HomeUncategorizedಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

ಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

- Advertisement -
- Advertisement -

ಚುನಾವಣಾ ನಿಮಿತ್ತ ನ್ಯೂಷ್ ನೇಷನ್ ಎಂಬ ಟಿವಿ ಚಾನೆಲ್ ಒಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ಸಂದರ್ಶನ ನಡೆಸಿತ್ತು. ಚೌರಾಸಿಯ ಎಂಬ ಸಂದರ್ಶಕ ಇಬ್ಬರನ್ನು ಸಂದರ್ಶಿಸಿದ್ದರೂ, ರಾಹುಲ್ ಗಾಂಧಿಗೆ ರಾಬರ್ಟ್ ವಾದ್ರರ ಭ್ರಷ್ಟಾಚಾರ ಪ್ರಕರಣ, 1984ರ ಸಿಖ್ ಹತ್ಯಾಕಾಂಡದಂತಹ ಕಠಿಣ ಪ್ರಶ್ನೆಗಳನ್ನು ಕೇಳಿದರು. ಇದು ಸರಿಯಾದುದ್ದೆ. ಆದರೆ ಮೋದಿಯವರಿಗೆ ಮಾತ್ರ ಯಾವ ತಿಂಡಿ ಇಷ್ಟ, ಯಾವ ಬಟ್ಟೆ ಹಾಕ್ತಿರಿ? ರೋಟಿ ಮಾಡೋಕೆ ಬರುತ್ತಾ, ಕವನ ಬರಿತೀರಾ ಎಂಬಂಥ ಸಿಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಡಿಯೋ ನೋಡಿ, ಅವರು ಕೇಳಿದ ಪ್ರಶ್ನೆಗಳನ್ನು ತಿಳಿಯಲು ಕೆಳಗೆ ಓದಿ.

ವಿಡಿಯೋ ನೊಡಿ

ಸಂದರ್ಶಕ – ಮೋದಿಗೆ: ತಾವು ಏನು ಊಟ-ತಿಂಡಿ ಇಷ್ಟಪಡುತ್ತೀರಿ ಹಾಗೂ ದಿನಕ್ಕೆ ಎಷ್ಟು ಸಲ ಊಟ ಮಾಡುತ್ತೀರಿ?

ರಾಹುಲ್‍ಗೆ: ‘ನ್ಯಾಯ್’ ಯೋಜನೆಯ ಕುರಿತು ನ್ಯೂಸ್ ನೇಶನ್ ಸಂದರ್ಶನದಲ್ಲಿ ಮೋದಿಯವರನ್ನು ಕೇಳಲಾಯಿತು – ‘ರಾಹುಲ್‍ಜೀ ‘ನ್ಯಾಯ್’ ಯೋಜನೆ ಮುಂದಿಟ್ಟಿದ್ದಾರೆ; ಅದರ ಪ್ರಕಾರ ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ’ ಎಂದು ಕೇಳಿದ್ದಕ್ಕೆ ಮೋದಿಯವರು, “ನನ್ನ ಬಳಿ ಟ್ರಾಕ್ ರಿಕಾರ್ಡ್ ಇದೆ, ರಾಹುಲ್‍ಜೀ ಬಳಿ ಟೇಪ್ ರೆಕಾರ್ಡರ್ ಇದೆ” ಎಂದರು.

ಮೋದಿಗೆ: ತಾವು ಕ್ಯಾಲರಿ-ಕಾನ್ಶಸ್ ಆಗಿದೀರಾ – ದಿನಕ್ಕೆ ಇಷ್ಟು ಕ್ಯಾಲರಿ ತಿನ್ನಬೇಕು, ಈಗ ಇಷ್ಟು ಕ್ಯಾಲರಿ ತಿಂದುಬಿಟ್ಟಿದೀನಿ, ಸ್ವಲ್ಪ ತಿನ್ನಬೇಕು … ಇತ್ಯಾದಿ?

ರಾಹುಲ್‍ಗೆ: ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಅಥವಾ ಬಿಜೆಪಿಯ ಹೊರತಾಗಿ ಇನ್ಯಾವುದಾದರೂ ಪಕ್ಷ ಅಧಿಕಾರಕ್ಕೆ ಬಂದರೆ ರಫೇಲ್‍ನ ಕಂಟ್ರಾಕ್ಟನ್ನು ಮರು ಪರಿಶೀಲನೆ (ರೀ-ನೆಗೋಶಿಯೇಟ್) ನಡೆಸಲಾಗುವುದಾ?

ಮೋದಿಗೆ: ತಾವು ಏನೇನು ಅಡಿಗೆ ತಯಾರಿಸುತ್ತೀರಿ?
ಮೋದಿ: ಎಲ್ಲವನ್ನೂ ತಯಾರಿಸ್ತೀನಿ …
ಸಂ: ರೊಟ್ಟಿಯನ್ನು ಕೂಡಾ …?
ಮೋ: ಓಹೋ, ಎಲ್ಲವನ್ನೂ ತಯಾರಿಸ್ತೀನಿ.

ಸಂ – ರಾಹುಲ್‍ಗೆ: ಒಂದುವೇಳೆ ಅದರಲ್ಲಿ ರಫೇಲ್‍ನ ಕಂಟ್ರಾಕ್ಟ್‍ನಲ್ಲಿ ತಪ್ಪಾಗಿದೆ ಎಂದಾದಲ್ಲಿ ‘ಅದನ್ನು ರದ್ದುಪಡಿಸಲಾಗುವುದು’ ಅಥವಾ ‘ರೀ-ನೆಗೋಶಿಯೇಟ್ ಮಾಡಲಾಗುವುದು’ ಎಂದು ತಾವೇಕೆ ಓಪನ್ನಾಗಿ ಹೇಳುವುದಿಲ್ಲ? ಯಾಕೆಂದರೆ ಈ ಡೀಲ್‍ನಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ನೀವು ತಿಳಿಯುತ್ತೀರಲ್ಲ…

ಮೋದಿಗೆ: ಕಳೆದ ಐದು ವರ್ಷಗಳಲ್ಲಿ ಎಂದಾದರೂ ನೀವು ಅಡಿಗೆಮನೆಗೆ ಹೋಗಲು ಸಾಧ್ಯವಾಗಿದೆಯಾ?
ರಾಹುಲ್‍ಗೆ: ಈ ವಿಚಾರ ಸುಪ್ರೀಂ ಕೋರ್ಟಿನಲ್ಲಿರುವಾಗ ತನಿಖೆ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಏಳುತ್ತದಲ್ಲವೆ?

ಮೋದಿಗೆ: ಪ್ರಧಾನ ಮಂತ್ರಿಗಳೆ, ಒಂದು ಬಹಳ ಮಹತ್ವಪೂರ್ಣ ವಿಚಾರ ಏನೆಂದರೆ, ನಿಮ್ಮ ವೇಷಭೂಷಣ ನಿಮಗೆ ಬಹಳ ಒಪ್ಪುತ್ತದೆ (ಸ್ಯೂಟ್ ಆಗುತ್ತದೆ).
ರಾಹುಲ್‍ಗೆ: ರಾಹುಲ್‍ಜೀ, ನಾವು ಪಂಜಾಬಿನಲ್ಲಿದೀವಿ. ಈಚೆಗಷ್ಟೇ ಒಂದು ವಿಚಾರ ಚರ್ಚೆಗೆ ಬಂದಿತ್ತು – 1984ರಲ್ಲಿ ನಡೆದಿದ್ದ ಸಿಖ್ ಗಲಭೆ(ರಯಟ್ಸ್)ಗಳಿಗೆ ಸಂಬಂಧಪಟ್ಟಂತೆ ಸ್ಯಾಮ್ ಪಿತ್ರೋದಾ ಅವರು “ಏನು ಆಗಿದೆಯೋ ಆಗಿದೆ” ಎಂದು ಹೇಳಿದ್ದರು …

ಮೋದಿಗೆ: ಅಂದರೆ ತಾವು ಫ್ಯಾಶನ್ ಬಗ್ಗೆ, ಬಟ್ಟೆಬರೆ ಬಗ್ಗೆಯೂ ಅಷ್ಟೊಂದು ಆಸಕ್ತಿ ಹೊಂದಿದೀರಾ? ಅದರ ಬಗ್ಗೆ ಏನಾದರೂ ಓದುತ್ತೀರಾ? ಯಾವ ಅಕೇಶನ್‍ಗೆ ಎಂತಹ ಉಡುಗೆ ತೊಡಬೇಕು ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ?
ರಾಹುಲ್‍ಗೆ: … ಅವು ಸಂಘಟಿತವಾದ ಗಲಭೆಗಳಾಗಿದ್ದವು, ಅವುಗಳಿಗೆ ಕಾಂಗ್ರೆಸ್ ಪಕ್ಷವೇ ಜವಾಬ್ದಾರ ಎಂದು ಬಿಜೆಪಿಯ ಆರೋಪ…

ಮೋದಿಗೆ: ತಾವು ಜೇಬಿನಲ್ಲಿ ಪರ್ಸ್ ಇಟ್ಕೊಳ್ತೀರಾ?
ರಾಹುಲ್‍ಗೆ: … ಅವರು ಹೇಳಿದರು – ಗುಜರಾತಿನಲ್ಲಿ ಕಾಂಗ್ರೆಸ್ಸು ಜಿಎಸ್‍ಟಿಯನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣೆ ಎದುರಿಸಿತು, ಸೂರತ್‍ನಲ್ಲಿ ಅದರ ಬಗ್ಗೆ ಬಹಳ ಪ್ರಚಾರ ಕೂಡ ನಡೆಯಿತು. ಆದರೆ ಸೂರತ್‍ನ ಎಲ್ಲ ಸೀಟುಗಳನ್ನೂ ನಾವೇ ಗೆದ್ದೆವು … ಈಗ ಐದು ವರ್ಷಗಳ ಕೆಲಸಕಾರ್ಯಗಳ ಮೇಲೆ ಚುನಾವಣೆ ನಡೆಯುತ್ತಿದೆ – ಎಂದು.

ಇದಕ್ಕೆ ರಾಹುಲ್ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೆಂದರೆ, ಪ್ರಧಾನ ಮಂತ್ರಿಯ ಈ ಉತ್ತರ ಇತ್ತಲ್ಲ, ಅದೂ ಸಹ ಅವರಿಗೆ ಕೊಡಲಾಗಿದ್ದ ನೋಟ್‍ಶೀಟ್‍ನಲ್ಲಿತ್ತಾ? ಅವರ ಮುಂದೊಂದು ಕಾಗದ ಇಟ್ಟಿದ್ದಿರಲ್ಲ, ಅದರಲ್ಲಿ ಈ ಉತ್ತರವನ್ನೂ ಬರೆಯಲಾಗಿತ್ತಾ ಅಥವಾ ಬರೆದಿರಲಿಲ್ಲವಾ? ಎಂದು ಹೇಳಿದ್ದಲ್ಲದೇ ನೀವು ಬೇಕಾದರೆ ಇದನ್ನು ಎಡಿಟ್ ಮಾಡಿಕೊಳ್ಳಿ ಎಂದು ಹೇಳಿ ನಗೆ ಹುಟ್ಟಿಸಿದ್ದರು.

ಈ ರೀತಿಯಾಗಿ ಇಂದು ಮೀಡಿಯಾಗಳು ಸಂಪೂರ್ಣ ಮೋದಿಮಯವಾಗಿರುವುದು ಪ್ರಜಾತಂತ್ರದ ದೃಷ್ಟಿಯಿಂದ ಬಲು ಅಪಾಯಕಾರಿ. ಇದು ಮಾಧ್ಯಮಗಳ ದಿವಾಳಿತನ, ಮೋದಿಯವರಿಗೆ ಮಾಧ್ಯಮಗಳ ಮೇಲಿರುವ ಭಯವನ್ನು ಸಹ ತೋರಿಸುತ್ತದೆ. ಮೊದಲೇ ಇಂತಹದೇ ಪ್ರಶ್ನೆಗಳನ್ನು ಕೇಳಬೇಕು ಎಂದು ಸ್ಕ್ರಿಪ್ಟ್ ಪ್ರಶ್ನೆಗಳನ್ನು ಬರೆದುಕೊಟ್ಟು ಸಂದರ್ಶನ ನಡೆಸಬೇಕಾದ ದುರ್ಗತಿಗೆ ಇಂತಹ ಚಾನೆಲ್‍ಗಳು ಇಳಿದಿವೆ.
ಕೊನೆಯಲ್ಲಿ ಒಂದು ಮಾತು: ಮೋದಿಯ ಸಂದರ್ಶನಕ್ಕೆ ಜೊತೆಯಲ್ಲಿ ಒಬ್ಬ ‘ಮಾಡ್’ ಮಹಿಳೆಯನ್ನು ಕರೆದೊಯ್ದಿದ್ದ ಚೌರಾಸಿಯ, ರಾಹುಲ್ ಸಂದರ್ಶನಕ್ಕೆ ಜೊತೆಗೊಬ್ಬ ಪುರುಷನನ್ನು ಕರೆದುಕೊಂಡು ಹೋಗಿದ್ದರು. ಇಲ್ಲಿಯೂ ಅಸಮಾನತೆ ಮಾಡಿದ್ದಾರೆ ನೋಡಿ.

ಇದನ್ನು ಓದಿ: ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...

ಪ್ರತಿಭಟನಾನಿರತ ಮಹಿಳೆಯ ಕೆನ್ನೆಗೆ ಹೊಡೆದ ದೆಹಲಿ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ: ವಿಡಿಯೋ ವೈರಲ್ ನಂತರ ವ್ಯಾಪಕ ಟೀಕೆ

ದೆಹಲಿ: ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೂರ ದಮನ ಕಾರ್ಯಾಚರಣೆಯ ಭೀಕರ ಮುಖವಾಡವೊಂದು ಮತ್ತೆ ಜಗಜ್ಜಾಹೀರಾಗಿದೆ. ಸೋಮವಾರ ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ,...

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...