Homeಮುಖಪುಟಬಿಜೆಪಿ ವಕ್ತಾರ ಸಂಬಿತ್ ಪಾತ್ರಾ - ಫೇಕ್‌, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ'

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ – ಫೇಕ್‌, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ’

- Advertisement -
- Advertisement -

ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣದಲ್ಲಿ ಸಂಬಿತ್ ಪಾತ್ರಾ ಮತ್ತು ರಮಣಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ವೃತ್ತಿಯಲ್ಲಿ ವೈದ್ಯರಾದ ಸಂಬಿತ್ ಪಾತ್ರಾ ಬಿಜೆಪಿಯ ರಾಷ್ಟ್ರೀಯ ವಕ್ತಾರರ ಪೈಕಿ ಹೆಚ್ಚು ಗೋಚರಿಸುವ ವ್ಯಕ್ತಿಯಾಗಿದ್ದಾರೆ.

ರಾಷ್ಟ್ರೀಯ ಚಾನೆಲ್‌ಗಳ ಚರ್ಚೆಗಳಲ್ಲಿ ಪಕ್ಷದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಅವರು, ಪ್ರತಿಪಕ್ಷಗಳ ವಿರುದ್ಧ ಅದರಲ್ಲೂ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಲು ಕೆಲವೊಮ್ಮೆ ಸತ್ಯ, ಬಹುಪಾಲು ಸಂದರ್ಭಗಳಲ್ಲಿ ಅರೆಸತ್ಯ, ಸುಳ್ಳು ಮತ್ತು ತಿರುಚಲ್ಪಟ್ಟ ಸಂಗತಿಗಳನ್ನು ತಮ್ಮ ಅಸ್ತ್ರಗಳನ್ನಾಗಿ ಬಳಸುತ್ತಾರೆ.

ಇತ್ತೀಚನ ವರ್ಷಗಳಲ್ಲಿ ಟ್ವಿಟರ್ ಅವರ ನೆಚ್ಚಿನ ವೇದಿಕೆಯಾಗಿದ್ದು, ಅವರು ನಾಲ್ಕು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲು ಅವರು ಈಗ ಟ್ವಿಟರ್ ಬಳಸುತ್ತಿದ್ದಾರೆ.

ಇದನ್ನೂ ಓದಿ: ಹಣ ಕೊಡದೇ ಬಸ್ ಬಿಡುವುದಿಲ್ಲ ಎಂದು ಮಧ್ಯರಾತ್ರಿಯಲ್ಲಿ ಹಠಹಿಡಿದ ರಾಜಸ್ತಾನ? ಸಂಬಿತ್‌ ಪಾತ್ರಾನ ಹೊಸ ಸುಳ್ಳು

ಕಳೆದ ವಾರ ಅವರ ಟೂಲ್‌ಕಿಟ್ ಟ್ವೀಟ್‌ಗೆ ಟ್ವಿಟರ್ ಕಂಪನಿ ’ತಿರುಚಲ್ಪಟ್ಟ ಸಂಗತಿ’ (’ಮ್ಯಾನಿಪುಲೆಟೆಡ್ ಮೀಡಿಯಾ’) ಎಂಬ ಟ್ಯಾಗ್ ಹಾಕಿತ್ತು. ಅವರು ರಾಷ್ಟ್ರೀಯ ಚಾನೆಲ್‌ಗಳಲ್ಲಿ ತಪ್ಪು ಮಾಹಿತಿಯನ್ನು ಉತ್ತೇಜಿಸುತ್ತಿದ್ದಾರೆ, ಟ್ವೀಟ್‌ಗಳಲ್ಲಿ ತಿರುಚಿದ ವಿಡಿಯೋ-ಮಾಹಿತಿ ಹಾಕುತ್ತಾರೆ ಎಂದು ಹಲವಾರು ಫ್ಯಾಕ್ಟ್‌ಚೆಕ್‌ಗಳು ಹಲವಾರು ಸಲ ನಿರೂಪಿಸಿವೆ.

ಟಿವಿ ಚರ್ಚೆಗಳಲ್ಲಿ ಅವರು ತಮಗೆ ಹಿನ್ನಡೆ ಆಗುತ್ತಿದೆ ಅನಿಸಿದಾಗ ಬಿಜೆಪಿಯ ಪರಂಪರಾಗತ ಅಸ್ತ್ರಗಳಾದ ದೇಶದ್ರೋಹ, ಪಾಕಿಸ್ತಾನ, ಭಾರತಮಾತಾ, ಕಾಶ್ಮೀರ ಮುಂತಾದ ವಿಷಯಗಳಿಗೆ ಜಾರಿ ವಿಷಯ ಪಲ್ಲಟ ಮಾಡಿ ಗದ್ದಲ ಎಬ್ಬಿಸಲು ನೋಡುತ್ತಾರೆ. ಇದು ಚಾನೆಲ್‌ಗಳ ಟಿಆರ್‌ಪಿಗೂ ಅಗತ್ಯವಾದ್ದರಿಂದ ಸಂಬಿತ್ ಅವುಗಳ ನೆಚ್ಚಿನ ಪ್ಯಾನೆಲಿಸ್ಟ್.

ಪಟ್ಟಿ ಮಾಡುತ್ತ ಹೋದರೆ, ಅದು ತುಂಬ ದೊಡ್ಡದಾಗುತ್ತದೆ. ಅಲ್ಟ್‌ನ್ಯೂಸ್ ಮತ್ತು ಇತರ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ನಿರೂಪಿಸಿದ ಪಾತ್ರಾ ಅವರ ಕೆಲವು ಸುಳ್ಳುಗಳನ್ನು ನೋಡೋಣ.

ತಿರುಚಿದ ಇತಿಹಾಸ ಹೇಳಿ ದಂಗು ಬಡಿಸುವುದು ಅವರ ’ಕಲೆ’. ಹಾಗೆಯೇ ಯಾವುದಾದರೂ ವಿಡಿಯೋದಿಂದ ಮಧ್ಯದ ಐದಾರು ಸೆಕೆಂಡುಗಳ ದೃಶ್ಯ-ಮಾತುಗಳನ್ನು ಎತ್ತಿ ವಿಪಕ್ಷದವರನ್ನು ಅಪರಾಧಿಯನ್ನಾಗಿ ಮಾಡುವುದು ಅಥವಾ ಗೇಲಿ ಮಾಡುವುದು ಅವರ ’ಶೈಲಿ’!

ಕಾಂಗ್ರೆಸ್-ನೆಹರೂ-ಗಾಂಧಿ ಕುಟುಂಬಗಳು ಅವರ ನೆಚ್ಚಿನ ಟಾರ್ಗೆಟ್.

ಕಳೆದ ಕೋವಿಡ್ ಒಂದನೇ ಅಲೆ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರವು ಯುಪಿ ವಿದ್ಯಾರ್ಥಿಗಳನ್ನು ಯುಪಿಗೆ ಸಾಗಿಸುವ ಬಸ್ಸುಗಳನ್ನು 19 ಲಕ್ಷ ರೂ. ಪಾವತಿಸಿದ ನಂತರವಷ್ಟೇ ಬಿಟ್ಟಿತ್ತು ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರೈಲ್ವೇ ಫಲಕದಲ್ಲಿ ಸಂಸ್ಕೃತ ಭಾಷೆಯಿರುವ ಸಂಬಿತ್ ಪಾತ್ರ ಟ್ವೀಟ್- ವಾಸ್ತವವೇನು?

ರಾಜಸ್ತಾನದ ಕೋಟಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಯುಪಿಗೆ ಕಳಿಸಿಕೊಡಲು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದವು. ಅವರು ಸುರಕ್ಷಿತವಾಗಿ ಮನೆಗೆ ಮರಳಿದ ಒಂದು ತಿಂಗಳ ನಂತರ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಯುಪಿ ಸರ್ಕಾರದ ಚೆಕ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ, ಯುಪಿ ಸರ್ಕಾರವು ಮಧ್ಯರಾತ್ರಿ 19 ಲಕ್ಷ ರೂ.ಗಳ ಇಂಧನ ಬಾಕಿ ಪಾವತಿಸಿದ ನಂತರವೇ ರಾಜಸ್ಥಾನ್ ಸರ್ಕಾರ ಬಸ್ಸುಗಳನ್ನು ರಾಜ್ಯದಿಂದ ಹೊರಹೋಗಲು ಅನುಮತಿ ನೀಡಿದೆ ಎಂದು ಹೇಳಿದ್ದರು.

ಆದರೆ ಇದು ನಿಜವಲ್ಲ ಏಕೆಂದರೆ ಪಾತ್ರ್ರಾ ಅವರು ತೋರಿಸಿದ ಚೆಕ್ 2020 ರ ಮೇ 5 ರ ದಿನಾಂಕದ್ದು. ವಿದ್ಯಾರ್ಥಿಗಳನ್ನು ಕರೆದೊಯ್ಯುವ ಕೊನೆಯ ಬಸ್ ಏಪ್ರಿಲ್ 19 ರಂದು ರಾಜಸ್ಥಾನದಿಂದ ಹೊರಟಿತ್ತು. ಸಾಕಷ್ಟು ಸ್ಪಷ್ಟವಾಗಿ, ಏಪ್ರಿಲ್‌ನಲ್ಲಿ ಪಾವತಿಯ ಕೊರತೆಯಿಂದಾಗಿ ಬಸ್‌ಗಳನ್ನು ನಿಲ್ಲಿಸಲಾಗಲಿಲ್ಲ. ಬಾಕಿಗಳನ್ನು ಎರಡು ವಾರಗಳ ನಂತರ ಮೇನಲ್ಲಿ ವರ್ಗಾಯಿಸಲಾಯಿತು.

ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ಕ್ಲಿಪ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದರು.

ಕೋವಿಡ್ ತೀವ್ರತೆಯ ಆಧಾರದ ಮೇಲೆ ಕೇಂದ್ರ ಸರ್ಕಾರ ಸ್ಥಾಪಿಸಿದ ವಲಯಗಳನ್ನು ಉಲ್ಲೇಖಿಸಿ “ಕೆಂಪು ವಲಯವು ನಿಜವಾಗಿಯೂ ಹಸಿರು ವಲಯ ಮತ್ತು ಹಸಿರು ವಲಯವು ನಿಜವಾಗಿಯೂ ಕೆಂಪು ವಲಯವಾಗಿದೆ” ಎಂದು ರಾಹುಲ್ ಗಾಂಧಿ ಹೇಳುವಂತಹ ವೀಡಿಯೊವನ್ನು ಪಾತ್ರಾ ಟ್ವೀಟ್ ಮಾಡಿ ಗೇಲಿ ಮಾಡಿದ್ದರು.

ಇದನ್ನೂ ಓದಿ: ಟಿವಿ ಡಿಬೇಟ್ ನಂತರ ಹೃದಯಾಘಾತದಿಂದ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಸಾವು: ಅರೆಸ್ಟ್ ಸಂಬಿತ್ ಪಾತ್ರ ಟ್ರೆಂಡಿಂಗ್

ಭಾರತದಲ್ಲಿ ಕೊರೊನಾ ಸಂಭವಿಸಿದ ಬಗ್ಗೆ ರಾಹುಲ್ ಗಾಂಧಿ ಅವರು ನಡೆಸಿದ್ದ ಒಂದು ಗಂಟೆ ಅವಧಿಯ ಪತ್ರಿಕಾಗೋಷ್ಠಿಯಿಂದ 6 ಸೆಕೆಂಡುಗಳನ್ನು ಸಂಬಿತ್ ಪಾತ್ರಾ ಹಂಚಿಕೊಂಡಿದ್ದರು. ಬಲವಾದ ಸ್ಥಳೀಯ ನಾಯಕರ ಅಗತ್ಯತೆ ಮತ್ತು ತಳಮಟ್ಟದಿಂದ ವೈರಸ್ ಅನ್ನು ನಿಭಾಯಿಸುವ ಅಗತ್ಯವನ್ನು ಕಾಂಗ್ರೆಸ್ ನಾಯಕ ಒತ್ತಿ ಹೇಳಿದ್ದರು. “ಈ ವಲಯಗಳನ್ನು – ಕೆಂಪು, ಕಿತ್ತಳೆ ಮತ್ತು ಹಸಿರು – ರಾಷ್ಟ್ರಮಟ್ಟದಲ್ಲಿ ರಚಿಸಲಾಗಿದೆ. ಅವುಗಳನ್ನು ರಾಜ್ಯ ಮಟ್ಟದಲ್ಲಿ ರಚಿಸಬೇಕು. ಮುಖ್ಯಮಂತ್ರಿಗಳು (ಕಾಂಗ್ರೆಸ್ ಆಡಳಿತದ ರಾಜ್ಯಗಳ) ರಾಷ್ಟ್ರಮಟ್ಟದಲ್ಲಿ ಕೆಂಪು ಬಣ್ಣದಲ್ಲಿರುವ ವಲಯವು ವಾಸ್ತವವಾಗಿ ಹಸಿರು ಮತ್ತು ಹಸಿರು ಇರುವ ವಲಯವು ನಿಜವಾಗಿಯೂ ಕೆಂಪು ಎಂದು ನಮಗೆ ಹೇಳುತ್ತಿದ್ದಾರೆ ಎಂದು ಹೇಳಿದ್ದರು.

ರಾಹುಲ್‌ ಗಾಂಧಿಯವರು ಸಿಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಂಬಿಸಲು ರಾಷ್ಟ್ರಮಟ್ಟ ಎಂಬ ಪದಗಳನ್ನು ಭಾಷಣದಿಂದ ಈ ವಿಡಿಯೊವನ್ನು ಕ್ಲಿಪ್ ಮಾಡಲಾಗಿದೆ.

ಜವಾಹರಲಾಲ್ ನೆಹರೂಗೆ ನಕಲಿ ಉಲ್ಲೇಖ

2018 ರಲ್ಲಿ ಚಾನೆಲ್ ಚರ್ಚೆಯೊಂದರಲ್ಲಿ, ಮೊದಲ ಭಾರತೀಯ ಪ್ರಧಾನಿ ಜವಾಹರಲಾಲ್ ನೆಹರು, ನಾನು ಶಿಕ್ಷಣದಿಂದ ಇಂಗ್ಲಿಷ್‌, ಸಂಸ್ಕೃತಿಯಿಂದ ಮುಸ್ಲಿಂ ಮತ್ತು ಕೇವಲ ಜನ್ಮದಿಂದ ಆಕಸ್ಮಿಕವಾಗಿ ಹಿಂದೂ ಎಂದು ಹೇಳಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ.

ಈ ಮಾತುಗಳು ಮೊದಲು ಕಾಣಿಸಿಕೊಂಡಿದ್ದು 1959 ರಲ್ಲಿ ಹಿಂದೂ ಮಹಾಸಭಾ ನಾಯಕ ಮತ್ತು ಜವಾಹರಲಾಲ್ ನೆಹರೂ ಅವರ ತೀವ್ರ ವಿಮರ್ಶಕ ಎನ್.ಬಿ ಖಾರೆ ಬರೆದ ’ದಿ ಆಂಗ್ರಿ ಅರಿಸ್ಟೋಕ್ರಾಟ್’ ಎಂಬ ಲೇಖನದಲ್ಲಿ. ಈ ಲೇಖನವು ಹಲವಾರು ರಾಜಕೀಯ ವ್ಯಕ್ತಿಗಳ ವ್ಯಾಖ್ಯಾನಗಳೊಂದಿಗೆ ’ಎ ಸ್ಟಡಿ ಆಫ್ ನೆಹರೂ’ ಸಂಪುಟದ ಭಾಗವಾಗಿತ್ತು. ನೆಹರೂ ಅವರ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಬೇರೆಲ್ಲೂ ಈ ಉಲ್ಲೇಖವನ್ನು ಹೇಳುವ ಯಾವುದೇ ಸಾಕ್ಷಿಯಿಲ್ಲ.

ಇದನ್ನೂ ಓದಿ: ನನ್ನ ಪತಿ ಸಾವಿಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾರಣ: ರಾಜೀವ್ ತ್ಯಾಗಿ ಪತ್ನಿ ಆರೋಪ

ಕಳೆದ ವರ್ಷ ನ್ಯೂಸ್ 18 ಚರ್ಚೆಯ ಸಂದರ್ಭದಲ್ಲಿ, ಸೋನಿಯಾ ಗಾಂಧಿ ವಿಶ್ವದ 4 ನೇ ಶ್ರೀಮಂತ ಮಹಿಳೆ ಎಂದು ಸಾಂಬಿತ್ ಪಾತ್ರ್ರಾ ಹೇಳಿಕೊಂಡಿದ್ದಾರೆ.

ಆಲ್ಟ್‌ನ್ಯೂಸ್ ಈ ಸಂಗತಿ ’ವರ್ಲ್ಡ್ಸ್ ಲಕ್ಸುರಿ ಗೈಡ್’ ಹೆಸರಿನ ಕಳಪೆ ವೆಬ್‌ಸೈಟ್ ಅನ್ನು ಆಧರಿಸಿದೆ ಎಂದು ಕಂಡುಹಿಡಿದಿತ್ತು. ಅದು ಈಗ ಅಸ್ತಿತ್ವದಲ್ಲಿಲ್ಲ ಎಂಬುದನ್ನು ತೋರಿಸಿತ್ತು.

ಯಾರದೋ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದರೆಂದು ಆರೋಪಿಸುವುದು, ಫೋರ್ಜರಿ ಲೆಟರ್‌ಗಳಿರುವ ಟ್ವೀಟ್‌ಗಳನ್ನು ರಿಟ್ವೀಟ್ ಮಾಡುವುದನ್ನು ಯಾವ ಅಳುಕೂ ಇಲ್ಲದೇ ಮಾಡಬಲ್ಲ ಸಂಬಿತ್ ಪಾತ್ರಾ ಗಂಭೀರ ಟಿವಿ ವೀಕ್ಷರು ಮತ್ತು ನೆಟ್ಟಿಗರ ಪಾಲಿಗೆ ಜೋಕರ್ ತರಹ ಭಾಸವಾಗುತ್ತಾರೆ.

ಆದರೆ ಅದಕ್ಕೂ ಅಪಾಯಕಾರಿ ಸಂಗತಿ ಎಂದರೆ, 4 ಮಿಲಿಯನ್‌ಗೂ ಹೆಚ್ಚಿರುವ ಅವರ ಫಾಲೋವರ್ಸ್ ಈ ಸುಳ್ಳುಗಳನ್ನು ಹರಡುತ್ತ ಹೋಗುತ್ತಾರೆ. ಅವು ನಂತರ ವ್ಯಾಟ್ಸಾಪ್ ಮೂಲಕ ಇನ್ನಷ್ಟು ಪ್ರಸಾರಗೊಳ್ಳುತ್ತವೆ. ಇದನ್ನು ಬಲ್ಲ ಸಂಬಿತ್ ಪಾತ್ರಾ ಸುಳ್ಳು ಎಂದು ಗೊತ್ತಿದ್ದರೂ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಐಟಿ ಸೆಲ್‌ನ ಅಮಿತ್ ಮಾಳವಿಯ ಮತ್ತು ಪಾತ್ರಾ ಪರಸ್ಪರ ಸಹಕಾರದಲ್ಲಿ ಇಂಥದೊಂದು ಅಪಾಯಕಾರಿ ಆಟ ಆಡುತ್ತಿದ್ದಾರೆ.

ಬಿಜೆಪಿ ಅವರನ್ನು ಈ ಕೆಲಸಕ್ಕೇ ನೇಮಿಸಿದೆಯಲ್ಲವೆ?

ಇದನ್ನೂ ಓದಿ: ‘ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣ: ಬಿಜೆಪಿಯ ರಮಣಸಿಂಗ್, ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...