Homeಮುಖಪುಟನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

ನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

- Advertisement -
- Advertisement -

| ಎ.ಕೆ.ಸುಬ್ಬಯ್ಯ | ಹಿರಿಯ ಚಿಂತಕರು.

ನರೇಂದ್ರ ಮೋದಿಯ ವ್ಯಕ್ತಿಚಿತ್ರದ ಎದುರಾಗಿ ರಾಹುಲ್ ಗಾಂಧಿಯನ್ನು ನಿಲ್ಲಿಸೋಣ. ರಾಹುಲ್ ಗಾಂಧಿಯನ್ನು ನರೇಂದ್ರ ಮೋದಿಗಿಂತ ಕೆಟ್ಟವನು ಎಂದು ಹೇಳಲು ಸಾಧ್ಯವೇ ಇಲ್ಲ. ಅಥವಾ ನರೇಂದ್ರ ಮೋದಿ ರಾಹುಲ್ ಗಾಂಧಿಯಷ್ಟು ಒಳ್ಳೆಯವನು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ರಾಹುಲ್ ಗಾಂಧಿಯಿಂದ ನರೇಂದ್ರ ಮೋದಿ ಆಗಲು ಸಾಧ್ಯವಿಲ್ಲ. ನರೇಂದ್ರ ಮೋದಿಯಿಂದ ರಾಹುಲ್ ಗಾಂಧಿ ಆಗಲು ಸಾಧ್ಯವಿಲ್ಲ.

ನರೇಂದ್ರ ಮೋದಿಯ ಸ್ಥಾನದಲ್ಲಿ ರಾಹುಲ್ ಗಾಂಧಿ ಇದ್ದಿದ್ದರೆ ಗುಜರಾತ್ ಹತ್ಯಾಕಾಂಡ ನಡೆಯುತ್ತಿತ್ತೇ? ಅದರ ನಂತರ ಸಿಬಿಐ ಅನ್ನು ವಶ ಮಾಡಿಕೊಂಡು ಅದರ ಮೂಲಕ ಕ್ರಿಮಿನಲ್‍ಗಳನ್ನೆಲ್ಲಾ ಪಾರು ಮಾಡುವ ಮಟ್ಟಕ್ಕೆ ರಾಹುಲ್ ಗಾಂಧಿ ಹೋಗುತ್ತಿದ್ದರಾ? ಯಾವ ಕಾರಣದಿಂದಲೂ, ಯಾವ ದೃಷ್ಟಿಕೋನದಿಂದಲೂ ನರೇಂದ್ರ ಮೋದಿಯಷ್ಟು ದುಷ್ಟತನದಿಂದ ಕೂಡಿದ, ಕ್ರೋಧ, ಅಸೂಯೆ, ಪ್ರತಿಕಾರ ಮನೋಭಾವನೆಯಿಂದ ಕೂಡಿದ ಒಬ್ಬ ವ್ಯಕ್ತಿ ಆಗಲು ರಾಹುಲ್ ಗಾಂಧಿಗೆ ಸಾಧ್ಯವೇ ಇಲ್ಲ.

ರಾಹುಲ್ ಗಾಂಧಿ ಎಂದೊಡನೆ ಕುಟುಂಬ ರಾಜಕಾರಣ, ಅಪ್ಪು, ಪಪ್ಪು ಎಂದು ಗೇಲಿ ಮಾಡುತ್ತಾ ಆತನ ನೈತಿಕ ಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆಂದುದನ್ನು ಬಿಟ್ಟರೆ, ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಲು ಬೇರೆನೂ ಇಲ್ಲದೇ ಇದನ್ನೇ ಪದೇ ಪದೇ ಹೇಳುತ್ತಿದ್ದಾರೆ ಎಂದರೆ ಏನು ಅರ್ಥ?


ಭ್ರಷ್ಟಾಚಾರ ವಿರೋಧಿ ನರೇಂದ್ರ ಮೋದಿ ಎಂದು ಹೇಳುತ್ತಿದ್ದಾರಲ್ಲ, ರಾಫೇಲ್ ಪ್ರಕರಣದಲ್ಲಿ ಮೋದಿ ಇಂದು ಬೆತ್ತಲಾಗಿ ಬೀದಿಯಲ್ಲಿ ನಿಂತಿದ್ದಾರಲ್ಲವೇ? ದೇಶದ ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರಲ್ಲವೇ? ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ, ಈ ಹಿಂದೆ ಯುಪಿಎ ಸಂದರ್ಭದಲ್ಲಿ ಜೈಲಿಗೆ ಹೋದ ಹಲವರು ಹೊರಗೆ ಬಂದರು. ಅವರು ರಾಬರ್ಟ್ ವಾದ್ರಾ ಸೇರಿದಂತೆ ಯಾರ್ಯಾರ ಮೇಲೆ ಆರೋಪವನ್ನು ಮಾಡಿದರೋ ಅವರ್ಯಾರೂ ಜೈಲಿಗೆ ಹೋಗಲಿಲ್ಲ.

ಎಲ್ಲ ರಾಷ್ಟ್ರೀಯ ಪಕ್ಷಗಳೂ ದೇಶವನ್ನು ಆಳಿದ್ದಾರೆ. ಅಧಿಕಾರ ಅನುಭವಿಸಿದಂತಹ ಪಕ್ಷಗಳೇ ಇರುವುದು. ಇವರೆಲ್ಲರ ಪೈಕಿ ಇಡೀ ದೇಶ ಗುರುತಿಸುವಂತಹ ಒಬ್ಬ ರಾಷ್ಟ್ರ ನಾಯಕ ಅಂದ್ರೆ ಯಾರಿದಾರೆ? ಮೋದಿ, ಮೋದಿಯ ನಂತರ.. .. ರಾಹುಲ್ ಗಾಂಧಿ ಬಿಟ್ಟರೆ ಇನ್ಯಾರಾದರೂ ಕಣ್ಣಿಗೆ ಕಾಣುತ್ತಾರಾ? ಇದ್ದಾರೆ, ವಾಮಪಂಥೀಯರಿದಾರೆ. ಸದ್ಗುಣ ಸಂಪನ್ನರಿದಾರೆ. ಆದರೆ ಅವರು ಸಮಾಜದಲ್ಲಿ ಹೆಚ್ಚು ಚಲಾವಣೆ ಆಗುತ್ತಿಲ್ಲ. ಅವರು ಅವರನ್ನು ತಿದ್ದಿಕೊಂಡು, ಇಡೀ ಇಂಡಿಯಾದ ನೇತೃತ್ವವನ್ನು ತಮ್ಮದಾಗಿಸಿಕೊಳ್ಳುವಂತಹ ಪ್ರಯತ್ನವನ್ನೇ ಮಾಡುವುದಿಲ್ಲವಲ್ಲ. ಈ ರೀತಿ ನಾವು ತುಂಬ ಅಸಹಾಯಕರಾಗಿದ್ದೀವಿ. ಆ ದೃಷ್ಟಿಯಲ್ಲಿ ರಾಹುಲ್ ಗಾಂಧಿಯೇ ನಮಗೆ ಸ್ವೀಕಾರಾರ್ಹ.


ವ್ಯಕ್ತಿಚಿತ್ರವನ್ನು ತೆಗೆದುಕೊಂಡು ರಾಹುಲ್ ಗಾಂಧಿಯನ್ನು ಪದೇ ಪದೇ ಗೇಲಿ ಮಾಡೋದರ ಅರ್ಥ ರಾಹುಲ್ ಗಾಂಧಿ ಅಷ್ಟು ಸಣ್ಣವ ಅಂತಲ್ಲ. ರಾಹುಲ್ ಗಾಂಧಿಯನ್ನು ಸಣ್ಣದು ಮಾಡುವ ಪ್ರಯತ್ನ ಅದು. ಸಣ್ಣದು ಮಾಡುವುದರ ಹಿಂದೆ ಇರುವಂತದ್ದು ಭಯ, ರಾಹುಲ್ ಗಾಂಧಿಯ ಬಗ್ಗೆ ಇರುವ ಭಯ. ಇಷ್ಟೊಂದು ಸಣ್ಣ ವ್ಯಕ್ತಿಯ ಬಗ್ಗೆ ಭಯ ಏಕೆ? ಮೋದಿ ರಾಹುಲ್ ಗಾಂಧಿಯ ಭಜನೆ ಮಾಡದೇ ಯಾವುದಾದರೊಂದು ಭಾಷಣವನ್ನು ಅಂತ್ಯ ಮಾಡುತ್ತಾರಾ? ಒಬ್ಬ ಅಪ್ಪು, ಪಪ್ಪು, ಕೆಲಸಕ್ಕೆ ಬಾರದ ಸಣ್ಣ ವ್ಯಕ್ತಿಯ ಬಗ್ಗೆ ಯಾಕೆ ಭಯ ಪಡಬೇಕು? ಇದು ರಾಹುಲ್ ಗಾಂಧಿಯ ಬಗ್ಗೆ ಒಳಗೆ ಅಡಗಿಸಿಟ್ಟುಕೊಂಡಿರುವ ಭಯ. ಆದ್ದರಿಂದ ಇಡೀ ದೇಶದಲ್ಲಿ ನರೇಂದ್ರ ಮೋದಿಯ ವಿರುದ್ಧ ಗೆಲ್ಲಿಸಬೇಕಾದಂತಹ, ಸ್ವೀಕರಿಸಬೇಕಾದಂತಹ ಏಕೈಕ ವ್ಯಕ್ತಿ, ಎಲ್ಲ ಕೋನಗಳಿಂದ ರಾಹುಲ್ ಗಾಂಧೀ ಎಂದು ನನಗೆ ಅನಿಸುತ್ತದೆ.


ನಾನು ರಾಹುಲ್ ಗಾಂಧಿಯನ್ನು ಭಾರಿ ಪುರುಷೋತ್ತಮ ಎಂದು ಭಾವಿಸುತ್ತಿಲ್ಲ. ಮನುಷ್ಯನಲ್ಲಿ ಅಡಗಿರುವಂತಹ ಕೆಲವು ದೌರ್ಬಲ್ಯಗಳು ಅವನಲ್ಲಿಯೂ ಇವೆ. ಆದರೆ ನರೇಂದ್ರ ಮೋದಿಗೆ ಹೋಲಿಸಿದರೆ ರಾಹುಲ್ ಗಾಂಧಿ ಅಪರಂಜಿಯಾಗಿ ವಿಜೃಂಭಿಸುತ್ತಾನೆ. ಇದನ್ನು ಜನ ಆಳವಾಗಿ ಯೋಚನೆ ಮಾಡಿ, ಚಿಂತನೆ ಮಾಡಿ ಸರಿಕಂಡರೆ ಒಪ್ಪಿಕೊಳ್ಳಿ, ಇಲ್ಲವೆಂದರೆ ಬಿಟ್ಟುಬಿಡಿ. ಆದರೆ ಒಂದಂತೂ ನಿಜ, ನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...