Homeಮುಖಪುಟತೆಂಗು-ಅಡಿಕೆ ತೋಟ ಕಳೆದುಕೊಂಡ ಸಿದ್ದಮ್ಮನಿಗೆ ಮೊದಲು ಪರಿಹಾರ ಕೊಡಿ, ನಂತರ ತನಿಖೆ ಮಾಡಿ

ತೆಂಗು-ಅಡಿಕೆ ತೋಟ ಕಳೆದುಕೊಂಡ ಸಿದ್ದಮ್ಮನಿಗೆ ಮೊದಲು ಪರಿಹಾರ ಕೊಡಿ, ನಂತರ ತನಿಖೆ ಮಾಡಿ

ಹೋದಲ್ಲಿ ಬಂದಲ್ಲಿ ರೈತರ ನೆರವಿಗೆ ಸದಾಸಿದ್ದ ಎಂದು ಹೇಳುವ ಯಡಿಯೂರಪ್ಪ ಗುಬ್ಬಿಯ ತಿಪ್ಪೂರು ಘಟನೆಯ ಬಗ್ಗೆ ಒಂದು ಚಕಾರವೂ ಇಲ್ಲ. ಭರವಸೆಗಳು ಬರೀ ಭಾಷಣಕ್ಕೆ ಸೀಮಿತವಾಗಬಾರದು.

- Advertisement -
- Advertisement -

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಸಿದ್ದಮ್ಮ ಎಂಬುವವರಿಗೆ ಸೇರಿದ ನೂರಾರು ತೆಂಗು, ಅಡಿಕೆ ಗಿಡಗಳನ್ನು ಕತ್ತರಿಸಿದ ಅಧಿಕಾರಿಗಳ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜೊತೆಗೆ ಮೊದಲು ತೋಟ ಕಳೆದುಕೊಂಡಿರುವ ಸಿದ್ದಮ್ಮ ಅವರಿಗೆ ಪರಿಹಾರ ಕೊಡಿ, ಅನಂತರ ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗಿ ಎಂಬ ಕೂಗು ಜಿಲ್ಲೆಯಾದ್ಯಂತ ಜೋರಾಗಿ ಕೇಳಿಬಂದಿದೆ.

ಪರಿಹಾರವನ್ನು ತಪ್ಪಿತಸ್ಥ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು. ಏಕೆಂದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ತೆಂಗು ಮತ್ತು ಅಡಿಕೆ ಗಿಡ ಗಳನ್ನು ಕಡಿಸಿ ಹಾಕಿಸಿರುವುದು ಅಕ್ಷಮ್ಯ ಅಪರಾಧ. ರೈತರು ಗಿಡಗಳನ್ನು ಕಡಿಯುವಾಗ ನಿಯಮಗಳು ಅಡ್ಡ ಬರುತ್ತವೆ. ಅಧಿಕಾರಿಗಳು ಆ ಕೆಲಸ ಮಾಡಿದಾಗ ನಿಯಮಗಳು ಅಡ್ಡಬರಲಿಲ್ಲವೇ ಎಂಬ ಪ್ರಶ್ನೆ ಜನರಿಂದ ವ್ಯಕ್ತವಾಗಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್‌: ಗುಬ್ಬಿಯಲ್ಲೊಂದು ಮನಕಲಕುವ ಕರಾಳ ಘಟನೆ.. ವಿಡಿಯೋ ನೋಡಿ.

Posted by Naanu Gauri on Sunday, March 8, 2020

ಕಾನೂನು ಎಲ್ಲರಿಗೂ ಒಂದೇ ಇರಬೇಕು. ಶ್ರೀಮಂತರಿಗೊಂದು, ಬಡವರಿಗೊಂದು ನ್ಯಾಯ ಇರಬಾರದು. ರೈತರು ಮರಗಳನ್ನು ಕಡಿದರೆ ಅಧಿಕಾರಿಗಳು ಇನ್ನಿಲ್ಲದ ಕಿರುಕುಳ ನೀಡುತ್ತಾರೆ. ಆಗ ಯಾವುದ್ಯಾವುದೋ ನಿಯಮಗಳು ನುಸುಳುತ್ತವೆ. ಅದೇ ಅಧಿಕಾರಿಗಳು ಮುಂದೆ ನಿಂತು ಗಿಡಗಳನ್ನು ಕಡಿಯುವಾಗ ತೋಟಗಾರಿಕೆ ಇಲಾಖೆಯ ನಿಯಮಗಳು ಅಡ್ಡಿಬರಲಿಲ್ಲವೇ? ಈಗ ಕಡಿದು ಹಾಕಿರುವ ಮರಗಳು ಮಧ್ಯವಯಸ್ಕ ಮರಗಳು. ತೋಟಗಾರಿಕೆ ಇಲಾಖೆ ಪಂಚನಾಮೆ ಮಾಡಬೇಕು. ಯಾವ ಪ್ರಭಾವಿಯ ಒತ್ತಡಕ್ಕೂ ಒಳಗಾಗಬಾರದು. 150 ಅಡಿಕೆ ಗಿಡಗಳು ಮತ್ತು 50 ತೆಂಗಿನ ಮರಗಳಿಗೆ ಭೂಪರಿಹಾರ ಕಾಯ್ದೆ ರೀತಿ ಲೆಕ್ಕಾಚಾರ ಹಾಕಿ ನಷ್ಟಪರಿಹಾರದ ಹಲವುಪಟ್ಟು ಪರಿಹಾರ ನೀಡಬೇಕು. ಈ ಪರಿಹಾರವನ್ನು ತಪ್ಪಿತಸ್ಥ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್.

ಸಿದ್ದಮ್ಮ ಅಡಿಕೆ ಮತ್ತು ತೆಂಗಿನ ಗಿಡಗಳನ್ನು ಮಕ್ಕಳು ಬೆಳೆಸಿದಂತೆ ಬೆಳೆಸಿದ್ದರು. ಭೋಗವಾಗಿ ಬೆಳೆದಿದ್ದವು. ಜೀವತೇದು ಬೆಳೆಸಿದ ಮರಗಳನ್ನು ಕತ್ತರಿಸಿ ಹಾಕಿದರೆ ಎಂಥವರಿಗೂ ಹೊಟ್ಟೆ ಉರಿದುಹೋಗುತ್ತದೆ. ಅವು ಸಿದ್ದಮ್ಮನ ಜೀವನಾಧಾರವಾಗಿದ್ದವು. 50 ತೆಂಗಿನ ಮರಗಳು 150 ವರ್ಷ ಫಲ ಕೊಡುತ್ತವೆ. ವರ್ಷಕ್ಕೆ ಒಂದು ಮರ 250 ಕಾಯಿ ಕೊಡುತ್ತದೆಂದು ಲೆಕ್ಕಹಾಕಿದರೂ 50 ಮರಕ್ಕೆ 12,500 ಕಾಯಿ ಆಗುತ್ತದೆ. ಕಾಯಿಗೆ 20 ರೂನಂತೆ ಲೆಕ್ಕಹಾಕಿದರೂ ವರ್ಷಕ್ಕೆ 2 ಲಕ್ಷ 50 ಸಾವಿರ ಆದಾಯ ಬರುತ್ತದೆ. ಹಾಗಾಗಿ ಮುಂದಿನ 50 ವರ್ಷಗಳಿಗೆ ಅಡಿಕೆ ಮತ್ತು ತೆಂಗಿನ ಜೀವಿತಾವಧಿ ಎಂದು ಭಾವಿಸಿದರೂ 12 ಕೋಟಿ ಪರಿಹಾರ ನೀಡಬೇಕು. ಅವುಗಳನ್ನು ಶ್ರಮಪಟ್ಟು ಬೆಳೆಸಿಲ್ಲವೇ? ಹಾರೈಕೆ ಮಾಡಿಲ್ಲವೇ? ಎಂದು ರೈತರು ಪ್ರಶ್ನಿಸುತ್ತಾರೆ.

ಮರಗಳನ್ನು ಕಡಿದು ಹಾಕಿದ ಮೇಲೆ ಸಿದ್ದಮ್ಮರನ್ನು ಅಧಿಕಾರಿಗಳು ದಾಖಲೆ ಕೇಳಲು ಶುರುಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಹಶೀಲ್ದಾರ್ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಿದ್ದಾರೆ. ಆದರೆ ಏಕೆ ಹೀಗಾಯ್ತು ಎಂಬುದನ್ನು ಸ್ಥಳೀಯ ಶಾಸಕರಾಗಲೀ, ಸಂಸದರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಸ್ಪಷ್ಟೀಕರಣ ಕೇಳುತ್ತಿಲ್ಲ. ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗರು ಹಾಗೂ ತಹಶೀಲ್ದಾರ್ ಬೇಜವಾಬ್ದಾರಿತನ ಈ ಪ್ರಕರಣದಲ್ಲಿ ಎದ್ದುಕಾಣುತ್ತಿದೆ. ಮರ ಕಡಿಯುವ ಸಂದರ್ಭದಲ್ಲಿ ದಾಖಲೆಗಳನ್ನು ಕೇಳಬಹುದಿತ್ತು. ಅದನ್ನು ಅಧಿಕಾರಿಗಳು ಮಾಡಿಲ್ಲ. ಮೊದಲೇ ದಾಖಲೆ ಪರಿಶೀಲಿಸಿದ್ದರೆ ಮರಗಳನ್ನು ಉಳಿಸಲು ಸಾಧ್ಯವಿತ್ತು. ಆದರೆ ಸಮಾಧಾನದಿಂದ ಪರಿಶೀಲಿಸುವ ಗೋಜಿಗೂ ಹೋಗಿಲ್ಲ ಅಂದರೆ ಅಧಿಕಾರಿಗಳ ತಪ್ಪು ಎದ್ದುಕಾಣುತ್ತಿದೆ. ಈ ತಪ್ಪಿಗೆ ಶಿಕ್ಷೆಯಾಗುವ ಮೊದಲು ಅವರಿಂದಲೇ ಪರಿಹಾರ ಕೊಡಿಸಬೇಕು. ಆಗ ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಎಂಬುದು ಬಯಲಿಗೆ ಬರುತ್ತದೆ.


ಇದನ್ನೂ ಓದಿ: ನನ್ನ ತೆಂಗು, ಅಡಿಕೆ ಮರಗಳನ್ನು ವಾಪಸ್‌ ಕೊಡಿ : ಧರಣಿ ಕೂತ ಮಹಿಳೆ, ಗ್ರಾಮಸ್ಥರ ಬೆಂಬಲ


ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿನ್ನೆ ಟ್ವೀಟ್ ಮಾಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಅವರದೇ ಪಕ್ಷದ ಮಾಜಿ ಸಚಿವರು ಹಾಲಿ ಶಾಸಕ ಶ್ರೀನಿವಾಸ್ ಆ ಕ್ಷೇತ್ರದವರೇ ಆಗಿದ್ದಾರೆ. ಹಾಗಾಗಿ ಇದು ಕೇವಲ ಕಣ್ಣೊರೆಸುವ ತಂತ್ರವಾಗಬಾರದು. ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಬಿಜೆಪಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೋದಲ್ಲಿ ಬಂದಲ್ಲಿ ರೈತರ ನೆರವಿಗೆ ಸದಾಸಿದ್ದ ಎಂದು ಹೇಳುತ್ತಿದ್ದಾರೆ. ಆದರೆ ಗುಬ್ಬಿಯ ತಿಪ್ಪೂರು ಘಟನೆಯ ಬಗ್ಗೆ ಒಂದು ಚಕಾರವೂ ಇಲ್ಲ. ಭರವಸೆಗಳು ಬರೀ ಭಾಷಣಕ್ಕೆ ಸೀಮಿತವಾಗಬಾರದು. ಅದು ಅನುಷ್ಠಾನಕ್ಕೆ ಬರಬೇಕು ಅಷ್ಟೇ ಅನ್ನುತ್ತಾರೆ ರೈತರು.

ತೋಟ ಕಳೆದುಕೊಂಡಿರುವ ಸಿದ್ದಮ್ಮ ನಡೆಸುತ್ತಿರುವ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಯುವ ಕಾಂಗ್ರೆಸ್ ಮುಖಂಡ ಆರ್ ರಾಜೇಂದ್ರ ಭೇಟಿ ನೀಡಿ ಇನ್ನು ಮೂರು ದಿನಗಳಲ್ಲಿ ಸೂಕ್ತ ಪರಿಹಾರ ನೀಡದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿ ಬಂದಿದ್ದಾರೆ. ಇಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಂತ್ರಸ್ಥೆಯ ನೆರವಿಗೆ ಧಾವಿಸಬೇಕು. ಮೊದಲು ಪರಿಹಾರ ಸಿಗಬೇಕು. ಆನಂತರ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಘಟನೆಯ ಹಿಂದೆ ಎಂಥಾ ಪ್ರಭಾವಿಯೇ ಇದ್ದ ಶಿಕ್ಷೆಗೆ ಗುರಿಪಡಿಸಬೇಕು. ಸಿದ್ದಮ್ಮ ಅವರಿಗೆ ಸೂಕ್ತ ನ್ಯಾಯ ದೊರೆಯಬೇಕು ಕೇವಲ ಅಧಿಕಾರಿಗಳನ್ನು ವರ್ಗ ಮಾಡುವುದರಿಂದ ನ್ಯಾಯ ದೊರೆಯುವುದಿಲ್ಲ ಎಂಬ ಸತ್ಯ ಹಲವು ಪ್ರಕರಣ ಗಳಲ್ಲಿ ಸ್ಪಷ್ಟವಾಗಿದೆ. ಈಗ ಸಂಸದ ಬಸವರಾಜು, ಸ್ಥಳೀಯ ಶಾಸಕ ಎಸ್.ಆರ್. ಶ್ರೀನಿವಾಸ್ ಪರಿಹಾರ ಕೊಡಿಸಲು ಮುಂದಾಗಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...