Homeನ್ಯಾಯ ಪಥ"ಜಾತಿಯ ಅಸ್ತಿತ್ವದಲ್ಲಿ ನಿಮ್ಮ ಧರ್ಮ ನೈತಿಕವಾಗಿ ವಿಕೃತಗೊಂಡಿದೆ": ಲಿಯೋ ಟಾಲ್‌ಸ್ಟಾಯ್

“ಜಾತಿಯ ಅಸ್ತಿತ್ವದಲ್ಲಿ ನಿಮ್ಮ ಧರ್ಮ ನೈತಿಕವಾಗಿ ವಿಕೃತಗೊಂಡಿದೆ”: ಲಿಯೋ ಟಾಲ್‌ಸ್ಟಾಯ್

- Advertisement -
- Advertisement -

’ಹಿಂದೂ ಪೇಪರ್ ಒಂದರ ಸಂಪಾದಕರಿಗೆ’: ಲಿಯೋ ಟಾಲ್‌ಸ್ಟಾಯ್ ಪತ್ರ

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಕೋರಿ ತಾರಕನಾಥ್ ದಾಸ್ ಅವರು ರಷಿಯಾದ ಖ್ಯಾತ ಸಾಹಿತಿ-ಚಿಂತಕ ಟಾಲ್‌ಸ್ಟಾಯ್ ಅವರಿಗೆ ಪತ್ರ ಬರೆದರು. ಅದಕ್ಕೆ ಪ್ರತಿಕಿಯೆಯಾಗಿ ಟಾಲ್‌ಸ್ಟಾಯ್ ಅವರು 1908ರ ಡಿಸೆಂಬರ್ 14ರಂದು ಒಂದು ಪತ್ರ ಬರೆದರು. ಆ ಪತ್ರವೇ ’ಅ ಲೆಟರ್ ಟು ಅ ಹಿಂದೂ’ ಎಂದು ಪ್ರಸಿದ್ಧವಾಗಿ, ಪುಸ್ತಕರೂಪದಲ್ಲೂ ಪ್ರಕಟವಾಯಿತು. ಅದರಿಂದ ಸ್ಫೂರ್ತಿ ಪಡೆದ ಮಹಾತ್ಮ ಗಾಂಧಿ ಟಾಲ್‌ಸ್ಟಾಯ್ ಚಿಂತನೆಗಳನ್ನು ಗಹನವಾಗಿ ಅಭ್ಯಸಿಸತೊಡಗುತ್ತಾರೆ ಹಾಗೂ ಅಹಿಂಸೆ ಮತ್ತು ಸತ್ಯಾಗ್ರಹದ ಬಗ್ಗೆ ಪ್ರೇರಣೆ ಪಡೆದುಕೊಳ್ಳುತ್ತಾರೆ. ತಾವು ಹೊರತರುತ್ತಿದ್ದ ’ಇಂಡಿಯನ್ ಒಪಿನಿಯನ್’ ಪತ್ರಿಕೆಯಲ್ಲಿ ಟಾಲ್‌ಸ್ಟಾಯ್ ಅವರ ಪತ್ರವನ್ನು ಪ್ರಕಟಿಸುತ್ತಾರೆ. ನಂತರ ಗಾಂಧಿ ಮತ್ತು ಟಾಲ್‌ಸ್ಟಾಯ್ ನಡುವೆಯೂ ಪತ್ರ ವ್ಯವಹಾರ ನಡೆಯುತ್ತದೆ. ಈ ಪತ್ರಗಳು ಅತ್ಯಂತ ಪರಿಚಿತ.

ಆದರೆ ಇದಕ್ಕೆ ಸುಮಾರು 8 ವರ್ಷಗಳ ಮುಂಚೆಯೇ ಒಂದು ಹಿಂದೂ ಪತ್ರಿಕೆಗೆ ಪ್ರತಿಕ್ರಿಯೆಯಾಗಿ ಟಾಲ್‌ಸ್ಟಾಯ್ ಒಂದು ಪತ್ರ ಬರೆದಿರುತ್ತಾರೆ. ಆ ಪತ್ರ ’ಮಾಸ್ಟರ್ ಆಂಡ್ ಮ್ಯಾನ್; ದಿ ಕ್ರುಟ್ಜೆರ್ ಸೊನಾಟ ಮಿಸಲೇನಿಯಸ್’ ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಪತ್ರದ ದಿನವನ್ನು ಜುಲೈ 1901 ಎಂದು ನಮೂದಿಸಲಾಗಿದೆ. ’ಅ ಹಂಡ್ರೆಡ್ ಇಯರ್‍ಸ್ ಆಫ್ ದ ಹಿಂದು – ದ ಎಪಿಕ್ ಸ್ಟೋರಿ ಆಫ್ ಇಂಡಿಯನ್ ನ್ಯಾಷನಲಿಸಂ’ ಪುಸ್ತಕದಲ್ಲಿ ಸಿಗುವ ಮಾಹಿತಿಯಂತೆ, ಸೆಪ್ಟಂಬರ್ 1901ರಲ್ಲಿ ಮದ್ರಾಸ್ ಜರ್‍ನಲ್ ’ಆರ್ಯ’ಗೆ ಟಾಲ್‌ಸ್ಟಾಯ್ ಈ ಪತ್ರ ಬರೆದಿರುತ್ತಾರೆ. ಈ ಪತ್ರವನ್ನು ’ದ ಹಿಂದೂ’ ಸಂಪಾದಕೀಯ ಮರುಪ್ರಕಟಿಸಿ ಅದಕ್ಕೆ ಪ್ರತಿಕ್ರಿಯೆಯನ್ನು ಕೂಡ ನೀಡಿರುತ್ತದೆ. 1901 ರಲ್ಲಿ, ಈ ದೇಶದಿಂದ ಅಷ್ಟು ದೂರದಲ್ಲಿದ್ದರೂ ಇಲ್ಲಿನ ಸ್ಥಿತಿಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಟಾಲ್‌ಸ್ಟಾಯ್ ಪತ್ರ ಇವತ್ತಿಗೂ ಚಿಂತನಾರ್ಹವಾಗಿದೆ.

ಡಿಯರ್ ಸರ್,
ನಿಮ್ಮ ಆಸಕ್ತಿದಾಯಕ ಪತ್ರಕ್ಕೆ ಧನ್ಯವಾದಗಳು. ನಿಮ್ಮ ದೇಶದ ಸಾಮಾಜಿಕ ಸಮಸ್ಯೆಗಳಿಗೆ ಯೂರೋಪ್ ನೀಡುವ ಪರಿಹಾರಗಳನ್ನು ನಿಮ್ಮ ದೇಶ ಒಪ್ಪಿಕೊಳ್ಳುವುದಿಲ್ಲ ಎಂಬ ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ಸಹಮತಿ ವ್ಯಕ್ತಪಡಿಸುತ್ತೇನೆ ಹಾಗೂ ವಾಸ್ತವದಲ್ಲಿ ಅದೊಂದು ಪರಿಹಾರವೂ ಅಲ್ಲ.

ಬಲಪ್ರಯೋಗದ ಆಧಾರದ ಮೇಲೆ ಸ್ಥಾಪಿಸಲಾದ ಒಂದು ಸಮಾಜ ಅಥವಾ ಜನರ ಗುಂಪು ಒಂದು ಪುರಾತನ/ಅನಾಗರಿಕ ರಾಜ್ಯವಷ್ಟೇ ಅಲ್ಲ, ಅದೊಂದು ಅತ್ಯಂತ ಅಪಾಯಕಾರಿ ಪರಿಸ್ಥಿತಿ ಕೂಡ. ಇಂತಹ ಒಂದು ಸಮಾಜವನ್ನು ಒಗ್ಗೂಡಿಸುವ ಸಂಬಂಧವನ್ನು ಯಾವ ಕಾಲದಲ್ಲಾದರೂ ಛಿದ್ರಗೊಳಿಸಬಹುದು ಹಾಗೂ ಭೀಕರ ವಿಪತ್ತುಗಳು ಆ ಸಮಾಜವನ್ನು ಮೀರಿಸಬಹುದು. ಯೂರೋಪಿನ ಎಲ್ಲಾ ರಾಷ್ಟ್ರಗಳೂ ಇದೇ ಪರಿಸ್ಥಿತಿಯಲ್ಲಿವೆ.

ಪ್ರೀತಿಸುವ ಸಾಮರ್ಥ್ಯದ ಕೊಡುಗೆಯನ್ನು ಪಡೆದಿರುವ ವಿವೇಚನೆಯುಳ್ಳವರಿಗೆ ಸಾಮಾಜಿಕ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರವು ಬಲಪ್ರಯೋಗದ ನಿರ್ನಾಮದಲ್ಲಿ ಅಡಗಿರುತ್ತದೆ ಹಾಗೂ ಪರಸ್ಪರ ಗೌರವದ ಆಧಾರದ ಮೇಲೆ ಸ್ಥಾಪಿಸಲಾದ ಒಂದು ಸಮಾಜದ ಸಂಘಟನೆಯಲ್ಲಿ ಹಾಗೂ ಎಲ್ಲರೂ ಸ್ವಇಚ್ಛೆಯಿಂದ ಒಪ್ಪಿಕೊಂಡ ವಿವೇಚನೆಯುಳ್ಳ ಸಿದ್ಧಾಂತಗಳ ಆಧಾರದ ಮೇಲೆ ಇರುತ್ತದೆ. ನಿಜವಾದ ಧರ್ಮದ ಅಭಿವೃದ್ಧಿಯಿಂದ ಮಾತ್ರ ಇಂತಹ ಪರಿಸ್ಥಿತಿಯನ್ನು ತಲುಪಲು ಸಾಧ್ಯ. ಇದರ ಮೂಲಕ ನಾನು ಸೂಚಿಸುತ್ತಿರುವುದೇನೆಂದರೆ, ಎಲ್ಲಾ ಧರ್ಮಗಳ ಮೂಲಭೂತ ತತ್ವಗಳನ್ನು. ಅವುಗಳು: ಮೊದಲನೆಯದು ಮಾನವನ ದಿವ್ಯ ಆತ್ಮದ ಜೀವಾಳದ ಅರಿವು ಹಾಗೂ ಎರಡನೆಯದಾಗಿ ಅದರ ಸಾಕಾರತೆಗೆ ಇರುವ ಗೌರವ.

ನಿಮ್ಮ ಧರ್ಮ ಅತ್ಯಂತ ಪುರಾತನವಾದದ್ದು ಹಾಗೂ ಆಧ್ಯಾತ್ಮದ ಸರ್ವಸ್ವವಾದ ’ಆತ್ಮನ್ಗೆ ಮತ್ತು ಮಾನವನಿಗೆ ಇರುವ ಸಂಬಂಧದ ಮೆಟಾಫಿಸಿಕಲ್ ವ್ಯಾಖ್ಯಾನದಲ್ಲೂ ಅತ್ಯಂತ ಉನ್ನತವಾದದ್ದು. ಆದರೆ ಅದು ತನ್ನ ನೈತಿಕತೆಯಲ್ಲಿ ವಿಕೃತಗೊಂಡಿದೆ; ಆ ವಿಕೃತಗೊಂಡಿರುವ ನೈತಿಕತೆ ಎಂದರೆ ಜಾತಿಯ ಅಸ್ತಿತ್ವದಲ್ಲಿ ಜೀವನವನ್ನು ಲೌಕಿಕವಾಗಿ ಅಳವಡಿಸಿಕೊಂಡಿರುವುದು. ನನಗೆ ಗೊತ್ತಿರುವಂತೆ, ಜೈನರು, ಬೌದ್ಧರು ಹಾಗೂ ಕಬೀರ್ ಪಂಥಿಯಂತಹ ಮತ್ತು ಇತರ ಪಂಥಗಳಿಂದ ಜೀವನವನ್ನು ಲೌಕಿಕಕ್ಕೆ ಅಳವಡಿಸಿಕೊಂಡು ಸ್ಥಾಪಿಸಲಾಗಿತ್ತು, ಅದರಲ್ಲಿ ಜೀವನದ ಪಾವಿತ್ರ್ಯವು ಮೂಲಭೂತ ನಿಯಮವಾಗಿತ್ತು ಹಾಗಾಗಿ ಯಾವುದೇ ಜೀವಿಯನ್ನು, ವಿಶೇಷವಾಗಿ ಮನುಷ್ಯನ ಜೀವ ತೆಗೆಯುವುದು ನಿಷೇಧವಾಗಿತ್ತು.

ನೀವು ಅನುಭವಿಸುವ ಎಲ್ಲಾ ಕೆಡುಕುಗಳು – ಹಸಿವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಖಾನೆಯ ಜೀವನದಿಂದ ನಿಮ್ಮ ದೇಶ ಎದುರಿಸುವ ಅವಮಾನಗಳು, ನಿಮ್ಮ ಜನರು ಸೈನಿಕರಾಗುವುದಕ್ಕೆ ಒಪ್ಪಿಕೊಳ್ಳುವುದನ್ನು ಮುಂದುವರೆಸುವ ತನಕ ಮುಂದುವರೆಯಲಿವೆ. ಪರಾವಲಂಬಿಜೀವಿಗಳು ಕೊಳೆಯಾದ ದೇಹಗಳಲ್ಲಿಯೇ ಆಹಾರ ಪಡೆದು ಬದುಕುತ್ತವೆ. ನಿಮ್ಮ ದೇಶ ತನ್ನ ನೈತಿಕ ಪರಿಶುದ್ಧತೆಯನ್ನು ಕಾಪಾಡಬೇಕು, ಹಾಗೂ ಅದು ಕೊಲೆ ಅಥವಾ ಕೊಲೆಗೆ ತಯ್ಯಾರಿಯಾಗುವುದರಿಂದ ಮುಕ್ತವಾಗುವ ಶುದ್ಧತೆಯ ಪ್ರಮಾಣದ್ದಾಗಿರಬೇಕು. ಆ ಪ್ರಮಾಣದಲ್ಲಿದ್ದಾಗ ನೀವು ಸದ್ಯಕ್ಕೆ ಸಮಸ್ಯೆಯಲ್ಲಿರುವ ಆಳ್ವಿಕೆಯಿಂದಲೂ ಮುಕ್ತವಾಗುವುದಕ್ಕೆ ಸಾಧ್ಯ. ನಿಮಗಾಗಿ ಇಂಗ್ಲಿಷರು ಏನೆಲ್ಲ ಮಾಡಿದ್ದಾರೆ, ಅವರು ಮಾಡಿದ ಕಲ್ಯಾಣ ಕೆಲಸಕ್ಕಾಗಿ ಧನ್ಯರಾಗಿರಬೇಕು ಹಾಗೂ ನಿಮ್ಮ ದೇಶದ ನಾಗರಿಕತೆಗೆಯೆಡೆಗೆ ಕೊಂಡೊಯ್ಯುವ ಎಲ್ಲ ಪ್ರಯತ್ನಗಳಿಗೆ ಕೈಜೋಡಿಸಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಆದರೆ ಇಂಗ್ಲಿಷ್ ಜನರ ’ಬಲಪ್ರಯೋಗದ ಸರಕಾರ’ಕ್ಕೆ ನೀವು ಸಹಾಯ ಮಾಡಕೂಡದು, ಹಾಗೂ ಯಾವುದೇ ಸಂದರ್ಭದಲ್ಲೂ ಹಿಂಸೆಯನ್ನು ಆಧಾರವಾಗಿಟ್ಟುಕೊಂಡು ಸ್ಥಾಪನೆಯಾದ ಸಂಘಟನೆಯಲ್ಲಿ ಭಾಗವಹಿಸಬಾರದು.

ಹಾಗಾಗಿ, ನನಗೆ ಅನಿಸುವುದೇನೆಂದರೆ, ಎಲ್ಲಾ ಶಿಕ್ಷಿತ ಹಿಂದೂಗಳ ಕರ್ತವ್ಯ ಇರುವುದು; ಜನಸ್ತೋಮಕ್ಕೆ ನಿಜವಾದ ಧರ್ಮವನ್ನು ಕಾಣದಂತೆ ಮುಚ್ಚಿಟ್ಟರುವ ಎಲ್ಲಾ ಪುರಾತನ ಮೂಢನಂಬಿಕೆಗಳನ್ನು ನಿಷೇಧಿಸುವುದು. ನಿಜವಾದ ಧರ್ಮ ಅಂದರೆ ಮಾನವನ ಆತ್ಮದ ದಿವ್ಯ ಜೀವಾಳದ ಅರಿವು ಹಾಗೂ ಯಾವುದನ್ನೂ ಹೊರತುಪಡಿಸದೇ ಪ್ರತಿಯೊಂದು ಜೀವಿಯ ಜೀವಕ್ಕೆ ಗೌರವ ಹಾಗೂ ಈ ತತ್ವಗಳನ್ನು ಎಷ್ಟು ಸಾಧ್ಯವೋ ಅಷ್ಟು ಹರಡುವುದು.

ನಾನು ಕಂಡಂತೆ, ನಿಮ್ಮ ಪ್ರಾಚೀನ ಮತ್ತು ಗಹನವಾದ ಧರ್ಮದಲ್ಲಿ ಈ ತತ್ವಗಳು ಹಾಗೆಯೇ ಕಾಣಿಸಿಕೊಳ್ಳದೇ ಇದ್ದರೂ, ವ್ಯಕ್ತಗೊಳ್ಳುತ್ತವೆ. ಹಾಗೂ ಅವುಗಳನ್ನು ಇತರರಿಗೆ ಕಾಣದಂತೆ ಮುಚ್ಚಿಟ್ಟರುವ ಹೊದಿಕೆಯಿಂದ ಮುಕ್ತಿ ನೀಡುವುದು ಮತ್ತು ಅಭಿವೃದ್ಧಿಪಡಿಸುವ ಕೆಲಸವಾಗಬೇಕಾಗಿದೆ. ಈ ರೀತಿಯ ಕಾರ್ಯವಿಧಾನ ಮಾತ್ರ ತಮ್ಮ ಮೇಲೆ ವಿಧಿಸಲಾದ ಕೆಡಕುಗಳಿಂದ ಬಿಡುಗಡೆಗೊಳಿಸಬಹುದು ಹಾಗೂ ತಾವು ಪ್ರಯತ್ನಪಡುತ್ತಿರುವ ಗುರಿಯನ್ನು ತಲುಪಲು ಅತ್ಯಂತ ಪರಿಣಾಮಕಾರಿಯಾಗಬಲ್ಲದು.

ನನ್ನ ಅಭಿಪ್ರಾಯವನ್ನು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದೇನೆ ಕ್ಷಮೆ ಇರಲಿ ಹಾಗೂ ನಂಬಿಕೆಯಿರಲಿ.
ನಿಮ್ಮ,.
(ಜುಲೈ 1901)

(ಅನುವಾದ): ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...