HomeUncategorizedಹೊನ್ನಿನೊಳಗೊಂದೊರೆಯನ್ನೂ ಬಯಸದ ಬಸವಣ್ಣನವರು ಹಾಗೂ ಅಕ್ಷಯ ತೃತೀಯ ಎಂಬ ಮೋಸ !

ಹೊನ್ನಿನೊಳಗೊಂದೊರೆಯನ್ನೂ ಬಯಸದ ಬಸವಣ್ಣನವರು ಹಾಗೂ ಅಕ್ಷಯ ತೃತೀಯ ಎಂಬ ಮೋಸ !

- Advertisement -
| ವಿಶ್ವಾರಾಧ್ಯ ಸತ್ಯಂಪೇಟೆ |
ಪ್ರತಿ ವರ್ಷ ಅಕ್ಷಯ ತೃತೀಯ ದಿನ ಬಂತೆಂದರೆ ಬಂಗಾರ ಮಾರಾಟ ಮಾಡುವವರಿಗೂ ಹಾಗೂ ತೆಗೆದುಕೊಳ್ಳುವವರಿಗೂ ಖುಷಿಯೋ ಖುಷಿ. ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯ ದಿನದಂದು ಯಾರು ಬಂಗಾರ ಖರೀದಿ ಮಾಡುತ್ತಾರೊ ಅವರ ಮನೆಯಲ್ಲಿ ಬಂಗಾರದ ಹೊಳೆಯೇ ಹರಿಯುತ್ತದೆ ಎಂಬುದೊಂದು ನಂಬಿಕೆ. ಈ ನಂಬಿಕೆಗೆ ಯಾವುದೆ ರೀತಿಯ ವೈಜ್ಞಾನಿಕ ಆಧಾರವಿಲ್ಲವೆಂಬುದು ಅಷ್ಟೇ ಸತ್ಯ. ಆದರೆ ಜನ ನಂಬುಗೆಯ ಜಾತ್ರೆಯಲ್ಲಿ ತಮ್ಮ ಅಸಲಿತನವನ್ನು ಕಳಕೊಂಡಿದ್ದಾರೆ. ಜೋತಿಷ್ಯಗಾರರಿಗೆ ತಮ್ಮ ತಲೆಯನ್ನು ಒತ್ತೆ ಇಟ್ಟ ಮೇಲೆ ಅವರ ಮಿದುಳು ಕ್ರಿಯಾಶೀಲವಾಗಿದೆ ಎಂದು ಊಹಿಸಲು ಸಾಧ್ಯವಿಲ್ಲದ ವಾತಾವರಣ ಇಂದು ಸೃಷ್ಟಿಯಾಗಿದೆ. ಇದು ನಮ್ಮ ಭಾರತಿಯರೆಲ್ಲರ ದುರಂತವಾಗಿದೆ.
ಮತ್ತೊಂದು ಆಶ್ಚರ್ಯ ಹಾಗೂ ವ್ಯಂಗ್ಯದ ಸಮಾಚಾರವೆಂದರೆ ಇದೆ ಅಕ್ಷಯ ತೃತೀಯ ನಕ್ಷತ್ರದ ದಿನ ಯುಗ ಯುಗಳ ಪುರುಷ, ವೈಚಾರಿಕ ಚಿಂತಕ, ಚಳುವಳಿಗಳ ಜನಕ ವಿಶ್ವಗುರು ಬಸವಣ್ಣನವರು ಹುಟ್ಟಿದ ದಿನ. ಅಕ್ಷಯ ತೃತೀಯ ದಿನದ ನಂಬುಗೆ ಒಂದು ಬಗೆಯಾದರೆ ಬಸವಣ್ಣನವರ ವಿಚಾರ ಧಾರೆ ಮತ್ತೊಂದು ಮಗ್ಗುಲು. ಇವು ಒಂದಕ್ಕೊಂದು ಸೇರಲು ಸಾಧ್ಯವೇ ಇಲ್ಲ. ಒಂದು ಉತ್ತರವಾದರೆ ಮತ್ತೊಂದು ದಕ್ಷಿಣ. ಆದರೆ ನಾವು ಇವೆರಡರಲ್ಲಿ ಯಾವುದನ್ನು ಆಯ್ದುಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ ಎಂಬ ಸತ್ಯವನ್ನು ಮನಗಾಣಲೆಬೇಕಾಗಿದೆ. ಇಲ್ಲದೆ ಹೋದರೆ ನಾವು ಬದುಕಿರುವವರೆಗೂ ಭ್ರಮೆಗಳ ನಡುವೆಯೆ ಬದುಕು ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಸತ್ತು ಹೋಗುವ ಅಪಾಯ ಇದೆ.
ಹೊನ್ನಿನೊಳಗೊಂದೊರೆಯ , ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣಿ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ
ಎಂಬುದು ಬಸವಣ್ಣನವರ ಉಸಿರು. ನಾಳೆ ಬೇಕೆಂದು ತೆಗೆದು ಇರಿಸುವುದೆ ಬಹು ದೊಡ್ಡ ಅಪರಾಧ. ಅಲ್ಲದೆ ಹೊನ್ನು ಮಾಯೆ ಎಂಬರು. ಹೊನ್ನು ಮಾಯೆ ಅಲ್ಲವೆ ಅಲ್ಲ, ಮನದ ಮುಂದಣ ಆಸೆಯೆ ಮಾಯೆ ಎಂಬುದು ಶರಣರ ಇಂಗಿತವಾಗಿದೆ. ನಾಳೆ ಬೇಕೆಂದು ತೆಗೆದು ಇಡುವುದು ಅಪರಾಧ. ಒಂದು ಸಲ ಬಸವಣ್ಣನವರ ಮಹಾಮನೆಗೆ ಕಳ್ಳನೊಬ್ಬ ಬರುತ್ತಾನೆ. ಆ ಕಳ್ಳ ಸಹಜವಾಗಿ ನೀಲಾಂಬಿಕೆಯ ಕಿವಿಯಲ್ಲಿರುವ ಓಲೆಗೆ ಕೈಹಾಕಿ ಕಳ್ಳತನ ಮಾಡಬೇಕೆಂದು ಪ್ರಯತ್ನ ಮಾಡುತ್ತಿರುತ್ತಾನೆ. ಆಗ ನೀಲಾಂಬಿಕೆ ಚಟಾರನೆ ಕಿರುಚಿಕೊಂಡು ಕಳ್ಳ ಕಳ್ಳ ಎಂದು ಧಾವಂತಗೊಳ್ಳುತ್ತಾರೆ. ಆಶ್ಚರ್ಯವೆಂದರೆ ಕಲ್ಯಾಣ ನಾಡಿನ ಅಂದಿನ ಪ್ರಧಾನಿಯಾಗಿದ್ದ ಬಸವಣ್ಣನವರು ತನ್ನ ಮಡದಿ ನೀಲಾಂಬಿಕೆಯನ್ನು ಗದರಿಸುವ ಧ್ವನಿಯಲ್ಲಿ  :
ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ
ಅಯ್ಯ ನಮ್ಮಯ್ಯನ ಕೈನೊಂದಿತು,
ತೆಗೆದುಕೊಡಾ ಎಲೆ ಬೆಂಡೊಲೆ ಕಿತ್ತಿ
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ
ಕೂಡಲಸಂಗಮನಲ್ಲದೆ ಆರೂ ಇಲ್ಲ
ಎಂಬ ವಚನದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ನಮಗೆ ಬೇಕಾಗಿರುವುದಕ್ಕಿಂತಲೂ ಹೆಚ್ಚು ಹೆಚ್ಚು ಸಂಗ್ರಹ ಮಾಡಿಕೊಂಡಿರುವುದೆ ದೊಡ್ಡ ಅಪರಾಧ. ಕಳ್ಳನಾದರೂ ತನ್ನ ಹಸಿವನ್ನು ಹಿಂಗಿಸಿಕೊಳ್ಳಲು ಕಳ್ಳತನಕ್ಕೆ ಇಳಿದಿರಬಹುದು. ಆದರೆ ನಮ್ಮ ಹೊಟ್ಟೆ ತುಂಬಿಸಿಕೊಂಡೂ ಹೆಚ್ಚು ಹೆಚ್ಚು ಬೇಕೆಂಬ ಬಯಕೆ ಇಟ್ಟುಕೊಂಡವರೆ ಬಲುಗಳ್ಳರು. ಹೀಗಾಗಿ ಆತ ಹಸಿವೆಗಾಗಿ ನಮ್ಮ ಮನೆಗೆ ಬಂದಾತ. ನಾವು ಬಲುಗಳ್ಳರು ಎಂಬುದು ಬಸವಣ್ಣನವರ ಆಶಯ.
ಹೊನ್ನಿಂಗೆ ಬಂದಿಲ್ಲದ, ಹೆಣ್ಣಿಂಗೆ ಬಂದಿಲ್ಲದ , ಆಶನಕ್ಕೆ- ವಸನಕ್ಕೆ ಬಂದಿಲ್ಲದ ಭಕ್ತಿಯ ಪಥವ ತೋರಲು ಬಂದ ಬಸವಣ್ಣನವರ ಹುಟ್ಟು ಹಬ್ಬದ ದಿನವೆ ಅಕ್ಷಯ ತೃತಿ ಎಂಬ ದಿನ ಬಂದಿರುವುದು ಕಾಕತಾಳೀಯ. ಕನಿಷ್ಠ ಪಕ್ಷ ಬಸವಾದಿ ಶರಣರ ಆಶಯಗಳನ್ನು ಹೇಳುವ , ಅನುಸರಿಸುವ ಜನಗಳಾದರೂ ಅಕ್ಷಯ ತೃತೀಯ ಎಂಬ ವಿಶೇಷ ದಿನದಂದು  ಪುರೋಹಿತರು ನಂಬಿಸಿದ ಮೌಢ್ಯದ ಎದುರು ಈಜಬೇಕಿದೆ. ನಮ್ಮ ರಾಜ್ಯದಲ್ಲಿಯೆ ನಿನ್ನೆಯ ದಿನ 3900 ಕೋಟಿ ಮೌಲ್ಯದ ಚಿನ್ಹ ಮಾರಾಟವಾಗಿರುವುದು ನೋಡಿದರೆ ನಾವು ಎತ್ತ ಹೊರಟಿದ್ದೇವೆ ? ಎಂಬುದು ಮನದಟ್ಟಾಗುತ್ತದೆ. ಹೊನ್ನಿನೊಳಗೆ ಒಂದೊರೆಯ ಎಂಬ ಬಸವಣ್ಣನವರ ಮಾತು ಒತ್ತಟ್ಟಿಗಿರಲಿ, ಈ ದಿನ ಖರೀದಿಸಿದ ಬಂಗಾರ ಮುಂದಿನ ವರ್ಷದಷ್ಟೊತ್ತಿಗೆ ದುಪ್ಪಟ್ಟು ಆಗುತ್ತದೆ ಎಂಬುದೆ ಮೂರ್ಖತನವಲ್ಲವೆ ? ವ್ಯಾಪಾರಿಗಳು ಹಾಗೂ ಜೋತಿಷ್ಯಿಗಳು ಕೂಡಿ ಮಾಡಿದ ಆಟಕ್ಕೆ ಭಾರತೀಯ ಮನಸ್ಸುಗಳು ಪಿಗ್ಗಿ ಬಿದ್ದಿರುವುದು ಕಾಣುತ್ತೇವೆ. ಪಂಚಾಂಗವೆಂಬ ಗಣಿತವಲ್ಲದ, ವಿಜ್ಞಾನವಲ್ಲದ ಅರೆ ಬರೆ ಅಜ್ಞಾನದ ಹಿಂದೆ ಹೋಗುತ್ತಿದ್ದೇವೆ. ಪ್ರಜ್ಞಾವಂತ ಬಸವಣ್ಣನವರ ನಾಡಿನ ನಾವೆಲ್ಲ ವ್ಯಾಪಾರಿಗಳ ಹಾಗೂ ಜೋತಿಷ್ಯಿಗಳ ಕೌಲು ಕೂಟಕ್ಕೆ ಬಲಿಯಾಗಿರುವುದು ಎಷ್ಟು ಸರಿ ? ಎಂದು ನಮ್ಮನ್ನೆ ನಾವು ಕೇಳಿಕೊಳ್ಳಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...