Homeಅಂಕಣಗಳುಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

ಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

- Advertisement -
- Advertisement -

ಮತ್ತೆ ಕೊರೊನಾ ಬೆದರುಬೊಂಬೆಯನ್ನು ತೋರಹೊರಟಿರುವ ಬಿಜೆಪಿ ನಡವಳಿಕೆಯನ್ನ ನೋಡಿದ ಕರ್ನಾಟಕದ ಜನ ಕೊರೊನಾಕ್ಕೂ ಬಿಜೆಪಿಗೂ ಶಾನೆ ಹೋಲಿಕೆ ಇದೆ ಎನ್ನತೊಡಗಿದ್ದಾರಲ್ಲಾ. ಕೊರೊನಾ ಅಲೆಗಳಂತೆಯೇ ಬಿಜೆಪಿ ಪಾರ್ಟಿಯ ಕಾರ್ಯಕ್ರಮಗಳು ಅಲೆಅಲೆಯಾಗಿ ಬಂದು ಮುಸ್ಲಿಮರ ಮೇಲೆ ಅಪ್ಪಳಿಸಿದವು. ಅದರ ಪರಿಣಾಮ ಮುಸ್ಲಿಮರು ಮತ್ತು ಹಿಂದೂಗಳೂ ತತ್ತರಿಸಿಹೋದರು. ಮುಸ್ಲಿಮರನ್ನು ಗುರಿಯಾಗಿಸಿ ಬಿಟ್ಟ ಬಾಣಗಳು ಹಿಂದೂಗಳಿಗೂ ತಾಗಿ, ರಂಜಾನ್ ಟೈಮಿನಲ್ಲಿ ಮುಸ್ಲಿಮರು ಕೂಡ ಹಿಂದೂ ಬಡವರಿಗೆ ಸಹಾಯ ಮಾಡುತ್ತ ಇಫ್ತಾರ್ ಕೂಟಗಳಿಗೆ ಹಿಂದೂಗಳನ್ನು ಕರೆಯುತ್ತ ಸಾಮರಸ್ಯಕ್ಕೆ ಕರೆಕೊಟ್ಟಿದ್ದನ್ನ ನೋಡಿದ ಬಿಜೆಪಿಗಳು ಬೇರೆ ತಂತ್ರ ಆಲೋಚಿಸುತ್ತಿರುವಾಗ ಕೊರೊನಾವೂ ಕೂಡ ಛದ್ಮವೇಶದಲ್ಲಿ ರೆಡಿಯಾಗುತ್ತಿದೆಯಂತಲ್ಲಾ. ಸಾಂಕ್ರಾಮಿಕ ಕಾಯಿಲೆಯೊಂದು ರಾಜಕೀಯ ಪಾರ್ಟಿಯ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದು ಚರಿತ್ರೆಯಲ್ಲೇ ಇಲ್ಲವಂತಲ್ಲಾ. ಆದರೆ ಕರ್ನಾಟಕದ ಮಟ್ಟಿಗೆ ಆಡಳಿತವನ್ನೆ ನಡೆಸದೆ ದಿಕ್ಕು ದೆಸೆಯಿಲ್ಲದೆ ಮುನ್ನಡೆಯುತ್ತಿರುವ ಪಾರ್ಟಿಯ ಆಸರೆಗೆ ಕೊರೊನಾ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆಯಲ್ಲಾ, ಥೂತ್ತೇರಿ.

******

ಮುಸ್ಲಿಂ ಧರ್ಮದ ಮೇಲೆ ಎಲ್ಲಾ ಬಗೆಯ ಹಗೆಯ ಪ್ರಯೋಗ ನಡೆದ ಮೇಲೆ ಈಗ ಮಸೀದಿಗಳಲ್ಲಿನ ಧ್ವನಿವರ್ಧಕದ ಮೇಲೆ ಮುತಾಲಿಕ್ ಬಿದ್ದಿದ್ದಾರಲ್ಲಾ. ಮುತಾಲಿಕ್ ಮತಿಗೆಟ್ಟು ಮಾತನಾಡುತ್ತಿದ್ದಾರೆಂದು ಪರಿಗಣಿಸುವಂತಿಲ್ಲ. ಆತನ ಒತ್ತಾಯದ ಹಿಂದೆ ಬಿಜೆಪಿ ದನಿ ಅಡಗಿದೆ. ಹಾಗೆ ನೋಡಿದರೆ ಈ ಹಿಂದೆ ಅನಂತಕುಮಾರ ಹೆಗಡೆ ಎಂಬಾತ ಪುರೋಹಿತಶಾಹಿ ಪಿತ್ತ ನೆತ್ತಿಗೇರಿಸಿಕೊಂಡು ನಾವು ಅಂಬೇಡ್ಕರ್ ಸಂವಿಧಾನವನ್ನು ಬದಲಿಸುತ್ತೇವೆ, ಅದಕ್ಕಾಗಿಯೇ ಬಂದಿರುವುದು ಎಂದಾಗ ಇಡೀ ದೇಶದ ಯಾವ ಬಿಜೆಪಿಗನೂ ಇದನ್ನ ಖಂಡಿಸಲಿಲ್ಲ. ಅಂತೆಯೇ ಕೆಂಪುಕೋಟೆಯ ಮೇಲೆ ಭಗವಾಧ್ವಜವನ್ನ ಮುಂದೆ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದಾಗ ಯಾವ ಬಿಜೆಪಿ ’ದೇಶಪ್ರೇಮಿ’ಯೂ ಪ್ರತಿಹೇಳಲಿಲ್ಲ. ಅಲ್ಲಿ ಈಶ್ವರಪ್ಪನ ಮಾತು ಬಿಜೆಪಿಯ ಮಾತಾಗಿ ಉಳಿಯಿತು. ಹಾಗೆಯೇ ಮುತಾಲಿಕ್ ಮಾತೂ ಕೂಡ ಬಿಜೆಪಿಯ ಅಧಿಕೃತ ಘೋಷಣೆಯಿರಬಹುದೆಂದು ಚಿಂತಿಸುತ್ತಿರುವಾಗ, ರಂಜಾನ್ ಸಮಯದಲ್ಲಿಯೇ ಈಶ್ವರಪ್ಪನವರ ದುನಿಯ ಖತಂ ಆಯಿತಂತಲ್ಲಾ, ಥೂತ್ತೇರಿ.

*****

ಬಿಜೆಪಿಯೊಳಗಿನ ಗರ್ಭಗುಡಿಯ ಸಂಸ್ಕೃತಿ ಕಾರ್ಯಾಚರಣೆಗಳ ಸೂಚನೆ ಸಂತೋಷ್ ಮುಖಾಂತರ ಹೊರಬರುವ ಕಾರಣಕ್ಕೆ ಸಂಘಿಗಳಲ್ಲದ ಬಿಜೆಪಿ ಜನನಾಯಕರ ಜಂಘಾಬಲವೇ ಉಡುಗಿ ಹೋಗಿದೆಯಂತಲ್ಲಾ. ಬಿಜೆಪಿ ಗರ್ಭಗುಡಿಯ ಮಹಿಮೆ ತಿಳಿಯದವರು ದೀಢಿರಂಥ ಬಿಜೆಪಿ ಸೇರಿ, ಅಲ್ಲಿನ ಪಡಸಾಲೆಯಲ್ಲಿ ಕುಳಿತು ಗರ್ಭಗುಡಿಯಲ್ಲಿನ ಪಿಸುಮಾತಿಗೆ ಹೆದರಿ ಓಡಿ ಬಂದ ನೂರಾರು ಉದಾಹರಣೆಗಳಿವೆ. ಆ ಗರ್ಭಗುಡಿಯ ಪ್ರವೇಶ ಪಡೆಯಬೇಕಾದರೆ ಟೋಪಿ ಲಾಟಿ ಗಾಳಿಯಾಡುವ ಚಡ್ಡಿಯೊಂದಿಗೆ, ಸುರಕ್ಷಿತವಾದ ಮೈದಾನದಲ್ಲಿ ನಿಂತು, ’ನಮಸ್ತೇ ಸದಾವತ್ಸಲೇ ಮಾತೃಭೂಮಿ’ ಎಂದು ಎದೆ ಮೇಲೆ ಕೈಯಿಟ್ಟು ಭಗವಾಧ್ವಜಕ್ಕೆ ವಂದಿಸಿರಬೇಕು. ಅದೂ ವರ್ಷಾನುಗಟ್ಟಲೆ ನಡೆಯಬೇಕು. ಈ ಬೈಟಕ್‌ನ ವಿಷಯ ಕರಗತವಾದ ಮೇಲೆಯೇ ಗರ್ಭಗುಡಿಯ ಪ್ರವೇಶ ದಕ್ಕುವುದು. ಸದರಿ ಸರಕಾರದಲ್ಲಿ ಕಾಂಗ್ರೆಸ್ ದಳದಿಂದ ತುಡುಗು ದನಗಳು ಓಡಿಬಂದು ಮೈಮೇಲೆ ನೆದರಿಲ್ಲದೆ ಮೇಯುತ್ತಿವೆ. ಅವುಗಳನ್ನೆಲ್ಲಾ ಪಿಂಜರಾಪೋಲು ದೊಡ್ಡಿಗೆ ದೂಡಬೇಕಾದರೆ ಕೆಲವು ಮಾನದಂಡಗಳನ್ನ ಕಿಡಿಮಾಡಿಕೊಳ್ಳಬೇಕಾಗುತ್ತದೆ. ಅಂತಹ ಹತಾರಗಳನ್ನಾಗಲೇ ಮಸೆಯುತ್ತಿರುವ ಸಂತೋಷ್ ಎಂಬ ಸಂಘವೀರನ ಮಾತಿನಿಂದ ಮುಮಂ ಬಸವರಾಜ ಬೊಮ್ಮಾಯಿ ಬಸವಳಿದು ಹೋಗಿದ್ದಾರಂತಲ್ಲಾ, ಥೂತ್ತೇರಿ.

*****

ಪಿಎಸ್‌ಐ ಅಕ್ರಮದಿಂದ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟತೆಯಲ್ಲಿ ನೂರು ಪರಸೆಂಟ್ ಗಡಿಯನ್ನು ಮುಟ್ಟಿತಂತಲ್ಲಾ. ಕರ್ನಾಟಕದಲ್ಲಿ ಯಾವುದೂ ನ್ಯಾಯವಾಗಿ ಸಿಗುವುದಿಲ್ಲ, ಎಲ್ಲದಕ್ಕೂ ಲಂಚ ಕೊಡಲೇಬೇಕೆಂಬ ನಿಯಮ ಜಾರಿಯಾದುದಕ್ಕೆ ಕಾರಣ ಹುಡುಕುತ್ತ ಹೋದರೆ, ಒಂದು ಕಾಲದಲ್ಲಿ ಅಷ್ಟೋಇಷ್ಟೋ ಪ್ರಾಮಾಣಿಕವಾಗಿದ್ದ ಅಂದರೆ, ಎ.ಕೆ ಸುಬ್ಬಯ್ಯ ಶಿವಪ್ಪನವರ ಕಾಲದಲ್ಲಿ ಇದ್ದದ್ದಕ್ಕಿಂತ ಇಂದು ಭ್ರಷ್ಟತೆಯ ವಿಷವೃಕ್ಷವಾಗಿ ಬೆಳೆಯಲು ಪಾರ್ಟಿಯ ಅಜೆಂಡಾವೆ ಕಾರಣವಂತಲ್ಲಾ. ಅಂದು ನಾಗಪುರದಿಂದ ಹೊರಟ ಆದೇಶದಂತೆ ಬಿಜೆಪಿ ಈ ದೇಶದಲ್ಲಿ ಬಲಿಷ್ಟವಾಗಿ ಬೇರೂರಬೇಕಾದರೆ ಹಣ ಬೇಕು. ಆ ಹಣ ಸರಕಾರದ ಖಜಾನೆಯಿಂದಲೇ ಬರಬೇಕು ಮತ್ತು ಸರಕಾರದ ಕಾರ್ಯಕ್ರಮಗಳಿಂದಲೇ ಕಟಾವಾಗಬೇಕು, ಹುದ್ದೆ ನೀಡುವಲ್ಲಿ ವಸೂಲಾಗಬೇಕು, ಆದ್ದರಿಂದ ಪಾರ್ಟಿಯ ಕಾರ್ಯಕರ್ತರು ಪಾರ್ಟಿಯವರ ಮೇಲೆ ಭ್ರಷ್ಟತೆ ಆಪಾದನೆ ಮಾಡಬಾರದು, ತಮ್ಮ ಪಾಲನ್ನು ಪ್ರಸಾದದಂತೆ ಪಡೆದು ಪಾರ್ಟಿ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂಬ ಮೌಖಿಕ ಕಾನೂನು ಜಾರಿಯಾದ್ದುದರಿಂದ ಅವ್ಯಾಹತವಾಗಿ ಸರಕಾರದಿಂದಲೇ ಭ್ರಷ್ಟತೆ ನಡೆದಿದ್ದರಿಂದ, ಸದ್ಯಕ್ಕೆ ಕರ್ನಾಟಕ ಹಂಡ್ರೆಡ್ ಪರಸೆಂಟ್ ಭ್ರಷ್ಟತೆಯಲ್ಲಿ ಮುಳುಗಿದೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...