Homeಅಂಕಣಗಳುಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ’ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಭಾರತದ ಏಳು ರಾಜ್ಯಗಳಲ್ಲಿ ದಲಿತರ ಮೇಲೆ ನಡೆದ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಆ ದಲಿತರ ಮೇಲಿನ ದೌರ್ಜನ್ಯಗಳ ಘಟನೆಗಳಲ್ಲಿ ಇದೂ ಒಂದು. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತಿಸುವುದಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ಅದು 2020ರ ಅಕ್ಟೋಬರ್ 2. ಗಾಂಧಿ ಜಯಂತಿಯ ದಿನ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಆಸ್ಪತ್ರೆಯಲ್ಲಿ ಸೌಮ್ಯ ಎಂಬ ದಲಿತ ಹುಡುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು.

ಸೌಮ್ಯ 10 ವರ್ಷದವಳಿದ್ದಾಗಲೇ ತಾಯಿ ಪಳನಿ ಅಮ್ಮಾಳನ್ನು ಕಳೆದುಕೊಂಡಿದ್ದಳು. ತಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಆಗ ಅವಳ ತಾತ ಮತ್ತು ಇಬ್ಬರು ಅಜ್ಜಿಯಂದಿರು ಆಕೆಯನ್ನು ಸಾಕಿ ಸಲಹಿದ್ದರು. ಕರಿಮಂಗಲಮ್ ಎಂಬ ಹಳ್ಳಿಯಲ್ಲಿ ವಾಸವಿದ್ದ ಈ ಕುಟುಂಬವು ದಲಿತ ಪರಯ್ಯಾ ಜಾತಿಗೆ ಸೇರಿತ್ತು. ಈ ಧರ್ಮಪುರಿ ಜಿಲ್ಲೆಯು ಇಂದಿಗೂ ಬಲಾಢ್ಯ ಮೇಲ್ಜಾತಿ ವಣ್ಣಿಯಾರ್ ಸಮುದಾಯದ ಹಿಡಿತದಲ್ಲಿದೆ.

ಕರಿಮಂಗಲಮ್ ಗ್ರಾಮದ ಬಹುಸಂಖ್ಯಾತರು ದಲಿತರೇ ಆಗಿದ್ದಾರೆ. ಇಲ್ಲಿನ ದಲಿತರ ಬಳಿ ಎಕರೆಗಟ್ಟಲೆ ಭೂಮಿ ಇದೆ. ಆದರೂ ಸೌಮ್ಯಳ ತಾತನ ಕುಟುಂಬ ಇಂದಿಗೂ ಕೂಲಿಯನ್ನೇ ನಂಬಿಕೊಂಡು ಜೀವಿಸುತ್ತಿದೆ. ಊರಿನ ಕಸ ಗುಡಿಸುವ ಹಾಗೂ ಮಲ ಬಾಚುವ ಕೆಲಸ ಈ ಕುಟುಂಬದ್ದಾಗಿದೆ.

ಇಂತಹ ಪರಿಸ್ಥಿತಿಯಲ್ಲಿಯೂ ಸೌಮ್ಯ 10ನೇ ತರಗತಿಯವರೆಗೆ ಓದಿದಳು. ಓದುತ್ತಲೇ ಸಾಧ್ಯವಾಗುವ ಕೂಲಿ ಕೆಲಸಕ್ಕೂ ಹೋಗಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಳು. ಆದರೆ ದೂರದೂರಿಗೆ ಹೋಗಿ ಓದಲಾಗದ ಶಕ್ತಿ ಇಲ್ಲದ ಕಾರಣ ಓದನ್ನು ಅರ್ಧಕ್ಕೆ ನಿಲ್ಲಿಸಿದಳು. ಇಲ್ಲಿನ ದಲಿತರು ಭೂಮಿ ಹೊಂದಿದ್ದರೂ ಬಹುತೇಕ ಎಲ್ಲಾ ತೀರ್ಮಾನವೂ ವಣ್ಣಿಯಾರರದ್ದೇ ಆಗಿತ್ತು. 2012ರಲ್ಲಿ ಅಂತರ್ಜಾತಿ ವಿವಾಹವಾದ ಕಾರಣಕ್ಕೆ 300 ದಲಿತರ ಮನೆಗಳನ್ನು ಸುಟ್ಟು ಕರಕಲಾಗಿಸಿದ್ದು ಇದೇ ಜಿಲ್ಲೆಯಲ್ಲಿಯೇ. ಈ ಗಲಭೆಯನ್ನು ಸಾವಿರ ಪೊಲೀಸರಿಗೂ ನಿಯಂತ್ರಿಸಲು ಆಗಿರಲಿಲ್ಲ.

ಹೀಗಿದ್ದ ಧರ್ಮಪುರಿ ಜಿಲ್ಲೆಯ ಕರಿಮಂಗಲಮ್ ಗ್ರಾಮದಲ್ಲಿ 19 ವರ್ಷದ ದಲಿತೆ ಸೌಮ್ಯಳಿಗೆ 17 ವರ್ಷದ ವಣ್ಣಿಯಾರ್ ಯುವಕ ಮನಿಷ್ ಕುಮಾರ್‌ನೊಂದಿಗೆ ಪ್ರೀತಿಯುಂಟಾಗುತ್ತದೆ. ಸನಾತನಿ ಧರ್ಮದ ಕಾನೂನಿನ ಪ್ರಕಾರ ಇದು ಸಾಧುವಲ್ಲದ ಪ್ರೇಮವಾಗಿದ್ದರೂ ಹೃದಯಕ್ಕೆ ಯಾವ ಜಾತಿ ಇದೆ ಹೇಳಿ? ದೇಶದ ಕಾನೂನಿನ ಪ್ರಕಾರವೂ ವಯಸ್ಸಿನ ತೊಡಕ್ಕಿತ್ತು! ಆದರೂ, ಇಬ್ಬರೂ ಒಬ್ಬರಿಗೊಬ್ಬರು ಬಹಳ ಹಚ್ಚಿಕೊಂಡುಬಿಟ್ಟಿದ್ದರು. ಇದೆಲ್ಲವನ್ನೂ ತಿಳಿಯದ ಜೋಡಿ ಊರುಬಿಟ್ಟು ದೂರ ತೆರಳಿ ಮದುವೆ ಆಗಿಬಿಟ್ಟರು. ಮನಿಷ್ ಕುಟುಂಬದ ಕಣ್ಣಿಗೆ ಬೀಳದಂತೆ ಅಲ್ಲಿಯೇ ಸುತ್ತಾಮುತ್ತಾ ಹಲವು ದಿನಗಳ ಕಾಲ ಜೀವನ ಸಾಗಿಸಿದರು. ಆದರೆ ವಣ್ಣಿಯಾರ್ ಕುಲದಲ್ಲಿ ಅಷ್ಟು ಸುಲಭಕ್ಕೆ ಬಿಡುವ ಮಾತೇ ಇಲ್ಲವಲ್ಲ! ತನ್ನ ಜಾತಿ ನೆಟ್‌ವರ್ಕ್ ಬಳಸಿಕೊಂಡು ಇಬ್ಬರನ್ನೂ ಹುಡುಕಲು ಹಚ್ಚಿತು. 90 ದಿನಗಳ ನಂತರ ಮನಿಷ್ ಮತ್ತು ಸೌಮ್ಯರನ್ನು ವಣ್ಣಿಯಾರ್ ಯುವಕರು ಪತ್ತೆ ಹಚ್ಚಿಬಿಟ್ಟರು. ಅದೂ ಪೊಲೀಸರ ನೆರವಿನಿಂದ ಮತ್ತು ಒಂದು ದೂರನ್ನೂ ದಾಖಲಿಸದಂತೆ!

ಬಲಾಢ್ಯ ವಣ್ಣಿಯಾರ್ ಕುಟುಂಬ ಸೌಮ್ಯಳಿಂದ ಮನಿಷನನ್ನು ದೂರ ಮಾಡುವುದರಲ್ಲಿ ಯಶಸ್ವಿಯಾಗುತ್ತದೆ. ಬಹುಶಃ ಮನಿಷ್ ಅಪ್ಪನ ಒಂದು ನೋಟಕ್ಕೆ ಸೌಮ್ಯ ತಣ್ಣಗಾಗಿರಬಹುದು. ಸೌಮ್ಯ ವಿಧಿ ಇಲ್ಲದೆ ತನ್ನ ತಾತನ ಬಳಿಗೆ ಮರಳುತ್ತಾಳೆ. ಆದರೆ ಪ್ರೀತಿ ಎಂಬುದು ಮಾತ್ರ ಮರಳುವುದಿಲ್ಲವಲ್ಲ! ಕೆಲವು ದಿನಗಳ ನಂತರ ಗಟ್ಟಿ ಮನಸ್ಸು ಮಾಡಿಕೊಂಡ ಸೌಮ್ಯ ಮನಿಷ್ ಮನೆಗೆ ಹೊರಟೇಬಿಡುತ್ತಾಳೆ. ’ನನ್ನ ಗಂಡ ನನಗೆ ಬೇಕು’ ಎಂದು ಅಂಗಲಾಚುತ್ತಾಳೆ. ’ಅವನನ್ನು ಒಮ್ಮೆ ಮಾತನಾಡಿಸಲು ಅವಕಾಶ ಕೊಡಿ’ ಎಂದು ಬೇಡಿಕೊಳ್ಳುತ್ತಾಳೆ. ಪಾಪ, ಸೌಮ್ಯಳ ಪ್ರೀತಿಗೆ ಪ್ರಪಂಚದ ಪರಿವೆಯೇ ಇರಲಿಲ್ಲ. ಮನೆಯೊಳಗಿಂದ ಹೊರಗಡೆ ಬಂದ ಮನಿಷ್‌ನನ್ನು ನೋಡಿ ಹರ್ಷಗೊಂಡ ಸೌಮ್ಯ ಇನ್ನೆಲ್ಲ ಕಷ್ಟವೂ ಕೊನೆಯಾಯಿತು ಎಂದುಕೊಳ್ಳುವಷ್ಟರಲ್ಲಿ, ಸ್ವತಃ ಮನಿಷ್ ’ನಿನಗೂ ನನಗೂ ಸಂಬಂಧವಿಲ್ಲ. ನಿನ್ನೊಂದಿಗೆ ಬಾಳಲು ನನಗಿಷ್ಟವಿಲ್ಲ’ ಎಂದುಬಿಡುತ್ತಾನೆ. ಅಲ್ಲಿಗೆ ಸೌಮ್ಯಳ ಕ್ಷಣದ ನಗು ಮಾಯವಾಗುತ್ತದೆ. ಹೌದು, ಅಲ್ಲಾಗಿದ್ದು ಅದೇ. ಕುಟುಂಬದ ಒತ್ತಡಕ್ಕೆ ಮಣಿದು ಮನಿಷ್ ಆ ಮಾತುಗಳನ್ನಾಡುತ್ತಿರಬಹುದು ಎಂದು ಭಾವಿಸಿದ ಸೌಮ್ಯ ಪೊಲೀಸ್ ಠಾಣೆಗೆ ಓಡಿಹೋಗುತ್ತಾಳೆ. ’ವಿಡುದಲೈ ಚಿರುತೈಗಳ್ ಕಚ್ಚಿ’ ರಾಜಕೀಯ ಪಕ್ಷ ಅವಳ ಬೆನ್ನಿಗೆ ನಿಲ್ಲುತ್ತದೆ. ಪೊಲೀಸರ ಬಳಿ ದೂರು ನೀಡಿದಾಗ, ಅವರು ’ಪಂಚಾಯ್ತಿ ಕಟ್ಟೆಯಲ್ಲಿ ತೀರ್ಮಾನ ಮಾಡ್ಕಳಮ್ಮ’ ಎನ್ನುತ್ತಾರೆ! ಆದರೆ ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದಂತೆ ಕಾನೂನು ಬೇರೆಯೇ ಹೇಳುತ್ತಿದೆ. ಎಪೆಕ್ಸ್ ಕೋರ್ಟ್ ಈ ವಿಷಯದಲ್ಲಿ ಸ್ಪಷ್ಟವಾಗಿ ತೀರ್ಪಿತ್ತಿದೆ. ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ತೆಗದುಕೊಂಡು ರಕ್ಷಣೆ ನೀಡಿ ರಿಮ್ಯಾಂಡ್ ರೂಮಿನಲ್ಲಿರಿಸಬೇಕೆಂಬ ಸ್ಪಷ್ಟ ಆದೇಶವಿದೆ. ಆದರೆ ಪೊಲೀಸರು ಈ ಜಾತಿವಾದಿ ನೆಲದವರಲ್ಲವೇ? ಸೌಮ್ಯಳ ಮಾತಿಗೆ ಬೆಲೆ ಕೊಡುವುದೇ ಇಲ್ಲ.

ಇದನ್ನೂ ಓದಿ: ಮಾತು ಮರೆತ ಭಾರತ-31; ಲಾಕ್‌ಡೌನ್ ಫೈಲ್ಸ್ : ಅಂಬೇಡ್ಕರ್ ಟಿ-ಶರ್ಟ್ ಜಾತಿ ಹೇಳಿತು

ಪಂಚಾಯ್ತಿ ಕಟ್ಟೆಗೆ ಸೌಮ್ಯಳ ಪ್ರೇಮ ಬಂದು ನಿಲ್ಲುತ್ತದೆ. ಫಲಿತಾಂಶ ಯಥಾವತ್ ಆಗುತ್ತದೆ. ಬಡವರ ಮಕ್ಕಳನ್ನು ದುಡ್ಡುಕೊಟ್ಟು ಸರಿ ಮಾಡಿಬಿಡುವ ಕುತಂತ್ರ ನಡೆಯುತ್ತದೆ. ಸೌಮ್ಯಳಿಗೆ ಇಂತಿಷ್ಟು ಹಣ ನೀಡಿಬಿಡುತ್ತೇವೆ ನಮ್ಮ ಮಗನ ತಂಟೆಗೆ ಬರಬಾರದು ಎಂಬ ತೀರ್ಮಾನವಾಗುತ್ತದೆ. ಇದರ ಪರವಾಗಿ ಮನಿಷ್ ಸಹ ನಿಂತುಬಿಡುತ್ತಾನೆ. ಹೆಣ್ಣುಜೀವ, ಅದು ಹೇಗೆ ತಡೆಯಬಲ್ಲದು? ಆಕಾಶವೇ ತಲೆ ಮೇಲೆ ಬಿದ್ದಂತಾಗುತ್ತದೆ. ಹಿಂದೆಮುಂದೆ ಯೋಚಿಸದೇ ಸೌಮ್ಯ ವಿಷ ಸೇವಿಸುತ್ತಾಳೆ. ಸತತವಾಗಿ 22 ದಿನಗಳ ಹೋರಾಟದಲ್ಲಿ ಸಾವು ಗೆಲ್ಲುತ್ತದೆ. ಪ್ರಾಮಾಣಿಕ ಪ್ರೀತಿ ಸೋಲುತ್ತದೆ.

ಇಂದು ಮನಿಷ್ ಕುಮಾರ್ ಮತ್ತು ಆತನ ಕುಟುಂಬದ ಮೇಲೆ ಕೇಸು ದಾಖಲಾಗಿದೆ. ನ್ಯಾಯಾಲಯ ಏನೆಂದು ತೀರ್ಪಿತ್ತಬಹುದೋ ಊಹಿಸಬಹುದಾಗಿದೆ. ಸೌಮ್ಯ ಮಾತ್ರ ತನ್ನ ಪ್ರಾಮಾಣಿಕ ಪ್ರೀತಿಯನ್ನು ಹೊತ್ತು ನೆಲದೊಳಗೆ ಮಲಗಿದ್ದಾಳೆ. ಅವಳಿಗೆ ಮನಿಷ್ ಮತ್ತೆ ಹಿಂದಿರುಗುವ ಕನಸಾದರೂ ಬೀಳಲಿ. ನಮಗೆ ಮನಿಷ್‌ನನ್ನು ಸೃಷ್ಟಿಸಿದ ಸಮಾಜದ ಬಗ್ಗೆ ಕಿಂಚಿತ್ತಾದರೂ ಕಣ್ಣು ಕೆಂಪಗಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...