HomeಮುಖಪುಟTik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು....

Tik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು….

- Advertisement -
- Advertisement -

| ನಾನುಗೌರಿ ಡೆಸ್ಕ್ |

ಬಹಳಷ್ಟು ಯುವಕ ಯುವತಿಯರಿಗೆ ಚಿಕ್ಕಂದಿನಿಂದಲೂ ತಾವು ಸಿನೆಮಾ ನಟ ನಟಿಯರಾಗಬೇಕು, ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ, ಕನಸು ಇದ್ದೇ ಇರುತ್ತದೆ. ಆದರೆ ಸಾವಿರಕ್ಕೆ ಅಥವಾ ಲಕ್ಷಕ್ಕೆ ಒಬ್ಬರು ಮಾತ್ರ ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದು ವಾಸ್ತವದ ಸಂಗತಿ. ಇನ್ನುಳಿದವರ ಕೊರಗು ನಿವಾರಿಸಲು ಒಂದು ಮಟ್ಟಿಗೆ ಸಹಾಯ ಮಾಡಿದ್ದು ಫೇಸ್‍ಬುಕ್ ಮತ್ತು ವಾಟ್ಸಾಪ್. ತಮಗನ್ನಿಸಿದ್ದನ್ನು ಬರೆಯುವ, ವಿಡಿಯೊ ಮಾಡಿ ಅಪ್ ಲೋಡ್ ಮಾಡಲು ಅವಕಾಶ ಇದರಿಂದ ಸಿಕ್ಕಿತ್ತು. ಆದರೆ ಯಾವಾಗ ಟಿಕ್ ಟಾಪ್ ಆಪ್ ಬಂದಿತ್ತೋ ಹಲವಾರು ಜನ ತಮ್ಮ ಕನಸನ್ನು ನನಸು ಮಾಡಿಕೊಂಡರು. ಈ ಆಪ್ ಮೂಲಕ ಅಭಿನಯಿಸಿ, ನೃತ್ಯ ಮಾಡಿ ಅದನ್ನು ಸಾವಿರಾರು ಜನಕ್ಕೆ ತೋರಿಸಿ ಸಂತೃಪ್ತಿಪಟ್ಟುಕೊಂಡರು. ಅಂತಹ ಆಪ್ ಅನ್ನು ನಿಷೇಧಿಸಬೇಕೆನ್ನುವ ಮೂಲಕ ಸಾವಿರಾರು ಯುವನಜನರಿಗೆ ದಿಢೀರ್ ಶಾಕ್ ನೀಡಲಾಗಿತ್ತು.

20ಕೋಟಿಗೂ ಹೆಚ್ಚು ಜನ ಬಳಸುವ ಟಿಕ್ ಟಾಕ್ ಎಂಬ ಮನರಂಜನಾ ಆಪ್ ಬ್ಯಾನ್ ಆಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡುತ್ತಿತ್ತು. ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಲ್ಲಿ ರದ್ದಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ನಲ್ಲಿ ಕಾಣಿಸಿಕೊಂಡಿದ್ದು ಡೌನ್‍ಲೋಡ್‍ಗೆ ಲಭ್ಯವಾಗಿದೆ.

ಆರಂಭದಲ್ಲಿ ಡಬ್‍ಸ್ಮ್ಯಾಷ್ ಎಂದು ಕರೆಯಲ್ಪಡುತ್ತಿದ್ದ ಈ ಆಪ್ ನಂತರ ಮ್ಯುಸಿಕಲಿ ಎಂದಾಗಿತ್ತು. ಕೊನೆಗೆ ಟಿಕ್ ಟಾಕ್ ಎಂದು ಬದಲಿಸಕೊಂಡಮೇಲೆ ಸಾಕಷ್ಟು ಜನಪ್ರಿಯತೆಯ ಜೊತೆಗೆ ಕೋಟ್ಯಾಂತರ ಜನರು ಡೌನ್‍ಲೋಡ್ ಮಾಡಿಕೊಂಡು ಬಳಸಲು ಆರಂಭಿಸಿದ್ದರು. ಮಿಮಿಕ್ರಿಯಿಂದ ಆರಂಭವಾದು ಇದು ದೊಡ್ಡ ಸ್ಟಾರ್ ನಟನನ್ನು ಅನುಸರಿಲು ಬಳುಸತ್ತಿದ್ದರು. ಡಬ್‍ಸ್ಮ್ಯಾಷ್ ಮಾಡುವ ಮೂಲಕ ಇಷ್ಟ ಪಟ್ಟ ನಟನ ಅಭಿನಯವನ್ನು ನಕಲು ಮಾಡುವುದು, ಅವರ ಧ್ವನಿಗೆ ಇವರು ಅಭಿನಯಿಸಲು ಶುರು ಮಾಡಿದಾಗ ಇದು ಹೊಸ ರೀತಿಯ ಅಲೆಯನ್ನು ಮೂಡಿಸಿತ್ತು. ಈಗ ಅದೇ ರೀತಿಯ ಹಲವಾರು ಆಪ್ ಬಂದಿದ್ದು ಅದರಲ್ಲಿ ಟಿಕ್ ಟಾಕ್ ಮೇಲುಗೈ ಸಾಧಿಸಿದೆ.

ಮುಖ್ಯವಾಗಿ ಯುವಜನರು ಮತ್ತು ಸ್ಥಳೀಯ ಭಾಷಿಕರ ಮನಸ್ಥಿತಿಯನ್ನು ಅಧ್ಯಯನ ಮಾಡಿ ಆಪ್ ಡೆವಲಪ್ ಮಾಡಿದಂತಿದೆ. ಹಲವು ಸಿನಿಮಾದ ಸಣ್ಣ ದೃಶ್ಯಗಳ ವಾಯ್ಸ್‍ಗೆ ತಮ್ಮ ಅಭಿನಯ ಸೇರಿಸಿ ಚಿಕ್ಕ ವಿಡಿಯೋಗಳನ್ನು ತಯಾರಿಸಿ ಹರಿಯಬಿಡುವುದು, ತಾವೇ ಖುದ್ದಾಗಿ ತಮಾಷೆಯ ಪ್ರಸಂಗಗಳನ್ನು ಅಭಿನಯಿಸಿ ರೆಕಾರ್ಡ್ ಮಾಡುವುದು, ಡ್ಯಾನ್ಸ್‍ಗಳನ್ನು ಮಾಡುವುದು, ಟ್ರೋಲ್ ಮಾಡುವುದು ಸೇರಿದಂತೆ ಹತ್ತು ಹಲವು ಸಣ್ಣ ವಿಡಿಯೋಗಳು ಟಿಕ್ ಟಾಕ್‍ನಲ್ಲಿ ಹರಿದಾಡಿದ್ದವು. ಕಾಲಕ್ಕೆ ತಕ್ಕಂತೆ ಒಂದು ವಿಡಿಯೋ ನೀಡಿ ಅದೇ ಮಾದರಿಯ ವಿಡಿಯೋ ಮಾಡಿ ಕಳಿಸುವಂತೆ ಚಾಲೆಂಜ್ ನೀಡಿ ಈ ಆಪ್‍ನ ಪ್ರಿಯರು ಇದರಲ್ಲೇ ಗಿರಕಿ ಹೊಡೆಯುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಒಬ್ಬ ಯುವಕ ಚಾಕುವಿನಿಂದ ಕತ್ತು ಕುಯ್ದುಕೊಳ್ಳುವಂತೆ ಅಭಿನಯಿಸಲು ಹೋಗಿ ನಿಜವಾಗಿಯೂ ಕತ್ತು ಕುಯ್ದುಕೊಂಡುಬಿಟ್ಟ ವಿಡಿಯೋ ವೈರಲ್ ಆಗಿತ್ತು. ಇಂತಹ ಅತಿರೇಕವಾದಂತಹ ವ್ಯಕ್ತಿಗಳಿಂದಲೇ ಟಿಕ್ ಟಾಕ್ ಬ್ಯಾನ್ ಆಗುವ ಹಂತಕ್ಕೆ ತಲುಪಿತ್ತು.

ಎಲ್ಲಾ ವಯೋಮಾನದವರು ಸಹ ಬೇಸರ ಕಳೆಯಲು, ಟೈಮ್ ಪಾಸ್ ಮಾಡಲು ಟಕ್ ಟಾಕ್ ಬಳಸಿದರೆ ಬಹುಪಾಲು ಯುವ ಜನಾಂಗ ಇದರ ದಾಸರಂದತ್ತಿದೆ. ‘ಯಾವಾಗ ನೋಡಿದರೂ ಟಿಕ್ ಟಾಕ್‍ನಲ್ಲೇ ಮುಳುಗಿರುತ್ತೀಯಲ್ಲ’ ಎಂಬ ಟೀಕೆ ಎಲ್ಲಾ ಕಡೆ ಸಹಜವಾಗಿ ಕೇಳಿ ಬರುತ್ತಿದೆ. ಈ ಆಪ್ ಜನರಿಗೆ ಅತಿ ಹೆಚ್ಚು ಮನರಂಜನೆ ನೀಡಿದ್ದು ಎಷ್ಟು ನಿಜವೋ, ಅಷ್ಟೇ ಪ್ರಮಾಣದಲ್ಲಿ ಅವರನ್ನು ಸೋಮಾರಿಗಳನ್ನಾಗಿಯೂ ಮಾಡಿತ್ತು.
ಈ ಆಪ್‍ನ ಅನುಕೂಲ ಮತ್ತು ಅನಾನುಕೂಲಗಳನ್ನು ನೋಡಿದರೆ, ಮೊದಲನೇಯದಾಗಿ ಆ ಆಪ್ ಬಳಸಿ ಸಾವಿರಾರು ಜನ ತಮ್ಮ ಸೃಜನಶೀಲತೆಯನ್ನು ಬಹಿರಂಗಪಡಿಸಿದ್ದರು. ಅದರಲ್ಲಿನ ಒಂದೊಂದು ಚಿಕ್ಕ ವಿಡಿಯೋ ಸಹ ವಾವ್ ಅನ್ನಿಸುವಷ್ಟರ ಮಟ್ಟಿಗೆ ಹೊಸತನದಿಂದ ಕೂಡಿ ಎಲ್ಲರನ್ನು ನಗಿಸುತ್ತಿದ್ದವು. ಇದರ ಮೂಲಕ ತಮ್ಮ ಸಾಮಥ್ರ್ಯದ ಅರಿವು ಪಡೆಯುತ್ತಿದ್ದ ಬಹಳಷ್ಟು ಜನ ನಾವು ಏನಾದರೂ ಸಾಧಿಸಬಹುದೆಂಬ ಪ್ರೇರಣೆ ಪಡೆದುದ್ದು ನಿಜ. ಆದರೆ ಇದು ಸ್ವಂತಿಕೆಯನ್ನು ಹಾಳು ಮಾಡುತ್ತಿದೆ, ಗೀಳು ಹುಟ್ಟಿಸಿತ್ತಿದೆ, ಕೆಟ್ಟ ಸಂದೇಶ, ಅತಿರೇಕದ ಸಂದೇಶಗಳು ನುಸುಳುತ್ತಿವೆ ಎಂಬ ಅಪವಾದಗಳು ಇದಕ್ಕಿದ್ದವು.

ಮಧುರೈನ ವಕೀಲ ಮುತ್ತುಕುಮಾರ್‍ರವರು ಈ ಆಪ್‍ನಿಂದ ಅಶ್ಲೀಲತೆ ಮತ್ತು ಅವಘಡ ಸಂಭವಿಸುತ್ತಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಕೋರ್ಟ್ ಆಪ್‍ಗೆ ತಡೆನೀಡಿತು. ತದನಂತರ ಟಿಕ್ ಟಾಕ್ ನಿರ್ವಹಿಸುವ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟೆಲೇರಿದರೂ ಫಲ ಸಿಗದೇ ಅನಿವಾರ್ಯವಾಗಿ ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಿಂದ ಈ ಆಪ್‍ಅನ್ನು ತೆಗೆಯಬೇಕಾಗಿತ್ತು. ಆಗಲೂ ಡೌನ್‍ಲೋಡ್ ಮಾಡಿಕೊಳ್ಳಲು ಆಗುತ್ತಿರಲಿಲ್ಲವಾದರೂ ಅಷ್ಟರಲ್ಲಾಗಲೇ ಡೌನ್‍ಲೋಡ್ ಮಾಡಿರುವವರು ಬಳಸಬಹುದಿತ್ತು ಮಾತ್ರವಲ್ಲ ಶೇರ್‍ಇಟ್ ಮತ್ತಿತ್ತರ ಆಪ್‍ಗಳ ಮೂಲಕ ಪರಸ್ಪರ ಕಳಿಸಿಕೊಳ್ಳಬಹುದಿತ್ತು.

ಆದರೆ ಈಗ ಕಂಪನಿಯು ಮದ್ರಾಸ್ ಹೈಕೋರ್ಟ್‍ನಲ್ಲಿ ಇದರಿಂದ ಸಾಮಾಜಿಕ ವಾತಾವರಣ ಹಾಳಾಗುತ್ತಿಲ್ಲವೆಂದು ಮನವರಿಕೆ ಮಾಡಿಕೊಟ್ಟ ಪರಿಣಾಮ ಮದ್ರಾಸ್ ಹೈಕೋರ್ಟ್ ನಿಷೇಧ ತೆರವುಗೊಳಿಸಿದೆ. ಇದರಿಂದ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ಗೆ ಲಗ್ಗೆ ಇಟ್ಟಿದೆ.

ಆಳುವ ಸರ್ಕಾರಗಳ ಬಳಿ ಇಂತಹ ಆಪ್ ಗಳು ಹೊಂದಿರಬೇಕಾದ ಮಾನದಂಡಗಳು ಕುರಿತು ಸ್ಪಷ್ಟ ನೀತಿ ಇಲ್ಲ. ಈ ಕುರಿತು ಗಂಭೀರವಾಗಿ ಯೋಚಿಸಿ ತಜ್ಞರನ್ನು ಒಳಗೊಂಡು ನೀತಿಗಳನ್ನು ರೂಪಿಸಬೇಕಿದೆ. ಅದೇ ರೀತಿ ಈ ಥರದ ಕಂಪನಿಗಳು ಸಹ ಅತಿರೇಕ ಮೀರದ ಹಾಗೆ ತಾವೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯೂ ಇದೆ.

2014ರಲ್ಲಿ ಆರಂಭಗೊಂಡಿದ್ದ ಈ ಕಂಪನಿ 5 ವರ್ಷಗಳಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಈ ಆಪ್ ಬಳಸಿ ತಮ್ಮ ಸೃಜನಶೀಲತೆ ಬಳಸಿ ವಿಡಿಯೋ ಮಾಡಿದ ಹಲವಾರು ಯುವಕ ಯುವತಿಯರು ರಾತ್ರೋ ರಾತ್ರಿ ಸ್ಟಾರ್‍ಗಳಾಗಿದ್ದಾರೆ. ಸೆಲೆಬ್ರಿಟಿಗಳಂತೆ ಹಲವು ಕಾರ್ಯಕ್ರಮಗಳಿಗೆ ಈಗಾಗಲೇ ಅತಿಥಿಗಳು ಆಗಿದ್ದಾರೆ. ಸಾಮಾಜಿಕ ಜಾಗೃತಿ ಮೂಡಿಸಲು ಸಹ ಕೆಲವು ಜನ ಈ ಆಪ್ ಬಳಸಿದ್ದಾರೆ. ಇನ್ನು ಮುಂದೆಯು ಯುವಜನರು ಇದನ್ನು ಹೆಚ್ಚು ಹೆಚ್ಚು ಸಮಾಜಮುಖಿ ಚಟುವಟಿಕೆಗಳಿಗೆ ಇದನ್ನು ಬಳಸಿದರೆ ಒಳ್ಳೇಯದು. ಅದರ ಜೊತೆಗೇ ಇದರಲ್ಲೇ ಮುಳುಗಿ ಹೋಗದೆ, ಇದರಿಂದ ಒಂದಷ್ಟು ರಿಲ್ಯಾಕ್ಸ್ ಪಡೆಯುವುದರ ಜೊತೆಗೆ ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಕಡೆ ಗಮನ ನೀಡಬೇಕೆಂದು ನಾವು ಆಶಿಸುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...