Homeಕರ್ನಾಟಕಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

ಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

- Advertisement -
- Advertisement -

ಈ ಬಾರಿಯ ಮಳೆ ಮತ್ತು ಪ್ರವಾಹಕ್ಕೆ ರಾಜ್ಯದ 2/3 ಜಿಲ್ಲೆ ಮತ್ತು ತಾಲೂಕುಗಳು ಬಲಿಯಾಗಿವೆ. ನೇರವಾಗಿ ಮಳೆ ಬಿದ್ದು ಅದರಿಂದುಂಟಾದ ಪ್ರವಾಹಕ್ಕೆ ತುತ್ತಾದ ತಾಲೂಕುಗಳು ಒಂದೆಡೆಯಾದರೆ, ಅಂಥಾ ಅನಾಹುತಕಾರಿ ಮಳೆ ಇಲ್ಲದೆಯೂ, ಮಲೆನಾಡು ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸುರಿದ ನೀರು ಹರಿಯಬಿಟ್ಟ ಕಾರಣ ಉಂಟಾದ ನೆರೆಗೆ ಬಲಿಯಾದ ತಾಲೂಕುಗಳು ಇನ್ನೊಂದೆಡೆ. ರಸ್ತೆ, ಸೇತುವೆ ಮುಂತಾದವುಗಳು ಕೊಚ್ಚಿಹೋದ ಕಾರಣಕ್ಕುಂಟಾದ ಮೂಲ ಸಂರಚನೆಯ ನಷ್ಟ, ಖಾಸಗಿ ಮನೆ ಮಠ, ಪಂಪ್‍ಸೆಟ್ ಇತ್ಯಾದಿಗಳ ನಷ್ಟ ಸಾವಿರಾರು ಕೋಟಿ ರೂಪಾಯಿಗಳು. ಇದಕ್ಕಿಂತಲೂ ಘೋರವೆಂದರೆ ಲಕ್ಷಾಂತರ ಎಕರೆಗಳಲ್ಲಿ ಸಾಗುವಳಿ ಆದ ಬೆಳೆ ನಾಶ. ಪ್ರವಾಹ ಮತ್ತು ಕುಂಭದ್ರೋಣ ಮಳೆಗೆ ತುತ್ತಾದ ಜಿಲ್ಲೆಗಳ ಸಾಗುವಳಿ ಜಮೀನಿನ ಪ್ರಮಾಣ ನೋಡಿ. ಇದರಲ್ಲಿ ಶೇ. 50-70ರಷ್ಟು ಬೆಳೆ ನಾಶವಾಗುವುದು ಖಂಡಿತ. ಕೃಷಿ ವಿಜ್ಞಾನಿಗಳು ಹೇಳಿದ ಹಾಗೆ ಒಂದು ವಾರ ಬಿಡಿ; ಕೇವಲ ಮೂರು ದಿನ ನೀರು ನಿಂತರೆ ಭತ್ತ ಮತ್ತು ಸ್ವಲ್ಪಮಟ್ಟಿಗೆ ರಾಗಿ ಮಾತ್ರ ತಾಳಿಕೊಳ್ಳಬಲ್ಲುದು. ಉಳಿದ ಬೆಳೆಗಳು ಪೋಷಕಾಂಶ ಹೀರಲಾಗದೇ ನಲುಗುತ್ತವೆ. ಅದೇರೀತಿ ಮೋಡ ಮುಸುಕಿದ ವಾತಾವರಣ ವಾರ ಕಾಲ ಇದ್ದರೆ ದ್ಯುತಿ ಸಂಶ್ಲೇಷಣೆ ಮಾಡಲಾಗದೇ ಗಿಡಗಳು ಸೊರಗುತ್ತವೆ. ಈ ಕಾರಣಕ್ಕೇ ಇಳುವರಿ ಶೇ.50-70ರಷ್ಟು ನಷ್ಟವಾಗುತ್ತದೆ.

ಈ ಮಳೆ ಹಾನಿಗೊಳಗಾದ ಭೂಪ್ರದೇಶದಲ್ಲಿ ಮೂರು ವಿಧವಿದೆ.
1. ಮಲೆನಾಡಿನ ವ್ಯಾಪಾರಿ ಬೆಳೆಗಳಾದ ಅಡಿಕೆ, ಕಾಫಿ ಬೆಳೆಯುವ ಪ್ರದೇಶ; ಇಲ್ಲಿ ಕಡುಬೇಸಿಗೆಯಿಂದಲೇ ಕಾಫಿ ಮತ್ತು ಅಡಿಕೆ ನಲುಗಿದ್ದು, ಈಗಿನ ಮಳೆಯಿಂದಾಗಿ ಕೊಳೆರೋಗ ಸಹಿತ ತೀವ್ರ ರೋಗ ಬಾಧೆಗೆ ತುತ್ತಾಗಿ ಬೆಳೆ ನಷ್ಟವಾಗುವ ಸಾಧ್ಯತೆ ದಟ್ಟವಾಗಿದೆ. ಈ ಪ್ರದೇಶದ ಸಾವಿರಾರು ಎಕರೆಗಳಲ್ಲಿ ಬಡ ಸಣ್ಣರೈತರು ಉಣ್ಣುವ ಸಲುವಾಗಿಯೇ ಮಳೆಆಶ್ರಿತ ಭತ್ತ ಬೆಳೆಯುತ್ತಾರೆ. (ಭತ್ತ ಬಿಟ್ಟು ಬೇರೆ ಯಾವ ಧಾನ್ಯವನ್ನೂ ಇವರು ಬೆಳೆಯುವುದಿಲ್ಲ) ಆರಂಭದಲ್ಲಿ ಮಳೆ ಇಲ್ಲದ ಕಾರಣ ಈ ರೈತರ ಭತ್ತದ ನಾಟಿ ಈ ಬಾರಿ ತಡವಾಗಿದೆ. ಈಗ ಭೀಷಣ ಮಳೆಯಿಂದಾಗಿ ಭತ್ತದ ಇಳುವರಿ ಕುಂಠಿತ/ ನಾಶವಾಗಲಿದೆ.

2. ಭೀಕರ ಮಳೆ ಮತ್ತು ಪ್ರವಾಹ ಎರಡಕ್ಕೂ ತುತ್ತಾದ ಪ್ರದೇಶಗಳು: ಬೆಳಗಾವಿ, ಗದಗ, ಭಾಗಶಃ ಶಿವಮೊಗ್ಗ, ಬಾಗಲಕೋಟೆಯಂಥಾ ಪ್ರದೇಶಗಳು ಪ್ರವಾಹ ಮತ್ತು ಹನಿ ಕಡಿಯದ ಮಲೇ ಎರಡರಿಂದಲೂ ಬಾಧೆ ಅನುಭವಿಸಿವೆ. ಇಲ್ಲಿನ ಬೆಳೆಗಳು ನಾನು ಮೇಲೆ ಹೇಳಿದ ಎರಡೂ ಕಾರಣಗಳಿಂದ ನಾಶವಾಗಲಿವೆ.

3. ಮಳೆ ಇಲ್ಲದಿದ್ದರೂ ತುಂಗೆ, ಭೀಮಾ, ಮಲಪ್ರಭ, ಕೃಷ್ಣಾಗಳ ಭರಪೂರ ನೀರಿನ ಪ್ರವಾಹದಿಂದ ನಲುಗಿದ ಜಿಲ್ಲೆಗಳಲ್ಲೂ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ.

ಸುಮ್ಮನೆ ಲೆಕ್ಕ ಹಾಕಿ, ಈ ಕೃಷಿ ಪ್ರದೇಶ ಕರ್ನಾಟಕದ ಒಟ್ಟಾರೆ ಕೃಷಿ ಪ್ರದೇಶದ ಶೇ..70ರಷ್ಟಿದೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ ಹಾಗೆ 40 ಲಕ್ಷ ಹೆಕ್ಟೇರ್ ಜಮೀನು ಬಾಧೆಗೊಳಗಾಗಿದೆ ಎಂದೇ ಇಟ್ಟುಕೊಂಡು; ಹೆಕ್ಟೇರಿಗೆ ಕನಿಷ್ಠ 25 ಸಾವಿರ ನಷ್ಟದಂತೆ ಅಂದಾಜು ಮಾಡಿದರೂ, ಒಟ್ಟಾರೆ ನಷ್ಟ 15 ಸಾವಿರ ಕೋಟಿ ಮೀರಲಿದೆ.

ನೆನಪಿಡಿ. ಇದು ಈ ಮುಂಗಾರು ಬೆಳೆಯ ನಷ್ಟ. ನೆನಪಿಡಬೇಕಾದ್ದು ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದಿದೆ. ಮಳೆಯಿಲ್ಲದೇ ಆದ ನಷ್ಟ ಮತ್ತು ಅತಿವೃಷ್ಟಿಯಿಂದಾದ ನಷ್ಟ ಲೆಕ್ಕ ಹಾಕಿದರೆ ತಲೆ ತಿರುಗುತ್ತದೆ.

ಈ ಮಳೆ ಈಗ ಒಮ್ಮೆ ಕಮ್ಮಿ ಆಗಿ ಮತ್ತೆ ಶುರು ಹಚ್ಚಿಕೊಂಡು, ನಾಡಿದ್ದು ಹಿಂಗಾರಿನಲ್ಲಿ ಒಂದೆರಡು ಅಧಿಕ ಮಳೆ ಬಂದರೂ ಹಿಂಗಾರು ಬೆಳೆಯೂ ಕೈಗೆ ದಕ್ಕುವುದು ಕಷ್ಟ. ತೀವ್ರ ನೀರು ನಿಂತಾಗ ಮಣ್ಣಿನ ಜೈವಿಕ ಚಟುವಟಿಕೆ ಬಂದ್ ಆಗಿ ಮಣ್ಣಿನ ಸ್ವರೂಪವೇ ಬದಲಾಗುತ್ತದೆ. ಇದು ಮೊದಲಿನ ಮಟ್ಟಕ್ಕೆ ಬರಲು ಎರಡು ವರ್ಷ ಬೇಕು.

ಮೂರು R – Relief, Rehabilitation and Reconstruction ಎಂಬ ಸೂತ್ರ ಇದೆ. ನಮ್ಮ ಸರ್ಕಾರ ಮೊದಲನೆಯದ್ದನ್ನು ನಿಭಾಯಿಸೀತು. ಎರಡನೆಯದಕ್ಕೆ ಗಮನಾರ್ಹ ಹಣ ಬೇಕು. ಮತ್ತು ಇದನ್ನು ಕಾಲಮಿತಿಯಲ್ಲಿ ಮಾಡಬೇಕು.

ಮೂರನೆಯ- ಪುನರ್ರಚನೆ ಎಂಬುದು ಒಟ್ಟಾರೆ ಕೃಷಿಯನ್ನು ಸುಸ್ಥಿರಗೊಳಿಸಲು ಬೇಕಾದ ದೀರ್ಘಕಾಲೀನ ಮಾರ್ಗೋಪಾಯಗಳ ಬಗ್ಗೆ. ಈ ಕುರಿತಂತೆ ಸರ್ಕಾರದ ಮಿದುಳು ಸಂಪೂರ್ಣ ಖಾಲಿಯಾಗಿರುವುದು ಈಗಾಗಲೇ ಬಂದಿರುವ ನೀತಿ ಪತ್ರಗಳಲ್ಲಿ ಗೋಚರಿಸುವ ಕಾರಣ ಆ ಬಗ್ಗೆ ಹೆಚ್ಚೇನು ನಿರೀಕ್ಷಿಸುವಂತಿಲ್ಲ. ಆದರೆ ಹವಾಮಾನ ಬದಲಾವಣೆ ಈಗ ಮನೆ ಬಾಗಿಲು ತಟ್ಟುತ್ತಿರುವ ಮಾರಿ ಎಂಬುದು ಸರ್ಕಾರಕ್ಕೆ ಗೊತ್ತಾದರೆ ಆಮೂಲಾಗ್ರವಾಗಿ ಹೊಸ ಕಾರ್ಯಸೂಚಿಗೆ ಅದು ತಯಾರಾಗಬೇಕು. ಹವಾಮಾನ ಬದಲಾವಣೆ ಎಂದರೆ ವಯಸ್ಸಾದಂತೆ ಚಳಿಯಾಗುವ ಸಂಗತಿ ಎಂದು ಭಾವಿಸುವ ಪ್ರಧಾನಿ ಇರುವಾಗ ನಮ್ಮ ನಾಯಕರು ಇನ್ನೇನು ಯೋಚಿಸಿಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎರಡು ವರ್ಷದಲ್ಲಿ 532 ನಕ್ಸಲರ ಹತ್ಯೆ; 2004 ಜನರ ಬಂಧನ: ಛತ್ತೀಸ್‌ಗಢ ಉಪ ಮುಖ್ಯಮಂತ್ರಿ

2024 ರ ಜನವರಿಯಿಂದ ರಾಜ್ಯದಲ್ಲಿ 532 ನಕ್ಸಲರು ಸಾವನ್ನಪ್ಪಿದ್ದಾರೆ, 2004 ಜನರನ್ನು ಬಂಧಿಸಲಾಗಿದ್ದು, 2,700 ಜನರು ಶರಣಾಗಿದ್ದಾರೆ ಎಂದು ಛತ್ತೀಸ್‌ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಶುಕ್ರವಾರ ಹೇಳಿದ್ದಾರೆ. 2026ರ ಮಾರ್ಚ್ 31 ರೊಳಗೆ...

ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಒಪ್ಪಿದ ಪೋಕ್ಸೋ ಪ್ರಕರಣದ ಆರೋಪಿಗೆ ಜಾಮೀನು

ಅಸ್ಸಾಂ (ಬೊಂಗಾನ್): ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಕಳೊಂದಿಗೆ ಸ್ನೇಹ ಬೆಳೆಸಿದ ನಂತರ ಅವಳೊಂದಿಗೆ ಸಹವಾಸ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ 24 ವರ್ಷದ ಯುವಕನಿಗೆ ಇಲ್ಲಿನ ಬೊಂಗಾನ್ ಉಪ-ವಿಭಾಗೀಯ ನ್ಯಾಯಾಲಯವು ಜಾಮೀನು...

ಕೇರಳ: ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಸವಾರನನ್ನು ತಡೆದ ವೃದ್ಧೆಗೆ ಸಾರಿಗೆ ಅಧಿಕಾರಿಗಳಿಂದ ಸನ್ಮಾನ

ಕಳೆದ ಶುಕ್ರವಾರ ಕೋಝಿಕ್ಕೋಡ್‌ನಲ್ಲಿ ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಬೈಕ್ ಚಾಲನೆ ಮಾಡುವುದುನ್ನು ತಡೆದ ವೃದ್ಧ ಮಹಿಳೆಯನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ಅಧಿಕಾರಿಗಳು ಸನ್ಮಾನಿಸಿದರು. ಮುಖ್ಯ ರಸ್ತೆಯಲ್ಲಿನ ದಟ್ಟಣೆಯನ್ನು ತಪ್ಪಿಸಲು ಎರಂಜಿಪಾಲಂನ...

ಫೆಬ್ರವರಿ 14, ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ: ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫೆಬ್ರವರಿ 14 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ...

ಮೊಹಮ್ಮದ್ ದೀಪಕ್ ಜಿಮ್‌ನಲ್ಲಿ ಸದಸ್ಯತ್ವ ಪಡೆದ 15 ಜನ ಹಿರಿಯ ಸುಪ್ರೀಂ ಕೋರ್ಟ್ ವಕೀಲರು

ಉತ್ತರಾಖಂಡದ ಕೋಟ್ದ್ವಾರದ ದೀಪಕ್ ಅವರ ಜಿಮ್‌ ಈ ಹಿಂದೆ 150 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು, ಜನನಿಬಿಡ ಕೇಂದ್ರವಾಗಿದ್ದ ದೀಪಕ್ ಕುಮಾರ್ ಅವರ 'ಹಲ್ಕ್' ಜಿಮ್‌ಗೆ, ಮುಸ್ಲಿಂ ವ್ಯಾಪಾರಿ ಪರವಾಗಿ ನಿಂತ ಬಳಿಕ...

ಮೀರತ್‌ನಲ್ಲಿ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು; ಹಿಂದುತ್ವದ ಹೇಳಿಕೆಗಳನ್ನು ತಿರಸ್ಕರಿಸಿದ ಬೌದ್ಧ ವಧು

ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ವಧುವಿನ ಚಿಕ್ಕಪ್ಪ ಆತನ ನಿಶ್ಚಿತಾರ್ಥದ ದಿನ ಅಂತರಧರ್ಮೀಯ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದ್ದು, ಶುಕ್ರವಾರ ನಡೆಯಬೇಕಿದ್ದ ವಿವಾಹದ ಸುತ್ತ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರಕರಣವು...

ತಮಿಳುನಾಡು: ವಿಧಾನಸಭಾ ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರ ಖಾತೆಗೆ 5000ರೂ ಜಮಾ ಮಾಡಿದ ಸ್ಟಾಲಿನ್ ಸರ್ಕಾರ

ಚೆನ್ನೈ: ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ಹೆಜ್ಜೆಯಾಗಿ, ತಮಿಳುನಾಡಿನ ಡಿಎಂಕೆ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಮಾಸಿಕ ರೂ.1,000 ಸಹಾಯ ಯೋಜನೆಯ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ರೂ.5,000 ಜಮಾ ಮಾಡಿದೆ. ಏಪ್ರಿಲ್-ಮೇ ವಿಧಾನಸಭಾ...

17 ವರ್ಷಗಳ ಗಡಿಪಾರಿನ ಬಳಿಕ ತಾರಿಕ್ ರೆಹಮಾನ್ ರಾಜಕೀಯ ಪುನರಾಗಮನ; ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ಪಿಗೆ ಬಹುಮತ

17 ವರ್ಷಗಳ ಗಡಿಪಾರಾದ ನಂತರ ತಾರಿಕ್ ರೆಹಮಾನ್ ರಾಜಕೀಯವಾಗಿ ಪುನರಾಗಮನ ಮಾಡಿದ್ದಾರೆ. 2026 ರ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಬಿಎನ್‌ಪಿ ಅಧ್ಯಕ್ಷರಾಗಿರುವ ತಾರಿಕ್ ಎರಡು ಕ್ಷೇತ್ರಗಳಿಂದ...

ಸುಡಾನ್: ನೈಲ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 21 ಸಾವು, ಹಲವರು ನಾಪತ್ತೆ!

ಉತ್ತರ ಸುಡಾನ್‌ನ ನೈಲ್ ರಾಜ್ಯದ ನೈಲ್ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ನಂತರ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಯುದ್ಧ ಪೀಡಿತ ದೇಶದ ನಾಗರಿಕ ರಕ್ಷಣಾ...

ಹೊಸಕೋಟೆ ಭೀಕರ ಅಪಘಾತದಲ್ಲಿ 7 ಮಂದಿ ಸಾವು: ಮೃತರಲ್ಲಿ 6 ಮಂದಿ 17-18 ವರ್ಷದ ವಿದ್ಯಾರ್ಥಿಗಳು!

ಬೆಂಗಳೂರು: ಫೆಬ್ರವರಿ 13, ಶುಕ್ರವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹೊರವಲಯದಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ,...