Homeಅಂಕಣಗಳುಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

ಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

- Advertisement -
- Advertisement -

ಶಿವಮೊಗ್ಗ ಸಮೀಪ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಎಡೂರಪ್ಪನವರ ಹೆಸರಿಡಲು ಮುಖ್ಯಮಂತ್ರಿ ಬೊಮ್ಮಾಯಿ ತೀರ್ಮಾನಿಸಿದ್ದಾರಂತಲ್ಲಾ. ಕಾರಣ ಹುಡುಕಿದರೆ ಎಡೂರಪ್ಪನ ಆಡಳಿತದ ವೈಖರಿಯಿಂದಲೇ ತಮಗೆ ಮುಖ್ಯಮಂತ್ರಿ ಪಟ್ಟಸಿಕ್ಕಿತು. ಒಂದು ವೇಳೆ ಅವರು ಹೈಕಮಾಂಡ್ ಮೆಚ್ಚುವಂತಹ ಆಡಳಿತ ನೀಡಿದ್ದರೆ ಈ ಜನ್ಮದಲ್ಲಿ ನಾನು ಮುಖ್ಯಮಂತ್ರಿಯಾಗುವಂತಿರಲಿಲ್ಲ. ಈ ಜನ್ಮದಲ್ಲಿ ತೀರಿಸಲಾಗದಂತಹ ಉಪಕಾರ ಮಾಡಿರುವ ಎಡೂರಪ್ಪನವರಿಗೆ ತಕ್ಕ ಉಪಕಾರ ಎಂದರೆ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದು. ಎಡೂರಪ್ಪನವರ ಇನ್ನೊಂದು ಸಾಧನೆಯೂ ಇಲ್ಲಿ ಪರಿಗಣಿತವಾಗುತ್ತದೆ. ಎಂತಹವರನ್ನೇ ಆಗಲಿ ಮುಖ್ಯಮಂತ್ರಿ ಮಾಡುವುದರಲ್ಲಿ ಅವರು ಎತ್ತಿದ ಕೈ. ಅವರು ಮನಸ್ಸು ಮಾಡಿದ್ದರಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿಯಾದದ್ದು, ಅವರಿಂದಲೇ ಅಲ್ಲವೆ ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತೆ ನನ್ನಂಥವನು ಮುಖ್ಯಮಂತ್ರಿಯಾಗಿ ಹೆಲಿಕಾಪ್ಟರಿನಲ್ಲಿ ಹಾರಾಡುವಂತಾದದ್ದು. ಅದಕ್ಕೆ ವಿಮಾನ ನಿಲ್ದಾಣಕ್ಕೆ ಎಡೂರಪ್ಪನ ಹೆಸರಿಟ್ಟದ್ದದು ಎಂದರಂತಲ್ಲಾ, ಥೂತ್ತೇರಿ.

******

ವಿಮಾನ ನಿಲ್ದಾಣಕ್ಕೆ ಎಡೂರಪ್ಪನ ಹೆಸರಿಡಲು ಮುಖ್ಯ ಕಾರಣ ಕೊಡುವ ಅವರ ಭಕ್ತರ ಪ್ರಕಾರ, “ನೋಡಿ ಸಾರ್ ಎಡೂರಪ್ಪ ಬೂಕನಕೆರೆಯಿಂದ ಬರಿಗೈಲಿ ಶಿಕಾರಿಪುರಕ್ಕೆ ಬಂದು ಶಿಕಾರಿ ಶುರುಮಾಡಿಕೊಂಡ್ರು; ಶಿಕಾರಿಪುರದ ಮುನಿಸಿಪಾಲಿಟಿಯಿಂದ ವಿಧಾನಸೌಧಕ್ಕೆ ಹೋದ್ರು. ವಿರೋಧಪಕ್ಷದ ನಾಯಕರಾದ್ರು; ಒಂದಲ್ಲ ಅಂತ ಮೂರುಸಲ ಮುಖ್ಯಮಂತ್ರಿಯಾದ್ರು. ಬೇಕಾದಷ್ಟು ಹಣ ಆಸ್ತಿ ಮಾಡಬಹುದಿತ್ತು ಮಾಡಲಿಲ್ಲ. ಕಾಲೇಜು, ಕಾಲೇಜಿಗೆ ಹಾಸ್ಟಲು, ಸ್ಟಾರ್ ಹೋಟ್ಲು ಕಟ್ಟಬಹುದಿತ್ತು, ಕಟ್ಟಲಿಲ್ಲ. ಯಾವನೋ ಚೆಕ್ ಮುಖಾಂತರ ಲಂಚಕೊಡಕ್ಕೆ ಬಂದ, ತಗಳ್ಳಿಲ್ಲ. ಪರಿಣಾಮ ಇವುರೇ ಜೈಲಿಗೋಗುವ ಸ್ಥಿತಿ ಬಂತು, ಹೆದರಲಿಲ್ಲ. ಹೋಗಿ ಬಂದ್ರು. ನಮ್ಮ ಶೋಭಕ್ಕನ್ನ ಬೆಳೆಸಿದ್ರು, ಕೈ ಬಿಡಲಿಲ್ಲ. ಇವತ್ತು ಯಾವುದೇ ನಾಯಕನಿಗೆ ನಮ್ಮ ಎಡೂರಪ್ಪನೋರ ಹೋಲಸಂಗೇಯಿಲ್ಲ. ಅದ್ಕೆ ವಿಮಾನ ನಿಲ್ದಾಣಕ್ಕೆ ಅವರೆಸರೇ ಸೂಕ್ತ ಸಾರು” ಅಂದನಲ್ಲ, ಥೂತ್ತೇರಿ.

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಖಾಲಿ ವಿಮಾನ!
PC: ISTOCK

******

ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಸೂಕ್ತ ಎಂಬ ಚರ್ಚೆ ನಡೆದಿರುವ ಸಮಯದಲ್ಲಿ, ಹಲವಾರು ದಿಕ್ಕಿನಿಂದ ಸಲಹೆ ಸೂಚನೆ ಬರತೊಡಗಿವೆಯೆಲ್ಲಾ. ಸಾಹಿತಿಗಳ ದಿಕ್ಕಿನಿಂದ “ನೋಡಿ ಸಾರ್ ನಮ್ಮ ಕುವೆಂಪು ಕಾವ್ಯ ಬರೀಬೇಕಾದ್ರೆ ಲೌಖಿಕ ಜೀವನದಿಂದ ಶುರುಮಾಡಿ ಪಾರಮಾರ್ಥಿಕಕ್ಕೆ ಹೋಗತಿದ್ರು. ಉದಾಹರಣೆಗೆ: ’ನಾನಿನಗೆ ನೀನನಗೆ ಜೇನಾಗುವ, ರಸದೇವಗಂಗೆಯಲ್ಲಿ ಮೀನಾಗುವ’ ಅಂತ ಎರಡನೇ ಜಿಗಿತಕ್ಕೆ ಆಕಾಶಕ್ಕೆ ಹಾರತಿದ್ರು, ಜೊತೆಗೆ ಎತ್ತರದ ಕನಸು ಕಾಣತಿದ್ರು, ಅವರು ಯಾವಾಗಲೂ ಊರ್ದ್ವಮುಖಿ. ’ನಾನೇರುವೆತ್ತರಕೆ ನೀನೇರಬಲ್ಲೆಯ’ ಅಂತಿದ್ರು. ’ಮನುಜಮತ ವಿಶ್ವಪಥ’ ಅಂತಿದ್ರು” ಅನ್ನುವ ವಾದ ಬಂತಂತೆಲ್ಲಾ. ಅವುರೆಸರು ಸೂಕ್ತ ಅನ್ನುವುದಾದರೆ ಅಳಿದುಳಿದ ರಾಜಕಾರಣಿಗಳ ಪ್ರಕಾರ, ಈ ದೇಶಕಂಡ ಅಪ್ರತಿಮ ರಾಜಕಾರಣಿ
ಗೋಪಾಲಗೌಡ ಹೆಸರಿಡಲು ಕೊಡುವ ಕಾರಣವೆಂದರೆ: “ಗೋಪಾಲಗೌಡ ಗುಡಿಸಲಿಂದ ಬಂದವರು. ಮೂರುಬಾರಿ ಶಾಸಕರಾದರೂ ಮನೆ ಇರಲಿಲ್ಲ, ಸೈಟ್ ಇರಲಿಲ್ಲ. ಬ್ಯಾಂಕ್‌ನ ಅಕೌಂಟೇ ಇರಲಿಲ್ಲ. ಇದ್ದ ಎರಡು ಮೂರು ಜುಬ್ಬ ಅಜೀಜ್ ಸೇಠ್ ಹೊಲಿಸಿಕೊಟ್ಟಿದ್ದು. ಇಂತಹ ವ್ಯಕ್ತಿಯ ನೆನಪನ್ನು ಹಸಿರಾಗಿಡಬೇಕಾದರೆ ಅಕಾಶದಲ್ಲಿ ಹಾರಾಡುವ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಬೇಕೆಂದರಲ್ಲಾ”, ಥೂತ್ತೇರಿ.

*****

ಅಜೀಜ್ ಸೇಠ್ ಎಂದಕೂಡಲೇ ನೆನಪಾಯ್ತು. ಗೋಪಾಲಗೌಡರ ಹರಿದ ಜುಬ್ಬ ನೋಡಿ ಮನಕರಗಿದ ಸೇಠ್ ಜುಬ್ಬ ಹೊಲಿಸಿಕೊಟ್ಟಂತೆ, ನಮ್ಮ ನಡುವಿನ ಸಾಬರು ಹಳ್ಳಿಗಾಡಿನ ರೈತನ ಪಾಡಿನಲ್ಲಿ ಅನಾದಿಕಾಲದಿಂದ ಭಾಗಿಯಾಗುತ್ತ ಬಂದಿರುವುದು ಸಂಘಿಗಳ ಗಮನಕ್ಕೆ ಬಂದಿಲ್ಲವಂತಲ್ಲಾ. ಈಗ ಸಾಬರ ಬಳಿ ಮಾವಿನ ಹಣ್ಣು ಕೊಳ್ಳಬೇಡಿ ಎಂದು ಫತ್ವಾ ಹೊರಡಿಸಿರುವುದರ ಪರಿಣಾಮ ಮಾವಿನ ಹಣ್ಣಿನ ಕಂಟ್ರಾಕ್ಟಿಗೆ ಸಾಬರು ಬರುತ್ತಿಲ್ಲವಲ್ಲಾ. ಈ ಪುರೋಹಿತಶಾಹಿಗಳ ತಲೆಯಿಂದ ಮಂತ್ರಗಳು ಮಾಯವಾಗಿ ಮುಸ್ಲಿಂ ದ್ವೇಷ ತುಂಬಿಕೊಂಡ ಫಲವಾಗಿ ರೈತ ಬೆಳೆದ ಮಾವಿನಹಣ್ಣು, ವಾಣಿಜ್ಯ ಬೆಳೆಗಳಾದ ಹೊಂಗೆಬೀಜ, ಇಪ್ಪೆ ಅಳ್ಳು, ಬೇವಿನಬೀಜ, ಹಲಸಿನಹಣ್ಣು ಕೊಳ್ಳುವವರಿಲ್ಲವಾಗಿದೆಯಂತಲ್ಲಾ. ಇದಿನ್ನೂ ದೊಡ್ಡದಾಗಿ ಬೆಳೆದು, ಸದ್ಯದಲ್ಲೇ ದೇಶ ದಿವಾಳಿ ಎದ್ದು ಶ್ರೀಲಂಕಾದಂತಾಗುವ ಎಲ್ಲಾ ಸೂಚನೆಗಳು ಕಾಣುತ್ತಿವೆಯಲ್ಲಾ. ಅದಕ್ಕಿಂತ ಮುಖ್ಯ ಎತ್ತಿಗೆ ಲಾಳ ಕಟ್ಟುತ್ತಿದ್ದ ಸಾಬರು ಹಳ್ಳಿಕಡೆ ಬಾರದೆಯಿರುವುದರಿಂದ ಎತ್ತುಗಳ ಗೊರಸು ಸವೆದು ಕುಂಟತೊಡಗಿವೆ. ಇದೀಗ ರೈತರು ಎಚ್ಚೆತ್ತು “ಬಾರೊ ನಮ್ಮ ಎತ್ತಿಗೆ ಲಾಳ ಕಟ್ಟು” ಅಂದರೆ ಸಂಘಿಗಳ ಕತೆಯೇನೆಂದು ಉದ್ಘಾರ ತೆಗೆದರಲ್ಲಾ, ಥೂತ್ತೇರಿ.

*******

ಈ ಬಿಜೆಪಿಗಳು ಆಡಳಿತ ನಡೆಸಲು ಅಳವಡಿಸಿಕೊಂಡಿರುವುದು ಗೋಳವಲಕರನ ಅರ್ಥ ವ್ಯವಸ್ಥೆಯಂತಲ್ಲಾ. ಆತನ ಅರ್ಥಶಾಸ್ತ್ರದ ಪ್ರಕಾರ ನಾವು ಸುಖವಾಗಿ ಭೋಜನ ಬಾರಿಸುತ್ತ ಗರ್ಭಗುಡಿಯಲ್ಲಿರಬೇಕಾದರೆ ಈ ದೇಶದಲ್ಲಿ ಬಡವರಿರಬೇಕು ಅವರು ಆಸ್ತಿವಂತರಾಗಬಾರದು, ಅಕಸ್ಮಾತ್ ಆದರೆ ನಮ್ಮ ಮಾತನ್ನ ಕೇಳುವುದಿಲ್ಲ; ನಾವೇಳಿದ ಕೆಲಸ ಮಾಡುವುದಿಲ್ಲ; ಆದ್ದರಿಂದ ಅವರು ಆಸ್ತಿವಂತರಾಗದಂತೆ ನೋಡಿಕೊಳ್ಳಬೇಕು; ಅದರಲ್ಲೂ ಮುಸ್ಲಿಮರು ಆರ್ಥಿಕವಾಗಿ ಮುಂದೆ ಬರಲೇಬಾರದು ಎಂದಿದೆಯಂತಲ್ಲಾ. ಅದರ ಫಲವಾಗಿ ಚರ್ಮೋದ್ಯಮ ನಾಶವಾಯ್ತು. ಹಳ್ಳಿಗಳ ಕಡೆ ಹಬ್ಬವಾದರೆ ಚರ್ಮ ಕೊಳ್ಳಲು ಸಾಬರು ಬರುತ್ತಿದ್ದರು. ಈಗ ಗುಂಡಿ ತೆಗೆದು ಚರ್ಮವನ್ನೂ ಹೂಳುತ್ತಿದ್ದಾರೆ. ಇಲ್ಲಿಂದ ಶುರುವಾದ ಮುಸ್ಲಿಮರ ಆರ್ಥಿಕ ಅವನತಿ, ರೈತರ ಕಡೆಗೂ ತಿರುಗಿ ಸದ್ಯದಲ್ಲೇ ರೈತರ ಪತನವಾಗಿ ಅವರೆಲ್ಲಾ ಇನ್ನೂ ಬಡವರಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ, ಥೂಥೂ ಥೂತ್ತೇರಿ.


ಇದನ್ನೂ ಓದಿ: ಈಶ್ವರಪ್ಪ ಪರಸೆಂಟೇಜಲ್ಲಿ ಜಗದ್ಗುರುಗಳ ಪಾಲಿತ್ತಂತಲ್ಲಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...