆ ಇವರ ಸಿನಿಮಾಗಳಲ್ಲಿ ಪಶ್ಚಾತ್ತಾಪಕ್ಕೂ ಜಾಗ ಸಿಕ್ಕುವುದಿಲ್ಲ.

’ದ ಹಿಡನ್’ (2005)

ಯಾರನ್ನ ನಾವು ಬೌದ್ಧಿಕ ಮೇಲ್ಪಂಕ್ತಿಯಲ್ಲಿ ಇಟ್ಟು ಕಾಣುತ್ತೇವೆಯೋ, ಅದೇ ಯುರೋಪ್ ದೇಶಗಳ ಸಮುದಾಯಗಳು ತಾವು ನಡೆಸಿದ ರಾಜಕೀಯ ಕ್ರೌರ್ಯಗಳಿಗೆ ಜಾಣ ಕುರುಡಾಗಿರುವುದನ್ನು ಮತ್ತು ಅವರ ಬೂರ್ಜ್ವಾ ಗುಣ, ಹೇಡಿತನ ಹಾಗೂ ಅವರು ಹೊರಜಗತ್ತಿನ ಸಮುದಾಯವನ್ನ ಗ್ರಹಿಸುವ ರೀತಿಯನ್ನು ಹನೆಕೆ ತನ್ನ ’ದ ಹಿಡನ್’ ಸಿನಿಮಾದಲ್ಲಿ ಚರ್ಚಿಸುತ್ತಾರೆ. ಹನೆಕೆ ಆಸ್ಟ್ರಿಯಾ ದೇಶದವರಾದರು ’ದ ಹಿಡನ್’ ಸಿನಿಮಾದ ಕಾಲ ದೇಶಗಳು ಮಾತ್ರ ಫ್ರಾನ್ಸಿನದು. ಅಲ್ಜೀರಿಯಾ ಯುದ್ಧದ (1954-62) ಸಂದರ್ಭದಲ್ಲಿ, ಅಲ್ಜೀರಿಯನ್ ನ್ಯಾಷನಲ್ ಲಿಬರಲ್ ಫ್ರಂಟ್ ಸಂಘಟನೆಯ ಸುಮಾರು 30 ಸಾವಿರ ಜನ ನಡೆಸುತ್ತಿದ್ದ ಶಾಂತಿಯುತ ಮೆರವಣಿಗೆಯ ಮೇಲೆ ಫ್ರಾನ್ಸ್ ಪೊಲೀಸ್ ನಡೆಸಿದ ಹತ್ಯಾಕಾಂಡದಲ್ಲಿ ಸುಮಾರು 300 ಜನ ಸಾಯುತ್ತಾರೆ ಮತ್ತು ಹಲವರು ಕಣ್ಮರೆಯಾಗುತ್ತಾರೆ. ಈ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಫ್ರಾನ್ಸ್‌ನ ಮಧ್ಯಮ ವರ್ಗದ ಬೌದ್ಧಿಕ ಪರಿಸರದಲ್ಲಿ ಬದುಕುತ್ತಿರುವ ಕುಟುಂಬವೊಂದರ ಖಾಸಗಿ ಬದುಕಿನ ಘಟನೆಗಳನ್ನು ಹನೆಕೆ ಚಿತ್ರಿಸುತ್ತಾರೆ. ಖಾಸಗಿ ಸಂಗತಿಯಲ್ಲಿ ಮಾಡುವ ಪಶ್ಚಾತ್ತಾಪ ನಿರಾಕರಣೆ ಹೇಗೆ ಇಡೀ ದೇಶದ ಪಶ್ಚಾತ್ತಾಪದ ನಿರಾಕರಣೆ ಆಗಿರುತ್ತದೆ ಎಂಬುದನ್ನು ಹನಕೆ ಹೊಸ ಮಾದರಿಯ ದೃಶ್ಯಕಟ್ಟುವಿಕೆಯ ಮೂಲಕ ಹೆಣೆಯುತ್ತಾರೆ. ಇದಕ್ಕೆ ಸಿನಿಮಾದ ಪ್ರಾರಂಭದ ದೃಶ್ಯವೇ ಸಾಕ್ಷಿಯಾಗಿದೆ.

ಬೌದ್ಧಿಕ ಪ್ರತಿನಿಧಿಗಳಂತಿರುವ ಜಾರ್ಜ್ ಮತ್ತು ಅನ್ನೆ ದಂಪತಿಗಳು ಫ್ರಾನ್ಸ್ ನಗರದ ಸುಸಜ್ಜಿತ ಮನೆಯೊಂದರಲ್ಲಿ ಸಂತೃಪ್ತಿಯಿಂದ ಬದುಕುತ್ತಿದ್ದಾರೆ. ಜಾರ್ಜ್ ಟಿವಿ ಒಂದರಲ್ಲಿ ಸಾಹಿತ್ಯ ಕುರಿತಾದ ಕಾರ್ಯಕ್ರಮ ನಡೆಸಿಕೊಡುವ ನಿರೂಪಕನ ವೃತ್ತಿಯಲ್ಲಿದ್ದರೆ, ಅನ್ನೆ ಪುಸ್ತಕ ಪ್ರಕಾಶನ ಸ್ವರೂಪದ ವೃತ್ತಿಯಲ್ಲಿ ಇದ್ದಾಳೆ. ಜಾರ್ಜ್ ಮತ್ತು ಅನ್ನೆಯರ ನೆಮ್ಮದಿ ಬದುಕು ಒಂದು ದಿನ ದಿಢೀರ್ ಎಂದು ಬರುವ ವಿಡಿಯೋಟೇಪ್‌ನಿಂದ ಡಿಸ್ಟರ್ಬ್ ಆಗುತ್ತದೆ. ಇವರದ್ದೇ ಮನೆ ಮತ್ತು ದಿನಚರಿಯ ದೃಶ್ಯಗಳನ್ನು ಗೌಪ್ಯ ಕ್ಯಾಮೆರಾ ಮೂಲಕ ಆ ವಿಡಿಯೋದಲ್ಲಿ ಸೆರೆಹಿಡಿಯಲಾಗಿರುತ್ತದೆ. ಜಾರ್ಜ್ ದಂಪತಿಗಳಿಗೆ ನಾವು ಯಾರದೋ ಕಣ್ಗಾವಲಿನಲ್ಲಿ ಇದ್ದೇವೆ ಮತ್ತು ಈ ಮೂಲಕ ನಮ್ಮನ್ನು ಯಾರೋ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಮುಂದೆ ಬರುವ ವಿಡಿಯೊ ಟೇಪ್ ಮತ್ತು ಅದರೊಂದಿಗೆ ಬರುವ ಡ್ರಾಯಿಂಗ್‌ನಿಂದ, ಜಾರ್ಜ್‌ಗೆ ತನ್ನ ಬಾಲ್ಯದ ದಿನಗಳು ನೆನಪಾಗುತ್ತವೆ ಮತ್ತು ಈ ವಿಡಿಯೋ ಕಳುಹಿಸುತ್ತಿರುವವರು ಯಾರೆಂಬ ಬಗ್ಗೆ ಒಂದು ಅಂದಾಜಿಗೆ ಬರುತ್ತಾನೆ.

ಜಾರ್ಜ್ 5 ವರ್ಷದವನಿದ್ದಾಗ ಅವನ ತಂದೆ, 1961ರ ಫ್ರಾನ್ಸ್ ಹತ್ಯಾಕಾಂಡದಲ್ಲಿ ಮೃತನಾಗಿರಬಹುದಾದ ಅಥವಾ ಕಣ್ಮರೆಯಾಗಿದ್ದ ಅಲ್ಜೀರಿಯನ್ ದಂಪತಿಗಳ ಮಗುವೊಂದನ್ನು ದತ್ತು ಪಡೆದು ತನ್ನ ಹಳ್ಳಿ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ವಯಸ್ಸಿನಲ್ಲಿ ಜಾರ್ಜ್‌ಗಿಂತ ಹಿರಿಯನಾದ ಆ ನಿರಾಶ್ರಿತ ಮಗುವಿನ ಹೆಸರು ಮಜೀದ್. ಮಜೀದ್ ಮನೆಗೆ ಬಂದ ನಂತರ ಜಾರ್ಜ್‌ಗೆ ಮನೆಯಲ್ಲಿ ತಾನು ಒಬ್ಬನೇ ಇದ್ದಾಗಿನ ಕಂಫರ್ಟ್ ಈಗಿಲ್ಲ ಎಂಬ ಭಾವನೆ ಪ್ರಾರಂಭವಾಗಿ, ತನಗಿಂತ ಬಲಶಾಲಿಯಾದ ಮಜೀದ್‌ನನ್ನು ನೋಡಿದಾಗಲೆಲ್ಲ ಅಭದ್ರತೆಗೆ ಒಳಗಾಗುತ್ತಾನೆ. ತನ್ನ ತಂದೆ ತಾಯಿಗೆ ಮಜೀದ್ ಮೇಲೆ ಸುಳ್ಳು ಅರೋಪಗಳನ್ನು ಮಾಡಿ ಅವನನ್ನು ಮನೆಯಿಂದ ಅನಾಥಾಶ್ರಮಕ್ಕೆ ಸಾಗಿಹಾಕಲು ಕಾರಣವಾಗುತ್ತಾನೆ.

ಜಾರ್ಜ್‌ನ ಬಾಲ್ಯದ ನೆನಪು ಅನಾಮಧೇಯವಾಗಿ ಬಂದ ವಿಡಿಯೋ ಟೇಪ್ ಕಾರಣವಾಗಿ ನೆನಪಿಗೆ ಬರುತ್ತದೆಯೇ ಹೊರತು ಆ ಘಟನೆಯ ಬಗ್ಗೆ ಪಶ್ಚಾತ್ತಾಪ ಇರುವುದಿಲ್ಲ. ಅನ್ನೆಯಳಿಗೆ ಈ ಘಟನೆಯನ್ನು ವಿವರಿಸುವಾಗ ಕೂಡ ಜಾರ್ಜ್ ತನ್ನ ಪೋಷಕರಿಗೆ ಮಜೀದ್ ವಿರುದ್ಧ ಹೇಳಿದ ಸುಳ್ಳುಗಳು ಬಾಲ್ಯದ ಸಹಜ ವರ್ತನೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಈ ವಿಡಿಯೋಗಳನ್ನು ಮಜೀದ್ ತನ್ನ ಮೇಲಿನ ಪ್ರತೀಕಾರಕ್ಕೆ ಕಳುಹಿಸುತ್ತಿದ್ದಾನೆ ಎಂಬ ಖಚಿತ ನಿಲುವಿಗೆ ಜಾರ್ಜ್ ಬರುತ್ತಾನೆ. ಎಲ್ಲೋ ಒಂದು ಇಕ್ಕಟ್ಟಾದ ವಸತಿ ಸಂಕೀರ್ಣದಲ್ಲಿ ಬದುಕುತ್ತಿರುವ ಮಜೀದ್‌ನನ್ನು ಹುಡುಕುವ ಜಾರ್ಜ್, ಅವನಿಗೆ ಈ ರೀತಿಯ ವಿಡಿಯೋಗಳನ್ನು ಯಾಕೆ ಕಳುಹಿಸುತ್ತಿದ್ದೀಯಾ ಎಂದು ಕೇಳುತ್ತಾನೆ. ಮಜೀದ್ ಈ ಅರೋಪವನ್ನು ನಿರಾಕರಿಸುತ್ತಾನೆ. ಆದರೂ ಜಾರ್ಜ್ ಅವನಿಗೆ ಎಚ್ಚರಿಕೆ ನೀಡುತ್ತಾನೆ. ಈ ಎಚ್ಚರಿಕೆ ನೀಡಿದ ದೃಶ್ಯಗಳಿರುವ ವಿಡಿಯೋ ಟೇಪ್ ಜಾರ್ಜ್ ಕಚೆರಿಯ ವಿಳಾಸಕ್ಕೆ ಮರುದಿನ ತಲುಪುತ್ತದೆ. ಆ ರಾತ್ರಿ ಜಾರ್ಜ್ ಮಗ ಪಿರ್ರೋಟ್ ಮನೆ ತಲುಪುವುದಿಲ್ಲ. ಇದು ಮಜೀದ್‌ನದೆ ಕೃತ್ಯ ಎಂದು ನಿರ್ಧರಿಸುವ ಜಾರ್ಜ್ ಪೊಲೀಸ್ ಕಂಪ್ಲೇಟ್ ನೀಡುತ್ತಾನೆ. ಮಜೀದ್‌ನನ್ನು ಬಂಧಿಸಲಾಗುತ್ತದೆ. ಪಿರ್ರೋಟ್ ಕಾಣಿಯಾಗಿರುವ ಬಗ್ಗೆ ಮಜೀದ್ ಕೈವಾಡ ಇಲ್ಲವಾಗಿ ಮಾರನೆ ದಿನ ಅವನು ಬಿಡುಗಡೆಯಾಗುತ್ತಾನೆ. ಪಿರ್ರೋಟ್ ತನ್ನ ತಾಯಿಯ ಮೇಲಿನ ಕೋಪಕ್ಕೆ ರಾತ್ರಿ ಮನೆಗೆ ಬಂದಿರುವುದಿಲ್ಲ ಎಂದು ತಿಳಿಯುತ್ತದೆ. ಮಾರನೆಯ ದಿನ ಮಜೀದ್ ಜಾರ್ಜ್‌ನನ್ನು ತನ್ನ ಮನೆಗೆ ಅಹ್ವಾನಿಸುತ್ತಾನೆ. ಜಾರ್ಜ್ ಮಜೀದ್ ಮನೆಗೆ ಬಂದು ಮಾತು ಪ್ರಾರಂಭಿಸುತ್ತಿದ್ದಂತೆಯೇ ’ನಾನು ಕರೆದದ್ದು ಇದರ ಸಲುವಾಗಿ’ ಎಂದು ಹೇಳುತ್ತಾ ಮಜೀದ್ ತನ್ನ ಜೇಬಿನಲ್ಲಿದ್ದ ರೇಜರ್ ತೆಗೆದು ತನ್ನ ಕತ್ತನ್ನು ಕೊಯ್ದುಕೊಂಡು ಸಾಯುತ್ತಾನೆ.

ಇದಿಷ್ಟು ಕಥಾಹಂದರ. ಈ ವಿಡಿಯೋ ಚಿತ್ರೀಕರಣ ಮಾಡಿದ್ದು ಯಾರು ಎಂಬ ಸಸ್ಪೆನ್ಸ್ ಬಿಡಿಸುವ ಮತ್ತು ಆ ಮೂಲಕ ಪ್ರೇಕ್ಷಕನನ್ನು ಥ್ರಿಲ್ ಮೂಡ್‌ಗೆ ಒಳಪಡಿಸುವ ಯಾವ ಇರಾದೆಯೂ ಹನೆಕೆಗೆ ಇಲ್ಲ ಎಂಬುದು ಬಹಳ ನಿಧಾನಕ್ಕೆ ತಿಳಿಯುತ್ತದೆ. ಜಾರ್ಜ್ ಹುಡುಕಹೊರಡುವುದು ವಿಡಿಯೋ ಮುಖಾಂತರ ತನ್ನ ಕುಟುಂಬವನ್ನು ಭಯಪಡಿಸುತ್ತಿರುವವರು ಯಾರೆಂದು. ಹನೆಕೆ ಹುಡುಕುತ್ತಿರುವುದು ಭಯಭೀತನಾದ ಜಾರ್ಜ್‌ನ ಗತದ ಕೃತ್ಯ ಯಾವುದು ಮತ್ತು ಆ ಕೃತ್ಯದ ಬಗ್ಗೆ ಅವನಿಗಿರುವ ಅಭಿಪ್ರಾಯವಾದರೂ ಏನೆಂಬುದನ್ನು. ಅಮೆರಿಕಾದ 9/11ರ ಘಟನೆ ಮತ್ತು ಆನಂತರದ ಅಮೆರಿಕದ ವರ್ತನೆಗಳೆ ಹನೆಕೆಗೆ ಈ ಸಿನಿಮಾಗೆ ಮೂಲ ಪ್ರೇರಣೆ ಎಂದು ಒಂದು ಕಡೆ ಓದಿದ ನೆನಪು.

ಜಾರ್ಜ್ ತನ್ನ ಬಾಲ್ಯದಲ್ಲಿ ಮಜೀದ್ ವಿಚಾರವಾಗಿ ತಾಳಿದ ಅಸಹನೆ ಮತ್ತು ಅವನ ಮೇಲೆ ಮಾಡಿದ ಸುಳ್ಳು ಆರೋಪದಿಂದ ಮಜೀದ್ ತನಗೆ ದೊರಕಬಹುದಾಗಿದ್ದ ಉತ್ತಮ ಶಿಕ್ಷಣ, ಆರೈಕೆ ಮತ್ತು ಭವಿಷ್ಯದಿಂದ ವಂಚಿತನಾಗಿದ್ದಾನೆ. ಜಾರ್ಜ್‌ನ ಈ ಕೃತ್ಯದ ಬಗ್ಗೆ ನೆನಪು ಮಾಡಲು ಪ್ರಯತ್ನಿಸುವ ಮತ್ತು ಅದಕ್ಕಾಗಿ ಕಿಂಚಿತ್ ಪಶ್ಚಾತ್ತಾಪ ಏನಾದರೂ ಇದೆಯಾ ಎಂದು ಹುಡುಕುವ ಮಜೀದ್ ಮಾತುಗಳು; ಇದಕ್ಕೆ ಜಾರ್ಜ್ ತೋರಿಸುವ ನಿರ್ಲಕ್ಷ್ಯ ಮತ್ತು ತನ್ನ ತಪ್ಪುಗಳಿಗೆ ಅವನು ಕೊಡುವ ಸಮರ್ಥನೆ; ಇವು ದಬ್ಬಾಳಿಕೆ ನಡೆಸುವ ಪ್ರತಿಯೊಂದು ದೇಶ, ಸಮುದಾಯ ಕೊಡುವ ಸಮರ್ಥನೆಗಳೂ ಹೌದು. ಜಾರ್ಜ್‌ನ ವೈಯಕ್ತಿಕ ಪಶ್ಚಾತ್ತಾಪದ ನಿರಾಕರಣೆ, ದೇಶ ಮತ್ತು ಸಮುದಾಯಗಳ ಸಾಮೂಹಿಕ ಪಶ್ಚಾತ್ತಾಪದ ನಿರಾಕರಣೆಯೂ ಹೌದು. ಹನೆಕೆ ಈ ಸಿನಿಮಾದಲ್ಲಿ ಹೇಳಹೊರಟಿರುವುದು ಅದನ್ನೇ ಅನಿಸುತ್ತದೆ.


ಇದನ್ನೂ ಓದಿ: ‘ಗರಂ ಹವಾ’: ಒಂದು ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...