Homeಮುಖಪುಟಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

ಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

- Advertisement -
- Advertisement -

ತಂತ್ರಜ್ಞಾನ ಬದಲಾದಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಿರುತ್ತವೆ .ಹಾಗೇಯೆ ಸಿನೆಮಾ ಮತ್ತು ದೃಶ್ಯ ಮಾಧ್ಯಮ ರಂಗದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳಾದವು. ಮೊದಲಿಗೆ ದೂರದರ್ಶನ ಬಂದಾಗ ಹಳ್ಳಿಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಮಾತ್ರ ಟಿವಿ ಇರುತ್ತಿತ್ತು. ಆಗ ಜನ ವಾರಕ್ಕೆ ಒಮ್ಮೆ ಬರುವ ಸಿನೆಮಾಗಾಗಿ ಕಾಯುತ್ತಿದ್ದರು. ಥೀಯೇಟರ್‍ ಗಳಿಗೆ ಹೋಗಲಾರದ ಜನ ವರ್ಷನು ಗಟ್ಟಲೇ ಹೊಸ ಸಿನೆಮಾ ಟಿವಿಯಲ್ಲಿ ಬರುವುದನ್ನು ಕಾಯುತ್ತಿದ್ದರು. ಈಗ ನಿರಂತರ 24/7 ಸುದ್ದಿವಾಹಿನಿಗಳ ಹಾಗೆ, ಸಿನೆಮಾ ಚಾನೆಲ್ ಗಳು ಸಹ ಬಂದಿದ್ದು ಸಾಕಷ್ಟು ಸಿನೆಮಾಗಳನ್ನು ನೋಡಬಹುದಾಗಿದೆ. ಆದರೆ ಈಗಲೂ ಬಿಡುಗಡೆಯಾದ ಹೊಸ ಸಿನೆಮಾ ಟಿವಿಯಲ್ಲಿ ಬರಲು ಸಾಕಷ್ಟು ತಿಂಗಳ ಸಮಯ ತೆಗೆದುಕೊಳ್ಳತ್ತಿದೆ. ಕೆಲವರು ತಮ್ಮ ನೆಚ್ಚಿನ ನಾಯಕರ ಸಿನೆಮಾಗಳನ್ನು ನೋಡಲೇಬೇಕೆಂದು ಪೈರೆಸಿ ಡಿವಿಡಿ, ಸಿಡಿ ನೋಡುತ್ತಿದ್ದರಾದರು ಅವು ಕ್ಯಾಮರ ಪ್ರಿಂಟ್ ಆಗಿದ್ದು ಗುಣಮಟ್ಟದ್ದಾಗಿರುತ್ತಿರಲಿಲ್ಲ.

ಅವರೆಲ್ಲರ ಸಮಸ್ಯೆ ನೀಗಿಸಿದ್ದೆ ನೆಟ್‍ಪ್ಲಿಕ್ಸ್, ಆಮೇಜಾನ್ ಪ್ರೈಮ್‍ನಂತಹ ಓವರ್ ದಿ ಟಾಪ್ (ಓಟಿಟಿ) ನಂತಹ ವೇದಿಕೆಗಳು. ಇವು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಒಂದು ತಿಂಗಳ ಒಳಗೆ ಜನರಿಗೆ ತಲುಪಿಸುತ್ತಿವೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ಮತ್ತು ಸ್ಥಳೀಯ ಸಿನೆಮಾಗಳೇ ಅಲ್ಲದೇ ವೆಬ್‍ಸೀರಿಸ್, ಕಿರುಚಿತ್ರ, ಡಾಕ್ಯುಮೆಂಟರಿ, ಧಾರವಾಹಿ ಇನ್ನೂ ವಿಭಿನ್ನವಾದ ಮನರಂಜನೆ, ಜ್ಞಾನ ಇವೆಲ್ಲವನ್ನು ಕೊಡುತ್ತಿವೆ. ಟಿವಿಯಲ್ಲಿ ಮತ್ತು ಮೋಬೈಲ್‍ನಲ್ಲೂ ಸಮಯವಿದ್ದಾಗ ನೋಡುವ ಅವಕಾಶವನ್ನು ಕಲ್ಪಿಸಿವೆ. ಆದರೆ ಒಂದೇ ಕಂಡಿಷನ್ ಏನಪ್ಪ ಅಂದ್ರೆ ಇವುಗಳಿಗೆ ಇಂತಿಷ್ಟು ಎಂದು ದುಡ್ಡು ಕೊಡಬೇಕು. ಇದಕ್ಕಿಂತ ಮುಂಚೆ ಯೂಟೂಬ್‍ನಲ್ಲಿ ಕೆಲವು ಸಿನೆಮಾಗಳು ಸಿಗುತ್ತಿದ್ದವು ಆದರೆ ಓಟಿಟಿ ವೇದಿಕೆಗಳು ಹೊಸತನಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.

ಒಟಿಟಿ ಅಂದರೆ ನೇರವಾಗಿ ಕಂಟೆಂಟ್ (ಮೀಡಿಯಾ)ಗಳನ್ನು ಇಂಟರ್ ನೆಟ್ ಮೂಲಕ ಕೇಬಲ್, ಟೆಲಿಕಮ್ಯೂನಿಕೇಶ್ ಇತರ ತಡೆಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವುದಾಗಿದೆ. ಇವುಗಳಲ್ಲಿ ಅಮೇಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಗಳು ಇಂದು ಹೆಚ್ಚು ಪ್ರಸಿದ್ದವಾಗಿವೆ. ನೀವು ಒಂದು ಚಂದಾದಾರರಾದರೆ 5 ಟಿವಿ ಅಥವಾ ಮೊಬೈಲ್ ಗಳಲ್ಲಿ ಸೇವೆಯನ್ನು ಪಡೆಯಬಹುದಾಗಿದೆ. ನೂತನ ಚಲನಚಿತ್ರಗಳು, ರಿಯಾಲಿಟಿ ಶೋ ಗಳು, ಕ್ರೀಡೆ, ಧಾರವಾಹಿ, ವೆಬ್ ಸೀರೀಸ್ ಎಲ್ಲವೂ ಸಿಗುತ್ತವೆ. ಕೆಲವೊಂದು ಜಾಗತಿಕ ಸಿನೆಮಾಗಳು ನಿಮ್ಮೂರಿನ ಚಿತ್ರಮಂದಿರಕ್ಕೆ ಬರದೇ ಹೋಗಬಹುದು. ಆಗ ನೀವು ಚಿಂತಿಸಬೇಕಿಲ್ಲ. ಈ ಒಟಿಟಿಗಳ ಮೂಲಕ ಮನೆಯಿಂದಲೇ ವೀಕ್ಷಿಸಬಹುದಾಗಿದೆ.

ಅಂತರ್ಜಾಲದ ಯುಗದಲ್ಲಿ ಡಿಜಿಟಲ್ ಸೇವೆಗಳ ಉಪಯುಕ್ತತೆಗಳು ಶರವೇಗವಾಗಿ ವೃದ್ಧಿಸುತ್ತಿವೆ. 4ಜಿ ಸೇವೆಯ ರಂಗಪ್ರವೇಶದ ಜೊತೆ ಭಾರತದಲ್ಲಿ ಓಟಿಟಿ ವೇದಿಕೆಗಳ ಮೇಲೆ ಆನ್ ಡಿಮಾಂಡ್ ವಿಡಿಯೋ ಸೇವೆಗಳ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಉದ್ಯಮಗಳು ಅಭಿಪ್ರಾಯಪಡುತ್ತಿವೆ. ಅಂತರಾಷ್ಟ್ರೀಯ ವೃತ್ತಿ ನೈಪುಣ್ಯ ಸೇವೆಗಳ ಕಂಪನಿ ಪ್ರೈಸ್ ವಾಟರ್‍ಹೌಸ್ ಕೂಪರ್ಸ್(ಪಿಡಬ್ಲೂಸಿ) ವರದಿಯ ಪ್ರಕಾರ 2018 ಮುಗಿಯುವ ವೇಳೆಗೆ ನಮ್ಮ ಭಾರತದಲ್ಲಿ ಓಟಿಟಿ ವಿಡಿಯೋ ಸೇವೆಗಳ ಮಾರುಕಟ್ಟೆ 63.8ಕೋಟಿ ಡಾಲರ್ (ಸುಮಾರು ರೂ 4,466 ಕೋಟಿ)ಗಳಿಗೆ ತಲುಪಿತ್ತು. 2023ರ ಹೊತ್ತಿಗೆ ವಾರ್ಷಿಕವಾಗಿ 21.8% ರಷ್ಟು ವೃದ್ದಿಯಿಂದ 170 ಕೋಟಿ ಡಾಲರ್ (ರೂ.11,900ಕೋಟಿಗಳಿಗೆ) ತಲುಪಲಿದೆ ಎಂದು ಪಿಡಬ್ಲೂಸಿ ಅಂದಾಜು ಮಾಡಿದೆ.

ವಿಡಿಯೋ ಆನ್ ಡಿಮಾಂಡ್‍ನ ಸಬ್‍ಸ್ಕ್ರಿಪ್ಶನ್ ಡಿಮಾಂಡ್ ವಾರ್ಷಿಕವಾಗಿ 23.3%ರಷ್ಟು ವೃದ್ದಿಯಾಗಿ 150 ಕೋಟಿ ಡಾಲರ್‍ಗಳಿಗೆ ತಲುಪಲಿದೆಯೆಂದು ಸಿಡಬ್ಲೂಸಿ ವರದಿಯಲ್ಲಿ ಹೇಳಿದೆ. ಅಂದರೆ 2023ರ ಹೊತ್ತಿಗೆ ಒಟಿಟಿ ಕಂಪನಿಗಳ ಒಟ್ಟು ಆದಾಯದಲ್ಲಿ ವಿಡಿಯೋಗಳ ಸಬ್‍ಸ್ಕ್ರಿಪ್ಶನ್ ನಿಂದ ಬರುವ ಪಾಲು 84%ರಷ್ಟಕ್ಕೆ ತಲುಪಲಿದೆ. ಈಗ ಜಾಹಿರಾತಿನಿಂದಲೇ ಹೆಚ್ಚು ಆದಾಯ ಬರುತ್ತಿದೆ. ಅಷ್ಟೇ ಅಲ್ಲದೇ ನಾಲ್ಕು ವರ್ಷಗಳಲ್ಲಿ ಭಾರತದ ಒಟಿಟಿ ಮಾರುಕಟ್ಟೆ ಕೋರಿಯಾ ದೇಶವನ್ನು ಮೀರಿಸಲಿದೆ. ಪ್ರಪಂಚದಲ್ಲೇ 8ನೇ ಅತಿದೊಡ್ಡ ಒಟಿಟಿ ಮಾರುಕಟ್ಟೆ ಆಗಲಿದೆಯೆಂದು ಸಿಡಬ್ಲೂಸಿ ವರದಿ ಹೇಳುತ್ತಿದೆ. 2023 ಕೊನೆಗೆ ಜಗತ್ತಿನ ಓಟಿಟಿ ಮಾರುಕಟ್ಟೆಯ ಪರಿಮಾಣ 7,280 ಕೋಟಿ ಡಾಲರ್‍ಗಳ ಮಟ್ಟಕ್ಕೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಮನರಂಜನೆಯ ಕ್ಷೇತ್ರದಲ್ಲಿ ಅತ್ಯಧಿಕ ವೃದ್ಧಿ ಓಟಿಟಿಯದೇ…

ಭವಿಷ್ಯತ್ತಿನಲ್ಲಿ ಮಾಧ್ಯಮ , ಮನರಂಜನೆ ರಂಗದಲ್ಲಿ ಓಟಿಟಿ ಸೇವೆಗಳೆ ಹೆಚ್ಚಾಗುತ್ತಿವೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಒಟಿಟಿ, ಆನಲೈನ್ ಗೇಮಿಂಗ್, ಅಂತರ್ಜಾಲ ಧಾರವಾಹಿ ವಿಭಾಗದಲ್ಲಿ ಅತ್ಯಧಿಕ ವೃಧ್ದಿಯನ್ನು ನಮೂದಿಸಿವೆ ಎಂದು ಹೇಳುತ್ತಿದೆ. ಎರ್ನೆಸ್ಟ್ ಅಂಡ್ ಯಂಗ್ ವರದಿಯ ಪ್ರಕಾರ 2020ರ ಹೊತ್ತಿಗೆ ದೇಶದಲ್ಲಿ ಒಟಿಟಿ ಸೇವೆಯ ವಿನಿಯೋಗದಾರರ ಸಂಖ್ಯೆ 50ಕೋಟಿಗಳಿಗೆ ತಲಪುವ ಅವಕಾಶವಿದೆ. ಪ್ರಸ್ತುತ ದೇಶದಲ್ಲಿ ಹಿಂದಿ, ಇಂಗ್ಲೀಷ್ ಸಿನೆಮಾಗಳು, ವೆಬ್‍ಸೀರಿಸ್‍ಗಳು, ಇತರ ವಿಡಿಯೋ ಕಂಟೆಂಟ್‍ಗಳನ್ನು ಕಲ್ಪಿಸುವ ಒಟಿಟಿ ಪ್ಲೇಯರ್‍ಗಳೇ ಅಧಿಕ, ಭವಿಷ್ಯತ್ತಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಆನ್ ಡಿಮಾಂಡ್ ವಿಡಿಯೋಗಳು ನೀಡುವ ಸಂಸ್ಥೆಗಳು ರಂಗಪ್ರವೇಶ ಮಾಡಲಿವೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಟಿವಿ ವಾಹಿನಿಗಳ ಹವಾ ಕಡಿಮೆಯಾಗಿಲ್ಲ

ಒಟಿಟಿ ಸೇವೆಗಳು ವೇಗವಾಗಿ ವೃದ್ಧಿ ಹೊಂದುತ್ತಿದ್ದರೂ ಸಹ ಕೇಬುಲ್, ಸೆಟಲೈಟ್ ಟಿವಿ ಚಾನೆಲ್ ಗಳ ಹವಾ ಮುಂದೆಯೂ ಸಹ ಇದೇ ರೀತಿ ಮುಂದುವರೆಯಲಿದೆ ಎಂದು ಮನರಂಜನೆಯ ಕ್ಷೇತ್ರದ ತಜ್ಞರ ಅಭಿಪ್ರಾಯವಾಗಿದೆ. ಕಳೆದ ವರ್ಷದ ಪೇ ಟಿವಿ ಸೇವೆಗಳ ಆದಾಯ 1000 ಕೋಟಿ ಡಾಲರ್ (70000ರೂ ಕೋಟಿ) ಗಳಿಗೆ ತಲುಪಲಿದೆ. 2023ಕ್ಕೆ ಭಾರತ ಜಗತ್ತಿನಲ್ಲೇ ಅತಿದೊಡ್ಡ ಟಿ.ವಿ ಜಾಹಿರಾತು ಮಾರುಕಟ್ಟೆಯಾಗಿ ಅವತರಿಸಲಿದೆ ಎಂದು ಸಿಡಬ್ಲೂಸಿ ಹೇಳುತ್ತಿದೆ. ಟಿವಿ ಜಾಹಿರಾತು ಮಾರುಕಟ್ಟೆ ವರ್ಷ ವರ್ಷ 10.7ರಷ್ಟು ವೃದ್ಧಿಸುತ್ತಿದ್ದು, ಬರುವ ನಾಲ್ಕು ವರ್ಷದಲ್ಲಿ 680 ಕೋಟಿ ಡಾಲರ್‍ಗಳಿಗೆ ತಲುಪಬಹುದೆಂದು ಅಂದಾಜು.

ಭಾರತದಲ್ಲಿ ಎಲ್ಲಾ ವರ್ಗದವರು ಸಿನೆಮಾಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಕಾಲಕಾಲಕ್ಕೆ ಹೊಚ್ಚಹೊಸ ಸಿನೆಮಾಗಳನ್ನು ಸಿಗುವಂತೆ ಮಾಡುವುದು ಕಷ್ಟ. ನಿರಂತರ ಅಧ್ಯಯನಗಳು, ಸಾಮಾಜಿಕ ಜಾಲತಾಣಗಳ ಮೂಲಕ ವಿನಿಯೋಗದಾರರು ಹಚ್ಚು ಇಷ್ಟಪಡುತ್ತಿರುವ ಸಿನೆಮಾಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅಮೇಜಾನ್ ಪ್ರೈಮ್ ವಿಡಿಯೋ ಕಂಟೆಂಟ್ ವಿಭಾಗ ಅಧಿಪತಿ ವಿಜಯ್ ಸುಬ್ರಮಣ್ಯ ಹೇಳುತ್ತಾರೆ.

ಪ್ರಸ್ತುತ ದೇಶದಲ್ಲಿ ವಿಡಿಯೋ ಆನ್ ಡಿಮಾಂಡ್ ವ್ಯಾಪಾರಗಳಿಗೆ ಬಹುತೇಕ ಆದಾಯ ಜಾಹೀರಾತು ಮೂಲಕವೇ ಬರುತ್ತಿದೆ. ಭವಿಷ್ಯತ್ತಿನಲ್ಲಿ ಸಬ್‍ಸ್ಕ್ರಿಪಷನ್ ರೆವೆನ್ಯೂ ಭಾರಿ ಮೊತ್ತದಲ್ಲಿ ಬೆಳೆಯಲಿದೆ ಎಂದು ವೂಟ್ ವಿಡಿಯೋ ಆನ್ ಡಿಮಾಂಡ್ ವಿಭಾಗದ ಮುಖ್ಯಸ್ಥ ಆಕಾಶ್ ಬ್ಯಾನರ್ಜಿ ಅಭಿಪ್ರಾಯಪಡುತ್ತಾರೆ.

ನಮ್ಮ ದೇಶದಲ್ಲಿ ಸುಮಾರು 40 ಒಟಿಟಿ ಕಂಪೆನಿಗಳಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ನೆಟ್‍ಪ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಹಾಟ್‍ಸ್ಟಾರ್, ಜೆಡ್‍ಈಈ5, ಹಿರೋಸ್ ನವ್, ವೋಟ್, ಸೋನಿ ಲೈವ್, ಏರಟೆಲ್ ಟಿವಿ, ವೊಡಾಫೋನ್ ಪ್ಲೇ, ಜೀಯೋ ಟಿವಿ, ವಯಾಕಾಮ್ 18 ಮುಂತಾದವು..

ಪ್ರಪಂಚಾದ್ಯಾಂತ ಸಿನಿಮಾಗಳನ್ನು ಎಲ್ಲರು ನೋಡತ್ತಾರೆ. ಕೆಲವರಿಗೆ ಆಕ್ಷನ್ ಇಷ್ಟ ಆಗಬಹುದು, ಕೆಲವರಿಗೆ ಯುದ್ದ ಆಧಾರಿತ, ಫಿಕ್ಷನ್, ಕಾಮಿಡಿ, ಹಾರರ್ ಈ ರೀತಿ ಇಷ್ಟ ಆಗಬಹುದು. ಮುಂಚೆ ಟಿವಿಗಳಲ್ಲಿ ಸಿನೆಮಾ ಮತ್ತು ಧಾರಾವಾಹಿ ಮಾತ್ರ ಇತ್ತು. ಈಗ ರಿಯಾಲಿಟಿ ಶೋಗಳು ಬಂದಿದಾವೆ ಆದರೆ ಅವೂ ಕೂಡ ಸತ್ವ ಕಳೆದುಕೊಳ್ಳುತ್ತಿರೋ ಸಮಯದಲ್ಲಿ ಈ ಒಟಿಟಿಗಳಲ್ಲಿ ಯಾವುದೇ ಜಾಹೀರಾತು ಇಲ್ಲದೇ ಕುಟುಂಬದ ಜೊತೆ ಕೂತು ನೋಡಬಹುದು. ತಿಂಗಳಿಗೆ 100 ರಿಂದ 200ರೂ ನಷ್ಟು ಖರ್ಚು ಬರುತ್ತದೆ ಅಷ್ಟೇ. ಅದೇ ನೀವು ಕುಟುಂಬದ ಜೊತೆ ಥೀಯೆಟರ್‍ಗೆ ಹೋದರೆ ಇನ್ನೂ ಜಾಸ್ತಿ ಖರ್ಚು ಆಗುತ್ತೆ. ಆನ್‍ಲೈನ್ ಸ್ಟ್ರೀಮಿಂಗ್ ನಲ್ಲಿರುವ ಪ್ರಯೋಜನ ಅಂದರೆ ನಾವು ಎಲ್ಲಿಯವರೆಗೂ ನೋಡಿ ನಿಲ್ಲಿಸಿರುತ್ತೇವೋ, ಮತ್ತೆ ಸಮಯ ಸಿಕ್ಕಾಗ ಮತ್ತೆ ಅಲ್ಲಿಂದಲೇ ನೋಡಬಹುದು. ಹಾಗೂ ಯಾವುದೇ ದೇಶದ ಭಾಷೆಯಾಗಲಿ ಡಬ್ಬಿಂಗ್ ಇಲ್ಲದಿದ್ದರೆ ಸಬ್‍ಟೈಟಲ್ ಹಾಕಿಕೊಂಡು ನೋಡಬಹುದು. ಸಿನೆಮಾಗಳು ಅಂದ್ರೆ ಬರೀ ಮನರಂಜನೆಯಲ್ಲ ಇದರಿಂದ ಇತಿಹಾಸ, ಜ್ಞಾನ ಎಲ್ಲವೂ ಸಿಗುತ್ತದೆ ಎನ್ನುತ್ತಾರೆ ಟ್ರಾವೆಲ್ ಅಡ್ವೈಸರ್, ಸಿನೆಮಾ ಪ್ರೇಮಿ ಮೋಹನ್ ಕುಮಾರ್ ರವರು. ಇವರು ಬೇರೆ ಬೇರೆ ಭಾಷೆಗಳ ಸಿನೆಮಾಗಳನ್ನು ನೋಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಪರಿಚಯಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ.

ಸೌಜನ್ಯ: ಆಂಧ್ರಜ್ಯೋತಿ ಬಿಸೆನೆಸ್ ಡೆಸ್ಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...