Homeಮುಖಪುಟಮೈಕೆಲ್ ಹನೆಕೆಯ ’ದ ಹಿಡನ್': ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

ಮೈಕೆಲ್ ಹನೆಕೆಯ ’ದ ಹಿಡನ್’: ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

- Advertisement -
- Advertisement -

ಸಾಮಾನ್ಯ ಹೊರಜಗತ್ತಿಗೆ ಯುರೋಪ್ ಎಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಉದಾತ್ತ ಆಶಯಗಳನ್ನು ಮೈಗೂಡಿಸಿಕೊಂಡಂತ ದೇಶಗಳ ಖಂಡ. ಸಮಕಾಲಿನ ಯುರೋಪ್ ಸಿನಿಮಾಗಳಲ್ಲಿ ಕಾಣುವುದು ಇವೇ ಸಂಗತಿಗಳನ್ನು. (ನಾನು ನೋಡಿರುವ ಬಹುತೇಕ ಸಿನಿಮಾಗಳಲ್ಲಿ). ಇನ್ನು ಇವರ ಸಿನಿಮಾಗಳಿಗೆ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಕುರಿತಾದ ವಿಷಯಗಳಿಗೆ ವಸ್ತುವಾಗುವುದು ಎರಡನೇ ಮಹಾಯುದ್ಧದಲ್ಲಿ ಜರ್ಮನಿ ನಡೆಸಿದ ಕ್ರೌರ್ಯ ಮತ್ತು ಅವು ಮನುಷ್ಯನಲ್ಲಿ ಉಂಟು ಮಾಡಿದ ಅಸ್ತಿತ್ವದ ಪ್ರಶ್ನೆಗಳಲ್ಲಿ ಮಾತ್ರ. ಒಂದು ಕಾಲಕ್ಕೆ ಸಾಮ್ರಾಜ್ಯಶಾಹಿಗಳಾಗಿದ್ದ ಯುರೋಪ್‌ನ ಹಲವು ದೇಶಗಳು ಇತರೆ ಖಂಡಗಳಲ್ಲಿ ನಡೆಸಿದ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಇವರ ಸಿನಿಮಾಗಳಿಗೆ ವಸ್ತುಗಳಾಗುವುದು ವಿರಳ. ಈ ಗತದ ಕೃತ್ಯಗಳಿಗೆ ಇವರ ಸಿನಿಮಾಗಳಲ್ಲಿ ಪಶ್ಚಾತ್ತಾಪಕ್ಕೂ ಜಾಗ ಸಿಕ್ಕುವುದಿಲ್ಲ.

’ದ ಹಿಡನ್’ (2005)

ಯಾರನ್ನ ನಾವು ಬೌದ್ಧಿಕ ಮೇಲ್ಪಂಕ್ತಿಯಲ್ಲಿ ಇಟ್ಟು ಕಾಣುತ್ತೇವೆಯೋ, ಅದೇ ಯುರೋಪ್ ದೇಶಗಳ ಸಮುದಾಯಗಳು ತಾವು ನಡೆಸಿದ ರಾಜಕೀಯ ಕ್ರೌರ್ಯಗಳಿಗೆ ಜಾಣ ಕುರುಡಾಗಿರುವುದನ್ನು ಮತ್ತು ಅವರ ಬೂರ್ಜ್ವಾ ಗುಣ, ಹೇಡಿತನ ಹಾಗೂ ಅವರು ಹೊರಜಗತ್ತಿನ ಸಮುದಾಯವನ್ನ ಗ್ರಹಿಸುವ ರೀತಿಯನ್ನು ಹನೆಕೆ ತನ್ನ ’ದ ಹಿಡನ್’ ಸಿನಿಮಾದಲ್ಲಿ ಚರ್ಚಿಸುತ್ತಾರೆ. ಹನೆಕೆ ಆಸ್ಟ್ರಿಯಾ ದೇಶದವರಾದರು ’ದ ಹಿಡನ್’ ಸಿನಿಮಾದ ಕಾಲ ದೇಶಗಳು ಮಾತ್ರ ಫ್ರಾನ್ಸಿನದು. ಅಲ್ಜೀರಿಯಾ ಯುದ್ಧದ (1954-62) ಸಂದರ್ಭದಲ್ಲಿ, ಅಲ್ಜೀರಿಯನ್ ನ್ಯಾಷನಲ್ ಲಿಬರಲ್ ಫ್ರಂಟ್ ಸಂಘಟನೆಯ ಸುಮಾರು 30 ಸಾವಿರ ಜನ ನಡೆಸುತ್ತಿದ್ದ ಶಾಂತಿಯುತ ಮೆರವಣಿಗೆಯ ಮೇಲೆ ಫ್ರಾನ್ಸ್ ಪೊಲೀಸ್ ನಡೆಸಿದ ಹತ್ಯಾಕಾಂಡದಲ್ಲಿ ಸುಮಾರು 300 ಜನ ಸಾಯುತ್ತಾರೆ ಮತ್ತು ಹಲವರು ಕಣ್ಮರೆಯಾಗುತ್ತಾರೆ. ಈ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಫ್ರಾನ್ಸ್‌ನ ಮಧ್ಯಮ ವರ್ಗದ ಬೌದ್ಧಿಕ ಪರಿಸರದಲ್ಲಿ ಬದುಕುತ್ತಿರುವ ಕುಟುಂಬವೊಂದರ ಖಾಸಗಿ ಬದುಕಿನ ಘಟನೆಗಳನ್ನು ಹನೆಕೆ ಚಿತ್ರಿಸುತ್ತಾರೆ. ಖಾಸಗಿ ಸಂಗತಿಯಲ್ಲಿ ಮಾಡುವ ಪಶ್ಚಾತ್ತಾಪ ನಿರಾಕರಣೆ ಹೇಗೆ ಇಡೀ ದೇಶದ ಪಶ್ಚಾತ್ತಾಪದ ನಿರಾಕರಣೆ ಆಗಿರುತ್ತದೆ ಎಂಬುದನ್ನು ಹನಕೆ ಹೊಸ ಮಾದರಿಯ ದೃಶ್ಯಕಟ್ಟುವಿಕೆಯ ಮೂಲಕ ಹೆಣೆಯುತ್ತಾರೆ. ಇದಕ್ಕೆ ಸಿನಿಮಾದ ಪ್ರಾರಂಭದ ದೃಶ್ಯವೇ ಸಾಕ್ಷಿಯಾಗಿದೆ.

ಬೌದ್ಧಿಕ ಪ್ರತಿನಿಧಿಗಳಂತಿರುವ ಜಾರ್ಜ್ ಮತ್ತು ಅನ್ನೆ ದಂಪತಿಗಳು ಫ್ರಾನ್ಸ್ ನಗರದ ಸುಸಜ್ಜಿತ ಮನೆಯೊಂದರಲ್ಲಿ ಸಂತೃಪ್ತಿಯಿಂದ ಬದುಕುತ್ತಿದ್ದಾರೆ. ಜಾರ್ಜ್ ಟಿವಿ ಒಂದರಲ್ಲಿ ಸಾಹಿತ್ಯ ಕುರಿತಾದ ಕಾರ್ಯಕ್ರಮ ನಡೆಸಿಕೊಡುವ ನಿರೂಪಕನ ವೃತ್ತಿಯಲ್ಲಿದ್ದರೆ, ಅನ್ನೆ ಪುಸ್ತಕ ಪ್ರಕಾಶನ ಸ್ವರೂಪದ ವೃತ್ತಿಯಲ್ಲಿ ಇದ್ದಾಳೆ. ಜಾರ್ಜ್ ಮತ್ತು ಅನ್ನೆಯರ ನೆಮ್ಮದಿ ಬದುಕು ಒಂದು ದಿನ ದಿಢೀರ್ ಎಂದು ಬರುವ ವಿಡಿಯೋಟೇಪ್‌ನಿಂದ ಡಿಸ್ಟರ್ಬ್ ಆಗುತ್ತದೆ. ಇವರದ್ದೇ ಮನೆ ಮತ್ತು ದಿನಚರಿಯ ದೃಶ್ಯಗಳನ್ನು ಗೌಪ್ಯ ಕ್ಯಾಮೆರಾ ಮೂಲಕ ಆ ವಿಡಿಯೋದಲ್ಲಿ ಸೆರೆಹಿಡಿಯಲಾಗಿರುತ್ತದೆ. ಜಾರ್ಜ್ ದಂಪತಿಗಳಿಗೆ ನಾವು ಯಾರದೋ ಕಣ್ಗಾವಲಿನಲ್ಲಿ ಇದ್ದೇವೆ ಮತ್ತು ಈ ಮೂಲಕ ನಮ್ಮನ್ನು ಯಾರೋ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಮುಂದೆ ಬರುವ ವಿಡಿಯೊ ಟೇಪ್ ಮತ್ತು ಅದರೊಂದಿಗೆ ಬರುವ ಡ್ರಾಯಿಂಗ್‌ನಿಂದ, ಜಾರ್ಜ್‌ಗೆ ತನ್ನ ಬಾಲ್ಯದ ದಿನಗಳು ನೆನಪಾಗುತ್ತವೆ ಮತ್ತು ಈ ವಿಡಿಯೋ ಕಳುಹಿಸುತ್ತಿರುವವರು ಯಾರೆಂಬ ಬಗ್ಗೆ ಒಂದು ಅಂದಾಜಿಗೆ ಬರುತ್ತಾನೆ.

ಜಾರ್ಜ್ 5 ವರ್ಷದವನಿದ್ದಾಗ ಅವನ ತಂದೆ, 1961ರ ಫ್ರಾನ್ಸ್ ಹತ್ಯಾಕಾಂಡದಲ್ಲಿ ಮೃತನಾಗಿರಬಹುದಾದ ಅಥವಾ ಕಣ್ಮರೆಯಾಗಿದ್ದ ಅಲ್ಜೀರಿಯನ್ ದಂಪತಿಗಳ ಮಗುವೊಂದನ್ನು ದತ್ತು ಪಡೆದು ತನ್ನ ಹಳ್ಳಿ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ವಯಸ್ಸಿನಲ್ಲಿ ಜಾರ್ಜ್‌ಗಿಂತ ಹಿರಿಯನಾದ ಆ ನಿರಾಶ್ರಿತ ಮಗುವಿನ ಹೆಸರು ಮಜೀದ್. ಮಜೀದ್ ಮನೆಗೆ ಬಂದ ನಂತರ ಜಾರ್ಜ್‌ಗೆ ಮನೆಯಲ್ಲಿ ತಾನು ಒಬ್ಬನೇ ಇದ್ದಾಗಿನ ಕಂಫರ್ಟ್ ಈಗಿಲ್ಲ ಎಂಬ ಭಾವನೆ ಪ್ರಾರಂಭವಾಗಿ, ತನಗಿಂತ ಬಲಶಾಲಿಯಾದ ಮಜೀದ್‌ನನ್ನು ನೋಡಿದಾಗಲೆಲ್ಲ ಅಭದ್ರತೆಗೆ ಒಳಗಾಗುತ್ತಾನೆ. ತನ್ನ ತಂದೆ ತಾಯಿಗೆ ಮಜೀದ್ ಮೇಲೆ ಸುಳ್ಳು ಅರೋಪಗಳನ್ನು ಮಾಡಿ ಅವನನ್ನು ಮನೆಯಿಂದ ಅನಾಥಾಶ್ರಮಕ್ಕೆ ಸಾಗಿಹಾಕಲು ಕಾರಣವಾಗುತ್ತಾನೆ.

ಜಾರ್ಜ್‌ನ ಬಾಲ್ಯದ ನೆನಪು ಅನಾಮಧೇಯವಾಗಿ ಬಂದ ವಿಡಿಯೋ ಟೇಪ್ ಕಾರಣವಾಗಿ ನೆನಪಿಗೆ ಬರುತ್ತದೆಯೇ ಹೊರತು ಆ ಘಟನೆಯ ಬಗ್ಗೆ ಪಶ್ಚಾತ್ತಾಪ ಇರುವುದಿಲ್ಲ. ಅನ್ನೆಯಳಿಗೆ ಈ ಘಟನೆಯನ್ನು ವಿವರಿಸುವಾಗ ಕೂಡ ಜಾರ್ಜ್ ತನ್ನ ಪೋಷಕರಿಗೆ ಮಜೀದ್ ವಿರುದ್ಧ ಹೇಳಿದ ಸುಳ್ಳುಗಳು ಬಾಲ್ಯದ ಸಹಜ ವರ್ತನೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಈ ವಿಡಿಯೋಗಳನ್ನು ಮಜೀದ್ ತನ್ನ ಮೇಲಿನ ಪ್ರತೀಕಾರಕ್ಕೆ ಕಳುಹಿಸುತ್ತಿದ್ದಾನೆ ಎಂಬ ಖಚಿತ ನಿಲುವಿಗೆ ಜಾರ್ಜ್ ಬರುತ್ತಾನೆ. ಎಲ್ಲೋ ಒಂದು ಇಕ್ಕಟ್ಟಾದ ವಸತಿ ಸಂಕೀರ್ಣದಲ್ಲಿ ಬದುಕುತ್ತಿರುವ ಮಜೀದ್‌ನನ್ನು ಹುಡುಕುವ ಜಾರ್ಜ್, ಅವನಿಗೆ ಈ ರೀತಿಯ ವಿಡಿಯೋಗಳನ್ನು ಯಾಕೆ ಕಳುಹಿಸುತ್ತಿದ್ದೀಯಾ ಎಂದು ಕೇಳುತ್ತಾನೆ. ಮಜೀದ್ ಈ ಅರೋಪವನ್ನು ನಿರಾಕರಿಸುತ್ತಾನೆ. ಆದರೂ ಜಾರ್ಜ್ ಅವನಿಗೆ ಎಚ್ಚರಿಕೆ ನೀಡುತ್ತಾನೆ. ಈ ಎಚ್ಚರಿಕೆ ನೀಡಿದ ದೃಶ್ಯಗಳಿರುವ ವಿಡಿಯೋ ಟೇಪ್ ಜಾರ್ಜ್ ಕಚೆರಿಯ ವಿಳಾಸಕ್ಕೆ ಮರುದಿನ ತಲುಪುತ್ತದೆ. ಆ ರಾತ್ರಿ ಜಾರ್ಜ್ ಮಗ ಪಿರ್ರೋಟ್ ಮನೆ ತಲುಪುವುದಿಲ್ಲ. ಇದು ಮಜೀದ್‌ನದೆ ಕೃತ್ಯ ಎಂದು ನಿರ್ಧರಿಸುವ ಜಾರ್ಜ್ ಪೊಲೀಸ್ ಕಂಪ್ಲೇಟ್ ನೀಡುತ್ತಾನೆ. ಮಜೀದ್‌ನನ್ನು ಬಂಧಿಸಲಾಗುತ್ತದೆ. ಪಿರ್ರೋಟ್ ಕಾಣಿಯಾಗಿರುವ ಬಗ್ಗೆ ಮಜೀದ್ ಕೈವಾಡ ಇಲ್ಲವಾಗಿ ಮಾರನೆ ದಿನ ಅವನು ಬಿಡುಗಡೆಯಾಗುತ್ತಾನೆ. ಪಿರ್ರೋಟ್ ತನ್ನ ತಾಯಿಯ ಮೇಲಿನ ಕೋಪಕ್ಕೆ ರಾತ್ರಿ ಮನೆಗೆ ಬಂದಿರುವುದಿಲ್ಲ ಎಂದು ತಿಳಿಯುತ್ತದೆ. ಮಾರನೆಯ ದಿನ ಮಜೀದ್ ಜಾರ್ಜ್‌ನನ್ನು ತನ್ನ ಮನೆಗೆ ಅಹ್ವಾನಿಸುತ್ತಾನೆ. ಜಾರ್ಜ್ ಮಜೀದ್ ಮನೆಗೆ ಬಂದು ಮಾತು ಪ್ರಾರಂಭಿಸುತ್ತಿದ್ದಂತೆಯೇ ’ನಾನು ಕರೆದದ್ದು ಇದರ ಸಲುವಾಗಿ’ ಎಂದು ಹೇಳುತ್ತಾ ಮಜೀದ್ ತನ್ನ ಜೇಬಿನಲ್ಲಿದ್ದ ರೇಜರ್ ತೆಗೆದು ತನ್ನ ಕತ್ತನ್ನು ಕೊಯ್ದುಕೊಂಡು ಸಾಯುತ್ತಾನೆ.

ಇದಿಷ್ಟು ಕಥಾಹಂದರ. ಈ ವಿಡಿಯೋ ಚಿತ್ರೀಕರಣ ಮಾಡಿದ್ದು ಯಾರು ಎಂಬ ಸಸ್ಪೆನ್ಸ್ ಬಿಡಿಸುವ ಮತ್ತು ಆ ಮೂಲಕ ಪ್ರೇಕ್ಷಕನನ್ನು ಥ್ರಿಲ್ ಮೂಡ್‌ಗೆ ಒಳಪಡಿಸುವ ಯಾವ ಇರಾದೆಯೂ ಹನೆಕೆಗೆ ಇಲ್ಲ ಎಂಬುದು ಬಹಳ ನಿಧಾನಕ್ಕೆ ತಿಳಿಯುತ್ತದೆ. ಜಾರ್ಜ್ ಹುಡುಕಹೊರಡುವುದು ವಿಡಿಯೋ ಮುಖಾಂತರ ತನ್ನ ಕುಟುಂಬವನ್ನು ಭಯಪಡಿಸುತ್ತಿರುವವರು ಯಾರೆಂದು. ಹನೆಕೆ ಹುಡುಕುತ್ತಿರುವುದು ಭಯಭೀತನಾದ ಜಾರ್ಜ್‌ನ ಗತದ ಕೃತ್ಯ ಯಾವುದು ಮತ್ತು ಆ ಕೃತ್ಯದ ಬಗ್ಗೆ ಅವನಿಗಿರುವ ಅಭಿಪ್ರಾಯವಾದರೂ ಏನೆಂಬುದನ್ನು. ಅಮೆರಿಕಾದ 9/11ರ ಘಟನೆ ಮತ್ತು ಆನಂತರದ ಅಮೆರಿಕದ ವರ್ತನೆಗಳೆ ಹನೆಕೆಗೆ ಈ ಸಿನಿಮಾಗೆ ಮೂಲ ಪ್ರೇರಣೆ ಎಂದು ಒಂದು ಕಡೆ ಓದಿದ ನೆನಪು.

ಜಾರ್ಜ್ ತನ್ನ ಬಾಲ್ಯದಲ್ಲಿ ಮಜೀದ್ ವಿಚಾರವಾಗಿ ತಾಳಿದ ಅಸಹನೆ ಮತ್ತು ಅವನ ಮೇಲೆ ಮಾಡಿದ ಸುಳ್ಳು ಆರೋಪದಿಂದ ಮಜೀದ್ ತನಗೆ ದೊರಕಬಹುದಾಗಿದ್ದ ಉತ್ತಮ ಶಿಕ್ಷಣ, ಆರೈಕೆ ಮತ್ತು ಭವಿಷ್ಯದಿಂದ ವಂಚಿತನಾಗಿದ್ದಾನೆ. ಜಾರ್ಜ್‌ನ ಈ ಕೃತ್ಯದ ಬಗ್ಗೆ ನೆನಪು ಮಾಡಲು ಪ್ರಯತ್ನಿಸುವ ಮತ್ತು ಅದಕ್ಕಾಗಿ ಕಿಂಚಿತ್ ಪಶ್ಚಾತ್ತಾಪ ಏನಾದರೂ ಇದೆಯಾ ಎಂದು ಹುಡುಕುವ ಮಜೀದ್ ಮಾತುಗಳು; ಇದಕ್ಕೆ ಜಾರ್ಜ್ ತೋರಿಸುವ ನಿರ್ಲಕ್ಷ್ಯ ಮತ್ತು ತನ್ನ ತಪ್ಪುಗಳಿಗೆ ಅವನು ಕೊಡುವ ಸಮರ್ಥನೆ; ಇವು ದಬ್ಬಾಳಿಕೆ ನಡೆಸುವ ಪ್ರತಿಯೊಂದು ದೇಶ, ಸಮುದಾಯ ಕೊಡುವ ಸಮರ್ಥನೆಗಳೂ ಹೌದು. ಜಾರ್ಜ್‌ನ ವೈಯಕ್ತಿಕ ಪಶ್ಚಾತ್ತಾಪದ ನಿರಾಕರಣೆ, ದೇಶ ಮತ್ತು ಸಮುದಾಯಗಳ ಸಾಮೂಹಿಕ ಪಶ್ಚಾತ್ತಾಪದ ನಿರಾಕರಣೆಯೂ ಹೌದು. ಹನೆಕೆ ಈ ಸಿನಿಮಾದಲ್ಲಿ ಹೇಳಹೊರಟಿರುವುದು ಅದನ್ನೇ ಅನಿಸುತ್ತದೆ.


ಇದನ್ನೂ ಓದಿ: ‘ಗರಂ ಹವಾ’: ಒಂದು ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...