HomeಮುಖಪುಟTik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು....

Tik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು….

- Advertisement -
- Advertisement -

| ನಾನುಗೌರಿ ಡೆಸ್ಕ್ |

ಬಹಳಷ್ಟು ಯುವಕ ಯುವತಿಯರಿಗೆ ಚಿಕ್ಕಂದಿನಿಂದಲೂ ತಾವು ಸಿನೆಮಾ ನಟ ನಟಿಯರಾಗಬೇಕು, ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ, ಕನಸು ಇದ್ದೇ ಇರುತ್ತದೆ. ಆದರೆ ಸಾವಿರಕ್ಕೆ ಅಥವಾ ಲಕ್ಷಕ್ಕೆ ಒಬ್ಬರು ಮಾತ್ರ ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದು ವಾಸ್ತವದ ಸಂಗತಿ. ಇನ್ನುಳಿದವರ ಕೊರಗು ನಿವಾರಿಸಲು ಒಂದು ಮಟ್ಟಿಗೆ ಸಹಾಯ ಮಾಡಿದ್ದು ಫೇಸ್‍ಬುಕ್ ಮತ್ತು ವಾಟ್ಸಾಪ್. ತಮಗನ್ನಿಸಿದ್ದನ್ನು ಬರೆಯುವ, ವಿಡಿಯೊ ಮಾಡಿ ಅಪ್ ಲೋಡ್ ಮಾಡಲು ಅವಕಾಶ ಇದರಿಂದ ಸಿಕ್ಕಿತ್ತು. ಆದರೆ ಯಾವಾಗ ಟಿಕ್ ಟಾಪ್ ಆಪ್ ಬಂದಿತ್ತೋ ಹಲವಾರು ಜನ ತಮ್ಮ ಕನಸನ್ನು ನನಸು ಮಾಡಿಕೊಂಡರು. ಈ ಆಪ್ ಮೂಲಕ ಅಭಿನಯಿಸಿ, ನೃತ್ಯ ಮಾಡಿ ಅದನ್ನು ಸಾವಿರಾರು ಜನಕ್ಕೆ ತೋರಿಸಿ ಸಂತೃಪ್ತಿಪಟ್ಟುಕೊಂಡರು. ಅಂತಹ ಆಪ್ ಅನ್ನು ನಿಷೇಧಿಸಬೇಕೆನ್ನುವ ಮೂಲಕ ಸಾವಿರಾರು ಯುವನಜನರಿಗೆ ದಿಢೀರ್ ಶಾಕ್ ನೀಡಲಾಗಿತ್ತು.

20ಕೋಟಿಗೂ ಹೆಚ್ಚು ಜನ ಬಳಸುವ ಟಿಕ್ ಟಾಕ್ ಎಂಬ ಮನರಂಜನಾ ಆಪ್ ಬ್ಯಾನ್ ಆಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡುತ್ತಿತ್ತು. ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಲ್ಲಿ ರದ್ದಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ನಲ್ಲಿ ಕಾಣಿಸಿಕೊಂಡಿದ್ದು ಡೌನ್‍ಲೋಡ್‍ಗೆ ಲಭ್ಯವಾಗಿದೆ.

ಆರಂಭದಲ್ಲಿ ಡಬ್‍ಸ್ಮ್ಯಾಷ್ ಎಂದು ಕರೆಯಲ್ಪಡುತ್ತಿದ್ದ ಈ ಆಪ್ ನಂತರ ಮ್ಯುಸಿಕಲಿ ಎಂದಾಗಿತ್ತು. ಕೊನೆಗೆ ಟಿಕ್ ಟಾಕ್ ಎಂದು ಬದಲಿಸಕೊಂಡಮೇಲೆ ಸಾಕಷ್ಟು ಜನಪ್ರಿಯತೆಯ ಜೊತೆಗೆ ಕೋಟ್ಯಾಂತರ ಜನರು ಡೌನ್‍ಲೋಡ್ ಮಾಡಿಕೊಂಡು ಬಳಸಲು ಆರಂಭಿಸಿದ್ದರು. ಮಿಮಿಕ್ರಿಯಿಂದ ಆರಂಭವಾದು ಇದು ದೊಡ್ಡ ಸ್ಟಾರ್ ನಟನನ್ನು ಅನುಸರಿಲು ಬಳುಸತ್ತಿದ್ದರು. ಡಬ್‍ಸ್ಮ್ಯಾಷ್ ಮಾಡುವ ಮೂಲಕ ಇಷ್ಟ ಪಟ್ಟ ನಟನ ಅಭಿನಯವನ್ನು ನಕಲು ಮಾಡುವುದು, ಅವರ ಧ್ವನಿಗೆ ಇವರು ಅಭಿನಯಿಸಲು ಶುರು ಮಾಡಿದಾಗ ಇದು ಹೊಸ ರೀತಿಯ ಅಲೆಯನ್ನು ಮೂಡಿಸಿತ್ತು. ಈಗ ಅದೇ ರೀತಿಯ ಹಲವಾರು ಆಪ್ ಬಂದಿದ್ದು ಅದರಲ್ಲಿ ಟಿಕ್ ಟಾಕ್ ಮೇಲುಗೈ ಸಾಧಿಸಿದೆ.

ಮುಖ್ಯವಾಗಿ ಯುವಜನರು ಮತ್ತು ಸ್ಥಳೀಯ ಭಾಷಿಕರ ಮನಸ್ಥಿತಿಯನ್ನು ಅಧ್ಯಯನ ಮಾಡಿ ಆಪ್ ಡೆವಲಪ್ ಮಾಡಿದಂತಿದೆ. ಹಲವು ಸಿನಿಮಾದ ಸಣ್ಣ ದೃಶ್ಯಗಳ ವಾಯ್ಸ್‍ಗೆ ತಮ್ಮ ಅಭಿನಯ ಸೇರಿಸಿ ಚಿಕ್ಕ ವಿಡಿಯೋಗಳನ್ನು ತಯಾರಿಸಿ ಹರಿಯಬಿಡುವುದು, ತಾವೇ ಖುದ್ದಾಗಿ ತಮಾಷೆಯ ಪ್ರಸಂಗಗಳನ್ನು ಅಭಿನಯಿಸಿ ರೆಕಾರ್ಡ್ ಮಾಡುವುದು, ಡ್ಯಾನ್ಸ್‍ಗಳನ್ನು ಮಾಡುವುದು, ಟ್ರೋಲ್ ಮಾಡುವುದು ಸೇರಿದಂತೆ ಹತ್ತು ಹಲವು ಸಣ್ಣ ವಿಡಿಯೋಗಳು ಟಿಕ್ ಟಾಕ್‍ನಲ್ಲಿ ಹರಿದಾಡಿದ್ದವು. ಕಾಲಕ್ಕೆ ತಕ್ಕಂತೆ ಒಂದು ವಿಡಿಯೋ ನೀಡಿ ಅದೇ ಮಾದರಿಯ ವಿಡಿಯೋ ಮಾಡಿ ಕಳಿಸುವಂತೆ ಚಾಲೆಂಜ್ ನೀಡಿ ಈ ಆಪ್‍ನ ಪ್ರಿಯರು ಇದರಲ್ಲೇ ಗಿರಕಿ ಹೊಡೆಯುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಒಬ್ಬ ಯುವಕ ಚಾಕುವಿನಿಂದ ಕತ್ತು ಕುಯ್ದುಕೊಳ್ಳುವಂತೆ ಅಭಿನಯಿಸಲು ಹೋಗಿ ನಿಜವಾಗಿಯೂ ಕತ್ತು ಕುಯ್ದುಕೊಂಡುಬಿಟ್ಟ ವಿಡಿಯೋ ವೈರಲ್ ಆಗಿತ್ತು. ಇಂತಹ ಅತಿರೇಕವಾದಂತಹ ವ್ಯಕ್ತಿಗಳಿಂದಲೇ ಟಿಕ್ ಟಾಕ್ ಬ್ಯಾನ್ ಆಗುವ ಹಂತಕ್ಕೆ ತಲುಪಿತ್ತು.

ಎಲ್ಲಾ ವಯೋಮಾನದವರು ಸಹ ಬೇಸರ ಕಳೆಯಲು, ಟೈಮ್ ಪಾಸ್ ಮಾಡಲು ಟಕ್ ಟಾಕ್ ಬಳಸಿದರೆ ಬಹುಪಾಲು ಯುವ ಜನಾಂಗ ಇದರ ದಾಸರಂದತ್ತಿದೆ. ‘ಯಾವಾಗ ನೋಡಿದರೂ ಟಿಕ್ ಟಾಕ್‍ನಲ್ಲೇ ಮುಳುಗಿರುತ್ತೀಯಲ್ಲ’ ಎಂಬ ಟೀಕೆ ಎಲ್ಲಾ ಕಡೆ ಸಹಜವಾಗಿ ಕೇಳಿ ಬರುತ್ತಿದೆ. ಈ ಆಪ್ ಜನರಿಗೆ ಅತಿ ಹೆಚ್ಚು ಮನರಂಜನೆ ನೀಡಿದ್ದು ಎಷ್ಟು ನಿಜವೋ, ಅಷ್ಟೇ ಪ್ರಮಾಣದಲ್ಲಿ ಅವರನ್ನು ಸೋಮಾರಿಗಳನ್ನಾಗಿಯೂ ಮಾಡಿತ್ತು.
ಈ ಆಪ್‍ನ ಅನುಕೂಲ ಮತ್ತು ಅನಾನುಕೂಲಗಳನ್ನು ನೋಡಿದರೆ, ಮೊದಲನೇಯದಾಗಿ ಆ ಆಪ್ ಬಳಸಿ ಸಾವಿರಾರು ಜನ ತಮ್ಮ ಸೃಜನಶೀಲತೆಯನ್ನು ಬಹಿರಂಗಪಡಿಸಿದ್ದರು. ಅದರಲ್ಲಿನ ಒಂದೊಂದು ಚಿಕ್ಕ ವಿಡಿಯೋ ಸಹ ವಾವ್ ಅನ್ನಿಸುವಷ್ಟರ ಮಟ್ಟಿಗೆ ಹೊಸತನದಿಂದ ಕೂಡಿ ಎಲ್ಲರನ್ನು ನಗಿಸುತ್ತಿದ್ದವು. ಇದರ ಮೂಲಕ ತಮ್ಮ ಸಾಮಥ್ರ್ಯದ ಅರಿವು ಪಡೆಯುತ್ತಿದ್ದ ಬಹಳಷ್ಟು ಜನ ನಾವು ಏನಾದರೂ ಸಾಧಿಸಬಹುದೆಂಬ ಪ್ರೇರಣೆ ಪಡೆದುದ್ದು ನಿಜ. ಆದರೆ ಇದು ಸ್ವಂತಿಕೆಯನ್ನು ಹಾಳು ಮಾಡುತ್ತಿದೆ, ಗೀಳು ಹುಟ್ಟಿಸಿತ್ತಿದೆ, ಕೆಟ್ಟ ಸಂದೇಶ, ಅತಿರೇಕದ ಸಂದೇಶಗಳು ನುಸುಳುತ್ತಿವೆ ಎಂಬ ಅಪವಾದಗಳು ಇದಕ್ಕಿದ್ದವು.

ಮಧುರೈನ ವಕೀಲ ಮುತ್ತುಕುಮಾರ್‍ರವರು ಈ ಆಪ್‍ನಿಂದ ಅಶ್ಲೀಲತೆ ಮತ್ತು ಅವಘಡ ಸಂಭವಿಸುತ್ತಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಕೋರ್ಟ್ ಆಪ್‍ಗೆ ತಡೆನೀಡಿತು. ತದನಂತರ ಟಿಕ್ ಟಾಕ್ ನಿರ್ವಹಿಸುವ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟೆಲೇರಿದರೂ ಫಲ ಸಿಗದೇ ಅನಿವಾರ್ಯವಾಗಿ ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಿಂದ ಈ ಆಪ್‍ಅನ್ನು ತೆಗೆಯಬೇಕಾಗಿತ್ತು. ಆಗಲೂ ಡೌನ್‍ಲೋಡ್ ಮಾಡಿಕೊಳ್ಳಲು ಆಗುತ್ತಿರಲಿಲ್ಲವಾದರೂ ಅಷ್ಟರಲ್ಲಾಗಲೇ ಡೌನ್‍ಲೋಡ್ ಮಾಡಿರುವವರು ಬಳಸಬಹುದಿತ್ತು ಮಾತ್ರವಲ್ಲ ಶೇರ್‍ಇಟ್ ಮತ್ತಿತ್ತರ ಆಪ್‍ಗಳ ಮೂಲಕ ಪರಸ್ಪರ ಕಳಿಸಿಕೊಳ್ಳಬಹುದಿತ್ತು.

ಆದರೆ ಈಗ ಕಂಪನಿಯು ಮದ್ರಾಸ್ ಹೈಕೋರ್ಟ್‍ನಲ್ಲಿ ಇದರಿಂದ ಸಾಮಾಜಿಕ ವಾತಾವರಣ ಹಾಳಾಗುತ್ತಿಲ್ಲವೆಂದು ಮನವರಿಕೆ ಮಾಡಿಕೊಟ್ಟ ಪರಿಣಾಮ ಮದ್ರಾಸ್ ಹೈಕೋರ್ಟ್ ನಿಷೇಧ ತೆರವುಗೊಳಿಸಿದೆ. ಇದರಿಂದ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ಗೆ ಲಗ್ಗೆ ಇಟ್ಟಿದೆ.

ಆಳುವ ಸರ್ಕಾರಗಳ ಬಳಿ ಇಂತಹ ಆಪ್ ಗಳು ಹೊಂದಿರಬೇಕಾದ ಮಾನದಂಡಗಳು ಕುರಿತು ಸ್ಪಷ್ಟ ನೀತಿ ಇಲ್ಲ. ಈ ಕುರಿತು ಗಂಭೀರವಾಗಿ ಯೋಚಿಸಿ ತಜ್ಞರನ್ನು ಒಳಗೊಂಡು ನೀತಿಗಳನ್ನು ರೂಪಿಸಬೇಕಿದೆ. ಅದೇ ರೀತಿ ಈ ಥರದ ಕಂಪನಿಗಳು ಸಹ ಅತಿರೇಕ ಮೀರದ ಹಾಗೆ ತಾವೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯೂ ಇದೆ.

2014ರಲ್ಲಿ ಆರಂಭಗೊಂಡಿದ್ದ ಈ ಕಂಪನಿ 5 ವರ್ಷಗಳಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಈ ಆಪ್ ಬಳಸಿ ತಮ್ಮ ಸೃಜನಶೀಲತೆ ಬಳಸಿ ವಿಡಿಯೋ ಮಾಡಿದ ಹಲವಾರು ಯುವಕ ಯುವತಿಯರು ರಾತ್ರೋ ರಾತ್ರಿ ಸ್ಟಾರ್‍ಗಳಾಗಿದ್ದಾರೆ. ಸೆಲೆಬ್ರಿಟಿಗಳಂತೆ ಹಲವು ಕಾರ್ಯಕ್ರಮಗಳಿಗೆ ಈಗಾಗಲೇ ಅತಿಥಿಗಳು ಆಗಿದ್ದಾರೆ. ಸಾಮಾಜಿಕ ಜಾಗೃತಿ ಮೂಡಿಸಲು ಸಹ ಕೆಲವು ಜನ ಈ ಆಪ್ ಬಳಸಿದ್ದಾರೆ. ಇನ್ನು ಮುಂದೆಯು ಯುವಜನರು ಇದನ್ನು ಹೆಚ್ಚು ಹೆಚ್ಚು ಸಮಾಜಮುಖಿ ಚಟುವಟಿಕೆಗಳಿಗೆ ಇದನ್ನು ಬಳಸಿದರೆ ಒಳ್ಳೇಯದು. ಅದರ ಜೊತೆಗೇ ಇದರಲ್ಲೇ ಮುಳುಗಿ ಹೋಗದೆ, ಇದರಿಂದ ಒಂದಷ್ಟು ರಿಲ್ಯಾಕ್ಸ್ ಪಡೆಯುವುದರ ಜೊತೆಗೆ ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಕಡೆ ಗಮನ ನೀಡಬೇಕೆಂದು ನಾವು ಆಶಿಸುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...