Homeಮುಖಪುಟಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! - ಬಿ.ಚಂದ್ರೇಗೌಡ

ಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! – ಬಿ.ಚಂದ್ರೇಗೌಡ

- Advertisement -
- Advertisement -

ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಹೋಗುತ್ತಿರಬೇಕಾದರೆ, ಕೆ.ಆರ್.ನಗರದ ಬಳಿ ಮೂವರು ಮುಸ್ಲಿಂ ಯುವಕರು ಓಡಿಬಂದು ರೈಲತ್ತಿಕೊಂಡರು. ಅಲ್ಲದೆ ತಾವು ಕೂರುವುದಕ್ಕೆ ಮೊದಲು ತಮ್ಮ ಕೈಚೀಲಗಳನ್ನು ಸೀಟಿನ ಮೇಲೆ ಎಸೆದು, ಒಬ್ಬರ ಮೇಲೊಬ್ಬರು ಬಿದ್ದು ಓಡಿ ಬಂದು ದಣಿವಾರಿಸಿಕೊಳ್ಳತೊಡಗಿದರು. ಈ ಶ್ರಮಜೀವಿಗಳ ಜೀವನೋತ್ಸಾಹ ನೋಡುವಂತದ್ದು. ಅದೇ ಕಂಪನಿಗಳ, ಸರಕಾರದ ಕರ್ಮಾಚಾರಿಗಳ ನಿರುತ್ಸಾಹದ ಮುಖಗಳನ್ನ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ. ಆದ್ದರಿಂದ ನನ್ನೆದುರು ಕುಳಿತ ಹುಡುಗರನ್ನು ಮಾತನಾಡಬೇಕೆನಿಸಿತು.

“ಎಲ್ಲಿಂದ ಬರ್ತಾಯಿದ್ದೀರಿ” ಎಂದೆ.
“ಕೆ.ಆರ್.ನಗರದಿಂದ ಶಾರ್.”
“ಏನು ಮಾಡ್ತಿರಿ.”
“ಪೈಂಟಿಂಗ್ ಮಾಡ್ತಿವಿ ಶಾರ್.”
“ಊರ್ಯಾವುದು.”
“ಮೈಸೂರು” ಎಂದವನು ಸರಿಯಾಗಿ ಕುಳಿತು, ನನ್ನೊಡನೆ ಮಾತನಾಡುವ ಉತ್ಸಾಹ ತೋರಿದ. ಉಳಿದಿಬ್ಬರು ಬಾಗಿಲಲ್ಲಿ ನಿಂತು ಗಾಳಿಗೆ ಮೈವೊಡ್ಡಿದರು.
“ಈ ಹಾಳು ಬಿಜೆಪಿಗಳು ರೈಲಿನ ಬಣ್ಣನೂ ಬದ್ಲಾಸ್ತ ಅವೆ ಕಣಯ್ಯ” ಎಂದೆ.
“ಹೌದು ಶಾರ್, ಮದ್ಲಿಂದು ಬಣ್ಣ ಎಷ್ಟು ದೂಳು ಬಿದ್ರೂ ಕಾಣ್ತಿರಲಿಲ್ಲ. ಈಗ ರೈಲು ನೋಡಿದ್ರೆ ಮೈಮೇಲೆ ಮಣ್ಣು ಹುಯ್ಕಂಡು ಓಡಾಡ್ತವೆ.” ಎಂದ.
“ಬಿಜೆಪಿಗಳು ಬಣ್ಣ ಬದ್ಲಾಯಿಸ್ತವೆ ಅಷ್ಟೇ, ಇನ್ನೇನು ಆಗದಿಲ್ಲ ಅವುರ ಕೈಲಿ” ಎಂದೆ.
“ಈಗ ಯಾರ್ ಬರ್ತರೆ ಸಾರ್ ಸೀಟಿಗೆ.”
“ಯಾವ ಸೀಟಿಗೆ.”
“ಮೋದಿ ಸೀಟಿಗೆ ”
“ಯಾರು ಬರದಿಲ್ಲ.”
“ಮತ್ತೆ ಎಲೆಕ್ಷನ್ ಬಂದುಬಿಟ್ಟಿದೆ.”
“ಅದು ಉಪ ಚುನಾವಣೆ. ನಮ್ಮ ಸ್ಟೇಟಿಗೆ ಬಂದದೆ ಅಷ್ಟೇ.”
“ಓ ಎಡೂರಪ್ಪನ ಸೀಟಿಗೆ ಅನ್ನಿ.”
“ಹೌದು.”
“ಯಾಕ್ಸ ಮತ್ತೆ ರಿಟನ್ ಯಲಕ್ಷನ್ನು”
“ಅದೂ ನಿಮ್ಮ ಕೆ.ಆರ್.ನಗರದ ವಿಶ್ವನಾಥ್ ಗೊತ್ತ, ಅವುನಂತ ಹದಿನೇಳು ಜನನ ಬಿಜೆಪಿಗಳು ಕೊಂಡಕಂಡ್ರು.”
“ಅಂಗೆ ಮನುಸುರ್ನೆ ಕೊಳ್ಳಬವುದ ಶಾರ್.”
“ಮನುಷ್ಯರನ್ನ ಕೊಳ್ಳಕ್ಕಾಗಲ್ಲ. ಶಾಸಕರ ಕೊಳ್ಳಬವುದು.”
“ಒಳ್ಳೆ ಮಜಾ ಇದೆ ಶಾರ್ ಮ್ಯಾಟ್ರು.”
“ನಮಿಗೆ ಮಜಾ. ಸರಿ, ಅವುರ ಪಜೀತಿ ಯಾರಿಗೂ ಬ್ಯಾಡ ಅಂಗಾಗ್ಯದೆ.”
“ಯಾಕ್ ಶಾರ್ ಅಮೌಂಟು ಕೊಡ್ನಿಲ್ವಾ.”
“ಅದೇ ಡೌವುಟು.”
“ನಮ್ಗೂ ಅಂಗೆ ಆಗ್ತದೆ ಸಾ. ಪೈಂಟಿಂಗ್ ವರ್ಕು ಮಾಡಿಸಿಕ್ಯಂಡು ಕೈ ಎತ್ತಿಬಿಡ್ತರೆ. ಅದ್ಕೆ ನಾವು ಸರಿಯಾಗಿ ಅಡ್ವಾನ್ಸ್ ಕೇಳ್ತಿವಿ.”
“ಈ ಶಾಸಕರಿಗೆ ಅಡ್ವಾನ್ಸ್ ದುಡ್ಡು ಬಂದದೆ. ಆದ್ರೆ ಅಧಿಕಾರ ಬರಲಿಲ್ಲ.”
“ಯಾಕ್ಸಾ.”

“ಆಗಿನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಈ ಖರೀದಿ ವ್ಯವಾರನೆ ರದ್ದು ಮಾಡಿಬುಟ್ರು. ಅದ್ಕೆ ಇವುರ್ಯಲ್ಲ ಎಂಎಲ್ಲೆಯೆ ಗಿರಿ ಕಳಕಂಡ್ರು.”
“ನಮಕ್ ಹರಾಮ್‍ಗಳಿಗೆ ಸರಿಯಾಗಿ ಆಗಿದೆ ಬುಡಿ ಶಾರ್.”
ಇದು ಒಟ್ಟರಾಶಿ ಅವನ ಅಭಿಪ್ರಾಯವಿದ್ದಂತೆ ಅನಿಸಿತು. ಶಾಸಕರ ಖರೀದಿ, ಸರಕಾರ ಬೀಳಿಸಿ ಅದರಿಂದಾದ ಅನಾಹುತಗಳು, ಈ ವಿವರವೆಲ್ಲಾ ಅವನ ಅಭಿಪ್ರಾಯದೊಳಗೆ ಸೇರಿರದೆ ಬಿಜೆಪಿಗೆ ಮಾರಾಟದ ವ್ಯವಹಾರದಲ್ಲಿ ಮೋಸಹೋದವರನ್ನ ಬೈದಂತೆ ಕಂಡಿತು.
“ಮೋದಿಗೆ ಏನೊ ಒಳ್ಳೆ ಎಜುಕೇಶನ್ ಇ¯ವಂತಲ್ಲ ಶಾರ್.”
“ಹೌದು.”
“ಎಗ್ಸಾಂಗೆ ಹೋಗಿಲವಂತೆ ಶಾರ್. ಪ್ರೈವೇಟ್ ಇಸ್ಕೂಲ್‍ಗೆ ಹೋಗಿ ಮಾರ್ಕ್ಸ್‌ ಕಾರ್ಡು ತಂದುಬಿಟ್ಟಿದ್ದಾರಂತೆ.”
“ಅವುರು ಪಡದಿರೋ ಶಿಕ್ಷಣದ ಬಗ್ಗೆ ಯಲ್ಲಾರಿಗೂ ಡೌಟಿದೆ.”
“ಮತ್ತೆ ಯಂಗೆ ಶಾರ್ ಪ್ರಧಾನಿ ಸೀಟು ಮ್ಯಾಲೆ ಕುಂತವುರೆ.”
“ಪ್ರಧಾನಿಯಾಗಕ್ಕೆ ತುಂಬ ಓದಿರಬೇಕು ಅಂತ ಇಲ್ಲ. ಅನುಭವ, ಹೃದಯವಂತಿಕೆ ಇರಬೇಕು. ಅಂಗೆ ನೋಡಿದ್ರೆ ನಮ್ಮ ದ್ಯಾವೇಗೌಡ್ರು ಡಿಪ್ಲಮೋ ಇಂಜಿನಿಯರ್. ಮುಖ್ಯಮಂತ್ರಿಯಾಗಿ ಎಷ್ಟು ಚನ್ನಾಗಿ ಆಡಳಿತ ಮಾಡಿದ್ರು, ಪ್ರಧಾನಿಯಾಗಿ ಕಾಶ್ಮೀರದ ಚುನಾವಣೆ ಮಾಡಿದ್ರು.”
“ಅವುರೆ ಇರಬೇಕಿತ್ತು ಶಾರ್. ಈ ಮೋದಿ ಬರ್ತಾನೆ ಇರಲಿಲ್ಲ.”
“ಬಂದುಬುಟ್ಟವುನಲ್ಲ ಸಯಿಸಗಬೇಕು.”
“ನಮ್ದು ರಫೀಕ್ ಮೊಬೈಲಿಗೆ ಒಂದು ಫಿಲಂ ಬಂದಿದೆ ಶಾರ್. ಮೋದಿ ನಮ್ಮ ಜುಬೇರ್ ಸಾಬರ ತರ ಹಳೆ ಸೀಸ, ಪ್ಲಾಸ್ಟಿಕ್ ಡಬ್ಬನೆಲ್ಲಾ ತಗ್ದಿ ತಗ್ದಿ ಚೀಲ್ದವಳಗೆ ತುಂಬಿಕಂಡು ಹೋಗ್ತಾಯಿದ್ರು. ಯಾಕ್ ಶಾರ್ ಅಂಗೆ ಮಾಡಿದಾರೆ.”
“ನೀನಾಗ್ಲೆ ಹೇಳಿದಲ್ಲಯ್ಯ ಎಜುಕೇಶನ್ ಇಲ್ಲ ಅಂತ, ಅದರ ಕೊರತೆ ಇದು. ಅಂತ ಕೆಲ್ಸ ಮಾಡಿ ಪೋಟೊ ವಡಿಸಿಗ್ಯಂಡು ಪೇಪರ್‍ಗಾಕ್ಸಿದ್ರೆ ಪ್ರಧಾನಿ ಎಷ್ಟು ಒಳ್ಳೆಯವರು, ಇಂತ ಮನ್ಸ ಹಿಂದೆ ಪ್ರಧಾನಿಯಾಗಿರಲಿಲ್ಲ ಅಂತ ತಿಳಕತಾರೆ ಅನ್ನಕಂಡು ಗಿಮಿಕ್ ಮಾಡ್ತ ಅವುರೆ.”
“ಅಂಗೆ ಮಾಡಬಾರ್ದು ಶಾರ್. ಆ ಸೀಟ್‍ಮೇಲೆ ಕುಂತಗಂಡಿ ಹಳೇ ಪೇಪರ್, ಖಾಲಿ ಸೀಸದ ಯವಾರ ಮಾಡಬಾರ್ದು.”

“ಇನ್ನೂ ನೋಡಿವಿರು. ಹೋಟ್ಳಿಗೆ ಬಂದು ಕಡಕ್ ಟೀ ಮಾಡಿ, ಯಲ್ಲಾರಿಗೂ ಕೊಟ್ಟು ಪೋಟೊ ವಡಿಸಿಗ್ಯಂಡು ಪೇಪರ್‍ಗಾಕುಸ್ತರೆ.”
“ಎಜುಕೇಶನ್ ಇಲ್ಲ ಅಂದ್ರೆ ಇಂಗೆ ಅಲವ ಶಾರ್. ಮೋದಿ ಹಿಂಗೆ ಮಾಡ್ತ ಹೋದ್ರೆ ಪುನ ಇಂಗ್ಲಿಸ್‍ನೋರು ಬಂದು ಸೀಟ್ ಮೇಲೆ ಕೂರ್ತರೆ ಅಷ್ಟೇ.”
“ಅವುರೀಗ ಬರಲ್ಲ.”
“ಯಾಕ್ ಬರಲ್ಲ ಶಾರ್. ನಮ್ ನಮ್ಗೆ ಜಗಳ ತಂದುಹಾಕಿ ನಾವೆಲ್ಲ ಹಿಂಗೆ ಜಗಳ ಮಾಡ್ತಯಿದ್ರೆ ಸೈಲೆಂಟಾಗಿ ಬಂದು ಬ್ರಿಟಿಷ್ ಜನ ಸೀಟ್ ಮೇಲೆ ಕೂರ್ತರೆ. ಆಗ ನಮ್ದು ಕತೆ ಹೋಗ್ಲಿ, ಮೋದಿಗೆ ಹಳೆ ಪೇಪರ್ ಪ್ಲಾಸ್ಟಿಕ್ ಸೀಸ ಬಾಟ್ಳಿನೆ ಗತಿ” ಎಂದು ನಕ್ಕ. ಈ ಮಾತಿಗೆ ಎಲ್ಲರೂ ನಕ್ಕರು.

ಚಿಕ್ಕಮಗಳೂರು ಕಡೆಯಿಂದ ದಸರಾ ನೋಡಲು ಹೋಗುತ್ತಿದ್ದ ಕೆಲವರಿಗೆ ಈ ಸಾಬರ ಹುಡುಗ ಮಾಡುತ್ತಿರುವ ಟೀಕೆ ಸಹಿಸಲಾಗದ್ದನ್ನು ಅವರ ಮುಖಗಳೇ ಹೇಳುತ್ತಿದ್ದವು. ಅಷ್ಟರಲ್ಲಿ ಸೀತಾಫಲ ಮಾರುವ ವ್ಯಕ್ತಿ ಬಂದ. ಹುಡುಗ ಸೀತಾಫಲ ತೆಗೆದುಕೊಂಡು ಅರ್ಧರ್ಧ ಹಿಸಿದು ಎದುರು ಕುಳಿತವರಿಗೆ ಕೊಟ್ಟ. ನಂತರ ಬಂದ ಸಪೋಟವನ್ನು ತೆಗೆದುಕೊಂಡು ಕೊಡಲು ಬಂದ “ಬ್ಯಾಡ ಕಣಪ್ಪ, ಅದು ತುಂಬ ಶುಗರು” ಎಂದೆ. “ತಿನ್ನಿ ಶಾರ್ ಹಣ್ಣು ತಿಂದ್ರೆ ವಳ್ಳೇದು.” ಎಂದು ಅರ್ಧ ಭಾಗಕೊಟ್ಟ. ಅವನ ಆಂತರ್ಯದಲ್ಲಿ ಬಿಜೆಪಿ ಜನ, ಜನಾಂಗೀಯ ದ್ವೇಷವನ್ನು ಹುಟ್ಟುಹಾಕುವುದಕ್ಕೆ ದಿಗಲುಗೊಂಡು ಸಾಮರಸ್ಯದಿಂದ ಬದುಕುವ ಮನಸ್ಸು, ಹಣ್ಣು ಹಂಚಿಕೆಯ ಹಿಂದೆ ಗೋಚರಿಸಿತು. ಅಷ್ಟರಲ್ಲಿ ಎಲ್ಲ ಜನಾಂಗವೂ ಸೇರಿ ಸಂಭ್ರಮದಿಂದ ಆಚರಿಸುವ ದಸರಾ ತಾಣ ಮೈಸೂರು ಬಂತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...