Homeಮುಖಪುಟಬಿಜೆಪಿ ವಕ್ತಾರ ಸಂಬಿತ್ ಪಾತ್ರಾ - ಫೇಕ್‌, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ'

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ – ಫೇಕ್‌, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ’

- Advertisement -
- Advertisement -

ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣದಲ್ಲಿ ಸಂಬಿತ್ ಪಾತ್ರಾ ಮತ್ತು ರಮಣಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ವೃತ್ತಿಯಲ್ಲಿ ವೈದ್ಯರಾದ ಸಂಬಿತ್ ಪಾತ್ರಾ ಬಿಜೆಪಿಯ ರಾಷ್ಟ್ರೀಯ ವಕ್ತಾರರ ಪೈಕಿ ಹೆಚ್ಚು ಗೋಚರಿಸುವ ವ್ಯಕ್ತಿಯಾಗಿದ್ದಾರೆ.

ರಾಷ್ಟ್ರೀಯ ಚಾನೆಲ್‌ಗಳ ಚರ್ಚೆಗಳಲ್ಲಿ ಪಕ್ಷದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಅವರು, ಪ್ರತಿಪಕ್ಷಗಳ ವಿರುದ್ಧ ಅದರಲ್ಲೂ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಲು ಕೆಲವೊಮ್ಮೆ ಸತ್ಯ, ಬಹುಪಾಲು ಸಂದರ್ಭಗಳಲ್ಲಿ ಅರೆಸತ್ಯ, ಸುಳ್ಳು ಮತ್ತು ತಿರುಚಲ್ಪಟ್ಟ ಸಂಗತಿಗಳನ್ನು ತಮ್ಮ ಅಸ್ತ್ರಗಳನ್ನಾಗಿ ಬಳಸುತ್ತಾರೆ.

ಇತ್ತೀಚನ ವರ್ಷಗಳಲ್ಲಿ ಟ್ವಿಟರ್ ಅವರ ನೆಚ್ಚಿನ ವೇದಿಕೆಯಾಗಿದ್ದು, ಅವರು ನಾಲ್ಕು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲು ಅವರು ಈಗ ಟ್ವಿಟರ್ ಬಳಸುತ್ತಿದ್ದಾರೆ.

ಇದನ್ನೂ ಓದಿ: ಹಣ ಕೊಡದೇ ಬಸ್ ಬಿಡುವುದಿಲ್ಲ ಎಂದು ಮಧ್ಯರಾತ್ರಿಯಲ್ಲಿ ಹಠಹಿಡಿದ ರಾಜಸ್ತಾನ? ಸಂಬಿತ್‌ ಪಾತ್ರಾನ ಹೊಸ ಸುಳ್ಳು

ಕಳೆದ ವಾರ ಅವರ ಟೂಲ್‌ಕಿಟ್ ಟ್ವೀಟ್‌ಗೆ ಟ್ವಿಟರ್ ಕಂಪನಿ ’ತಿರುಚಲ್ಪಟ್ಟ ಸಂಗತಿ’ (’ಮ್ಯಾನಿಪುಲೆಟೆಡ್ ಮೀಡಿಯಾ’) ಎಂಬ ಟ್ಯಾಗ್ ಹಾಕಿತ್ತು. ಅವರು ರಾಷ್ಟ್ರೀಯ ಚಾನೆಲ್‌ಗಳಲ್ಲಿ ತಪ್ಪು ಮಾಹಿತಿಯನ್ನು ಉತ್ತೇಜಿಸುತ್ತಿದ್ದಾರೆ, ಟ್ವೀಟ್‌ಗಳಲ್ಲಿ ತಿರುಚಿದ ವಿಡಿಯೋ-ಮಾಹಿತಿ ಹಾಕುತ್ತಾರೆ ಎಂದು ಹಲವಾರು ಫ್ಯಾಕ್ಟ್‌ಚೆಕ್‌ಗಳು ಹಲವಾರು ಸಲ ನಿರೂಪಿಸಿವೆ.

ಟಿವಿ ಚರ್ಚೆಗಳಲ್ಲಿ ಅವರು ತಮಗೆ ಹಿನ್ನಡೆ ಆಗುತ್ತಿದೆ ಅನಿಸಿದಾಗ ಬಿಜೆಪಿಯ ಪರಂಪರಾಗತ ಅಸ್ತ್ರಗಳಾದ ದೇಶದ್ರೋಹ, ಪಾಕಿಸ್ತಾನ, ಭಾರತಮಾತಾ, ಕಾಶ್ಮೀರ ಮುಂತಾದ ವಿಷಯಗಳಿಗೆ ಜಾರಿ ವಿಷಯ ಪಲ್ಲಟ ಮಾಡಿ ಗದ್ದಲ ಎಬ್ಬಿಸಲು ನೋಡುತ್ತಾರೆ. ಇದು ಚಾನೆಲ್‌ಗಳ ಟಿಆರ್‌ಪಿಗೂ ಅಗತ್ಯವಾದ್ದರಿಂದ ಸಂಬಿತ್ ಅವುಗಳ ನೆಚ್ಚಿನ ಪ್ಯಾನೆಲಿಸ್ಟ್.

ಪಟ್ಟಿ ಮಾಡುತ್ತ ಹೋದರೆ, ಅದು ತುಂಬ ದೊಡ್ಡದಾಗುತ್ತದೆ. ಅಲ್ಟ್‌ನ್ಯೂಸ್ ಮತ್ತು ಇತರ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ನಿರೂಪಿಸಿದ ಪಾತ್ರಾ ಅವರ ಕೆಲವು ಸುಳ್ಳುಗಳನ್ನು ನೋಡೋಣ.

ತಿರುಚಿದ ಇತಿಹಾಸ ಹೇಳಿ ದಂಗು ಬಡಿಸುವುದು ಅವರ ’ಕಲೆ’. ಹಾಗೆಯೇ ಯಾವುದಾದರೂ ವಿಡಿಯೋದಿಂದ ಮಧ್ಯದ ಐದಾರು ಸೆಕೆಂಡುಗಳ ದೃಶ್ಯ-ಮಾತುಗಳನ್ನು ಎತ್ತಿ ವಿಪಕ್ಷದವರನ್ನು ಅಪರಾಧಿಯನ್ನಾಗಿ ಮಾಡುವುದು ಅಥವಾ ಗೇಲಿ ಮಾಡುವುದು ಅವರ ’ಶೈಲಿ’!

ಕಾಂಗ್ರೆಸ್-ನೆಹರೂ-ಗಾಂಧಿ ಕುಟುಂಬಗಳು ಅವರ ನೆಚ್ಚಿನ ಟಾರ್ಗೆಟ್.

ಕಳೆದ ಕೋವಿಡ್ ಒಂದನೇ ಅಲೆ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರವು ಯುಪಿ ವಿದ್ಯಾರ್ಥಿಗಳನ್ನು ಯುಪಿಗೆ ಸಾಗಿಸುವ ಬಸ್ಸುಗಳನ್ನು 19 ಲಕ್ಷ ರೂ. ಪಾವತಿಸಿದ ನಂತರವಷ್ಟೇ ಬಿಟ್ಟಿತ್ತು ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರೈಲ್ವೇ ಫಲಕದಲ್ಲಿ ಸಂಸ್ಕೃತ ಭಾಷೆಯಿರುವ ಸಂಬಿತ್ ಪಾತ್ರ ಟ್ವೀಟ್- ವಾಸ್ತವವೇನು?

ರಾಜಸ್ತಾನದ ಕೋಟಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಯುಪಿಗೆ ಕಳಿಸಿಕೊಡಲು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದವು. ಅವರು ಸುರಕ್ಷಿತವಾಗಿ ಮನೆಗೆ ಮರಳಿದ ಒಂದು ತಿಂಗಳ ನಂತರ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಯುಪಿ ಸರ್ಕಾರದ ಚೆಕ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ, ಯುಪಿ ಸರ್ಕಾರವು ಮಧ್ಯರಾತ್ರಿ 19 ಲಕ್ಷ ರೂ.ಗಳ ಇಂಧನ ಬಾಕಿ ಪಾವತಿಸಿದ ನಂತರವೇ ರಾಜಸ್ಥಾನ್ ಸರ್ಕಾರ ಬಸ್ಸುಗಳನ್ನು ರಾಜ್ಯದಿಂದ ಹೊರಹೋಗಲು ಅನುಮತಿ ನೀಡಿದೆ ಎಂದು ಹೇಳಿದ್ದರು.

ಆದರೆ ಇದು ನಿಜವಲ್ಲ ಏಕೆಂದರೆ ಪಾತ್ರ್ರಾ ಅವರು ತೋರಿಸಿದ ಚೆಕ್ 2020 ರ ಮೇ 5 ರ ದಿನಾಂಕದ್ದು. ವಿದ್ಯಾರ್ಥಿಗಳನ್ನು ಕರೆದೊಯ್ಯುವ ಕೊನೆಯ ಬಸ್ ಏಪ್ರಿಲ್ 19 ರಂದು ರಾಜಸ್ಥಾನದಿಂದ ಹೊರಟಿತ್ತು. ಸಾಕಷ್ಟು ಸ್ಪಷ್ಟವಾಗಿ, ಏಪ್ರಿಲ್‌ನಲ್ಲಿ ಪಾವತಿಯ ಕೊರತೆಯಿಂದಾಗಿ ಬಸ್‌ಗಳನ್ನು ನಿಲ್ಲಿಸಲಾಗಲಿಲ್ಲ. ಬಾಕಿಗಳನ್ನು ಎರಡು ವಾರಗಳ ನಂತರ ಮೇನಲ್ಲಿ ವರ್ಗಾಯಿಸಲಾಯಿತು.

ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ಕ್ಲಿಪ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದರು.

ಕೋವಿಡ್ ತೀವ್ರತೆಯ ಆಧಾರದ ಮೇಲೆ ಕೇಂದ್ರ ಸರ್ಕಾರ ಸ್ಥಾಪಿಸಿದ ವಲಯಗಳನ್ನು ಉಲ್ಲೇಖಿಸಿ “ಕೆಂಪು ವಲಯವು ನಿಜವಾಗಿಯೂ ಹಸಿರು ವಲಯ ಮತ್ತು ಹಸಿರು ವಲಯವು ನಿಜವಾಗಿಯೂ ಕೆಂಪು ವಲಯವಾಗಿದೆ” ಎಂದು ರಾಹುಲ್ ಗಾಂಧಿ ಹೇಳುವಂತಹ ವೀಡಿಯೊವನ್ನು ಪಾತ್ರಾ ಟ್ವೀಟ್ ಮಾಡಿ ಗೇಲಿ ಮಾಡಿದ್ದರು.

ಇದನ್ನೂ ಓದಿ: ಟಿವಿ ಡಿಬೇಟ್ ನಂತರ ಹೃದಯಾಘಾತದಿಂದ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಸಾವು: ಅರೆಸ್ಟ್ ಸಂಬಿತ್ ಪಾತ್ರ ಟ್ರೆಂಡಿಂಗ್

ಭಾರತದಲ್ಲಿ ಕೊರೊನಾ ಸಂಭವಿಸಿದ ಬಗ್ಗೆ ರಾಹುಲ್ ಗಾಂಧಿ ಅವರು ನಡೆಸಿದ್ದ ಒಂದು ಗಂಟೆ ಅವಧಿಯ ಪತ್ರಿಕಾಗೋಷ್ಠಿಯಿಂದ 6 ಸೆಕೆಂಡುಗಳನ್ನು ಸಂಬಿತ್ ಪಾತ್ರಾ ಹಂಚಿಕೊಂಡಿದ್ದರು. ಬಲವಾದ ಸ್ಥಳೀಯ ನಾಯಕರ ಅಗತ್ಯತೆ ಮತ್ತು ತಳಮಟ್ಟದಿಂದ ವೈರಸ್ ಅನ್ನು ನಿಭಾಯಿಸುವ ಅಗತ್ಯವನ್ನು ಕಾಂಗ್ರೆಸ್ ನಾಯಕ ಒತ್ತಿ ಹೇಳಿದ್ದರು. “ಈ ವಲಯಗಳನ್ನು – ಕೆಂಪು, ಕಿತ್ತಳೆ ಮತ್ತು ಹಸಿರು – ರಾಷ್ಟ್ರಮಟ್ಟದಲ್ಲಿ ರಚಿಸಲಾಗಿದೆ. ಅವುಗಳನ್ನು ರಾಜ್ಯ ಮಟ್ಟದಲ್ಲಿ ರಚಿಸಬೇಕು. ಮುಖ್ಯಮಂತ್ರಿಗಳು (ಕಾಂಗ್ರೆಸ್ ಆಡಳಿತದ ರಾಜ್ಯಗಳ) ರಾಷ್ಟ್ರಮಟ್ಟದಲ್ಲಿ ಕೆಂಪು ಬಣ್ಣದಲ್ಲಿರುವ ವಲಯವು ವಾಸ್ತವವಾಗಿ ಹಸಿರು ಮತ್ತು ಹಸಿರು ಇರುವ ವಲಯವು ನಿಜವಾಗಿಯೂ ಕೆಂಪು ಎಂದು ನಮಗೆ ಹೇಳುತ್ತಿದ್ದಾರೆ ಎಂದು ಹೇಳಿದ್ದರು.

ರಾಹುಲ್‌ ಗಾಂಧಿಯವರು ಸಿಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಂಬಿಸಲು ರಾಷ್ಟ್ರಮಟ್ಟ ಎಂಬ ಪದಗಳನ್ನು ಭಾಷಣದಿಂದ ಈ ವಿಡಿಯೊವನ್ನು ಕ್ಲಿಪ್ ಮಾಡಲಾಗಿದೆ.

ಜವಾಹರಲಾಲ್ ನೆಹರೂಗೆ ನಕಲಿ ಉಲ್ಲೇಖ

2018 ರಲ್ಲಿ ಚಾನೆಲ್ ಚರ್ಚೆಯೊಂದರಲ್ಲಿ, ಮೊದಲ ಭಾರತೀಯ ಪ್ರಧಾನಿ ಜವಾಹರಲಾಲ್ ನೆಹರು, ನಾನು ಶಿಕ್ಷಣದಿಂದ ಇಂಗ್ಲಿಷ್‌, ಸಂಸ್ಕೃತಿಯಿಂದ ಮುಸ್ಲಿಂ ಮತ್ತು ಕೇವಲ ಜನ್ಮದಿಂದ ಆಕಸ್ಮಿಕವಾಗಿ ಹಿಂದೂ ಎಂದು ಹೇಳಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ.

ಈ ಮಾತುಗಳು ಮೊದಲು ಕಾಣಿಸಿಕೊಂಡಿದ್ದು 1959 ರಲ್ಲಿ ಹಿಂದೂ ಮಹಾಸಭಾ ನಾಯಕ ಮತ್ತು ಜವಾಹರಲಾಲ್ ನೆಹರೂ ಅವರ ತೀವ್ರ ವಿಮರ್ಶಕ ಎನ್.ಬಿ ಖಾರೆ ಬರೆದ ’ದಿ ಆಂಗ್ರಿ ಅರಿಸ್ಟೋಕ್ರಾಟ್’ ಎಂಬ ಲೇಖನದಲ್ಲಿ. ಈ ಲೇಖನವು ಹಲವಾರು ರಾಜಕೀಯ ವ್ಯಕ್ತಿಗಳ ವ್ಯಾಖ್ಯಾನಗಳೊಂದಿಗೆ ’ಎ ಸ್ಟಡಿ ಆಫ್ ನೆಹರೂ’ ಸಂಪುಟದ ಭಾಗವಾಗಿತ್ತು. ನೆಹರೂ ಅವರ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಬೇರೆಲ್ಲೂ ಈ ಉಲ್ಲೇಖವನ್ನು ಹೇಳುವ ಯಾವುದೇ ಸಾಕ್ಷಿಯಿಲ್ಲ.

ಇದನ್ನೂ ಓದಿ: ನನ್ನ ಪತಿ ಸಾವಿಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾರಣ: ರಾಜೀವ್ ತ್ಯಾಗಿ ಪತ್ನಿ ಆರೋಪ

ಕಳೆದ ವರ್ಷ ನ್ಯೂಸ್ 18 ಚರ್ಚೆಯ ಸಂದರ್ಭದಲ್ಲಿ, ಸೋನಿಯಾ ಗಾಂಧಿ ವಿಶ್ವದ 4 ನೇ ಶ್ರೀಮಂತ ಮಹಿಳೆ ಎಂದು ಸಾಂಬಿತ್ ಪಾತ್ರ್ರಾ ಹೇಳಿಕೊಂಡಿದ್ದಾರೆ.

ಆಲ್ಟ್‌ನ್ಯೂಸ್ ಈ ಸಂಗತಿ ’ವರ್ಲ್ಡ್ಸ್ ಲಕ್ಸುರಿ ಗೈಡ್’ ಹೆಸರಿನ ಕಳಪೆ ವೆಬ್‌ಸೈಟ್ ಅನ್ನು ಆಧರಿಸಿದೆ ಎಂದು ಕಂಡುಹಿಡಿದಿತ್ತು. ಅದು ಈಗ ಅಸ್ತಿತ್ವದಲ್ಲಿಲ್ಲ ಎಂಬುದನ್ನು ತೋರಿಸಿತ್ತು.

ಯಾರದೋ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದರೆಂದು ಆರೋಪಿಸುವುದು, ಫೋರ್ಜರಿ ಲೆಟರ್‌ಗಳಿರುವ ಟ್ವೀಟ್‌ಗಳನ್ನು ರಿಟ್ವೀಟ್ ಮಾಡುವುದನ್ನು ಯಾವ ಅಳುಕೂ ಇಲ್ಲದೇ ಮಾಡಬಲ್ಲ ಸಂಬಿತ್ ಪಾತ್ರಾ ಗಂಭೀರ ಟಿವಿ ವೀಕ್ಷರು ಮತ್ತು ನೆಟ್ಟಿಗರ ಪಾಲಿಗೆ ಜೋಕರ್ ತರಹ ಭಾಸವಾಗುತ್ತಾರೆ.

ಆದರೆ ಅದಕ್ಕೂ ಅಪಾಯಕಾರಿ ಸಂಗತಿ ಎಂದರೆ, 4 ಮಿಲಿಯನ್‌ಗೂ ಹೆಚ್ಚಿರುವ ಅವರ ಫಾಲೋವರ್ಸ್ ಈ ಸುಳ್ಳುಗಳನ್ನು ಹರಡುತ್ತ ಹೋಗುತ್ತಾರೆ. ಅವು ನಂತರ ವ್ಯಾಟ್ಸಾಪ್ ಮೂಲಕ ಇನ್ನಷ್ಟು ಪ್ರಸಾರಗೊಳ್ಳುತ್ತವೆ. ಇದನ್ನು ಬಲ್ಲ ಸಂಬಿತ್ ಪಾತ್ರಾ ಸುಳ್ಳು ಎಂದು ಗೊತ್ತಿದ್ದರೂ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಐಟಿ ಸೆಲ್‌ನ ಅಮಿತ್ ಮಾಳವಿಯ ಮತ್ತು ಪಾತ್ರಾ ಪರಸ್ಪರ ಸಹಕಾರದಲ್ಲಿ ಇಂಥದೊಂದು ಅಪಾಯಕಾರಿ ಆಟ ಆಡುತ್ತಿದ್ದಾರೆ.

ಬಿಜೆಪಿ ಅವರನ್ನು ಈ ಕೆಲಸಕ್ಕೇ ನೇಮಿಸಿದೆಯಲ್ಲವೆ?

ಇದನ್ನೂ ಓದಿ: ‘ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣ: ಬಿಜೆಪಿಯ ರಮಣಸಿಂಗ್, ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...