Homeಅಂಕಣಗಳುಹಿರಿಯೂರಿನಲ್ಲಿ ಮೇ 25, 26ರಂದು ಸಹಜ ಕೃಷಿಯ ಕುರಿತು ಕಾರ್ಯಾಗಾರ

ಹಿರಿಯೂರಿನಲ್ಲಿ ಮೇ 25, 26ರಂದು ಸಹಜ ಕೃಷಿಯ ಕುರಿತು ಕಾರ್ಯಾಗಾರ

ಸಹಜ ಕೃಷಿ ತಜ್ಞ ಅವಿನಾಶ್ ರಿಂದ ತರಬೇತಿ

- Advertisement -
- Advertisement -

2019 ಮೇ 25 ಮತ್ತು 26ನೇ ತಾರೀಖಿನಂದು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೋಕಿನ, ಐಮಂಗಲ ಹೋಬಳಿಯ ವದ್ದಿಕೆರೆಯಲ್ಲಿ, ಬೆಳಕಿನ ಬೇಸಾಯ ಅಥವಾ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಯಲಿದೆ. ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಪರಿಣಿತಿಯನ್ನು ಪಡೆದಿರುವ ಅವಿನಾಶ್.ಟಿ.ಜಿ.ಎಸ್ ಅದನ್ನು ನಡೆಸಿಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೃಷಿ ಪದ್ಧತಿಯ ಕೆಲವು ಸಂಗತಿಗಳ ಕುರಿತು ಸ್ವತಃ ಅವಿನಾಶ್ ಅವರೇ ಇಲ್ಲಿ ಬರೆದಿದ್ದಾರೆ. ಓದಿ ಮತ್ತು ತರಬೇತಿಯ ಕುರಿತು ಆಸಕ್ತಿ ಇದ್ದವರು, ಲೇಖನದ ಕೊನೆಯಲ್ಲಿರುವ ಫೋನ್ ನಂಬರ್‍ಗಳನ್ನು ಸಂಪರ್ಕಿಸಿ.

ಅವಿನಾಶ್ ಟಿ.ಜಿ.ಎಸ್

ನೈಸರ್ಗಿಕ ಕೃಷಿ ವಿಜ್ಞಾನ, ಬಿದ್ದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ವಿಧಾನ, ಸಸ್ಯಗಳ ಬೆಳವಣಿಗೆಯಲ್ಲಿ ಬೆಳಕಿನ ಮಹತ್ವವನ್ನು ತಿಳಿಸುವುದರ ಜೊತೆಗೆ ಹ್ಯೂಮಸ್ ಮತ್ತು ಸಾವಯವ ಇಂಗಾಲದ ಮಹತ್ವವನ್ನು ತಿಳಿಸುತ್ತಾ ನಮ್ಮ ಭೂಮಿಯಲ್ಲಿ ಸಹಜವಾಗಿ ಹೇಗೆ ಉತ್ಪತ್ತಿ ಮಾಡುವುದು ಎನ್ನುವುದರ ಮಾಹಿತಿಯನ್ನು ತಿಳಿಸಿಕೊಡಲಾಗುವುದು.

ನೈಸರ್ಗಿಕ ಕೃಷಿ ಪದ್ದತಿ ಪ್ರಚಾರಕ್ಕೆ ಬಂದ ಮೇಲೆ ಬಹುತೇಕ ಎಲ್ಲಾ ರೈತರದು ಒಂದೆ ಪ್ರಶ್ನೆ. ಏನೆಂದರೆ – ನಮ್ಮಲ್ಲಿ ಮಳೆ ಕಡಿಮೆ, ಅಂತರ್ಜಲ ಬತ್ತಿ ಹೋಗಿದೆ, ಭೂಮಿಗೆ ಬಿದ್ದ ಬೀಜ ಭಸ್ಮವಾಗುತ್ತಿದೆ. ಹೀಗಿರುವಾಗ ಏನನ್ನು ತಿಳಿದುಕೊಂಡು ತಾನೇ ಏನು ಪ್ರಯೋಜನ?. ಈ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ.

ಸಮಸ್ಯೆ ಹೇಗೆ ಸೃಷ್ಟಿಯಾಯಿತು ಎಂದು ತಿಳಿದುಕೊಂಡರೆ, ಪರಿಹಾರವೂ ತಿಳಿಯುತ್ತದೆ ಮತ್ತು ನೈಸರ್ಗಿಕ ಕೃಷಿಯೇ ಏಕೆ ಪರಿಹಾರ ಎಂಬುದೂ ಅರಿವಾಗುತ್ತದೆ. ಕೆಲವೇ ವರ್ಷಗಳ ಹಿಂದೆ ಈ ರೀತಿಯ ಮಾತುಗಳು ಇರಲಿಲ್ಲ. ಆಗ ಅಂತರ್ಜಲ ಭೂಮಿಯ ಹತ್ತಿರ ಇತ್ತು. ಭೂಮಿ ತಂಪಾಗಿತ್ತು. ಮಳೆಯು ಸಾಕಷ್ಟು ಬೀಳುತ್ತಿತ್ತು. ಹಾಗಾದರೆ ಈಗ ಏನಾಯಿತು…?

ನಾವು ಪರಿಸರಕ್ಕೆ ಮಾಡಿದ ಹಾನಿ, ಅಂದರೆ ಮರಗಿಡಗಳನ್ನು ಕಡಿದು ಮಳೆ ನೀರು ಹಿಂಗದಂತೆ ಭೂಮಿಯನ್ನು ನಿರ್ಜಲ ಮಾಡಿದ್ದು, ವ್ಯವಸಾಯಕ್ಕೆ ರಾಸಾಯನಿಕಗಳನ್ನು ಬಳಸಿ ಭೂಮಿಯನ್ನು ಕಣ್ಣು ಮುಚ್ಚುವಂತೆ ಮಾಡಿರುವುದು, ವಿವೇಚನೆ ಇಲ್ಲದ ಏಕಬೆಳೆ ಪದ್ಧತಿ, ಟ್ರಾಕ್ಟರ್ ಉಪಯೋಗಿಸಿ ನೆಲವನ್ನು ರಸ್ತೆಯಂತೆ ಗಟ್ಟಿಮಾಡಿ ಜೀವಾಣುಗಳನ್ನು ಕೊಲೆಮಾಡಿರುವುದು ಇತ್ಯಾದಿ ಇತ್ಯಾದಿಗಳು ಭೂಮಿ ನೀರನ್ನು ಕುಡಿಯದಂತೆ ಮಾಡಿಬಿಟ್ಟಿದ್ದು – ಇವೆಲ್ಲವೂ ಬೀಜ ಹಾಕಿದರೆ ಭಸ್ಮವಾಗುವುದಕ್ಕೆ ಕಾರಣವಲ್ಲವೇ? ಇಂತಹ ಬೇಸಾಯವನ್ನು ಉತ್ತೇಜಿಸಿದ ಸರ್ಕಾರ ಹಾಗೂ ನಾವೂ ಕೂಡಾ ಇದಕ್ಕೆಲ್ಲಾ ಕಾರಣವಲ್ಲವೇ? ಇದು ಸ್ವಯಂಕೃತ ಅಪರಾಧವಲ್ಲದೆ ಮತ್ತೇನು?

ಇಂದು ಭೂಮಿಗೂ ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧದ ಎಳೆ ತಪ್ಪಿದೆ. ಅಂತ:ಕರಣ ಕಳೆದುಕೊಂಡಿರುವ ಮನುಷ್ಯ ಭೂಮಿಯನ್ನು ಧ್ವಂಸಿಸುತ್ತ ಭೂಮಿಯನ್ನು ಅಸ್ಥಿಪಂಜರವಾಗಿಸಿಬಿಟ್ಟಿದ್ದಾನೆ. ಮನುಷ್ಯ ತಾನು ಪ್ರಕೃತಿಗಿಂತ ಬೇರೆ ಅಂದುಕೊಂಡಿರುವುದೇ ಈ ಎಲ್ಲಾ ದುರತಂಕ್ಕೆ ಕಾರಣವಾಗಿದೆ. ಇಂತಹ ಪರಿಸ್ಧಿತಿಯಲ್ಲಿ ನಾವು ಮಾಡಬೇಕಾಗಿರುವುದು ಏನು? ಈ ಜ್ವಲಂತ ಸಮಸ್ಯೆಗೆ ಬೆಳಕಿನ ಬೇಸಾಯ ಕೃಷಿ ಪದ್ಧತಿ (ಸಹಜ ಕೃಷಿ) ನಮಗೆ ಒಂದು ದಾರಿ ದೀಪವಾಗಿ ಕಾಣುತ್ತದೆ. ಭೂಮಿಯನ್ನು ಬದುಕಿಸಿ ತನ್ಮೂಲಕ ನಾವು ಬದುಕುವ ದಾರಿ ಕಾಣಿಸತೊಡಗಿದೆ ಎನ್ನಿಸುತ್ತದೆ.

ಕಾರ್ಯಗಾರವೊಂದರಲ್ಲಿ

ಇಂದು ಬಹು ಮುಖ್ಯವಾಗಿ ತಿಳಿಯಬೇಕಾಗಿರುವ ಅಂಶವೆಂದರೆ:
ಸಾವಯವ ಇಂಗಾಲ – ಇದನ್ನು ಭೂಮಿಯ ಫಲವತ್ತತೆಯನ್ನು ಅಳೆಯುವ ಮಾಪನ ಎನ್ನಬಹುದು. ಭೂಮಿಯಲ್ಲಿ ಸಾವಯವ ಇಂಗಾಲ ಸಾಕಷ್ಟು ಪ್ರಮಾಣದಲ್ಲಿದ್ದು, ಹ್ಯೂಮಸ್ ಉಂಟಾದರೆ ಗಿಡಮರಗಳಿಗೆ ಬೇಕಾಗಿರುವ ಪೌಷ್ಟಿಕಾಂಶಗಳನ್ನು, ಪೌಷ್ಠಿಕ ಪದಾರ್ಥಗಳನ್ನು ನಿಸರ್ಗದತ್ತವಾಗಿಯೇ ಬೆಳೆಗಳಿಗೆ ಒದಗುವಂತೆ ಮಾಡುತ್ತದೆ. ಸಾವಯವ ಇಂಗಾಲ ಹೆಚ್ಚಿರುವ ಭೂಮಿಯ ಮಣ್ಣು ಸ್ಪಂಜಿನಂತಾಗಿಬಿಡುವುದರಿಂದ ಆ ಭೂಮಿಯ ಮೇಲೆ ಬಿದ್ದ ಹನಿ ಹನಿ ನೀರು ಹಾಗು ಬೆಳಗಿನ ಇಬ್ಬನಿ ಕೂಡಾ ಹಿಂಗುತ್ತದೆ. ಹಾಗೆಯೇ ಹ್ಯೂಮಸ್‍ಗೆ ವಾತಾವರಣದಿಂದ ನೀರನ್ನು ಹೀರಿಕೊಂಡು ಹಿಡಿದಿಟ್ಟುಕೊಳ್ಳುವ ಅದ್ಭುತ ಶಕ್ತಿ ಸಾಮಥ್ರ್ಯವೂ ಇದೆ. ಇಂತಹ ವಾತಾವರಣದಲ್ಲಿ ಬೆಳೆಗಳಿಗೆ ಕಡಿಮೆ ಪ್ರಮಾಣದ ನೀರೇ ಸಾಕಾಗುತ್ತದೆ. ಭೂಮಿ ತಂಪಾಗುವುದರಿಂದ ಸಸಿಗಳು ನೀರಿನ ಕೊರತೆಯಲ್ಲೂ ಬದುಕುಳಿಯುತ್ತವೆ. ಹಾಗೂ ಸೂಕ್ಷ್ಮ ಜೀವಾಣುಗಳಿಗೆ ಬೇಕಾದ ಸೂಕ್ಷ್ಮವಾತಾವರಣವನ್ನು ಒದಗಿಸುವಲ್ಲಿ ಹ್ಯೂಮಸ್ ಸಹಕರಿಸುತ್ತದೆ. ಇದರಿಂದ ಭೂಮಿ ಜೀವಂತವಾಗುತ್ತದೆ, ಬಿತ್ತಿದ ಬೀಜ ಬೆಳೆಯುತ್ತದೆ.

ಬೆಳಕಿನ ಸಂಯೋಜನೆ – ಸಸ್ಯಗಳ ಬೆಳವಣಿಗೆಗೆ ಅವಶ್ಯವಿರುವ ಪೌಷ್ಟಿಕಾಂಶಗಳನ್ನು ಶೇ.98%ರಷ್ಟು ವಾತಾವರಣದಿಂದ ದೊರಕುತ್ತವೆ. ಇನ್ನುಳಿದ ಶೇ.2%ರಷ್ಟು ಭೂಮಿಯಿಂದ ದೊರಕುತ್ತವೆ. ನಾವು ಸಹಜವಾಗಿ ಭೂಮಿಯನ್ನು ಬಲಗೊಳಿಸಿ ಅಂದರೆ ಹ್ಯೂಮಸ್ ಮತ್ತು ಸಾವಯವ ಇಂಗಾಲವನ್ನು ವೃದ್ಧಿಮಾಡಿದರೆ ಭೂಮಿಯಲ್ಲಿರುವ ಪೌಷ್ಟಿಕಾಂಶಗಳನ್ನು ನಿಸರ್ಗದತ್ತವಾಗಿ ಬೆಳೆಗಳಿಗೆ ಒದಗುತ್ತದೆ. ಶೇ.98%ರಷ್ಟು ಸಸ್ಯಗಳ ಬೆಳವಣಿಗೆಗೆ ಅವಶ್ಯವಿರುವ ವಾತಾವರಣಕ್ಕೆ ಹೆಚ್ಚಿನ ಒತ್ತು ಕೊಡುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಕಡೆ ಗಮನ ಹರಿಸುವುದು ಪ್ರಸ್ತುತ ಬಹುಮುಖ್ಯ.

ಇದನ್ನು ಓದಿ: ರಾಜ್ಯಮಟ್ಟದ ಜಲಕಾರ್ಯಕರ್ತರ ತರಬೇತಿ ಸಮಾವೇಶ

ಇದಕ್ಕಿರುವ ಮುಖ್ಯ ಕಾರಣ ಬೆಳಕು (Foot Candle / Light Intensity)
ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ, ಸಸ್ಯಗಳು ಭೂಮಿಯಲ್ಲಿ ದೊರೆಯುವ ಪೌಷ್ಟಿಕಾಂಶಗಳನ್ನುಗಳನ್ನು ಮತ್ತು ವಾತಾವರಣದಲ್ಲಿ ದೊರೆಯುವ ಪೌಷ್ಟಿಕಾಂಶಗಳನ್ನು ತನ್ನ ಅಡುಗೆ ಮನೆಯಾದ ಎಲೆಗಳಲ್ಲಿರುವ ಪತ್ರಹರಿತ್ತು ರಂಧ್ರಗಳು ಸ್ವೀಕರಿಸುತ್ತವೆ. ಈ ಎಲೆಗಳಿಗೆ ಸರಿ ಪ್ರಮಾಣದ ಬೆಳಕು (ಎಲ್ಲ ಬೆಳೆಗಳಿಗೂ ಒಂದೇ ತೀವ್ರತೆಯಿಂದ ಕೂಡಿದ ಬೆಳಕು ಅವಶ್ಯವಿರುವುದಿಲ್ಲ) ತಾಗಿದಾಗ ಮಾತ್ರ (ಅಂದರೆ ಆಯಾ ಬೆಳಗಳ ಶಕ್ತಿಗನುಗುಣವಾಗಿ ಬೆಳಕಿನ ತೀವ್ರತೆಯನ್ನು ಒದಗಿಸಿದರೆ) ಈ ಎಲ್ಲಾ ಪೌಷ್ಟಿಕಾಂಶಗಳು ಸಕ್ಕರೆ ಅಂಶವಾಗಿ ಪರಿವರ್ತನೆಗೊಳ್ಳುತ್ತವೆ. ಈ ಸಕ್ಕರೆ ಅಂಶ ಸಸ್ಯಗಳ ಆಹಾರ. ಆದರೆ ಇಂದು ಹಲವಾರು ಕಾರಣಗಳಿಂದ ಬೆಳಕಿನ ತೀವ್ರತೆ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿಯನ್ನು ಮರೆತಿದ್ದೇವೆ. ಹಾಗಾಗಿ ಹೆಚ್ಚಿನ ತೀವ್ರತೆಯಿಂದ ಕೂಡಿದ ಬೆಳಕು ಬೆಳೆಗಳಿಗೆ ತಗುಲುತ್ತಿರುವುದರಿಂದ ದ್ಯುತಿ ಸಂಶ್ಲೇಷಣಾ ಕ್ರಿಯೆಯ ಕಾರ್ಯಕ್ಷಮತೆ ಕ್ಷಿಣಿಸುತ್ತಿದ್ದು ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ.
ಈ ಕಾರಣದಿಂದ ನಾವು ಇಂದು ನಮ್ಮ ವ್ಯವಸಾಯ ಪದ್ಧತಿಯನ್ನು ಉಲ್ಟಾಪಲ್ಟಾ ಮಾಡಬೇಕಾಗಿದೆ. ಅಂದರೆ ಮಣ್ಣನ್ನು ಸಹಜವಾಗಿ ಬಲಗೊಳಿಸಿ ಶೇ.98%ರಷ್ಟು ಆಹಾರೋತ್ಪಾದನೆಗೆ ಕಾರಣವಾಗುವ ವಾತಾವರಣಕ್ಕೆ ಪರಿಸರಕ್ಕೆ ಹೆಚ್ಚು ಗಮನ ಕೊಡಬೇಕಾಗಿದೆ. ಅಂದರೆ ಸೂಕ್ತ ಬೆಳೆಗಳ ಆಯ್ಕೆ, ಆ ಬೆಳೆಗಳ ಪರಸ್ಪರ ಪೂರಕ ಬೆಳೆಗಳನ್ನು ಅರಿತುಕೊಂಡು ವಿವಿಧ ಬೆಳೆಗಳನ್ನು ಆಯೋಜಿಸಿ, ಗಿಡಗಳ ಅಗತ್ಯಕ್ಕೆ ತಕ್ಕಂತೆ ಬೆಳಕು ಸಿಗುವಂತೆ ವಾತಾವರಣ ಉಂಟುಮಾಡಿ ಇಡೀ ಕೃಷಿಗೆ ಜೀವ ಕೊಡಬೇಕಾಗಿದೆ.

ಹೋರಾಟಗಾರರ ಜೊತೆಗೆ

ಈ ಕಾರ್ಯಾಗಾರದಲ್ಲಿ ಹ್ಯೂಮಸ್ ಎಂದರೆ ಏನು, ಉತ್ಪತ್ತಿ ಮಾಡುವುದು ಹೇಗೆ, ಸಾವಯವ ಇಂಗಾಲವನ್ನು ಪ್ರಸ್ತುತ ಇರುವ ಶೇ.0.03ರಿಂದ ಶೇ.3ರಷ್ಟಕ್ಕೆ ಹೆಚ್ಚಿಸುವುದು ಹೇಗೆ, ಬಿದ್ದ ಮಳೆಗಾಲದ ನೀರನ್ನು ನಮ್ಮದೆ ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳುವ ವಿಧಾನ, ದ್ವಿದಳ ಧಾನ್ಯಗಳ ಮಹತ್ವ, ಸಹಜ ಎರೆಹುಳುಗಳ ಮಹತ್ವ, ಸೂಕ್ಷ ಜೀವಾಣುಗಳು ಹೇಗೆ ಗಿಡ ಮರಗಳ ಬೆಳವಣಿಗೆಯಲ್ಲಿ ಸಹಕರಿಸುತ್ತವೆ, ನಾಟಿ ಬೀಜಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ ಮತ್ತು ಆ ಬೀಜಗಳನ್ನು ಸಹಜವಾಗಿ ಸಂರಕ್ಷಿಸಿಕೊಳ್ಳುವ ವಿಧಾನಗಳನ್ನು ಸವಿವರವಾಗಿ ತಿಳಿಸಿಕೊಡುವ ಪ್ರಯತ್ನವೇ ಈ ಕಾರ್ಯಾಗಾರದ ಉದ್ದೇಶ. ತಿಳಿಯೋಣ ಬನ್ನಿ ಜೊತೆ ಜೊತೆಗೆ…

ಬರ ಮುಕ್ತ ನಾಡಿಗಾಗಿ ಒಂದು ದೃಢ ಹೆಜ್ಜೆ: ನಮ್ಮ ವ್ಯವಸಾಯ ಭೂಮಿಯನ್ನು ಫುಡ್ ಪಾರೆಸ್ಟ್ ಆಗಿ ಬದಲಾಯುಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 09916030272, 09900003891, 08197705157

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸ್ಥಳಾಂತರಗೊಂಡ ಅಕ್ಬರ್ ನಗರ ನಿವಾಸಿಗಳನ್ನು SIR ನಿಂದ ಹೊರಗಿಟ್ಟಿರುವ ಬಗ್ಗೆ ಪರಿಶೀಲಿಸಲು ಲಕ್ನೋ ಚುನಾವಣಾ ಅಧಿಕಾರಿಗೆ ಸುಪ್ರೀಂ ಸೂಚನೆ

ಉತ್ತರ ಪ್ರದೇಶದಲ್ಲಿ ತಮ್ಮ ಮನೆಗಳನ್ನು ನೆಲಸಮಗೊಳಿಸಿ, ಸ್ಥಳಾಂತರದ ನಂತರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿಂದ ತಮ್ಮನ್ನು ಹೊರಗಿಡಲಾಗಿದೆ ಎಂದು ಆರೋಪಿಸಿ ಅಕ್ಬರ್ ನಗರದ ಮಾಜಿ ನಿವಾಸಿಗಳು ಎತ್ತಿರುವ ದೂರುಗಳನ್ನು...

‘ವಯಸ್ಕರು ಒಟ್ಟಿಗೆ ವಾಸಿಸಲು ನಿರ್ಧರಿಸುವುದು ಅಪರಾಧವಲ್ಲ..’; ಅಂತರಧರ್ಮೀಯ ಜೋಡಿ ಕುರಿತು ಕೋರ್ಟ್ ಮಹತ್ವದ ತೀರ್ಪು

"ಅಂತರ್ಧರ್ಮೀಯರಾದ ಇಬ್ಬರು ವಯಸ್ಕ ವ್ಯಕ್ತಿಗಳು, ಅವರು ತಮ್ಮ ಸ್ವತಂತ್ರ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ, ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನು ಅವರನ್ನು ತಡೆಯಲು ಅಥವಾ ಅಂತರಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಾಧ್ಯವಿಲ್ಲ" ಎಂದು...

ಗೋರಖ್‌ಪುರದ ಏಮ್ಸ್‌ನಲ್ಲಿ ನಾಗಾಲ್ಯಾಂಡ್ ವೈದ್ಯೆಗೆ ಕಿರುಕುಳ; ಜನಾಂಗೀಯ ನಿಂದನೆ

ಉತ್ತರ ಪ್ರದೇಶದ ಗೋರಖ್‌ಪುರದ ಏಮ್ಸ್‌ನಲ್ಲಿ ನಿಯೋಜಿತರಾಗಿದ್ದ ನಾಗಾಲ್ಯಾಂಡ್‌ನ ಮೂರನೇ ವರ್ಷದ ನಿವಾಸಿ ವೈದ್ಯರ ಮೇಲೆ ಭಾನುವಾರ ಸಂಜೆ ಸಂಸ್ಥೆಯ ಆವರಣದ ಬಳಿ ಮೂವರು ಜನಾಂಗೀಯ ನಿಂದನೆ, ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ...

‘2026 ರಲ್ಲಿ ಸಮುದ್ರವನ್ನು ಪ್ರಾಬಲ್ಯಗೊಳಿಸುತ್ತೇವೆ’: ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿಯಿಂದ ಭಾರತಕ್ಕೆ ಬಹಿರಂಗ ಬೆದರಿಕೆ

2008ರ ಮುಂಬೈ ದಾಳಿಯ ಭೀಕರತೆಯನ್ನು ಪ್ರತಿಧ್ವನಿಸುವ ಕಟು ಬೆದರಿಕೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಭಾರತದಲ್ಲಿ ಮತ್ತೊಮ್ಮೆ ಸಮುದ್ರ ಮಾರ್ಗವನ್ನು ಬಳಸಿಕೊಂಡು 26/11 ಮಾದರಿಯ ದಾಳಿಯನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ...

ಕೇರಳ ಹೆಸರು ಇನ್ನು ಮುಂದೆ ‘ಕೇರಳಂ’; ಕೇಂದ್ರ ಸಚಿವ ಸಂಪುಟ ಅನುಮೋದನೆ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. "ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ...

ನಾಡೋಜ ಗೌರವ ತಿರಸ್ಕರಿಸಿದ ಹಿರಿಯ ಚಿಂತಕ ಡಾ ಜಿ. ರಾಮಕೃಷ್ಣ; ರಾಜ್ಯಪಾಲರಿಂದ ಗೌರವ ಸ್ವೀಕರಿಸದಿರಲು ನಿರ್ಧಾರ

ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆಯುವ 34ನೇ ನುಡಿಹಬ್ಬದಲ್ಲಿ...

‘ಕೇರಳ ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ, ಸಿನಿಮಾದಲ್ಲಿ ತಪ್ಪು ಚಿತ್ರಣವಿದೆ’: ‘ದಿ ಕೇರಳ ಸ್ಟೋರಿ 2’ ಕುರಿತು ಕೇರಳ ಹೈಕೋರ್ಟ್

ವಿವಾದಾತ್ಮಕ 'ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್' ಸಿನಿಮಾಗೆ ಸರ್ಟಿಫಿಕೇಟ್ ನೀಡಿರುವ ಕುರಿತು ಕೇರಳ ಹೈಕೋರ್ಟ್ ಮಂಗಳವಾರ (ಫೆ.24) ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ಪ್ರಶ್ನಿಸಿದೆ ಎಂದು ಕಾನೂನು ಸುದ್ದಿ...

‘ಸರ್ವಾಧಿಕಾರಿ ಪ್ರವೃತ್ತಿ, ಹೇಡಿತನಕ್ಕೆ ಸಾಕ್ಷಿ’ : ಯುವ ಕಾಂಗ್ರೆಸ್‌ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಪಕ್ಷದ ಇತರ ಸದಸ್ಯರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಇದು ಸರ್ವಾಧಿಕಾರಿ ಪ್ರವೃತ್ತಿ ಮತ್ತು...

‘ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ’; ನ್ಯಾಯಮೂರ್ತಿ ಉಜ್ವಲ್  ಭೂಯಾನ್

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ...

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ; ಎಎಸ್ಎ ಪ್ರತಿಭಟನೆ

ದಲಿತ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ಹಲ್ಲೆ ನಡೆದಿದ್ದರೂ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆಡಳಿತಾತ್ಮಕ ನಿಷ್ಕ್ರಿಯತೆ ಇದೆ ಎಂದು ಆರೋಪಿಸಿ, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಸೋಮವಾರ (ಫೆ.23) ಪ್ರತಿಭಟನೆ ನಡೆಸಿತು...