Homeಕರ್ನಾಟಕಕಾಂಗ್ರೆಸ್‍ಗೆ ಸೇರಿದ ಲಕ್ಷ್ಮೀನಾರಾಯಣ: ಸೋಮಣ್ಣರ ಸೀಕ್ರೆಟ್ ಡೀಲ್

ಕಾಂಗ್ರೆಸ್‍ಗೆ ಸೇರಿದ ಲಕ್ಷ್ಮೀನಾರಾಯಣ: ಸೋಮಣ್ಣರ ಸೀಕ್ರೆಟ್ ಡೀಲ್

- Advertisement -
- Advertisement -

ಇಂದು ಮಹತ್ವದ ಬೆಳವಣಿಗೆಯೊಂದು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದಿದೆ. ಅದರ ಮಹತ್ವವನ್ನು ಬಿಂಬಿಸಲೋ ಎಂಬಂತೆ, ಅದರಲ್ಲಿ ಬೆಂ.ದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್, ವಿಜಯನಗರದ ಶಾಸಕ ಎಂ.ಕೃಷ್ಣಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಖುದ್ದು ಹಾಜರಿದ್ದರು. ಬೆಂಗಳೂರಿನ ಮಾಜಿ ಉಪಮೇಯರ್ ಎಂ.ಲಕ್ಷ್ಮೀನಾರಾಯಣ್ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದೇ ಈ ವಿದ್ಯಮಾನ.

ಇದಕ್ಕೆ ಮಹತ್ವ ಬಂದಿರುವುದು ಸ್ವತಃ ಲಕ್ಷ್ಮೀನಾರಾಯಣ್‍ರ ಸಾಮಥ್ರ್ಯದಿಂದ ಅಷ್ಟೇ ಅಲ್ಲ. ಅವರ ಗುರು ವಿ.ಸೋಮಣ್ಣ ತಮ್ಮ ಅಸಮಾಧಾನದ ಕಾರಣಕ್ಕೆ, ಲಕ್ಷ್ಮೀನಾರಾಯಣರನ್ನು ಕಾಂಗ್ರೆಸ್ಸಿಗೆ ಕಳಿಸಿದ್ದಾರೆಂದು ಭಾವಿಸಲು ಹಲವು ಕಾರಣಗಳಿವೆ. ಹಳೇ ಬಿನ್ನಿಪೇಟೆ ಕ್ಷೇತ್ರದ ವಿ.ಸೋಮಣ್ಣರನ್ನು ವಿಜಯನಗರದ ವೀರಪುತ್ರ, ‘ಸೋಲಿಲ್ಲದ ಸರದಾರ’ (ಆ ನಂತರ ಸೋಮಣ್ಣ ಸೋತರು, ಆ ಮಾತು ಬೇರೆ) ಇತ್ಯಾದಿ ವಿಶೇಷಣಗಳಿಂದ ಕರೆಯಲಾಗುತ್ತಿದ್ದುದಕ್ಕೆ ಕಾರಣಗಳಿವೆ. ಜನತಾದಳದಿಂದ ಮತ್ತು ಕಾಂಗ್ರೆಸ್‍ನಿಂದ ಸತತ ಎರಡು ಬಾರಿ ಹಳೇ ಬಿನ್ನಿಪೇಟೆ ಕ್ಷೇತ್ರದಿಂದ ಗೆದ್ದ ಸೋಮಣ್ಣ, ನಂತರ ಯಾವ ಪಕ್ಷದ ಟಿಕೆಟ್ಟೂ ಬೇಡ ಎಂದು ಪಕ್ಷೇತರವಾಗಿಯೂ ನಿಂತು ಗೆದ್ದಿದ್ದರು!

ಅದೇ ಕ್ಷೇತ್ರದ ಲೇಔಟ್ ಕೃಷ್ಣಪ್ಪರಂತಹ ಒಬ್ಬ ಭಾರೀ ಕುಳ ಕಾಂಗ್ರೆಸ್ಸಿನಲ್ಲೇ ಇದ್ದಾಗಲೂ ಬಿನ್ನಿಪೇಟೆ ಕ್ಷೇತ್ರದ ಟಿಕೆಟ್ ಪಡೆಯಲು ಸಾಧ್ಯವೇ ಇಲ್ಲದ ಕಾರಣಕ್ಕೆ ಎಂಎಲ್‍ಸಿಯಷ್ಟೇ ಆದರು. ನಂತರ ಕ್ಷೇತ್ರದ ಪುನರ್‍ವಿಂಗಡಣೆಯಲ್ಲಿ ಗೋವಿಂದರಾಜನಗರದಿಂದ ಸೋಮಣ್ಣ ಮತ್ತು ವಿಜಯನಗರದಿಂದ ಕೃಷ್ಣಪ್ಪ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದಿದ್ದರು. ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಕಮಲಕ್ಕೆ ಒಳಗಾದವರಲ್ಲಿ ಸೋಮಣ್ಣ ಸಹಾ ಒಬ್ಬರು. ಆದರೆ, ಅವರ ವಿರುದ್ಧ ಕೃಷ್ಣಪ್ಪನವರ ಮಗ ಪ್ರಿಯಾಕೃಷ್ಣ ನಿಂತು, ಜೆಡಿಎಸ್‍ನ ಬೆಂಬಲದೊಂದಿಗೆ ಸೋಮಣ್ಣ ಸೋತಿದ್ದರು. ಇದು ಅವರನ್ನು ಹೈರಾಣಾಗಿಸಿ, ಬೇರೆ ಕ್ಷೇತ್ರದ ಹುಡುಕಾಟಕ್ಕೂ ಬಿದ್ದಿದ್ದರು. ಆದರೆ, ಈ ಸಾರಿ ಮತ್ತೆ ಪ್ರಿಯಾಕೃಷ್ಣರನ್ನು ಸೋಲಿಸುವ ಮುಂಚೆ ಸ್ವತಃ ಯಡಿಯೂರಪ್ಪನವರು ಸೋಮಣ್ಣರನ್ನು ಹುಡುಕಿಕೊಂಡು ಬಂದು ಸಮಾಧಾನ ಮಾಡಿ ಪಕ್ಷದಲ್ಲಿ ಉಳಿಸಿಕೊಂಡಿದ್ದರು. ಯಡ್ಡಿ ಸೋಮಣ್ಣರ ನಡುವಿನದ್ದು ಲವ್ & ಹೇಟ್ ಸಂಬಂಧವಾದರೆ, ಅನಂತಕುಮಾರ್‍ರ ಜೊತೆಗೂ ಸೋಮಣ್ಣ ಬಹಳ ಒಳ್ಳೆಯ ಸಂಬಂಧ ಹೊಂದಿದ್ದರು.

ಏಕೆಂದರೆ ಸೋಮಣ್ಣರಿಗಿರುವ ಪ್ರಭಾವ ಅಂಥದ್ದು. ಈ ಕ್ಷೇತ್ರದ ಸಾವಿರಾರು ಜನರನ್ನು ಹೆಸರಿನಿಂದ ಬಲ್ಲ ಸೋಮಣ್ಣ, ಯಾರು ಯಾವುದೇ ಸಮಸ್ಯೆ ತಂದರೂ ಬಗೆಹರಿಸುತ್ತಿದ್ದ ವ್ಯಕ್ತಿ. ಬೆಂಗಳೂರಿನ ಮೇಯರ್ ಸ್ಥಾನಕ್ಕೆ ನೇರ ಚುನಾವಣೆ ನಡೆಯಬೇಕು ಎಂಬ ಚರ್ಚೆಯಿದ್ದಾಗ ಅದಕ್ಕೆ ದೊಡ್ಡ ಮಟ್ಟದಲ್ಲಿ ಕೇಳಿಬಂದ ಹೆಸರು ಸೋಮಣ್ಣರದ್ದೇ.

ಸೋಮಣ್ಣ ತನ್ನ ಮಗನನ್ನು ರಾಜಕಾರಣಕ್ಕೆ ತರುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರಾದರೂ, ತನ್ನ ಆಪ್ತ ಶಿಷ್ಯರಾದ ಎಚ್.ರವೀಂದ್ರ ಮತ್ತು ಲಕ್ಷ್ಮೀನಾರಾಯಣ ಇಬ್ಬರಿಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲೇ ಟಿಕೆಟ್ ಕೊಡಿಸಿದ್ದರು. ಆ ರೀತಿಯಲ್ಲಿ ‘ನಂಬಿದವರನ್ನು ಪೊರೆವ’ ವಿಚಾರದಲ್ಲಿ ಅವರ ಬಗ್ಗೆ ಅಂತಹ ಕೆಟ್ಟ ಹೆಸರಿಲ್ಲ.

ಇನ್ನು ಲಕ್ಷ್ಮೀನಾರಾಯಣರ ವಿಚಾರಕ್ಕೆ ಬರುವುದಾದರೆ, ಆವಲಹಳ್ಳಿ ಪಟೇಲರ ಕುಟುಂಬದ ಸಂಬಂಧಿಯಾದ ಅವರು ಭಾರೀ ದೊಡ್ಡ ಕುಳವೇನಾಗಿರಲಿಲ್ಲ. ನಗರದೊಳಗೇ ಇದ್ದರೂ, ಇನ್ನೂ ಹಳ್ಳಿಯ ರೀತಿ ರಿವಾಜುಗಳನ್ನು ಉಳಿಸಿಕೊಂಡಿರುವ ಆವಲಹಳ್ಳಿಯಲ್ಲಿ ಅಲ್ಲಿನ ದೊಡ್ಡ ಕುಳಗಳಿಗೆ ಸೆಡ್ಡು ಹೊಡೆದು ರಾಜಕೀಯ ಬಲ ರೂಪಿಸಿಕೊಂಡವರು ಲಕ್ಷ್ಮೀನಾರಾಯಣ್. ಸಹಜವಾಗಿ ಕಾರ್ಪೋರೇಟರ್ ಚುನಾವಣೆಗೆ ನಿಂತು ಗೆಲ್ಲಲು ಬಯಸಿದ ಅವರನ್ನು ಪೋಷಿಸಿದ್ದು ಸೋಮಣ್ಣರೇ. ನಂತರ ಉಪಮೇಯರ್ ಮಾಡಿದ್ದು, ಎಂಎಲ್‍ಎ ಟಿಕೆಟ್ ಕೊಡಿಸಿದ್ದು ಎಲ್ಲವೂ ಸೋಮಣ್ಣರೇ. ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹಮದ್ ವಿರುದ್ಧ ಸೋತರೂ ಲಕ್ಷ್ಮೀನಾರಾಯಣ್ ಪ್ರಭಾವಿಯೇ.

ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ತಪ್ಪಿಸಿ, ತೇಜಸ್ವಿ ಸೂರ್ಯಗೆ ಕೊಟ್ಟ ನಂತರ ಬಹಿರಂಗವಾಗಿ ಕಿಡಿಕಾರಿದ್ದು ಸೋಮಣ್ಣ. ತನಗೆ ಕೆಲವು ವಿಚಾರಗಳಲ್ಲಿ ಸ್ಪಷ್ಟೀಕರಣ ಸಿಗುವವರೆಗೂ ಪ್ರಚಾರಕ್ಕೂ ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಇಂದು ಕಾರ್ಯಕರ್ತರ ಸಭೆ ಕರೆದು ಪ್ರಚಾರ ಶುರು ಮಾಡಿದ್ದಾರಾದರೂ, ಇಂದೇ ಲಕ್ಷ್ಮೀನಾರಾಯಣ ಕಾಂಗ್ರೆಸ್ ಸೇರಿರುವುದು ಕೇವಲ ಅವರ ವ್ಯಕ್ತಿಗತ ತೀರ್ಮಾನ ಆಗಿರಲಾರದು.

ಸೋಮಣ್ಣರ ಪ್ರಭಾವವಿರುವ ಹಳೇ ಬಿನ್ನಿಪೇಟೆ ಕ್ಷೇತ್ರವ್ಯಾಪ್ತಿಯ ಎಲ್ಲೆಡೆ ಅವರ ಪ್ರತಿನಿಧಿಯಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‍ರ ಪರವಾಗಿ ಲಕ್ಷ್ಮೀನಾರಾಯಣ್ ಕೆಲಸ ಮಾಡುತ್ತಾರೆನ್ನುವುದು ಒಳ ಒಪ್ಪಂದ ಇದ್ದಂತಿದೆ. ಚುನಾವಣಾ ಸಂದರ್ಭದಲ್ಲಿ ಯಾವ ಮೌಲ್ಯಗಳೂ ಉಳಿದುಕೊಂಡಿರದ ರಾಜಕಾರಣದಲ್ಲಿ ಸಿದ್ಧಾಂತಕ್ಕೆ ಬೆಲೆಯೇನೂ ಇರುವುದಿಲ್ಲ. ಹಾಗಾಗಿ ಇಂತಹ ಪಕ್ಷಾಂತರಗಳು, ಒಳಒಪ್ಪಂದಗಳು ಮಾಮೂಲು ಎನ್ನುವಂತಹ ದುರಂತದ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ತೇಜಸ್ವಿ ಸೂರ್ಯ ಅಭ್ಯರ್ಥಿಯಾದ ಕ್ಷಣದಿಂದಲೂ ಎಡವಟ್ಟಿನ ಮೇಲೆ ಎಡವಟ್ಟಾಗುತ್ತಿದೆ. ಅದೇ ಸಂದರ್ಭದಲ್ಲಿ ಹಿಂದಿನಿಂದಲೂ ಬಿಜೆಪಿಯ ಅನಂತಕುಮಾರ್‍ರ ಪರವಾಗಿ ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿಯವರು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಸಾರಿ ಅವರೂ ತೊಡೆತಟ್ಟಿ ನಿಂತಂತಿದೆ. ಇಂದಿನ ಲಕ್ಷ್ಮೀನಾರಾಯಣ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರೂ ಇದ್ದದ್ದು ಅದಕ್ಕೆ ಸಾಕ್ಷಿಯಂತಿದೆ. ಇವೆಲ್ಲಾ ಕಾರಣಗಳಿಂದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸ್ಪರ್ಧೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ತೇಜಸ್ವಿ ಸೋಲಿಸಲು ಸೂಲಿಬೆಲೆ ಸ್ಕೆಚ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರವ್ ಗೊಗೊಯ್ ಸಹಿತ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ

ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ದ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. "ಪತ್ರಿಕಾಗೋಷ್ಠಿಯ ಮೂಲಕ...

ಕೇರಳದಲ್ಲಿ ಸರ್ಕಾರ ಬದಲಾವಣೆಗೆ ಕವಿ ಸಚ್ಚಿದಾನಂದನ್ ಕರೆಗೆ ಎಡಪಕ್ಷಗಳ ತೀವ್ರ ವಿರೋಧ; ಇದು ಸಾರ್ವಜನಿಕ ಭಾವನೆ ಎಂದ ವಿಪಕ್ಷಗಳು

ಕೇರಳದಲ್ಲಿ ನಿರಂತರ ಆಡಳಿತ ಅಪೇಕ್ಷಣೀಯವಲ್ಲ ಮತ್ತು ಅಧಿಕಾರವು ರಾಜಕೀಯ ರಂಗಗಳ ನಡುವೆ ಪರ್ಯಾಯವಾಗಿರಬೇಕು ಎಂದು ಹಿರಿಯ ಕವಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಸಚ್ಚಿದಾನಂದನ್ ಹೇಳಿದ್ದಾರೆ. ಈ ಹೇಳಿಕೆ ಆಡಳಿತಾರೂಢ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಣೆ; ದೀಪಕ್ ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿ ಬಂಧನ

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಿಸಿದ್ದ ಜಿಮ್ ಮಾಲೀಕ ದೀಪಕ್ ಕುಮಾರ್ (ಮೊಹಮ್ಮದ್ ದೀಪಕ್) ಅವರನ್ನು ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿಯನ್ನು ಉತ್ತರಾಖಂಡ ಪೊಲೀಸರು ಸೋಮವಾರ (ಫೆ.9) ಬಂಧಿಸಿದ್ದಾರೆ. ಬಿಹಾರದ...

ಬಾಂಗ್ಲಾದೇಶ: ಚುನಾವಣೆಗೂ ಮುನ್ನ 62 ವರ್ಷದ ಹಿಂದೂ ಅಕ್ಕಿ ವ್ಯಾಪಾರಿ ಸುಶೇನ್ ಚಂದ್ರ ಸರ್ಕಾರ್ ಹತ್ಯೆ

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು, ಸೋಮವಾರ ತಡರಾತ್ರಿ ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಅಕ್ಕಿ ವ್ಯಾಪಾರಿಯೊಬ್ಬರನ್ನು ಅವರ ಅಂಗಡಿಯೊಳಗೆ ಹತ್ಯೆಯಾಗಿದೆ.  ತ್ರಿಶಾಲ್ ಉಪಜಿಲಾದ ಬೋಗರ್ ಬಜಾರ್ ಛೇದಕದಲ್ಲಿರುವ "ಮೆಸರ್ಸ್ ಭಾಯ್...

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಮಸೀದಿ ಕೆಡವಿದ ಉತ್ತರ ಪ್ರದೇಶ ಸರ್ಕಾರ

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಉತ್ತರ ಪ್ರದೇಶ ಆಡಳಿತವು ಬರೇಲಿ ಜಿಲ್ಲೆಯ ಮಸೀದಿಯನ್ನು ನೆಲಸಮಗೊಳಿಸಿದೆ. ಮಸೀದಿ ನಿರ್ಮಾಣ ಕುರಿತಾದ ಪ್ರಕರಣ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಪಾರಿಯಾ...

‘ನಾನು ಮಾಜಿ ಸೇನಾ ಮುಖ್ಯಸ್ಥರನ್ನು ನಂಬುತ್ತೇನೆ’ : ಜನರಲ್ ನರವಾಣೆ ಪುಸ್ತಕದ ಕುರಿತ ಪ್ರಕಾಶಕರ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆಯ ಪ್ರಕಾಶಕರ ವಿರುದ್ಧ ರಾಹುಲ್ ಗಾಂಧಿ ಮಂಗಳವಾರ (ಫೆ.10) ಗಂಭೀರ ಆರೋಪ ಮಾಡಿದ್ದಾರೆ. ನರವಾಣೆ ಅವರ ನೆನಪುಗಳ ಆಧಾರಿತ ಪುಸ್ತಕವು ಈಗಾಗಲೇ ಮಾರಾಟಕ್ಕೆ...

‘ಆದಿತ್ಯನಾಥನ ಆಡಳಿತದಲ್ಲಿ ಬ್ರಾಹ್ಮಣರು ಅಸುರಕ್ಷಿತರು, ಸನಾತನಿಗಳು ಎಂದಿಗೂ ಮರೆಯುವುದಿಲ್ಲ’ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ ಪತ್ರಕರ್ತನ ಬಂಧನ

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಪತ್ರಕರ್ತರೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು...

ಹಿಮಂತ ಬಿಸ್ವಾ ಶರ್ಮಾ ‘ಗುಂಡು ಹಾರಿಸುವ’ ವಿಡಿಯೋ ವಿರುದ್ಧದ ಅರ್ಜಿ; ವಿಚಾರಣೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಿರ್ದಿಷ್ಟ ಸಮುದಾಯದ ಸದಸ್ಯರ ಮೇಲೆ ಗುರಿಯಿಟ್ಟು ರೈಫಲ್‌ನಿಂದ ಗುಂಡು ಹಾರಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎಡಪಂಥೀಯ...

ನರವಾಣೆಯ ಅಪ್ರಕಟಿತ ಆತ್ಮಚರಿತ್ರೆ ಪ್ರಸಾರ ಆರೋಪ : ಎಫ್‌ಐಆರ್‌ ದಾಖಲಿಸಿದ ದೆಹಲಿ ಪೊಲೀಸರು

ಮಾಜಿ ಭೂಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ"ಯ ಪ್ರಸಾರ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಪುಸ್ತಕದ ವಿಷಯಗಳನ್ನು ಪ್ರತಿಪಕ್ಷ...

ನರವಾಣೆ ಅವರ ಆತ್ಮಚರಿತ್ರೆಯ ಯಾವುದೇ ಪ್ರತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ: ಪೆಂಗ್ವಿನ್ ಪ್ರಕಾಶನ ಸ್ಪಷ್ಟನೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಗೆ ವಿಶೇಷ ಪ್ರಕಾಶನ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ) ಹೇಳಿದ್ದು,...