Homeನ್ಯಾಯ ಪಥ"ಜಾತಿಯ ಅಸ್ತಿತ್ವದಲ್ಲಿ ನಿಮ್ಮ ಧರ್ಮ ನೈತಿಕವಾಗಿ ವಿಕೃತಗೊಂಡಿದೆ": ಲಿಯೋ ಟಾಲ್‌ಸ್ಟಾಯ್

“ಜಾತಿಯ ಅಸ್ತಿತ್ವದಲ್ಲಿ ನಿಮ್ಮ ಧರ್ಮ ನೈತಿಕವಾಗಿ ವಿಕೃತಗೊಂಡಿದೆ”: ಲಿಯೋ ಟಾಲ್‌ಸ್ಟಾಯ್

- Advertisement -
- Advertisement -

’ಹಿಂದೂ ಪೇಪರ್ ಒಂದರ ಸಂಪಾದಕರಿಗೆ’: ಲಿಯೋ ಟಾಲ್‌ಸ್ಟಾಯ್ ಪತ್ರ

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಕೋರಿ ತಾರಕನಾಥ್ ದಾಸ್ ಅವರು ರಷಿಯಾದ ಖ್ಯಾತ ಸಾಹಿತಿ-ಚಿಂತಕ ಟಾಲ್‌ಸ್ಟಾಯ್ ಅವರಿಗೆ ಪತ್ರ ಬರೆದರು. ಅದಕ್ಕೆ ಪ್ರತಿಕಿಯೆಯಾಗಿ ಟಾಲ್‌ಸ್ಟಾಯ್ ಅವರು 1908ರ ಡಿಸೆಂಬರ್ 14ರಂದು ಒಂದು ಪತ್ರ ಬರೆದರು. ಆ ಪತ್ರವೇ ’ಅ ಲೆಟರ್ ಟು ಅ ಹಿಂದೂ’ ಎಂದು ಪ್ರಸಿದ್ಧವಾಗಿ, ಪುಸ್ತಕರೂಪದಲ್ಲೂ ಪ್ರಕಟವಾಯಿತು. ಅದರಿಂದ ಸ್ಫೂರ್ತಿ ಪಡೆದ ಮಹಾತ್ಮ ಗಾಂಧಿ ಟಾಲ್‌ಸ್ಟಾಯ್ ಚಿಂತನೆಗಳನ್ನು ಗಹನವಾಗಿ ಅಭ್ಯಸಿಸತೊಡಗುತ್ತಾರೆ ಹಾಗೂ ಅಹಿಂಸೆ ಮತ್ತು ಸತ್ಯಾಗ್ರಹದ ಬಗ್ಗೆ ಪ್ರೇರಣೆ ಪಡೆದುಕೊಳ್ಳುತ್ತಾರೆ. ತಾವು ಹೊರತರುತ್ತಿದ್ದ ’ಇಂಡಿಯನ್ ಒಪಿನಿಯನ್’ ಪತ್ರಿಕೆಯಲ್ಲಿ ಟಾಲ್‌ಸ್ಟಾಯ್ ಅವರ ಪತ್ರವನ್ನು ಪ್ರಕಟಿಸುತ್ತಾರೆ. ನಂತರ ಗಾಂಧಿ ಮತ್ತು ಟಾಲ್‌ಸ್ಟಾಯ್ ನಡುವೆಯೂ ಪತ್ರ ವ್ಯವಹಾರ ನಡೆಯುತ್ತದೆ. ಈ ಪತ್ರಗಳು ಅತ್ಯಂತ ಪರಿಚಿತ.

ಆದರೆ ಇದಕ್ಕೆ ಸುಮಾರು 8 ವರ್ಷಗಳ ಮುಂಚೆಯೇ ಒಂದು ಹಿಂದೂ ಪತ್ರಿಕೆಗೆ ಪ್ರತಿಕ್ರಿಯೆಯಾಗಿ ಟಾಲ್‌ಸ್ಟಾಯ್ ಒಂದು ಪತ್ರ ಬರೆದಿರುತ್ತಾರೆ. ಆ ಪತ್ರ ’ಮಾಸ್ಟರ್ ಆಂಡ್ ಮ್ಯಾನ್; ದಿ ಕ್ರುಟ್ಜೆರ್ ಸೊನಾಟ ಮಿಸಲೇನಿಯಸ್’ ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಪತ್ರದ ದಿನವನ್ನು ಜುಲೈ 1901 ಎಂದು ನಮೂದಿಸಲಾಗಿದೆ. ’ಅ ಹಂಡ್ರೆಡ್ ಇಯರ್‍ಸ್ ಆಫ್ ದ ಹಿಂದು – ದ ಎಪಿಕ್ ಸ್ಟೋರಿ ಆಫ್ ಇಂಡಿಯನ್ ನ್ಯಾಷನಲಿಸಂ’ ಪುಸ್ತಕದಲ್ಲಿ ಸಿಗುವ ಮಾಹಿತಿಯಂತೆ, ಸೆಪ್ಟಂಬರ್ 1901ರಲ್ಲಿ ಮದ್ರಾಸ್ ಜರ್‍ನಲ್ ’ಆರ್ಯ’ಗೆ ಟಾಲ್‌ಸ್ಟಾಯ್ ಈ ಪತ್ರ ಬರೆದಿರುತ್ತಾರೆ. ಈ ಪತ್ರವನ್ನು ’ದ ಹಿಂದೂ’ ಸಂಪಾದಕೀಯ ಮರುಪ್ರಕಟಿಸಿ ಅದಕ್ಕೆ ಪ್ರತಿಕ್ರಿಯೆಯನ್ನು ಕೂಡ ನೀಡಿರುತ್ತದೆ. 1901 ರಲ್ಲಿ, ಈ ದೇಶದಿಂದ ಅಷ್ಟು ದೂರದಲ್ಲಿದ್ದರೂ ಇಲ್ಲಿನ ಸ್ಥಿತಿಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಟಾಲ್‌ಸ್ಟಾಯ್ ಪತ್ರ ಇವತ್ತಿಗೂ ಚಿಂತನಾರ್ಹವಾಗಿದೆ.

ಡಿಯರ್ ಸರ್,
ನಿಮ್ಮ ಆಸಕ್ತಿದಾಯಕ ಪತ್ರಕ್ಕೆ ಧನ್ಯವಾದಗಳು. ನಿಮ್ಮ ದೇಶದ ಸಾಮಾಜಿಕ ಸಮಸ್ಯೆಗಳಿಗೆ ಯೂರೋಪ್ ನೀಡುವ ಪರಿಹಾರಗಳನ್ನು ನಿಮ್ಮ ದೇಶ ಒಪ್ಪಿಕೊಳ್ಳುವುದಿಲ್ಲ ಎಂಬ ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ಸಹಮತಿ ವ್ಯಕ್ತಪಡಿಸುತ್ತೇನೆ ಹಾಗೂ ವಾಸ್ತವದಲ್ಲಿ ಅದೊಂದು ಪರಿಹಾರವೂ ಅಲ್ಲ.

ಬಲಪ್ರಯೋಗದ ಆಧಾರದ ಮೇಲೆ ಸ್ಥಾಪಿಸಲಾದ ಒಂದು ಸಮಾಜ ಅಥವಾ ಜನರ ಗುಂಪು ಒಂದು ಪುರಾತನ/ಅನಾಗರಿಕ ರಾಜ್ಯವಷ್ಟೇ ಅಲ್ಲ, ಅದೊಂದು ಅತ್ಯಂತ ಅಪಾಯಕಾರಿ ಪರಿಸ್ಥಿತಿ ಕೂಡ. ಇಂತಹ ಒಂದು ಸಮಾಜವನ್ನು ಒಗ್ಗೂಡಿಸುವ ಸಂಬಂಧವನ್ನು ಯಾವ ಕಾಲದಲ್ಲಾದರೂ ಛಿದ್ರಗೊಳಿಸಬಹುದು ಹಾಗೂ ಭೀಕರ ವಿಪತ್ತುಗಳು ಆ ಸಮಾಜವನ್ನು ಮೀರಿಸಬಹುದು. ಯೂರೋಪಿನ ಎಲ್ಲಾ ರಾಷ್ಟ್ರಗಳೂ ಇದೇ ಪರಿಸ್ಥಿತಿಯಲ್ಲಿವೆ.

ಪ್ರೀತಿಸುವ ಸಾಮರ್ಥ್ಯದ ಕೊಡುಗೆಯನ್ನು ಪಡೆದಿರುವ ವಿವೇಚನೆಯುಳ್ಳವರಿಗೆ ಸಾಮಾಜಿಕ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರವು ಬಲಪ್ರಯೋಗದ ನಿರ್ನಾಮದಲ್ಲಿ ಅಡಗಿರುತ್ತದೆ ಹಾಗೂ ಪರಸ್ಪರ ಗೌರವದ ಆಧಾರದ ಮೇಲೆ ಸ್ಥಾಪಿಸಲಾದ ಒಂದು ಸಮಾಜದ ಸಂಘಟನೆಯಲ್ಲಿ ಹಾಗೂ ಎಲ್ಲರೂ ಸ್ವಇಚ್ಛೆಯಿಂದ ಒಪ್ಪಿಕೊಂಡ ವಿವೇಚನೆಯುಳ್ಳ ಸಿದ್ಧಾಂತಗಳ ಆಧಾರದ ಮೇಲೆ ಇರುತ್ತದೆ. ನಿಜವಾದ ಧರ್ಮದ ಅಭಿವೃದ್ಧಿಯಿಂದ ಮಾತ್ರ ಇಂತಹ ಪರಿಸ್ಥಿತಿಯನ್ನು ತಲುಪಲು ಸಾಧ್ಯ. ಇದರ ಮೂಲಕ ನಾನು ಸೂಚಿಸುತ್ತಿರುವುದೇನೆಂದರೆ, ಎಲ್ಲಾ ಧರ್ಮಗಳ ಮೂಲಭೂತ ತತ್ವಗಳನ್ನು. ಅವುಗಳು: ಮೊದಲನೆಯದು ಮಾನವನ ದಿವ್ಯ ಆತ್ಮದ ಜೀವಾಳದ ಅರಿವು ಹಾಗೂ ಎರಡನೆಯದಾಗಿ ಅದರ ಸಾಕಾರತೆಗೆ ಇರುವ ಗೌರವ.

ನಿಮ್ಮ ಧರ್ಮ ಅತ್ಯಂತ ಪುರಾತನವಾದದ್ದು ಹಾಗೂ ಆಧ್ಯಾತ್ಮದ ಸರ್ವಸ್ವವಾದ ’ಆತ್ಮನ್ಗೆ ಮತ್ತು ಮಾನವನಿಗೆ ಇರುವ ಸಂಬಂಧದ ಮೆಟಾಫಿಸಿಕಲ್ ವ್ಯಾಖ್ಯಾನದಲ್ಲೂ ಅತ್ಯಂತ ಉನ್ನತವಾದದ್ದು. ಆದರೆ ಅದು ತನ್ನ ನೈತಿಕತೆಯಲ್ಲಿ ವಿಕೃತಗೊಂಡಿದೆ; ಆ ವಿಕೃತಗೊಂಡಿರುವ ನೈತಿಕತೆ ಎಂದರೆ ಜಾತಿಯ ಅಸ್ತಿತ್ವದಲ್ಲಿ ಜೀವನವನ್ನು ಲೌಕಿಕವಾಗಿ ಅಳವಡಿಸಿಕೊಂಡಿರುವುದು. ನನಗೆ ಗೊತ್ತಿರುವಂತೆ, ಜೈನರು, ಬೌದ್ಧರು ಹಾಗೂ ಕಬೀರ್ ಪಂಥಿಯಂತಹ ಮತ್ತು ಇತರ ಪಂಥಗಳಿಂದ ಜೀವನವನ್ನು ಲೌಕಿಕಕ್ಕೆ ಅಳವಡಿಸಿಕೊಂಡು ಸ್ಥಾಪಿಸಲಾಗಿತ್ತು, ಅದರಲ್ಲಿ ಜೀವನದ ಪಾವಿತ್ರ್ಯವು ಮೂಲಭೂತ ನಿಯಮವಾಗಿತ್ತು ಹಾಗಾಗಿ ಯಾವುದೇ ಜೀವಿಯನ್ನು, ವಿಶೇಷವಾಗಿ ಮನುಷ್ಯನ ಜೀವ ತೆಗೆಯುವುದು ನಿಷೇಧವಾಗಿತ್ತು.

ನೀವು ಅನುಭವಿಸುವ ಎಲ್ಲಾ ಕೆಡುಕುಗಳು – ಹಸಿವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಖಾನೆಯ ಜೀವನದಿಂದ ನಿಮ್ಮ ದೇಶ ಎದುರಿಸುವ ಅವಮಾನಗಳು, ನಿಮ್ಮ ಜನರು ಸೈನಿಕರಾಗುವುದಕ್ಕೆ ಒಪ್ಪಿಕೊಳ್ಳುವುದನ್ನು ಮುಂದುವರೆಸುವ ತನಕ ಮುಂದುವರೆಯಲಿವೆ. ಪರಾವಲಂಬಿಜೀವಿಗಳು ಕೊಳೆಯಾದ ದೇಹಗಳಲ್ಲಿಯೇ ಆಹಾರ ಪಡೆದು ಬದುಕುತ್ತವೆ. ನಿಮ್ಮ ದೇಶ ತನ್ನ ನೈತಿಕ ಪರಿಶುದ್ಧತೆಯನ್ನು ಕಾಪಾಡಬೇಕು, ಹಾಗೂ ಅದು ಕೊಲೆ ಅಥವಾ ಕೊಲೆಗೆ ತಯ್ಯಾರಿಯಾಗುವುದರಿಂದ ಮುಕ್ತವಾಗುವ ಶುದ್ಧತೆಯ ಪ್ರಮಾಣದ್ದಾಗಿರಬೇಕು. ಆ ಪ್ರಮಾಣದಲ್ಲಿದ್ದಾಗ ನೀವು ಸದ್ಯಕ್ಕೆ ಸಮಸ್ಯೆಯಲ್ಲಿರುವ ಆಳ್ವಿಕೆಯಿಂದಲೂ ಮುಕ್ತವಾಗುವುದಕ್ಕೆ ಸಾಧ್ಯ. ನಿಮಗಾಗಿ ಇಂಗ್ಲಿಷರು ಏನೆಲ್ಲ ಮಾಡಿದ್ದಾರೆ, ಅವರು ಮಾಡಿದ ಕಲ್ಯಾಣ ಕೆಲಸಕ್ಕಾಗಿ ಧನ್ಯರಾಗಿರಬೇಕು ಹಾಗೂ ನಿಮ್ಮ ದೇಶದ ನಾಗರಿಕತೆಗೆಯೆಡೆಗೆ ಕೊಂಡೊಯ್ಯುವ ಎಲ್ಲ ಪ್ರಯತ್ನಗಳಿಗೆ ಕೈಜೋಡಿಸಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಆದರೆ ಇಂಗ್ಲಿಷ್ ಜನರ ’ಬಲಪ್ರಯೋಗದ ಸರಕಾರ’ಕ್ಕೆ ನೀವು ಸಹಾಯ ಮಾಡಕೂಡದು, ಹಾಗೂ ಯಾವುದೇ ಸಂದರ್ಭದಲ್ಲೂ ಹಿಂಸೆಯನ್ನು ಆಧಾರವಾಗಿಟ್ಟುಕೊಂಡು ಸ್ಥಾಪನೆಯಾದ ಸಂಘಟನೆಯಲ್ಲಿ ಭಾಗವಹಿಸಬಾರದು.

ಹಾಗಾಗಿ, ನನಗೆ ಅನಿಸುವುದೇನೆಂದರೆ, ಎಲ್ಲಾ ಶಿಕ್ಷಿತ ಹಿಂದೂಗಳ ಕರ್ತವ್ಯ ಇರುವುದು; ಜನಸ್ತೋಮಕ್ಕೆ ನಿಜವಾದ ಧರ್ಮವನ್ನು ಕಾಣದಂತೆ ಮುಚ್ಚಿಟ್ಟರುವ ಎಲ್ಲಾ ಪುರಾತನ ಮೂಢನಂಬಿಕೆಗಳನ್ನು ನಿಷೇಧಿಸುವುದು. ನಿಜವಾದ ಧರ್ಮ ಅಂದರೆ ಮಾನವನ ಆತ್ಮದ ದಿವ್ಯ ಜೀವಾಳದ ಅರಿವು ಹಾಗೂ ಯಾವುದನ್ನೂ ಹೊರತುಪಡಿಸದೇ ಪ್ರತಿಯೊಂದು ಜೀವಿಯ ಜೀವಕ್ಕೆ ಗೌರವ ಹಾಗೂ ಈ ತತ್ವಗಳನ್ನು ಎಷ್ಟು ಸಾಧ್ಯವೋ ಅಷ್ಟು ಹರಡುವುದು.

ನಾನು ಕಂಡಂತೆ, ನಿಮ್ಮ ಪ್ರಾಚೀನ ಮತ್ತು ಗಹನವಾದ ಧರ್ಮದಲ್ಲಿ ಈ ತತ್ವಗಳು ಹಾಗೆಯೇ ಕಾಣಿಸಿಕೊಳ್ಳದೇ ಇದ್ದರೂ, ವ್ಯಕ್ತಗೊಳ್ಳುತ್ತವೆ. ಹಾಗೂ ಅವುಗಳನ್ನು ಇತರರಿಗೆ ಕಾಣದಂತೆ ಮುಚ್ಚಿಟ್ಟರುವ ಹೊದಿಕೆಯಿಂದ ಮುಕ್ತಿ ನೀಡುವುದು ಮತ್ತು ಅಭಿವೃದ್ಧಿಪಡಿಸುವ ಕೆಲಸವಾಗಬೇಕಾಗಿದೆ. ಈ ರೀತಿಯ ಕಾರ್ಯವಿಧಾನ ಮಾತ್ರ ತಮ್ಮ ಮೇಲೆ ವಿಧಿಸಲಾದ ಕೆಡಕುಗಳಿಂದ ಬಿಡುಗಡೆಗೊಳಿಸಬಹುದು ಹಾಗೂ ತಾವು ಪ್ರಯತ್ನಪಡುತ್ತಿರುವ ಗುರಿಯನ್ನು ತಲುಪಲು ಅತ್ಯಂತ ಪರಿಣಾಮಕಾರಿಯಾಗಬಲ್ಲದು.

ನನ್ನ ಅಭಿಪ್ರಾಯವನ್ನು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದೇನೆ ಕ್ಷಮೆ ಇರಲಿ ಹಾಗೂ ನಂಬಿಕೆಯಿರಲಿ.
ನಿಮ್ಮ,.
(ಜುಲೈ 1901)

(ಅನುವಾದ): ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...