Homeಅಂಕಣಗಳುಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

ಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

- Advertisement -
- Advertisement -

ಮತ್ತೆ ಕೊರೊನಾ ಬೆದರುಬೊಂಬೆಯನ್ನು ತೋರಹೊರಟಿರುವ ಬಿಜೆಪಿ ನಡವಳಿಕೆಯನ್ನ ನೋಡಿದ ಕರ್ನಾಟಕದ ಜನ ಕೊರೊನಾಕ್ಕೂ ಬಿಜೆಪಿಗೂ ಶಾನೆ ಹೋಲಿಕೆ ಇದೆ ಎನ್ನತೊಡಗಿದ್ದಾರಲ್ಲಾ. ಕೊರೊನಾ ಅಲೆಗಳಂತೆಯೇ ಬಿಜೆಪಿ ಪಾರ್ಟಿಯ ಕಾರ್ಯಕ್ರಮಗಳು ಅಲೆಅಲೆಯಾಗಿ ಬಂದು ಮುಸ್ಲಿಮರ ಮೇಲೆ ಅಪ್ಪಳಿಸಿದವು. ಅದರ ಪರಿಣಾಮ ಮುಸ್ಲಿಮರು ಮತ್ತು ಹಿಂದೂಗಳೂ ತತ್ತರಿಸಿಹೋದರು. ಮುಸ್ಲಿಮರನ್ನು ಗುರಿಯಾಗಿಸಿ ಬಿಟ್ಟ ಬಾಣಗಳು ಹಿಂದೂಗಳಿಗೂ ತಾಗಿ, ರಂಜಾನ್ ಟೈಮಿನಲ್ಲಿ ಮುಸ್ಲಿಮರು ಕೂಡ ಹಿಂದೂ ಬಡವರಿಗೆ ಸಹಾಯ ಮಾಡುತ್ತ ಇಫ್ತಾರ್ ಕೂಟಗಳಿಗೆ ಹಿಂದೂಗಳನ್ನು ಕರೆಯುತ್ತ ಸಾಮರಸ್ಯಕ್ಕೆ ಕರೆಕೊಟ್ಟಿದ್ದನ್ನ ನೋಡಿದ ಬಿಜೆಪಿಗಳು ಬೇರೆ ತಂತ್ರ ಆಲೋಚಿಸುತ್ತಿರುವಾಗ ಕೊರೊನಾವೂ ಕೂಡ ಛದ್ಮವೇಶದಲ್ಲಿ ರೆಡಿಯಾಗುತ್ತಿದೆಯಂತಲ್ಲಾ. ಸಾಂಕ್ರಾಮಿಕ ಕಾಯಿಲೆಯೊಂದು ರಾಜಕೀಯ ಪಾರ್ಟಿಯ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದು ಚರಿತ್ರೆಯಲ್ಲೇ ಇಲ್ಲವಂತಲ್ಲಾ. ಆದರೆ ಕರ್ನಾಟಕದ ಮಟ್ಟಿಗೆ ಆಡಳಿತವನ್ನೆ ನಡೆಸದೆ ದಿಕ್ಕು ದೆಸೆಯಿಲ್ಲದೆ ಮುನ್ನಡೆಯುತ್ತಿರುವ ಪಾರ್ಟಿಯ ಆಸರೆಗೆ ಕೊರೊನಾ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆಯಲ್ಲಾ, ಥೂತ್ತೇರಿ.

******

ಮುಸ್ಲಿಂ ಧರ್ಮದ ಮೇಲೆ ಎಲ್ಲಾ ಬಗೆಯ ಹಗೆಯ ಪ್ರಯೋಗ ನಡೆದ ಮೇಲೆ ಈಗ ಮಸೀದಿಗಳಲ್ಲಿನ ಧ್ವನಿವರ್ಧಕದ ಮೇಲೆ ಮುತಾಲಿಕ್ ಬಿದ್ದಿದ್ದಾರಲ್ಲಾ. ಮುತಾಲಿಕ್ ಮತಿಗೆಟ್ಟು ಮಾತನಾಡುತ್ತಿದ್ದಾರೆಂದು ಪರಿಗಣಿಸುವಂತಿಲ್ಲ. ಆತನ ಒತ್ತಾಯದ ಹಿಂದೆ ಬಿಜೆಪಿ ದನಿ ಅಡಗಿದೆ. ಹಾಗೆ ನೋಡಿದರೆ ಈ ಹಿಂದೆ ಅನಂತಕುಮಾರ ಹೆಗಡೆ ಎಂಬಾತ ಪುರೋಹಿತಶಾಹಿ ಪಿತ್ತ ನೆತ್ತಿಗೇರಿಸಿಕೊಂಡು ನಾವು ಅಂಬೇಡ್ಕರ್ ಸಂವಿಧಾನವನ್ನು ಬದಲಿಸುತ್ತೇವೆ, ಅದಕ್ಕಾಗಿಯೇ ಬಂದಿರುವುದು ಎಂದಾಗ ಇಡೀ ದೇಶದ ಯಾವ ಬಿಜೆಪಿಗನೂ ಇದನ್ನ ಖಂಡಿಸಲಿಲ್ಲ. ಅಂತೆಯೇ ಕೆಂಪುಕೋಟೆಯ ಮೇಲೆ ಭಗವಾಧ್ವಜವನ್ನ ಮುಂದೆ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದಾಗ ಯಾವ ಬಿಜೆಪಿ ’ದೇಶಪ್ರೇಮಿ’ಯೂ ಪ್ರತಿಹೇಳಲಿಲ್ಲ. ಅಲ್ಲಿ ಈಶ್ವರಪ್ಪನ ಮಾತು ಬಿಜೆಪಿಯ ಮಾತಾಗಿ ಉಳಿಯಿತು. ಹಾಗೆಯೇ ಮುತಾಲಿಕ್ ಮಾತೂ ಕೂಡ ಬಿಜೆಪಿಯ ಅಧಿಕೃತ ಘೋಷಣೆಯಿರಬಹುದೆಂದು ಚಿಂತಿಸುತ್ತಿರುವಾಗ, ರಂಜಾನ್ ಸಮಯದಲ್ಲಿಯೇ ಈಶ್ವರಪ್ಪನವರ ದುನಿಯ ಖತಂ ಆಯಿತಂತಲ್ಲಾ, ಥೂತ್ತೇರಿ.

*****

ಬಿಜೆಪಿಯೊಳಗಿನ ಗರ್ಭಗುಡಿಯ ಸಂಸ್ಕೃತಿ ಕಾರ್ಯಾಚರಣೆಗಳ ಸೂಚನೆ ಸಂತೋಷ್ ಮುಖಾಂತರ ಹೊರಬರುವ ಕಾರಣಕ್ಕೆ ಸಂಘಿಗಳಲ್ಲದ ಬಿಜೆಪಿ ಜನನಾಯಕರ ಜಂಘಾಬಲವೇ ಉಡುಗಿ ಹೋಗಿದೆಯಂತಲ್ಲಾ. ಬಿಜೆಪಿ ಗರ್ಭಗುಡಿಯ ಮಹಿಮೆ ತಿಳಿಯದವರು ದೀಢಿರಂಥ ಬಿಜೆಪಿ ಸೇರಿ, ಅಲ್ಲಿನ ಪಡಸಾಲೆಯಲ್ಲಿ ಕುಳಿತು ಗರ್ಭಗುಡಿಯಲ್ಲಿನ ಪಿಸುಮಾತಿಗೆ ಹೆದರಿ ಓಡಿ ಬಂದ ನೂರಾರು ಉದಾಹರಣೆಗಳಿವೆ. ಆ ಗರ್ಭಗುಡಿಯ ಪ್ರವೇಶ ಪಡೆಯಬೇಕಾದರೆ ಟೋಪಿ ಲಾಟಿ ಗಾಳಿಯಾಡುವ ಚಡ್ಡಿಯೊಂದಿಗೆ, ಸುರಕ್ಷಿತವಾದ ಮೈದಾನದಲ್ಲಿ ನಿಂತು, ’ನಮಸ್ತೇ ಸದಾವತ್ಸಲೇ ಮಾತೃಭೂಮಿ’ ಎಂದು ಎದೆ ಮೇಲೆ ಕೈಯಿಟ್ಟು ಭಗವಾಧ್ವಜಕ್ಕೆ ವಂದಿಸಿರಬೇಕು. ಅದೂ ವರ್ಷಾನುಗಟ್ಟಲೆ ನಡೆಯಬೇಕು. ಈ ಬೈಟಕ್‌ನ ವಿಷಯ ಕರಗತವಾದ ಮೇಲೆಯೇ ಗರ್ಭಗುಡಿಯ ಪ್ರವೇಶ ದಕ್ಕುವುದು. ಸದರಿ ಸರಕಾರದಲ್ಲಿ ಕಾಂಗ್ರೆಸ್ ದಳದಿಂದ ತುಡುಗು ದನಗಳು ಓಡಿಬಂದು ಮೈಮೇಲೆ ನೆದರಿಲ್ಲದೆ ಮೇಯುತ್ತಿವೆ. ಅವುಗಳನ್ನೆಲ್ಲಾ ಪಿಂಜರಾಪೋಲು ದೊಡ್ಡಿಗೆ ದೂಡಬೇಕಾದರೆ ಕೆಲವು ಮಾನದಂಡಗಳನ್ನ ಕಿಡಿಮಾಡಿಕೊಳ್ಳಬೇಕಾಗುತ್ತದೆ. ಅಂತಹ ಹತಾರಗಳನ್ನಾಗಲೇ ಮಸೆಯುತ್ತಿರುವ ಸಂತೋಷ್ ಎಂಬ ಸಂಘವೀರನ ಮಾತಿನಿಂದ ಮುಮಂ ಬಸವರಾಜ ಬೊಮ್ಮಾಯಿ ಬಸವಳಿದು ಹೋಗಿದ್ದಾರಂತಲ್ಲಾ, ಥೂತ್ತೇರಿ.

*****

ಪಿಎಸ್‌ಐ ಅಕ್ರಮದಿಂದ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟತೆಯಲ್ಲಿ ನೂರು ಪರಸೆಂಟ್ ಗಡಿಯನ್ನು ಮುಟ್ಟಿತಂತಲ್ಲಾ. ಕರ್ನಾಟಕದಲ್ಲಿ ಯಾವುದೂ ನ್ಯಾಯವಾಗಿ ಸಿಗುವುದಿಲ್ಲ, ಎಲ್ಲದಕ್ಕೂ ಲಂಚ ಕೊಡಲೇಬೇಕೆಂಬ ನಿಯಮ ಜಾರಿಯಾದುದಕ್ಕೆ ಕಾರಣ ಹುಡುಕುತ್ತ ಹೋದರೆ, ಒಂದು ಕಾಲದಲ್ಲಿ ಅಷ್ಟೋಇಷ್ಟೋ ಪ್ರಾಮಾಣಿಕವಾಗಿದ್ದ ಅಂದರೆ, ಎ.ಕೆ ಸುಬ್ಬಯ್ಯ ಶಿವಪ್ಪನವರ ಕಾಲದಲ್ಲಿ ಇದ್ದದ್ದಕ್ಕಿಂತ ಇಂದು ಭ್ರಷ್ಟತೆಯ ವಿಷವೃಕ್ಷವಾಗಿ ಬೆಳೆಯಲು ಪಾರ್ಟಿಯ ಅಜೆಂಡಾವೆ ಕಾರಣವಂತಲ್ಲಾ. ಅಂದು ನಾಗಪುರದಿಂದ ಹೊರಟ ಆದೇಶದಂತೆ ಬಿಜೆಪಿ ಈ ದೇಶದಲ್ಲಿ ಬಲಿಷ್ಟವಾಗಿ ಬೇರೂರಬೇಕಾದರೆ ಹಣ ಬೇಕು. ಆ ಹಣ ಸರಕಾರದ ಖಜಾನೆಯಿಂದಲೇ ಬರಬೇಕು ಮತ್ತು ಸರಕಾರದ ಕಾರ್ಯಕ್ರಮಗಳಿಂದಲೇ ಕಟಾವಾಗಬೇಕು, ಹುದ್ದೆ ನೀಡುವಲ್ಲಿ ವಸೂಲಾಗಬೇಕು, ಆದ್ದರಿಂದ ಪಾರ್ಟಿಯ ಕಾರ್ಯಕರ್ತರು ಪಾರ್ಟಿಯವರ ಮೇಲೆ ಭ್ರಷ್ಟತೆ ಆಪಾದನೆ ಮಾಡಬಾರದು, ತಮ್ಮ ಪಾಲನ್ನು ಪ್ರಸಾದದಂತೆ ಪಡೆದು ಪಾರ್ಟಿ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂಬ ಮೌಖಿಕ ಕಾನೂನು ಜಾರಿಯಾದ್ದುದರಿಂದ ಅವ್ಯಾಹತವಾಗಿ ಸರಕಾರದಿಂದಲೇ ಭ್ರಷ್ಟತೆ ನಡೆದಿದ್ದರಿಂದ, ಸದ್ಯಕ್ಕೆ ಕರ್ನಾಟಕ ಹಂಡ್ರೆಡ್ ಪರಸೆಂಟ್ ಭ್ರಷ್ಟತೆಯಲ್ಲಿ ಮುಳುಗಿದೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...