Homeಕರೋನಾ ತಲ್ಲಣಡ್ರೈ ರನ್ ಎಂದರೇನು?: ಮೊದಲ ಡ್ರೈ ರನ್‌ನಲ್ಲಿ ಕಂಡು ಬಂದ ಮೂರು ಲೋಪಗಳು

ಡ್ರೈ ರನ್ ಎಂದರೇನು?: ಮೊದಲ ಡ್ರೈ ರನ್‌ನಲ್ಲಿ ಕಂಡು ಬಂದ ಮೂರು ಲೋಪಗಳು

ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳ 16 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯುತ್ತಿದೆ.

- Advertisement -
- Advertisement -

ದೇಶದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ತಾಲೀಮು ನಡೆಯುತ್ತಿದೆ. ದೇಶದ 116 ಜಿಲ್ಲೆಗಳ 259 ಕೇಂದ್ರಗಳಲ್ಲಿ ಲಸಿಕೆ ತಾಲೀಮು ಆರಂಭವಾಗಿದೆ. ಅತಿ ದೊಡ್ಡ ಲಸಿಕೆ ವಿತರಣೆ ಕಾರ್ಯದ ಅಂಗವಾಗಿ ದೇಶದಲ್ಲಿ ಈ ತಾಲೀಮು ನಡೆಯುತ್ತಿದೆ.

ಮೊದಲ ತಾಲೀಮು, ಅಸ್ಸಾಂ, ಆಂಧ್ರಪ್ರದೇಶ, ಪಂಜಾಬ್ ಮತ್ತು ಗುಜರಾತ್ ನಾಲ್ಕು ರಾಜ್ಯಗಳಲ್ಲಿ ಡಿಸೆಂಬರ್ 28, 29 ರಂದು ನಡೆದಿದೆ. ಈ ಪ್ರಯೋಗದಲ್ಲಿ ಮೂರು ಪ್ರಮುಖ ಲೋಪಗಳು ಕಂಡು ಬಂದಿದ್ದು, ಅವುಗಳನ್ನು ಸರಿಪಡಿಸುವ ಕೆಲಸ ಎರಡನೇ ಹಂತದ ತಾಲೀಮಿನಲ್ಲಿ ನಡೆದಿದೆ.

ಡ್ರೈ ರನ್ ಎಂದರೇನು?

ಲಸಿಕೆ ಹೇಗೆ ಕೊಡಬೇಕೆಂದು ಪೂರ್ವತಯಾರಿ ನಡೆಸಿ ತಾಲೀಮು ನಡೆಸುವುದನ್ನು ಡ್ರೈ ರನ್ ಎನ್ನುತ್ತಾರೆ. ಲಸಿಕೆ ತಾಲೀಮಿನಲ್ಲಿ ನೈಜ್ಯ ಲಸಿಕೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಲಸಿಕೆ ವಿತರಣೆ ಯೋಜನೆಯ ಎಲ್ಲ ಪ್ರಕ್ರಿಯೆಗಳು ನಡೆಯಲಿದೆ. ಲಸಿಕೆ ಸಂಗ್ರಹಣೆ ವ್ಯವಸ್ಥೆ, ದಾಖಲೆಗಳ ಪರಿಶೀಲನೆ, ಲಸಿಕೆ ಸಾಗಣಿಕೆ, ಭದ್ರತೆ, ಮೆಲಧಿಕಾರಿಗಳಿಗೆ ವರದಿ ಒಪ್ಪಿಸುವುದು. ಲಸಿಕೆ ವಿತರಣೆಯಲ್ಲಿ ಉಂಟಾಗುವ ಲೋಪದೋಷಗಳನ್ನು ಪರೀಕ್ಷಿಸಲು ಈ ಡ್ರೈ ರನ್ ನಡೆಸಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ

ಲಸಿಕೆ ತಾಲೀಮು ನಡೆಸಲು ಸುಮಾರು 96,000 ವ್ಯಾಕ್ಸಿನೇಟರ್‌ಗಳಿಗೆ ತರಬೇತಿ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಪೈಕಿ 2,360 ಮಂದಿಗೆ ರಾಷ್ಟ್ರೀಯ ತರಬೇತುದಾರರ ತರಬೇತಿ ಕೇಂದ್ರದಲ್ಲಿ ಮತ್ತು 57,000 ಕ್ಕೂ ಹೆಚ್ಚು ಜನರಿಗೆ ಜಿಲ್ಲಾ ಮಟ್ಟದಲ್ಲಿ 719 ಜಿಲ್ಲೆಗಳಲ್ಲಿ ತರಬೇತಿ ನೀಡಲಾಗಿದೆ.

ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳ 16 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯುತ್ತಿದೆ. ಜಿಲ್ಲಾ ಮಟ್ಟದಲ್ಲಿ ಒಂದು ಕೇಂದ್ರ, ತಾಲೂಕು ಮಟ್ಟದಲ್ಲಿ ಒಂದು ಮತ್ತು ಗ್ರಾಮೀಣ ಮಟ್ಟದಲ್ಲಿ ಒಂದೊಂದು ಪ್ರಾಥಮಿಕ ಕೇಂದ್ರಗಳಲ್ಲಿ ಪ್ರಯೋಗ ನಡೆಯಲಿದೆ.

ಇದನ್ನೂ ಓದಿ: ಹರಿಯಾಣದ ಎಲ್ಲಾ ಪೆಟ್ರೋಲ್ ಪಂಪ್‌ ಮುಚ್ಚುವ ದಿನಾಂಕ ಘೋಷಿಸುತ್ತೇವೆಂದು ಎಚ್ಚರಿಕೆ!

ಮೊದಲ ಲಸಿಕೆ ತಾಲೀಮು (ಡ್ರೈ ರನ್) ಅಸ್ಸಾಂ, ಆಂಧ್ರಪ್ರದೇಶ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳ ತಲಾ ನಾಲ್ಕು ಕೇಂದ್ರಗಳಲ್ಲಿ ನಡೆದಿತ್ತು. ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಇದಾಗಿತ್ತು. ಅಂದರೆ 16 ಕೇಂದ್ರಗಳಲ್ಲಿ 1,600 ಜನರಿಗೆ ಲಸಿಕೆ ಹಾಕುವ ಪ್ರಯೋಗ. ಈ ಸಣ್ಣ ಪ್ರಮಾಣದ ಸಂಖ್ಯೆಯಿದ್ದರೂ ಹಲವು ಲೋಪಗಳು ಕಂಡುಬಂದಿದ್ದವು.

ಮೊದಲ ಡ್ರೈ ರನ್‌ನಲ್ಲಿ ಕಂಡು ಬಂದ ಲೋಪಗಳು:

1. ದೂರದ ಗ್ರಾಮಗಳ ಪಿನ್‌ಕೋಡ್ ಸಂಖ್ಯೆ ಕೊ-ವಿನ್ ಪ್ಲಾಟ್‌ಫಾರಂಗೆ ಸರಿಯಾಗಿ ಹೊಂದಾಣಿಕೆ ಆಗದೇ ಇದ್ದಿದ್ದು. ಕೊ-ವಿನ್  ವ್ಯವಸ್ಥೆ ಲಸಿಕಾ ಕಾರ್ಯಕ್ರಮದ ಮಹತ್ತರ ಡಿಜಿಟಲ್ ವ್ಯವಸ್ಥೆಯಾಗಿದ್ದು, ಅದು ಇಡೀ ಲಸಿಕಾ ಕಾರ್ಯಕ್ರಮವನ್ನು ಟ್ರ್ಯಾಕ್ ಮಾಡುತ್ತಿರುತ್ತದೆ. ಮೊದಲ ಡ್ರೈ ರನ್‌ನಲ್ಲಿ ಕೊ-ವಿನ್ ದೂರದ ಗ್ರಾಮಗಳ ಪಿನ್‌ಕೋಡ್ ಮ್ಯಾಪಿಂಗ್‌ನಲ್ಲಿ ವಿಫಲವಾದ ನಂತರ, ಆರೋಗ್ಯಾಧಿಕಾರಿಗಳು ಮ್ಯಾನುವಲ್ ಆಗಿ ಪಿನ್‌ಕೋಡ್ ದಾಖಲಿಸಿದ್ದರು. ಈಗ ಎರಡನೇ  ತಾಲೀಮಿನಲ್ಲಿ ಸಾಫ್ಟ್‌ವೇರ್ ಅನ್ನು ಸಂಪೂರ್ಣ ಸಜ್ಜುಗೊಳಿಸಲಾಗಿದೆ ಎನ್ನಲಾಗಿದೆ.

Image
PC: ANI

2. ಲಸಿಕೆ ನೀಡುವಾಗ ಅಥವಾ ನೀಡಿದ ನಂತರ ಸಂಭವಿಸಬಹುದಾದ ಅಹಿತಕರ ಘಟನೆ ಅಥವಾ ಅಡ್ಡ ಪರಿಣಾಮಗಳನ್ನು ಆಗಲೇ (ರಿಯಲ್ ಟೈಮ್‌ನಲ್ಲಿ) ದಾಖಲಿಸಿಕೊಳ್ಳಲು ಆಗದೇ ಇದ್ದುದು. ಇಂತಹ ಘಟನೆಗಳು ಇಡೀ ಸೆಷನ್ ಮುಗಿದ ನಂತರವಷ್ಟೇ (ಮೊದಲ ಹಂತದಲ್ಲಿ 100 ಜನರಿಗೆ ಲಸಿಕೆ ನೀಡಿದ ನಂತರ) ಕೊ-ವಿನ್‌ಗೆ ಒಮ್ಮೆಲೇ ಅಪ್‌ಲೋಡ್ ಆಗುತ್ತಿದ್ದವು.

3. ಲಸಿಕಾ ತಂಡಕ್ಕೆ ಸಿಕ್ಕಿರುವ ಅಸಮರ್ಪಕ ತರಬೇತಿ. ಕೆಲವು ಕಡೆ ಐವರ ಲಸಿಕಾ ತಂಡದಲ್ಲಿ, ಯಾರು ಯಾವ ಕೆಲಸ ಮಾಡಬೇಕು ಎಂಬುದೇ ಗೊಂದಲಮಯವಾಗಿತ್ತು.

ಒಬ್ಬ ಪ್ರಿಸೈಡಿಂಗ್ ಆಫೀಸರ್ ಮತ್ತು ನಾಲ್ಕು ವ್ಯಾಕಿನೇಟರ್‌ಗಳ ನಡುವೆ ಸಾಕಷ್ಟು ಗೊಂದಲವಿತ್ತು. ಯಾರು ವ್ಯಾಕಿನೇಟರ್, ಯಾರು ಪ್ರಿಸೈಡಿಂಗ್ ಆಫೀಸರ್ ಎಂಬ ಗೊಂದಲವೂ ಮೂಡಿದ ಪ್ರಕರಣಗಳು ನಡೆದಿವೆ.  ಈ ಹಿನ್ನೆಲೆ ಎರಡನೇ ತಾಲೀಮಿಗೆ ತಯಾರಾಗಿರುವ ತಂಡಗಳಿಗೆ ಸರಿಯದ ತರಬೇತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳುತ್ತಿವೆ.


ಇದನ್ನೂ ಓದಿ: ಸೆಪ್ಟಂಬರ್‌ ತಿಂಗಳವರೆಗೆ ಕೇಂದ್ರ ಸರ್ಕಾರ ಮಾಡಿದ ಒಟ್ಟು ಸಾಲ 107.04 ಲಕ್ಷ ಕೋಟಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...