Homeಅಂಕಣಗಳುಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

ಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

- Advertisement -
- Advertisement -

ಮತ್ತೆ ಕೊರೊನಾ ಬೆದರುಬೊಂಬೆಯನ್ನು ತೋರಹೊರಟಿರುವ ಬಿಜೆಪಿ ನಡವಳಿಕೆಯನ್ನ ನೋಡಿದ ಕರ್ನಾಟಕದ ಜನ ಕೊರೊನಾಕ್ಕೂ ಬಿಜೆಪಿಗೂ ಶಾನೆ ಹೋಲಿಕೆ ಇದೆ ಎನ್ನತೊಡಗಿದ್ದಾರಲ್ಲಾ. ಕೊರೊನಾ ಅಲೆಗಳಂತೆಯೇ ಬಿಜೆಪಿ ಪಾರ್ಟಿಯ ಕಾರ್ಯಕ್ರಮಗಳು ಅಲೆಅಲೆಯಾಗಿ ಬಂದು ಮುಸ್ಲಿಮರ ಮೇಲೆ ಅಪ್ಪಳಿಸಿದವು. ಅದರ ಪರಿಣಾಮ ಮುಸ್ಲಿಮರು ಮತ್ತು ಹಿಂದೂಗಳೂ ತತ್ತರಿಸಿಹೋದರು. ಮುಸ್ಲಿಮರನ್ನು ಗುರಿಯಾಗಿಸಿ ಬಿಟ್ಟ ಬಾಣಗಳು ಹಿಂದೂಗಳಿಗೂ ತಾಗಿ, ರಂಜಾನ್ ಟೈಮಿನಲ್ಲಿ ಮುಸ್ಲಿಮರು ಕೂಡ ಹಿಂದೂ ಬಡವರಿಗೆ ಸಹಾಯ ಮಾಡುತ್ತ ಇಫ್ತಾರ್ ಕೂಟಗಳಿಗೆ ಹಿಂದೂಗಳನ್ನು ಕರೆಯುತ್ತ ಸಾಮರಸ್ಯಕ್ಕೆ ಕರೆಕೊಟ್ಟಿದ್ದನ್ನ ನೋಡಿದ ಬಿಜೆಪಿಗಳು ಬೇರೆ ತಂತ್ರ ಆಲೋಚಿಸುತ್ತಿರುವಾಗ ಕೊರೊನಾವೂ ಕೂಡ ಛದ್ಮವೇಶದಲ್ಲಿ ರೆಡಿಯಾಗುತ್ತಿದೆಯಂತಲ್ಲಾ. ಸಾಂಕ್ರಾಮಿಕ ಕಾಯಿಲೆಯೊಂದು ರಾಜಕೀಯ ಪಾರ್ಟಿಯ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದು ಚರಿತ್ರೆಯಲ್ಲೇ ಇಲ್ಲವಂತಲ್ಲಾ. ಆದರೆ ಕರ್ನಾಟಕದ ಮಟ್ಟಿಗೆ ಆಡಳಿತವನ್ನೆ ನಡೆಸದೆ ದಿಕ್ಕು ದೆಸೆಯಿಲ್ಲದೆ ಮುನ್ನಡೆಯುತ್ತಿರುವ ಪಾರ್ಟಿಯ ಆಸರೆಗೆ ಕೊರೊನಾ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆಯಲ್ಲಾ, ಥೂತ್ತೇರಿ.

******

ಮುಸ್ಲಿಂ ಧರ್ಮದ ಮೇಲೆ ಎಲ್ಲಾ ಬಗೆಯ ಹಗೆಯ ಪ್ರಯೋಗ ನಡೆದ ಮೇಲೆ ಈಗ ಮಸೀದಿಗಳಲ್ಲಿನ ಧ್ವನಿವರ್ಧಕದ ಮೇಲೆ ಮುತಾಲಿಕ್ ಬಿದ್ದಿದ್ದಾರಲ್ಲಾ. ಮುತಾಲಿಕ್ ಮತಿಗೆಟ್ಟು ಮಾತನಾಡುತ್ತಿದ್ದಾರೆಂದು ಪರಿಗಣಿಸುವಂತಿಲ್ಲ. ಆತನ ಒತ್ತಾಯದ ಹಿಂದೆ ಬಿಜೆಪಿ ದನಿ ಅಡಗಿದೆ. ಹಾಗೆ ನೋಡಿದರೆ ಈ ಹಿಂದೆ ಅನಂತಕುಮಾರ ಹೆಗಡೆ ಎಂಬಾತ ಪುರೋಹಿತಶಾಹಿ ಪಿತ್ತ ನೆತ್ತಿಗೇರಿಸಿಕೊಂಡು ನಾವು ಅಂಬೇಡ್ಕರ್ ಸಂವಿಧಾನವನ್ನು ಬದಲಿಸುತ್ತೇವೆ, ಅದಕ್ಕಾಗಿಯೇ ಬಂದಿರುವುದು ಎಂದಾಗ ಇಡೀ ದೇಶದ ಯಾವ ಬಿಜೆಪಿಗನೂ ಇದನ್ನ ಖಂಡಿಸಲಿಲ್ಲ. ಅಂತೆಯೇ ಕೆಂಪುಕೋಟೆಯ ಮೇಲೆ ಭಗವಾಧ್ವಜವನ್ನ ಮುಂದೆ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದಾಗ ಯಾವ ಬಿಜೆಪಿ ’ದೇಶಪ್ರೇಮಿ’ಯೂ ಪ್ರತಿಹೇಳಲಿಲ್ಲ. ಅಲ್ಲಿ ಈಶ್ವರಪ್ಪನ ಮಾತು ಬಿಜೆಪಿಯ ಮಾತಾಗಿ ಉಳಿಯಿತು. ಹಾಗೆಯೇ ಮುತಾಲಿಕ್ ಮಾತೂ ಕೂಡ ಬಿಜೆಪಿಯ ಅಧಿಕೃತ ಘೋಷಣೆಯಿರಬಹುದೆಂದು ಚಿಂತಿಸುತ್ತಿರುವಾಗ, ರಂಜಾನ್ ಸಮಯದಲ್ಲಿಯೇ ಈಶ್ವರಪ್ಪನವರ ದುನಿಯ ಖತಂ ಆಯಿತಂತಲ್ಲಾ, ಥೂತ್ತೇರಿ.

*****

ಬಿಜೆಪಿಯೊಳಗಿನ ಗರ್ಭಗುಡಿಯ ಸಂಸ್ಕೃತಿ ಕಾರ್ಯಾಚರಣೆಗಳ ಸೂಚನೆ ಸಂತೋಷ್ ಮುಖಾಂತರ ಹೊರಬರುವ ಕಾರಣಕ್ಕೆ ಸಂಘಿಗಳಲ್ಲದ ಬಿಜೆಪಿ ಜನನಾಯಕರ ಜಂಘಾಬಲವೇ ಉಡುಗಿ ಹೋಗಿದೆಯಂತಲ್ಲಾ. ಬಿಜೆಪಿ ಗರ್ಭಗುಡಿಯ ಮಹಿಮೆ ತಿಳಿಯದವರು ದೀಢಿರಂಥ ಬಿಜೆಪಿ ಸೇರಿ, ಅಲ್ಲಿನ ಪಡಸಾಲೆಯಲ್ಲಿ ಕುಳಿತು ಗರ್ಭಗುಡಿಯಲ್ಲಿನ ಪಿಸುಮಾತಿಗೆ ಹೆದರಿ ಓಡಿ ಬಂದ ನೂರಾರು ಉದಾಹರಣೆಗಳಿವೆ. ಆ ಗರ್ಭಗುಡಿಯ ಪ್ರವೇಶ ಪಡೆಯಬೇಕಾದರೆ ಟೋಪಿ ಲಾಟಿ ಗಾಳಿಯಾಡುವ ಚಡ್ಡಿಯೊಂದಿಗೆ, ಸುರಕ್ಷಿತವಾದ ಮೈದಾನದಲ್ಲಿ ನಿಂತು, ’ನಮಸ್ತೇ ಸದಾವತ್ಸಲೇ ಮಾತೃಭೂಮಿ’ ಎಂದು ಎದೆ ಮೇಲೆ ಕೈಯಿಟ್ಟು ಭಗವಾಧ್ವಜಕ್ಕೆ ವಂದಿಸಿರಬೇಕು. ಅದೂ ವರ್ಷಾನುಗಟ್ಟಲೆ ನಡೆಯಬೇಕು. ಈ ಬೈಟಕ್‌ನ ವಿಷಯ ಕರಗತವಾದ ಮೇಲೆಯೇ ಗರ್ಭಗುಡಿಯ ಪ್ರವೇಶ ದಕ್ಕುವುದು. ಸದರಿ ಸರಕಾರದಲ್ಲಿ ಕಾಂಗ್ರೆಸ್ ದಳದಿಂದ ತುಡುಗು ದನಗಳು ಓಡಿಬಂದು ಮೈಮೇಲೆ ನೆದರಿಲ್ಲದೆ ಮೇಯುತ್ತಿವೆ. ಅವುಗಳನ್ನೆಲ್ಲಾ ಪಿಂಜರಾಪೋಲು ದೊಡ್ಡಿಗೆ ದೂಡಬೇಕಾದರೆ ಕೆಲವು ಮಾನದಂಡಗಳನ್ನ ಕಿಡಿಮಾಡಿಕೊಳ್ಳಬೇಕಾಗುತ್ತದೆ. ಅಂತಹ ಹತಾರಗಳನ್ನಾಗಲೇ ಮಸೆಯುತ್ತಿರುವ ಸಂತೋಷ್ ಎಂಬ ಸಂಘವೀರನ ಮಾತಿನಿಂದ ಮುಮಂ ಬಸವರಾಜ ಬೊಮ್ಮಾಯಿ ಬಸವಳಿದು ಹೋಗಿದ್ದಾರಂತಲ್ಲಾ, ಥೂತ್ತೇರಿ.

*****

ಪಿಎಸ್‌ಐ ಅಕ್ರಮದಿಂದ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟತೆಯಲ್ಲಿ ನೂರು ಪರಸೆಂಟ್ ಗಡಿಯನ್ನು ಮುಟ್ಟಿತಂತಲ್ಲಾ. ಕರ್ನಾಟಕದಲ್ಲಿ ಯಾವುದೂ ನ್ಯಾಯವಾಗಿ ಸಿಗುವುದಿಲ್ಲ, ಎಲ್ಲದಕ್ಕೂ ಲಂಚ ಕೊಡಲೇಬೇಕೆಂಬ ನಿಯಮ ಜಾರಿಯಾದುದಕ್ಕೆ ಕಾರಣ ಹುಡುಕುತ್ತ ಹೋದರೆ, ಒಂದು ಕಾಲದಲ್ಲಿ ಅಷ್ಟೋಇಷ್ಟೋ ಪ್ರಾಮಾಣಿಕವಾಗಿದ್ದ ಅಂದರೆ, ಎ.ಕೆ ಸುಬ್ಬಯ್ಯ ಶಿವಪ್ಪನವರ ಕಾಲದಲ್ಲಿ ಇದ್ದದ್ದಕ್ಕಿಂತ ಇಂದು ಭ್ರಷ್ಟತೆಯ ವಿಷವೃಕ್ಷವಾಗಿ ಬೆಳೆಯಲು ಪಾರ್ಟಿಯ ಅಜೆಂಡಾವೆ ಕಾರಣವಂತಲ್ಲಾ. ಅಂದು ನಾಗಪುರದಿಂದ ಹೊರಟ ಆದೇಶದಂತೆ ಬಿಜೆಪಿ ಈ ದೇಶದಲ್ಲಿ ಬಲಿಷ್ಟವಾಗಿ ಬೇರೂರಬೇಕಾದರೆ ಹಣ ಬೇಕು. ಆ ಹಣ ಸರಕಾರದ ಖಜಾನೆಯಿಂದಲೇ ಬರಬೇಕು ಮತ್ತು ಸರಕಾರದ ಕಾರ್ಯಕ್ರಮಗಳಿಂದಲೇ ಕಟಾವಾಗಬೇಕು, ಹುದ್ದೆ ನೀಡುವಲ್ಲಿ ವಸೂಲಾಗಬೇಕು, ಆದ್ದರಿಂದ ಪಾರ್ಟಿಯ ಕಾರ್ಯಕರ್ತರು ಪಾರ್ಟಿಯವರ ಮೇಲೆ ಭ್ರಷ್ಟತೆ ಆಪಾದನೆ ಮಾಡಬಾರದು, ತಮ್ಮ ಪಾಲನ್ನು ಪ್ರಸಾದದಂತೆ ಪಡೆದು ಪಾರ್ಟಿ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂಬ ಮೌಖಿಕ ಕಾನೂನು ಜಾರಿಯಾದ್ದುದರಿಂದ ಅವ್ಯಾಹತವಾಗಿ ಸರಕಾರದಿಂದಲೇ ಭ್ರಷ್ಟತೆ ನಡೆದಿದ್ದರಿಂದ, ಸದ್ಯಕ್ಕೆ ಕರ್ನಾಟಕ ಹಂಡ್ರೆಡ್ ಪರಸೆಂಟ್ ಭ್ರಷ್ಟತೆಯಲ್ಲಿ ಮುಳುಗಿದೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...