Homeನ್ಯಾಯ ಪಥ"ಜಾತಿಯ ಅಸ್ತಿತ್ವದಲ್ಲಿ ನಿಮ್ಮ ಧರ್ಮ ನೈತಿಕವಾಗಿ ವಿಕೃತಗೊಂಡಿದೆ": ಲಿಯೋ ಟಾಲ್‌ಸ್ಟಾಯ್

“ಜಾತಿಯ ಅಸ್ತಿತ್ವದಲ್ಲಿ ನಿಮ್ಮ ಧರ್ಮ ನೈತಿಕವಾಗಿ ವಿಕೃತಗೊಂಡಿದೆ”: ಲಿಯೋ ಟಾಲ್‌ಸ್ಟಾಯ್

- Advertisement -
- Advertisement -

’ಹಿಂದೂ ಪೇಪರ್ ಒಂದರ ಸಂಪಾದಕರಿಗೆ’: ಲಿಯೋ ಟಾಲ್‌ಸ್ಟಾಯ್ ಪತ್ರ

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಕೋರಿ ತಾರಕನಾಥ್ ದಾಸ್ ಅವರು ರಷಿಯಾದ ಖ್ಯಾತ ಸಾಹಿತಿ-ಚಿಂತಕ ಟಾಲ್‌ಸ್ಟಾಯ್ ಅವರಿಗೆ ಪತ್ರ ಬರೆದರು. ಅದಕ್ಕೆ ಪ್ರತಿಕಿಯೆಯಾಗಿ ಟಾಲ್‌ಸ್ಟಾಯ್ ಅವರು 1908ರ ಡಿಸೆಂಬರ್ 14ರಂದು ಒಂದು ಪತ್ರ ಬರೆದರು. ಆ ಪತ್ರವೇ ’ಅ ಲೆಟರ್ ಟು ಅ ಹಿಂದೂ’ ಎಂದು ಪ್ರಸಿದ್ಧವಾಗಿ, ಪುಸ್ತಕರೂಪದಲ್ಲೂ ಪ್ರಕಟವಾಯಿತು. ಅದರಿಂದ ಸ್ಫೂರ್ತಿ ಪಡೆದ ಮಹಾತ್ಮ ಗಾಂಧಿ ಟಾಲ್‌ಸ್ಟಾಯ್ ಚಿಂತನೆಗಳನ್ನು ಗಹನವಾಗಿ ಅಭ್ಯಸಿಸತೊಡಗುತ್ತಾರೆ ಹಾಗೂ ಅಹಿಂಸೆ ಮತ್ತು ಸತ್ಯಾಗ್ರಹದ ಬಗ್ಗೆ ಪ್ರೇರಣೆ ಪಡೆದುಕೊಳ್ಳುತ್ತಾರೆ. ತಾವು ಹೊರತರುತ್ತಿದ್ದ ’ಇಂಡಿಯನ್ ಒಪಿನಿಯನ್’ ಪತ್ರಿಕೆಯಲ್ಲಿ ಟಾಲ್‌ಸ್ಟಾಯ್ ಅವರ ಪತ್ರವನ್ನು ಪ್ರಕಟಿಸುತ್ತಾರೆ. ನಂತರ ಗಾಂಧಿ ಮತ್ತು ಟಾಲ್‌ಸ್ಟಾಯ್ ನಡುವೆಯೂ ಪತ್ರ ವ್ಯವಹಾರ ನಡೆಯುತ್ತದೆ. ಈ ಪತ್ರಗಳು ಅತ್ಯಂತ ಪರಿಚಿತ.

ಆದರೆ ಇದಕ್ಕೆ ಸುಮಾರು 8 ವರ್ಷಗಳ ಮುಂಚೆಯೇ ಒಂದು ಹಿಂದೂ ಪತ್ರಿಕೆಗೆ ಪ್ರತಿಕ್ರಿಯೆಯಾಗಿ ಟಾಲ್‌ಸ್ಟಾಯ್ ಒಂದು ಪತ್ರ ಬರೆದಿರುತ್ತಾರೆ. ಆ ಪತ್ರ ’ಮಾಸ್ಟರ್ ಆಂಡ್ ಮ್ಯಾನ್; ದಿ ಕ್ರುಟ್ಜೆರ್ ಸೊನಾಟ ಮಿಸಲೇನಿಯಸ್’ ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಪತ್ರದ ದಿನವನ್ನು ಜುಲೈ 1901 ಎಂದು ನಮೂದಿಸಲಾಗಿದೆ. ’ಅ ಹಂಡ್ರೆಡ್ ಇಯರ್‍ಸ್ ಆಫ್ ದ ಹಿಂದು – ದ ಎಪಿಕ್ ಸ್ಟೋರಿ ಆಫ್ ಇಂಡಿಯನ್ ನ್ಯಾಷನಲಿಸಂ’ ಪುಸ್ತಕದಲ್ಲಿ ಸಿಗುವ ಮಾಹಿತಿಯಂತೆ, ಸೆಪ್ಟಂಬರ್ 1901ರಲ್ಲಿ ಮದ್ರಾಸ್ ಜರ್‍ನಲ್ ’ಆರ್ಯ’ಗೆ ಟಾಲ್‌ಸ್ಟಾಯ್ ಈ ಪತ್ರ ಬರೆದಿರುತ್ತಾರೆ. ಈ ಪತ್ರವನ್ನು ’ದ ಹಿಂದೂ’ ಸಂಪಾದಕೀಯ ಮರುಪ್ರಕಟಿಸಿ ಅದಕ್ಕೆ ಪ್ರತಿಕ್ರಿಯೆಯನ್ನು ಕೂಡ ನೀಡಿರುತ್ತದೆ. 1901 ರಲ್ಲಿ, ಈ ದೇಶದಿಂದ ಅಷ್ಟು ದೂರದಲ್ಲಿದ್ದರೂ ಇಲ್ಲಿನ ಸ್ಥಿತಿಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಟಾಲ್‌ಸ್ಟಾಯ್ ಪತ್ರ ಇವತ್ತಿಗೂ ಚಿಂತನಾರ್ಹವಾಗಿದೆ.

ಡಿಯರ್ ಸರ್,
ನಿಮ್ಮ ಆಸಕ್ತಿದಾಯಕ ಪತ್ರಕ್ಕೆ ಧನ್ಯವಾದಗಳು. ನಿಮ್ಮ ದೇಶದ ಸಾಮಾಜಿಕ ಸಮಸ್ಯೆಗಳಿಗೆ ಯೂರೋಪ್ ನೀಡುವ ಪರಿಹಾರಗಳನ್ನು ನಿಮ್ಮ ದೇಶ ಒಪ್ಪಿಕೊಳ್ಳುವುದಿಲ್ಲ ಎಂಬ ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ಸಹಮತಿ ವ್ಯಕ್ತಪಡಿಸುತ್ತೇನೆ ಹಾಗೂ ವಾಸ್ತವದಲ್ಲಿ ಅದೊಂದು ಪರಿಹಾರವೂ ಅಲ್ಲ.

ಬಲಪ್ರಯೋಗದ ಆಧಾರದ ಮೇಲೆ ಸ್ಥಾಪಿಸಲಾದ ಒಂದು ಸಮಾಜ ಅಥವಾ ಜನರ ಗುಂಪು ಒಂದು ಪುರಾತನ/ಅನಾಗರಿಕ ರಾಜ್ಯವಷ್ಟೇ ಅಲ್ಲ, ಅದೊಂದು ಅತ್ಯಂತ ಅಪಾಯಕಾರಿ ಪರಿಸ್ಥಿತಿ ಕೂಡ. ಇಂತಹ ಒಂದು ಸಮಾಜವನ್ನು ಒಗ್ಗೂಡಿಸುವ ಸಂಬಂಧವನ್ನು ಯಾವ ಕಾಲದಲ್ಲಾದರೂ ಛಿದ್ರಗೊಳಿಸಬಹುದು ಹಾಗೂ ಭೀಕರ ವಿಪತ್ತುಗಳು ಆ ಸಮಾಜವನ್ನು ಮೀರಿಸಬಹುದು. ಯೂರೋಪಿನ ಎಲ್ಲಾ ರಾಷ್ಟ್ರಗಳೂ ಇದೇ ಪರಿಸ್ಥಿತಿಯಲ್ಲಿವೆ.

ಪ್ರೀತಿಸುವ ಸಾಮರ್ಥ್ಯದ ಕೊಡುಗೆಯನ್ನು ಪಡೆದಿರುವ ವಿವೇಚನೆಯುಳ್ಳವರಿಗೆ ಸಾಮಾಜಿಕ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರವು ಬಲಪ್ರಯೋಗದ ನಿರ್ನಾಮದಲ್ಲಿ ಅಡಗಿರುತ್ತದೆ ಹಾಗೂ ಪರಸ್ಪರ ಗೌರವದ ಆಧಾರದ ಮೇಲೆ ಸ್ಥಾಪಿಸಲಾದ ಒಂದು ಸಮಾಜದ ಸಂಘಟನೆಯಲ್ಲಿ ಹಾಗೂ ಎಲ್ಲರೂ ಸ್ವಇಚ್ಛೆಯಿಂದ ಒಪ್ಪಿಕೊಂಡ ವಿವೇಚನೆಯುಳ್ಳ ಸಿದ್ಧಾಂತಗಳ ಆಧಾರದ ಮೇಲೆ ಇರುತ್ತದೆ. ನಿಜವಾದ ಧರ್ಮದ ಅಭಿವೃದ್ಧಿಯಿಂದ ಮಾತ್ರ ಇಂತಹ ಪರಿಸ್ಥಿತಿಯನ್ನು ತಲುಪಲು ಸಾಧ್ಯ. ಇದರ ಮೂಲಕ ನಾನು ಸೂಚಿಸುತ್ತಿರುವುದೇನೆಂದರೆ, ಎಲ್ಲಾ ಧರ್ಮಗಳ ಮೂಲಭೂತ ತತ್ವಗಳನ್ನು. ಅವುಗಳು: ಮೊದಲನೆಯದು ಮಾನವನ ದಿವ್ಯ ಆತ್ಮದ ಜೀವಾಳದ ಅರಿವು ಹಾಗೂ ಎರಡನೆಯದಾಗಿ ಅದರ ಸಾಕಾರತೆಗೆ ಇರುವ ಗೌರವ.

ನಿಮ್ಮ ಧರ್ಮ ಅತ್ಯಂತ ಪುರಾತನವಾದದ್ದು ಹಾಗೂ ಆಧ್ಯಾತ್ಮದ ಸರ್ವಸ್ವವಾದ ’ಆತ್ಮನ್ಗೆ ಮತ್ತು ಮಾನವನಿಗೆ ಇರುವ ಸಂಬಂಧದ ಮೆಟಾಫಿಸಿಕಲ್ ವ್ಯಾಖ್ಯಾನದಲ್ಲೂ ಅತ್ಯಂತ ಉನ್ನತವಾದದ್ದು. ಆದರೆ ಅದು ತನ್ನ ನೈತಿಕತೆಯಲ್ಲಿ ವಿಕೃತಗೊಂಡಿದೆ; ಆ ವಿಕೃತಗೊಂಡಿರುವ ನೈತಿಕತೆ ಎಂದರೆ ಜಾತಿಯ ಅಸ್ತಿತ್ವದಲ್ಲಿ ಜೀವನವನ್ನು ಲೌಕಿಕವಾಗಿ ಅಳವಡಿಸಿಕೊಂಡಿರುವುದು. ನನಗೆ ಗೊತ್ತಿರುವಂತೆ, ಜೈನರು, ಬೌದ್ಧರು ಹಾಗೂ ಕಬೀರ್ ಪಂಥಿಯಂತಹ ಮತ್ತು ಇತರ ಪಂಥಗಳಿಂದ ಜೀವನವನ್ನು ಲೌಕಿಕಕ್ಕೆ ಅಳವಡಿಸಿಕೊಂಡು ಸ್ಥಾಪಿಸಲಾಗಿತ್ತು, ಅದರಲ್ಲಿ ಜೀವನದ ಪಾವಿತ್ರ್ಯವು ಮೂಲಭೂತ ನಿಯಮವಾಗಿತ್ತು ಹಾಗಾಗಿ ಯಾವುದೇ ಜೀವಿಯನ್ನು, ವಿಶೇಷವಾಗಿ ಮನುಷ್ಯನ ಜೀವ ತೆಗೆಯುವುದು ನಿಷೇಧವಾಗಿತ್ತು.

ನೀವು ಅನುಭವಿಸುವ ಎಲ್ಲಾ ಕೆಡುಕುಗಳು – ಹಸಿವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಖಾನೆಯ ಜೀವನದಿಂದ ನಿಮ್ಮ ದೇಶ ಎದುರಿಸುವ ಅವಮಾನಗಳು, ನಿಮ್ಮ ಜನರು ಸೈನಿಕರಾಗುವುದಕ್ಕೆ ಒಪ್ಪಿಕೊಳ್ಳುವುದನ್ನು ಮುಂದುವರೆಸುವ ತನಕ ಮುಂದುವರೆಯಲಿವೆ. ಪರಾವಲಂಬಿಜೀವಿಗಳು ಕೊಳೆಯಾದ ದೇಹಗಳಲ್ಲಿಯೇ ಆಹಾರ ಪಡೆದು ಬದುಕುತ್ತವೆ. ನಿಮ್ಮ ದೇಶ ತನ್ನ ನೈತಿಕ ಪರಿಶುದ್ಧತೆಯನ್ನು ಕಾಪಾಡಬೇಕು, ಹಾಗೂ ಅದು ಕೊಲೆ ಅಥವಾ ಕೊಲೆಗೆ ತಯ್ಯಾರಿಯಾಗುವುದರಿಂದ ಮುಕ್ತವಾಗುವ ಶುದ್ಧತೆಯ ಪ್ರಮಾಣದ್ದಾಗಿರಬೇಕು. ಆ ಪ್ರಮಾಣದಲ್ಲಿದ್ದಾಗ ನೀವು ಸದ್ಯಕ್ಕೆ ಸಮಸ್ಯೆಯಲ್ಲಿರುವ ಆಳ್ವಿಕೆಯಿಂದಲೂ ಮುಕ್ತವಾಗುವುದಕ್ಕೆ ಸಾಧ್ಯ. ನಿಮಗಾಗಿ ಇಂಗ್ಲಿಷರು ಏನೆಲ್ಲ ಮಾಡಿದ್ದಾರೆ, ಅವರು ಮಾಡಿದ ಕಲ್ಯಾಣ ಕೆಲಸಕ್ಕಾಗಿ ಧನ್ಯರಾಗಿರಬೇಕು ಹಾಗೂ ನಿಮ್ಮ ದೇಶದ ನಾಗರಿಕತೆಗೆಯೆಡೆಗೆ ಕೊಂಡೊಯ್ಯುವ ಎಲ್ಲ ಪ್ರಯತ್ನಗಳಿಗೆ ಕೈಜೋಡಿಸಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಆದರೆ ಇಂಗ್ಲಿಷ್ ಜನರ ’ಬಲಪ್ರಯೋಗದ ಸರಕಾರ’ಕ್ಕೆ ನೀವು ಸಹಾಯ ಮಾಡಕೂಡದು, ಹಾಗೂ ಯಾವುದೇ ಸಂದರ್ಭದಲ್ಲೂ ಹಿಂಸೆಯನ್ನು ಆಧಾರವಾಗಿಟ್ಟುಕೊಂಡು ಸ್ಥಾಪನೆಯಾದ ಸಂಘಟನೆಯಲ್ಲಿ ಭಾಗವಹಿಸಬಾರದು.

ಹಾಗಾಗಿ, ನನಗೆ ಅನಿಸುವುದೇನೆಂದರೆ, ಎಲ್ಲಾ ಶಿಕ್ಷಿತ ಹಿಂದೂಗಳ ಕರ್ತವ್ಯ ಇರುವುದು; ಜನಸ್ತೋಮಕ್ಕೆ ನಿಜವಾದ ಧರ್ಮವನ್ನು ಕಾಣದಂತೆ ಮುಚ್ಚಿಟ್ಟರುವ ಎಲ್ಲಾ ಪುರಾತನ ಮೂಢನಂಬಿಕೆಗಳನ್ನು ನಿಷೇಧಿಸುವುದು. ನಿಜವಾದ ಧರ್ಮ ಅಂದರೆ ಮಾನವನ ಆತ್ಮದ ದಿವ್ಯ ಜೀವಾಳದ ಅರಿವು ಹಾಗೂ ಯಾವುದನ್ನೂ ಹೊರತುಪಡಿಸದೇ ಪ್ರತಿಯೊಂದು ಜೀವಿಯ ಜೀವಕ್ಕೆ ಗೌರವ ಹಾಗೂ ಈ ತತ್ವಗಳನ್ನು ಎಷ್ಟು ಸಾಧ್ಯವೋ ಅಷ್ಟು ಹರಡುವುದು.

ನಾನು ಕಂಡಂತೆ, ನಿಮ್ಮ ಪ್ರಾಚೀನ ಮತ್ತು ಗಹನವಾದ ಧರ್ಮದಲ್ಲಿ ಈ ತತ್ವಗಳು ಹಾಗೆಯೇ ಕಾಣಿಸಿಕೊಳ್ಳದೇ ಇದ್ದರೂ, ವ್ಯಕ್ತಗೊಳ್ಳುತ್ತವೆ. ಹಾಗೂ ಅವುಗಳನ್ನು ಇತರರಿಗೆ ಕಾಣದಂತೆ ಮುಚ್ಚಿಟ್ಟರುವ ಹೊದಿಕೆಯಿಂದ ಮುಕ್ತಿ ನೀಡುವುದು ಮತ್ತು ಅಭಿವೃದ್ಧಿಪಡಿಸುವ ಕೆಲಸವಾಗಬೇಕಾಗಿದೆ. ಈ ರೀತಿಯ ಕಾರ್ಯವಿಧಾನ ಮಾತ್ರ ತಮ್ಮ ಮೇಲೆ ವಿಧಿಸಲಾದ ಕೆಡಕುಗಳಿಂದ ಬಿಡುಗಡೆಗೊಳಿಸಬಹುದು ಹಾಗೂ ತಾವು ಪ್ರಯತ್ನಪಡುತ್ತಿರುವ ಗುರಿಯನ್ನು ತಲುಪಲು ಅತ್ಯಂತ ಪರಿಣಾಮಕಾರಿಯಾಗಬಲ್ಲದು.

ನನ್ನ ಅಭಿಪ್ರಾಯವನ್ನು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದೇನೆ ಕ್ಷಮೆ ಇರಲಿ ಹಾಗೂ ನಂಬಿಕೆಯಿರಲಿ.
ನಿಮ್ಮ,.
(ಜುಲೈ 1901)

(ಅನುವಾದ): ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಿಂದ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಹಠಾತ್ ದಾಳಿ : ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐಆರ್‌ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್...

ದೆಹಲಿ| ಹೋಳಿ ಹಬ್ಬ ಸಡಗರದಲ್ಲಿ ಕುಡಿದು ವಾಹನ ಚಾಲನೆ; 1,200 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು

ಹೋಳಿ ಹಬ್ಬದಂದು ನಗರದಾದ್ಯಂತ ನಡೆಸಿದ ವಿಶೇಷ ಪರಿಶೀಲನೆಯಲ್ಲಿ ದೆಹಲಿ ಸಂಚಾರ ಪೊಲೀಸರು 1,200 ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ವಲಯದಿಂದ ಅತಿ ಹೆಚ್ಚು...

ತಮಿಳುನಾಡು: ಜಾತಿ ಜಗಳದಲ್ಲಿ ದಲಿತ ವ್ಯಕ್ತಿ, ಒಡಿಶಾ ವಲಸೆ ಕಾರ್ಮಿಕನ ಹತ್ಯೆ; ಹಿಂದೆಯೂ ಜಾತಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪಿಗಳು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಿಂದ ಜಾತಿ ಹಿಂಸಾಚಾರದ ಭಯಾನಕ ಘಟನೆ ವರದಿಯಾಗಿದೆ, ಪೆರುಂಪತ್ತು ಗ್ರಾಮದಲ್ಲಿ ನಡೆದ ಕ್ರೂರ ದಾಳಿಯಲ್ಲಿ ಅಂಗವಿಕಲ ದಲಿತ ವ್ಯಕ್ತಿ ಮತ್ತು ಒಡಿಶಾದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ.  ಆರೋಪಿಗಳಲ್ಲಿ ಇಬ್ಬರು ಕೆಲವು...

ರಾಜ್ಯಸಭಾ ಚುನಾವಣೆ: ಆರು ಜನರ ಹೆಸರು ಘೋಷಿಸಿದ ಕಾಂಗ್ರೆಸ್; ಸಿಂಘ್ವಿ-ನೇತಮ್ ಮರು ನಾಮನಿರ್ದೇಶನ

ರಾಜ್ಯಸಭೆಗೆ ಮುಂಬರುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ಆರು ಅಭ್ಯರ್ಥಿಗಳನ್ನು ಘೋಷಿಸಿದೆ. ಇಬ್ಬರು ಹಾಲಿ ಸದಸ್ಯರನ್ನು ಮತ್ತೆ ನಾಮನಿರ್ದೇಶನ ಮಾಡಿದ್ದು, ವಿವಿಧ ರಾಜ್ಯಗಳಿಂದ ಹಲವಾರು ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ರಾಜ್ಯಸಭಾ ಸದಸ್ಯರಾದ ಅಭಿಷೇಕ್ ಮನು...

ರಾಷ್ಟ್ರ ರಾಜಕಾರಣಕ್ಕೆ ನಿತೀಶ್ ಕುಮಾರ್; ರಾಜ್ಯಸಭೆ ಪ್ರವೇಶ ದೃಢಪಡಿಸಿದ ಬಿಹಾರ ಸಿಎಂ

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ನಿತೀಶ್ ಕುಮಾರ್, 20 ವರ್ಷಗಳಿಗೂ ಹೆಚ್ಚು ಕಾಲ ತಾವು ಹೊಂದಿದ್ದ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳುವುದಾಗಿ ದೃಢಪಡಿಸಿದ್ದಾರೆ. "ನನ್ನ ಸಂಸದೀಯ...

ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ : ಹಲವು ಅಧಿಕಾರಿಗಳ ಮನೆ, ಕಚೇರಿ ಶೋಧ

ರಾಜ್ಯಾದಾದ್ಯಂತ ವಿವಿಧ ಜಿಲ್ಲೆಗಳ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಗುರುವಾರ (ಮಾ.5) ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ,...

ಬಾಬಾ ಬುಡನ್‌ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸಲು ಅಡ್ಡಿ : ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸುವ ಕಾನೂನಾತ್ಮಕ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ದ ಗುರುವಾರ (ಮಾ.5) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಉರೂಸ್‌ ಸಂದರ್ಭದಲ್ಲಿ ಬಾಬಾ ಬುಡನ್‌ಗಿರಿಯ...

ಟ್ರಂಪ್ ಯುದ್ಧಾಧಿಕಾರಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಹಿನ್ನಡೆ; ಸೆನೆಟ್‌ನಲ್ಲಿ ನಿರ್ಣಯಕ್ಕೆ ಸೋಲು 

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧಾಧಿಕಾರಕ್ಕೆ ಲಗಾಮು ಹಾಕುವ ನಿರ್ಣಯಕ್ಕೆ ಅಮೆರಿಕ ಸೆನೆಟ್‌ನಲ್ಲಿ (ಸಂಸತ್ತಿನ ಮೇಲ್ಮನೆ) ಸೋಲಾಗಿದೆ. ಇದರಿಂದ ಪ್ರಸ್ತುತ ನಡೆಸುತ್ತಿರುವ ಇರಾನ್ ಮೇಲಿನ ದಾಳಿಯನ್ನು ಇನ್ನಷ್ಟು ಹೆಚ್ಚಿಸಲು ಟ್ರಂಪ್‌ಗೆ ಅನುಮತಿ ಸಿಕ್ಕಂತಾಗಿದೆ....

ಜಾತ್ಯತೀತ ತಾಣ ಬಾಬಾ ಬುಡನ್‌ ಗಿರಿಯಲ್ಲಿ ‘ವೈದಿಕ ಆಚರಣೆ’ಗೆ ವಿರೋಧ; ಕಾಂಗ್ರೆಸ್‌ ಸರ್ಕಾರದ ವಿರುದ್ದ ಪ್ರತಿಭಟನೆ

ಕೋಮುವಾದಿಗಳು ಎಷ್ಟೇ ವಿಷಯ ತಿರುಚುವ ಕೆಲಸ ಮಾಡಿದರೂ ಬಾಬಾ ಬುಡನ್ ಗಿರಿಯ ಜಾತ್ಯತೀತ ಹಿನ್ನೆಲೆಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಸೌಹಾರ್ಧ ಪರಂಪರೆಯನ್ನು ಬದಿಗೆ ಸರಿಸಿ, ವೈದಿಕ ಆಚರಣೆಗೆ ಅನುಮತಿ ನೀಡುವ ಮೂಲಕ ಹಿಂದುತ್ವ...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಜಲಾಂತರ್ಗಾಮಿ ದಾಳಿ: ಸಮುದ್ರದಲ್ಲಿ ಶವಗಳು ಪತ್ತೆ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಬುಧವಾರ ಜಲಾಂತರ್ಗಾಮಿ ದಾಳಿಯ ನಂತರ ಇರಾನ್ ನೌಕಾ ಯುದ್ಧನೌಕೆ ಐರಿಸ್ ದೇನಾ ಮುಳುಗಿದೆ ಎಂದು ವರದಿಯಾಗಿದೆ.  ಈ ದಾಳಿಯಲ್ಲಿ ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ,...