Homeಮುಖಪುಟಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು' ಎಂದರೇನು?

ಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು’ ಎಂದರೇನು?

50ರ, 60ರ ಅಥವಾ 70ರ ದಶಕದಲ್ಲಿ ಒಂದು ಸಂದೇಶವನ್ನಿಟ್ಟುಕೊಂಡ ಚಿತ್ರಗಳನ್ನು ಇಂದು ವಾಟ್ಸ್ಯಾಪ್, ಇನ್‍ಸ್ಟಾಗ್ರಾಮ್‍ಗಳ ಯುಗದಲ್ಲಿ ಅನುಕರಿಸಲಾಗುವುದಿಲ್ಲ.

- Advertisement -
- Advertisement -

‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು ಸರ್’

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ನಂತರ ಅನೇಕ ಸಲ ಕೇಳಿದ್ದು. ಅಲ್ಲೀತನಕ ಇಂಥ ಮಾತನ್ನು ನಾನು ಕೇಳಿಯೇ ಇರಲಿಲ್ಲ.

‘ಸಮಾಜವನ್ನು ಬದಲಿಸಲಿಚ್ಛಿಸುವವರು ರಾಜಕೀಯಕ್ಕೆ ಹೋಗಲಿ, ಸಮಾಜ ಸೇವೆ ಮಾಡಲಿ, ಅವರಿಗೆ ಇಲ್ಲೇನೂ ಕೆಲಸವಿಲ್ಲ’ ಎನ್ನುವ ಅರ್ಥದಲ್ಲಿ ಡೇವಿಡ್ ಮ್ಯಾಮೆಟ್ ತಮ್ಮ ಸಿನೆಮಾ ನಿರ್ದೇಶನದ ಪುಸ್ತಕದಲ್ಲಿ ಬರೆದಿದ್ದರು. ಅಮೇರಿಕದ ಇತಿಹಾಸವನ್ನು ಹಾಲಿವುಡ್ ಪೂರ್ವ ಮತ್ತು ಹಾಲಿವುಡ್ ನಂತರ ಎಂದು ವಿಂಗಡಿಸಬಹುದು, ಅಷ್ಟು ಪರಿಣಾಮ ಬೀರಿದೆ ಹಾಲಿವುಡ್ ಸಮಾಜದ ಮೇಲೆ ಎಂದು ಕೆಲವರು ಡೇವಿಡ್ ಮ್ಯಾಮೆಟ್ ಅವರ ಈ ಮೇಲಿನ ವಾದವನ್ನು ತಿರಸ್ಕರಿಸುತ್ತಾರೆ.

ಕನ್ನಡದ ಮೇರುನಟ ಡಾ. ರಾಜ್‍ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರವನ್ನು ನೋಡಿ ಅನೇಕರು ತಮ್ಮ ಕೆಲಸ ಬಿಟ್ಟು ಹಳ್ಳಿಗೆ ಹೋದರಂತೆ. ಏನಿದು ಮೆಸೇಜ್? ಸಿನೆಮಾ ಒಂದು ಸಂದೇಶವನ್ನು ಕೊಡಬಲ್ಲದೇ? ಮನರಂಜನೆಯೇ ಅದರ ಪ್ರಮುಖ ಕರ್ತವ್ಯವಲ್ಲವೇ? ಸಮಾಜಕ್ಕೆ ಮೆಸೇಜ್ ಕೊಡಲು ನಾವ್ಯಾರು? ಏನಕ್ಕೆ ಕೊಡಬೇಕು ಮೆಸೇಜ್?

ರಾಜ್‍ಕುಮಾರ್ ಹಿರಾನಿ, ತಮ್ಮ ಚಿತ್ರದ ಥೀಮ್‍ಗಳ ಬಗ್ಗೆ ತುಂಬಾ ಗಮನ ಕೊಡುತ್ತಾರೆ. ಅವರ ಮೊದಲ ಚಿತ್ರ ಮುನ್ನಾಭಾಯಿ ಎಮ್.ಬಿ.ಬಿ.ಎಸ್ ಮಾಡುವ ಮುನ್ನ ಅವರ ಮನಸ್ಸಿನಲ್ಲಿದ್ದದ್ದು ಒಂದೇ ವಿಷಯ; ವೈದ್ಯಕೀಯ ಕ್ಷೇತ್ರದ ಬಗ್ಗೆ ಒಂದು ಸಿನೆಮಾ ಮಾಡಬೇಕು ಎನ್ನುವುದು. ಈ ಕಾಲದ ವೈದ್ಯಕೀಯ ಕ್ಷೇತ್ರದ ಬಗ್ಗೆ ಅವರಿಗೆ ತುಂಬಾ ಸಿಟ್ಟೂ ಇತ್ತು. ಹಲವಾರು ವರ್ಷಗಳ ಕಾಲ ಚಿತ್ರಕತೆಯ ಮೇಲೆ ಕೆಲಸ ಮಾಡಿದಾಗ ಮೂಡಿಬಂದಿದ್ದು ಮುನ್ನಾಭಾಯಿ ಎಮ್.ಬಿ.ಬಿ.ಎಸ್. ಧರ್ಮದ ಬಗ್ಗೆ ಸಿನೆಮಾ ಮಾಡಲು ಹೊರಟಾಗ ಮೂಡಿಬಂದಿದ್ದು ಪೀಕೆ. ಹಿರಾನಿಯವರ ಲಗೇ ರಹೋ ಮುನ್ನಾಭಾಯಿ ಸಿನೆಮಾ ನೋಡಿದ ನಂತರ ಅನೇಕರು ಗಾಂಧಿಗಿರಿ ಮಾಡಲು ಶುರು ಮಾಡಿದರು.

Photo Courtesy: The Indian express

2016 ರಲ್ಲಿ ಅತ್ಯುತ್ತಮ ಚಿತ್ರವೆಂದು ಆಸ್ಕರ್ ಪ್ರಶಸ್ತಿ ಪಡೆದ ಸಿನೆಮಾ ‘ಸ್ಪಾಟ್‍ಲೈಟ್’. ಅಮೇರಿಕದ ಬೋಸ್ಟನ್ ಪ್ರದೇಶದಲ್ಲಿ ಹಲವಾರು ರೋಮನ್ ಕ್ಯಾಥಲಿಕ್ ಪಾದ್ರಿಗಳಿಂದ ಆಗಿತ್ತು ಎನ್ನಲಾದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಈ ಘಟನೆಗಳನ್ನು ಬಯಲಿಗೆಳೆದ ತನಿಖಾ ಪತ್ರಿಕೋದ್ಯಮದ ಕಥೆಯನ್ನು ಸ್ಪಾಟ್‍ಲೈಟ್ ಚಿತ್ರ ಹೇಳಿತು. ಈ ಚಿತ್ರದಿಂದ ಕ್ಯಾಥೋಲಿಕ್ ಚರ್ಚ್ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.  ಆದರೆ ಸ್ಪಾಟ್‍ಲೈಟ್ ಚಿತ್ರ ಮಕ್ಕಳ ಮೇಲೆ ದೌರ್ಜನ್ಯ ಮಾಡಬಾರದು ಎನ್ನುವ ಸಂದೇಶ ನೀಡಲು ಈ ಚಿತ್ರವನ್ನು ಮಾಡಿದರೇ? ಅಥವಾ ಪತ್ರಕರ್ತರಿಗೆ ಸಂದೇಶ ನೀಡಲು ಈ ಚಿತ್ರವನ್ನು ಮಾಡಿದರೇ? ಉತ್ತರ ನಾವೆಂದುಕೊಂಡ ಹಾಗೆ. ಆದರೆ ಒಂದು ಮಾತ್ರ ಸತ್ಯ. ಈ ಕಥನಕಾರರು ಮಾಡಲು ಪ್ರಯತ್ನಿಸಿದ್ದು ಆಯಾ ಸಮಸ್ಯೆಯ ಆಳವನ್ನು ಜಾಲಾಡುವುದು. ಹೀಗೇಕೆ ಆಯಿತು ಎನ್ನುವುದಕ್ಕೆ ಉತ್ತರಗಳನ್ನು ಹುಡುಕುವುದು, ಲೈಂಗಿಕ ಕಿರುಕುಳ ಮಾಡಿದ ಪಾದ್ರಿಗಳು ಮಾತ್ರ ತಪ್ಪಿತಸ್ಥರಾ ಅಥವಾ ಇತರರೂ ಇದಕ್ಕೆ ಕಾರಣೀಭೂತರಾ ಎನ್ನುವುದಕ್ಕೆ ಉತ್ತರ ಹುಡುಕುವುದು ಇವರ ಉದ್ದೇಶವಾಗಿತ್ತು. ಕೊನೆಯ ಪ್ರಶ್ನೆಗೆ ಎಷ್ಟು ಆಳವಾಗಿ ಉತ್ತರ ಹುಡುಕುತ್ತಾರೆಂದರೆ, ತಾವೂ, ಈ ಹಗರಣವನ್ನು ಅಂದು ಬಯಲಿಗೆಳಯಲು ಪ್ರಯತ್ನಿಸುತ್ತಿದ್ದ ಪತ್ರಕರ್ತರೂ ಇದಕ್ಕೆ ಒಂದು ರೀತಿಯಲ್ಲಿ ಕಾರಣವಾಗಿದ್ದರು ಎನ್ನುವ ಉತ್ತರವೂ ಸಿಗುತ್ತದೆ.

ಸಮಾಜವನ್ನು ಪ್ರಭಾವಿಸಿದ ಇನ್ನೂ ಕೆಲವು ಚಿತ್ರಗಳ ಬಗ್ಗೆ ನೋಡುವ.

  • ವಾಟರ್‌ಗೇಟ್ ಹಗರಣವನ್ನು ಬಯಲಿಗೆಳೆದ ಘಟನೆಯ ಬಗ್ಗೆ ಆಲ್ ದಿ ಪ್ರೆಸಿಡೆಂಟ್’ಸ್ ಮೆನ್ ಎನ್ನುವ ಚಿತ್ರ ಬಂದ ಮೇಲೆ ಅನೇಕ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡರಂತೆ.
  • ಜಾಸ್ (Jaws) ಎನ್ನುವ ಚಿತ್ರ (ಸಮುದ್ರ ತೀರದಲ್ಲಿ ತಿಮಿಂಗಿಲಗಳ ದಾಳಿಯ ಬಗ್ಗೆಯ ಚಿತ್ರ) ಬಂದ ಮೇಲೆ ಸಮುದ್ರತೀರಕ್ಕೆ ಹೋಗುವ ಪ್ರವಾಸಿಗಳ ಸಂಖ್ಯೆಯಲ್ಲಿ ಇಳಿಮುಖವಾಯಿತಂತೆ.
  • ದಿ ಫೈಟ್ ಕ್ಲಬ್ ಚಿತ್ರ ಬಂದ ನಂತರ ಅಮೇರಿಕದಲ್ಲಿ (ಇತರೆಡೆಯಲ್ಲೂ) ನಿಜವಾದ ಫೈಟ್ ಕ್ಲಬ್‍ಗಳು ಶುರುವಾದವಂತೆ.
  • 2004ರ ದಿ ಡೇ ಆಫ್ಟರ್ ಟುಮಾರೋ ಚಿತ್ರ ಬಂದ ನಂತರ ಜನರಲ್ಲಿ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಹೆಚ್ಚಿನ ಜಾಗರೂಕತೆ ಮೂಡಿಸಿತಂತೆ.

ಹೀಗೆ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಈ ಎಲ್ಲಾ ಚಿತ್ರಗಳ ಕರ್ತೃರು ಆಯಾ ಸಮಸ್ಯೆಯನ್ನು ಆಳವಾಗಿ ಅರ್ಥೈಸಿಕೊಳ್ಳಲು ಮತ್ತು ಆಯಾ ವಿಷಯಗಳ ಬಗ್ಗೆ ಹುಡುಕಾಟ ಮಾಡಲು ಪ್ರಯತ್ನಿಸುತ್ತಾರೆ. ಅಲೆಕ್ಸಾಂಡರ್ ಪೇನ್‍ನಂತಹ ನಿರ್ದೇಶಕರು ಮನುಷ್ಯನ ಸೋಲು, ಸಾರ್ಥಕತೆಯನ್ನು ಅರ್ಥೈಸಿಕೊಳ್ಳುವ ಹುಡುಕಾಟ ಮಾಡಿದರೆ, ಇನ್ನೂ ಕೆಲವರು ಸಮಾಜಕ್ಕೆ ಕಾಡುವ ಸಮಸ್ಯೆಗಳನ್ನು ತಮ್ಮ ಚಿತ್ರಗಳ ಮೂಲಕ ಕೂಲಂಕಷವಾಗಿ ಪರಿಶೀಲಿಸುವ ಪ್ರಯತ್ನ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರೆಲ್ಲರಿಗೂ ಒಂದು ಕಥೆಯನ್ನು ಹೇಳುವುದು ಮೂಲ ಉದ್ದೇಶವಾಗಿರುತ್ತದೆ.

ಇನ್ನು ಅನೇಕ ಚಿತ್ರಗಳನ್ನು ನೋಡಿದ ನಂತರ, ಹಲವರಿಗೆ ತಮ್ಮ ವ್ಯಕ್ತಿತ್ವಗಳನ್ನು ಪರದೆಯ ಮೇಲೆ ನೋಡಿದಾಗ, ತಮ್ಮ ವ್ಯಕ್ತಿತ್ವ ದೋಷಗಳ ಬಗ್ಗೆ ಸಹಾನುಭೂತಿ ಹೊಂದಿರುವ ಕಥೆಗಳನ್ನು ನೋಡಿದಾ, ಆ ಕಥೆಗಳನ್ನು ಇತರರೂ ನೋಡುತ್ತಾರೆ ಎನ್ನುವ ಭಾವನೆಯಿಂದ ಆ ವ್ಯಕ್ತಿಗಳ ಮೇಲೆ ಎಂತಹ ಗಂಭೀರವಾದ ಸಕಾರಾತ್ಮಕ ಪರಿಣಾಮಗಳಾಗಬಹುದು ಎನ್ನುವುದನ್ನೂ ಪರಿಗಣಿಸಬೇಕು. ನನಗೆ ವೈಯಕ್ತಿಕವಾಗಿ ಇದು ಯಾವುದೇ ಕಥನಕಲೆಯ ಬಹುಮುಖ್ಯ ಉದ್ದೇಶ ಅನಿಸುತ್ತದೆ.

ಸಿನೆಮಾಗಳಿಂದ ಸಮಾಜದಲ್ಲಿ ಬದಲಾಗಿದ್ದು ಏನು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದರೆ, ಪ್ರಮುಖವಾಗಿ ಸಮಾಜದ ಟ್ರೆಂಡ್‍ಗಳಲ್ಲಿ ಬದಲಾವಣೆ ಆಗಿದ್ದು ಕಾಣಿಸುತ್ತದೆ. ಹಲವಾರು ಸಿನೆಮಾಗಳು ಹಿಟ್ ಆದ ನಂತರ ನಮ್ಮ ಜನರ ಉಡುಪುಗಳಲ್ಲಿ ಬದಲಾವಣೆ ಬಂದಿತ್ತು; ಸೀರೆಯ ಪ್ಯಾಟರ್ನ್‍ಗಳು, ಮೇಕ್‍ಅಪ್ ಮಾಡಿಕೊಳ್ಳುವುದು, ಗಂಡಸರ ಪ್ಯಾಂಟು ಶರ್ಟುಗಳ ವಿನ್ಯಾಸದಲ್ಲಿ ಬದಲಾವಣೆಗಳು (ಹಿಪ್ಪಿ-ಕಟ್ ನೆನಪಿಸಿಕೊಳ್ಳಿ) ಕಂಡುಬಂದಿದ್ದಂತೂ ನಾವು ನೋಡಿದ್ದೇವೆ.

ಇದರೊಂದಿಗೆ ಇನ್ನೆರಡು ಅಂಶಗಳಿವೆ, ಮೊದಲನೆಯದು ನಮ್ಮ ಸಮಾಜದ ಮೇಲೆ ಪರಿಣಾಮ ಬೀರಿದ ಚಿತ್ರಗಳ ಬಂದ ಕಾಲಘಟ್ಟ. ಸುಮಾರು ಒಂದು ಶತಕದ ಹಿಂದೆ ಹುಟ್ಟಿಕೊಂಡ ಸಿನೆಮಾ ಕಲೆ, ಎಲ್ಲಕ್ಕಿಂತ ಪ್ರಭಾವಶಾಲಿಯಾದ ಮನರಂಜನೆಯ ಮಾಧ್ಯಮವಾಗಿದೆ. ನಮ್ಮ ದೇಶದಲ್ಲಿ ಸಾಕ್ಷರತೆಯ ದರ 50ರ ದಶಕದಲ್ಲಿ ಶೇ.20ಕ್ಕಿಂತಲೂ ಕಡಿಮೆಯಿತ್ತು ಎಂದರೆ ಆ ಕಾಲಘಟ್ಟ ಹೇಗಿತ್ತು ಎನ್ನುವುದನ್ನು ಊಹಿಸಲೂ ಅಸಾಧ್ಯ. ಅದರೊಂದಿಗೆ ಮನರಂಜನೆಯ ಮಾಧ್ಯಮಗಳೂ ವಿರಳವಾಗಿದ್ದವು. ಹಾಗಾಗಿ 50ರ, 60ರ ಅಥವಾ 70ರ ದಶಕದಲ್ಲಿ ಒಂದು ಸಂದೇಶವನ್ನಿಟ್ಟುಕೊಂಡ ಚಿತ್ರಗಳನ್ನು ಇಂದು ವಾಟ್ಸ್ಯಾಪ್, ಇನ್‍ಸ್ಟಾಗ್ರಾಮ್‍ಗಳ ಯುಗದಲ್ಲಿ ಅನುಕರಿಸಲಾಗುವುದಿಲ್ಲ.

ಆದರೂ ನಾವು ಮಾಡುವ ಚಿತ್ರಗಳು ಪರಿಣಾಮ ಬೀರಬಹುದು ಎನ್ನುವ ಆಶಾಭಾವನೆಯನ್ನು ಖಂಡಿತ ಹೊಂದಬಹುದು; ಅದಕ್ಕೆ ಅನುಕರಿಸಬೇಕಾದದ್ದು ಆ ಕರ್ತೃರ ಪರಿಶ್ರಮ, ಆಯಾ ಸಮಸ್ಯೆಗಳ ಆಳವಾದ ಅಧ್ಯಯನ ಅದರೊಂದಿಗೆ ಚಿತ್ರಕಥೆ ಮತ್ತು ಸಿನೆಮಾ ಮಾಡುವ ಕಲೆಯನ್ನು ಆಳವಾಗಿ ಅಭ್ಯಸಿಸಿ ಕರಗತ ಮಾಡಿಕೊಳ್ಳುವುದು. ನೀವು ನೀಡಬೇಕೆನ್ನುವ ಸಂದೇಶದ ಹಿಂದಿನ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿದ ತರುವಾಯ ಆ ಸಂದೇಶವೇ ಬದಲಾಗಬಹುದು. ಅಧ್ಯಯನದ ಆಳವೇ ಒಂದು ಸಂದೇಶವಾಗಬಹುದು. ಇಲ್ಲವಾದರೆ, ಹೋಗುವ ಸಂದೇಶ ಒಂದೇ- ‘ನನಗೆ ಸಿನೆಮಾ ಮಾಡಲು ಬರುವುದಿಲ್ಲ ಆದರೂ ಹೇಗೋ ಮಾಡಿದ್ದೀನಿ, ಈಗ ಅನುಭವಿಸಿ’.

  • ರಾಜಶೇಖರ್ ಅಕ್ಕಿ (ರಂಗನಿರ್ದೇಶಕರು ಹಾಗೂ ಸಾಮಾಜಿಕ ಕಾರ್ಯಕರ್ತರು)

ಇದನ್ನೂ ಓದಿ: ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...